ಕೆಲವು ತಿಂಗಳುಗಳ ಹಿಂದೆ ಉತ್ತರಾಖಂಡದಿಂದ ರಾತ್ರೋರಾತ್ರಿ ಸರಿ ಸುಮಾರು 2,00,000 ಮುಸ್ಲಿಂ ಮಕ್ಕಳು ಕಣ್ಮರೆಯಾದ ಭೀಕರ ಸತ್ಯ ಹೊರ ಬಂದು ಪ್ರಧಾನಿಗಳನ್ನೂ ಒಳಗೊಂಡು ಎಲ್ಲರೂ ಒಂದು ಕ್ಷಣ ಆಘಾತಕ್ಕೆ ಒಳಗಾಗಿದ್ದರು. ಇದನ್ನೇ ನೆಪವಾಗಿಸಿಕೊಂಡು ದೇಶದ ಮುಸ್ಲಿಮರಲ್ಲಿ ಒಂದು ರೀತಿಯ ಚಡಪಡಿಕೆ ಮತ್ತು ಅಭದ್ರತೆಯ ಭಾವನೆ ಇದೆ ಎಂದು ಮಾಜಿ ಉಪಾಧ್ಯಕ್ಷ ಹಮೀದ್ ಅನ್ಸಾರಿ ಹೇಳಿಕೆ ಕೊಟ್ಟೇ ಬಿಟ್ಟರು. ದೇಶದ ಉಪರಾಷ್ಟ್ರಪತಿಗಳಾಗಿದ್ದ ಹಮೀದ್ ಅನ್ಸಾರಿ ಅವರಂತಹ ಜನರು ಈ ರೀತಿಯಲ್ಲಿ ಏಕೆ ಅಭದ್ರತೆ ಮತ್ತು ಅಸಹಿಷ್ಣುತೆ ಬೆಳೆಯುತ್ತಿದೆ ಎಂಬುದನ್ನು ಈ ಮದರಸಾ ಮಕ್ಕಳು ಏಕಾಏಕಿ ನಾಪತ್ತೆಯಾದ ವಿಷಯದ ಕುರಿತಂತೆ ನಡೆಸಿದ ತನಿಖೆ ಬಹಿರಂಗಪಡಿಸಿದೆ. ಈ ವರದಿಯ ಸತ್ಯವನ್ನು ತಿಳಿದ ನಂತರ ಬಹುಶಃ ಎಲ್ಲರ ಝಂಘಾಬಲವೇನೂ? ನಾವು ನಿಂತ ನೆಲವೇ ಕುಸಿದು ಹೋಗುತ್ತಿರುವ ಅನುಭವವಾಗಬಹುದು ಎಂದರೂ ಅತಿಶಯೋಕ್ತಿಯೇನಲ್ಲ.
ವಾಸ್ತವವಾಗಿ, ಕಳೆದ ಹಲವಾರು ದಶಕಗಳಿಂದ, ಮದರಸಾಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಪ್ರತಿ ತಿಂಗಳು ಸರ್ಕಾರಿ ಬೊಕ್ಕಸದಿಂದ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿತ್ತು. ಇದರ ಕುರಿತಂತೆ ಯಾವುದೇ ಸರಿಯಾದ ದಾಖಲೆಗಳು ಇಲ್ಲದಿದ್ದ ಪರಿಣಾಮ ಉತ್ತರಾಖಂಡ ಸರ್ಕಾರ ಈ ಮಕ್ಕಳ ಬ್ಯಾಂಕ್ ಖಾತೆಗಳನ್ನು ಆಧಾರ್ ಕಾರ್ಡ್ ಸಂಖ್ಯೆಯೊಂದಿಗೆ ಸಂಪರ್ಕಿಸುವಂತೆ ಕೇಳಿದ ಕೂಡಲೇ 1 ಲಕ್ಷ 95 ಸಾವಿರ 360 ಮಕ್ಕಳು ಏಕಕಾಲದಲ್ಲಿ ಕಾಣೆಯಾಗಿದ್ದಾರೆ. ಇಲ್ಲಿಯವರೆಗೆ ಸರ್ಕಾರ ಪ್ರತಿವರ್ಷವೂ 14.5 ಕೋಟಿ ರೂ.ಗಳನ್ನು ವ್ಯಯಿಸುತ್ತಿದ್ದರೆ, ಈಗ ಈ ವಿದ್ಯಾರ್ಥಿಗಳ ಕಾಣೆಯಾದ ನಂತರ ಆ ವಿದ್ಯಾರ್ಥಿ ವೇತನದ ಮೊತ್ತ ವಾರ್ಷಿಕವಾಗಿ ಕೇವಲ 2 ಕೋಟಿಗೆ ಇಳಿದಿದೆ ಎಂದರೆ ಆಶ್ವರ್ಯವಾಗುತ್ತದೆಯಲ್ಲವೇ?
