ಬ್ರಿಗೇಡ್ ರಸ್ತೆಯ ಸಪ್ಪರ್ಸ್ ಯುದ್ಧ ಸ್ಮಾರಕ

ಅನೇಕ ಊರುಗಳಲ್ಲಿ ತಮ್ಮ ಊರನ್ನು ಶತ್ರುಗಳ ಆಕ್ರಮಣದಿಂದ ತಡೆದ ವೀರ ಮತ್ತು ಶೂರರ ಕುರಿತಾದ ವೀರಗಲ್ಲುಗಳು ಇರುವಂತೆ, ಮೊದಲ ವಿಶ್ವ ಯುದ್ಧದಲ್ಲಿ ಬ್ರಿಟೀಷ್ ಸೈನ್ಯದ ಬಾಗವಾಗಿ ಶತ್ರುಗಳ ವಿರುದ್ದ ಹೋರಾಟ ನಡೆಸಿ ಹುತಾತ್ಮರಾದ ಮದ್ರಾಸ್ ಸಪ್ಪರ್ಸ್ ಮತ್ತು ಮೈನರ್ಸ್ (MEG) ಸೈನಿಕರ ನೆನಪಿನಲ್ಲಿ ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ನಿರ್ಮಿಸಿಸಲಾಗಿರುವ ಸುಮಾರು 100ವರ್ಷ ಹಳೆಯದಾದ ಸಪ್ಪರ್ಸ್ ವಾರ್ ಮೆಮೋರಿಯಲ್ ಬಗ್ಗೆ ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ. … Read More ಬ್ರಿಗೇಡ್ ರಸ್ತೆಯ ಸಪ್ಪರ್ಸ್ ಯುದ್ಧ ಸ್ಮಾರಕ

ಯಾವ ಹುತ್ತದಲ್ಲಿ ಯಾವ ಹಾವು ಇದೆಯೋ?

ಚಿಕ್ಕಮಗಳೂರಿನಲ್ಲಿ ಟೈಲರಿಂಗ್ ವೃತ್ತಿ ಮಾಡಿಕೊಂಡು ಹಾವು ಹಿಡಿಯುವುದನ್ನು ಪ್ರವೃತ್ತಿಯನ್ನಾಗಿ ಮಾಡಿಕೊಂಡು ಜಿಲ್ಲಾದ್ಯಂತ ಅಪಾರವಾದ ಜನಮನ್ನಣೆಯನ್ನು ಗಳಿಸಿದ್ದ ಶ್ರೀ ಸ್ನೇಕ್ ನರೇಶ್ ನೆನ್ನೆ ತಾವು ಹಿಡಿದಿದ್ದ ಹಾವು ಕಚ್ಚಿ ಮೃತಪಟ್ಟಿರುವುದು ನಿಜಕ್ಕೂ ದುಃಖಕರವಾದ ಸಂಗತಿಯಾಗಿದ್ದರೆ, ಅದರ ತನಿಖೆಗೆಂದು ಅವರ ಮನೆಗೆ ಹೋಗಿದ್ದ ಪೋಲೀಸರಿಗೆ ಅಲ್ಲಿ ಕಂಡ ದೃಶ್ಯ ಮತ್ತಷ್ಟು ಬೆಚ್ಚಿ ಬೀಳಿಸುವಂತಿದೆ.

ಸ್ನೇಕ್ ನರೇಶ್ ಎಂದರೆ ಯಾರು? ಅವರ ಸಾವು ಹೇಗಾಯಿತು ಮತ್ತು ಪೋಲಿಸರೇ ಬೆಚ್ಚಿ ಬೀಳುವಂತಹ ಪ್ರಸಂಗ ಏನು? ಎಂಬುದಕ್ಕೆ ಇಲ್ಲಿದೇ ಉತ್ತರ.… Read More ಯಾವ ಹುತ್ತದಲ್ಲಿ ಯಾವ ಹಾವು ಇದೆಯೋ?

