ನೀವೇನೂ ಮೋದಿ ಗೆಲ್ಬೇಕು ಅಂತಿರಾ ಆದ್ರೆ ನಮ್ಮ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಿಂತ ಬೇರೆ ಪಕ್ಷದ ಅಭ್ಯರ್ಥಿ ಉತ್ತಮವಾಗಿ ಕೆಲಸ ಮಾಡ್ತಾನೆ ಏನ್ ಮಾಡೋದು ?
ಸದ್ಯಕ್ಕೆ ಬಹುತೇಕರು ಕೇಳೊ ಪ್ರಶ್ನೆ ಇದು, ಸಣ್ಣದಾಗಿ ಒಂದ್ ರೌಂಡ್ ಪುರಾಣ ಸುತ್ಕೊಂಡ್ ಬರೋಣ, ಕುಂತಿ ಮಾಡಿದ ತಪ್ಪಿಗೆ ಕರ್ಣನ ಜನನವಾಯ್ತು, ಆಮೇಲೆ ಕೀಳು ಜಾತಿಯಲ್ಲಿ ಬೆಳೆದವ ಎಂಬ ಕಾರಣಕ್ಕೆ ದ್ರೋಣರು ಕರ್ಣನಿಗೆ ವಿದ್ಯೆ ಕಲಿಸಲಿಲ್ಲ, ತಾನು ಬ್ರಾಹ್ಮಣ ಅಂತ ಸುಳ್ಳು ಹೇಳಿ ಕ್ಷತ್ರಿಯರ ಕಟು ವಿರೋಧಿ ಪರಶುರಾಮರ ಬಳಿ ವಿದ್ಯೆ ಕಲಿತಕೊಂಡ ಕರ್ಣನು ಕೊನೆಗೆ ಅಲ್ಲೂ ಸತ್ಯ ಗೊತ್ತಾಗಿ ಪರಶುರಾಮರಿಂದ ಶಾಪ ಅಂಟಿಸಿಕೊಂಡ …
ಇಷ್ಟೆಲ್ಲಾ ಕಷ್ಟಗಳನ್ನು ಎದುರಿಸಿ ಕೊನೆಗೆ ಎಲ್ಲಾ ವಿದ್ಯೆಗಳಲ್ಲಿ ಅರ್ಜುನನಿಗಿಂತ ತಾನೆ ಶ್ರೇಷ್ಠ ಎಂಬುದನ್ನ ಸಾಬೀತು ಮಾಡಿದ, ಕೊನೆಗೆ ಅನಿವಾರ್ಯವಾಗಿ ಕೌರವರ ಪಕ್ಷ ಸೇರಿದ, ಇತ್ತ ಅರ್ಜುನ ಅತ್ತ ಕರ್ಣ ಇಬ್ಬರೂ ಅಪ್ರತಿಮ ವೀರರು ಮೇಲಾಗಿ ಅಣ್ಣ ತಮ್ಮಂದಿರು ಆದರೆ ಪಕ್ಷ ಮಾತ್ರ ಬೇರೆ..
ಈಗ ಮೂಲ ವಿಷಯಕ್ಕೆ ಬರೋಣ, ನಿಮ್ಮ ಕ್ಷೇತ್ರದಲ್ಲಿ ಬಿಜೆಪಿಯಿಂದ ಅರ್ಜುನ ನಿಂತಿದ್ದಾನೆ ಬೇರೆ ಪಕ್ಷದಿಂದ ಕರ್ಣ ನಿಂತಿದ್ದಾನೆ ಅಂತ ಅನ್ಕೊಳ್ಳಿ ,ವಾಸ್ತವದಲ್ಲಿ ಅರ್ಜುನನಿಗಿಂತ ಕರ್ಣನೇ ಶ್ರೇಷ್ಠ ಅನ್ನೋದು ಸತ್ಯವಾದರೂ ಅವರಿಬ್ಬರನ್ನು ಮುನ್ನೆಡೆಸುವ ಪಕ್ಷಗಳನ್ನು ಸಹ ನಾವು ಗಮನಿಸಬೇಕು, ಅರ್ಜುನನ ಹಿಂದೆ ಮೋದಿಯಂತ ಶ್ರೀಕೃಷ್ಣ ಇದ್ದರೆ ಅತ್ತ ಕರ್ಣ ಇರುವುದು ದುರ್ಯೋಧನ ,ದುಶ್ಯಾಸನ,ಶಕುನಿ ಇರುವ ಮಹಾ ಘಟ್ ಬಂಧನ್ ಪಕ್ಷದಲ್ಲಿ,
