ವಿಶ್ವಗುರು ಚಾರಿಟೆಬಲ್ ಟ್ರಸ್ಟ್ ಮಹಿಳಾ ದಿನಾಚರಣೆ – 2023

ವಿದ್ಯಾರಣ್ಯಪುರದ ವಿಶ್ವಗುರು ಚಾರಿಟೆಬಲ್ ಅವರು 12.03.23 ರಂದು ದೊಡ್ಡಬೆಟ್ಟಹಳ್ಳಿಯ ಶ್ರೀ ಆನಂದ ಕುಟೀರ ಸೇವಾ ಟ್ರಸ್ಟ್ ಬಡ ಮಕ್ಕಳ ಆಶ್ರಮದಲ್ಲಿ ವಿವಿಧ ಶ್ರೀಣಿಯಲ್ಲಿ ಸಾಧನೆ ಮಾಡಿರುವ ಮಹಿಳಾ ಸಾಧಕಿಯರನ್ನು ಮತ್ತು ಆನಂದ ಕುಟೀರದ ಸಂಸ್ಥಾಪಕರನ್ನು ಸನ್ಮಾನಿಸುವುದರ ಜೊತೆಗೆ ಅಲ್ಲಿನ ಮಕ್ಕಳಿಗೆ ಪುಸ್ತಕಗಳು ಮತ್ತು ಆಶ್ರಮಕ್ಕೆ ಅವಶ್ಯಕವಿದ್ದ ದಿನಸಿಗಳನ್ನು ನೀಡುವ ಮೂಲಕ ಆರ್ಥಪೂರ್ಣವಾಗಿ ಆಚರಿಸಿದ ಅಂತರಾಷ್ಟ್ರೀಯಯ ಮಹಿಳಾ ದಿನಾಚರಣೆಯ ಸಣ್ಣ ಝಲಕ್ ಇದೋ ನಿಮಗಾಗಿ.… Read More ವಿಶ್ವಗುರು ಚಾರಿಟೆಬಲ್ ಟ್ರಸ್ಟ್ ಮಹಿಳಾ ದಿನಾಚರಣೆ – 2023

ವಿದ್ಯಾರಣ್ಯಪುರದ 2022ರ ಯೋಗ ದಿನಾಚರಣೆ

ಎಂಟು ವರ್ಷಗಳ ಹಿಂದೆ 2014ರಲ್ಲಿ ನಮ್ಮ ಹೆಮ್ಮೆಯ ಪ್ರಧಾನಿಗಳು ವಿಶ್ವಸಂಸ್ಥೆಯಲ್ಲಿ ಯೋಗದ ಈ ಯೋಗದ ಉಪಯುಕ್ತತೆಯನ್ನು ತಿಳಿಸಿ, ಅದರ ಸದುಪಯೋಗವನ್ನು ಇಡೀ ವಿಶ್ವವೇ ಸದ್ಬಳಿಕೆ ಮಾಡಿಕೊಳ್ಳುವ ಹಾಗೆ ಕಾರ್ಯಕ್ರಮವನ್ನು ರೂಪಿಸುವ ಬಗ್ಗೆ ಪ್ರಸ್ತಾಪನೆ ಮಾಡಿದಕ್ಕೆ ಸುಮಾರು 140ಕ್ಕೂ ಹೆಚ್ಚು ರಾಷ್ಟ್ರಗಳೂ ಒಕ್ಕೊರಿಲಿನಿಂದ ಬೆಂಬಲಿಸಿದ ಪರಿಣಾಮವಾಗಿಯೇ ಪ್ರತೀ ವರ್ಷ ಜೂನ್ 21ರಂದು ವಿಶ್ವ ಯೋಗದಿನಾಚರಣೆಯನ್ನು ಆಚರಿಸಲು ನಿರ್ಧರಿಸಲಾಯಿತು. ಇದರ ಭಾಗವಾಗಿಯೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಸಮಿತಿ ಬೆಂಗಳೂರು ಆಶ್ರಯದಲ್ಲಿ ವಿದ್ಯಾರಣ್ಯಪುರದಲ್ಲೂ ಸತತವಾಗಿ 5 ವರ್ಷಗಳ ಕಾಲ ನಿರಂತರವಾಗಿ ಬಹಳ… Read More ವಿದ್ಯಾರಣ್ಯಪುರದ 2022ರ ಯೋಗ ದಿನಾಚರಣೆ

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಿಗೆ ಪ್ರಾಣಿಗಳನ್ನು ಬಳಸಿಕೊಳ್ಳುವುದು ಕ್ರೌರ್ಯವೇ?

