ಐಎಡಿಎಂಕೆ ಜೊತೆ ಮೈತ್ರಿ ಆದರೆ ಬಿಜೆಪಿಗೆ ಅಣ್ಣಾಮಲೈ ಗುಡ್‌ಬೈ?

ಯಾವುದೇ ವಿದ್ಯಾರ್ಹತೆ ಇಲ್ಲದೇ, ಅಕ್ರಮ ಸಂಪಾದನೆಯ ಹಣದಿಂದಲೋ, ಕುಟುಂಬ ರಾಜಕಾರಣದಿಂದಲೋ ರಾಜಕೀಯಕ್ಕೆ ಬಂದು ಅಕ್ರಮವಾಗಿ ಅಸ್ತಿ ಸಂಪಾದನೆ ಮಾಡುವವರ ನಡುವೆ ವಿದ್ಯಾವಂತರಾಗಿ, ಐಪಿಎಸ್ ಅಧಿಕಾರಿಗಳಾಗಿದ್ದಂತಹವರು, ದೇಶದ ಹಿತದೃಷ್ಟಿಯಿಂದ ಶುದ್ಧವಾದ ರಾಜಕೀಯ ಮಾಡಲು ಬಂದಿರುವಂತಹ, ಪ್ರಾಮಾಣಿಕ ಮತ್ತು ದೂರದರ್ಶಿತ್ವ ಹೊಂದಿರುವಂತಹ ನಾಯಕರುಗಳ ಕೈ ಬಲ ಪಡಿಸುವುದು ಪ್ರತಿಯೊಬ್ಬ ಜವಾಬ್ಧಾರೀ ನಾಗರೀಕರ ಆದ್ಯ ಕರ್ತವ್ಯವೇ ಆಗಿದೆ ಅಲ್ವೇ?
Read More ಐಎಡಿಎಂಕೆ ಜೊತೆ ಮೈತ್ರಿ ಆದರೆ ಬಿಜೆಪಿಗೆ ಅಣ್ಣಾಮಲೈ ಗುಡ್‌ಬೈ?

ಬೇಲಿಯೇ ಎದ್ದು ಹೊಲ ಮೇಯ್ದರೆ? ರಕ್ಷಕರೇ ಭಕ್ಷಕರಾದರೆ? ಕಾಯುವವರು ಯಾರು?

ದೇಶದ ಗಡಿಯಲ್ಲಿ ಶತ್ರುಗಳ ನುಸುಳುವಿಕೆಯನ್ನು ತಡೆಯುವ ಸಲುವಾಗಿ ಹೇಗೆ ಸೈನ್ಯವಿರುತ್ತದೆಯೋ ಹಾಗೆಯೇ ದೇಶದ ಆಂತರಿಕ ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಆರಕ್ಷಕರು ಇರುತ್ತಾರೆ. ಸ್ಥಳೀಯವಾಗಿ ನಡೆಯುವ ಸಾವಿರಾರು ಪ್ರಕರಣಗಳನ್ನು ಬೇಧಿಸಿ ಅಪರಾಧಿಗಳನ್ನು ಹಿಡಿದು ಅವರನ್ನು ನ್ಯಾಯಾಲಯಕ್ಕೆ ಒಪ್ಪಿಸಿ ತನಿಖೆ ನಡೆಯುವಾಗ ಅ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತವಾದ ಸಾಕ್ಷಿಗಳನ್ನು ಒದಗಿಸಿ ಅಪರಾಧಿಗೆ ಶಿಕ್ಷೆಯಾಗುವಂತೆ ಮಾಡುವುದರಲ್ಲಿ ಪೋಲಿಸರ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಅದೆಷ್ಟೋ ಪ್ರಕರಣಗಳನ್ನು ನ್ಯಾಯಾಲಯದವರೆಗೂ ಬಾರದಂತೆ ಸ್ಥಳೀಯವಾಗಿಯೇ ಪೋಲಿಸರು ಬಗೆಹರಿಸುವ ಕಾರಣ ನಮ್ಮ ಸಮಾಜದಲ್ಲಿ ಪೋಲಿಸರಿಗೆ… Read More ಬೇಲಿಯೇ ಎದ್ದು ಹೊಲ ಮೇಯ್ದರೆ? ರಕ್ಷಕರೇ ಭಕ್ಷಕರಾದರೆ? ಕಾಯುವವರು ಯಾರು?

