ಶ್ರೀ ದಯಾನಂದ ತೊರ್ಕೆ, ಜನಪ್ರಿಯತೆಯ ಬೆಳಕಿನಾಚೆ ಉಳಿದ ಕನ್ನಡದ ಬಹುಮುಖ ಎಲೆಮರೆಯ ಕಾದಂಬರಿಕಾರ

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಗುಮಾಸ್ತ ಹುದ್ದೆಯಿಂದ ಆರಂಭಿಸಿ ಸಹಾಯಕ ಕುಲಸಚಿವರಾಗಿ ನಿವೃತ್ತರಾದ 90 ದಶಕದಲ್ಲಿ ಮನೆಮನೆಗಳಲ್ಲಿ ಕಾದಂಬರಿ ಓದುತ್ತಿದ್ದ ಮಹಿಳೆಯರ ಮನ ಗೆದ್ದಿದ್ದಂತಹ, ಸುಮಾರು 80ಕ್ಕೂ ಹೆಚ್ಚಿನ ಸಾಮಾಜಿಕ ಮಾತ್ತು ಚಾರಿತ್ರಿಕ ಕಾದಂಬರಿಗಳನ್ನು ಬರೆದಿದ್ದರೂ ಸಾರಸ್ವತ ಲೋಕದಲ್ಲಿ ಎಲೆಮರೆಯ ಹೂ ಆಗಿಯೇ ಇರುವಂತಹ ಶ್ರೀ ದಯಾನಂದ ತೊರ್ಕೆಯವರ ವ್ಯಕ್ತಿ, ಸಾಹಿತ್ಯಿಕ ವ್ಯಕ್ತಿತ್ವ, ಮತ್ತು ಸಾಹಿತ್ಯ ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಶ್ರೀ ದಯಾನಂದ ತೊರ್ಕೆ, ಜನಪ್ರಿಯತೆಯ ಬೆಳಕಿನಾಚೆ ಉಳಿದ ಕನ್ನಡದ ಬಹುಮುಖ ಎಲೆಮರೆಯ ಕಾದಂಬರಿಕಾರ

ಕಾದಂಬರಿಗಳ ಸಾರ್ವಭೌಮ ಅನಕೃ

ಸ್ವಾತಂತ್ರ್ಯ ಪೂರ್ವದಲ್ಲಿ ನಾಟಕಗಳೇ ಮನೋರಂಜನೆಯ ಅತ್ಯಂತ ಪ್ರಮುಖ ಪಾತ್ರವಹಿಸಿತ್ತು. ಬಹುತೇಕ ವೃತ್ತಿ ರಂಗಭೂಮಿಯವರು ಪೌರಾಣಿಕ ನಾಟಕಗಳನ್ನೇ ಆಡುತ್ತಿದ್ದಾಗ ಅಲ್ಲೊಬ್ಬ ಯುವಕ ಅದನ್ನೇ ಪ್ರಶ್ನಿಸಿ ಕೇವಲ ಒಂದೇ ರಾತ್ರಿಯಲ್ಲಿ ಸಾಮಾಜಿಕ ಕಳಕಳಿಯ ನಾಟಕವೊಂದನ್ನು ಬರೆದು ಕೊಟ್ಟಿದ್ದ. ಕರ್ನಾಟಕ ಸಂಗೀತ ಕೇವಲ ಹೆಸರಿಗಷ್ಟೇ ಕರ್ನಾಟಕೆ ಎಂದಿತ್ತಾದರೂ ಬಹುತೇಕರು ಹಾಡುತ್ತಿದ್ದದ್ದು ತ್ಯಾಗರಾಜರ ಕೃತಿಗಳನ್ನೋ ಇಲ್ಲವೇ ಬೇರೆಯಾವುದೋ ಭಾಷೆಯ ಹಾಡುಗಳನ್ನೇ . ಇನ್ನು ಹಿಂದೂಸ್ಥಾನಿ ಸಂಗೀತಗಾರರು ಕನ್ನಡದಲ್ಲಿ ಹಾಡುಗಳೇ ಇಲ್ಲವೇನೋ ಎನ್ನುವಂತೆ ಹಿಂದಿ, ಮರಾಠಿ ಹಾಡುಗಳನ್ನೇ ಹಾಡುತ್ತಿದ್ದರು. ಅದು ಮೈಸೂರಿನ ಅರಮನೆಯ ದರ್ಬಾರಾಗಲೀ,… Read More ಕಾದಂಬರಿಗಳ ಸಾರ್ವಭೌಮ ಅನಕೃ