ರಫೇಲ್ ವ್ಯವಹಾರದ ಕುರಿತಾದ ಸತ್ಯಾಸತ್ಯತೆ

ವಿದ್ಯಾರಣ್ಯಪುರ ಮಂಥನದ ಆರನೇ ಕಾರ್ಯಕ್ರಮ ನಿಗಧಿತವಾಗಿದ್ದಂತೆ ರಫೇಲ್ ವ್ಯವಹಾರದ ಕುರಿತಾದ ಸತ್ಯಾಸತ್ಯತೆಯ ಬಗ್ಗೆ ಕಾರ್ಯಕ್ರಮದ ಇಂದಿನ ವಕ್ತಾರರಾದ ಶ್ರೀ ಎಸ್. ರವಿ ವಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕರು ಬಿಇಎಂಎಲ್ ಅವರ ಅಮೃತ ಹಸ್ತದಿಂದ ಜಾಲಹಳ್ಳಿ ನಗರದ ಸಂಘಚಾಲಕರಾದ ಶ್ರೀ ನಾಗರಾಜ್ ಮೌದ್ಗಲ್ ಅವರೊಂದಿಗೆ ಭಾರತಮಾತೆಗೆ ಪುಷ್ಪಾರ್ಚನೆ ಸಲ್ಲಿಸುವುದರೊಂದಿಗೆ ಮತ್ತು ಶ್ರೀಮತಿ ಪ್ರೀತಿ ಜಯಂತ್ ಅವರ ಸುಶ್ರಾವ್ಯ ಕಂಠದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.

ಶ್ರೀಯುತ ರವಿಯವರು ಆರಂಭದಲ್ಲಿ ತಮ್ಮ ದೀರ್ಘಕಾಲದ ಅನುಭವ ಮತ್ತು ಪರಿಣಿತಿಯಿಂದ ನಾನಾ ರೀತಿಯ ವಿಮಾನಗಳು, ಅವುಗಳ ಶಕ್ತಿ ಸಾಮಥ್ಯ, ಅವುಗಳ ಚಾಕಚಕ್ಯತೆ, ಯಾವ ಯಾವ ವಿಮಾನಗಳು ಯಾವ ರೀತಿಯ ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯಬಲ್ಲದು ಮತ್ತು ಅವುಗಳನ್ನು ಹೇಗೆ ಯಾವ ರೀತಿಯಲ್ಲಿ ಯಾವ ಕ್ಷಣದಲ್ಲಿ ಉಪಯೋಗಿಸಲ್ಪಡುತ್ತದೆ ಎಂಬುದನ್ನು ನಿಜಕ್ಕೂ ನಾವೇ ಆ ಯುದ್ಧ ವಿಮಾನಗಳಲ್ಲಿ ಕುಳಿತು ಚಾಲನೆ ಮಾಡುತ್ತಿದ್ದಿವೇನೋ, ನಾವೇ ಯುದ್ಧದಲ್ಲಿ ಭಾಗಿಯಾಗಿದ್ದಿವೇನೋ ಎಂಬಂತೆ ಕಣ್ಣಿಗೆ ಕಟ್ಟುವ ಹಾಗೆ ಬಣ್ಣಿಸಿದ್ದನ್ನು ವರ್ಣಿಸುವುದಕ್ಕಿಂತ ಅವರ ಬಾಯಿಯಿಂದಲೇ ಕೇಳಿ ಆನಂದಿಸಿದರೇ ಚೆನ್ನ.