ಲಂಚದಲ್ಲೂ ಡಿಜಟಲೀಕರಣ

ಮೊನ್ನೆ ಇನ್ನೂ, ಮಂಗಳೂರು ಟ್ರಾಫಿಕ್ ಪೋಲಿಸರ ಬಗ್ಗೆ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ, ಇದಕ್ಕೆ ಪೂರಕವಾದ ಬೆಂಗಳೂರಿನ ಯಲಹಂಕದ ಬಳಿಯ ಮತ್ತೊಂದು ಪ್ರಸಂಗಕ್ಕೆ ನೆನ್ನೆ ನಾನೇ ಸಾಕ್ಷಿಯಾಗಬೇಕಾಗಿದ್ದು ನಿಜಕ್ಕೂ ಅಸಹ್ಯಕರ ಎನಿಸಿತು. ಹಾಗಾಗಿ ಮಂಗಳೂರಿನ ಪ್ರಕರಣವನ್ನು ಯಥಾವತ್ ಹಾಗೆಯೇ ಪ್ರಕಟಿಸಿ ನಂತರ ನನಗಾದ ಅನುಭವವನ್ನು ಹಂಚಿಕೊಳ್ಳುತ್ತಿದ್ದೇನೆ. ಮಂಗಳೂರಿನ ಪ್ರಕರಣ ಇಂದು ಸ್ಟೇಟ್ ಬ್ಯಾಂಕ್ ನಲ್ಲಿ ನಾವು ರಾಂಗ್ ಸೈಡಲ್ಲಿ (one way) ಕಾರು ಚಲಾಯಿಸಿದ್ದಕ್ಕೆ ಈ ಪೋಲಿಸ್ ಅಡ್ಡಗಟ್ಟಿ ಫೈನ್ ಕಟ್ಟಲು ಹೇಳಿದ್ರು, ರಶೀದಿ ಬೇಕಾ? ಬೆಡ್ವಾ?… Read More ಲಂಚದಲ್ಲೂ ಡಿಜಟಲೀಕರಣ

ಬಿಟಿಎಸ್ ಫುಟ್ ಬೋರ್ಡ್ ಅನುಭವ

ಎಂಭತ್ತರ ದಶಕ ಹದಿಹರೆಯದ ವಯಸ್ಸು. ಆಗ ತಾನೆ ಹೈಸ್ಕೂಲ್ ಮುಗಿಸಿ ಕಾಲೇಜಿಗೆ ಸೇರಿಕೊಂಡಿದ್ದೆ. ಕಾಲೇಜಿಗೆ ಶಾಲೆಯ ತರಹ ಒಂದು ಮಣಭಾರದ ಪುಸ್ತಕಗಳನ್ನು ಹೊತ್ತುಕೊಂಡು ಹೊಗಬೇಕಿರಲಿಲ್ಲ. ಕೇವಲ ನಾಲ್ಕಾರು ಪುಸ್ತಕಗಳನ್ನು ಒಂದು ಚೆಂದನೆಯ ಚೀಲದಲ್ಲಿ ಹಾಕಿಕೊಂಡು ಬಣ್ಣ ಬಣ್ಣದ ಪ್ಯಾಂಟ್ ಶರ್ಟು ಹಾಕಿಕೊಂಡು ಕಾಲೇಜಿಗೆ ಹೋಗುವುದೆಂದರೆ ಎನೋ ಒಂದು ತರಹ ಹಿತಾನುಭವ. ನಾವು ಇದ್ದಿದ್ದು ಬಿಇಎಲ್ ಬಳಿ ಕಾಲೇಜ್ ಇದ್ದದ್ದು ಆರ್. ಟಿ ನಗರ. ನಮ್ಮ ಕಡೆಯಿಂದ ನೇರ ಬಸ್ ಸಂಪರ್ಕ ಇಲ್ಲದಿದ್ದ ಕಾರಣ ಕನಿಷ್ಠ ಪಕ್ಷ ಎರಡು… Read More ಬಿಟಿಎಸ್ ಫುಟ್ ಬೋರ್ಡ್ ಅನುಭವ

