ಸಾರಿಗೆ ಸಂಪರ್ಕ ಜನ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಜನರನ್ನು ಕರೆದೊಯ್ಯಲು ಮತ್ತು ವಸ್ತುಗಳನ್ನು ಸಾಗಿಸಲು ಸಾರಿಗೆ ವಾಹನಗಳ ಅವಶ್ಯಕತೆ ಅತ್ಯಗತ್ಯವಾಗಿ ಇದನ್ನು ಮನಗಂಡ ಸ್ವಾತ್ರಂತ್ರ್ಯಾ ನಂತರ ಸರ್ಕಾರವೇ ನೇರವಾಗಿ ಸಾರಿಗೆ ಸಂಸ್ಜೆಗಳನ್ನು ಅರಂಭಿಸಿ ಸುಮಾರು ವರ್ಷಗಳ ವರೆಗೂ ಅದನ್ನು ನಡೆಸಿಕೊಂಡು ಹೋಗಿತ್ತು. ಈ ಸಾರಿಗೆ ಸಂಸ್ಥೆಯ ನೌಕರಿಗಲ್ಲರಿಗೂ ಸರ್ಕಾರಿ ನೌಕರರಿಗೆ ನೀಡುವ ಸೌಲಭ್ಯಗಳನ್ನೇ ನೀಡುತ್ತಿದ್ದರೂ. ಈ ನೌಕರ ದುರಾಡಳಿತ ಮತ್ತು ಕದ್ದು ತಿನ್ನುವಿಕೆಯಿಂದಾಗಿ ಪ್ರತೀವರ್ಷವೂ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿಗಳ ನಷ್ಟವಾಗಿ ಈ ಸಂಸ್ಥೆಗಳು ಬಿಳೀ ಆನೆಯನ್ನು ಪೋಷಿಸುವ ಹಾಗೆ ಆದ ಕಾರಣ ಸರ್ಕಾರ ಈ ಸಂಸ್ಥೆಯನ್ನು ಆಯಾಯಾ ಭಾಗಗಳಾಗಿ ವಿಂಗಡಿಸಿ ನಿಗಮ ಮಂಡಳಿಯನ್ನು ನಿರ್ಮಿಸಿ ಸರ್ಕಾರದ ನೇರ ಆಡಳಿತದಿಂದ ಹೊರಗಿರಿಸಿ ಅವುಗಳಿಗೆ ಸ್ವಾಯುತ್ತತೆಯನ್ನು ಕೊಟ್ಟು ಅವುಗಳನ್ನು ನೋಡಿಕೊಳ್ಳಲು ರಾಜ್ಯದ ಸಾರಿಗೆ ಸಚಿವ ಮತ್ತು ಕೆಲವು IAS ಅಧಿಕಾರಿಗಳನ್ನು ನೇಮಿಸಲಾಯಿತು. ಎಲ್ಲದ್ದಕ್ಕಿಂತಲೂ ಮುಖ್ಯವೆಂದರೆ ಈ ಎಲ್ಲಾ ನೌಕರರೂ ಇನ್ನು ಮುಂದೆ ಅಯಾಯಾ ನಿಮಗದ ನೌಕರರಾಗಿರುತ್ತಾರೆಯೇ ಹೊರತು ಸರ್ಕಾರೀ ನೌಕರರಲ್ಲ ಎಂಬುದನ್ನು ಸ್ಪಷ್ಟ ಪಡಿಸಿತ್ತು.
ಹೈಸ್ಕೂಲು ದಾಟದ ಡ್ರೈವರುಗಳು ಮತ್ತು ಎಸ್.ಎಸ್.ಎಲ್.ಸಿ ಪಾಸ್ ಮಾಡಿ ಮುಂದೆ ಓದಲಾಗದಂತಹವರು ಹೇಗಾದರೂ ಕೆಲಸ ಸಿಕ್ಕರೆ ಸಾಕು ಎಂದು ಡ್ರೈವರ್ ಮತ್ತು ಕಂಡೆಕ್ಟರ್ಗಳಾಗಿ ಕೆಲಸಕ್ಕೆ ಸೇರಿಕೊಂಡರು. ಕೆಲಸಕ್ಕೆ ಸೇರುವಾಗ ಇದು ಸರ್ಕಾರಿ ಉದ್ಯೋಗವಲ್ಲ ಎಂದೇ ಸ್ಪಷ್ಟ ಪಡಿಸಿಯಾಗಿತ್ತಲ್ಲದೇ ಅವರವರ ವಿದ್ಯಾರ್ಹತೆಗೆ ತಕ್ಕಂತೆ ಸಂಬಳವನ್ನು ನಿಗಧಿಪಡಿಸಲಗಿತ್ತು. ಅದೆಷ್ಟೋ ನಿರೋದ್ಯೋಗಿಗಳು ಕೆಲಸ ಸಿಗುತ್ತದಲ್ಲಾ ಎಂದು ಯಾರ್ಯಾರಿಗೂ ಎಷ್ಟೆಷ್ಟೋ ಲಂಚವನ್ನು ನೀಡಿ ಈ ಕೆಲಸವನ್ನು ಗಿಟ್ಟಿಸಿಕೊಂಡು ಕೆಲಸವನ್ನು ಮಾಡಿಕೊಂಡರು.
