ದೇವದುರ್ಲಭ ಕಾರ್ಯಕರ್ತರ ಮನದಾಳದ ಮಾತು

ಪ್ರಜಾಪ್ರಭುತ್ವದಲ್ಲಿ ಸೋಲು ಮತ್ತು ಗೆಲುವು ಸಹಜ. ಈ ಬಾರಿ ಬಿಪೆಪಿ ಪಕ್ಷ ಸೋತಿದೆಯೇ ಹೊರತು, ಖಂಡಿತವಾಗಿಯೂ ಸತ್ತಿಲ್ಲ. ಚುನಾವಣೆಯ ಸೋಲು ಮತ್ತು ಗೆಲುವು ಎನ್ನುವುದು ಗಡಿಯಾರದ ಎರಡು ಮುಳ್ಳಿನಂತೆ ಇದ್ದು ಅದು ಕಾಲ ಕಾಲಕ್ಕೆ ಅನುಗುಣವಾಗಿ ನಿಶ್ಚಿತವಾಗಿಯೂ ಮೇಲೆ ಕೆಳಗಾಗುವುದು ಈ ಜಗದ ನಿಯಮ.

ಈ ಬಾರಿಯ ಬಿಜೆಪಿಯ ಸೋಲನ್ನು ಹಲವರು ವಿವಿಧ ರೀತಿಯಲ್ಲಿ ವಿಶ್ಲೇಷಿಸಿದ್ದರೆ, ಒಬ್ಬ ಕಾರ್ಯಕರ್ತನಾಗಿ ನನ್ನ ವಿಮರ್ಶೆ ಇದೋ ನಿಮಗಾಗಿ… Read More ದೇವದುರ್ಲಭ ಕಾರ್ಯಕರ್ತರ ಮನದಾಳದ ಮಾತು

NOTA ಮತ್ತು ಮತದಾನಕ್ಕೆ ಗೈರುಹಾಜರಿ

ಚುನಾವಣಾ ಪ್ರಕ್ರಿಯೆಯಲ್ಲಿ ತಾಂತ್ರಿಕವಾಗಿ ನೋಟಾ ಎಂಬುದು ಸರಿ ಎನಿಸಿದರೂ, ತಾರ್ಕಿಕವಾಗಿ ನೋಟಾ ಎಂಬುದು ನಿರರ್ಥಕ ಪ್ರಯತ್ನವಾಗಿದೆ. ಮತದಾನ ಮಾಡದವರಿಗೂ ಮತ್ತು ನೋಟಾ ಒತ್ತುವವರಿಗೂ ಪ್ರಜಾಪ್ರಭುತ್ವದ ಕುಂದು ಕೊರತೆಗಳನ್ನು ಪ್ರಶ್ನಿಸುವ ನೈತಿಕ ಹಕ್ಕು ಇರುವುದಿಲ್ಲವಾದ ಕಾರಣ, ನಾವೆಲ್ಲರೂ ನಾಳೆಯ ಚುನಾವಣೆಯಲ್ಲಿ ನಮ್ಮ ತಾಳ್ಮೆಯಿಂದ ಜಾಣ್ಮೆಯಿಂದ ಸಮರ್ಥ ಅಭ್ಯರ್ಥಿಗೆ ಮತದಾನ ಮಾಡೋಣ ಅಲ್ವೇ?… Read More NOTA ಮತ್ತು ಮತದಾನಕ್ಕೆ ಗೈರುಹಾಜರಿ

