ನಮ್ಮ ದೇಶದ ಸ್ವಾತಂತ್ಯ್ರ ಒಂದು ಪಕ್ಷದ ಭಿಕ್ಷೆಯೇ?

ಇತ್ತೀಚೆಗೆ  ಪಶ್ಚಿಮ ಬಂಗಳದ  ಕಾಂಗ್ರೇಸ್ ನಾಯಕನೊಬ್ಬ ಭಾರತ್ ಮಾತಾ ಕೀ ಜೈ ಎನ್ನುವುದು ಕಾಂಗ್ರೇಸ್ ಸ್ವತ್ತು ಇದನ್ನು ಬೇರೆಯವರಾರು ಹೇಳಬಾರದು ಎಂಬ ಉದ್ದಟತನವನ್ನು ತೋರಿದರೆ, ಅವರ ಪಕ್ಷದ ರಾಷ್ಟ್ರೀಯ ಆಧ್ಯಕ್ಷರು, ಲೋಕಸಭೆಯ ವಿರೋಧ ಪಕ್ಷದ ನಾಯಕರಿಂದ ಹಿಡಿದು,  ಮಂಡ್ಯಾದ ಪದ್ಮಾವತಿ ರಮ್ಯಾವರೆಗೂ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟಿದ್ದು ಕಾಂಗ್ರೇಸ್ ಪಕ್ಷ ಮಾತ್ರ.  ಸ್ವಾತಂತ್ಯ್ರ  ಹೋರಾಟ ಸಂದರ್ಭದಲ್ಲಿ ಇತರೇ ಪಕ್ಷದವರ ಕಾಣಿಕೆ ಇಲ್ಲ ಎಂಬ ಹಸೀ ಸುಳ್ಳನೇ  ಬಾರಿ ಬಾರಿ ಹೇಳುತ್ತಾ  ಅದನ್ನೇ ನಿಜವಾಗಿಸಲು ಹೊರಟಿರುವುದು ನಿಜಕ್ಕೂ ಆಘಾತಕಾರಿಯಾಗಿದೆ.… Read More ನಮ್ಮ ದೇಶದ ಸ್ವಾತಂತ್ಯ್ರ ಒಂದು ಪಕ್ಷದ ಭಿಕ್ಷೆಯೇ?

ಹರ್ಷದ ಕೂಳಿಗೆ ವರ್ಷದ ಕೂಳನ್ನು ಕಳೆದುಕೊಳ್ಳದಿರೋಣ

ಅದೊಂದು ರಾಜ್ಯ. ಅಲ್ಲಿಯ ರಾಜ ಅತ್ಯಂತ ಪ್ರಜಾಸ್ನೇಹಿ. ಆ ರಾಜನ ಆಳ್ವಿಕೆಯಲ್ಲಿ ಪ್ರಜೆಗಳೆಲ್ಲಾ ಸುಭಿಕ್ಷದಿಂದಿದ್ದರು. ಅದೊಂದು ಹಾಗೇ ತನ್ನ ಮಂತ್ರಿಯೊಂದಿಗೆ ಸಾಧಾರಣವಾಗಿ ಮಾತನಾಡುತ್ತಾ, ನನ್ನ ರಾಜ್ಯದ ಪ್ರಜೆಗಳೆಲ್ಲಾ ನನ್ನ ಆಳ್ವಿಕೆಯಿಂದ ಸುಖಃವಾಗಿದ್ದಾರೆ. ಅವರಿಗೆ ನನ್ನ ಮೇಲೆ ಅಪಾರ ಆಭಿಮಾನವಿದೆ ಮತ್ತು ನನ್ನ ಸಹಾಯಕ್ಕೆ ಬರಲು ಸದಾ ಸಿದ್ಧರಿರುತ್ತಾರೆ ಮತ್ತು ನಾನು ಹೇಳಿದ್ದನ್ನು ಶಿರಸಾ ವಹಿಸಿ ಪಾಲಿಸುತ್ತಾರೆ ಅಲ್ಲವೇ ಎಂದು ಹೇಳಿದನು. ಅದಕ್ಕೊಪ್ಪದ ಮಂತ್ರಿ ರಾಜಾ, ನಿಮ್ಮ ಮೊದಲ ಎರಡು ವಾಕ್ಯಗಳು ನಿಜ. ಅದನ್ನು ನಾನೂ ಒಪ್ಪುತ್ತೇನೆ. ಆದರೆ… Read More ಹರ್ಷದ ಕೂಳಿಗೆ ವರ್ಷದ ಕೂಳನ್ನು ಕಳೆದುಕೊಳ್ಳದಿರೋಣ