ಅಲ್ಲಿಯವರೆಗೂ ಕೆಲಸ ಸಿಕ್ಕರೆ ಸಾಕು ಎನ್ನುತಿದ್ದವರು ಈಗ ನೆಮ್ಮದಿಯ ಕೆಲಸ ಮತ್ತು ಅದಕ್ಕೆ ತಕ್ಕಂತೆ ಕೈತುಂಬಾ ಸಂಬಳ ಸಿಗುತ್ತಿದ್ದರೂ ಅತೀ ಆಸೆಯಿಂದ ಪ್ರತಿಯೊಬ್ಬರೂ ಮೇಲು ಸಂಪಾದನೆಗೆ ಇಳಿದಿದ್ದೇ ಸಾರಿಗೆ ಸಂಸ್ಥೆಯ ಅವನತಿಗೆ ಕಾರಣವಾಯಿತು
- ಕಂಡಕ್ಟರ್ ಟಿಕೆಟ್ ನೀಡದೇ ಪ್ರಯಾಣಿಕರನ್ನು ಕರೆದುಕೊಂಡು ಹೋಗಿ ಆ ಹಣವನ್ನು ಜೋಬಿಗೆ ಇಳಿಸತೊಡಗಿದ. ಇನ್ನು ತನ್ನ ಬಳಿ ಚಿಲ್ಲರೆ ಇದ್ದರೂ ಟಿಕೆಟ್ ಹಿಂದೆ ಚಿಲ್ಲರೆ ಬರೆದುಕೊಟ್ಟು ಪ್ರಯಾಣದ ಭರದಲ್ಲಿ ಪ್ರಯಾಣಿಕರು ಚಿಲ್ಲರೆ ತೆಗೆದುಕೊಳ್ಳುವುದನ್ನು ಮರೆತು ಹೋದರೆ ಆ ದುಡ್ಡೂ ಕಂಡೆಕ್ಟರ್ ಜೋಬಿಗೆ ಇಳಿಯತೊಡಗಿತು. ಪ್ರತೀ ಪ್ರಯಾಣಿಕರೂ ಇಂತಿಷ್ಟು ಸಮಾನುಗಳನ್ನು ತೆಗೆದುಕೊಂಡು ಹೋಗಬಹುದು ಎಂಬ ನಿಯಮವಿದ್ದರೂ ಅದನ್ನು ಗಾಳಿಗೆ ತೂರಿ ಕಂಡಕ್ಟರ್ ಮನಸೋ ಇಚ್ಚೆ ಪ್ರಯಾಣಿಕರನ್ನು ಲೂಟಿ ಮಾಡ ತೊಡಗಿದ್ದರು.
- ಈ ರೀತಿ ಕಂಡಕ್ಟರ್ ಮಾಡಿದರೆ ತಾನೇನು ಕಡಿಮೆ ಎಂದು ಡ್ರೈವರ್ ಸಹಾ ಮಾರ್ಗದ ಮದ್ಯದಲ್ಲಿರುವ ಹೋಟೆಲ್ ಚೆನ್ನಾಗಿಲ್ಲದಿದ್ದರೂ ಆತ ತನ್ಗೆ ಬಿಟ್ಟಿ ಊಟದ ಜೊತೆಗ್ಗೆ ಸ್ವಲ್ಪ ಹಣ ಕೊಡ್ತಾನೆ ಅಂತ ಎಂಜಿಲು ಕಾಸಿಗೆ ಬೇಕಾಬಿಟ್ಟಿಯ ಕಡೆ ಬಸ್ ನಿಲ್ಲಿಸಿದರು. ಡ್ರೈವರ್ ಸೀಟಿನ ಕೆಳಗೆ ಲಗ್ಗೇಜುಗಳನ್ನು ಹಾಕಿಕೊಂಡು ನಿರ್ಧಿಷ್ಟ ಸ್ಥಳದಲ್ಲಿ ನಿರ್ಧಿಷ್ಟ ವ್ಯಕ್ತಿಗಳಿಗೆ ತಲುಪಿಸುವ ಮೂಲಕ ಅನಧಿಕೃತವಾಗಿ ಮತ್ತು ಅಕ್ರಮವಾಗಿ ಹಣ ಸಂಪಾಡಿಸತೊಡಗಿದರು. ಇನ್ನೂ ಎಷ್ಟೋ ಜನರು ಹೇಳುವಂತೆ ಖಾಸಗಿಯವರಿಗೆ ಡೀಸೆಲ್ ಮಾರಿಕೊಂಡು ಹಣ ಸಂಪಾದನೆ ಮಾಡಿದವರೆಷ್ಟೋ?
