ಅವಕಾಶವಾದಿಗಳು

ಕರ್ನಾಟಕದ ರಾಜಾಧಾನಿಯಾದ ಬೆಂಗಳೂರು ಒಂದು ರೀತಿಯ ಮಾಯಾನಗರಿಯೇ ಹೌದು. ಭಾರತದ ವಾಣಿಜ್ಯ ನಗರಿ ಮುಂಬೈ ಮತ್ತು ರಾಜಧಾನಿ ದೆಹಲಿಯ ನಂತರದ ಶ್ರೀಮಂತ ನಗರಗಳಲ್ಲಿ ಮೂರನೇ ಸ್ಥಾನ ಪಡೆದಿದೆ. ಹಾಗಾಗೀಯೇ ಪ್ರತೀ ದಿನ ಈ ನಗರಕ್ಕೆ ದೇಶ ವಿದೇಶಗಳಿಂದ ಲಕ್ಷಾಂತರ ಮಂದಿ ತಮ್ಮ ಜೀವನೋಪಾಯಕ್ಕಾಗಿ ಬದುಕು ಕಟ್ಟಿಕೊಳ್ಳುವುದಕ್ಕಾಗಿ ಬಂದು ಹೋಗುತ್ತಿದ್ದರೂ, ಯಾರನ್ನೂ ದ್ವೇಷಿಸದೇ, ಎಲ್ಲರನ್ನೂ ಕೈಬೀಸಿ ಕರೆಯುವ ಏಕೈಕ ನಗರ ಎಂಬ ಹೆಗ್ಗಳಿಕೆಯೂ ನಮ್ಮ ಬೆಂಗಳೂರಿನದ್ದೇ. ಕ್ರಿ.ಶ. 1573ರಲ್ಲಿ ಯಲಹಂಕ ನಾಡಪ್ರಭು ಕೆಂಪೇಗೌಡರಿಂದ ನಿರ್ಮಿತವಾದ ಈ ಬೆಂಗಳೂರು ನಗರ… Read More ಅವಕಾಶವಾದಿಗಳು

ಸಂತೋಷ್ ಬಿ ಎಲ್, ಸಂಘಟನಾ ಚತುರ

ನೆನ್ನೆ ಸಂಜೆ ಕರ್ನಾಟಕ ಜನಸಂವಾದ ಸಮಾರೋಪ ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಬಿ. ಎಲ್. ಸಂತೋಷ್ ಸಭೆಯನ್ನು ಉದ್ದೇಶಿಸಿ ಮೋದಿಯವರ ಕಳೆದ ಆರು ವರ್ಷಗಳ ಆಡಳಿತ ಅವರ ವಿದೇಶಾಂಗ ನೀತಿಗಳು ಮತ್ತು ಇತ್ತೀಚಿನ ಪಾಕ್, ಜೀನಾ ಆಕ್ರಮಣದ ಕುರಿತಂತೆ ಮೋದಿಯವರ ನಿರ್ಧಾರಗಳು,ಇಂತಹ ವಿಪತ್ತಿನಲ್ಲಿ ದೇಶದ ಪರವಾಗಿ ನಿಲ್ಲದೇ ಶತ್ರುಗಳಿಗೆ ಪರೋಕ್ಷವಾಗಿ ಸಹಕರಿಸುತ್ತಿರುವ ಹಿತಶತ್ರುಗಳನ್ನು ಎಳೆ ಎಳೆಯಾಗಿ ಜಗ್ಗಾಡುತ್ತಾ ಹಿಗ್ಗಾ ಮುಗ್ಗಿ ನಯವಾಗಿಯೇ ಜಾಡಿಸಿ ಮಾತನಾಡುತ್ತಿದ್ದದ್ದನು ಮನೆಯಲ್ಲಿಯೇ ಕುಳಿತು online ಮೂಲಕ ನೋಡುತ್ತಿದ್ದಾಗ ಮನಸ್ಸಿನಲ್ಲಿ… Read More ಸಂತೋಷ್ ಬಿ ಎಲ್, ಸಂಘಟನಾ ಚತುರ