ಬುದ್ಧಿವಂತ ರೈತ

ಅದೊ೦ದು ಪುಟ್ಟ ಹಳ್ಳಿ, ಅಲ್ಲೊಬ್ಬ ರೈತ ತನ್ನ ಪಾಲಿಗೆ ಬಂದಿದ್ದ ಜಮೀನಿನಲ್ಲಿ ಬೇಸಾಯ ಮಾಡುತ್ತಾ ಜೊತೆ ಜೊತೆಗೆ ಹೈನುಗಾರಿಕೆ ಮಾಡುತ್ತಾ ತನ್ನ ಸಂಸಾರದೊಂದಿಗೆ ಸುಖ:ದಿಂದಿದ್ದನು. ಅವನ ಬಳಿ ಇದ್ದ ಒಂದು ದೇಸೀ ಹಸು ದಷ್ಟ ಪುಷ್ಟವಾಗಿದ್ದು ಪ್ರತಿದಿನ ಬೆಳಿಗ್ಗೆ‍ ಸಂಜೆ ಸುಮಾರು ಎಂಟರಿಂದ ಹತ್ತು ಲೀಟರ್ ಹಾಲನ್ನು ಕೊಡುತ್ತಿದ್ದರಿಂದ ಆ ಹಸು ಆ ರೈತನ ಅಚ್ಚುಮೆಚ್ಚಾಗಿತ್ತು. ಒಂದು ದಿನ ಅಚಾನಕ್ಕಾಗಿ ಆ ಹಸುವಿಗೆ ಕಾಯಿಲೆ ಬಂದು, ಇದ್ದಕ್ಕಿದ್ದಂತೆ ಹಾಲಿನ ಪ್ರಮಾಣದಲ್ಲಿ ಕಡಿಮೆಯಾಗಿ, ಬರಬರುತ್ತಾ ಹಸು ಬಡಕಲಾಗ ತೊಡಗಿತು.… Read More ಬುದ್ಧಿವಂತ ರೈತ

ತೈಲ ಬೆಲೆ

ದೇಶದ ಪ್ರಸಕ್ತ ವಿದ್ಯಮಾನದಲ್ಲಿ ಬಹು ಚರ್ಚಿತವಾಗುತ್ತಿರುವುದು ಎರಡು ವಿಷಯಗಳು. ಒಂದು ರಫೈಲ್ ಯುದ್ಧ ವಿಮಾನಗಳ ಖರೀದಿಯ ಹಗರಣ ಮತ್ತೊಂದು ತೈಲ ಬೆಲೆ ಏರಿಕೆ.  ರಫೈಲ್ ಪ್ರಕರಣವು ಕೇವಲ ಆರೋಪಕ್ಕಷ್ಟೇ ಸೀಮೀತವಾಗಿ ಯಾವುದೇ ಸಾಕ್ಷಾಧಾರಗಳನ್ನು ಒದಗಿಸದೆ , ಪ್ರತೀಬಾರಿ ಒಂದೊಂದು ಅಂಕಿ ಅಂಶಗಳನ್ನು ಒದಗಿಸುತ್ತಾ ಹಗರಣವನ್ನು ಕೇವಲ ಜನ ಮಾನಸದಲ್ಲಿ ಮಾತ್ರ  ಸಾಬೀತು ಮಾಡಲು ಪರಿತಪಿಸುತ್ತಿರುವ ಕಾರಣ ಹೆಚ್ಚಿನ ಗಮನ ಹರಿಸುವುದು ಕೇವಲ ಸಮಯ ವ್ಯರ್ಥವಷ್ಟೇ. ಆದರೆ ಮತ್ತೊಂದು ಸಮಸ್ಯೆಯಾದ ತೈಲ ಬೆಲೆ ಏರಿಕೆ ನಿಜಕ್ಕೂ ಕಳವಳಕಾರಿ ಮತ್ತು… Read More ತೈಲ ಬೆಲೆ