ನಿಜ ಹೇಳ ಬೇಕೆಂದರೆ ಈ ಮಕ್ಕಳು ಎಂದಿಗೂ ಕಣ್ಮರೆಯಾಗಿರಲಿಲ್ಲ. ಮಕ್ಕಳ ಸುಳ್ಳು ಹೆಸರುಗಳ ಆಧಾರದ ಮೇಲೆ, ಮದರಸಾಗಳು ಪ್ರತೀವರ್ಷವೂ ಸರ್ಕಾರದಿಂದ ಹಣವನ್ನು ಅವ್ಯಾಹತವಾಗಿ ಪಡೆದು ಕೊಳ್ಳುತ್ತಿತ್ತು. ಕಾಂಗ್ರೆಸ್ ಆಡಳಿತದ ಸಮಯದಲ್ಲಿ ಈ ಲೂಟಿಯು ನಿರಂತರವಾಗಿ ಕೆಳಗಿನಿಂದ ಮೇಲಿನ ವರೆಗೂ ನಡೆದುಕೊಂಡು ಹೋಗುತ್ತಿದ್ದ ಪರಿಣಾಮ ಕಾಂಗ್ರೆಸ್ ಸರ್ಕಾರಕ್ಕೆ ಈ ಹಗರಣದ ಸುಳಿವು ಕೂಡ ಇರಲಿಲ್ಲ. ಆದರೆ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಪ್ರತಿಯೊಂದಕ್ಕೂ ಆಧಾರ್ ಕಾರ್ಡನ್ನು ಆಧಾರಮಾಡಿ ನೇರವಾಗಿ ಫಲಾನುಭವಿಗಳ ಬ್ಯಾಂಕಿಗೇ ಹಾಕುವ ವ್ಯವಸ್ಥೆ ಜಾರಿಗೆ ತಂದ ಕ್ಷಣದಿಂದ ಇವರೆಲ್ಲರ ಮುಖವಾಡ ಕಳಚಿ ಬಿದ್ದು ಹೋಗಿದೆ.
ದೇಶದ ಒಂದು ಸಣ್ಣ ರಾಜ್ಯವಾದ ಉತ್ತರಾಖಂಡಿನಲ್ಲಿ ಈ ರೀತಿಯ ಅವ್ಯವಹಾರಗಳಾದರೇ ಇನ್ನು ದೇಶದ ಅತ್ಯಂತ ದೊಡ್ಡ ರಾಜ್ಯ ಮತ್ತು ಮುಸ್ಲಿಮ್ಮರು ಅಧಿಕವಾಗಿರುವ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮದ್ರಾಸಗಳನ್ನು ನೋಂದಣಿ ಮಾಡಿಸ ಬೇಕೆಂದು ಸೂಚಿಸಿದಾಗ ಅಷ್ಟೋಂದು ಗಲಾಟೆ ಏಕಾಯಿತು ಎಂಬ ಸಂಗತಿ ಈಗ ಎಲ್ಲರಿಗೂ ಅರಿವಾಗಿರಬೇಕು ಎಂದೆನಿಸುತ್ತದೆ. ಇದೇ ಕಾರಣಕ್ಕೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಸ್ಲಿಮರು ಏಕೆ ಅಸುರಕ್ಷಿತರಾಗಿದ್ದಾರೆಂದು ಇದು ಸಾಬೀತುಪಡಿಸಿದೆ.