ಮಹಿಳಾ ಕುಸ್ತಿ ಪಟುಗಳ ಪ್ರತಿಭಟನೆಯ ವಾಸ್ತವ ಸಂಗತಿ

2023ರ ಜನವರಿಯಲ್ಲಿ, ಭಾರತದ ಪರ ಮಹಿಳಾ ಕುಸ್ತಿಪಟುಗಳಾದ ಮತ್ತು ಓಲಂಪಿಕ್ ಪದಕ ವಿಜೇತರಾದ, ವಿನೇಶ್ ಫೋಗಟ್, ಸಾಕ್ಷಿ ಮಲಿಕ್, ಅಂಶು ಮಲಿಕ್, ಬಜರಂಗ್ ಪುನಿಯಾ ಸೇರಿದಂತೆ ಸುಮಾರು ಮೂವತ್ತು ಭಾರತೀಯ ಕುಸ್ತಿಪಟುಗಳು, ಉತ್ತರ ಪ್ರದೇಶದ ಕೈಸರ್‌ಗಂಜ್‌ನ ಬಿಜೆಪಿ ಸಂಸದ ಬಿಜೆಪಿ ಸಾಂಸದರಾದ ಮತ್ತು ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಮತ್ತು ಅದರ ತರಬೇತುದಾರರ ವಿರುದ್ಧ ಮಹಿಳಾ ಲೈಂಗಿಕ ಕಿರುಕುಳವನ್ನು ಆರೋಪಿಸಿ ಧರಣಿ ನಡೆಸಿದ್ದಲ್ಲದೇ ಈ ಕೂಡಲೇ ಕುಸ್ತಿ ಫೆಡರೇಶನ್ ಅನ್ನು… Read More ಮಹಿಳಾ ಕುಸ್ತಿ ಪಟುಗಳ ಪ್ರತಿಭಟನೆಯ ವಾಸ್ತವ ಸಂಗತಿ

ಸಿದ್ದು ನಿಮಗೆ ವಯಸ್ಸಾಯ್ತು.

ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲು ವಿಜಯನಗರ ಜಿಲ್ಲೆಗೆ ಹೋಗಿದ್ದ ಮಾಜೀ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೆಲಿಪ್ಯಾಡಿನಲ್ಲಿ ಕಾರನ್ನು ಹತ್ತುವಾಗ ದಿಢೀರ್ ಎಂದು ಕುಸಿದು ಬಿದ್ದು ಕೆಲ ಕಾಲ ಆಂತಕವನ್ನು ಮೂಡಿಸಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಎಲ್ಲಾ ಅಧಿಕಾರವನ್ನೂ ಸವಿದಿರುವ ಸಿದ್ದರಾಮಯ್ಯನವರ ದೇಹ ಈ ಘಟನೆಯ ಮುಖಾಂತರ ತನಗೆ ವಿಶ್ರಾಂತಿ ಅವಶ್ಯಕತೆ ಎಂದು ಸ್ಪಷ್ಟವಾಗಿ ತಿಳಿಸುತ್ತಿರುವುದನ್ನು ವರುಣಾ ಕ್ಷೇತ್ರದ ಜನರು ಅರ್ಥ ಮಾಡಿಕೊಳ್ತಾರೆ ಅಲ್ವೇ?
Read More ಸಿದ್ದು ನಿಮಗೆ ವಯಸ್ಸಾಯ್ತು.

ಪಕ್ಷ ಮತ್ತು ಸಿದ್ದಾಂತ ಅನ್ನೋದು ಅಧಿಕಾರದ ಮುಂದೆ ಪುಸ್ತಕದ ಬದನೇಕಾಯಿ

ಬಿಜೆಪಿ ಬಿಟ್ಟು ಹೊರಗೆ ಹೋಗುತ್ತಿರುವವರಲ್ಲಿ ಸವದಿ ಮತ್ತು ಶೆಟ್ಟರ್ ಮೊದಲೇನಲ್ಲಾ. ಈ ಮುಂಚೆ ಅನೇಕ ನಾಯಕರು ವಿವಿಧ ಕಾರಣಗಳಿಂದಾಗಿ ಬಿಜೆಪಿಯನ್ನು ಬಿಟ್ಟು ಹೊರಗೆ ಹೋಗಿ ತಮ್ಮದೇ ಪಕ್ಷವನ್ನು ಕಟ್ಟಿದರೇ ಹೊರತು ತಾವು ನಂಬಿದ್ದ ಸಿದ್ಧಾಂತದ ವಿರುದ್ಧವಾಗಿ ವಿರೋಧ ಪಕ್ಷಗಳು ಅದರಲ್ಲೂ ಕಾಂಗ್ರೇಸ್ ಪಕ್ಷವನ್ನು ಸೇರಿಕೊಂಡಿರಲಿಲ್ಲ.