ಜೀವನದ ಸುಂದರ ಕ್ಷಣಗಳು

ನಿಮ್ಮ ಜೀವನದ ಸುಂದರ ಕ್ಷಣಗಳು ಯಾವುದು ಎಂದು ಯಾರನ್ನಾದರೂ ಕೇಳಿದರೆ, ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಉತ್ತರಿಸುತ್ತಾರೆ. ಭಾರತದ ಖ್ಯಾತ ಉದ್ಯಮಿಗಳಾದ ಶ್ರೀ ರತನ್‌ಜಿ ಟಾಟಾ ಅವರಿಗೆ ಇದೇ ಪ್ರಶ್ನೆಯನ್ನು ಸಂದರ್ಶಕರೊಬ್ಬರು ಕೇಳಿದಾಗ ಅವರು ಹಂಚಿಕೊಂಡ ಅವರ ಜೀವನದ ಆ ಸುಂದರವಾದ ಪ್ರಸಂಗ ನಿಜಕ್ಕೂ ಹೃದಯಸ್ಪರ್ಶಿಯಾಗಿದ್ದು, ಎಲ್ಲರಿಗೂ ಪ್ರೇರಣಾದಾಯಿಯಾಗಿದೆ. … Read More ಜೀವನದ ಸುಂದರ ಕ್ಷಣಗಳು

ಉಪ್ಪಿನಂಗಡಿ ಮಂಜ ಬೈದ್ಯ, ಬಾವುಟಗುಡ್ಡ ಹೋರಾಟ

1883 ಮೇ 28, ಅಪ್ರತಿಮ ಸ್ವಾತ್ರಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಜನ್ಮದಿನವಾದರೆ, ಮೇ 27, ಬ್ರಿಟೀಷರ ವಿರುದ್ಧ ದಂಗೆ ಎದ್ದು, 1837 ಎಪ್ರಿಲ್ 5 ರಂದು ಮಂಗಳೂರಿನ ಬಾವುಟಗುಡ್ಡದಲ್ಲಿ ಬ್ರೀಟೀಷರ ಧ್ವಜವನ್ನು ಇಳಿಸಿ, ಕನ್ನಡಿಗರ ಹಾಲೇರಿ ಧ್ವಜವನ್ನು ಹಾರಿಸಿ, ೧೩ ದಿನಗಳ ಕಾಲ ಅಂದಿನ ದಕ್ಷಿಣ ಕನ್ನಡವನ್ನು ಬ್ರಿಟೀಷರಿಂದ ಸ್ವಾತ್ರಂತ್ರ್ಯ ಗೊಳಿಸಿದ್ದಂತಹ ವೀರ ಸೇನಾನಿ ಉಪ್ಪಿನಂಗಡಿ ಮಂಜ ಬೈದ್ಯ ಹುತಾತ್ಮನಾದ ದಿನ. ಅಂತಹ ಪ್ರಾಥಃಸ್ಮರಣೀಯ, ಎಲೆಮರೆಕಾಯಿಯಂತೆ ಬೆಳಕಿಗೇ ಬಾರದೇ ಹೋದ ವೀರ ಸಾಹಸಿಯ ಯಶೋಗಾಥೆ ಇದೋ ನಿಮಗಾಗಿ… Read More ಉಪ್ಪಿನಂಗಡಿ ಮಂಜ ಬೈದ್ಯ, ಬಾವುಟಗುಡ್ಡ ಹೋರಾಟ

ನೂತನ ಸಂಸತ್ ಭವನ

ಇದೇ ಭಾನುವಾರ ಮೇ 28ಕ್ಕೆ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಯವರು ಉದ್ಘಾಟಿಸುತ್ತಿರುವ ನೂತನ ಸಂಸತ್ ಭವನದ ವಿಶೇಷತೆಗಳೇನು? ಈ ಹಿಂದಿನ ಕಟ್ಟಡಕ್ಕೂ ಈಗಿನ ಕಟ್ಟಡಕ್ಕೂ ಇರುವ ವೆತ್ಯಾಸಗಳೇನು? ಈ ನೂತನವಾದ ಸಂಸತ್ ಭವನದ ಅವಶ್ಯಕತೆ ಏನು? ಮತ್ತು ಅದರ ಉದ್ಭಾಟನಾ ಸಮಾರಂಭಕ್ಕೆ ಪ್ರತಿಪಕ್ಷಗಳು ಏಕೆ ಭಹಿಷ್ಕಾರ ಹಾಕುತ್ತಿವೆ ಎಂಬುದರ ಕುರಿತಾದ ಸವಿಸ್ತಾರವಾದ ವಿವರಗಳು ಇದೋ ನಿಮಗಾಗಿ
Read More ನೂತನ ಸಂಸತ್ ಭವನ

