🎶 ರಾಗದಿಂದ ಆರೋಗ್ಯದವರೆಗೆ… ಸಂಗೀತದ ಮೂಲಕ ಬದುಕಿಗೆ ಹೊಸ ಸ್ಪಂದನೆ ನೀಡುವ ‘ರಾಗ ಆರೋಗ್ಯ–6’

ಸಂಗೀತಕ್ಕೂ, ಆರೋಗ್ಯಕ್ಕೂ ನಿಜವಾಗಿಯೂ ಸಂಬಂಧವಿದೆಯೇ? ಈ ಪ್ರಶ್ನೆಗೆ ಸಂಗೀತದ ಮೂಲಕವೇ ಉತ್ತರ ಹುಡುಕುವ ವಿಭಿನ್ನ ಪ್ರಯತ್ನವಾಗಿ, ಜೀ ಸರಿಗಮಪ ಖ್ಯಾತಿಯ ಹಿನ್ನಲೆ ಗಾಯಕ ಶ್ರೀಹರ್ಷ ಸಾರಥ್ಯದಲ್ಲಿ, ಹೃದಯತಜ್ಞ ಡಾ.ಸಿ.ಎನ್. ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿರುವ ರಾಗ ಆರೋಗ್ಯ-6 ಎಂಬ ವಿಶಿಷ್ಟ ಪರಿಕಲ್ಪನೆಯ ಕಾರ್ಯಕ್ರಮದ ವಿವರಗಳು ಇದೋ ನಿಮಗಾಗಿ… Read More 🎶 ರಾಗದಿಂದ ಆರೋಗ್ಯದವರೆಗೆ… ಸಂಗೀತದ ಮೂಲಕ ಬದುಕಿಗೆ ಹೊಸ ಸ್ಪಂದನೆ ನೀಡುವ ‘ರಾಗ ಆರೋಗ್ಯ–6’

ಬಾಲ್ಯದಲ್ಲಿ ಅಪ್ಪ ಅಮ್ಮನ ಜೊತೆ ನಿದ್ದೆ, ನಮ್ಮ ಅತಿ ದೊಡ್ಡ ಭದ್ರತೆ

70–80ರ ದಶಕದಲ್ಲಿ ಬಹುತೇಕ ಮಧ್ಯಮವರ್ಗದ ಭಾರತೀಯ ಮನೆಗಳು ಚಿಕ್ಕದಾಗಿರುತ್ತಿದ್ದವು. ಎಲ್ಲರಿಗೂ ಪ್ರತ್ಯೇಕ ಮಲಗುವ ಕೋಣೆಗಳಿರಲಿಲ್ಲ. ಹೀಗಾಗಿ ಅಪ್ಪ-ಅಮ್ಮ, ಅಣ್ಣ-ತಂಗಿ, ಅಜ್ಜ-ಅಜ್ಜಿ ಎಲ್ಲರೂ ಒಂದೇ ಕೋಣೆಯಲ್ಲಿ ಅಥವಾ ಹಜಾರದಲ್ಲೇ ಒಟ್ಟಾಗಿ ಮಲಗುವುದು ಸಾಮಾನ್ಯವಾಗಿತ್ತು. ಅಮ್ಮನ ಸೆರಗಿನ ನೆರಳಲ್ಲಿ, ಅಪ್ಪನ ಅಂಗಿಯನ್ನು ಗಟ್ಟಿಯಾಗಿ ಹಿಡಿದುಕೊಂಡು, ಕೆಲವೊಮ್ಮೆ ಅಪ್ಪನ ಹೆಗಲ ಮೇಲೆ, ಮತ್ತೊಮ್ಮೆ ಅಮ್ಮನ ಜೋಗುಳ ಕೇಳುತ್ತಾ ನಿದ್ರೆಗೆ ಜಾರಿದ ಆ ದಿನಗಳು ಇಂದಿಗೂ ಅನೇಕರ ಮನಸ್ಸಿನಲ್ಲಿ ಅಚ್ಚಳಿಯದ ನೆನಪುಗಳಾಗಿವೆ. ಭಾರತೀಯ ಕುಟುಂಬಗಳಲ್ಲಿ ಮಕ್ಕಳು ಹೈಸ್ಕೂಲು ತಲುಪುವವರೆಗೂ ಅಪ್ಪ-ಅಮ್ಮನ ಜೊತೆಯೇ ಮಲಗುವುದು… Read More ಬಾಲ್ಯದಲ್ಲಿ ಅಪ್ಪ ಅಮ್ಮನ ಜೊತೆ ನಿದ್ದೆ, ನಮ್ಮ ಅತಿ ದೊಡ್ಡ ಭದ್ರತೆ

