ಅನನ್ಯ ಮತ್ತು ಅನುಕರಣಿಯರು ನಮ್ಮ ಕರಿಯಪ್ಪ ಮೇಷ್ಟ್ರು

ಇವತ್ತಿನ ದಿವಸ ಯಾವುದೇ ಟಿವಿ ಚಾನೆಲ್ ನೋಡಿದ್ರೂ ಅಥವಾ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ನೋಡಿದರೂ ಕೂರೋನಾ ಬಗ್ಗೆಯೇ ಮಾತು. ಅವರಿಗೆ ಕೋರೋನಾ+ve ಅಂತೇ ಇವರಿಗೆ +ve ಅಂತೇ ಅನ್ನೋದರ ಜೊತೆಗೆ ಆ ಕೂರೋನಾ ಸೆಂಟರ್ನಲ್ಲಿ ಒಂದು ಚೂರೂ ವ್ಯವಸ್ಥೆ ಸರಿ ಇರ್ಲಿಲ್ವಂತೇ. ಅಲ್ಲಿ ಊಟ ತಿಂಡಿ ಹೋಗ್ಲಿ ಸರಿಯಾದ ಶೌಚಾಲಯದ ವ್ಯವಸ್ಥೆ ಇಲ್ಲದೇ ಗಲೀಜ್ ಅಂತೇ ಎಂದರೆ. ಮತ್ತೊಬ್ಬರು ನಮ್ಮನ್ನು ಇಂತಹ ಕೆಟ್ಟ ಸ್ಥಳಕ್ಕೆ ಕರೆದುಕೊಂಡು ಬರುವ ಬದಲು ಸೆರೆಮನೆಗೆ ತಳ್ಳಿಬಿಡಿ ಅಲ್ಲಿ ಮುದ್ದೆ ತಿಂದು ಕೊಂಡು ನಿಮ್ಮದಿಯಾಗಿ ಇರುತ್ತೇವೆ ಇನ್ನುವ ಆಕ್ರೋಶದ ಮಾತುಗಳೇ ಕೇಳಿಬರುತ್ತಿರುವ ಸಂದರ್ಭದಲ್ಲಿ ಇಲ್ಲೊಂದು ವಿಭಿನ್ನವಾದ ಅನುಭವದ ಕಥೆ ಮೇಗರವಳ್ಳಿ ಸುಬ್ರಹ್ಮಣ್ಯ ಅವರ ಮುಖಪುಟದಲ್ಲಿ ಓದಿ ಒಂದು ರೀತಿಯ ಸಂತೋಷ ಮತ್ತೊಂದು ರೀತಿಯಲ್ಲಿ ಸಮಾಧಾನವಾಯಿತು.

WhatsApp Image 2020-07-22 at 3.01.13 PM

ಕೈಯಲ್ಲಿ ಪೊರಕೆ ಇಟ್ಕೊಂಡು ಈ ರೀತಿ ಕಸ ಗುಡಿಸ್ತಾ ಇರುವವರು ಶಿವಮೊಗ್ಗದ ದೇವರಾಜ ಅರಸ್ ನಗರದ ಶಿಕ್ಷಕರಾದ ಶ್ರೀಯುತ ಕರಿಯಪ್ಪನವರು. ಅವರಿಗೆ ಕೊರೋನಾ ಸೋಂಕು ತಗುಲಿದೆ ಎಂದು ಶಿವಮೊಗ್ಗದ್ದ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಪರೀಕ್ಷೆ ನಡೆಸಿದ ಎರಡು ದಿನಗಳ ನಂತರ ಅವರಿಗೆ ಕೂರೋನಾದ ಯಾವುದೇ ರೋಗ ಲಕ್ಷಣಗಳೂ ಇಲ್ಲವೆಂದು ತಿಳಿದು ಐದು ದಿನದ ನಂತರ ರೋಗ ಲಕ್ಷಣ ಇಲ್ಲದವರಿಗಾಗಿ ವ್ಯವಸ್ಥೆ ಮಾಡಿರುವ ಗಾಜನೂರಿನ ಮೊರಾರ್ಜಿ ದೇಸಾಯಿ ಕೇಂದ್ರೀಯ ವಿದ್ಯಾಲಯಕ್ಕೆ ಸ್ಥಳಾಂತರಿಸುತ್ತಾರೆ.

