ಬೆಲಗೂರು ಬಿಂಧು ಮಾಧವ ಶರ್ಮ ಅವಧೂತರು

ನಮ್ಮ ಸನಾತನ ಧರ್ಮದಲ್ಲಿ ತಂದೆ, ತಾಯಿ, ಸೂರ್ಯ ಮತ್ತು ಚಂದ್ರರಂತಹ ಪ್ರತ್ಯಕ್ಷ ದೇವರುಗಳ ಹೊರತಾಗಿ ಶ್ರದ್ಧಾ ಭಕ್ತಿಗಳಿಂದ ಪೂಜಿಸುವುದೇ ಗುರು ಪರಂಪರೆ. ನಮ್ಮ ಸನಾತನ ಧರ್ಮದ ಮೂಲ ಅಡಗಿರುವುದೇ ಗುರು ಪರಂಪರೆಯಾಗಿದ್ದು ಈ ದೇಶದಲ್ಲಿ ಈಗಾಗಲೇ ಲಕ್ಷಾಂತರ ಗುರುಗಳು ಮತ್ತು ಅವಧೂತರುಗಳು ಬಂದು ಹೋಗಿದ್ದಾರೆ. ಅವಧೂತ ಎಂಬುದು ಸಂಸ್ಕೃತದಿಂದ ಬಂದ ಪದವಾಗಿದ್ದು, ಭಾರತೀಯ ಧರ್ಮಗಳಲ್ಲಿ ಅಹಂಕಾರ-ಪ್ರಜ್ಞೆ, ದ್ವಂದ್ವತೆ ಮತ್ತು ಸಾಮಾನ್ಯ ಲೌಕಿಕ ಕಾಳಜಿಗಳನ್ನು ಮೀರಿದ ಮತ್ತು ಪ್ರಮಾಣಿತ ಸಾಮಾಜಿಕ ಶಿಷ್ಟಾಚಾರವನ್ನು ಪರಿಗಣಿಸದೆ ವರ್ತಿಸುವ ಒಂದು ರೀತಿಯ ಅತೀಂದ್ರಿಯವಾದ… Read More ಬೆಲಗೂರು ಬಿಂಧು ಮಾಧವ ಶರ್ಮ ಅವಧೂತರು

ಹೆಣ್ಣು ರೂಪದ ಆಂಜನೇಯಸ್ವಾಮಿ

ನಮಗೆಲ್ಲಾ ಗೊತ್ತಿರುವಂತೆ ಪ್ರಭು ಶ್ರೀರಾಮನ ಭಂಟ ಹನುಮಂತ ಮಹಾನ್ ಪರಾಕ್ರಮಿ. ಆತನ ಪೌರುಷವನ್ನು ಮೆಚ್ಚಿ ಕೊಂಡಾಡವರೇ ಇಲ್ಲಾ. ಶಕ್ತಿ ಮತ್ತು ಸಾಹಸಗಳಿಗೆ ಹನುಮಂತನೇ ಸಾಟಿ.. ಹಾಗಾಗಿಯೇ ಅನಾದಿಕಾಲದಿಂದಲೂ ಪ್ರತೀ ಊರುಗಳ ಹೆಬ್ಬಾಗಿಲಿನಲ್ಲಿಯೇ ಆಂಜನೇಯಸ್ವಾಮಿಯ ಗುಡಿಗಳನ್ನು ಕಟ್ಟಿಸಿ ಅದರ ಅಕ್ಕ ಪಕ್ಕಗಳಲ್ಲಿಯೇ ಗರಡೀ ಮನೆಗಳು ಇರುವುದನ್ನು ಕಾಣಬಹುದಾಗಿದೆ. ಪ್ರತಿಯೊಬ್ಬ ಪೈಲ್ವಾನರೂ ಜೈ ಭಜರಂಗಬಲಿ ಎಂದು ಹನುಮಂತನನ್ನೇ ಪ್ರಾರ್ಥಿಸಿಯೇ ಅಖಾಡಕ್ಕೆ ಇಳಿಯುತ್ತಾರೆ. ಹಾಗಾಗಿ ಸಂಶಾಸ್ಪದವಿಲ್ಲದೇ ಹನುಮಂತ‌ ನಿಜವಾದ ಗಂಡಸು ಎನ್ನುವುದು ನಿರ್ವಿವಾದ. ಆದರೆ ಸ್ತ್ರೀ ರೂಪದಲ್ಲಿರುವ ಅಪರೂಪದ ಹನುಮಂತನ ದೇವಸ್ಥಾನವೊಂದು… Read More ಹೆಣ್ಣು ರೂಪದ ಆಂಜನೇಯಸ್ವಾಮಿ

