ಇಸ್ಕಾನ್ ಶ್ರೀ ರಾಧಾ ಕೃಷ್ಣ ದೇವಾಲಯ

ಸಾಧಾರಣವಾಗಿ ಹೊರ ಊರುಗಳಿಂದ ಬೆಂಗಳೂರಿಗೆ ಬರುವ ಪ್ರವಾಸಿಗರನ್ನು ಈ ಹಿಂದೆ ಬೆಂಗಳೂರು ರೈಲ್ವೇ ನಿಲ್ದಾಣ, ವಿಧಾನ ಸೌಧ, ಲಾಲ್ ಭಾಗ್ ಮತ್ತು ಕಬ್ಬನ್ ಪಾರ್ಕ್ ಗಳಿಗೆ ಕರೆದುಕೊಂಡು ಹೋಗಿ ತೋರಿಸುತ್ತಿದ್ದರೆ, 90ರ ದಶಕದಲ್ಲಿ ಬೆಂಗಳೂರಿನ ರಾಜಾಜಿನಗರದ ಆರಂಭದಲ್ಲಿ ಇಸ್ಕಾನ್ ದೇವಾಲಯ ನಿರ್ಮಾಣವಾದ ಕೂಡಲೇ, ಬೆಂಗಳೂರಿಗೆ ಬರುವ ಪ್ರವಾಸಿಗರ ಪಟ್ಟಿಯಲ್ಲೀ ಈ ದೇವಾಲಯವೂ ಸೇರಿಕೊಂಡಿದೆ ಏಂದರೂ ತಪ್ಪಾಗದು. ಬೆಂಗಳೂರಿಗೇ ಕಿರೀಟಪ್ರಾಯವಾದ ಅತ್ಯಂತ ಸುಂದರವಾದ ಇಸ್ಕಾನಿನ ಶ್ರೀ ರಾಧಾ ಕೃಷ್ಣ ದೇವಾಲಯದ ಕುರಿತಾಗಿ ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ… Read More ಇಸ್ಕಾನ್ ಶ್ರೀ ರಾಧಾ ಕೃಷ್ಣ ದೇವಾಲಯ

ಅಕ್ಕಿಹೆಬ್ಬಾಳು ಶ್ರೀ ಲಕ್ಷ್ಮೀನರಸಿಂಹಸ್ವಾಮಿ

ಮಂಡ್ಯಾ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕ್ಕಿನ ಅಕ್ಕಿ ಹೆಬ್ಬಾಳು ಗ್ರಾಮದ ಸ್ಥಳಪುರಾಣ, ಆ ಊರಿಗೆ ಅಕ್ಕಿಹೆಬ್ಬಾಳು ಎಂಬ ಹೆಸರಿನ ಹಿಂದಿನ ರಹಸ್ಯ, ಆ ಊರಿನಲ್ಲಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ನೆಲೆಗೊಂಡ ರೋಚಕತೆ ಮತ್ತು ಮಹಾವಿಷ್ಣುವಿನ ವಾಹನ ಗರುಡನ ಆಜ್ಞೆ ಇಲ್ಲದೇ ಆರಂಭವಾಗದ ಆ ಊರಿನ ರಥೋತ್ಸವ, ಹೀಗೆ ಅಕ್ಕಿ ಹೆಬ್ಬಾಳು ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ಕುರಿತಾದ ಹತ್ತು ಹಲವಾರು ವೈಶಿಷ್ಟ್ಯಗಳನ್ನು ನಮ್ಮ ದೇಗುಲ ದರ್ಶನ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಅಕ್ಕಿಹೆಬ್ಬಾಳು ಶ್ರೀ ಲಕ್ಷ್ಮೀನರಸಿಂಹಸ್ವಾಮಿ