ಅಲ್ಲಿಗೆ ಕಾಲಿಟ್ಟೊಡನೆಯೇ, ಅಲ್ಲಿಯ ಕೊಳಕನ್ನು ಕಂಡು ಒಂದು ಕ್ಷಣ ದಂಗಾದ ಸುಸಂಸ್ಕೃತರಾದ ಕರಿಯಪ್ಪನವರು, ಒಂದು ಕ್ಷಣ ಮೌನವಾಗಿ ಯಾರನ್ನೂ ದೂಷಿಸದೇ, ಅಲ್ಲಿಯೇ ಇದ್ದ ಕಸಪೊರಕೆಯನ್ನು ಹಿಡಿದುಕೊಂಡು ಸ್ಬತಃ ಅವರಿರುವ ವಾರ್ಡ್ ಗುಡಿಸಿ ಸ್ವಚ್ಚಗೊಳಿಸಲು ಆರಂಭಿಸುತ್ತಾರೆ. ಮಕ್ಕಳಿಗೆ ಪಾಠ ಮಾಡೋ ಮೇಷ್ಟ್ರೇ ಈ ರೀತಿ ಸ್ವಚ್ಚತೆಗೆ ಇಳಿದ್ದನ್ನು ನೋಡಿದ ಇನ್ನೂ ಕೆಲವರು ಈ ಸ್ವಚ್ಛ ಭಾರತ್ ಅಭಿಯಾನಕ್ಕೆ ಅವರೊಂದಿಗೆ ಕೈ ಜೋಡಿಸುತ್ತಾರೆ. ನೋಡ ನೋಡತ್ತಿದ್ದಂತೆಯೇ, ಎಲ್ಲಾ ವಾರ್ಡುಗಳು, ವರಾಂಡ, ಸ್ನಾನದ ಮನೆ, ಶೌಚಾಲಯ ಹೀಗೆ ಒಂದೊಂದೇ ಶುಚಿಯಾಗಿ ಬಿಡುತ್ತದೆ.

ನಿಜವಾಗಿಯೂ ಹೇಳಬೇಕೆಂದರೆ ಆರಂಭದಲ್ಲಿ ಆ ಸ್ಥಳ ಹೀಗೆ ಇಷ್ಟು ಕೊಳಗಾಗಿರಲಿಲ್ಲ. ಆದರೆ ಅಲ್ಲಿಗೆ ಬಂದಂತಹವರ ಮನಸ್ಥಿತಿ ಕೊಳಕಾಗಿದ್ದ ಪರಿಣಾಮ, ಪರಿಸರವೂ ಕೊಳಕಾಗಿ ಮಾರ್ಪಟ್ಟಿತ್ತು. ಅಲ್ಲಿದ್ದ ರೋಗಿಗಳು ಮತ್ತು ವೈದ್ಯಕೀಯ ಸಿಬ್ಬಂದಿಗಳಿಗೂ ಸಹಾ ಅಲ್ಲಿದೆ ನಮ್ಮನೆ ಇಲ್ಲಿ ಬಂದೇ ಸುಮ್ಮನೆ ಎನ್ನುವ ರೀತಿ ಅಸಡ್ಡೆ. ತಮ್ಮ ಶ್ರುಶೂಷೆಗಾಗಿ ಸರ್ಕಾರ ಎಷ್ಟೆಲ್ಲಾ ರೀತಿಯ ಶ್ರಮವಹಿಸುತ್ತಿದೆ ಎಂಬುದರ ಪರಿವೆಯಿಲ್ಲದೇ ತಮಗೆ ನೀಡಿದ್ದ ಬಿಸ್ಕತ್ ಪ್ಯಾಕೆಟ್, ಚಾಕಲೇಟ್ ಕವರ್ ಗಳನ್ನೂ ಎಲ್ಲೆಂದರಲ್ಲಿ ಚೆಲ್ಲಿದ್ದೆಲ್ಲದ್ದರ ಪರಿಣಾಮವಾಗಿಯೇ ಅಲ್ಲೊಂದು ಕಸದ ತೊಟ್ಟಿಯಂತಹ ವಾತಾವರಣ ನಿರ್ಮಾಣವಾಗಿ, ಆರೋಗ್ಯಕರವಾಗಿ ಇರಬೇಕಿದ್ದ ಕೇರ್ ಸೇಂಟರ್ ಗಬ್ಬುನಾಥ ಹೊಡೆಯತೊಡಗಿತ್ತು.