ವೈಟ್ ಟಾಪಿಂಗ್ ಕರಾಳ ಅನುಭವ

ಆಡು ಮುಟ್ಟದ ಸೊಪ್ಪಿಲ್ಲಾ  ವೈಟ್ ಟಾಪಿಂಗ್ ಹೆಸರನ್ನು ಕೇಳದ ಬೆಂಗಳೂರಿಗನಿಲ್ಲ ಎಂದರೆ ಅತಿಶಯೋಕ್ತಿಯೇನಲ್ಲ. ಒಂದು ವರ್ಷದ ಹಿಂದೆ ವಿಧಾನ ಸಭೆಯ ಚುನಾವಣೆಗೆ ಮುಂಚೆ, ಬೆಂಗಳೂರಿನ ಸ್ಟೀಲ್ ಬ್ರಿಡ್ಜ್ ಪ್ರಸ್ತಾವನೆ ಮುರಿದುಬಿದ್ದ ನಂತರ ಇದ್ದಕ್ಕಿಂದ್ದಂತೆಯೇ ಬೆಂಗಳೂರಿನ ಜನರು  ಅದರಲ್ಲೂ ವಾಹನ ಸವಾರರನ್ನು ಬೆಚ್ಚಿ ಬೀಳಿಸುವ ಪದವೇ ವೈಟ್ ಟಾಪಿಂಗ್. ಅಷ್ಟೋ ಇಷ್ಟು ಚೆನ್ನಾಗಿಯೇ ಇದ್ದ ರಸ್ತೆಗಳಲ್ಲಿ ಏಕಾ ಏಕಿ ಭಾರಿ ಯಂತ್ರಗಳನ್ನು ತಂದಿರಿಸಿ ರಸ್ತೆಯನ್ನು ಅರ್ಧ ಭಾಗಗಳಾಗಿ ವಿಂಗಡಿಸಿ, ಇದ್ದ ಡಾಂಬರನ್ನೂ ಅಗೆದು ಹಾಕಿ ಮುದುಕಿಗೆ ಅಲಂಕಾರ ಮಾಡುವ… Read More ವೈಟ್ ಟಾಪಿಂಗ್ ಕರಾಳ ಅನುಭವ

ಭಾರತ್ ಬಂದ್

ಸಾವಿರಾರು ವರ್ಷಗಳಿಂದ ಪ್ರಪಂಚಾದ್ಯಂತ ಪ್ರಜೆಗಳು ತಮ್ಮ ಪ್ರದೇಶದ ಹವಾಮಾನ ತಕ್ಕಂತೆ ಮತ್ತು ಅವರ ಅಹಾರ ಪದ್ದತಿಗೆ ಅನುಗುಣವಾಗಿ ತಮಗೆ ಅಗತ್ಯವಿದ್ದಷ್ಟು ಆಹಾರ ಪದಾರ್ಥಗಳನ್ನು ಕೃಷಿಯಾಧಾರಿತವಾಗಿ ಬೆಳೆಯುತ್ತಾ ತಮ್ಮಲ್ಲಿ ಹೆಚ್ಚಾಗಿದ್ದ ಆಹಾರಗಳನ್ನು ಇತರೊಂದಿಗೆ ಪರಸ್ಪರ ಕೊಡು ಕೊಳ್ಳುವಿಕೆಯ ಮೂಲಕ ಹಂಚಿಕೊಳ್ಳುತ್ತಾ ನೆಮ್ಮದಿಯ ಜೀವನ ಮಾಡುತ್ತಿದ್ದರು. ಯಾವಾಗ ಜನರ ಆಸೆಗಳು ಹೆಚ್ಚಾಯಿತೂ ಅಂದಿನಿಂದ ಪ್ರಭಲವಾಗಿದ್ದವರು ದುರ್ಬಲ ಮೇಲೆ ಸವಾರಿ ಮಾಡುತ್ತಾ ಊಳಿಗಮಾನ್ಯ ಪದ್ದತಿ ಮತ್ತು ಜಮೀನ್ದಾರಿ ಪದ್ದತಿಗಳು ಆರಂಭವಾದವು. ನೈಸರ್ಗಿಕ ಕೃಷಿ ಪದ್ದತಿಯ ಬೇಸಾಯದಿಂದ ಹೆಚ್ಚಿನ ಇಳುವರಿ ದೊರಕದ ನೆಪವೊಡ್ಡಿ… Read More ಭಾರತ್ ಬಂದ್

ಭಾರತದ ಉತ್ತಮ ಭವಿಷ್ಯಕ್ಕಾಗಿ ಮೋದಿ ಮತ್ತೊಮ್ಮೆ

ನೀವೇನೂ ಮೋದಿ ಗೆಲ್ಬೇಕು ಅಂತಿರಾ ಆದ್ರೆ ನಮ್ಮ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಿಂತ ಬೇರೆ ಪಕ್ಷದ ಅಭ್ಯರ್ಥಿ ಉತ್ತಮವಾಗಿ ಕೆಲಸ ಮಾಡ್ತಾನೆ ಏನ್ ಮಾಡೋದು ? ಸದ್ಯಕ್ಕೆ ಬಹುತೇಕರು ಕೇಳೊ ಪ್ರಶ್ನೆ ಇದು, ಸಣ್ಣದಾಗಿ ಒಂದ್ ರೌಂಡ್ ಪುರಾಣ ಸುತ್ಕೊಂಡ್ ಬರೋಣ, ಕುಂತಿ ಮಾಡಿದ ತಪ್ಪಿಗೆ ಕರ್ಣನ ಜನನವಾಯ್ತು, ಆಮೇಲೆ ಕೀಳು ಜಾತಿಯಲ್ಲಿ ಬೆಳೆದವ ಎಂಬ ಕಾರಣಕ್ಕೆ ದ್ರೋಣರು ಕರ್ಣನಿಗೆ ವಿದ್ಯೆ ಕಲಿಸಲಿಲ್ಲ, ತಾನು ಬ್ರಾಹ್ಮಣ ಅಂತ ಸುಳ್ಳು ಹೇಳಿ ಕ್ಷತ್ರಿಯರ ಕಟು ವಿರೋಧಿ ಪರಶುರಾಮರ ಬಳಿ ವಿದ್ಯೆ… Read More ಭಾರತದ ಉತ್ತಮ ಭವಿಷ್ಯಕ್ಕಾಗಿ ಮೋದಿ ಮತ್ತೊಮ್ಮೆ