- ಇನ್ನು ಬಸ್ ಡಿಪೋಗಳಲ್ಲಿರುವ ಸಿಬ್ಬಂಧಿಗಳು ಬಸ್ಸುಗಳ ಬಿಡಿ ಭಾಗಗಳನ್ನು ಕದ್ದೊಯ್ದು ಮಾರಾಟ ಮಾಡುತ್ತಿದ್ದದ್ದಲ್ಲದೇ ಹೊಸಾ ಹೊಸಾ ಟೈರುಗಳನ್ನು ಬೇರೆಯವರಿಗೆ ಮಾರಿ ಅದು ಇತರರಿಗೆ ಗೊತ್ತಾಗಬಾರದೆಂದು ಆಗ್ಗಾಗೆ ಟೈರ್ ಗೋದಾಮುಗಳಲ್ಲಿ ಹತ್ತಾರು ಹಳೇ ಟೈರಗಳಿಗೆ ತಾವೇ ಬೆಂಕಿ ಇಟ್ಟು ಲೆಕ್ಕವನ್ನು ಚುಕ್ತಾ ಮಾಡತೊಡಗಿದರು.
- ನೌಕರರೇ ಹೀಗೆ ಮಾಡಿದರೆ ಇನ್ನು ಅಧಿಕಾರಿ ವರ್ಗ ಮತ್ತು ಸಾರಿಗೆ ಸಚಿವರು ಮತ್ತು ಅವರ ಸಿಬ್ಬಂಧಿಗಳು ಹೊಸಾ ಬಸ್ಸುಗಳ ಖರೀದಿಯಲ್ಲಿ ಕೊಟ್ಯಾಂತರ ರೂಪಾಯಿಗಳ ಲಂಚವನ್ನು ಪಡೆದಿರುವುದು ಈಗ ಇತಿಹಾಸ.
ಒಟ್ಟಿನಲ್ಲಿ ಎಲ್ಲರೂ ತಮ್ಮ ತಮ್ಮ ಶಕ್ತ್ಯಾನುಸಾರ ದೋಚುತ್ತಲೇ ಹೊದರೇ ಹೊರತು ಯಾರೂ ಸಹಾ ಸಂಸ್ಥೆಯನ್ನು ಲಾಭದತ್ತ ನಡೆಸಿಕೊಂಡು ಹೋಗುವತ್ತ ಹರಿಸಲೇ ಇಲ್ಲ ತಮ್ಮ ಚಿತ್ತ. ಸರ್ಕಾರವೂ ಸಹಾ ಸಾರ್ವಜನಿಕರ ಸೇವೆಗೆಂದು ಇರುವ ಸಂಸ್ಥೆಗಳಲ್ಲಿ ಲಾಭ ನಿರೀಕ್ಷಿಸಲಾಗದು ಎಂದು ಆಗ್ಗಿಂದ್ದಾಗೆ ಹಣವನ್ನು ಕೊಡುತ್ತಲೇ ಹೋದ ಪರಿಣಾಮ ಈ ನೌಕರಿಗೆ ಸಮಯಕ್ಕೆ ಸರಿಯಾಗಿ ಸಂಬಳ ಮತ್ತು ಗಿಂಬಳ ಸಿಗತೊಡಗಿತ್ತು. ಇಷ್ಟರ ಮಧ್ಯೆ ಇಡೀ ಪ್ರಪಂಚಾದ್ಯಂತ ಕರೋನಾ ಮಾಹಾಮಾರಿ ವಕ್ಕರಿಸಿ ಲಾಕ್ ಡೌನ್ ಆದಾಗ, ಮೂರ್ನಾಲ್ಕು ತಿಂಗಳುಗಳ ಕಾಲ ಯಾವುದೇ ಸಾರಿಗೆ ನಿಗಮದ ವಾಹನಗಳು ರಸ್ತೆಗೇ ಇಳಿಯದಿದ್ದರೂ ಮಾನವೀಯತೆಯ ದೃಷ್ಟಿಯಿಂದ ನೌಕರರಿಗೆ ಸಂಬಳವನ್ನು ನೀಡಿತ್ತು.