ಯಾವಾಗ ಕರಿಯಪ್ಪ ಮೇಷ್ಟ್ರು ಕಸಬರೆಕೆ ಕೈಗೆತ್ತಿಕೊಂಡು ಎಲ್ಲರಿಗೂ ಮಾದರಿಯಾದರೋ, ಆಗ ಅಲ್ಲಿದ್ದವರಿಗೆಲ್ಲಾ ಒಂದು ರೀತಿಯ ಅವಮನವಾಗಿ ಬಹುತೇಕರು ಸ್ವಚ್ಚತೆಗಾಗಿ ಕೈಜೋಡಿಸಿದ್ದರ ಪರಿಣಾಮವಾಗಿ ಕೆಲವೇ ಕೆಲವು ಘಂಟೆಗಳಲ್ಲಿ ಇಡಿ ಕೇರ್ ಸೆಂಟರ್ ಲಕ ಲಕ ಅಂತ ಹೊಳೆಯ ತೊಡಗಿತು. ಇದ್ದಕೇ ಹೇಳೋದು ಜೀವನದಲ್ಲಿ ಮುಂದೆ ಬರಬೇಕಿದ್ದರೆ, ಮುಂದೇ ಗುರಿ ಇರಬೇಕು ಮತ್ತು ಹಿಂದೇ ಗುರು ಇರಬೇಕು ಎಂದು. ನಮ್ಮ ಕೃತಿ ಇನ್ನೊಬ್ಬರಿಗೆ ಪ್ರೇರಣೆ ನೀಡುವಂತಿರಬೇಕು ಎಂಬುದಕ್ಕೆ ಕರಿಯಪ್ಪ ಮೇಷ್ಟ್ರು ಜ್ವಲಂತ ಉದಾರಣೆ ಎಂದರೂ ಉತ್ಪ್ರೇಕ್ಷೆಯೇನಲ್ಲ.

ನಿಜ ಹೇಳಬೇಕೆಂದರೆ, ಹಾವು ಕಡಿದಾಗ ಹಾವಿನ ವಿಷವೇರಿ ಸಾಯುವುದಕ್ಕಿಂದ ಹಾವು ಕಚ್ಚಿದ್ದ ಭಯಕ್ಕೇ ಹಲವರು ಸಾಯುತ್ತಾರಂತೆ. ಅದೇ ರೀತಿ ಕೊರೋನಾ ಎಂಬ ಸಾಂಕ್ರಾಮಿಕ ರೋಗದಿಂದ ಸಾಯುವವರಿಗಿಂತ ಅದರ ಬಗ್ಗೆ ಭಯಪಡುತ್ತಲೇ ನಕರಾತ್ಮಕವಾಗಿ ಯೋಚಿಸುತ್ತಲೇ ಸಾಯುವವರ ಸಂಖ್ಯೆಯೇ ಹೆಚ್ಚು. ಇನ್ನು ಅಲ್ಲಿಯ ಪರಿಸರ ಆನಾರೋಗ್ಯಕರವಾಗಿದ್ದಲ್ಲಿ ಜೀವ ಭಯದಿಂದ, ಬದುಕುವ ನಂಬಿಕೆಯನ್ನೇ ಕಳೆದುಕೊಂಡವರು ಮತ್ತಷ್ಟೂ ನಿಸ್ತೇಜರಾಗಿರುತ್ತಾರೆ. ಇಂತಹ ಸಂದರ್ಭದಲ್ಲಿ ಎಲ್ಲರೂ ಈ ರೀತಿಯಾಗಿ ವಿವಿಧ ಚಟುವಟಿಕೆಗಳಲ್ಲಿ ಸ್ವಚ್ಚತೆಯಲ್ಲಿ ತೊಡಗಿಕೊಳ್ಳುವ ಮೂಲಕ ಪರಸ್ಪರ ಧೈರ್ಯ ತುಂಬುತ್ತಾ, ಧನಾತ್ಮಕವಾಗಿ ಚಿಂತಿಸುತ್ತಾ, ಬದುಕಿನಲ್ಲಿ ಭರವಸೆ ಮೂಡಿಸಬೇಕು. ಬಿಡುವಿನ ಸಮಯದಲ್ಲಿ ಧ್ಯಾನ, ಸರಳ ಯೋಗ ಪ್ರಾಣಾಯಾಮ ಮಾಡುತ್ತಲೋ, ಸಂಜೆ ಅವರವರ ನಂಬಿಕೆಗಳಿಗೆ ಅನುಗುಣವಾಗಿ ಭಜನೆ ಮಾಡುತ್ತಾ, ಸುತ್ತಮುತ್ತಲಿನ ನೈರ್ಮಲ್ಯವನ್ನು ಕಾಪಾಡಿಕೊಂಡು ಬಂದಲ್ಲಿ, ಎಲ್ಲಾ ರೀತಿಯ ರೋಗ ರುಜಿನಗಳು ಮಾಯವಾಗಿ ಕೆಲವೇ ಕೆಲವು ದಿನಗಳಲ್ಲಿ ಸಂಪೂರ್ಣವಾಗಿ ಚೇತರಿಸಿಕೊಂಡು ಮತ್ತೆ ಮೊದಲಿನಂತಾಗ ಬಹುದು.

