ರಾಮ ರಾವಣ-1

ರಾಕ್ಷಸೀ ಗುಣವುಳ್ಳ‌ ರಾವಣ ಸೀತಾಮಾತೆಯನ್ನು ಅಪಹರಿಸಿದ ಅಂದಾ ಮಾತ್ರಕ್ಕೆ ಆತ ಕೆಟ್ಟವನೆನಿಸ‌ ಬಹುದಾದರೂ, ಆತಾ ಸ್ವಭಾವತಃ ಮಹಾ ಜ್ಞಾನಿ. ಪರಮ ಶಿವ ಭಕ್ತ, ನಾಲ್ಕೂ ವೇದಗಳನ್ನು ಬಲ್ಲವನಾಗಿದ್ದ. ಅತ್ಯುತ್ತಮ ‌ಸಂಗೀತಗಾರ, ಶಿವನನ್ನು ‌ಒಲಿಸಿಕೊಳ್ಳುವ ಸಲುವಾಗಿ‌ ತನ್ನ‌ ಕರಳುಗಳನ್ನೇ ಹೊರ‌ತೆಗೆದು‌ ರುದ್ರ ವೀಣೆಯನ್ನಾಗಿಸಿ‌‌ ನುಡಿಸಿ‌ ಶಿವನನ್ನು ಒಲಿಸಿಕೊಂಡು‌ ಪರಶಿವನ ಆತ್ಮಲಿಂಗವನ್ನೇ ಪಡೆದಂತಹವನು. ರಾಮ‌‌ ಮತ್ತು ಲಕ್ಷ್ಮಣರು ಯುಧ್ದಕ್ಕೆ ಶತ್ರು ವಿನಾಶಕಾರೀ ಪೂಜೆಮಾಡಿಸಲು‌‌ ಲಂಕೆಯಲ್ಲಿ ಪುರೋಹಿತರು ‌ಯಾರೂ‌ ಸಿಗದಿದ್ದಾಗ, ಸ್ವತಃ ರಾವಣನೇ ಬಂದು ಪೂಜಾ ವಿಧಿ ವಿಧಾನಗಳನ್ನು ಪೂರೈಸಿ‌ ರಾಮ‌… Read More ರಾಮ ರಾವಣ-1

ದುಡ್ಡಿನ ಮಹತ್ವ

ಸುಮಾರು ಸಾವಿರದ ಒಂಬೈನೊರ ಎಂಬತ್ತಾರು, ಎಂಬತ್ತೇಳರ ಸಮಯ, ನಾನಿನ್ನೂ ಆಗಷ್ಟೇ ಕಾಲೇಜಿಗೆ ಸೇರಿದ್ದನಷ್ಟೆ. ಕಾಲೇಜಿಗೆ ಹೋಗುವ ಹುಡುಗನಾದರೂ ನೋಡಲು ಏಳು ಅಥವಾ ಎಂಟನೇ ತರಗತಿಯ ‌ವಿದ್ಯಾರ್ಥಿ ಅನ್ನುವ ಹಾಗೆ ಕಾಣುತ್ತಿದೆ. ಕುಳ್ಳಗೆ ಸಣ್ಣಗಿದ್ದ ನನ್ನನ್ನು ನನ್ನ ತಾಯಿ ವೈದ್ಯರ ಬಳಿ‌ ಕರೆದುಕೊಂಡು ಹೋಗಿ‌ ಡಾಕ್ಟ್ರೇ ನನ್ನ ‌ಮಗನಿಗೆ ಯಾವುದಾದರು ವಿಟಮಿನ್ ಟಾನಿಕ್‌ ಕೊಡಿ‌ ಸ್ವಲ್ಪ ಉದ್ದ ಮತ್ತು ಗಾತ್ರವಾಗಲಿ‌ ಎಂದು‌‌ ಕೋರಿದ್ದೂ ಉಂಟು. ಆದರೆ ನನ್ನ ತಂದೆ ‌ನಮ್ಮ ವಂಶದಲ್ಲಿ ಗಂಡುಮಕ್ಕಳೆಲ್ಲರೂ ಹದಿನೆಂಟರ ನಂತರವೇ ಬೆಳಯುವುದು ಎಂದು‌… Read More ದುಡ್ಡಿನ ಮಹತ್ವ