ಕನ್ಯಾದಾನ ಎಂಬುದು ಮರೀಚಿಕೆ ಆಗಲಿದೆಯೇ?

ಪುರುಷರಿಗಿಂತಲೂ ತಾವೇನೂ ಕಡಿಮೆ ಇಲ್ಲಾ ಎಂಬ ಅಂಧ ಪಾಶ್ಚಾತ್ಯೀಕರಣದ ಪ್ರಭಾವದಿಂದಾಗಿ ಪುರುಷ ದ್ವೇಷಿಗಳಾಗುತ್ತಿರುವ ಹೆಣ್ಣು ಮಕ್ಕಳಿಂದಾಗಿ, 2030ರ ಹೊತ್ತಿಗೆ ವಿಶ್ವದ 45% ಹುಡುಗಿಯರು ಅವಿವಾಹಿತರಾಗಿಯೇ ಉಳಿದು, ಶಾಸ್ತ್ರೋಕ್ತವಾಗಿ ಗಂಗಾಜಲದಿಂದ ಧಾರೆ ಎರೆದು ಮಗಳನ್ನು ಅಳಿಯನಿಗೆ ಕನ್ಯಾದಾನ ಮಾಡುತ್ತಿದ್ದ ಪದ್ದತಿ ಇನ್ನು ಮುಂದೆ ಮರೀಚಿಕೆಯಾಗುತ್ತಿರುವ ಕಥೆ-ವ್ಯಥೆ ಇದೋ ನಿಮಗಾಗಿ… Read More ಕನ್ಯಾದಾನ ಎಂಬುದು ಮರೀಚಿಕೆ ಆಗಲಿದೆಯೇ?

ಇಡ್ಲಿ ತಿನ್ನುವುದರಿಂದ ಕ್ಯಾನ್ಸರ್ ಬರುತ್ತದೆಯೇ?

ಆರೋಗ್ಯಕರವಾಗಿರಲು ಹಬೆಯಲ್ಲಿ ಬೆಂದ ಇಡ್ಲಿಯನ್ನೇ ತಿನ್ನಿ ಎಂದು ವೈದ್ಯರೇ ಹೇಳುತ್ತಿದ್ದರೆ, ಇಡ್ಲಿ ತಿಂದರೆ ಕ್ಯಾನ್ಸರ್ ಬರುತ್ತದೆ ಎಂದರೆ ಹೇಗೇ? ಎನ್ನುವವರಿಗೆ ಇಡ್ಲಿಯ ಇತಿಹಾಸದ ಜೊತೆಗೆ, ಆರೋಗ್ಯ ಇಲಾಖೆಯ ಎಚ್ಚರಿಕೆ ಏನು? ಮತ್ತು ಆರೋಗ್ಯಕರ ರೀತಿಯಲ್ಲಿ ಹೇಗೆ ಇಡ್ಲಿಯನ್ನು ಹೇಗೆ ಮಾಡಿಕೊಂಡು ತಿನ್ನಬೇಕು ಎಂಬೆಲ್ಲದರ ಸವಿವರಗಳು ಇದೋ ನಿಮಗಾಗಿ… Read More ಇಡ್ಲಿ ತಿನ್ನುವುದರಿಂದ ಕ್ಯಾನ್ಸರ್ ಬರುತ್ತದೆಯೇ?

ಋತುಸ್ರಾವದ ಸಮಯದಲ್ಲಿ ಹೆಣ್ಣುಮಕ್ಕಳನ್ನು ಮೂಲೆಯಲ್ಲಿ ಏಕೆ ಕೂರಿಸುತ್ತಾರೆ?