ಮೌನವೇ ಪರಿಣಾಮಕಾರಿ ಅಸ್ತ್ರ

ಅಂದೊಂದು ದೊಡ್ಡ ಕಾಡು. ಅಲ್ಲಿ ಅನೇಕ ಬಗೆ ಬಗೆಯ ಗಿಡ ಮರಗಳು ನಾನಾ ರೀತಿಯ ಕಾಡು ಪ್ರಾಣಿಗಳಿಗೆ ಮತ್ತು ಪಕ್ಷಿಗಳಿಗೆ ಆಶ್ರಯತಾಣವಾಗಿತ್ತು. ಎಲ್ಲಾ ಪ್ರಾಣಿ ಪಕ್ಷಿಗಳು ಸುಖಃದಿಂದ ನೆಮ್ಮದಿಯಿಂದ ತಮ್ಮ ಜೀವನವನ್ನು ನಡೆಸುತ್ತಿದ್ದವಾದರೂ ಅಗಾಗ ಅವುಗಳಿಗೆ ಪಕ್ಕದ ಊರಿನ ಬೇಟೆಗಾರಿಂದ ಸದಾ ತೊಂದರೆಯಾಗುತ್ತಲೇ ಇತ್ತು. ಕಾಡಿನ ರಾಜ ಇದು ಕಾಡಿನಲ್ಲಿ ಆಗುವ ಸಹಜ ಪ್ರಕ್ರಿಯೆ ಎಂದು ಸದಾ ಸುಮ್ಮನಾಗಿ ಬಿಡುತ್ತಿರಿಂದ ದಿನೇ ದಿನೇ ಬೇಟೆಗಾರರ ಧಾಳಿ ಹೆಚ್ಚುತ್ತಿತ್ತು. ಇದರಿಂದ ಬೇಸತ್ತು ನರಸತ್ತ ರಾಜನನ್ನು ಬದಲಿಸಿ ಭಲಾಡ್ಯ ರಾಜನನ್ನು… Read More ಮೌನವೇ ಪರಿಣಾಮಕಾರಿ ಅಸ್ತ್ರ

ಜಾರ್ಜ್ ಫರ್ನಾಂಡೀಸ್

ಕಾರ್ಮಿಕ ನಾಯಕ, ಜನ ಪರ ಹೋರಾಟಗಾರ,  ಪ್ರಭುಧ್ಧ ವಾಗ್ಮಿ, ಅಪ್ಪಟ ದೇಶ ಪ್ರೇಮಿ, ಸರಳ ವ್ಯಕ್ತಿತ್ವ,  ನಡೆ ಮತ್ತು ನುಡಿಗಳಲ್ಲಿಯೂ ಅಕ್ಷರಶಃ ಭಾರತೀಯ ಮೌಲ್ಯಗಳನ್ನು ಎತ್ತಿ ಹಿಡಿದಿದ್ದ ಧೀಮಂತ ನಾಯಕ, ಮಾಜೀ ರಕ್ಷ್ಣಣಾ ಮಂತ್ರಿ ಶ್ರೀ ಜಾರ್ಜ್ ಫರ್ನಾಂಡೀಸ್ ಅವರು ಇಂದು ಮುಂಜಾನೆ  ವಯೋಸಹಜ ಮತ್ತು  ದೀರ್ಘಕಾಲೀನ ಅನಾರೋಗ್ಯದ ಪರಿಣಾಮವಾಗಿ ನಮ್ಮೆಲ್ಲರನ್ನು ಅಗಲಿರುವುದು ನಿಜಕ್ಕೂ ದುಃಖಕರ.   ಇಂದಿನ ಅಧಿಕಾರಶಾಹಿ ರಾಜಕಾರಣಿಗಳ ಮಧ್ಯೆಯೂ ಅಪರೂಪವಾಗಿ ಸರಳ ಸಜ್ಜನಿಕೆಗೆ ಹೆಸರಾಗಿದ್ದ ಧೀಮಂತ ನಾಯಕನನ್ನು ಕಳೆದುಕೊಂಡಂತಾಗಿದೆ. 1930 ಜೂನ್ 3 ರಂದು … Read More ಜಾರ್ಜ್ ಫರ್ನಾಂಡೀಸ್