ರಫೇಲ್ ಎನ್ನುವುದು ಡಸಾಲ್ಟ್ ಎಂಬ ಫ್ರಂಚ್ ಕಂಪನಿ ತಯಾರಿಸಲ್ಪಡುವ ಯುದ್ಧ ವಿಮಾನದ ಹೆಸರು. ಆರಂಭದಲ್ಲಿ ಕೇವಲ ಫ್ರಾನ್ಸ್ ದೇಶಕ್ಕೆ ಮಾತ್ರ ಸೀಮಿತವಾಗಿದ್ದ ಈ ಕಂಪನಿ ಕ್ರಮೇಣ ತನ್ನ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿಕೊಂಡು ದೇಶ ವಿದೇಶಗಳಿಗೆ ತನ್ನ ಯುದ್ಧ ವಿಮಾನಗಳನ್ನು ಮಾರಾಟ ಮಾಡಲು ಆರಂಭಿಸಿತು. 2001 ರಲ್ಲಿ ಭಾರತೀಯ ಏರ್ಫೋರ್ಸ್ ದೇಶದ ಭಧ್ರತೆಗಾಗಿ ಕೆಲ ಯುದ್ಧ ವಿಮಾನಗಳ ಅವಶ್ಯಕತೆಗಳನ್ನು ಭಾರತದ ಸರ್ಕಾರದ ಮುಂದಿಟ್ಟಿತು. ಅದಕ್ಕೆ ಸ್ಪಂದಿಸಿದ ಅಂದಿನ ಯುಪಿಎ ಸರ್ಕಾರ ಪ್ರಪಂಚದ ನಾನಾ ಕಂಪನಿಗಳ ಜೊತೆ ವ್ಯವಹಾರ ನಡೆಸಲು ಆರಂಭಿಸಿ ಅದರಲ್ಲಿ ಐದಾರು ಕಂಪನಿಗಳನ್ನು ಆಯ್ಕೆಮಾಡಿ ಮೊದಲು ಅವುಗಳ ಸಾಮರ್ಥ್ಯ ಪರೀಕ್ಷಿಸಿ ಅವುಗಳ ಸಾಮರ್ಥ್ಯ ನಮ್ಮ ಅವಶ್ಯಕತೆಗೆ ಹೊಂದಿದಲ್ಲಿ ನಂತರ ಹಣಕಾಸಿನ ವ್ಯವಹಾರ ಕುರಿತಾದ ಮಾತು ಕಥೆ ಆರಂಭಿಸಿ ಯಾವ ಕಂಪನಿ ಅತ್ಯಂತ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತದೆಯೋ ಅಂತಹ ಕಂಪನಿಯ ಜೊತೆ ವ್ಯಾಪಾರ ಒಪ್ಪಂದವನ್ನು ಮಾದಿಕೊಳ್ಳಲು ನಿರ್ಧರಿಸಲಾಯಿತು. ಹಾಗೆ ಅಂತಿಮವಾಗಿ ಆಯ್ಕೆ ಆದ ಕಂಪನಿಗಳಲ್ಲಿ ರಫೇಲ್ ಮತ್ತು ಯೂರೋ ಫೈಟ್ ಪ್ರಮುಖ ಕಂಪನಿಗಳಾಗಿವೆ. ಯೂರೋ ಫೈಟ್ ಸಾಮರ್ಹ್ಯ ನಿಜಕ್ಕೂ ಹೆಚ್ಚಾಗಿದ್ದರೂ ಅವರ ಉತ್ಪನ್ನದ ಬೆಲೆ ಅಧಿಕವಾಗಿದ್ದರಿಂದ ಅಂತಿಮವಾಗಿ ರಫೇಲ್ ಯುಧ್ದ ವಿಮಾನಗಳನ್ನು ಕೊಂಡುಕೊಳ್ಳಲು ನಿರ್ಧರಿಸಲಾಯಿತು. ಯುಪಿಎ-1 ರ ಸಮಯದಲ್ಲಿ ಆರಂಭವಾದ ವ್ಯವಹಾರ ಆರಂಭದಿಂದಲೇ ನಾನಾ ಕಾರಣಗಳಿಂದಾಗಿ ಕುಂಟುತ್ತಾ ಸಾಗಿ ಕೊನೆಗೆ ಯುಪಿಎ-2, 128 ಸಾಧಾರಣ ರಫೇಲ್ ಯುಧ್ದ ವಿಮಾನಗಳನ್ನು ಕೊಂಡುಕೊಳ್ಳಲು ನಿರ್ಧರಿಸಲಾಯಿತಾದರೂ ಯಾವುದೇ ವ್ಯವಹಾರಗಳಾಗಲೀ ಒಪ್ಪಂದಗಳಾಗಲೀ ಆಗದೆ ಯುಪಿಎ ಸರ್ಕಾರ ಪತನವಾಗಿ ಎನ್.ಡಿ.ಎ. ಸರ್ಕಾರ ಆಡಳಿತಕ್ಕೆ ಬಂದಾಗ ಈ ವ್ಯವಹಾರಕ್ಕೆ ಜೀವ ಬಂದಿತು. ಆರಂಭದಲ್ಲಿ ಡಸಾಲ್ಟ್ ಕಂಪನಿಯೊಂದಿಗೆ ನೇರವಾಗಿಯೇ ವ್ಯವಹಾರ ಮಾಡಲು ನಿರ್ಧರಿಸಲ್ಪಟ್ಟಿದ್ದರೂ ಪ್ರಸಕ್ತ ಸರ್ಕಾರ ಇಂತಹ ದೊಡ್ಡ ದೊಡ್ಡ ವ್ಯವಹಹಾರಗಳು ಯಾವುದೇ ರೀತಿಯ ಮಧ್ಯವರ್ತಿಗಳಲಿಲ್ಲದೆ ಪಾರದರ್ಶಿಕವಾಗಿರಬೇಕಂದು ನಿರ್ಧರಿಸಿ ಪ್ರಧಾನಮಂತ್ರಿಗಳೇ ಖುದ್ದಾದ ಆಸ್ತೆ ವಹಿಸಿ ಭಾರತ ಮತ್ತು ಪ್ರಾನ್ಸ್ ಸರ್ಕಾರದ ಜೊತೆಗೆ ನೇರವಾದ ವ್ಯವಹಾರ ಮಾಡಲು ನಿರ್ಧಾರವಾಯಿತು. ಆರಂಭದಲ್ಲಿ 128 ವಿಮಾನಗಳನ್ನು ಖರೀದಿಸಲು ನಿರ್ಧರಿಸಲಾಗಿದ್ದರೂ ಅದರಲ್ಲಿ ಕೆಲ ವಿಮಾನಗಳು ಮಾತ್ರ ಫ್ರಾನ್ಸ್ ನಿಂದ ತಯಾರಾಗಿ ನೇರವಾಗಿ ಭಾರತಕ್ಕೆ ಬಂದುು ಉಳಿದ ವಿಮಾನಗಳು ಡಸಲ್ಟ್ ಕಂಪನಿ ತಂತ್ರಜ್ಞಾನದ ಸಹಕಾರದೊಂದಿಗೆ ಭಾರತದಲ್ಲಿಯೇ ತಯಾರು ಮಾಡುವ ನಿರ್ಧಾರವಾಗಿತ್ತು. ಈ ವ್ಯವಹಾರಗಳ ಸಮಾಲೋಚನೆಗಾಗಿ ಭಾರತೀಯ ವಾಯುಪಡೆಯ ಮುಖ್ಯಸ್ಥರು, ಕಾನೂನು ಪರಿಣಿತರನ್ನೊಳಗೊಂಡ ಏಳು ಮಂದಿ ತಂಡವನ್ನು ರಚಿಸಿ, ಈ ವ್ಯವಹಾರ ಈಗಾಗಲೇ ಸಾಕಷ್ಟು ತಡವಾಗಿದ್ದ ಕಾರಣ ಮತ್ತು ನಮ್ಮ ನೆರೆಹೊರೆ ರಾಷ್ಟ್ರಗಳ ಬಳಿ ನಮಗಿಂತಲೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಹೆಚ್ಚಾಗಿ ನಮಗೆ ಆಭದ್ರತೆಯ ಪ್ರಶ್ನೆ ಕಾಡುತ್ತಿದ್ದರಿಂದ ಸದ್ಯದ ಪರಿಸ್ಥಿತಿಗೆ ಅನುಗುಣವಾಗಿ 18×2=36 ಸಕಲ ರೀತಿಯ ಶಸ್ತ್ರಾಸ್ತ್ರ ಸಹಿತ, ಸದಾ ಯುದ್ಧಕ್ಕೆ ಸಿಧ್ಧವಾದ ಪೂರ್ಣ ಪ್ರಮಾಣದ ವಿಮಾನಗಳನ್ನು ಖರೀದಿಸಲು ನಿರ್ಧರಿಸಲಾಯಿತು. ಈ ವಿಮಾನಗಳ ಸಂಪೂರ್ಣವಾಗಿ ಫ್ರಾನ್ಸ್ ದೇಶದಲ್ಲಿಯೇ ತಯಾರಾಗಿ ಬರುತ್ತವಾದರೂ ಅವುಗಳ ಮುಂದಿನ ಐದು ವರ್ಷಗಳ ನಿರ್ವಹಣೆ, ರಿಪೇರಿ ಅದಕ್ಕೆ ಬೇಕಾಗುವ ಸಾಧನಗಳು, ಬಿಡಿಭಾಗಗಳನ್ನು ಭಾರತದಲ್ಲಿಯೇ ಸಿಧ್ಧ ಪಡಿಸಬೇಕೆಂಬ ಒಪ್ಪಂದವೂ ಆಗಿ 2019 ಸೆಪ್ಟೆಂಬರ್ ಸಮಯದಲ್ಲಿ ಸಂಪೂರ್ಣ ಸಾಮರ್ಥ್ಯದ ಮೊತ್ತ ಮೊದಲ ರಫೇಲ್ ವಿಮಾನ ಭಾರತಕ್ಕೆ ಬರುವಂತೆ ನಿರ್ಧರಿಸಲಾಯಿತು.