ದಸರಾ ಎಂದು ನೆನಸಿಕೊಂಡಾಕ್ಷಣ ನಮ್ಮ ಕಣ್ಣ ಮುಂದೆ ಬರುವುದೇ ಆನೆಯ ಅಂಬಾರಿ. ಆನೆಗಳ ಹಿಂಡಿನ ಮಧ್ಯೆ ಬಲರಾಮನ ಮೇಲೆ ತಾಯಿ ಚಾಮುಂಡೇಶ್ವರಿ ತಾಯಿಯನ್ನು ಮೆರವಣಿಗೆ ಮಾಡುವುದನ್ನು ವೀಕ್ಷಿಸಲು ದೇಶ ವಿದೇಶಗಳಿಂದಳೂ ಲಕ್ಷಾಂತರ ಪ್ರವಾಸಿಗರು ಬರುವುದಲ್ಲದೇ ಆ ಹೆಮ್ಮೆಯ ಕ್ಷಣಗಳನ್ನು ಕಣ್ತುಂಬಿಸಿಕೊಳ್ಳುತ್ತಾರೆ. ಇನ್ನು ಕೇರಳದ ಬಹುತೇಕ ಹಿಂದೂ ದೇವಾಲಯಗಳಲ್ಲಿಯೂ ಆನೆಗಳೇ ಪ್ರಮುಖ ಆಕರ್ಷಣೆ. ಅಲ್ಲಂತೂ ಹತ್ತಾರು ಆನೆಗಳನ್ನು ಚೆನ್ನಾಗಿ ಅಲಂಕರಿಸುವುದನ್ನು ನೋಡುವುದಕ್ಕೆ ಎರಡು ಕಣ್ಣುಗಳು ಸಾಲವು. ದೇಶದಲ್ಲಿ ಎಲ್ಲಶ ಆಗಲೀ ಸ್ವಾಮೀ ಐಯ್ಯಪ್ಪನ ಮೆರವಣೆಗೆ ನಡೆಯುವುದೇ ಆನೆಯ ಮೇಲೆಯೆ.… Read More ಹಿಂದೂ ಧಾರ್ಮಿಕ ಕಾರ್ಯಕ್ರಮಗಳಿಗೆ ಪ್ರಾಣಿಗಳನ್ನು ಬಳಸಿಕೊಳ್ಳುವುದು ಕ್ರೌರ್ಯವೇ?

ಹನುಮ ಜಯಂತಿ

ನಮ್ಮೆಲ್ಲರಿಗೂ ತಿಳಿದಿರುವಂತೆ ಶ್ರೀರಾಮ ಅಯೋಧ್ಯೆಯ ಮೂಲದವನು ಮತ್ತು ವನವಾಸದಲ್ಲಿದ್ದಾಗ ಕಳೆದು ಹೋದ ತನ್ನ ಪತ್ನಿಯನ್ನು ಹುಡುಕುತ್ತ ದಕ್ಶಿಣ ಭಾಗದಲ್ಲಿ ಬರುತ್ತಿದ್ದಾಗ ಅವನಿಗೆ ಈಗಿನ ವಿಜಯನಗರ ಸಾಮ್ರಾಜ್ಯದ ಹಂಪೆಯೆ ಹತ್ತಿರವಿರುವ ಆನೆಗುಂದಿ ಬಳಿಯ ಅಂಜನಾದ್ರಿ ಬೆಟ್ಟ ಪ್ರದೇಶದಲ್ಲಿ ಪರಿಚಯವಾಗಿ ಸೀತಾ ಮಾತೆಯನ್ನು ಹುಡುಕಲು ಸಹಕರಿಸಿ, ಲಂಕಾ ಧಹನ ಮಾಡಿ, ರಾಮ ರಾವಣರ ಯುಧ್ಧದಲ್ಲಿ ಪ್ರಮುಖ ಪಾತ್ರವಹಿಸಿ ಕಡೆಗೆ ರಾಮ ಸೀತೆಯರನ್ನು ತನ್ನ ಹೃದಯದಲ್ಲೇ ಪ್ರತಿಷ್ಠಾಪನೆಗೊಳಿಸಿ ಕೊಂಡವನು. ಇಂದು ಚೈತ್ರ ಮಾಸದ ಶುಕ್ಲ ಪಕ್ಷದ ಹುಣ್ಣಿಮೆ. ಇದೇ ದಿನ ರಾಮನ… Read More ಹನುಮ ಜಯಂತಿ