ಹೆಣ್ಣು ಮಕ್ಕಳಲ್ಲಿ ಪ್ರಕೃತಿ ಸಹಜವಾಗಿ ತಿಂಗಳಿಗೊಮ್ಮೆ ಆಗುವ ಋತುಸ್ರಾವವನ್ನು ನಮ್ಮ ಪೂರ್ವಜರು ಚನ್ನಾಗಿ ಅರಿತಿದ್ದು, ಮುಟ್ಟು ಎನ್ನುವ ಮೂಲಕ ಅದಕ್ಕೊಂದು ಚಂದನೆಯ ಧಾರ್ಮಿಕ ಆಚಣೆಯನ್ನು ರೂಢಿಗೆ ತಂದಿದ್ದರು. ಮುಟ್ಟಿನ ಕುರಿತಾದ ಕುರಿತಾದ ವಸ್ತುನಿಷ್ಠ ಲೇಖನ ಇದೋ ನಿಮಗಾಗಿ… Read More ಋತುಸ್ರಾವದ ಸಮಯದಲ್ಲಿ ಹೆಣ್ಣುಮಕ್ಕಳನ್ನು ಮೂಲೆಯಲ್ಲಿ ಏಕೆ ಕೂರಿಸುತ್ತಾರೆ?

ತಿನ್ನೋ ಆಹಾರ, ಕುಡಿಯುವ ನೀರೇ ವಿಷವಾದರೇ?

ಅರೇ ಇದೇನಿದು ಇಂತಹ ಶೀರ್ಷಿಕೆ? ಎಂದು ಆಶ್ಚರ್ಯ ಪಡುವ ಮುನ್ನಾ ಈ ಲೇಖನವನ್ನು ಸ್ವಲ್ಪ ಸಂಪೂರ್ಣವಾಗಿ ಓದಿದರಲ್ಲಿ ಎಲ್ಲವೂ ಅರ್ಥವಾಗುತ್ತದೆ. ನಮ್ಮ ಹಿಂದಿನ ತಲಮಾರಿನವರಿಗೆ ಇಂದಿನಷ್ಟು ಸುಖ ಸಂಪತ್ತು ಇಲ್ಲದೇ ಇದ್ದರೂ, ಸರಿಯಾಗಿ ಮೂರು ಹೊತ್ತು ತಿನ್ನಲು ಇಲ್ಲದೇ ಇದ್ದರೂ, ಅವರೆಲ್ಲರೂ ಯಾವುದೇ ರೀತಿಯ ಅನಾರೋಗ್ಯವಿಲ್ಲದೇ, 80-100 ವರ್ಷಗಳ ಕಾಲ ಆರಾಮಾಗಿ ಜೀವಿಸಿದ್ದದ್ದನ್ನು ಕಂಡಿದ್ದೇವೆ ಮತ್ತು ಕೇಳಿದ್ದೇವೆ. ಆದರೆ ಇಂದು ಹೊಟ್ಟೆ ಬಟ್ಟೆಗೆ ಯಾವುದೇ ರೀತಿಯ ಸಮಸ್ಯೆಗಳು ಇಲ್ಲದೇ ಹೋದರೂ, 20-30 ವರ್ಷ ಆಗುವಷ್ಟರಲ್ಲೇ, ಅಧಿಕ ರಕ್ತದೊತ್ತಡ… Read More ತಿನ್ನೋ ಆಹಾರ, ಕುಡಿಯುವ ನೀರೇ ವಿಷವಾದರೇ?

ಜಾತಸ್ಯ ಮರಣಂ ಧೃವಂ

https://enantheeri.com/2023/06/09/gaurav_gandhi/

ಗುಜರಾತ್‌ ಮೂಲದ 41 ವರ್ಷದ, ತಮ್ಮ ಜೀವಿತಾವಧಿಯಲ್ಲಿ ಸುಮಾರು 16,000 ಹೃದಯ ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದಂತಹ ಖ್ಯಾತ ಹೃದಯತಜ್ಞ ಡಾ. ಗೌರವ್ ಗಾಂಧಿ ಅವರು ಮೊನ್ನೆ ಇದ್ದಕ್ಕಿದ್ದಂತೆಯೇ ಹೃದಯಾಘಾತದಿಂದ ಸಾವನ್ನಪ್ಪಿರುವುದು ನಿಜಕ್ಕೂ ಧಿಗ್ಭ್ರಮೆಯನ್ನು ಮೂಡಿಸುವಂತಿದೆ.