ದೇಶದ ಆಂತರಿಕ ಹಿತಶತ್ರುಗಳು

ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಬ್ರಿಟೀಷರ ವಿರುದ್ಧ ಭಾರತೀಯರೆಲ್ಲರೂ ಉಗ್ರವಾಗಿ ತೀವ್ರತರವಾದ ಹೋರಾಟ ಮಾಡುತ್ತಿದ್ದರೆ, ಅಲ್ಲೊಬ್ಬ ಸೋಗಲಾಡಿ ಹೋರಾಟಗಾರ, ನೀನು ಹೊಡೆದಹಾಗೆ ಮಾಡು ನಾನು ಅತ್ತಹಾಗೆ ಮಾಡುತ್ತೀನಿ ಎಂದು ಸೆರೆಮನೆಗೆ ಹೋಗಿ ಅಲ್ಲಿನ ಉದ್ಯಾನಗಳಲ್ಲಿ ವಿರಹಿಸಿಸುತ್ತಾ ಐಶಾರಾಮ್ಯ ಜೀವನವನ್ನು ನಡೆಸಿ, ಸ್ವಾತಂತ್ರ್ಯ ಬಂದ ನಂತರ, ಎಲ್ಲಾ ಹೋರಾಟಗಾರ ನಿಲುವಿಗೆ ವಿರುದ್ಧವಾಗಿ ಮಹಾತ್ಮಾಗಾಂಧಿಯವರ ಮೇಲೆ ಒತ್ತಡ ಹಾಕಿ ಹಿಂಬಾಗಿಲಿನಿನಿಂದ ಪ್ರಧಾನ ಮಂತ್ರಿ ಪಟ್ಟಕ್ಕೇರಿದ ನೆಹರು ಅವರ ಇತಿಹಾಸ ಎಲ್ಲರಿಗೂ ತಿಳಿದ ವಿಷಯವಷ್ಟೇ. ಕಷ್ಟ ಪಟ್ಟು ಗೆದ್ದಲು ಹುಳುಗಳು ಕಟ್ಟಿದ ಹುತ್ತದೊಳಗೆ… Read More ದೇಶದ ಆಂತರಿಕ ಹಿತಶತ್ರುಗಳು

ಪ್ರಧಾನಿಗಳ ಇಂದಿನ ಲೇಹ್ ಭೇಟಿಯ ಹಿಂದಿರುವ ಕೂತಹಲಕಾರಿ ಸಂಗತಿಗಳು

ಕಳೆದ ತಿಂಗಳು ಜೂನ್ 15ದಂದು ಭಾರತ ಮತ್ತು ಚೀನಾ ಸೈನಿಕರ ನಡುವೆ ಲಢಾಕ್ಕಿನ ಗಾಲ್ವಾನ್ ಎಂಬ ಪ್ರದೇಶದಲ್ಲಿ ಪರಸ್ಪರ ಘರ್ಷಣೆ ನಡೆದಿದ್ದು, ಈ ಘರ್ಷಣೆಯಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದರೆ, ಅದಕ್ಕೆ ಪ್ರತ್ಯುತ್ತರವಾಗಿ ಚೀನಾದೇಶದ 40ಕ್ಕೂ ಅಧಿಕ ಸೈನಿಯರನ್ನು ಯಮಪುರಿಗೆ ಅಟ್ಟಿದದ್ದು ಈಗ ಇತಿಹಾಸವಾಗಿದೆ. ಈ ಸಂಘರ್ಷದ ಇಡೀ ವಿಶ್ವವೇ ಏಷ್ಯಾದಲ್ಲಿ ಶಾಂತಿ ಸೌಹಾರ್ಧತೆಯನ್ನು ಕಾಪಾಡಿಕೊಂಡು ಬರಲು ಸಲಹೆ ನೀಡುತ್ತಿದ್ದರೆ, ಭಾರತ ಮತ್ತು ಚೀನಾ ದೇಶಗಳ ವಿದೇಶಾಂಗ ಸಚಿವರುಗಳು ಮತ್ತು ರಾಜತಾತಂತ್ರಿಕ ಅಧಿಕಾರಿಗಳ ನಡುವೆ ಗಡಿಯಲ್ಲಿ ಶಾಂತಿಯನ್ನು… Read More ಪ್ರಧಾನಿಗಳ ಇಂದಿನ ಲೇಹ್ ಭೇಟಿಯ ಹಿಂದಿರುವ ಕೂತಹಲಕಾರಿ ಸಂಗತಿಗಳು