ಬುದ್ಧಿವಂತ ರೈತ

ಅದೊ೦ದು ಪುಟ್ಟ ಹಳ್ಳಿ, ಅಲ್ಲೊಬ್ಬ ರೈತ ತನ್ನ ಪಾಲಿಗೆ ಬಂದಿದ್ದ ಜಮೀನಿನಲ್ಲಿ ಬೇಸಾಯ ಮಾಡುತ್ತಾ ಜೊತೆ ಜೊತೆಗೆ ಹೈನುಗಾರಿಕೆ ಮಾಡುತ್ತಾ ತನ್ನ ಸಂಸಾರದೊಂದಿಗೆ ಸುಖ:ದಿಂದಿದ್ದನು. ಅವನ ಬಳಿ ಇದ್ದ ಒಂದು ದೇಸೀ ಹಸು ದಷ್ಟ ಪುಷ್ಟವಾಗಿದ್ದು ಪ್ರತಿದಿನ ಬೆಳಿಗ್ಗೆ‍ ಸಂಜೆ ಸುಮಾರು ಎಂಟರಿಂದ ಹತ್ತು ಲೀಟರ್ ಹಾಲನ್ನು ಕೊಡುತ್ತಿದ್ದರಿಂದ ಆ ಹಸು ಆ ರೈತನ ಅಚ್ಚುಮೆಚ್ಚಾಗಿತ್ತು. ಒಂದು ದಿನ ಅಚಾನಕ್ಕಾಗಿ ಆ ಹಸುವಿಗೆ ಕಾಯಿಲೆ ಬಂದು, ಇದ್ದಕ್ಕಿದ್ದಂತೆ ಹಾಲಿನ ಪ್ರಮಾಣದಲ್ಲಿ ಕಡಿಮೆಯಾಗಿ, ಬರಬರುತ್ತಾ ಹಸು ಬಡಕಲಾಗ ತೊಡಗಿತು.… Read More ಬುದ್ಧಿವಂತ ರೈತ

ಮೊಬೈಲ್ ಫೋನ್ ಅನಾಹುತ

ಎಂದಿನಂತೆಯೇ  ಇಂದು ಬೆಳ್ಳಂಬೆಳಿಗ್ಗೆ ಎದ್ದು ನಿತ್ಯಕರ್ಮಗಳನ್ನು ಮುಗಿಸಿ ದೈನಂದಿನ ವ್ಯಾಯಮವನ್ನು ಮುಗಿಸಿ ಮನೆಗೆ ಬಂದು ವಾಟ್ಸಾಪ್ ಸಂದೇಶಗಳನ್ನು ಓದುತ್ತಿದ್ದಾಗ,15 ವರ್ಷಗಳ ನನ್ನ ಮಗನಷ್ಟೇ ವಯಸ್ಸಿನ   ಪರಿಚಯಸ್ಠ ಬಾಲಕನ ಅಕಾಲಿಕ ಮರಣ ಸುದ್ದಿ ಓದಿ  ಕರಳು ಚುರುಕ್ ಎಂದಿತು. ಆಟ ಪಾಠಗಳಲ್ಲಿ ಚುರುಕಾಗಿದ್ದ ಹುಡುಗ, ಹಾಡು, ಅಮೃತವಚನ, ಶ್ಲೋಕಗಳನ್ನು ನಿರ್ಗಳವಾಗಿ ಹೇಳುತ್ತಿದ್ದದ್ದು ಕಣ್ಣುಮುಂದೆ ಬಂದು ಕಣ್ಣಂಚಿನಲ್ಲಿ ನೀರೂರಿ, ಅಭ್ಯಾಸದ ಬಲದಂತೆ  ಭಗವಂತನು ಮೃತನ ಆತ್ಮಕ್ಕೆ  ಶಾಂತಿ ಕೊಡಲಿ ಹಾಗು ಮಗನನ್ನು ಕಳೆದು ಕೊಂಡ ಕುಟುಂಬವರ್ಗದವರಿಗೆ   ದುಖಃ  ಭರಿಸುವ ಶಕ್ತಿಯನ್ನು… Read More ಮೊಬೈಲ್ ಫೋನ್ ಅನಾಹುತ

ದೇವರಿಗೆ ಅರ್ಪಿಸಿದ  ನೈವೇದ್ಯ ದೇವರಿಗೆ ತಲುಪುತ್ತದೆಯೇ?