ಜನರಲ್ ಕೆ. ಎಸ್ ತಿಮ್ಮಯ್ಯ ಅವರ ಜನ್ಮದಿನಾಚರಣೆ

ಭಾರತೀಯ ಸೇನೆಗೂ ನಮ್ಮ ಕರ್ನಾಟಕದ ಕೊಡಗಿಗೂ ಒಂದು ರೀತಿಯ ಅವಿನಾಭಾವ ಸಂಬಂಧ. ಇಂದಿಗೂ ಸಹಾ ಕೊಡಗಿನ ಬಹುತೇಕ ಕುಟುಂಬದ ಒಬ್ಬ ಸದಸ್ಯನಾದರೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುತ್ತಾರೆ. ಸ್ವಾತಂತ್ರ್ಯ ಭಾರತದ ಪ್ರಥಮ ದಂಡನಾಯಕರಾಗಿದ್ದ ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರೂ ಕೊಡಗಿನವರೇ. ಅವರಂತೆಯೇ ಭಾರತದ ಭೂಸೇನೆಯ ದಂಡನಾಯಕರಾಗಿದ್ದ, ಅಪ್ಪಟ ಕನ್ನಡಿಗ ಜನರಲ್  ಕೊಡಂದೆರ ಸುಬ್ಬಯ್ಯ ತಿಮ್ಮಯ್ಯನವರು ಅರ್ಥಾತ್ ಕೆ. ಎಸ್ ತಿಮ್ಮಯ್ಯನವರು 30 ಮಾರ್ಚ್ 1906ರಲ್ಲಿ ಕೊಡಗಿನ ಮಡಿಕೇರಿಯ ಆಗರ್ಭ ಶ್ರೀಮಂತ ಪ್ಲಾಂಟರ್ ಆಗಿದ್ದ ತಿಮ್ಮಯ್ಯ ಮತ್ತು  ಸೀತವ್ವ ದಂಪತಿಗಳ… Read More ಜನರಲ್ ಕೆ. ಎಸ್ ತಿಮ್ಮಯ್ಯ ಅವರ ಜನ್ಮದಿನಾಚರಣೆ

ಶ್ರೀ ಸನಾತನ ವೇದಪಾಠ ಶಾಲೆಯ ಅವಿಸ್ಮರಣೀಯ ಮಹಾ ರುದ್ರಯಾಗ

ವೇ.ಬ್ರ.ಶ್ರೀ. ಹರೀಶ್ ಶರ್ಮಾರವರ ನೇತೃತ್ವದಲ್ಲಿ ಶ್ರೀ ಸನಾತನ ವೇದಪಾಠ ಶಾಲೆ ಕಳೆದ ನಾಲ್ಕು ವರ್ಷಗಳಿಂದಲೂ ಬೆಂಗಳೂರಿನ ವಿದ್ಯಾರಣ್ಯಪುರದ ಸುತ್ತಮುತ್ತಲಿನ ಆಸ್ತಿಕ ಬಂಧುಗಳಿಗೆ ಹೆಂಗಸರು ಮತ್ತು ಗಂಡಸರು ಎಂಬ ಬೇಧ ಭಾವವಿಲ್ಲದೇ, ವೇದ ಮಂತ್ರಗಳು, ದೇವಾತಾರ್ಚನೆ, ನಿತ್ಯಪೂಜೆ ಮತ್ತು ವೇದ ಮಂತ್ರಗಳನ್ನು ವಿದ್ಯಾರಣ್ಯಪುರದ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಕಲಿಸುಕೊಡುತ್ತಿದ್ದಾರೆ. ತನ್ಮೂಲಕ ಆಬಾಲಾವೃದ್ಧರಾದಿಗಾಗಿ ನೂರಾರು ವಿದ್ಯಾರ್ಥಿಗಳು ಸಂಧ್ಯಾವಂದನೆ ಮಂತ್ರಗಳು, ರುದ್ರ, ಚಮಕ, ಎಲ್ಲಾ ದೇವಾನು ದೇವತೆಗಳ ಸೂಕ್ತವನ್ನು ಕಲಿತುಕೊಂಡು ಸನಾತನ ಧರ್ಮಾಧಾರಿತವಾಗಿ ಪೂಜೆ ಪುನಸ್ಕಾರಗಳನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. 2020-21ರಲ್ಲಿ… Read More ಶ್ರೀ ಸನಾತನ ವೇದಪಾಠ ಶಾಲೆಯ ಅವಿಸ್ಮರಣೀಯ ಮಹಾ ರುದ್ರಯಾಗ

