ನಮಗೆಲ್ಲರಿಗೂ ಈಗಾಗಲೇ ತಿಳಿದಿರುವಂತೆ ದಿನಾಂಕ 22.03.2020, ಬೆಳಿಗ್ಗೆ 7 ರಿಂದ ರಾತ್ರಿ 9 ಘಂಟೆಯವರೆಗೂ ಸಮಸ್ತ ಭಾರತೀಯರು ಸ್ವಯಂಪ್ರೇರಿತರಾಗಿ ಮನೆಯಲ್ಲಿಯೇ ಇರಬೇಕೆಂದು ನಮ್ಮ ದೇಶದ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಯವರು ರಾಷ್ಟ್ರವನ್ನುದ್ದೇಶಿಸಿ ದಿನಾಂಕ 19.03.2020 ರಂದು ರಾತ್ರಿ 8.00 ಘಂಟೆಗೆ ಮಾಡಿದ ಭಾಷಣದಲ್ಲಿ ಕೋರಿಕೊಂಡಿದ್ದಾರೆ.
ಬಹಳಷ್ಟು ಜನರಿಗೆ ಒಂದು ಕೇವಲ 14 ಘಂಟೆಗಳ ಅವಧಿಯವರೆಗೆ ಮನೆಯಲ್ಲಿದ್ದರೆ ಮಾರಕ ಸೋಂಕು ಕರೋನವನ್ನು ತಡೆಗಟ್ಟ ಬಹುದೇ? ಹಾಗಿದ್ದಲ್ಲಿ ಇದನ್ನು ಪ್ರಪಂಚಾದ್ಯಂತ ಈಗಾಗಲೇ ಮಾಡುತ್ತಿರಲಿಲ್ಲವೇ ಎಂಬ ಕುಹಕ ಮಾತುಗಳನ್ನಾಡುತ್ತಿದ್ದಾರೆ. ಹಾಗಾಗಿ ಇದು ಕೇವಲ 14 ಘಂಟೆಗಳ ಅವಧಿಯವರೆಗೆ ಮಾತ್ರ ಜನತಾ ಕರ್ಫ್ಯೂವಲ್ಲ. ಇದು ಒಂದು ಯೋಜಿತ ಕಾರ್ಯಸಾಧುವಾಗಿದೆ.
ಒಂದು ಸ್ಥಳದಲ್ಲಿ ಕರೋನಾ ವೈರಸ್ ಜೀವಿತಾವಧಿಯ ಆಯಸ್ಸು ಯಾವುದೇ ವಸ್ತುಗಳಾಗಲೀ, ಬಟ್ಟೆಗಳ ಮೇಲಾಗಲೀ ಅಥವಾ ಲೋಹದ ಮೇಲಾಗಲೀ 8 ಗಂಟೆಗಳು ಕರೋನ ರೋಗ ಸೋಂಕಿತ ವ್ಯಕ್ತಿ ಮುಟ್ಟಿದ ಅಥವಾ ಧರಿಸಿದ ಬಟ್ಟೆಗಳ ಮೇಲೆ ಅಬ್ಬಬ್ಬಾ ಎಂದರೆ ಸುಮಾರು 12 ಗಂಟೆಗಳ ಕಾಲ ಜೀವಂತವಾಗಿರ ಹಾಗಾಗಿ ಕರ್ಫ್ಯೂ ಸಮಯವನ್ನು 14 ಗಂಟೆಗಳ ಕಾಲ ವಿಧಿಸಿದ್ದಾರೆ. ಇದರಿಂದ ಸಾರ್ವಜನಿಕ ಪ್ರದೇಶಗಳಲ್ಲಿ ಇರಬಹುದಾದ ಕರೋನಾ ಸೋಂಕಿತ ವಸ್ತುಗಳನ್ನಾಗಲೀ ಅಥವಾ ವ್ಯಕ್ತಿಗಳನ್ನಾಗಲೀ ಸುಮಾರು 14 ಗಂಟೆಗಳವರೆಗೆ ಯಾರೂ ಸ್ಪರ್ಶಿಸಿರುವುದಿಲ್ಲವಾದ್ದರಿಂದ ಆ ಸರಪಳಿ ಮುರಿಯುವ ಕಾರಣ ಕರೋನ ವೈರಸ್ ಜೀವಿತಾವಧಿ ಮುಗಿದು ಹೋಗಿರುತ್ತದೆ ಹಾಗಾಗಿ 14 ಗಂಟೆಗಳ ನಂತರ ಜನ ಜೀವನ ಮುಂದುವರೆಸುವುದು ಸುರಕ್ಷಿತ ಎನ್ನುವುದು ಇದರ ಹಿಂದಿನ ಉದ್ದೇಶ.