ಕಣ್ಣೀರು ಸುರಿಸುವ ಅಂಜನೇಯ

ಸಾಮಾನ್ಯವಾಗಿ ಮನುಷ್ಯರು ಸಂತೋಷ ಮತ್ತು ದುಃಖವನ್ನು ವ್ಯಕ್ತ ಪಡಿಸುವ ಸಲುವಾಗಿ ಕಣ್ಣೀರು ಸುರಿಸುವುದು ಸಹಜ.ಪ್ರಕ್ರಿಯೆಯಾಗಿದೆ. ಬೆಂಗಳೂರಿನ ದೇವಸ್ಥಾನವೊಂದರ ಆಂಜನೇಯಸ್ವಾಮಿ ವರ್ಷಕ್ಕೊಮ್ಮೆ ಕಣ್ಣೀರು ಸುರಿಸುವ ಆಶ್ಚರ್ಯಕರವಾದ ಸಂಗತಿಯ ಬಗ್ಗೆ ತಿಳಿದು ಕೊಳ್ಳೋಣ. ಬಾಣಸವಾಡಿ ಬೆಂಗಳೂರಿನ ಈಶಾನ್ಯಕ್ಕೆ ನಗರದ ಕೇಂದ್ರದಿಂದ ಸುಮಾರು 6-8 ಕಿ.ಮೀ ದೂರದಲ್ಲಿದ್ದು ಈ ಹಿಂದೆ ಚಿಕ್ಕ ಬಾಣಸವಾಡಿ ಮತ್ತು ದೊಡ್ಡ ಬಾಣಸವಾಡಿ ಎಂಬ ಎರಡು ಗ್ರಾಮಗಳು ಇದ್ದವು. ಹೆಚ್ಚಾಗುತ್ತಿರುವ ನಗರೀಕರಣದಿಂದ ಈ ಎರಡೂ ಹಳ್ಳಿಗಳೂ ಕಣ್ಮರೆಯಾಗಿ ಕೇವಲ ದೊಡ್ಡ ಬಾಣಸವಾಡಿ ಎಂಬ ಸುಸಜ್ಜಿತವಾದ ಬಡಾವಣೆಯು ಇಂದು… Read More ಕಣ್ಣೀರು ಸುರಿಸುವ ಅಂಜನೇಯ