ದೇವಾಲಯಗಳು ಶ್ರದ್ಧಾ ಕೇಂದ್ರಗಳೋ ಇಲ್ಲವೇ ಪ್ರವಾಸೀ ತಾಣಗಳೋ?

ಇವತ್ತು ಬೆಳ್ಳಂಬೆಳಿಗ್ಗೆ ಎದ್ದಕೂಡಲೇ ಆತ್ಮೀಯ ಮಿತ್ರರಾದ ಶ್ರೀ ಅಜಯ್ ಶರ್ಮಾರವರು ದೇವಾಲಯದ ಜೀರ್ಣೋದ್ಧಾರದ ನೆಪದಲ್ಲಿ ಪ್ರಕೃತಿಯ ಮೇಲೆ ಎಗ್ಗಿಲ್ಲದೇ ನಡೆಸುತ್ತಿರುವ ಅತ್ಯಾಚಾರಗಳ ಬಗ್ಗೆ ತೀವ್ರವಾಗಿ ನೊಂದು ಬರೆದ ಲೇಖನ ಓದಿ ನಿಜಕ್ಕೂ ಮನಸ್ಸಿಗೆ ಬಹಳ ಖೇದವುಂಟಾಗಿ ನಮ್ಮ ಪೂರ್ವಜರು ದೇವಾಲಯಗಳನ್ನು ಏಕೆ ಕಟ್ಟುತ್ತಿದ್ದರು? ಮತ್ತು ನಾವುಗಳು ದೇವಾಲಯಕ್ಕೇ ಹೋಗಿ ದೇವರ ದರ್ಶನವನ್ನೇಕೆ ಪಡೆಯಬೇಕು? ಎಂಬದರ ಕುರಿತು ನನಗೆ ತಿಳಿದಿರುವಷ್ಟರ ಮಟ್ಟಿಗೆ ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ. ನಮ್ಮ ಸನಾತನ ಹಿಂದೂ ಧರ್ಮದಲ್ಲಿ ದೇವರಿಗೆ ಮಹತ್ವವನ್ನು ಕೊಟ್ಟಿರುವ ಕಾರಣ… Read More ದೇವಾಲಯಗಳು ಶ್ರದ್ಧಾ ಕೇಂದ್ರಗಳೋ ಇಲ್ಲವೇ ಪ್ರವಾಸೀ ತಾಣಗಳೋ?