ಟಿ ಆರ್ ಶಾಮಣ್ಣ ನಗರ ಮತ್ತು ಉದ್ಯಾನವನ

ಬೆಂಗಳೂರಿನಲ್ಲಿ ಹತ್ತು ಹಲವಾರು ಶಿಕ್ಷಣ ಸಂಸ್ಧೆಗಳು, ದೇವಾಲಯಗಳು ಮತ್ತು ಧಾರ್ಮಿಕ ಸಂಸ್ಥೆಗಳನ್ನು ಆರಂಭಿಸಿದ್ದಲ್ಲದೇ ನಗರಪಾಲಿಕೆ ಸದಸ್ಯರಾಗಿ ಮಾಡಿದ ಅನೇಕ ಸಾಧನೆಗಳಿಂದ ಬೆಂಗಳೂರು ನಗರಸಭೆಯ ಪಿತಾಮಹ ಎಂದೇ ಖ್ಯಾತರಾಗಿದ್ದಲ್ಲದೇ, ತಮ್ಮ ಸರಳ ಸಜ್ಜನಿಕೆಯಿಂದ ಕರ್ನಾಟಕದ ಗಾಂಧಿ ಎಂಬ ಬಿರುದಾಂಕಿತ, ಸೈಕಲ್ ಶಾಮಣ್ಣನವರಿಗೆ, ಆ ಹೆಸರು ಬರಲು ಕಾರಣವೇನು? ಆವರ ವ್ಯಕ್ತಿ ಮತ್ತು ವ್ಯಕ್ತಿತ್ವದ ಪರಿಚಯದ ಜೊತೆ ಸಾಧನೆಗಳನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಟಿ ಆರ್ ಶಾಮಣ್ಣ ನಗರ ಮತ್ತು ಉದ್ಯಾನವನ

ಮಾವಳ್ಳಿ ಟಿಫನ್ ರೂಂ (MTR)

ಸುಮಾರು 99 ವರ್ಷಗಳ ಹಿಂದೆ ಬೆಂಗಳೂರಿನ ಲಾಲ್‌ಬಾಗ್ ರಸ್ತೆಯ ಮಾವಳ್ಳಿಯಲ್ಲಿ ಸಣ್ಣದಾಗಿ ಆರಂಭವಾದ ಮಾವಳ್ಳಿ ಟಿಫನ್ ರೂಂ ಇಂದು ಎಂಟಿಆರ್ ಹೆಸರಿನಲ್ಲಿ, ಬೆಂಗಳೂರು, ಉಡುಪಿ, ಮೈಸೂರು, ಸಿಂಗಾಪುರ್, ಕೌಲಾಲಂಪುರ್, ಲಂಡನ್ ಮತ್ತು ದುಬೈನಲ್ಲಿಯೂ ಸಹಾ ಶಾಖೆಗಳನ್ನು ಹೊಂದಿರುವುದಲ್ಲದೇ, ಸಿದ್ಧ ಪಡಿಸಿದ ಬಗೆ ಬಗೆಯ ಮಸಾಲೆ ಮತ್ತು ರೆಡಿ ಟು ಈಟ್ ಪದಾರ್ಥಗಳಲ್ಲಿ ವಿಶ್ವವಿಖ್ಯಾತಿ ಪಡೆದಿದೆ.