ಅರ್ಜುನ ಸರ್ಜಾ ಅವರ ಯೋಗಾಂಜನೇಯ ಸ್ವಾಮಿ ದೇವಸ್ಥಾನ

ಕನ್ನಡ ಚಲನಚಿತ್ರರಂಗದಲ್ಲಿ ಬಾಲ ಕಲಾವಿದನಾಗಿ ಪ್ರವೇಶಿಸಿ ಈಗ ಬಹುಭಾಷಾ ನಾಯಕ ನಟನಾಗಿರುವ ಖ್ಯಾತ ಖಳನಟ ಶಕ್ತಿ ಪ್ರಸಾದ್ ಅವರ ಮಗ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ಇಡೀ ಕುಟುಂಬವೇ ಆಂಜನೇಯ ಸ್ವಾಮಿಯ ಭಕ್ತರು ಎಂಬುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಸಿನಿಮಾಗಳಲ್ಲಿ ಮಾತ್ರವಲ್ಲದೆ ರಿಯಲ್ ಲೈಫ್ನಲ್ಲಿಯೂ ಪವನಪುತ್ರ ಹನುಮಂತನ ಬಗ್ಗೆ ಅಪಾರವಾದ ಭಕ್ತಿ ಹೊಂದಿದೆ ಈ ಕುಟುಂಬ. ಈಗಾಗಲೇ ತುಮಕೂರಿನ ಬಳಿಯಿರುವ ತಮ್ಮ ಹುಟ್ಟೂರಿನಲ್ಲಿ ದೇವಸ್ಥಾನವನ್ನು ಕಟ್ಟಿಸಿದ್ದ ಅರ್ಜುನ್ ಸರ್ಜಾ ಸದ್ಯದಲ್ಲಿ ಚೆನ್ನೈನಲ್ಲಿ ವಾಸವಾಗಿದ್ದಾರೆ. ಚೆನ್ನೈನ ವಿಮಾನ… Read More ಅರ್ಜುನ ಸರ್ಜಾ ಅವರ ಯೋಗಾಂಜನೇಯ ಸ್ವಾಮಿ ದೇವಸ್ಥಾನ

ಪ್ರಾರ್ಥನೆ

ಪ್ರಾರ್ಥನೆ ಎಂದರೆ ಏನು? ಎಂದು ಪ್ರಂಪಚದ ಯಾವುದೇ ಮೂಲೆಗೆ ಹೋಗಿ ಯಾವುದೇ ಧರ್ಮದ ಸಣ್ಣ ಮಗುವನ್ನೂ ಕೇಳಿದರೂ ಥಟ್ ಅಂತಾ ಹೇಳುವುದೇ, ಭಕ್ತಿಯಿಂದ ಎರಡೂ ಕಣ್ಗಳನ್ನು ಮುಚ್ಚಿಕೊಂಡು ಎರಡೂ ಕೈಗಳನ್ನು ನಮಸ್ಕಾರ ಸ್ಥಿತಿಯಲ್ಲಿಯೋ ಇಲ್ಲವೇ ಬೇಡುವ ಸ್ಥಿತಿಯಲ್ಲಿಯೋ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆ ಭಗವಂತನಲ್ಲಿ ಕೇಳಿಕೊಳ್ಳುವುದು ಎನ್ನುತ್ತಾರೆ. ಹೌದು ನಿಜ. ಆ ಮಕ್ಕಳು ಹೇಳಿದ್ದರಲ್ಲಿ ಸತ್ಯವಿದೆಯಾದರು ಅದೇ ಸಂಪೂರ್ಣ ಸತ್ಯವಲ್ಲ. ಪ್ರಾರ್ಥನೆ ಎನ್ನುವುದು ಕೇವಲ ಸ್ವಹಿತಾಸಕ್ತಿಗಾಗಿಯೋ ಇಲ್ಲವೇ ಮತ್ತೊಬ್ಬರ ಹಿತಾಸ್ತಕ್ತಿಗಾಗಿಯೋ ಭಗವಂತನಲ್ಲಿ ಬೇಡಿಕೊಳ್ಳುವುದರ ಹೊರತಾಗಿಯೂ ಇದೆ. ಹಾಗಾಗಿ… Read More ಪ್ರಾರ್ಥನೆ

ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನ, ರಾಗಿಗುಡ್ಡ

ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ಕೆಲದಿನಗಳ ಹಿಂದೆ ಜಯನಗರದ ಕುರಿತಾಗಿ ತಿಳಿದುಕೊಂಡಿದ್ದೆವು. ಇಂದು ಅದೇ ಜಯನಗರಕ್ಕೇ ಹೊಂದಿಕೊಂಡೇ ಇರುವಂವಹ ಜಗತ್ಪ್ರಸಿದ್ದವಾದ ರಾಗಿಗುಡ್ಡದ ಆಂಜನೇಯಸ್ವಾಮಿ ದೇವಾಲಯದ ಇತಿಹಾಸದ ಬಗ್ಗೆ ಇಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ.  ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. ರಾಗಿಗುಡ್ಡದ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಾಲಯದ ಇತಿಹಾಸವನ್ನು ಈ ವೀಡಿಯೂ ಮೂಲಕವೂ ತಿಳಿಯಬಹುದಾಗಿದೆ ಸಾಮಾನ್ಯವಾಗಿ ಪ್ರತಿಯೊಂದು ಹಳ್ಳಿ ಅಥವಾ ಊರಿಗೆ ಹೋದಾಗ ಆ ಊರಿನ ಮುಂಭಾಗದಲ್ಲೇ ಅಂಜನಿ ಪುತ್ರ ಆಂಜನೇಯ… Read More ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನ, ರಾಗಿಗುಡ್ಡ

ಉಲ್ಟೇ ಹನುಮಾನ್ ಮಂದಿರ್

ಭಕ್ತಿ ಅಂದ ತಕ್ಷಣ ನಮ್ಮ ಮನಸ್ಸಿಗೆ ಥಟ್ ಅಂತಾ ನೆನಪಿಗೆ ಬರುವುದೇ ರಾಮನ ಭಕ್ತಾಗ್ರೇಸರ ಅಂಜನೀ ಪುತ್ರ ಪವನಸುತ ಹನುಮಾನ್ ಎಂದರೆ ಅತಿಶಯೋಕ್ತಿಯೇನಲ್ಲ. ಸೀತಾಮಾತೆಯ ಅನ್ವೇಷಣೆಯ ಸಂದರ್ಭದಲ್ಲಿ ಸಮುದ್ರೋಲಂಘನವನ್ನು ಮಾಡಿ ಲಂಕೆಗೆ ಹೋಗಿ ಸೀತಾಮಾತೆಯನ್ನು ಹುಡುಕಿಕೊಂಡ ಬಂದ ಭಜರಂಗಬಲಿ ಇವನು. ಮಹಾನ್ ಪರಾಕ್ರಮಿಯಾದ ಕಾರಣಕ್ಕಾಗಿಯೇ, ಪ್ರಪಂಚಾದ್ಯಂತ ಹನುಮಂತನ ಬೃಹತ್ತಾದ ಪ್ರತಿಮೆಗಳನ್ನು ಎಲ್ಲೆಡೆಯಲ್ಲಿಯೂ ಕಾಣಬಹುದಾಗಿದೆ. ಶಕ್ತಿ, ಭಕ್ತಿ ಮತ್ತು ಬುದ್ಧಿವಂತಿಕೆಯ ಪ್ರತೀಕವೆಂದೇ ಪರಿಗಣಿಸಲ್ಪಟ್ಟ ಆಂಜನೇಯನ ನಿಂತಿರುವ ಇಲ್ಲವೇ ಸಂಜೀವಿನ ಪರ್ವತವನ್ನು ಹೊತ್ತಿರುವ ವಿಗ್ರಹವನ್ನು ಬಹುತೇಕ ಎಲ್ಲಾ ದೇವಾಲಯಗಳಲ್ಲಿಯೂ ಮತ್ತು… Read More ಉಲ್ಟೇ ಹನುಮಾನ್ ಮಂದಿರ್