ಶ್ರೀ ಕಾಳಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದ ಕರಗ ಮಹೋತ್ಸವ

ಬೆಂಗಳೂರಿನ ಆಸುಪಾಸಿನಲ್ಲಿ ಶತಶತಮಾನಗಳಿಂದಲೂ ಪ್ರಮುಖ ದೇವಾಲಯಗಳಲ್ಲಿ ಅದರಲ್ಲೂ ವಿಶೇಷವಾಗಿ ದೇವಿಯ ದೇವಸ್ಥಾನಗಳಲ್ಲಿ ಕರಗ ಮಹೋತ್ಸವವನ್ನು ಅದ್ದೂರಿಯಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಈ ಕರಗಕ್ಕೇ ತನ್ನದೇ ಆದ ವೈಶಿಷ್ಟ್ಯವಿದೆ. ಆದಿಶಕ್ತಿಯನ್ನು ಗುರುತಿಸಿ ಆರಾಧಿಸುವ ಹಲವಾರು ಸಂಪ್ರದಾಯಗಳಲ್ಲಿ ಕರಗ ಮಹೋತ್ಸವವೂ ಒಂದು. ಕರಗ(ಕರಕ) ಎಂಬ ಮಾತಿಗೆ ಕುಂಭ ಎಂಬ ಅರ್ಥವೂ ಇದೆ. ಕರಗದ ಒಂದೊಂದು ಅಕ್ಷರವೂ ಒಂದೊಂದು ಸಂಕೇತವನ್ನು ಹೊಂದಿವೆ ಎನ್ನುವ ಪ್ರತೀತಿ ಇದೆ. ಕ-ಕೈಯಿಂದ ಮುಟ್ಟದೆ, ರ-ರುಂಡದ ಮೇಲೆ ಧರಿಸಿ, ಗ-ಗತಿಸುವುದು (ತಿರುಗುವುದು) ಎಂಬ ಅರ್ಥ ವಿವರಣೆ ಬಳಕೆಯಲ್ಲಿದೆ. ಕರಗ ಪೂಜೆ… Read More ಶ್ರೀ ಕಾಳಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದ ಕರಗ ಮಹೋತ್ಸವ

73ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ

ಈ ಬಾರಿಯ ಆಗಶ್ಟ್ 15, 2019 ಒಂದು ರೀತಿಯ ಅಪರೂಪದ ದಿನ. ನಾಡಿಗೆ 73ನೇ  ಸ್ವಾತಂತ್ರ್ಯ ದಿನಾಚರಣೆ, ಕೆಚ್ಚದೆಯ ಸೇನಾನಿ ಸಂಗೊಳ್ಳಿ ರಾಯಣ್ಣನ ಜನ್ಮದಿನದ ಸಡಗರವಾದರೇ  ಇನ್ನು ಮನೆಗಳಲ್ಲಿ ನಾರಿಯರಿಗೆ   ರಕ್ಷಾಬಂಧನದ  ಸಂಭ್ರಮ,  ಬಹುತೇಕ ನರರಿಗೆ ನೂಲುಹುಣ್ಣಿಯ ಆಚರಣೆ.  ಅಂಗಡಿಯಲ್ಲಿ ಒಂದೆಡೆ ನೂರಾರು ತ್ರಿವರ್ಣ ಧ್ವಜದ ಭರಾಟೆಯಾದರೆ ಮತ್ತೊಂದೆಡೆ ಸಾವಿರಾರು ರಾಖಿಗಳ  ಸರಮಾಲೆ ಮತ್ತೊಂದೆಡೆ ಸದ್ದಿಲ್ಲದೆ ಕೆಲವಾರು ಜನಿವಾರಗಳ ಮಾರಾಟ. ಒಟ್ಟಿನಲ್ಲಿ ಎಲ್ಲರಿಗೂ ಕೊಂಡಾಟವೇ ಕೊಂಡಾಟ. ಮೂರ್ನಾಲ್ಕು  ದಿನಗಳಿಂದ  ಆರೋಗ್ಯ ಸರಿಯಿಲ್ಲದೇ  ಗೃಹಬಂಧನದಲ್ಲಿಯೇ ಇದ್ದ ನನಗೆ ಇಂದು… Read More 73ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