ಎಂ.ಜಿ. ರಸ್ತೆಯ ಇಂಡಿಯಾ ಕಾಫಿ ಹೌಸ್

ಕಾಫಿ ಎಂಬುದು ಹುರಿದ ಕಾಫಿ ಬೀಜಗಳಿಂದ ತಯಾರಿಸಿದ ಗಾಢ ಬಣ್ಣದ ಸ್ವಲ್ಪ ಕಹಿ ಮತ್ತು ಸ್ವಲ್ಪ ಆಮ್ಲೀಯ ಇರುವ ಪಾನೀಯವಾಗಿದ್ದು, ಅದರಲ್ಲಿರುವ ಕೆಫಿನ್ ಎಂಬ ಅಂಶ ಕುಡಿದವರ ಮೇಲೆ ಅಲ್ಪಪ್ರಮಾಣದ ಉತ್ತೇಜಕ ಪರಿಣಾಮವನ್ನು ಬೀರಿ ಅವರನ್ನು ಚೈತನ್ಯದಯಕವಾಗಿ ಇಡುತ್ತದೆ ಎಂಬ ನಂಬಿಕೆ ಇರುವ ಕಾರಣ, ಪ್ರಪಂಚಾದ್ಯಂತ ಕಾಫೀ ಒಂದು ಜನಪ್ರಿಯ ಪಾನೀಯವಾಗಿದೆ. ಹಾಗಾಗಿ ಅತ್ಯುತ್ತಮವಾದ ಕಾಫೀ ಬೀಜವನ್ನು ಹದವಾಗಿ ಹುರಿದು ಪುಡಿಮಾಡಿ ಹಬೆಯಾಡುವ ಬಿಸಿನೀರಿನಿಂದ ಅದರ ಕಷಾಯ (decoction)ವನ್ನು ತಯಾರಿಸಿ ಅದಕ್ಕೆ ಸ್ವಲ್ಪ ಹಾಲು ಮತ್ತು ಸಕ್ಕರೆಯನ್ನು… Read More ಎಂ.ಜಿ. ರಸ್ತೆಯ ಇಂಡಿಯಾ ಕಾಫಿ ಹೌಸ್

ದೊರೈ-ಭಗವಾನ್

ಸದಭಿರುಚಿಯ ಚಿತ್ರಗಳು ಅದರಲ್ಲೂ 24 ಕಾದಂಬರಿ ಚಿತ್ರ ಆಧಾರಿತ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿ, ರಾಜಕುಮಾರ್ ಅವರನ್ನು ಜೇಮ್ಸ್ ಬಾಂಡ್ ರೂಪದಲ್ಲಿ ಕನ್ನಡದಲ್ಲಿ ತೋರಿಸಿದ್ದ, ೮೦ರ ದಶಕದಲ್ಲಿ ಅನಂತ್ ನಾಗ್ ಮತ್ತು ಲಕ್ಷ್ಮೀ ಯಶಸ್ವಿ ಜೋಡಿಯನ್ನಾಗಿಸಿದ್ದ ಎಸ್. ಕೆ. ಭಗವಾನ್ ಎಂಟಾಣೆಯ ಮೂಲಕ ದೊರೈ-ಭಗವಾನ್ ಎಂಬ ಯಶಸ್ವಿ ಜೋಡಿಯಾದ ರೋಚಕದ ಕಥೆಯ ಜೊತೆ ಭಗವಾನ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಕುರಿತಾದ ನುಡಿ ನಮಗಳು ಇದೋ ನಿಮಗಾಗಿ… Read More ದೊರೈ-ಭಗವಾನ್

ಕಂಚಿನ ಕಂಠದ ಟಿ.ಎಸ್. ಲೋಹಿತಾಶ್ವ

ತಮ್ಮ ಮನೋಜ್ಞ ಅಭಿನಯದ ಮೂಲಕ ನೂರಾರು ನಾಟಕಗಳು, ಲೆಕ್ಕವಿಲ್ಲದಷ್ಟು ಧಾರಾವಾಹಿಗಳು ಮತ್ತು ಸುಮಾರು 500 ಚಿತ್ರಗಳಲ್ಲಿ ನಟಿಸುವ ಮೂಲಕ ಕನ್ನಡಿಗರ ಮನೆ ಮತ್ತು ಮನಗಳಲ್ಲಿ ಸದಾಕಾಲವೂ ಹಚ್ಚ ಹಸುರಾಗಿದ್ದ ಮತ್ತು ನೆನ್ನೆ ತಾನೇ ಹೃದಯಾಘಾತದಿಂತ ನವೆಂಬರ್ 8, 2022ರಂದು ನಿಧನರಾದ ಕಂಚಿನ ಕಂಠದ ಶ್ರೀ ಟಿ.ಎಸ್. ಲೋಹಿತಾಶ್ವ ಅವರ ವ್ಯಕ್ತಿ ಚಿತ್ರಣ ನಮ್ಮ ಹೆಮ್ಮೆಯ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಕಂಚಿನ ಕಂಠದ ಟಿ.ಎಸ್. ಲೋಹಿತಾಶ್ವ