ಇತ್ತೀಚೆಗೆ ಸಣ್ಣ ವಯಸ್ಸಿನರೂ ಸಹಾ ಹೃದಯಾಘಾತ/ಹೃದಯಸ್ಥಂಭನದಿಂದಾಗಿ ನಿಧನ ಹೊಂದುತ್ತಿರುವುದರ ಹಿಂದಿರುವ ಕಾರಣಗಳೇನು ಮತ್ತು ಅದನ್ನು ಹೇಗೆ ತಡೆಗಟ್ಟಬಹುದು ಎಂಬುದರ ವಿವರಗಳು ಇದೋ ನಿಮಗಾಗಿ… Read More ಜಾತಸ್ಯ ಮರಣಂ ಧೃವಂ

ಶತಾಯುಷಿ V/S ಅಲ್ಪಾಯುಷಿ

ಈ ತಿಂಗಳಿನ ಸಂಪದ ಸಾಲು ಪತ್ರಿಕೆಯಲ್ಲಿ ಪ್ರಕಟವಾಗಿರುವ, ಶತಾಯುಷಿಗಳಾಗಿದ್ದ ನಮ್ಮ ಪೂರ್ವಜರ ವಂಶವಾಹಿನಿಯಲ್ಲಿ ನಾವೇಕೇ ಅಲ್ಪಾಯುಷಿಗಳಾಗುತ್ತಿದ್ದೇವೆ ಮತ್ತು ಮತ್ತೆ ಆರೋಗ್ಯಪೂರ್ಣ ದೀರ್ಘಾಯುಷ್ಯವನ್ನು ಹೇಗೆ ಪಡೆದುಕೊಳ್ಳಬಹುದು ಎಂಬೆಲ್ಲಾ ಕುರಿತಾದ, ಆಬಾಲವೃದ್ಧರಾದಿಯಾಗಿ ಎಲ್ಲರೂ ಓದಲೇ ತಿಳಿಯಲೇ ಬೇಕಾದ ಮಾಹಿತಿ ಇದೋ ನಿಮಗಾಗಿ… Read More ಶತಾಯುಷಿ V/S ಅಲ್ಪಾಯುಷಿ

ಡಾ. ವಿಜಯಲಕ್ಷ್ಮಿ ದೇಶಮಾನೆ

ಗುಲ್ಬರ್ಗಾದ ಕೊಳಗೇರಿಯ ದಲಿತ ವರ್ಗದ ತರಕಾರಿ ಮಾರುತ್ತಿದ್ದ ಹೆಣ್ಣುಮಗಳು, ಕಿತ್ತು ತಿನ್ನುವ ಬಡತನ, ಅಪಮಾನ, ಸಾಮಾಜಿಕ ಅಸಡ್ಡೆಯ ನಡುವೆಯೂ ಈ ದೇಶದ ಹೆಸರಾಂತ ಕ್ಯಾನ್ಸರ್ ತಜ್ಞೆಯಾಗಿ, ಜನ ಸೇವೆಯೇ ಜನಾರ್ದನ ಸೇವೆ ಎಂದು ನೊಂದವರ ಕಂಬನಿ ಒರೆಸುವುದೇ ದೈವಾರಾಧನೆ ಎಂದು ತಿಳಿದು ಸಮಾಜಕ್ಕಾಗಿಯೇ ತಮ್ಮ ಬದುಕನ್ನೇ ಮೀಸಲಾಗಿಟ್ಟಿರುವ, ರೋಗಿಗಳ ಪಾಲಿನ ಸಾಕ್ಷಾತ್ ಧನ್ವಂತರಿಯಾಗಿರುವ ನಮ್ಮ ಹೆಮ್ಮೆಯ ಡಾ. ವಿಜಯಲಕ್ಷ್ಮಿ ದೇಶಮಾನೆಯವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಡಾ. ವಿಜಯಲಕ್ಷ್ಮಿ ದೇಶಮಾನೆ