2016ರ ವರೆಗೂ ಈ ವ್ಯವಹಾರದ ಬಗ್ಗೆ ಯಾವುದೇ ರೀತಿಯ ಆಕ್ಷೇಪಗಳು ಇಲ್ಲದಿದ್ದರೂ ಅದೊಮ್ಮೆ ಫ್ರಾಸ್ಸ್ ಮಾಜೀ ಅಧ್ಯಕ್ಷ ಹೆರಾಂಡೆ ಈ ವ್ಯವಹಾರದಲ್ಲಿ ಭಾರತದ ರಿಲೆಯಸ್ಸ್ ಕಂಪನಿಯ ಪಾತ್ರವಿದೆ ಎಂದು ಹೇಳಿದ್ದನ್ನೇ ಮುಂದಾಗಿಸಿಕೊಂಡು ಕಾಂಗ್ರೇಸ್ ಪಕ್ಷ ಈ ವ್ಯವಹಾರದಲ್ಲಿ 30000 ಕೋಟಿ ಅವ್ಯವಹಾರ ನಡೆದಿದು ಎಂದು ಗುಲ್ಲೆಬ್ಬಿಸಿ ಈ ಆಷ್ಟೂ ಹಣ ರಿಲೆಯನ್ಸ್ ಪಾಲಾಗುತ್ತಿದೆ ಎಂಬ ಸುಳ್ಳನ್ನು ನಿರಂತರವಾಗಿ ಹೇಳುತ್ತಾ ಈ ವ್ಯವಹಾರದ ಸಂಪೂರ್ಣ ವ್ಯವಹಾರಗಳನ್ನು ಭಾರತೀಯರಿಗೆಲ್ಲರಿಗೂ ತಿಳಿಸಬೇಕು. ಈ ವ್ಯವಹಾರದ ಒಟ್ಟು ಮೊತ್ತದ ಜೊತೆಗೆ ಈ ಯುದ್ಧ ವಿಮಾನಗಳು ಯಾವ ಯಾವ ಆಧುನಿಕ ಶಸ್ತ್ರಾಸ್ತ್ರಗಳನ್ನು ಒಳಗೊಂಡಿವೆ ಮತ್ತು ಯುಧ್ಧ ವಿಮಾನಗಳ ಖರೀದಿ ಮೊತ್ತ ಏಕಾಏಕಿ ಹೆಚ್ಚಾಗಿದ್ದೇಕೆ ಎಂಬ ಅಸಂಬದ್ಧ ಪ್ರಶ್ನೆಗಳನ್ನು ಕೇಳಲಾರಂಭಿಸಿತು.