ಇಂದು ಬಿಜಿಪಿಯ ಬಂಡಾಯದಲ್ಲಿ ತಮ್ಮ ರಾಜಕೀಯ ಬೇಳೆ ಬೆಳಸಿಕೊಳ್ಳಲು ನಿಮ್ಮಂತಹವರು ನಮ್ಮ ಪಕ್ಷಕ್ಕೆ ಸೇರಿಕೊಂಡಿದ್ದು ಆನೆಯ ಬಲ ಬಂದಂತೆ ಎಂದು ಹೇಳುವ ಕಾಂಗ್ರೇಸ್, ನಾಳೆ ಅಧಿಕಾರಕ್ಕೆ ಬಾರದೇ ಹೋದಾಗ ಇವರನ್ನು ಕಾಲ ಕಸದಂತೆ ಕಂಡಾಗ, ಭ್ರಮನಿರಸರಾಗುವುದು ನಿಶ್ಚಿತ.… Read More ಪಕ್ಷ ಮತ್ತು ಸಿದ್ದಾಂತ ಅನ್ನೋದು ಅಧಿಕಾರದ ಮುಂದೆ ಪುಸ್ತಕದ ಬದನೇಕಾಯಿ

ಪಕ್ಷನಿಷ್ಠೆ ಮತ್ತು ಸಿದ್ಧಾಂತ

ಪ್ರಜೆ ಮತ್ತು ಪಕ್ಷಗಳಿಂದ ತಾವು ಎನ್ನುವುದನ್ನು ಮರೆತು ತಮ್ಮಿಂದಲೇ ಪಕ್ಷ ಮತ್ತು ಪ್ರಜೆ ಎಂದು ಭಾವಿಸುವವರು ಖಂಡಿತವಾಗಿಯೂ ನಂಬಿಕೆಗೆ ಅರ್ಹರಲ್ಲ. ವ್ಯಕ್ತಿ ಮತ್ತು ಅಧಿಕಾರ ಎಂದಿಗೂ ಶಾಶ್ವತವಲ್ಲಾ. ಹಾಗಾಗಿ ಅಧಿಕಾರದಲ್ಲಿ ಕಡೆಯವರೆಗೂ ಇದ್ದು ಎಲ್ಲಾ ರೀತಿಯ ಅಧಿಕಾರವನ್ನೂ ಸವಿದು ನಂತರ ಮತ್ತೆ ಅಧಿಕಾರಕ್ಕೆ ಆರು ಕೊಟ್ಟರೆ ಅತ್ತೇ ಕಡೇ, ಮೂರು ಕೊಟ್ಟರೆ ಸೊಸೇ ಕಡೇ ಎಂಡು ಮತ್ತೊಂದು ಪಕ್ಷಕ್ಕೆ ಹಾರುವ ಪಕ್ಷಾಂತರಿಗಳನ್ನು ನಿಸ್ಸಂಕೋಚವಾಗಿ ಸೋಲಿಸುವ ಮೂಲಕ ಅವರ ತಪ್ಪನ್ನು ಅವರಿಗೆ ತಿಳಿಸುವ ಜವಾಬ್ಧಾರಿ ನಮ್ಮ ನಿಮ್ಮಿಲ್ಲರ ಮೇಲೆಯೇ ಇದೆ ಅಲ್ವೇ?… Read More ಪಕ್ಷನಿಷ್ಠೆ ಮತ್ತು ಸಿದ್ಧಾಂತ

ಸ್ವಘೋಷಿತ ದೊಣ್ಣೇ ನಾಯಕರು

ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅಭಿವ್ಯಕ್ತಿ ಸ್ವಾತ್ರಂತ್ಯ್ರವಿದ್ದು ಅವವರ ಇಚ್ಚೆಗೆ ಅನುಗುಣವಾಗಿ ಯಾರಿಗೆ ಬೇಕಾದಾದರೂ ಮತವನ್ನು ಚಲಾಯಿಸಬಹುದು ಮತ್ತು ಯಾರನ್ನು ಬೇಕಾದರೂ ಸಮರ್ಥನೆ ಮಾಡಿಕೊಳ್ಳಬಹುದು ಅಥವಾ ಪ್ರಚಾರ ಮಾಡಬಹುದು. ಅಂತಹ ಅಭಿಪ್ರಾಯಗಳನ್ನು ಪ್ರಶ್ನಿಸುವ, ವಿರೋಧಿಸುವ ಇಲ್ಲವೇ ತಾವು ಹೇಳಿದ್ದನ್ನೇ ಎಲ್ಲರೂ ಒಪ್ಪಿಕೊಳ್ಳಲೇ ಬೇಕು ಎಂದು ಒತ್ತಾಯಪಡಿಸುವ ಹಕ್ಕು ಯಾವುದೇ ದೊಣ್ಣೆ ನಾಯಕನಿಗೂ ಇಲ್ಲಾ ಅಲ್ವೇ? … Read More ಸ್ವಘೋಷಿತ ದೊಣ್ಣೇ ನಾಯಕರು