2014-15ರವರೆಗೆ 2,21,800 ಮುಸ್ಲಿಂ ವಿದ್ಯಾರ್ಥಿಗಳು ಉತ್ತರಾಖಂಡದಲ್ಲಿ ಸರ್ಕಾರಿ ವಿದ್ಯಾರ್ಥಿ ವೇತನವನ್ನು ಪಡೆಯುತ್ತಿದ್ದರು. ಯಾವಾಗ ಆ ವಿದ್ಯಾರ್ಥಿಗಳ ಆಧಾರ್ ಮತ್ತು ಬ್ಯಾಂಕ್ ಅಕೌಂಟ್ ಜೋಡಿಸಿದ ತಕ್ಷಣವೇ ವಿದ್ಯಾರ್ಥಿವೇತನ ಪಡೆಯುವವರ ಸಂಖ್ಯೆ ಕೇವಲ 26,440 ಕ್ಕೆ ಇಳಿಯಿತು. ಅಂದರೆ ಮುಸ್ಲಿಂ ವಿದ್ಯಾರ್ಥಿಗಳ ಸಂಖ್ಯೆ ಶೇಕಡಾ 88 ರಷ್ಟು ಕಡಿಮೆಯಾಗಿದೆ. ಇದು ಬಿಪಿಎಲ್ ವಿದ್ಯಾರ್ಥಿಗಳಿಗೆ ಅಂದರೆ ಅತ್ಯಂತ ಕಡು ಬಡ ಕುಟುಂಬಗಳಿಗೆ ನೀಡಲಾಗುವ ವಿದ್ಯಾರ್ಥಿ ವೇತನವಾಗಿದೆ. ಇಂತಹ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಸರ್ಕಾರವು ವಿದ್ಯಾರ್ಥಿ ವೇತನವನ್ನು ನೀಡುತ್ತಿದ್ದರೆ ಅದು ನಿಜವಾದ ವಿದ್ಯಾರ್ಥಿಗಳಿಗೆ ತಲುಪದೇ ಅಪಾತ್ರರ ಕೈಗೆ ಸೇರಿ ಪೋಲಾಗುತ್ತಿತ್ತು.
ನಕಲಿ ವಿದ್ಯಾರ್ಥಿಗಳ ಹೆಸರುಗಳಲ್ಲಿ ಸಾರ್ವಜನಿಕ ಹಣವನ್ನು ಹತ್ತಾರು ವರ್ಷಗಳಿಂದ ಲೂಟಿ ಮಾಡಲಾಗುತ್ತಿತ್ತು. ಈ ರೀತಿಯಾಗಿ ಕೇವಲ ನಕಲೀ ವಿದ್ಯಾರ್ಥಿಗಳನ್ನು ಹೊರತುಪಡಿಸಿ, ಅಲ್ಲಿನ ಹಲವಾರು ಮದರಸಾಗಳು ಕೇವಲ ಕಾಗದದ ಮೇಲೆ ಮಾತ್ರ ಇದ್ದವೇ ಹೊರತು, ವಾಸ್ತವದಲ್ಲಿ ಅಲ್ಲಿ ಯಾವುದೇ ಮದರಸಾಗಳು ನಡೆಯುತ್ತಲೇ ಇರಲಿಲ್ಲ ಅಥವಾ ಇದ್ದರೂ ಅವುಗಳಲ್ಲಿ ಯಾವುದೇ ವಿದ್ಯಾರ್ಥಿ ಅಧ್ಯಯನವೂ ಇರಲಿಲ್ಲ. ನಕಲಿ ವಿದ್ಯಾರ್ಥಿಗಳ ಹೆಸರನ್ನು ಸರಳವಾಗಿ ಕಳುಹಿಸುವ ಮೂಲಕ, ಅವರು ಸರ್ಕಾರದ ಹಣವನ್ನು ಆರಾಮವಾಗಿ ಲೂಟಿ ಹೊಡೆಯುತ್ತಿದ್ದರು.