ಹನುಮ ಜಯಂತಿ

ನಮ್ಮೆಲ್ಲರಿಗೂ ತಿಳಿದಿರುವಂತೆ ಶ್ರೀರಾಮ ಅಯೋಧ್ಯೆಯ ಮೂಲದವನು ಮತ್ತು ವನವಾಸದಲ್ಲಿದ್ದಾಗ ಕಳೆದು ಹೋದ ತನ್ನ ಪತ್ನಿಯನ್ನು ಹುಡುಕುತ್ತ ದಕ್ಶಿಣ ಭಾಗದಲ್ಲಿ ಬರುತ್ತಿದ್ದಾಗ ಅವನಿಗೆ ಈಗಿನ ವಿಜಯನಗರ ಸಾಮ್ರಾಜ್ಯದ ಹಂಪೆಯೆ ಹತ್ತಿರವಿರುವ ಆನೆಗುಂದಿ ಬಳಿಯ ಅಂಜನಾದ್ರಿ ಬೆಟ್ಟ ಪ್ರದೇಶದಲ್ಲಿ ಪರಿಚಯವಾಗಿ ಸೀತಾ ಮಾತೆಯನ್ನು ಹುಡುಕಲು ಸಹಕರಿಸಿ, ಲಂಕಾ ಧಹನ ಮಾಡಿ, ರಾಮ ರಾವಣರ ಯುಧ್ಧದಲ್ಲಿ ಪ್ರಮುಖ ಪಾತ್ರವಹಿಸಿ ಕಡೆಗೆ ರಾಮ ಸೀತೆಯರನ್ನು ತನ್ನ ಹೃದಯದಲ್ಲೇ ಪ್ರತಿಷ್ಠಾಪನೆಗೊಳಿಸಿ ಕೊಂಡವನು. ಇಂದು ಚೈತ್ರ ಮಾಸದ ಶುಕ್ಲ ಪಕ್ಷದ ಹುಣ್ಣಿಮೆ. ಇದೇ ದಿನ ರಾಮನ… Read More ಹನುಮ ಜಯಂತಿ

ಉಷ್ಟ್ರಾರೂಢಾ ಹನುಮಂತ

ವಾಯುಪುತ್ರ ಆಂಜನೇಯನಿಗೆ ಗಾಳಿಯಲ್ಲಿ ಸ್ವತಃ ತಾನೇ ನೂರಾರು ಯೋಜನಗಳಷ್ಟು ದೂರ ಹಾರುವ ಸಾಮರ್ಥ್ಯವನ್ನು ಹೊಂದಿದ್ದ ಮತ್ತು ಅದನ್ನು ಸೀತಾನ್ವೇಷಣೆಯ ಸಂಧರ್ಭದಲ್ಲಿ ಸಮುದ್ರ ಲಂಘನದ ಸಮಯದಲ್ಲಿ ನಿರೂಪಿಸಿಯೂ ಇದ್ದ ಆದರೂ, ಆಂಜನೇಯಯನ ಅನೇಕ ದೇವಾಲಯಗಳಲ್ಲಿ ಅಂಜನೇಯಯನ ವಿಗ್ರಹದ ಮುಂದೆ ಒಂಟೆಯನ್ನು ಇಟ್ಟಿರುತ್ತಾರಲ್ಲದೇ ಅವರನ್ನು ಉಷ್ಟ್ರಾರೂಡಾ ಎಂದೂ ಕರೆಯಲಾಗುತ್ತದೆ. ರಾಮಾಯಣ ಮತ್ತು ಪರಾಶರ ಸಂಹಿತೆಯಲ್ಲಿಯೂ ಹನುಮಂತ ಗಾಳಿಯ ವೇಗದಲ್ಲಿ ಹಾರಬಲ್ಲ ಎಂಬುವ ಅನೇಕ ಉದಾಹರಣೆಗಳನ್ನು ವಿವರಿಸುತ್ತಾರೆ ಮತ್ತು ಲಂಕೆಯನ್ನು ತಲುಪಲು ಸಾಗರದಾದ್ಯಂತ ಹಾರಾಟ, ಸಂಜೀವೀನಿಯನ್ನು ತರುವ ಸಲುವಾಗಿ ಲಂಕೆಯಿಂದ ಹಿಮಾಲಯಕ್ಕೆ… Read More ಉಷ್ಟ್ರಾರೂಢಾ ಹನುಮಂತ