ಇಂತಹ ಕಷ್ಟದ ಸಮಯದಲ್ಲಿಯೂ ತಮ್ಮ ಕೈ ಹಿಡಿದ ಸರ್ಕಾರಕ್ಕೆ ಕೃತಜ್ಞರಾಗ ಬೇಕಿದ್ದ ಸಾರಿಗೇ ನೌಕರರಿಗೆ ಅದೆಲ್ಲಿಂದಲೋ ಮುಷ್ಕರ ಮಾಡುವುದನ್ನೇ ಕಾಯಕವನ್ನಾಗಿಸಿಕೊಂಡಿರುವ, ರೈತರಿಂದಲೂ ತಿರಸ್ಕರಿಸಲ್ಪಟ್ಟಿರುವ ಕೋಡೀಹಳ್ಳಿ ಚಂದ್ರಶೇಖರ್ ಗಂಟು ಬಿದ್ದ, ಸರಿಯಾಗಿ ಹೈಸ್ಕೂಲ್ ಸಹಾ ದಾಟಿರದ ಸಾರಿಗೆ ನೌಕರಿಗೆ ಅಲ್ಲಿನೋಡಿ ನಿಮ್ಮ IAS ಅಧಿಕಾರಿಗಳು ಮತ್ತು ನಿಮ್ಮ ಸಾರಿಗೆ ಸಚಿವರು ಲಕ್ಷಾಂತರ ಹಣ ಸಂಬಳ ಮತ್ತು ಸವಲತ್ತು ರೂಪದಲ್ಲಿಪಡೆಯುತ್ತಿದ್ದಾರೆ ನಿಮಗೆ ಮಾತ್ರ ಕಡಿಮೆ ಸಂಬಳ ಕೊಡುತ್ತಿದ್ದಾರೆ, ಮುಷ್ಕರ ನಡೆಸುವ ಮೂಲಕ ನಿಮಗೆಲ್ಲರಿಗೂ IAS, IPS ಸಂಬಳ ಕೋಡಿಸುತ್ತೇನೆ, ಸರ್ಕಾರಿ ಉದ್ಯೋಗಿಗಳಿಗೆ ಕೊಡುವ ಸೌಲಭ್ಯಗಳನ್ನೇ ನಿಮಗೂ ಕೊಡಿಸುತ್ತೇನೆ ಎಂದು ತಲೆ ಸವರಿ ಅನಿರ್ಧಿಷ್ಟಾವಧಿಯ ಕಾಲ ಮುಷ್ಕರ ನಡೆಸಿಯೇ ಬಿಟ್ಟ,
ಕರೋನಾದಿಂದಾಗಿ ಎಲ್ಲವೂ ಸ್ತಭ್ಧವಾಗಿದ್ದ ಕಾರಣ ಸರ್ಕಾರದ ಆರ್ಥಿಕ ಪರಿಸ್ಥಿತಿಯೂ ಚೆನ್ನಾಗಿರಲಿಲ್ಲ, ಅದ್ಯಾರೋ ಕ್ಷಣಕ್ಕೊಂದು ಬಣ್ಣ ಬದಲಾಯಿಸೋ ಊಸರವಳ್ಳಿ ಗಂಜಿ ಗಿರಾಕಿ ತನ್ನ ರಾಜಕೀಯ ತೆವಲುಗಳಿಗಾಗಿ ಇವರನ್ನು ಎತ್ತಿಕಟ್ಟಿದರೆ ಅವರ ಮಾತನ್ನು ನಂಬಿ ಸಾರಿಗೇ ನೌಕರರೂ ಮುಷ್ಕರ ನಡೆಸಿದ್ದಲ್ಲದೇ ಸರ್ಕಾರ ಕರೆದ ಸಂಧಾನ ಸಭೆಗಳಿಗೂ ಬರಲು ಒಪ್ಪದೇ ತಮ್ಮ ಮೂಗಿನ ನೇರಕ್ಕೇ ಎಲ್ಲವೂ ನಡೆಯಬೇಕು ಎಂಬ ಹಠ ಬೇರೆ, ಕಡೆಗೆ ಅತ್ತೂ ಕರೆದು, ಆಳೆದು ತೂಗಿ ಅವರ ಎಂಟು ಬೇಡಿಕೆಗಳಲ್ಲಿ ಏಳು ಬೇಡಿಕೆಗಳನ್ನು ಈಡೇರಿಸಿ ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯಸ್ಸು ಎನ್ನುವಂತೆ ಮುಷ್ಕರವನ್ನು ನಿಲ್ಲಿಸುವುದರಲ್ಲಿ ಸರ್ಕಾರವು ಸಫಲವಾಯಿತು.
ಹೇಗೋ ಮುಷ್ಕರ ನಿಂತಿದೆ. ಆರ್ಥಿಕ ಪರಿಸ್ಥಿತಿ ಸುಧಾರಣೆಯಾದ ಮೇಲೆ ಸಾರಿಗೆ ನೌಕರರ ಸಂಬಳ ಹೆಚ್ಚಿಸುವ ಬಗ್ಗೆ ಯೋಚಿಸೋಣ ಎಂದುಕೊಂಡಿದ್ದಾಗಲೇ, ಮತ್ತೊಮ್ಮೆ ಹೊಟ್ಟೆ ತುಂಬಿದ ಗಂಜೀ ಗಿರಾಕಿ ಕೋಚಂ ನೇತೃತ್ವದಲ್ಲಿ ಒಂದು ದಿವಸದ ಮುಷ್ಕರ ಮಾಡ್ತೀವಿ ಎಂದವರು ಈಗ ಅನಿರ್ಧಿಷ್ಟಾವಧಿ ಮುಷ್ಕರ ಮಾಡತೊಡಗಿದ್ದಾರೆ. ಹೀಗೆ ತಿಂಗಳಿಗೊಮ್ಮೆ ಮುಷ್ಕರ ನಡೆಸುತ್ತಾ ಹೋದರೆ, ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕ್ಕೊಂಡು ಮಲಗೋದು ಸಾರಿಗೆ ಸಂಸ್ಥೆಯ ನೌಕರರೇ ಹೋರತು ಕೋಚಂ ಅಲ್ಲಾ ಎನ್ನುವುದರ ಅರಿವಿಲ್ಲದಾಗಿದೆ.
