ಸಂಪರ್ಕ ಮತ್ತು ಸೌಹಾರ್ದ
ಅದೊಂದು ಸಂಜೆ ರೀ.. ಹಾಲು ಮೊಸರು ಮುಗಿದು ಹೋಗಿದೆ, ಸ್ವಲ್ಪ ತರ್ತೀರಾ ಎಂದಾಗ, ಮೋಬೈಲಿನಲ್ಲಿ ಕ್ರಿಕೆಟ್ ನೋಡುತ್ತಿದ್ದ ನಾನು ಬೇಸರಿಸಿಕೊಂಡೇ, ಚೀಲದಲ್ಲಿ ಹಾಲು ಮೊಸರು ಕೂಪನ್ನುಗಳನ್ನು ಹಾಕಿಕೊಂಡು ಹಾಲಂಗಡಿಗೆ ಹೋದೆ. ಸಾಧಾರಣವಾಗಿ ನಾನು ಎಲ್ಲಿಗೇ ಹೋಗಲಿ, ಸುಮ್ಮನೆ ನಾನಾಯಿತು ನನ್ನ ಕೆಲಸ ಆಯಿತು ಎನ್ನುವ ಆಸಾಮಿಯೇ ಅಲ್ಲಾ. ದಾರಿಯಲ್ಲಿ ಪರಿಚಯವಿರುವ ಎಲ್ಲರನ್ನೂ ಮಾತನಾಡಿಸಿಕೊಂಡೇ ಹೋಗುವ ಪರಿಪಾಠ. ಅಂದೂ ಸಹಾ ಹಾಲಿನಂಗಡಿಯವರ ಉಭಯ ಕುಶಲೋಪರಿಯನ್ನು ವಿಚಾರಿಸುವಷ್ಟರಲ್ಲೇ ೫-೧೦ ನಿಮಿಷ ಕಳೆದು, ನಂತರ ಮನೆಗೆ ಹಿಂದಿರುಗುವಾಗ, ಬಹಳ ದಿನಗಳ ನಂತರ… Read More ಸಂಪರ್ಕ ಮತ್ತು ಸೌಹಾರ್ದ








