ಕನ್ನಡ ನವೋದಯ ಸಾಹಿತ್ಯದ ಮುಂಗೋಳಿ ಮುದ್ದಣ

ತಮ್ಮ ಕೃತಿಗಳಲ್ಲಿ ಸಂಸ್ಕೃತ ಪದಗಳಿಗಿಂತಲೂ ಕನ್ನಡ ಪದಗಳಿಗೇ ಹೆಚ್ಚು  ಒತ್ತನ್ನು ನೀಡುವವೇ ನಲ್ಬರಹಗಳನ್ನು ರಚಿಸಬಹುದು ಎಂಬುದನ್ನು ತೋರಿಸಿಕೊಟ್ಟ, ಕಾವ್ಯವನ್ನು ಮುದ್ದಣ್ಣ ಮನೋರಮೆಯ ಸರಸ ಸಲ್ಲಾಪದ ರೂಪದಲ್ಲಿಯೂ ಕೆಟ್ಟಿಕೊಡಬಹುದು ಎಂದು ತೋರಿಸಿ, ಕನ್ನಡ ನವೋದಯ ಸಾಹಿತ್ಯದ ಮುಂಗೋಳಿ ಎಂಬ ಕೀರ್ತಿಗೆ ಪಾತ್ರರಾಗಿದ್ದ ಶ್ರೀ ನಂದಳಿಕೆ ಲಕ್ಷ್ಮೀ ನಾರಣಪ್ಪ ಎಲ್ಲರ ಪ್ರೀತಿಯ ಮುದ್ದಣನವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಕನ್ನಡ ಸಾರಸ್ವತ ಲೋಕದ ಸಾಧನೆಗಳು ಇದೋ ನಿಮಗಾಗಿ
Read More ಕನ್ನಡ ನವೋದಯ ಸಾಹಿತ್ಯದ ಮುಂಗೋಳಿ ಮುದ್ದಣ

ಚಾರಿತ್ರಿಕ ನಾಟಕಗಳ ಪಿತಾಮಹ ಸಂಸ

ಅನಗತ್ಯ ಹಾಸ್ಯಕ್ಕೆ ಎಡೆಯಿಲ್ಲದೇ, ಗಂಭಿರವಾದ ಪಾತ್ರ ರಚನೆ ಮತ್ತು ಸಂಭಾಷಣಾ ಚಾತುರ್ಯಗಳಿಂದ ಸುಮಾರು 23ಕ್ಕೂ ಹೆಚ್ಚಿನ ನಾಟಕಗಳ ಕತೃ ಶ್ರೀ ಎ. ಎನ್. ವೆಂಕಟಾದ್ರಿ ಅಯ್ಯರ್ ಅವರಿಗೆ, ಚಾರಿತ್ರಿಕ ನಾಟಕಗಳ ಪಿತಾಮಹ ಸಂಸ ಎಂಬ ಹೆಸರು ಬರಲು ಕಾರಣವೇನು? ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಕನ್ನಡ ಸಾರಸ್ವತ ಲೋಕಕ್ಕೆ ಅವರ ಕೊಡುಗೆಗಳೇನು?ಎಂಬೆಲ್ಲಾ ಕುತೂಹಲಕಾರಿ ಮಾಹಿತಿಗಳು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಚಾರಿತ್ರಿಕ ನಾಟಕಗಳ ಪಿತಾಮಹ ಸಂಸ

ನಟ, ರಂಗಕರ್ಮಿ ಕೆ. ವಿ. ಶ್ರೀನಿವಾಸ ಪ್ರಭು

ನಟನೆ, ಕಂಠದಾನ, ನಿರ್ದೇಶನ, ನಿರ್ಮಾಣ, ನಿರೂಪಣೆಯ ಮೂಲಕ ಕನ್ನಡದ ಹವ್ಯಾಸಿ ರಂಗಭೂಮಿ, ದೂರದರ್ಶನ, ಕಿರುತೆರೆ, ಚಿತ್ರರಂಗದಲ್ಲಿ ನಮ್ಮೆಲ್ಲರಿಗೂ ಚಿರಪರಿಚಿತರಾಗಿರುವ ಶ್ರೀ ಶ್ರೀನಿವಾಸ ಪ್ರಭು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ನಟ, ರಂಗಕರ್ಮಿ ಕೆ. ವಿ. ಶ್ರೀನಿವಾಸ ಪ್ರಭು

