ಇಡೀ ದೇಶವೇ ಲಾಕೌಟ್ ಆಗಿ ಎಲ್ಲವೂ ಬಂದ್ ಆದಾಗ ನಮ್ಮ ಕ್ಷೇಮಕ್ಕಾಗಿ ಮಮ್ಮಲ ಮರುಗುವುದೇ.
ನಮ್ಮ ದೇಶ ಮತ್ತು ನಮ್ಮ ಮನೆ.
ಎರಡು ಜೀವಗಳು ಮಾತ್ರಾ ನಮ್ಮೆಲ್ಲಾ ತಪ್ಪುಗಳನ್ನೂ ಮನ್ನಿಸಿ ಒಪ್ಪಿಕೊಳ್ಳಲು ಸಿದ್ಧವಾಗಿರುತ್ತವೆ
ಒಂದು ಹೆತ್ತ ತಾಯಿ ಮತ್ತೊಂದು ಕಟ್ಟಿಕೊಂಡ ಮಡದಿ.
ಯಾವ ಬಂದ್ ಲೆಕ್ಕಿಸದೇ, ವರ್ಷದ ಮುನ್ನೂರೈವತ್ತೈದು ದಿನಗಳೂ, ದಿನದ ಇಪ್ಪತ್ನಾಲ್ಕು ಗಂಟೆಗಳೂ
ನಮಗೆ ಆಶ್ರಯ ನೀಡಿರುವ ದೇಶ, ನಮಗೆ ಜನ್ಮ ನೀಡಿದ ತಾಯಿ ಮತ್ತು ಸಲಹುತ್ತಿರುವ ಮಡದಿ,
ಈ ಕ್ಷಮಯಾಧರಿತ್ರೀಗಳಿಗೆ ಮತ್ತು ಅನ್ನಪೂರ್ಣೆಯರಿಗೆ ನಮ್ಮ ಹೃದಯಪೂರ್ವಕ ವಂದನೆಗಳು.
ದೇಶವಿಲ್ಲದೇ ಆಶ್ರಯವಿಲ್ಲಾ, ತಾಯಿಯಿಲ್ಲದೇ ದೇಹವಿಲ್ಲಾ, ಮಡದಿ ಇಲ್ಲದೇ ನೆಮ್ಮದಿ ಇಲ್ಲ.
ಹಾಗಾಗಿ, ಅವಳಿಗೆ ಸ್ತ್ರೀ ಎಂದರೆ ಅಷ್ಟೇ ಸಾಕೇ? ಕ್ಷಮಯಾಧರಿತ್ರೀ ಎಂದು ಮನಸಾರೆ ಪೂಜಿಸಬಾರದೇಕೇ?
ಏನಂತೀರೀ??