ಅನಂತನಾಗ್

ಕೇವಲ ಕನ್ನಡ ಚಿತ್ರವಲ್ಲದೇ, ಹಿಂದಿ, ಮರಾಠಿ, ತಮಿಳು, ತೆಲುಗು, ಮಲಯಾಳಂ ಮತ್ತು ಇಂಗ್ಲೀಷ್ ಚಿತ್ರಗಳಲ್ಲಿ ನಟಿಸುವ ಮೂಲಕ ಸಪ್ತ ಭಾಷಾ ನಟರಾಗಿರುವ, ಈ ನಾಡಿನ ಅತ್ಯಂತ ಸುರದ್ರೂಪಿ, ಪ್ರತಿಭಾನ್ವಿತ ಮತ್ತು ಪ್ರಬುದ್ಧ ನಟನಾಗಿರುವ ಅನಂತ್ ನಾಗ್ ಅವರ ವ್ಯಕ್ತಿ, ವ್ಯಕ್ತಿತ್ವದ ಜೊತೆಗೆ ಅವರ ಅಪರೂಪದ ಸಾಧನೆಗಳನ್ನು ನಮ್ಮ ಇಂದಿನ ಕನ್ನಡ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ… Read More ಅನಂತನಾಗ್

ಕನ್ನಡ ಚಿತ್ರರಂಗ ಅಂದು ಇಂದು

ಕನ್ನಡದ ಮೊದಲ ಟಾಕೀ ಸಿನಿಮಾ ಸತಿ ಸುಲೋಚನದಿಂದ ಹಿಡಿದು ಇಂದಿನ ಕಾಂತಾರ ಮತ್ತು ಹೆಡ್ ಬುಷ್ ವರೆಗೂ ಕನ್ನಡ ಚಿತ್ರರಂಗ ಬೆಳೆದು ಬಂದ ದಾರಿಯ ಜೊತೆ ಅಂದಿನ ನಿರ್ದೇಶಕರು/ನಟರಿಗೂ ಇಂದಿನ ನಿರ್ದೇಶಕರು/ನಟರಿಗೂ ಇರುವ ವ್ಯತ್ಯಾಸದ ಕುರಿತಾದ ಒಂದು ವಸ್ತುನಿಷ್ಠ ವಿಶ್ಲೇಷಣೆ ಇದೋ ನಿಮಗಾಗಿ.… Read More ಕನ್ನಡ ಚಿತ್ರರಂಗ ಅಂದು ಇಂದು

ಅಪಘಾತಕ್ಕೆ ಅವಸರವೇ ಕಾರಣ

ಹೆದ್ದಾರಿಗಳಲ್ಲಿ ಅಪಘಾತಕ್ಕೆ ಅವಸರವೇ ಕಾರಣ, ಇಲ್ಲವೇ, ಅತಿ ವೇಗ ತಿಥಿ ಬೇಗ ಎಂಬ ಫಲಕವೋ ಕಣ್ಣಿಗೆ ಬಿದ್ದರೂ ಅದನ್ನು ನೋಡೀಯೋ ನೋಡದಂತೆ ಇಲ್ಲವೇ ನೋಡಿದರೂ ಅದನ್ನು ಅಪಹಾಸ್ಯ ಮಾಡಿಕೊಂಡು ವೇಗವಾಗಿ ವಾಹನವನ್ನು ಚಲಾಯಿಸಿದಾಗ ಆದ ಹೃದಯವಿದ್ರಾವಕ ಪ್ರಸಂಗ ಮತ್ತು ಅಂತಹ ಪ್ರಸಂಗವನ್ನು ಹೇಗೆ ತಪ್ಪಿಸಬಹುದು ಎಂಬುದರ ಕುರಿತಾದ ಸವಿವರಗಳು ಇದೋ ನಿಮಗಾಗಿ… Read More ಅಪಘಾತಕ್ಕೆ ಅವಸರವೇ ಕಾರಣ