ಹಿಮವದ್ ಗೋಪಾಲಸ್ವಾಮಿ ಬೆಟ್ಟ

ವರ್ಷದ 365 ದಿನಗಳೂ ಮೋಡಗಳಿಂದ ಆವೃತವಾಗಿ ಅತ್ಯಂತ ರಮಣೀಯವಾಗಿರುವ ಹಿಮವದ್ ಗೋಪಾಸ್ವಾಮಿ ಬೆಟ್ಟದ ಸ್ಥಳ ಪುರಾಣ, ಆ ದೇವಾಲಯದ ವೈಶಿಷ್ಟ್ಯಗಳು ಮತ್ತು ಅಲ್ಲಿ ಕಾಗೆಗಳು ಏಕೆ ಕಾಣಸಿಗುವುದಿಲ್ಲ ಎಂಬೆಲ್ಲಾ ಕುತೂಹಲಕಾರಿ ಮಾಹಿತಿಯನ್ನು ನಮ್ಮ ದೇಗುಲ ದರ್ಶನ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಹಿಮವದ್ ಗೋಪಾಲಸ್ವಾಮಿ ಬೆಟ್ಟ

ನಾಗೇಶ್ವರ-ಚೆನ್ನಕೇಶವ ದೇವಾಲಯ ಸಂಕೀರ್ಣ, ಮೊಸಳೆ

ವಿಶ್ವವಿಖ್ಯಾತ ಬೇಲೂರು ಮತ್ತು ಹಳೇಬೀಡು ದೇವಾಲಯಗಳ ನಿರ್ಮಾಣಕ್ಕೂ ಮುನ್ನಾ ನಿರ್ಮಿಸಲಾಗಿರುವ ನಯನ ಮನೋಹರವಾಗಿರುವ ಹಾಸನದ ಬಳಿಯ ಮೊಸಳೆ ಗ್ರಾಮದ ಶ್ರೀ ನಾಗೇಶ್ವರ- ಶ್ರೀ ಚೆನ್ನಕೇಶವ ಅವಳಿ ದೇವಾಲಯಗಳ ವೈಶಿಷ್ಟ್ಯಗಳ ಜೊತೆಗೆ ಆ ಊರಿಗೆ ಮೊಸಳೆ ಎಂಬ ಹೆಸರು ಬರಲು ಕಾರಣವೇನು? ಎಂಬುದರ ಕುರಿತಾದ ಕೂತೂಹಲಕಾರಿ ಮಾಹಿತಿಗಳನ್ನು ನಮ್ಮ ದೇಗುಲ ದರ್ಶನ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ. … Read More ನಾಗೇಶ್ವರ-ಚೆನ್ನಕೇಶವ ದೇವಾಲಯ ಸಂಕೀರ್ಣ, ಮೊಸಳೆ

ಪಡುಮುಂಡು ಕಲ್ಲು ಗಣಪತಿ ದೇವಸ್ಥಾನ

ದೇವಾಲಯಗಳ ತವರೂರು ಎಂದೇ ಪ್ರಖ್ಯಾತವಾಗಿರುವ ಉಡುಪಿ ಬಳಿಯ ಬಾರ್ಕೂರಿನ ಹತ್ತಿರದ ಶಿರಿಯಾರ ಗ್ರಾಮದ ಪ್ರಕೃತಿಯೇ ನಿರ್ಮಿಸಿದ ಮೂರು ಅಂತಸ್ತಿನ ಪಡುಮುಂಡು ಕಲ್ಲು ಗಣಪತಿ ದೇವಸ್ಥಾನದ ವೈಶಿಷ್ಟ್ಯಗಳನ್ನು ನಮ್ಮ ದೇಗುಲ ದರ್ಶನ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಪಡುಮುಂಡು ಕಲ್ಲು ಗಣಪತಿ ದೇವಸ್ಥಾನ