ಅಂತಹ ವಿಶ್ವವಿಖ್ಯಾತ ಎಂಟಿಆರ್ ಬೆಳೆದು ಬಂದ ದಾರಿ ಮತ್ತು ಮಾಡಿರುವ ಸಾಧನೆಗಳ ಪರಿಚಯವನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಮಾವಳ್ಳಿ ಟಿಫನ್ ರೂಂ (MTR)

ದೇವದುರ್ಲಭ ಕಾರ್ಯಕರ್ತರ ಮನದಾಳದ ಮಾತು

ಪ್ರಜಾಪ್ರಭುತ್ವದಲ್ಲಿ ಸೋಲು ಮತ್ತು ಗೆಲುವು ಸಹಜ. ಈ ಬಾರಿ ಬಿಪೆಪಿ ಪಕ್ಷ ಸೋತಿದೆಯೇ ಹೊರತು, ಖಂಡಿತವಾಗಿಯೂ ಸತ್ತಿಲ್ಲ. ಚುನಾವಣೆಯ ಸೋಲು ಮತ್ತು ಗೆಲುವು ಎನ್ನುವುದು ಗಡಿಯಾರದ ಎರಡು ಮುಳ್ಳಿನಂತೆ ಇದ್ದು ಅದು ಕಾಲ ಕಾಲಕ್ಕೆ ಅನುಗುಣವಾಗಿ ನಿಶ್ಚಿತವಾಗಿಯೂ ಮೇಲೆ ಕೆಳಗಾಗುವುದು ಈ ಜಗದ ನಿಯಮ.

ಈ ಬಾರಿಯ ಬಿಜೆಪಿಯ ಸೋಲನ್ನು ಹಲವರು ವಿವಿಧ ರೀತಿಯಲ್ಲಿ ವಿಶ್ಲೇಷಿಸಿದ್ದರೆ, ಒಬ್ಬ ಕಾರ್ಯಕರ್ತನಾಗಿ ನನ್ನ ವಿಮರ್ಶೆ ಇದೋ ನಿಮಗಾಗಿ… Read More ದೇವದುರ್ಲಭ ಕಾರ್ಯಕರ್ತರ ಮನದಾಳದ ಮಾತು

ಎಂ.ಜಿ. ರಸ್ತೆಯ ಇಂಡಿಯಾ ಕಾಫಿ ಹೌಸ್

ಕಾಫಿ ಎಂಬುದು ಹುರಿದ ಕಾಫಿ ಬೀಜಗಳಿಂದ ತಯಾರಿಸಿದ ಗಾಢ ಬಣ್ಣದ ಸ್ವಲ್ಪ ಕಹಿ ಮತ್ತು ಸ್ವಲ್ಪ ಆಮ್ಲೀಯ ಇರುವ ಪಾನೀಯವಾಗಿದ್ದು, ಅದರಲ್ಲಿರುವ ಕೆಫಿನ್ ಎಂಬ ಅಂಶ ಕುಡಿದವರ ಮೇಲೆ ಅಲ್ಪಪ್ರಮಾಣದ ಉತ್ತೇಜಕ ಪರಿಣಾಮವನ್ನು ಬೀರಿ ಅವರನ್ನು ಚೈತನ್ಯದಯಕವಾಗಿ ಇಡುತ್ತದೆ ಎಂಬ ನಂಬಿಕೆ ಇರುವ ಕಾರಣ, ಪ್ರಪಂಚಾದ್ಯಂತ ಕಾಫೀ ಒಂದು ಜನಪ್ರಿಯ ಪಾನೀಯವಾಗಿದೆ. ಹಾಗಾಗಿ ಅತ್ಯುತ್ತಮವಾದ ಕಾಫೀ ಬೀಜವನ್ನು ಹದವಾಗಿ ಹುರಿದು ಪುಡಿಮಾಡಿ ಹಬೆಯಾಡುವ ಬಿಸಿನೀರಿನಿಂದ ಅದರ ಕಷಾಯ (decoction)ವನ್ನು ತಯಾರಿಸಿ ಅದಕ್ಕೆ ಸ್ವಲ್ಪ ಹಾಲು ಮತ್ತು ಸಕ್ಕರೆಯನ್ನು… Read More ಎಂ.ಜಿ. ರಸ್ತೆಯ ಇಂಡಿಯಾ ಕಾಫಿ ಹೌಸ್