ದೇಶದ ಬಗ್ಗೆ ಕಾಳಜಿ ಇರುವ ಸಾಮಾನ್ಯ ಪ್ರಜೆಗಳಿಗೂ ಗೊತ್ತಿರುವ ಹಾಗೆ ಇಂತಹ ಮಿಲಿಟರಿ ಸಂಭಂಧಿತ ವ್ಯವಹಾರಗಳನ್ನು ಎಲ್ಲರ ಮುಂದೆ ಹೇಳಲಾಗದು. ಅದೂ ಯಾವ ಯಾವ ಆಧುನಿಕ ಶಸ್ತ್ರಾಸ್ತ್ರಗಳನ್ನು ಒಳಗೊಂಡಿವೆ ಎಂದು ತಿಳಿಸಿದರೆ ಅದನ್ನು ಎದುರಿಸಲು ನಮ್ಮ ಶತೃರಾಷ್ಟ್ರಗಳು ಸನ್ನಧ್ಧರಾಗುವುದಕ್ಕೇ ನಾವೇ ಕಾರಣೀಭೂತರಾಗುತ್ತೇವೆ ಎಂಬ ಸಾಮಾನ್ಯ ಪರಿಜ್ಞಾನವೂ ಇಲ್ಲದ ರಾಹುಲ್ ಗಾಂಧಿ ಹೊಗಿ ಬಂದ ಕಡೆ ಎಲ್ಲಾ ಇದೇ ವಿಷಯವನ್ನು ಹೇಳುತ್ತಾ ಒಂದು ಸುಳ್ಳನ್ನು ನೂರು ಸಲಾ ಹೇಳುತ್ತಲೇ ಅದನ್ನೇ ಸತ್ಯವನ್ನಾಗಿಸುವ ತಂತ್ರಗಾರಿಯನ್ನೇ ಮುಂದುವರಿಸಿದರು. ಕಾಂಗ್ರೇಸ್ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ಸರ್ಕಾರದ ಕೆಲ ಹಿತಶತೃಗಳಾದ ಅರುಣ್ ಶೌರಿ, ಯಶವಂತ ಸಿನ್ಹಾ ಮತ್ತು ಪ್ರಶಾಂತ್ ಭೂಷಣ್ ಉಚ್ಚ ನ್ಯಾಯಾಲಯದಲ್ಲಿ ಈ ಕುರಿತಂತೆ ತಕರಾರು ಅರ್ಜಿಯನ್ನು ಸಲ್ಲಿಸಿದರು. ಇವರ ಜೊತೆ ಹೆಸರಿಗಷ್ಟೆ ಹಿಂದೂ ಪತ್ರಿಗೆಯಾದರೂ ಸದಾ ಹಿಂದೂಗಳ ಬಗ್ಗೆ ಅಸಂಬಧ್ದವಾಗಿಯೇ ಧನಿ ಎತ್ತುವ ಅದರ ಸಂಪಾದಕ ದೇಶದ ಬಗ್ಗೆ ಕಮ್ಮಿನಿಷ್ಥೆ ಹೊಂದಿರುವ ಕಮ್ಯೂನಿಷ್ಟ್ ಸಿದ್ಧಾಂತದಿಂದ ಪ್ರೇರಿತನಾದ ಎನ್ ರಾಮ್ ಕೂಡ ಸೈನ್ಯದಲ್ಲಿರುವ ತನ್ನ ಪ್ರಭಾವ ದುರುಪಯೋಗ ಪಡಿಸಿಕೊಂಡು ಮತ್ತು ಕೆಲ ಸಿಬ್ಬಂಧಿಗಳಿಗೆ ನಾನಾ ರೀತಿಯ ಆಮಿಷಗಳನ್ನು ಒಡ್ಡಿ ಈ ವ್ಯವಹಾರದ ಕುರಿತಾದ ಕೆಲ ರಹಸ್ಯ ದಾಖಲೆಗಳನ್ನು ನಕಲು ಮಾಡಿಕೊಂಡು ಒಂದಲ್ಲಾ ಒಂದು ಅಪ್ರಸ್ತುತ ಮತ್ತು ಸುಳ್ಳು ಸುದ್ದಿಗಳನ್ನು ತನ್ನ ಪತ್ರಿಕೆಗಳಲ್ಲಿ ಪ್ರಕಟಿಸುತ್ತಲೇ ಹೋದನು. ಸುಪ್ರೀಂ ಕೋರ್ಟ್ ಈ ಕುರಿತಂತ ಸುಧೀರ್ಘ ತನಿಖೆ ನಡೆಸಿ ಈ ವ್ಯವ್ಯಹಾರ ಪಾರದರ್ಶಕವಾಗಿದೆ ಇದರಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆದಿಲ್ಲ ಎಂದು ಸ್ಪಷ್ಟವಾದ ತೀರ್ಮಾನ ನೀಡಿತು ಮತ್ತು ಹಣಕಾಸು ವ್ಯವಹಾರ ಕುರಿತಂತೆ ಸಿಎಜಿಯ ನೆರವನ್ನು ಕೋರಿತು. ಸಿಎಜಿ ಕೂಡ ಇದರ ಬಗ್ಗೆ ಕೂಲಂಕುಶವಾಗಿ ತನಿಖೆ ನಡಿಸಿ ಈ ವ್ಯವಹಾರ ಹಿಂದಿನ ಸರ್ಕಾರ ಕುದುರಿಸಿದ್ದ ವ್ಯಾಪಾರಕ್ಕಿಂತಲೂ ಕಡಿಮೆ ಹಣದಲ್ಲಿ ನಡೆದಿದೆ ಹಾಗಾಗಿ ಇದರಲ್ಲಿ ಯಾವ ಅವ್ಯವಹಾರಗಳು ನಡೆದಿಲ್ಲ ಎಂದು ಸ್ಪಷೃವಾಗಿ ತಿಳಿಸಿದ್ದು ಕಾಂಗ್ರೇಸ್ ಮತ್ತು ದೇಶದ ಹಿತಶತೃಗಳಿಗೆ ನುಂಗಲಾರದ ತುಪ್ಪವಾಯಿತು.