ತಿರುನಲ್ವೇಲಿ ಹಲ್ವಾ ಹರಿಸಿಂಗ್

ಐತಿಹಾಸಿಕವಾಗಿ ತಮಿಳುನಾಡಿನ ತಿರುನೆಲ್ವೇಲಿ ಒಂದು ಪ್ರಾಚೀನ ನಗರ. ಸುಮಾರು 2000 ಕ್ಕೂ ಹೆಚ್ಚು ವರ್ಷಗಳಷ್ಟು ಹಳೆಯ ಇತಿಹಾಸ ಈ ನಗರಕ್ಕಿದೆ. ತಾಮಿರಭರಣಿ ನದಿಯ ತಟದಲ್ಲಿರುವ ಈ ಪಟ್ಟಣ ಚೆನ್ನೈ, ಕೊಯಮತ್ತೂರು, ಮಧುರೈ, ತಿರುಚ್ಚಿ ಮತ್ತು ಸೇಲಂ ಹೊರತು ಪಡಿಸಿದರೆ ತಮಿಳು ನಾಡಿನ ಆರನೇ ಅತಿದೊಡ್ಡ ಪುರಸಭೆ ಹೊಂದಿರುವ ನಗರವಾಗಿದೆ. ಇದನ್ನು ಆರಂಭಿಕ ಕಾಲದಲ್ಲಿ ಪಾಂಡ್ಯರು, ಆನಂತರ ಚೋಳರು ಪುನಃ ಪಾಂಡ್ಯರ ಆಳ್ವಿಕೆ ಕಂಡು ಕೆಲ ಕಾಲ ನಮ್ಮ ವಿಜಯನಗರ ಸಾಮ್ರಾಜ್ಯದ ಭಾಗವಾಗಿತ್ತು ಎನ್ನುವುದು ಗಮನಾರ್ಹವಾದ ಅಂಶವಾಗಿದೆ. ಬ್ರಿಟಿಷರು… Read More ತಿರುನಲ್ವೇಲಿ ಹಲ್ವಾ ಹರಿಸಿಂಗ್

ನಾಟಿ ವೈದ್ಯ ಶ್ರೀ ನಾರಾಯಣಮೂರ್ತಿ

ಕಹಿಕಷಾಯವದೆಂದು, ಕಾರಚೂರ್ಣಮಾದೆಂದು| ಸಿಹಿಯ ಲೇಹ್ಯಮದೆಂದು ನಿನಗೆ ಹಿತವಹುದೋ|| ವಿಹಿತ ಗೈವನು ವೈದ್ಯ ನೀನಲ್ಲ, ರೋಗಿ ನೀಂ| ಗ್ರಹಿಸು ವಿಧಿಯೌಷದವ – ಮರುಳ ಮುನಿಯ|| ಎಂದು ಡಿ.ವಿ ಗುಂಡಪ್ಪನವರು ತಮ್ಮ ಮಂಕುತಿಮ್ಮನ ಕಗ್ಗ ಭಾಗ-೨ ಅಥವಾ ಮಂಕುತಿಮ್ಮನ ತಮ್ಮ ಎಂದು ಕರೆದ ಗ್ರಂಥದಲ್ಲಿ ಬರೆದಿದ್ದಾರೆ. ಈ ಸಮಯದಲ್ಲಿ ವೈದ್ಯರಿಗೆ ಸಂಬಂಧಿಸಿದ ಪದ್ಯವನ್ನೇಕೆ ಹೇಳುತ್ತಿದ್ದೇನೆ ಎಂದು ಯೋಚಿಸುತ್ತಿದ್ದೀರಾ? ಹೌದು ಕಾರಣವಿದೆ. ಖ್ಯಾತ ಆಯುರ್ವೇದ ಪಂಡಿತ ಕ್ಯಾನ್ಸರ್ ಅಂತಹ ಮಾರಣಾಂತಿಕ ರೋಗಕ್ಕೆ ರಾಮಬಾಣದಂತಹ ಔಷದವನ್ನು ನೀಡುತ್ತಿದ್ದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ… Read More ನಾಟಿ ವೈದ್ಯ ಶ್ರೀ ನಾರಾಯಣಮೂರ್ತಿ

ಬೇಲಿಯೇ ಎದ್ದು ಹೊಲವನ್ನು ಮೇಯ್ದರೇ ಕಾಯುವವರು ಯಾರು?