ಕಲ್ಕುಂಟೆ ಅಗ್ರಹಾರದ ಶ್ರೀ ರಂಗನಾಥ ಸ್ವಾಮಿ

ಬೆಂಗಳೂರಿನ ವೈಟ್ ಫೀಲ್ಡ್ ನಿಂದ ಕೇವಲ ಅರ್ಧಗಂಟೆ ಪ್ರಯಾಣಿಸಿದಲ್ಲಿ ಪುರಾಣ ಪ್ರಸಿದ್ಧವಾದ ಕಲ್ಕುಂಟೆ ಅಗ್ರಹಾರ ಎಂಬ ಗ್ರಾಮದಲ್ಲಿರುವ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಐತಿಹ್ಯ ಮತ್ತು ಸ್ಥಳ ಪುರಾಣವನ್ನು ನಮ್ಮ ದೇಗುಲ ದರ್ಶನ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಕಲ್ಕುಂಟೆ ಅಗ್ರಹಾರದ ಶ್ರೀ ರಂಗನಾಥ ಸ್ವಾಮಿ

ಶ್ರೀ ಅಮರನಾಥ ಯಾತ್ರೆ

ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಬಳಿಯ ಅತ್ಯಂತ ಪವಿತ್ರವಾದ ಆಷ್ಟೇ ದುರ್ಗಮವಾದ ಹಿಂದೂ ಗುಹಾಂತರ ದೇವಾಲಯವಾದ ಶ್ರೀ ಅಮರನಾಥನ ವಿಶೇಷತೆಗಳು ಮತ್ತು ಅಲ್ಲಿನ ಸ್ಥಳ ಪುರಾಣ ಮತ್ತು ಆ ಕ್ಷೇತ್ರಕ್ಕೆ ಅಮರನಾಥ ಎಂಬ ಹೆಸರು ಬರಲು ಕಾರಣ ಏನು? ಎಂಬೆಲ್ಲಾ ಕುತೂಹಲ ಭರಿತವಾದ ಮಾಹಿತಿಗಳನ್ನು ನಮ್ಮ ದೇಗುಲ ದರ್ಶನ ಮಾಲಿಕೆ ಯಲ್ಲಿ ತಿಳಿಯೋಣ ಬನ್ನಿ.… Read More ಶ್ರೀ ಅಮರನಾಥ ಯಾತ್ರೆ

ಶ್ರೀ ಬಿಳಿಗಿರಿರಂಗ

ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಗಿರಿಜನ ಸೋಲಿಗರ ಆರಾಧ್ಯ ದೈವವಾದ ಬಿಳಿಗಿರಿರಂಗ ಬೆಟ್ಟದಲ್ಲಿ ನೆಲಸಿರುವ ಶೀ ರಂಗನಾಥಸ್ವಾಮಿಯ ಕುರಿತಾದ ವಿಶೇಷತೆಗಳು ಮತ್ತು ಸ್ಥಳ ಪುರಾಣಗಳನ್ನು ನಮ್ಮ ದೇಗುಲ ದರ್ಶನ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಶ್ರೀ ಬಿಳಿಗಿರಿರಂಗ

ಪೆರ್ಣಂಕಿಲ ಶ್ರೀ ಮಹಾ ಗಣಪತಿ ದೇವಾಲಯ

ಉಡುಪಿಯಿಂದ ಕೇವಲ 22 ಕಿಮೀ ದೂರದಲ್ಲಿರುವ ಸುಮಾರು 1600 ವರ್ಷಗಳ ಇತಿಹಾಸ ಇರುವ ಪೆರ್ಣಂಕಿಲದ ಶ್ರೀ ಮಹಾಗಣಪತಿ ದೇವಸ್ಥಾನದ ಸ್ಥಳಪುರಾಣ ಮತ್ತು ಆ ದೇವಾಲಯದ ವೈಶಿಷ್ಟ್ಯಗಳನ್ನು ನಮ್ಮ ದೇಗುಲ ದರ್ಶನ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಪೆರ್ಣಂಕಿಲ ಶ್ರೀ ಮಹಾ ಗಣಪತಿ ದೇವಾಲಯ