ಭಾರತ ದೇಶ ತಮ್ಮ ಅಗತ್ಯಕ್ಕೆ ತಕ್ಕ ಸಾಮರ್ಥ್ಯವಿರುವ ಮತ್ತು ಬೆಲೆಯಲ್ಲಿಯೂ ತಮ್ಮ ಆಯವ್ಯಯಕ್ಕೆ ಸರಿಹೊಂದುವ ರಫೇಲ್ ಜೊತೆ ವ್ಯವಹಾರ ಕುದುರಿಸುತ್ತಿದ್ದನ್ನು ಗಮನಿಸಿದ ಯೂರೋ ಫೈಟ್ ತಮ್ಮ ಮೂಲ ಬೆಲೆಯಲ್ಲಿ ಶೇ 20ರಷ್ಟನ್ನು ಕಡಿಮೆಮಾಡಿದರೂ ನಮ್ಮ ವ್ಯವಹಾರಕ್ಕೆ ತಕ್ಕುದಾದ ಬೆಲೆಯಿರಲಿಲ್ಲವಾದ್ದರಿಂದ ತನ್ನ ಪ್ರಭಾವ ಬಳೆಸಿ ಕೆಲವು ಮಧ್ಯವರ್ತಿಗಳು ಅದರಲ್ಲೂ ಕಾಂಗ್ರೇಸ್ಸಿನ ರಾಜಕಾರಣಿಗಳ ಸಂಬಂಧಿಗಳ ಮೂಲಕ ವ್ಯವಹರ ಕುದುರಿಸಲು ಹಿಂಬಾಗಿಲಿನಿಂದ ಪ್ರಯತ್ನಿಸಿದ್ದದ್ದು ಈಗ ಗುಟ್ಟಾಗಿ ಉಳಿದಿಲ್ಲ ಅದರಲ್ಲಿ ಪ್ರಮುಖವಾಗಿ ಈಗಿನ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಅವರ ಸಂಬಂಧಿ ಸುಧೀರ್ ಚೌದರಿ (ಈತ ರಾಹುಲ್ ಗಾಂಧಿಯ ಭಾವ ರಾಬರ್ಟ್ ವಾದ್ರಾನ ಸ್ನೇಹಿತಕೂಡ)ಯ ಮೂಲಕ ಪ್ರಯತ್ನಿಸಿತಾದರೂ ಒಮ್ಮೆ ಒಂದು ಕಂಪನಿಯ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದ ಮೇಲೆ ಮತ್ತೊಂದು ಕಂಪನಿಯ ಜೊತೆ ವ್ಯವಹಾರ ಮಾಡಲು ಸಾಧ್ಯವಿಲ್ಲ ಎಂಬ ನಮ್ಮ ದೇಶದ ಕಾನೂನಿನ ಪ್ರಕಾರ ಯೂರೋ ಫೈಟ್ ಈ ಡೀಲ್ನಿಂದ ಹೊರಬಿದ್ದಿತು. ಹಾಗಾಗಿ ತನ್ನ ಪ್ರಭಾವ ಬಳೆಸಿ ಕಾಂಗ್ರೇಸ್ ಮೂಲಕ ಮತ್ತು ಅಮೇರಿಕಾದಲ್ಲಿಯೇ ಕುಳಿತು ಕಾಂಗೇಸ್ ಪಕ್ಷವನ್ನು ಪ್ರಚಾರ ಪಡಿಸುತ್ತಿರುವ ರಾಜೀವ್ ಗಾಂಧಿಯ ಪರಮಾಪ್ತ ಸ್ಯಾಮ್ ಪಿತ್ರೋಡ ಮುಖಾಂತರ ರಾಹುಲ್ ಗಾಂಧಿಯ ಮೇಲೆ ಪ್ರಭಾವ ಬೀರಲು ಯತ್ನಿಸಿತು. ಒಂದೊಮ್ಮೆ ಈ ಮಧ್ಯವರ್ತಿಗಳ ಮೂಲಕ ವ್ಯವಹಾರವೇನಾದರೂ ಕುದುರಿದ್ದಲ್ಲಿ ಇದು ಬೋಫೋರ್ಸ್ ಹಗರಣಕ್ಕಿಂತ ಸಾವಿರ ಪಾಲು ಹೆಚ್ಚಿನ ಹಗರಣವಾಗುತ್ತಿದ್ದರಲ್ಲಿ ಸಂದೇಹವೇ ಇರುತ್ತಿರಲಿಲ್ಲ.

ಕಾರ್ಯಕ್ರಮದ ಅಂತ್ಯದಲ್ಲಿ ಎಂದಿಗಿಂತಲೂ ಕಿಕ್ಕಿರಿದು ತುಂಬಿದ್ದ ಸಭಿಕರಿಂದ ತೂರಿಬಂದ ಈ ಪ್ರಶ್ನೆಗಳಿಗೆ ಅಷ್ಟೇ ತೀಕ್ಷ್ಣವಾಗಿ ಮತ್ತು ಸರಳವಾಗಿ ಶ್ರೀಯುತ ರವಿಯವರು ಉತ್ತರಿಸಿದ್ದ ಎಲ್ಲರ ಮೆಚ್ಚುಗೆ ಗಳಿಸಿತ್ತು. ಎಲ್ಲದ್ದಕ್ಕಿಂತ ಹೆಚ್ಚಾಗಿ ಅವರು ಪ್ರದರ್ಶಿಸಿದ ಪಿಪಿಟಿಯನ್ನು ಯಾವುದೇ ರೀತಿಯ ಮುಚ್ಚುಮರೆ ಇಲ್ಲದೆ ಯಾರೂ ಬೇಕಾದರೂ ಯಾರಿಗೆ ಬೇಕಾದರು ರವಾನಿಸಬಹುದು ಎಂದು ಹೇಳಿದ್ದು ಅವರಿಗೆ ವಿಷಯದ ಕುರಿತಾದ ಸ್ಪಪ್ಟತೆ ಮತ್ತು ಧೃಡತೆಯನ್ನು ಎತ್ತಿತೋರಿಸುತ್ತಿತ್ತು.