ಜೀವ ಮತ್ತು ಜೀವನ ಎರಡೂ ನಮ್ಮದು. ಹಾಗಾಗಿ ನಮ್ಮ ಸುರಕ್ಷತೆಯಲ್ಲಿ ನಾವೇ ಇರಬೇಕೇ ಹೊರತು ಎಲ್ಲದ್ದಕ್ಕೂ ಸರ್ಕಾರವನ್ನಾಗಲೀ ಅಥವಾ ಮತ್ತೊಬ್ಬರನ್ನಾಗಲೀ ಅವಲಂಭಿಸಿ ಅಥವಾ, ದೂಷಿಸಿ ಫಲವಿಲ್ಲ. ನಾವು ನಂಬಿದ ಭಗವಂತ ಎಂದೂ ನಮ್ಮನ್ನು ಕೈ ಬಿಡುವುದಿಲ್ಲ ಎಂಬ ಅಚಲ ಧನಾತ್ಮಕ ನಂಬಿಯಲ್ಲಿರಬೇಕು. ಭಗವಂತ ಖಂಡಿತವಾಗಿಯೂ ಯಾವುದೋ ಒಂದು ರೂಪದಲ್ಲಿ ಬಂದು ಕಾಪಾಡಿಯೇ ತೀರುತ್ತಾನೆ. ಇಲ್ಲಿ ಭಗವಂತ ಕರಿಯಪ್ಪ ಮೇಷ್ಟ್ರ ಮುಖಾಂತರದಲ್ಲಿ ಬಂದು ಎಲ್ಲರಿಗೂ ಸ್ವಚ್ಚತೆಯನ್ನು ಕಲಿಸಿದ ಎಂದರೂ ತಪ್ಪಾಗಲಾರದು. ಕರಿಯಪ್ಪನಂತಹ ಗುರುಗಳ ಈ ರೀತಿಯ ಸೇವೆ ಅನನ್ಯ ಮತ್ತು ಅನುಕರಣೀಯ. ಇಂತಹ ನಿಸ್ವಾರ್ಥ ಶಿಕ್ಷಕರ ಸಂಖ್ಯೆ ಅಗಣಿತವಾದಲ್ಲಿ, ಭಾರತ ಮತ್ತೊಮ್ಮೆ ಜಗತ್ತಿಗೇ ಪಾಠ ಕಲಿಸುವಂತಹ ವಿಶ್ವ ಗುರುವಾಗುವುದದಲ್ಲಿ ಸಂದೇಹವೇ ಇಲ್ಲ.

ಏನಂತೀರೀ?

ಇಂತಹ ಮಹತ್ತರ ವಿಷಯವನ್ನು ತಿಳಿಸಿದಂತಹ ಶ್ರೀ ಮೇಗರವಳ್ಳಿ ಸುಬ್ರಹ್ಮಣ್ಯವರಿಗೆ ಧನ್ಯವಾದಗಳು

3 thoughts on “ಅನನ್ಯ ಮತ್ತು ಅನುಕರಣಿಯರು ನಮ್ಮ ಕರಿಯಪ್ಪ ಮೇಷ್ಟ್ರು

  1. ಗುರು ಸ್ಥಾನಕ್ಕೆ ಕಳಶಪ್ರಾಯರಾದ ಕರಿಯಪ್ಪ ಮೇಷ್ಟರ ಕಾರ್ಯ ಶ್ಲಾಘನೀಯ….

    Liked by 1 person

Leave a comment