ಇನ್ನೂ ಆಶ್ಚರ್ಯಕರ ಸಂಗತಿಯೆಂದರೆ, ಈ ರೀತಿಯ ಆಧಾರ್ ಲಿಂಕ್ ಆದ ನಂತರ ಉತ್ತರಾಖಂಡದ 13 ಜಿಲ್ಲೆಗಳಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ವಿದ್ಯಾರ್ಥಿಯೂ ಸಹ ವಿದ್ಯಾರ್ಥಿ ವೇತನ ಪಡೆಯಲು ಮುಂದೆ ಬರಲಿಲ್ಲ. ಹರಿದ್ವಾರ, ಉಧಮ್ ಸಿಂಗ್ ನಗರ, ಡೆಹ್ರಾಡೂನ್ ಮತ್ತು ನೈನಿತಾಲ್ ಜಿಲ್ಲೆಗಳಲ್ಲಿ ಗರಿಷ್ಠ ಲೂಟಿ ನಡೆಯುತ್ತಿತ್ತು. ಇನ್ನೂ ಕೆಲವು ಜಿಲ್ಲೆಗಳಲ್ಲಿ ಇಲ್ಲಿಯವರೆಗೆ ವಿದ್ಯಾರ್ಥಿ ವೇತನವನ್ನು ಪಡೆಯುತ್ತಿದ್ದ ಮುಸ್ಲಿಂ ವಿದ್ಯಾರ್ಥಿಗಳ ಸಂಖ್ಯೆ ಆ ಜಿಲ್ಲೆಗಳ ಒಟ್ಟು ಜನ ಸಂಖ್ಯೆಗಿಂತಲೂ ಅಧಿಕವಾಗಿತ್ತು. ಕಾಂಗ್ರೇಸ್ಸಿನ ಕಾರ್ಯಕರ್ತರೇ ಈ ಲೂಟಿಯ ಭಾಗವಾಗಿದ್ದ ಕಾರಣ ಇವೆಲ್ಲವೂ ಸಹಾ ಸುಸೂತ್ರವಾಗಿ ಅನೇಕ ದಶಕಗಳ ಕಾಲ ಎಗ್ಗಿಲ್ಲದೇ ಮುಂದುವರೆದಿತ್ತು.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ, ಇಂತಹ ಹಗರಣಗಳ ಮೇಲೆ ಬಿಗಿಗೊಳಿಸಲು ಪ್ರಾರಂಭಿಸಿತೋ ಕೂಡಲೇ, ಹಮೀದ್ ಅನ್ಸಾರಿ, ನಾಸಿರುದ್ದೀನ್ ಶಾ, ಶಾರುಖ್, ಅಮೀರ್ ಖಾನ್ ಮುಂತಾದವರು ದೇಶದಲ್ಲಿ ಮುಸಲ್ಮಾನರು ಅಸುರಕ್ಷಿತ ಎಂಬ ಭಾವನೆಯನ್ನು ಮೂಡಿಸಲು ಪ್ರಾರಂಭಿಸಲಾರಂಭಿಸಿದರೇ ಅವರ ಎಂಜಿಲು ಕಾಸಿಗೇ ಇರುವ ಕೆಲವು ಮಾಧ್ಯಮದವರು ಅದನ್ನೇ ಬಿತ್ತರಿಸಿ ದೊಡ್ಡದಾಗಿ ಬಿಂಬಿಸಲಾರಂಭಿಸಿದರು. ಸರ್ಕಾರ ಈ ಹಗರಣದ ಅಪರಾಧಿಗಳ ಪಟ್ಟಿಯನ್ನು ಸಿದ್ಧಪಡಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಆದೇಶಿಸಿದೆ ಮತ್ತು ನಕಲೀ ಮದರಸಾ ಮತ್ತು ವಿದ್ಯಾರ್ಥಿಗಳ ಹೆಸರಿನಲ್ಲಿ ಲೂಟಿ ಮಾಡುತ್ತಿದ್ದ ದರೋಡೆಕೋರರಿಗೆ ಶಿಕ್ಷೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ, ಜೊತೆಗೆ ಅವರಿಂದ ಇದುವರೆಗೂ ಲೂಟಿ ಮಾಡಿದ ಹಣವನ್ನೂ ಸಹ ವಶಪಡಿಸಿಕೊಳ್ಳಲಾಗುತ್ತದೆ ಎಂದು ಭಾವಿಸಲಾಗಿದೆ.