ಇಲ್ಲಿ ಅರ್ಜುನ ತಪ್ಪು ಮಾಡಿದರೆ ತಿದ್ದಲು ಬಿಜೆಪಿಯಲ್ಲಿ ಕೃಷ್ಣ ಇದ್ದಾನೆ ಆದ್ರೆ ಕರ್ಣ ತಪ್ಪು ಮಾಡಿದ್ರೆ ಆ ತಪ್ಪುಗಳನ್ನು ಉತ್ತೇಜಿಸುವ ಮೂರ್ಖರು ಮಹಾ ಘಟ್ ಬಂಧನ್ ನಲ್ಲಿ ಇದಾರೆ ಅನ್ನೋದು ನೆನಪಿರಲಿ…
ಕೆಲವೊಮ್ಮೆ ವ್ಯಕ್ತಿಗಿಂತ ಆತನನ್ನು ನಿಯಂತ್ರಿಸುವ ಪಕ್ಷದ ಮೇಲೆ ನಂಬಿಕೆ ಇಡ್ಬೇಕಾಗುತ್ತೆ, ವ್ಯಕ್ತಿಯೇ ಮುಖ್ಯ ಅಂತ ಕೆಟ್ಟ ಪಕ್ಷದಲ್ಲಿ ಇರುವವನಿಗೆ ಬೆಂಬಲ ಕೊಟ್ರೆ ಆತನಿರುವ ಪಕ್ಷ ಆತನನ್ನು ಹಾಳು ಮಾಡುವುದಲ್ಲದೆ ಆತನಿಗೆ ಬೆಂಬಲ ಕೊಟ್ಟ ನಮ್ಮನ್ನು ಸಹ ಹಾಳು ಮಾಡುತ್ತೆ, ಸ್ವಲ್ಪ ಯೋಚಿಸಿ ಕೃಷ್ಣನಿರುವ ಪಕ್ಷ ಬೇಕೊ ಅಥ್ವಾ ಶಕುನಿ ಇರುವ ಪಕ್ಷ ಬೇಕೊ ಅಂತ…
ಹಾಗಂತ ಬಿಜೆಪಿಯಲ್ಲಿ ಇರುವವರೆಲ್ಲಾ ಅರ್ಜುನರು ಮತ್ತೆ ಮಹಾಕೆಟ್ ಬಂಧನ್ ನಲ್ಲಿ ಇರೋರೆಲ್ಲ ಕರ್ಣರು ಅಂತ ಅನ್ಕೋಬೇಡಿ, ಅಕಸ್ಮಾತ್ ನಿಮ್ಮ ಕ್ಷೇತ್ರದಲ್ಲಿ ಬಿಜೆಪಿಗಿಂತ ಬೇರೆ ಪಕ್ಷದ ಅಭ್ಯರ್ಥಿ ಉತ್ತಮ ಅನ್ಸಿದ್ರೆ ಮೇಲೆ ನಾ ಹೇಳಿದಂತೆ ಪಕ್ಷವನ್ನು ನೋಡಿ ಮತ ಹಾಕಿ ಅಷ್ಟೇ…
ಮಹಾಭಾರತದಲ್ಲಿ ಶ್ರೀಕೃಷ್ಣ ಹೇಗೆ ಪಾಂಡವರ ಪ್ರತಿ ಹೆಜ್ಜೆಯನ್ನು ಗಮನಿಸಿ ಅವರಿಗೆ ಸತ್ಯದ ಮಾರ್ಗ ತೋರಿಸುತ್ತಿದ್ದನೊ ಹಾಗೆ ನರೇಂದ್ರ ಮೋದಿ ಬಿಜೆಪಿ ನಾಯಕರ ಪ್ರತಿ ಹೆಜ್ಜೆಯನ್ನು ಗಮನಿಸುತ್ತಿದ್ದಾರೆ, ಸುಮ್ನೆ ಯೋಚಿಸಿ ಕಳೆದ ಐದು ವರ್ಷಗಳಲ್ಲಿ ಯಾವನಾದ್ರೂ ಒಬ್ಬ ಬಿಜೆಪಿ ನಾಯಕ ಹಗರಣ ಮಾಡಿದ್ದಾನ ಅಂತ? ಮಾಡಿಲ್ಲ ಅಲ್ವಾ ಯಾಕಂದ್ರೆ ಅವರ ಹಿಂದೆ ನರೇಂದ್ರ ಇದ್ದಾನೆ…
ಮುಂದೆ ಬರ್ತಿರೋದು ಕುರುಕ್ಷೇತ್ರ, ಕೃಷ್ಣನಿಗೆ ಬೆಂಬಲ ಕೊಟ್ಟು ದುರ್ಯೋಧನ ದುಶ್ಯಾಸನ ಶಕುನಿ ದ್ರೋಣರ ಮಹಾ ಘಟ್ ಬಂಧನ್ಗೆ ಅಂತಿಮ ಗೆರೆ ಎಳೆಯೋಣ…
ಭಾರತದ ಉತ್ತಮ ಭವಿಷ್ಯಕ್ಕಾಗಿ ಮೋದಿ ಮತ್ತೊಮ್ಮೆ
ಕೃಪೆ ವ್ಯಾಟ್ಯಾಪ್