ಜೀವನವೇ ಒಂದು ಸಾಮರಸ್ಯ. ಇಲ್ಲಿ ತಗ್ಗಿ ಬಗ್ಗಿ ಹೊಂದಿಕೊಂಡು ಹೋಗಬೇಕು. ಆತ ಇವತ್ತು ಸಾರಿಗೆ ಮುಷ್ಕರ ನಡೆಸ್ತಾನೆ ನಾಳೆ ರೈತರನ್ನು ಎತ್ತಿ ಕಡ್ತಾನೆ. ಮತ್ತೊಂದು ದಿನ ಶಿವರಾಮಕಾರಂತ ಬಡಾವಣೆಯ ಜನರನ್ನು ಬಿಡಿಎ ವಿರುದ್ದ ಛೂ ಬಿಡುತ್ತಾ, ಸದ್ದಿಲ್ಲದೇ ಐಶಾರಾಮಿ ಕಾರಿನಲ್ಲಿ ವೈಭವೋಪೇತ ಹೋಟೆಲ್ಲುಗಳು ಮತ್ತು ಬಂಗ್ಲೆಗಳಲ್ಲಿ ಧಿಮ್ಮಾಲೇ ರಂಗ ಅಂತ ಇರ್ತಾನೆ. ಇಂತಹ ಮುಷ್ಕರಗಳಿಂದ ಅವನ ಕುಟುಂಬ ಏನೂ ಹಸಿದುಕೊಂಡು ಬದುಕಲ್ಲ
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಎಲ್ಲಾ ನೌಕರರೂ ಈಗಾಗಲೇ ಸವಿವರವಾಗಿ ತಿಳಿಸಿದ ಎಲ್ಲಾ ಕೆಟ್ಟ ಚಾಳಿಗಳನ್ನೂ ಬಿಟ್ಟು, ನಿಯತ್ತಾಗಿ ದುಡಿದು ಸಾರಿಗೆ ನಿಗಮ ಮಂಡಲಗಳನ್ನು ಲಾಭಕ್ಕೆ ತಂದು ನಂತರ ಸಂಬಳ ಅಧಿಕಾರಯುತವಾಗಿ ಸಂಬಳ ಹೆಚ್ಚು ಕೇಳಿದರೆ ಅದಕ್ಕೂ ಒಂದು ಘನತೆ ಮತ್ತು ಮರ್ಯಾದೆ ಇರುತ್ತದೆ. ಅದು ಬಿಟ್ಟು, ಕೆಲಸಕ್ಕೆ ಕರೀಬೇಡಿ ಸಂಬಳ ಮಾತ್ರಾ ಮರೀ ಬೇಡಿ ಅಂದ್ರೇ, ಇಂತಹವರ ಸಹವಾಸವೇ ಬೇಡ ಅಂತ ಸಾರಿಗೆ ನಿಗಮವನ್ನೇ ಬರ್ಕಸ್ತು ಮಾಡಿ ಎಲ್ಲವನ್ನೂ ಖಾಸಗೀಕರಣ ಮಾಡಿ ಸರ್ಕಾರ ಕೈ ತೊಳ್ಕೋಂಡ್ರೇ ನಷ್ಟ ಆಗೋದು ನೌಕರಿಗೇ ಹೊರತು, ಇವರನ್ನು ಎತ್ತಿಕಟ್ಟುತ್ತಿರುವ ಗಂಜಿ ಗಿರಾಕಿಗಲ್ಲ.
ಈಗಲೂ ಸಹಾ ದಕ್ಷಿಣಕನ್ನಡದಲ್ಲಿ ಅನೇಕ ದಶಕಗಳಿಂದಲೂ ಖಾಸಗೀ ಸಂಸ್ಥೆಗಳೇ ಅತ್ಯಂತ ಸುಗಮವಾಗಿ ಸಾರಿಗೆ ಸೌಲಭ್ಯಗಳನ್ನು ನಡೆಸಿಕೊಂಡು ಹೋಗುತ್ತಿದೆ. ಇಂದಿಗೂ ಸಹಾ ವಿಜಯ ಸಂಕೇಶ್ವರ ಅವರ ವಿ.ಆರ್.ಎಲ್ ಮತ್ತು ಅನೇಕ ಖಾಸಗಿ ಸಾರಿಗೆ ಸಂಸ್ಥೆಗಳು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಹೋಗಿ ಜನಮನ್ನಣೆ ಗಳಿಸಿರುವುದು ಕಣ್ಣ ಮುಂದೆಯೇ ಇದೆ. ಯಾರೋ ಹೋಟ್ಟೇ ತುಂಬಿದವನ ರಾಜಕೀಯ ತೆವಲಿಗೆ ತಿಂಗಳಿಗೊಮ್ಮೆ ಈ ರೀತಿ ಬಂದ್ ನಡೆಸುತ್ತಾ ಹೋದಲ್ಲಿ ಸಾರಿಗೆಯನ್ನು ಖಾಸಗೀಕರಣಗೊಳಿಸಿ ಶಾಶ್ವತವಾಗಿ ಸಾರಿಗೆ ಸಂಸ್ಥೆಯನ್ನು ಮುಚ್ಚಬೇಕಾದ ದಿನಗಳು ದೂರವಿಲ್ಲ.
