ಆತ್ಮೀಯರೇ, ಚಳಿ ಇಳಿಮುಖವಾಗಿ ನೀಧಾನವಾಫಿ ಬೇಸಿಗೆ ಕಾಲ ಆರಂಭವಾಗಿದೆ.
ಪಕ್ಷಿಸಂಕುಲಕ್ಕೆ ಇದು ಕಷ್ಟದ ಕಾಲ. ಬಾಯಾರಿಕೆ ತಣಿಸಿಕೊಳ್ಳಲು ನೀರನ್ನರಸುವ ಹಕ್ಕಿಗಳ ಉಳಿವಿಗಾಗಿ ನಮ್ಮ ಕೈತೋಟದಲ್ಲಿ, ತಾರಸಿಯ ಮೇಲೆ ಅಗಲವಾದ ಅಂಚು ದಪ್ಪಗಿರುವ ಮಣ್ಣಿನ ಅಥವಾ ಪ್ಲಾಸ್ಟಿಕ್ ಪಾತ್ರೆಯಲ್ಲಿ ಒಂದಿಷ್ಟು ನೀರನ್ನಿಡೋಣ. ಆ ಪಾತ್ರೆಯೊಳಗೆ ಪಕ್ಷಿಗಳು ಕುಳಿತು ನೀರು ಕುಡಿಯಲು ಅನುಕೂಲವಾಗುವ ಹಾಗೆ ಯಾವುದಾದರೂ ಒಂದೆರಡು ಕತ್ತರಿಸಿದ ಗಿಡಗಳ ಕಾಂಡಗಳನ್ನು ಹಾಕಿಡೋಣ. ಸಾಧ್ಯವಾದರೆ ಒಂದೆರಡು ಚಮಚೆ ಕಿರು ಧಾನ್ಯ ಗಳನ್ನೂ ಪಕ್ಕದಲ್ಲೇ ಇನ್ನೊಂದು ತಟ್ಟೆಯಲ್ಲಿಡೋಣ. ನಮ್ಮ ಪರಿಸರ ಸ್ವಚ್ಛ ಗೊಳಿಸಲು, ಗಿಡ ಮರ ಉಳಿಸಲು ಮತ್ತು ಬೆಳೆಸಲು ಈ ಪಕ್ಷಿಗಳ ಉಳಿವು ತುಂಬಾ ಅಗತ್ಯವಾಗಿದೆ. ಈಗಾಗಲೇ ಮೊಬೈಲ್ ತರಂಗಗಳಿಂದಾಗಿ ಗುಬ್ಬಚ್ಚಿಗಳು ಮಾಯವಾಗುತ್ತಿವೆ. ಕನಿಷ್ಠ ಪಕ್ಷ ಉಳಿದ ಪಕ್ಷಿಗಳನ್ನಾದರೂ ರಕ್ಷಿಸೋಣ.
ಈಗಾಗಲೇ, ಕೆರೆಬಾವಿಗಳನ್ನು ಮುಚ್ಚಿದ್ದೇವೆ..
ಕಾಡು ಕಡಿದು ಕಾಂಕ್ರೀಟ್ ನಾಡು ಕಟ್ಟಿದ್ದೇವೆ.
ಹಾರುವ ಹಕ್ಕಿಗಳ ರೆಕ್ಕೆ ಸೋತರೆ ಕೂರಲು ಮರಗಳಿಲ್ಲದಂತೆ ಮಾಡಿದ್ದೇವೆ.
ಕುಡಿಯುವ ಹನಿ ನೀರಿಗೆ ಪರದಾಡುವಂತೆ ಮಾಡಿದ್ದೇವೆ.
ಈ ತಪ್ಪುಗಳಿಗೆ ಕೊಂಚವಾದರೂ ಪ್ರಾಯಶ್ಚಿತ್ತ ಆಗಬೇಡವೆ?
ಪಕ್ಷಿಗಳ ಉಳಿವಿಗೆ ಆಹಾರ ಮತ್ತು ನೀರು ಕೊಡುವುದರ ಮೂಲಕ,
ನಮ್ಮ ಪಾಪಗಳಿಗೆ ಪರಿಹಾರ ಮಾಡಿಕೊಳ್ಳೋಣ,
ನಿಜಾಥ೯ದಲ್ಲಿ ಮಾನವರಾಗೋಣ.
ವ್ಯಾಟ್ಯಾಪ್ ಕೃಪೆ