ಪೋಲಿಸರ ಬಿಸಿ ಬಿಸಿ ಕಜ್ಜಾಯ

ಕೊರೋನಾ ಮಹಾಮಾರಿಯ ಸಲುವಾಗಿ ದೇಶಾದ್ಯಂತ ಏನೂ, ಇಡೀ ಪ್ರಪಂಚಾದ್ಯಂತ ಎಲ್ಲಾ ದೇಶಗಳೂ ಲಾಕ್ ಡೌನ್ ಮಾಡಿಕೊಂಡು ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿಯೇ ಇರುವಂತೆ ಮುಖ್ಯಮಂತ್ರಿಗಳು, ಪ್ರಧಾನಮಂತ್ರಿಗಳು, ಎಲ್ಲಾ ಧರ್ಮಗುರುಗಳಾದಿಯಾಗಿ ಪರಿ ಪರಿಯಾಗಿ ಕೇಳಿಕೊಂಡರೂ, ಇನ್ನೂ ಕೆಲವು ಪುಂಡ ಪೋಕರಿಗಳು ರಸ್ತೆಯಲ್ಲಿ ಅಂಡಲೆಯುತ್ತಿರುವವರಿಗೆ ಪೋಲೀಸರು ತಮ್ಮ ಬೆತ್ತದಿಂದ ಬಿಸಿ ಬಿಸಿಯಾದ ಕಜ್ಜಾಯ ಉಣಿಸುತ್ತಿರುವ ವೀಡೀಯೋ ಅಥವಾ ಪೋಟೋಗಳನ್ನು ನೋಡುತ್ತಿರುವಾಗ ಅಥವಾ ಓದುತ್ತಿರುವಾಗ ಸುಮಾರು ವರ್ಷಗಳ ಹಿಂದೆ ನಮ್ಮ ಗೆಳೆಯರ ಗುಂಪೊಂದಕ್ಕೆ ಇದೇ ರೀತಿಯಾಗಿ ಪೋಲೀಸರು ಕೊಟ್ಟಿದ್ದ ರಸವತ್ತಾದ ಕಜ್ಜಾಯದ… Read More ಪೋಲಿಸರ ಬಿಸಿ ಬಿಸಿ ಕಜ್ಜಾಯ

ಪೋಲೀಸರೊಂದಿಗೆ ಪಜೀತಿಯ ಪ್ರಸಂಗಗಳು

ಮೊನ್ನೆ ಹೋಳಿ ಹಬ್ಬದ ಸಂದರ್ಭದಲ್ಲಿ ನಮ್ಮ ಆತ್ಮೀಯ ಗೆಳೆಯರಾದ ಸಹಕಾರ ನಗರದ ಐಯ್ಯಂಗಾರ್ ಆಹಾರದ ಶ್ರೀ ವಿಜಯ್ ಹೆರಗು ಅವರು ಹೋಳಿ ಹಬ್ಬದ ಸಮಯದಲ್ಲಿ ತಮ್ಮದ್ದಲ್ಲದ ತಪ್ಪಿಗಾಗಿ ಪೋಲೀಸರ ಕೈಗೆ ಸಿಕ್ಕಿಕೊಂಡು ಪರದಾಡಿದ ತಮ್ಮ ಬಾಲ್ಯದ ಪಜೀತಿಯ ಪ್ರಸಂಗವನ್ನು ಸುಂದರವಾಗಿ ಮುಖಪುಟದಲ್ಲಿ ಬರೆದಿದ್ದರು. ಅದನ್ನು ಓದುತ್ತಿದ್ದಾಗ ಪೋಲೀಸರೊಂದಿಗೆ ವಯಕ್ತಿಕವಾಗಿ ಮತ್ತು ನಮ್ಮ ಗೆಳೆಯರಿಗಾದ ಕೆಲ ಮೋಜಿನ ಸಂಗತಿಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಮನಸ್ಸಾಯಿತು. ಪೋಲೀಸರೆಂದರೆ ನನಗೆ ಒಂದು ರೀತಿಯ ಪೂಜ್ಯ ಭಾವ. ಅವಿನಾಭಾವ ಸಂಬಂಧ. ಹಗಲಿರಳು ಎನ್ನದಂತೆ ಸದಾಕಾಲವೂ… Read More ಪೋಲೀಸರೊಂದಿಗೆ ಪಜೀತಿಯ ಪ್ರಸಂಗಗಳು