ದೇಶಾದ್ಯಂತ ನಾಯಿಕೊಡೆಗಳಂತೆ ಅನಧಿಕೃತವಾಗಿ ಹಬ್ಬಿಕೊಂಡಿರುವ ಇಂತಹ ಅನೇಕ ಮದರಸಾಗಳಲ್ಲಿ ಮಕ್ಕಳಿಗೆ ಆಮೂಲಾಗ್ರ ಶಿಕ್ಷಣವನ್ನೂ ನೀಡಲಾಗುತ್ತಿದೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಸಿದೆ. ಇಂತಹ ಅವಾಂತರಗಳ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯಗಳಲ್ಲಿಯೂ ಇರುವ ಮದರಸಾಗಳ ನೋಂದಣಿಯನ್ನು ಕಡ್ಡಾಯಗೊಳಿಸ ಬೇಕಾಗಿದೆ. ಹಾಗಾದಲ್ಲಿ ಮಾತ್ರವೇ ನಕಲೀ ಮದರಸಾಗಳು ಮತ್ತು ನಕಲೀ ವಿದ್ಯಾರ್ಥಿಗಳು ನಿಗ್ರಹವಾಗಿ ಸಾರ್ವಜನಿಕರ ತೆರಿಗೆಯ ಹಣ ಲೂಟಿಯಾಗುವುದನ್ನು ತಡೆಗಟ್ಟಬಹುದಾಗಿದೆ.
ಧರ್ಮಾಧಾರಿತವಾದ ಶಿಕ್ಷಣದ ಹೆಸರಿನಲ್ಲಿ ನಡೆಸಲಾಗುವ ಈ ಮದರಸಾಗಳಲ್ಲಿ ಏನು ಕಲಿಸಲಾಗುತ್ತಿದೆ ಎಂಬುದರ ಮೇಲೆ ಸರ್ಕಾರಕ್ಕೆ ಯಾವುದೇ ನಿಯಂತ್ರಣವಿಲ್ಲವಾಗಿರುವ ಕಾರಣ ಸೂಕ್ತವಾದ ಪಠ್ಯಕ್ರಮ ಇಲ್ಲವಾಗಿರುವ ಕಾರಣ ಅಲ್ಲಿಯ ಮೌಲ್ವಿಗಳು ಹೇಳಿಕೊಟ್ಟಿದ್ದೇ ಶಿಕ್ಷಣವಾಗಿ ಬಹುತೇಕ ಮದರಸಾಗಳು ಮತಾಂಧರನ್ನು ತಯಾರಿಸುವ ಕಾರ್ಖಾನೆಗಳಾಗಿವೆ ಎಂದರೂ ತಪ್ಪಾಗಲಾರದು. ಏನನ್ನೂ ಅರಿಯದ ಚಿಕ್ಕ ವಯಸ್ಸಿನಲ್ಲಿಯೇ ದೇಶದ ವಿರುದ್ಧ ವಿಷ ಬೀಜವನ್ನು ಬಿತ್ತುವ ಕಾರ್ಯ ನಿರಂತವಾಗಿ ನಡೆಯುತ್ತಿದೆ. ಇಂದು ದೇಶದಲ್ಲಿ ಕಾಣಿಸುಕೊಳ್ಳುತ್ತಿರುವ ಬಹುತೇಕ ಮತಾಂಧರು ಮತ್ತು ಉಗ್ರವಾದಿಗಳು ಮದರಾಸದಲ್ಲಿ ಶಿಕ್ಷಣ ಪಡೆದವರೇ ಆಗಿರುವುದು ಅತಂಕಕಾರಿಯಾಗಿದೆ