ಅಜಾತ ಶತ್ರು ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟಿ

ವಯಸ್ಸು 80+ ಎಲ್ಲಾ ರೀತಿಯ ರಾಜಕೀಯ ಅಧಿಕಾರವನ್ನೂ ಸವಿದ ನಂತರ, ಈಗ ಸ್ವತಂತ್ರವಾಗಿ ನಡೆಯಲಾಗದೇ, ಸ್ಪಷ್ಟವಾಗಿ ಮಾತನಾಡಲಾಗದೇ, ಡೈಪರ್ ಹಾಕಿಕೊಂಡು ವೀಲ್ ಛೇರ್ ಮೇಲೆ ಕುಳಿತು ಕೊಳ್ಳುವವರೆಲ್ಲಾ ಇನ್ನೂ ಅಧಿಕಾರದ ಆಸೆಯಿಂದಾಗಿ ಸಕ್ರೀಯ ಚುನಾವಣಾ ರಾಜಕಾರಣ ಮಾಡುತ್ತಾ, ತಮ್ಮ ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರನ್ನು ಅಧಿಕಾರಕ್ಕೆ ತರುವುದಕ್ಕೇ ಒದ್ದಾಡುತ್ತಿರುವವರಿಗೆ, ಐದು ಬಾರಿ ಜನಪ್ರಿಯ ಶಾಸಕರಾಗಿಯೂ ಮಂತ್ರಿಗಿರಿಗೆ ಲಾಭಿಯನ್ನು ನಡೆಸದೇ ತಮ್ಮ 72ನೇ ವಯಸ್ಸಿನಲ್ಲಿಯೇ ಸ್ವಯಂಪ್ರೇರಿತರಾಗಿ ಸಕ್ರೀಯ ಚುನಾವಣಾ ರಾಜಕೀಯದಿಂದ ನಿವೃತ್ತಿಯನ್ನು ಘೋಷಿಸಿರುವ ಅಜಾತ ಶತ್ರು ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ನಿರ್ಧಾರ ಮೇಲ್ಪಂಕ್ತಿ ಆಗಬೇಕು ಅಲ್ವೇ?… Read More ಅಜಾತ ಶತ್ರು ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟಿ

ಸ್ವಯಂಕೃತ ಅಪರಾಧ

https://enantheeri.com/2023/03/25/rahul_ghandhi/

ಉಗುರಿನಲ್ಲಿ ಚಿವುಟಿ ಹಾಕಬಹುದಾಗಿದ್ದದ್ದಕ್ಕೆ ಕೊಡಲಿಯನ್ನು ತೆಗೆದುಕೊಂಡರು ಎನ್ನುವಂತೆ, ರಾಹುಲ್ ಗಾಂಧಿ ತನ್ನ ಸಡಿಲ ನಾಲಿಕೆ, ಸ್ವಪ್ರತಿಷ್ಟೆ, ಅಹಂಮಿಕೆ ಮತ್ತು ಈ ಪ್ರಕರಣದ ಗಂಭೀರತೆ ಅರಿಯದೇ ಉಡಾಫೆ ತನದಿಂದ ಸ್ವಯಂ ಕೃತ ಅಪರಾಧವಾಗಿ ಮಾದಿದ್ದುಣ್ಣೋ ಮಹರಾಯ ಎನ್ನುವಂತೆ ಶಿಕ್ಷ ಅನುಭವಿಸಬೇಕಾಗಿದೆಯೇ ಹೊರತು ಬಿಜೆಪಿ, ಕೇಂದ್ರ ಸರ್ಕಾರ ಮೋದಿಯವರ ಮೇಲೆ ಹರಿ ಹಾಯುತ್ತಿರುವುದು ಹಾಸ್ಯಾಸ್ಪದವಾಗಿದೆ ಅಲ್ವೇ?… Read More ಸ್ವಯಂಕೃತ ಅಪರಾಧ