ರಾಷ್ಟ್ರೀಯ ಚಿಂತನೆಯ ಸಾಹಿತಿ, ಶಿವರಾಮು

ಆತ್ಮಾಹುತಿ ಎಂಬ ಕೃತಿಯ ಮೂಲಕ ವೀರ ಸಾವರ್ಕರ್ ಅವರನ್ನು ಕನ್ನಡಿಗರಿಗೆ ಪರಿಚಿಸಿದ ಸಮಾಜದ ಆಭ್ಯುದಯಕ್ಕಾಗಿಯೇ ರಾಷ್ಟ್ರೀಯ ಚಿಂತನೆಯ ಪುಸ್ತಕಗಳನ್ನು ಬರದು ಪ್ರಕಟಿಸಿ ಅದನ್ನು ತಮ್ಮ ಜೋಳಿಗೆಯಲ್ಲಿ ತುಂಬಿಸಿಕೊಂಡು ಮನೆ ಮನೆಗೂ ಹೋಗಿ ತಲುಪಿಸಿದ ನಿಷ್ಕಳಂಕ ದೇಶಭಕ್ತ, ಪ್ರತಿಭಾಶಾಲಿ ಸಾಹಿತಿಯಾಗಿದ್ದ ಶ್ರೀ ಶಿವರಾಮು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಯಲ್ಲಿ ಇದೋ ನಿಮಗಾಗಿ… Read More ರಾಷ್ಟ್ರೀಯ ಚಿಂತನೆಯ ಸಾಹಿತಿ, ಶಿವರಾಮು

ಇದ್ದದ್ದನ್ನು ಇದ್ದ ಹಾಗೇ ಹೇಳಿದರೆ ಎದ್ದು ಬಂದು ಎದೆಗೆ ಒದ್ದರಂತೆ!

ಸಂವಿಧಾನದ ಪುಸ್ತಕ ಹಿಡಿದು, ಈ ದೇಶದಲ್ಲಿ ಅಭಿವ್ಯಕ್ತಿ ಸ್ವಾತ್ರಂತ್ರ್ಯಕ್ಕೆ ಧಕ್ಕೆ ಆಗುತ್ತಿದೆ ಎಂದು ಬೊಬ್ಬಿಡುವ ಕಾಂಗ್ರೇಸ್ ನಾಯಕರೇ, ಕರ್ನಾಟಕದಲ್ಲಿ ಅವರ ವಿರುದ್ಧ ಮಾತನಾಡುವವರ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಿರುವುದು ವಿಪರ್ಯಾಸ. ಕೈಯಲ್ಲಿ ಸಂವಿಧಾನದ ಪುಸ್ತಕ ಹಿಡಿದರೆ ಮಾತ್ರಾ ಸಾಲದು ಆದನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಂಡು ಅದರ ಅನ್ವರ್ಥವಾಗಿ ನಡೆದು ಕೊಳ್ಳಬೇಕು ಅಲ್ವೇ?

ಏನಂತೀರೀ?… Read More ಇದ್ದದ್ದನ್ನು ಇದ್ದ ಹಾಗೇ ಹೇಳಿದರೆ ಎದ್ದು ಬಂದು ಎದೆಗೆ ಒದ್ದರಂತೆ!

ವಿಜಯ್ ಆರ್ ಭಾರದ್ವಾಜ್

ಹತ್ತು ವರ್ಷಗಳ ಕಾಲ ಕರ್ನಾಟಕದ ಕ್ರಿಕೆಟ್ ತಂಡದ ಪರ ಆಪತ್ಭಾಂಧವರಾಗಿದ್ದ, ತನ್ನ ಚೊಚ್ಚಲ ಅಂತರಾಷ್ಟ್ರೀಯ ಪಂದ್ಯಾವಳಿಯಲ್ಲೇ ಸರಣಿ ಶ್ರೇಷ್ಠ ಪ್ರಶಸ್ತಿಗಳಿಸಿದ್ದ, ಪ್ರಸ್ತುತ ತರಭೇತುತಾರ, ಕ್ರಿಕೆಟ್ ವಿಶ್ಲೇಷಕ, ವೀಕ್ಷಕ ವಿವರಣೆಕಾರರಾಗಿರುವ ವಿಜಯ್ ಆರ್ ಭಾರದ್ವಾಜ್ ಅವರಿಗೆ ಪಿಂಗ ಎಂಬ ಆಡ್ಡ ಹೆಸರಿಟ್ಟವರು ಯಾರು? ಕ್ರಿಕೆಟ್ಟಿನಲ್ಲಿ ಅವರ ಸಾಧನೆ ಏನು? ಎಂಬೆಲ್ಲಾ ವಿವರಗಳು ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ವಿಜಯ್ ಆರ್ ಭಾರದ್ವಾಜ್