ಪ್ರಶ್ನೋತ್ತರ
1. ಈ ವ್ಯವಹಾರದಲ್ಲಿ HAL ಸಂಸ್ಥೆಗೆ ನಷ್ಟವಾಗಿಲ್ಲವೆ?
ಮುಂಚಿನ ವ್ಯವಹಾರದಲ್ಲಿ 128 ವಿಮಾನಗಳ ಪೈಕಿ ಕೆಲವೇ ಕೆಲವು ವಿಮಾನಗಳು ಫ್ರಾನ್ಸ್ನಿಂದ ಕೊಂಡು ಕೊಂಡು ಉಳಿದ ವಿಮಾನಗಳನ್ನು ಡಸಾಲ್ಟ್ ನಿಂದ ತಂತ್ರಜ್ಞಾನವನ್ನು ಪಡೆದು HAL ಸಂಸ್ಥೆಯಲ್ಲಿ ತಯಾರಿಗೆ ಮಾಡುವಂತೆ ಇತ್ತು. ಆದರೆ ಈ ವ್ಯವಹಾರದಲ್ಲಿ ಕೇವಲ 36 ವಿಮಾನಗಳನ್ನು ನೇರವಾಗಿ ಫ್ರಾನ್ಸ್ ದೇಶದಲ್ಲೇ ತಯಾರು ಮಾಡಿಸಿ ಆಮದು ಮಾಡಿಕೊಳ್ಳುತ್ತಿರುವುದರಿಂದ HAL ಸಂಸ್ಥೆಯ ನೇರವಾಗಿ ಭಾಗಿಯಾಗಿಲ್ಲದಿದ್ದರೂ, ಈ ವ್ಯವಹಾರದ ಪ್ರಮುಖ ತಯಾರಿಕಾ ಸಂಸ್ಥೆಯಾದ ಸಾಫ್ರನ್ ಕಂಪನಿಯ ಭಾಗವಾಗಿ ಹೆಚ್.ಎ.ಎಲ್ ಕೂಡ ಈ ವ್ಯವಹಾರದಲ್ಲಿ ದುರಸ್ತಿ ಕಾರ್ಯಗಳಲ್ಲಿ, ಬಿಡಿ ಭಾಗಗಳ ತಯಾರಿಕೆಯಲ್ಲಿ ಖಂಡಿತವಾಗಿಯೂ HAL ಸಂಸ್ಥೆಯ ಸೇವೆಯನ್ನು ಪಡೆದುಕೊಳ್ಳಲಾಗುತ್ತದೆ.

2. 128 ವಿಮಾನಗಳ ಸಂಖ್ಯೆ ಇದ್ದಕ್ಕಿದ್ದಂತೆ 36 ವಿಮಾನಗಳಿಗೆ ಹೇಗೆ ಇಳಿಮುಖವಾಯಿತು?
ಆರಂಭದಲ್ಲಿ 128 ವಿಮಾನಗಳ ಸಂಖ್ಯೆ ಅಗತ್ಯವಿದ್ದರೂ ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ವಾಯುಸೇನೆಗೆ ಕನಿಷ್ಟ ಪಕ್ಷ ಎರಡು ಬೆಟಾಲಿಯನ್ ಅಂದರೆ 18×2 ವಿಮಾನಗಳು ತುರ್ತಾಗಿ ಬೇಕಾಗಿರುವುದರಿಂದ ಯುದ್ಧಕ್ಕೆ ಸರ್ವಸನ್ನದ್ಧವಾದ ಸಕಲ ಶಸ್ತ್ರಾಸ್ತ್ರಗಳಿಂದ ಪೂರಿತವಾಗಿರುವ 36 ವಿಮಾನಗಳನ್ನು ಕೊಂಡು ಕೊಳ್ಳಲು ನಿರ್ಧರಿಸಲಾಗಿದೆ. ಈ ವಿಮಾನಗಳ ಕಾರ್ಯತತ್ಪರತೆ ನಮ್ಮ ನೆಲದಲ್ಲಿ ಹೇಗೆ ಆಗುತ್ತದೆ ಎಂಬುದನ್ನು ಗಮನಿಸಿ ಅದಕ್ಕೆ ತಕ್ಕಂತೆ ಮಾರ್ಪಾಟುಗಳೊಂದಿಗೆ ಮತ್ತಷ್ಟು ವಿಮಾನಗಳನ್ನು ಮುಂದೆ ಖರೀದಿಸಬಹುದಾಗಿದೆ.