ಹೀಗೆ ಹೇಳುತ್ತಿದ್ದಂತೆ ನಿಮಗೇನ್ರೀ ಗೊತ್ತು ನೌಕರರ ಕಷ್ಟ?. ಎಸಿ. ರೂಮಿನಲ್ಲಿ ಕಂಪ್ಯೂಟರ್ ಮುಂದೆ ಕುಳಿತು ಗೀಚುವವರಿಗೆ ಏನು ಗೊತ್ತು ನೌಕರರ ಸಂಕಷ್ಟ ಎಂದು ಹೇಳುವವರಿಗೇನೂ ಕಡಿಮೆ ಇಲ್ಲ. ನಿಜ ಹೇಳಬೇಕೆಂದರೆ ಈ ಕೋವಿಡ್ ನಿಂದಾಗಿ ಕೆಲಸ ಕಳೆದು ಕೊಂಡವರಲ್ಲಿ ನಾನೂ ಒಬ್ಬ. ಕಳೆದ ಒಂದು ವರ್ಷದಿಂದ ಸಂಬಳ ಇಲ್ಲ. ಹೇಗೋ ಕಷ್ಟು ಪಟ್ಟು ಉಳಿಸಿದ ಹಣದಲ್ಲಿ ಹಿತಮಿತವಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದೇನೆಯೇ ಹೊರತು ಇವರಂತೆ ಬೀದಿಗೆ ಬಂದು ಸರ್ಕಾರದ ವಿರುದ್ದ ದಂಗೆ ಎದ್ದಿಲ್ಲ. ಅದರ ಬದಲು ಸದ್ದಿಲ್ಲದೆ ಹೊಸಾ ಕೆಲಸ ಹುಡುಕುವ ಪ್ರಯತ್ನದಲ್ಲಿ ನಿರತನಾಗಿದ್ದೇನೆ ಮತ್ತು ಇನ್ನು ಕೆಲವೇ ಕಲವು ದಿನಗಳಲ್ಲಿ ಕೆಲಸ ಸಿಗುವುದಂಬ ಆಶಾವಾದಿಯಾಗಿದ್ದೇನೆ. ಇವರಂತೆ ಸರ್ಕಾರದ ಎಂಜಿಲು ಕಾಸಿಗೆ ಆಸೆ ಪಡುತ್ತಿಲ್ಲ.
ಖಾಸಗಿ ಸಂಸ್ಥೆಯಲ್ಲಿ ದುಡಿಯುವವರಿಗೆ, ಸಂಬಳ ಸಾಲದೇ ಹೋದಲ್ಲಿ ಇರುವ ಕೆಲಸ ಬಿಟ್ಟು ಯಾರು ಹೆಚ್ಚಿನ ಸಂಬಳ ಕೊಡ್ತಾರೋ ಅಂತಹ ಕಡೆ ಬೇರೆ ಕೆಲಸ ಹುಡುಕಿಕೊಂಡು ಹೋಗುತ್ತಾರೆಯೇ ಹೊರತು ಈ ರೀತಿ ಬಂದ್ ಮಾಡುತ್ತಾ ಸಾರ್ವಜನಿಕರಿಗೆ ತೊಂದರೆ ಕೊಡುವುದಿಲ್ಲ. ಈ ಸಾರಿಗೆ ನಿಗಮಗಳೂ ಸಹಾ ಖಾಸಗೀ ಸಂಸ್ಥೆಗಳೇ ಹೊರತು ಸರ್ಕಾರೀ ಸಂಸ್ಥೆಯಲ್ಲ. ನಾನೂ ಸಹಾ ಖಾಸಗಿ ಕಂಪನಿಯ ಉದ್ಯೋಗಿ ಅವರು ಸಹಾ ಖಾಸಗಿ ಕಂಪನಿಯ ಉದ್ಯೋಗಿಗಳೇ? ನಮಗೊಂದು ನಿಯಮ ಅವರಿಗೊಂದು ನಿಯಮವೇಕೇ?