ಹಾಗೆ ಸರಿಯಾಗಿ ನೋಡಿದಲ್ಲಿ ಈ ಜನತಾ ಕರ್ಫ್ಯೂ ಕೇವಲ 14 ಗಂಟೆಗಳಲ್ಲದೇ 36 ಗಂಟೆಗಳು ಎಂದು ಹೇಳಿದರೆ ನಿಮಗೆ ಆಶ್ವರ್ಯವಾಗಬಹುದು. ಈ ಯೋಜನೆಯನ್ನು ಅತ್ಯಂತ ಬುದ್ಧಿವಂತ ರೀತಿಯಲ್ಲಿ ಮತ್ತು ಬಹಳ ನಿಖರವಾಗಿ ಮತ್ತು ಪರಿಣಾಮಕಾರಿಯಾಗಿ ಯೋಜಿಸಲಾಗಿದೆ.
ಆದರೆ ನಿಜವಾಗಿಯೂ ಕರ್ಪ್ಯೂ ನಿಜವಾಗಿಯೂ ಹಿಂದಿನ ರಾತ್ರಿ ಸರಿ ಸುಮಾರು 9 ಗಂಟೆಯಿಂದಲೇ. ಆರಂಭವಾಗಿರುತ್ತದೆ. ಈಗ ಕರ್ಫ್ಯೂ ವಿಧಿಸಿರುವ ಸಮಯ ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ಮುಗಿದ ನಂತರ ಹೆಚ್ಚೂ ಕಡಿಮೆ ಜನ ಹೊರಗೆ ಹೋಗುವುದು ಮಾರನೇ ದಿನ ಬೆಳಿಗ್ಗೆ 7 ಗಂಟೆಗೇ ಹಾಗಾಗಿ ಹೆಚ್ಚೂ ಕಡಿಮೆ 21.03.20 ರಾತ್ರಿ 9 ಗಂಟೆಗೆ ಆರಂಭವಾಗಿ 23.03.20 ಬೆಳಿಗ್ಗೆ 7.00 ಗಂಟೆಯ ವರೆಗೂ ಜನರು ತಮ್ಮ ಮನೆಗಳಲ್ಲಿಯೇ ಇರುವ ಪರಿಣಾಮ ನಮಗೆ ಅರಿವಿಲ್ಲದಂತೆಯೇ ಈ ಜನತಾ ಕರ್ಫೂ 36 ಗಂಟೆಗಳ ಅವಧಿಗಳಷ್ಟಾಗಿರುತ್ತದೆ. ಈ ಅವಧಿಯಲ್ಲಿ ವೈರಸ್ ಹರಡುವಿಕೆಯನ್ನು ಬಹಳ ಸುಲಭವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹರಡದಂತೆ ತಡೆಗಟ್ಟಬಹುದಾಗಿದೆ. ಆದ್ದರಿಂದ ಈ ಯೋಜನೆ ಬಹಳ ಬುದ್ಧಿವಂತ ತನದಿಂದ ಜನರಿಗೆ ಯಾವುದೇ ರೀತಿಯಲ್ಲಿ ತೊಂದರೆ ಯಾಗದಂತೆ ಯೋಚಿಸಲಾಗಿದೆ.
ಈಗಾಗಲೇ ನಾನಾ ಕಾರಣಗಳಿಂದಾಗಿ ಕರೋನಾ ವೈರಸ್ ಸೋಂಕಿತರಾಗಿರುವವರಿಗೆ ಮರುಕ ಪಡೋಣ ಮತ್ತು ಆದಷ್ಟು ಶೀಘ್ರವಾಗಿ ಕರೋನ ಖಾಯಿಲೆಗೆ ಮದ್ದನ್ನು ಕಂಡು ಹಿಡಿಯಲಿ ಎಂದು ಆಶೀಸೋಣ. ನಮ್ಮ ಪ್ರಧಾನಿಗಳು ಹೇಳಿದಂತೆ ಹಾಗಾಗಿ ಸಮಸ್ತ ಭಾರತೀಯರೂ ಇದರಲ್ಲಿ ಸ್ವಯಂ ಪ್ರೇರಿತರಾಗಿ ಖಡ್ಡಾಯವಾಗಿ ಪಾಲ್ಗೊಳ್ಳಲೇ ಬೇಕಾಗಿದೆ.
ಸೋಂಕು ಹರಡಂತೆ ತಡೆಗಟ್ಟುವಿಕೆಯು, ಖಾಯಿಲೆಗೆ ಕೊಡುವ ಚಿಕಿತ್ಸೆಗಿಂತ ಉತ್ತಮವಾಗಿರುತ್ತದೆ
ಏನಂತೀರೀ?
Very good article Srikanta avare.
LikeLiked by 1 person
ಖಂಡಿತಾ ಹೌದು Sir
ಸೋಂಕು ಹರಡಂತೆ ತಡೆಗಟ್ಟುವಿಕೆಯು, ಖಾಯಿಲೆಗೆ ಕೊಡುವ ಚಿಕಿತ್ಸೆಗಿಂತ ಉತ್ತಮವಾಗಿರುತ್ತದೆ.
LikeLiked by 1 person