3. ಈ ವಿಮಾನಗಳ ನಿರ್ವಹಣೆ, ಬಿಡಿಬಾಗಗಳು ಮತ್ತು ದುರಸ್ತಿ ಹೇಗೆ ನಡೆಯುತ್ತವೆ.
30000 ಕೋಟಿಗಳ ಈ ವ್ಯವಹಾರದಲ್ಲಿ 9000 DRDOಗೆ ಹೋದರೆ, 21000 ಮೂರು ತಯಾರಿಕಾ ಕಂಪನಿಗಳ ಮಧ್ಯೆ ಹಂಚಿಕೆಯಾಗುತ್ತದೆ. ಆದರಲ್ಲಿ 6300 ಕೋಟಿ ತೇಲ್ಸ್ ಕಂಪನಿಯದ್ದಾದರೆ, 8400 ಕೋಟಿ ಡಸಾಲ್ಟ್ ಮತ್ತು 6300 ಸಾಫ್ರನ್ ಕಂಪನಿಯ ಪಾಲಾಗಿದೆ. ಭಾರತ ಸರ್ಕಾರದ ನಿಯಮದ ಪ್ರಕಾರ ಯಾವುದೇ ವ್ಯವಹಾರಗಳು ನಡೆದಲ್ಲಿ ಅದರ ಶೇ30.ರಷ್ಟನ್ನು ಭಾರತದಲ್ಲಿಯೇ ಹೂಡಿಕೆ ಮಾಡಲೇ ಬೇಕಿದೆ ಅದರಂತೆ ತೇಲ್ಸ್ 12 ಭಾರತೀಯ ಕಂಪನಿಗಳ ಜೊತೆ ಸಹಭಾಗಿತ್ವ ನಡೆಸಿದ್ದರೆ, ಡಸಾಲ್ಟ್ 55 ಮತ್ತು ಸಾಫ್ರನ್ 22 ಭಾರತೀಯ ಕಂಪನಿಗಳ ಜೊತೆ ಸಹಭಾಗಿತ್ವದಲ್ಲಿ ಈ ವ್ಯವಹಾರವನ್ನು ಪೂರ್ಣಗೊಳಿಸಲಾಗುತ್ತಿದೆ. ಒಟ್ಟು 89 ಭಾರತೀಯ ಕಂಪನಿಗಳಲ್ಲಿ ರಿಲಯನ್ಸ್ ಕಂಪನಿಯೂ ಒಂದಾಗಿದ್ದು ಅದಕ್ಕೆ 3% ಅಂದರೆ 900 ಕೋಟಿಯ ವ್ಯವಹಾರ ಮಾಡಲಾಗುತ್ತಿದೆ. ಪಪ್ಪೂ ಹೇಳಿದ ಹಾಗೆ 30000 ಕೋಟಿ ಅಂಬಾನಿಯ ಪಾಲಗುತ್ತಿಲ್ಲ. ಅಂತೆಯೇ ಉಳಿದ 88 ಕಂಪನಿಗಳ ಪೈಕಿ ಎಲ್&ಟಿ, ಟೆಕ್ ಮಹೀಂದ್ರ, ಹೆಚ್.ಸಿ.ಎಲ್, ಕ್ಯಾಪ್ ಜೆಮಿನಿ, ಟೈಟಾನ್,ವಿಪ್ರೋ, ಗೋದ್ರೇಜ್ ಗಳಲ್ಲದೆ, ಸಾಫ್ರನ್ ಕಂಪನಿಯ ಭಾಗವಾಗಿ ಹೆಚ್.ಎ.ಎಲ್ ಕೂಡ ಈ ವ್ಯವಹಾರದಲ್ಲಿ ಪರೋಕ್ಷವಾಗಿ ಭಾಗಿಯಾಗಿದೆ.

4. ಒಂದು ಪಕ್ಷ ಭಾರತ ಸರ್ಕಾರ ಮತ್ತು ಫ್ರಾನ್ಸ್ ಸರ್ಕಾರ ನೇರವಾಗಿ ವ್ಯವಹರಿಸಿ 36 ವಿಮಾನಗಳನ್ನು ಕೊಳ್ಳುವ ಬದಲು 128 ವಿಮಾನಗಳನ್ನು ಮಧ್ಯವರ್ತಿಗಳ ಮೂಲಕ ಕೊಂಡು ಕೊಂಡಿದ್ದರೆ ಎಷ್ಟರ ಮಟ್ಟಿನ ಅವ್ಯವಹಾರ ನಡೆದೆರಬಹುದಾಗಿತ್ತು.
ನನ್ನ ಅಂದಾಜಿನ ಪ್ರಕಾರ 128 ವಿಮಾನಗಳನ್ನು ಮಧ್ಯವರ್ತಿಗಳ ಮೂಲಕ ಕೊಂಡು ಕೊಂಡಿದ್ದರೆ ಮತ್ತೊಮ್ಮೆ ಉಚ್ಚರಿಸುತ್ತಿದ್ದೇನೆ ಇದು ನನ್ನ ಅಂದಾಜಿನ ಪ್ರಕಾರ ಸರಿ ಸುಮಾರು 200000 ಕೋಟಿಗಳಷ್ಟು ಹಣದ ಅವ್ಯವಹಾರ ನಡೆಯಬಹುದಾಗಿತ್ತು.ಅದಕ್ಕಾಗಿಯೇ ಕಾಂಗ್ರೇಸ್ ಮತ್ತಿತರು ತಮ್ಮ ಪಾಲಿನ ಆದಾಯವನ್ನು ತಪ್ಪಿಸಿದ ಮೋದಿಯ ಸರ್ಕಾರದ ವಿರುದ್ಧ ಈ ಪರಿಯ ಪಿತೂರಿಗಳನ್ನು ನಡೆಸುತ್ತಿದ್ದಾರೆ.