ಸರ್ಕಾರಿ ನೌಕರರಿಗೆ ಇಲ್ಲದಿರುವ ಹೆಚ್ಚುವರಿ ಸೌಲಭ್ಯಗಳಾಗಿ ಬೋನಸ್, ಉಚಿತ ಬಸ್ ಪಾಸ್, ವರ್ಷಕ್ಕೊಮ್ಮೆ ಕುಟುಂಬ ಸಮೇತ ಪ್ರಯಾಣಿಸಲು ಉಚಿತ ಪಾಸ್, ನೌಕರರ ಮಕ್ಕಳು ಶಾಲೆ, ಕಾಲೇಜುಗಳಿಗೆ ತೆರಳಲು ಉಚಿತ ಪಾಸ್, ಸಾರಿಗೆ ಆದಾಯದಲ್ಲಿ ಶೇ 3 ರಷ್ಟು ಪ್ರೋತ್ಸಾಹ ಧನ, ಮನೆ ಕಟ್ಟಲು, ಖರೀದಿಸಲು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಪಡೆಯುವ ₹5 ಲಕ್ಷ ಸಾಲಕ್ಕೆ ಶೇ 4 ರಷ್ಟು ಬಡ್ಡಿ ಸಹಾಯ ಧನ, ವಾರ್ಷಿಕ ಗರಿಷ್ಠ ₹20 ಸಾವಿರ ಬಡ್ಡಿ ಸಹಾಯಧನ ಮತ್ತು ಸೇವಾವಧಿಯಲ್ಲಿ ₹1 ಲಕ್ಷ ಬಡ್ಡಿ ಸಹಾಯಧನ ನೀಡಲಾಗುತ್ತಿದೆ.
ಇಷ್ಟೆಲ್ಲಾ ಸೌಲಭ್ಯಗಳನ್ನು ಕೊಟ್ಟಿದ್ದರೂ ಅದಕ್ಕಿಂತಲೂ ಹೆಚ್ಚಿನ ಸಂಬಳ ಕೇಳುವುದು ನಿಜಕ್ಕೂ ದುರಾಸೆಯಲ್ಲವೇ? ಅವರವರ ವಿದ್ಯಾರ್ಹತೆ ಮತ್ತು ಕೆಲಸಕ್ಕೆ ಅನುಗುಣವಾಗಿ ಸಂಬಳ ಕೊಡುತ್ತಾರೆಯೇ ಹೊರತು ಡ್ರೈವರ್ ಮತ್ತು ಕಂಡಕ್ಟರ್ ಗಳಿಗೆಲ್ಲಾ ಐವತ್ತು ಸಾವಿರ ಮತ್ತು ಲಕ್ಷ ರೂಪಾಯಿಗಳ ಸಂಬಳ ಕೊಡಲು ಹೇಗೆ ಸಾಧ್ಯ ಎನ್ನುವುದರ ಅರಿವಿಲ್ಲವೇ?
ತಮ್ಮ ರಾಜಕೀಯ ತೆವಲಿಗೆ ಸಾರಿಗೆ ನೌಕರರ ಜೀವನದಲ್ಲಿ ಚೆಲ್ಲಾಟ ಆಡುತ್ತಿರುವ ಗಂಜಿ ಗಿರಾಕಿಗೆ ಇದೆಲ್ಲಾ ಅರ್ಥವಾಗದೇ ಇರುವುದೇ ನಿಜವಾದ ಸಮಸ್ಯೆಯಾಗಿದೆ. ಇರುವುದರಲ್ಲಿ ಹಂಚಿಕೊಂಡು ತಿನ್ನಬೇಕೇ ಹೊರತು, ಯಾರು ಬೇಕಾದರೂ ಹಾಳಾಗಲೀ ನನಗೆ ಮಾತ್ರ ಸಿಂಹಪಾಲು ಇರಲಿ ಎನ್ನುವುದು ಉದ್ದಟತನದ ಪರಮಾವಧಿಯೇ ಅಲ್ಲವೇ?
ಏನಂತೀರೀ?
ನಿಮ್ಮವನೇ ಉಮಾಸುತ.
ಮಾನ್ಯ, ಶೀ್ರಕಂಠ ಬಾಳಗಂಜಿ ಸರ್. ಬಹಳ ಉತ್ತಮ ವಾಗಿ ಸಾರಿಗೆ ಸಂಸ್ಥೆ ಬಗ್ಗೆ ವಿವರಿಸಿದ್ದು 7 ನೇ ತರಗತಿ ಇಂದ 10ನೇ ತರಗತಿ ಸಹ ಉತ್ತೀರ್ಣ ರಾಗದ ವರೀಗದ ವರಿಗೆ ಕರೆದು ಕೆಅಸ ಕೊಟ್ಟರೆ ಕನ್ನಡದ ಗಾದೆ ನೆನಪಾಗುತ್ತದೆ ಕರೆದು ಹೆಣ್ಣು ಕೊಟ್ಟರೆ ಮಲ್ಲೊಗರು ಅನ್ನುವ ಹಾಗೆ ನನಗೆ ನೆನಪಾಗುತ್ತೀದೆ ರಾತಿ್ರ 10:30 Pm ಬಸ್ಸಿನಲ್ಲಿ ಮಡಕೇರಿ ಇಂದ ಹೊರಟು ಬೆಂಳರೂರಿಗೆ ಬಂದೆ ಆಸಮಯದಲ್ಲ್ಲಿ ಮಡಕೇರಿ TO ಬೆಂಗಳೂರಿಗೆ ಕೇವಲ Rs.200/Rupees two hundred only / ticket I purchased TWO tickets Rs.400 ನಾನುRs.1000/Rupees one thousand one note ಕೊಟ್ಟೆ ಕಂಡೆಕ್ಟರ್ ಟೆಕೆಟ್ ಹಿಂದೆ ಬಾಕಿ ಹಣ Rs.600 ಬರೆದು ಟಿಕೆಟ್ ಕೈಗೆ ಕೊಟ್ಟ ರೂ.600 ಕೊಡಿ ಅಂತ ಕೇಳಿದ್ದಕ್ಕೆ ಟಿಕೆಟ್ ಹಿಂಬಾಗದಲ್ಲಿ ಬರೆದಿದ್ದೀನಿ ಬೆಂಗಳೂರಿನಲ್ಲಿ ಕೊಡುತ್ತೇನೆ ಅಂತ ಸಬೂಬು ಹೇಳಿದ ಟೆಕೆಟ್ ಜೊಬಿಗೆ ಹಾಕಿಕ್ಕೂಂಡೆ ಬಸ್ಸು ಬೆಂಗಳೂರಿಗೆ ಬೆಳಗ್ಗೆ 5:45 Am ಗೆ ಬಂತು ಇಳಿದು ಸಿಟಿ ಬಸ್ಸು ಹತ್ತಿ ಮನೆಗೆ ಬಂದೆ ರಾತಿ್ರ ನಿದೆ್ರ ಮತ್ತಿನಲ್ಲಿ ರೂ.600 ಪಡದು ಕೊಳ್ಳಲಿಲ್ಲ ಇಲ್ಲಾ ಕಂಡೆಕ್ಟರ್ ಉದ್ದೀಶ್ಯ ಪೂರ್ವಕವಾಗಿ ಕೊಡಲಿಲ್ಲ ನನಗೆ ಮನಗೆ ಬಂದು ಮಲಗಿ 8:00 ಘಂಟೆ ವರವಿಗೆ ನಿದೆ್ರ ಮಾಡಿ ಸ್ನಾನ ಮಾಡಲು ಹೊಗುವಾಗ ಜೋಬು ಎಲ್ಲಾ ಪರೀಕ್ಷೀಸುವಾಗ ಆಗ ನೆನಪಾಯಿತು ಕಂಡೆಕ್ಟರ್ ಮೊಸ ಮಾಡಿರುವುದು ಹೀಗೆ ಎಸ್ಷು ಜನಗಳಿಗೆ ಮೊಸಮಾಡಿದ್ದಾನೂ ದೇವರಿಗೆ ಗೂತ್ತು ನಿಮ್ಮ ಕವನ ಬಹಳ ಚನ್ನಾಗಿದೆ ಹೀಗಾಗಿ ಸಾರಿಗೆ ಟ್ಯ್ ರನ್ನು, ಬಸ್ಸಿನ ಬಿಡಿಭಾಗ ಮತ್ತು ಬಸ್ನು ಕೊಳ್ಳುವಾಗ ಲಂಚ ಪಡೆಯುವುದ ರಿಂದ ಮಾತ್ತ್ರವೇ ನಷ್ಠ ಮಾಡುತ್ತಾರೆಬೇಲಿಏ ಎದ್ದು ಹೊಲ ಮೈದಂತೆ ಗಾದೆ
ನಿಮ್ಮವನೇಆದ
ರಾಮಚಂದ್ರ .ಜಿ.ಹೆಚ್.
LikeLiked by 1 person
ಎಲ್ಲಿಯವರೆಗೆ ಮೋಸ ಹೋಗುವವರು ಇರುತ್ತಾರೋ ಅಲ್ಲಿಯವರೆಗೆ ಮೋಸ ಮಾಡುವವರೂ ಇರುತ್ತಾರೆ
LikeLike
ಸಾರಿಗೆ ಸಂಸ್ಥೆಯ ನೌಕರರನ್ನು ಮುಷ್ಕರ ಮಾಡಿಸಿ ಸರ್ಕಾರಿ ಬಸ್ ಗಳು ರಸ್ತೆಗಿಳಿಯದಂತೆ ಮಾಡಿ ಖಾಸಗಿ ಬಸ್ಸುಗಳಿಗೆ ಹೆಚ್ಚಿನ ಆದಾಯ ಬರುವಂತೆ ಮಾಡಲು ಕೋಡಿಹಳ್ಳಿ ಚಂದ್ರಶೇಖರ್ ಏನಾದರು….? ಎಲ್ಲಾ ಸಾಧ್ಯತೆಗಳು ಇವೆ…
LikeLiked by 1 person
ಇದ್ರೂ ಇರಬಹುದು. ನಮ್ಮಲ್ಲಿ ಅಂತಹ ಮೀರ್ ಸಾದಿಕ್ ಗಳಿಗೇನೂ ಕಡಿಮೆ ಇಲ್ಲಾ.
LikeLike
Good detailed explanation of topic sir..
LikeLiked by 1 person
ಯಾರೋ ಕೋಡಂಗಿ ಮಾತನ್ನು ಕೇಳಿಕೊಂಡು ತಮ್ಮ ಹೊಟ್ಟೆಯ ಮೇಲೆ ತಣ್ಣೀರು ಹಾಕ್ಕೋಳ್ತಾ ಇದ್ದಾರೆ
LikeLike