ರಾಜ್ಯಾದ್ಯಂತ ಲಾಕ್ ಡೌನ್ ಸಡಿಲಗೊಳಿಸಿದ ಕೂಡಲೇ ಕೂರೋನ ಮಹಾಮಾರಿ ತಾಂಡವವಾಡುತ್ತಾ ಹತ್ತಾರು ಜನರನ್ನು ಬಲಿತೆಗೆದುಕೊಂಡದ್ದನ್ನು ನೋಡುತ್ತಲೇ ಭಯಭೀತರಾಗಿರುವ ರಾಜ್ಯದ ಜನತೆಗೆ ಸದ್ದಿಲ್ಲದೇ, ನೆನ್ನೆ ಸಂಜೆ ಬಹುಕೋಟಿ ಹಗರಣವಾದ ಐಎಂಎ ಪ್ರಕರಣದಲ್ಲಿ ಆರೋಪಿಯಾಗಿ, ಜೈಲು ಶಿಕ್ಷೆ ಅನುಭವಿಸಿದ್ದ ಹಿರಿಯ ಐಎಎಸ್ ಅಧಿಕಾರಿ ವಿಜಯ್ ಶಂಕರ್ ಅವರು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು‌ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿಯುತ್ತಲೇ ಒಂದು ರೀತಿಯ ದುಃಖ, ಸಂತಾಪ ಸೂಚಿಸುತ್ತಿದ್ದರೆ,ಮತ್ತೆ ಹಲವರು ಆಕ್ರೋಶದ ನಿಟ್ಟಿಸಿರು ಬಿಡುತ್ತಿದ್ದಾರೆ. 1992ರ ಬ್ಯಾಚ್‌ ಕೆಎಎಸ್‌ ಅಧಿಕಾರಿಯಾಗಿ ಸರ್ಕಾರಿ ಸೇವೆ… Read More ಬೇಲಿಯೇ ಎದ್ದು ಹೊಲವನ್ನು ಮೇಯ್ದರೇ ಕಾಯುವವರು ಯಾರು?

ಭಾರತೀಯರು ಚೀನೀ ಉತ್ಪನ್ನಗಳನ್ನು ಏಕೆ ಮತ್ತು ಹೇಗೆ ಬಹಿಷ್ಕರಿಸಬೇಕು

ಮೊನ್ನೆ ಸುವರ್ಣ ನ್ಯೂಸ್ ಚಾನೆಲ್ಲಿನ ಅಜಿತ್ ಹನುಮಕ್ಕನವರ್ ಅವರು ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವುದಕ್ಕೆ ಎಲ್ಲರೂ ಕರೆ ನೀಡುತ್ತಿದ್ದಾರಲ್ಲಾ ಅದಕ್ಕೆ ನಿಮ್ಮ ಅಭಿಪ್ರಾಯವೇನು ಎಂದು ಸೋಕಾಲ್ಡ್ ಬುದ್ಧಿವಂತ(??) ನಟ ಎಂದು ಕೊಂಡಿರುವ ಉಪೇಂದ್ರ ಅವರನ್ನು ಕೇಳಿದಾಗ, ಯಥಾ ಪ್ರಕಾರ ತಮ್ಮ ಸಿನಿಮಾಗಳ ಸಂಭಾಷಣೆಯಂತೆ ಇದೆಲ್ಲಾ ಯಾರೋ ದಡ್ಡರು ಆಡುವ ಮಾತು ನಾವುಗಳು ಚೀನೀ ವಸ್ತುಗಳನ್ನು ಹಾಗೆಲ್ಲಾ ಬಹಿಷ್ಕಾರ ಹಾಕಲು ಸಾಧ್ಯವಿಲ್ಲ. ಇದೆಲ್ಲಾ ಭ್ರಷ್ಟರಾಜಕಾರಣಿಗಳ ಹುನ್ನಾರ. ಅದಕ್ಕಾಗಿ ನಮ್ಮ ಪ್ರಜಾಕೀಯದ ವ್ಯವಸ್ಥೆ ಬರಬೇಕೆಂದು ಓತಪ್ರೋತಾವಾಗಿ ಕಾರ್ಯಸಾಧುವಾಗದ ಮತ್ತು ಕೇಳಿದ ಪ್ರಶ್ನೆಗೆ… Read More ಭಾರತೀಯರು ಚೀನೀ ಉತ್ಪನ್ನಗಳನ್ನು ಏಕೆ ಮತ್ತು ಹೇಗೆ ಬಹಿಷ್ಕರಿಸಬೇಕು