ದುರದೃಷ್ಟವೆಂದರೇ ಇಂತಹ ಮದರಸಾ ಮತ್ತು ಅಲ್ಲಿ ಕಲಿಯುವ ವಿದ್ಯಾರ್ಥಿಗಳು ಅಲ್ಪಸಂಖ್ಯಾತ ಕಲ್ಯಾಣ ಯೋಜನೆಗಳಡಿ ಎಲ್ಲಾ ಸೌಲಭ್ಯಗಳನ್ನು ಪಡೆಯುತ್ತಲೇ ಇರುವುದು ಹಾವಿಗೆ ಹಾಲೆರೆದಂತಾಗಿದೆ. ಉತ್ತರ ಪ್ರದೇಶವೊಂದರಲ್ಲೇ ಕಾರ್ಯನಿರ್ವಹಿಸುತ್ತಿರುವ ಸುಮಾರು 800 ಮದರಸಾಗಳಿಗೆ ಉತ್ತರ ಪ್ರದೇಶ ಸರ್ಕಾರ ವರ್ಷಕ್ಕೆ 4000 ಕೋಟಿ ರೂ. ಖರ್ಚು ಮಾಡುತ್ತಿದೆ ಎಂದರೆ ಇನ್ನು ದೇಶಾದ್ಯಂತ ಇರುವ ಮದರಸಾಗಳಿಂದ ಇನ್ನೆಷ್ಟು ಹಣ ಲೂಟಿಯಾಗುತ್ತಿರ ಬಹುದು? ಆತಂಕಕಾರಿಯಾದ ವಿಷಯವೇನೆಂದರೆ, ಅದರ ಬಹುಪಾಲು ಭಾಗವು ನಿಜವಾದ ವಿದ್ಯಾರ್ಥಿಗಳನ್ನು ತಲುಪುವ ಬದಲು ನಕಲಿ ವಿದ್ಯಾರ್ಥಿಗಳ ಹೆಸರಿನಲ್ಲಿ ಮತಾಂಧರ ಜೇಬಿಗೆ ಹೋಗುತ್ತಿರುವುದು ಆಘಾತಕಾರಿಯಾಗಿದೆ.
ಈ ಲೇಖನ ಯಾವುದೇ ಒಂದು ಧರ್ಮದ ವಿರುದ್ಧವಾಗಿರದೇ, ಇದು ಜನರ ತೆರಿಗೆ ಹಣವನ್ನು ಲೂಟಿ ಮಾಡುತ್ತಿರುವವರ ವಿರುದ್ಧ ಸಾತ್ವಿಕ ಆಕ್ರೋಶವಾಗಿದ್ದು, ಇಂದಿನ ಆಧುನಿಕ ಯುಗದಲ್ಲೂ ಭೂಮಿ ಚಪ್ಪಟ್ಟೆಯಾಗಿದೆ ಎಂದೇ ಹೇಳಿ ಕೊಡುತ್ತಿರುವುದನ್ನು ತಪ್ಪಿಸಿ ಅವರಿಗೂ ಒಂದು ನಿಶ್ಚಿತ ಪಠ್ಯಕ್ರಮವಿದ್ದು, ಆ ಮುಸ್ಲಿಂ ಮಕ್ಕಳಿಗೂ ಆಧುನಿಕ ಶಿಕ್ಷಣ ದೊರೆತು ದೇಶದ ಸತ್ಪ್ರಜೆಗಳನ್ನಾಗಿಸುವ ಉದ್ದೇಶವಾಗಿದೆ ಅಲ್ವೇ?
ಏನಂತೀರೀ?
ಈ ಲೇಖನ ಪ್ರಯಾಗದ ಹೈಕೋರ್ಟ್ ವಕೀಲ ದೇವೇಂದ್ರ ಗುಪ್ತಾ ಅವರ ಆಂಗ್ಲ ಭಾಷೆಯ ಲೇಖನದ ಭಾವಾನುವಾದವಾಗಿದೆ.