ಅಶ್ವಿನಿ ನಾಚಪ್ಪ

ರಾಷ್ಟ್ರೀಯ ಮತ್ತು  ಅಂತರಾಷ್ಟ್ರೀಯ ಕ್ರೀಡಾಲೋಕಕ್ಕೆ ಕರ್ನಾಟಕದ ಕೊಡುಗೆ ಅಪಾರವಾಗಿದ್ದು,  ಅಂದು, ಇಂದು ಮತ್ತು ಮುಂದೆಯೂ ದೇಶದ ಕೀರ್ತಿಪತಾಕೆಯನ್ನು ಎತ್ತಿ ಹಿಡಿಯಲು ಅನೇಕ ಕ್ರೀಡಾಪಟುಗಳು ಸಿದ್ಧರಾಗಿದ್ದಾರೆ/ಸಿದ್ಧವಾಗುತ್ತಿದ್ದಾರೆ. 80ರ ದಶಕದಲ್ಲಿ ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್‌ನಲ್ಲಿ ದೊಡ್ಡ ಹೆಸರು ಮಾಡಿದ್ದಲ್ಲದೇ,, ನಂತರ ಸಿನಿಮಾದಲ್ಲಿ ನಾಯಕಿಯಾಗಿಯೂ ಪ್ರಸಿದ್ಧಿ ಪಡೆದು ಪ್ರಸ್ತುತ ಸಮಾಜಸೇವೆ ಮತ್ತು ಶಿಕ್ಷಣ ರಂಗದಲ್ಲಿ ತೊಡಗಿಸಿಕೊಂಡಿರುವ ಶ್ರೀಮತಿ ಅಶ್ವಿನಿ ನಾಚಪ್ಪ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಅಶ್ವಿನಿ ನಾಚಪ್ಪ

ಹಿಂದಿನ ತಪ್ಪುಗಳಿಂದ ಹಿಂದೂಗಳು ಇನ್ನೂ ಪಾಠ ಕಲಿತಿಲ್ಲವೇ?

12-13ನೇ ಶತಮಾನಕ್ಕೂ ಮುಂಚೆ ಈ ದೇಶದಲ್ಲಿ ಮುಸಲ್ಮಾನರೇ ಇರಲಿಲ್ಲ. ಬೆರಳೆಣಿಕೆಯ ಮತಾಂಧರು ಖಿಲ್ಚಿ ಸೈನಿಕರು ನಳಂದ ವಿಶ್ವವಿದ್ಯಾಲಯ ನಾಶ ಪಡಿಸಿದ್ದು, ರಾರ್ಬಟ್ ಕ್ಲೈವ್ ನ ಕೇವಲ 300 ಬ್ರಿಟೀಷ್ ಸೈನಿಕರು 1757ರಲ್ಲಿ ಕಲ್ಕತ್ತಾವನ್ನು ವಶಪಡಿಸಿಕೊಂಡ ಇತಿಹಾಸ ಕಣ್ಣ ಮುಂದಿದ್ದರೂ, ಹಿಂದೂಸ್ಥಾನದ ಅಸ್ತಿಗಳೆಲ್ಲವೂ ವಕ್ಫ್ ಆಸ್ತಿ ಎನ್ನುವವರ ವಿರುದ್ಧ ಹಿಂದೂಗಳೇ ಧನಿ ಎತ್ತದೆ ಇರುವುದು, ಹಿಂದೂಗಳು ಇತಿಹಾಸದಿಂದ ಇನ್ನೂ ಪಾಠ ಕಲಿತಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ ಅಲ್ವೇ?… Read More ಹಿಂದಿನ ತಪ್ಪುಗಳಿಂದ ಹಿಂದೂಗಳು ಇನ್ನೂ ಪಾಠ ಕಲಿತಿಲ್ಲವೇ?

ದೊರೈ-ಭಗವಾನ್ ಜೋಡಿಯ, ಛಾಯಾಗ್ರಾಹಕ ದೊರೈ

ಛಾಯಾಗ್ರಾಹಕರಾಗಿ ಚಿತ್ರರಂಗವನ್ನು ಪ್ರವೇಶಿಸಿ, ಭಗವಾನ್ ಅವರೊಂದಿಗೆ ಜೋಡಿಯಾಗಿ ಕನ್ನಡದ ಬಹುತೇಕ ಲೇಖಕರ ಒಳ್ಳೊಳ್ಳೆಯ ಕಾದಂಬರಿಗಳನ್ನು ಚಿತ್ರವನ್ನಾಗಿಸಿ, ಕನ್ನಡಿಗರ ಮನಸ್ಸಿನ ಶಾಶ್ಗತವಾಗಿ ಮನೆ ಮಾಡಿರುವ ಬಿ ದೊರೈರಾಜ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಜೊತೆಗೆ ಸಾವಿನಲ್ಲೂ ಜೋಡಿಯಾಗಿಯೇ ಮೆರೆದ ಕುತೂಹಲಕಾರಿ ಸಂಗತಿಯನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ದೊರೈ-ಭಗವಾನ್ ಜೋಡಿಯ, ಛಾಯಾಗ್ರಾಹಕ ದೊರೈ