ಇಡೀ ಕಾರ್ಯಕ್ರಮವನ್ನು ಶ್ರೀಕಂಠ ಬಾಳಗಂಚಿಯವರು ನಿರೂಪಣೆ ಮಾಡಿದರೆ, ಶ್ರೀ ಗುರುರಾಜ ಯಾವಗಲ್ ಅವರ ವಂದನಾರ್ಪಣೆ ಮತ್ತು ಶ್ರೀಮತಿ ಅನುರಾಧರವರ ಕಂಚಿನ ಕಂಠದ ವಂದೇಮಾತರಂ ಮೂಲಕ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಕೊನೆಗೊಂಡಿತು. ಕಾರ್ಯಕ್ರಮ ಮುಗಿದ ನಂತರವೂ ಸಭಿಕರು ಶ್ರೀಯುತ ರವಿಯವರತ್ತ ಮುಗಿಬಿದ್ದು ತಮ್ಮ ಸಂದೇಹಗಳನ್ನು ಪರಿಹರಿಸಿಕೊಳ್ಳುತ್ತಿದ್ದದ್ದು ಎಲ್ಲರ ಗಮನ ಸೆಳೆಯಿತು.

ಒಟ್ಟಿನಲ್ಲಿ ಮೋದಿಯವರ ಸರ್ಕಾರದ ಕಳೆದ ಐದು ವರ್ಷಗಳಲ್ಲಿ ಯಾವುದೇ ರೀತಿಯ ಅವ್ಯವಹಾರಗಳಾಗಲೀ ಭ್ರಷ್ಟಾಚಾರವಾಗಲೀ ನಡೆಯದೆ ಜನಮನ್ನಣೆ ಪಡೆದಿರುವುದರಿಂದ ಇದೇ ರೀತಿ ಮುಂದುವರಿದರೆ ತಮಗೆ ಉಳಿಗಾಲವಿಲ್ಲ ಎಂಬ ಸತ್ಯ ಕಾಂಗ್ರೇಸ್ ಪಕ್ಷಕ್ಕೆ ಅರಿವಾಗಿರುವ ಪರಿಣಾಮ ಈಗ ತೋಳ ಬಂತು ತೋಳ ಕಥೆಯಂತೆ ರಫೇಲ್ ಡೀಲ್ ನಲ್ಲಿ ಹೋದ ಬಂದ ಕಡೆಯಲ್ಲೆಲ್ಲಾ
ಅವ್ಯವಹಾರ ನಡೆದಿದೆ ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದವಾಗಿದೆ. ಹೀಗೆಯೇ ಅವರ ಸುಳ್ಳಿನ ಕಂತೆ ಮುಂದುವರೆದಲ್ಲಿ ಅತೀ ಶೀಘ್ರದಲ್ಲಿಯೇ ತೋಳ ಬಂತು ತೋಳ ಕಥೆಯ ಅಂತ್ಯದಂತೆ ಇವರ ಅಂತ್ಯವಾಗುವುದರಲ್ಲಿ ಸಂದೇಹವೇ ಇಲ್ಲದಂತಾಗಿದೆ.

ರಫೇಲ್ ರಫೇಲ್ ಎಂದು ಇಲ್ಲ ಸಲ್ಲದ ವಿಷಯಗಳನ್ನು ಬಡಬಡಿಸುತ್ತಾ ರಾಗಾ-ಫೇಲ್ ಆಗಿರುವುದಂತೂ ಜಗಜ್ಜಾಹೀರಾತಾಗಿದೆ. ಅಂತಿಮವಾಗಿ ಈ ವ್ಯವಹಾರದಲ್ಲಿ ಯಾವುದೇ ರೀತಿಯ ಕಾನೂನಿನ ಉಲ್ಲಂಘನೆಯಾಗಲೀ ಹಣಕಾಸಿನ ದುರ್ಬಳಕೆಯಾಗಲೀ ಅಥವಾ ಕಡೆಗಣಿಸಲಾದ ಶಸ್ತ್ರಾಸ್ತ್ರಗಳು ಅಥವಾ ಯುದ್ದಉಪಕರಣಗಳನ್ನು ಕೊಂಡುಕೊಳ್ಳಲಾಗಿಲ್ಲ. ಯುಪಿಎ ಸರ್ಕಾರ 2001 ಮತ್ತು 2007ರಲ್ಲಿ ಯಾವ ಬೆಲೆಗೆ ಕೊಂಡು ಕೊಳ್ಳಲು ನಿರ್ಧರಿಸಿತ್ತೋ ಅದಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಅದಕ್ಕಿಂತಲೂ ಅತ್ಯಾಧುನಿಕ ಉಪಕರಣಗಳೊಂದಿಗೆ ಶಶಕ್ತ ಯುದ್ದೋಪಕರಣಗಳು ಮತ್ತು ವಿಮಾನಗಳನ್ನು ಖರೀದಿಸಲು ನಿರ್ಧರಿಸಲಾಗಿರುವುದು ಸತ್ಯ ಸತ್ಯ. ಸತ್ಯ. ಈ ರಫೇಲ್ ಕುರಿತಾದ ನಿಜವಾದ ಸಂಗತಿಗಳನ್ನು ದೇಶದ ಪ್ರತಿಯೊಬ್ಬ ನಾಗರೀಕರಿಗೂ ತಲುಪಿಸಬೇಕಾದ ಗುರುತರವಾದ ಜವಾಬ್ದಾರಿ ನಮ್ಮ ಮೇಲಿದೆ. ಹಾಗಾಗಿ ನಾವೆಲ್ಲರೂ ನಮ್ಮ ಪ್ರಧಾನಿಗಳ ಭುಜಕ್ಕೆ ಭುಜಕೊಟ್ಟು ನಾವೆಲ್ಲಾ ಚೌಕೀದಾರಂತೆಯೇ ಕೆಲಸ ಮಾಡಬೇಕಿದೆ ಮತ್ತೊಮ್ಮೆ ದೇಶದಲ್ಲಿ ಕಮಲ ಉಜ್ವಲವಾಗಿ ಅರಳಬೇಕಿದೆ.

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s