ಸುಮಾರು ಅರವತ್ತು ಎಪ್ಪತ್ತು ವರ್ಷಗಳ ಹಿಂದೆ ಒಬ್ಬ ಆಸ್ತಿಕ ಮಹಾಶಯರು ಬೆಂಗಳೂರಿನಿಂದ ತಿರುಪತಿ ವೇಂಕಟರಮಣನನ್ನು   ದರ್ಶನ ಮಾಡಲು ನಿರ್ಧರಿಸಿದರು. ಆವತ್ತಿನ ಕಾಲದಲ್ಲಿ ಇಂದಿನಂತೆ ಮೋಟಾರು ವಾಹನಗಳು ಇನ್ನೂ ಹೆಚ್ಚಿನ ಪ್ರಚಲಿತವಿಲ್ಲದಿದ್ದ ಕಾರಣ, ಎತ್ತಿನ ಗಾಡಿಯಲ್ಲಿಯೇ ಹೋಗಲು ನಿರ್ಧರಿಸಿ ಸಕಲ ಸಿದ್ಢತೆಗಳೊಂದಿಗೆ ಒಳ್ಳೆಯ ಮಹೂರ್ತ ನೋಡಿ ಕುಟುಂಬ ಸಮೇತರಾಗಿ ಗಾಡಿಯಲ್ಲಿ ಹೊರಟೇ ಬಿಟ್ಟರು. ಬಹಳ ಅನುಷ್ಟಾಂತರಾದ ಶ್ರೀಯುತರು ಮಾರ್ಗದ ಬದಿಯಲ್ಲಿಯೇ ಇರುತ್ತಿದ್ದ ಅರವಟ್ಟಿಗೆಗಳಲ್ಲಿ ತಂಗಿ, ಅಲ್ಲಿಯೇ ಅಡುಗೆ ಮಾಡಿಕೊಂಡು ತಮ್ಮ ಪ್ರಯಾಣ ಮುಂದುವರಿಸಿದ್ದರು. ಸುಮಾರು ಹದಿನೈದು ಇಪ್ಪತ್ತು ದಿನಗಳ… Read More ದೇವರಿಗೆ ಅರ್ಪಿಸಿದ  ನೈವೇದ್ಯ ದೇವರಿಗೆ ತಲುಪುತ್ತದೆಯೇ?

ಏಷ್ಯನ್ ಕ್ರೀಡಾಕೂಟ

ನೂರಾ ಇಪ್ಪತ್ತೈದು ಕೋಟಿ ಜನಸಂಖ್ಯೆಯ, ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ, ಜನಸಂಖ್ಯೆಯಲ್ಲಿ ಜಗತ್ತಿನಲ್ಲಿಯೇ ಎರಡನೇ ಸ್ಥಾನದಲ್ಲಿರುವ, ಪ್ರಪಂಚಾದ್ಯಂತ ಅತೀ ಹೆಚ್ಚು ಯುವಜನ ಶಕ್ತಿಯನ್ನು  ಹೊಂದಿರುವ ಸುಮಾರು ಒಂದು ಸಾವಿರ ಕ್ರೀಡಾಳುಗಳು ಭಾಗವಹಿಸಿರುವ  ಏಷ್ಯನ್ ಕ್ರೀಡಾ ಪದಕಗಳ ಪಟ್ಟಿಯಲ್ಲಿ ಸದ್ಯದ ಪರಿಸ್ಥಿತಿ ನೋಡಿ ನಿಜಕ್ಕೂ ಖೇದವೆನಿಸಿತು.  ಇತರೇ ಕ್ರೀಡೆಗಳನ್ನು ಬಿಡಿ. ನಮ್ಮದೇ ದೇಶದ  ಕ್ರೀಡೆಗಳಾದ ಹಾಕಿ ಮತ್ತು ಕಬ್ಬಡ್ದಿಯಲ್ಲೂ ಕೂಡಾ ಪದಕಗಳನ್ನು ಗೆಲ್ಲಲು ವಿಫಲರಾಗುತ್ತಿರುವುದು ನಿಜಕ್ಕೂ ಆಶ್ಚರ್ಯಕರ ಮತ್ತು ದುಖಃಕರವೇ ಸರಿ. ಹಾಕಿಯಲ್ಲಂತೂ ದೇಶಿ ಆಟಗಾರ ಎದೆಗಾರಿಕೆ… Read More ಏಷ್ಯನ್ ಕ್ರೀಡಾಕೂಟ

ವಿದ್ಯಾರಣ್ಯಪುರದ ಕಾಳಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನ

ಇತ್ತೀಚೆಗೆ ಹೊರ ಊರಿಗೆ ಪ್ರಯಾಣ ಮಾಡುತ್ತಿದ್ದಾಗ ರೈಲಿನಲ್ಲಿ ಸಹಪ್ರಯಾಣಿಕರೊಬ್ಬರು ಪರಿಚಯವಾಗಿ ಉಭಯ ಕುಶಲೋಪರಿ ವಿಚಾರಿಸುತ್ತಿದ್ದಾಗ ಅವರು  ಬಹಳ ದೈವೀಕ ಭಕ್ತರೆಂದು ಅವರ ವೇಷ ಭೂಷಣ ಮತ್ತು ಅವರ ಸಂಭಾಷಣೆಯಿಂದಲೇ ವ್ಯಕ್ತವಾಯಿತು. ನನ್ನ ಬಗ್ಗೆ ವಿವರಿಸುತ್ತಿದ್ದಾಗ, ನಾನು ಬೆಂಗಳೂರಿನ ವಿದ್ಯಾರಣ್ಯಪುರದವನೆಂದು ಪರಿಚಯಿಸಿ ಕೊಳ್ಳುತ್ತಿದ್ದಾಗಲೇ, ಓಹೋ ನೀವು ವಿದ್ಯಾರಣ್ಯಪುರದವರಾ? ಬಹಳ ಅದೃಷ್ಟವಂತರಿದ್ದೀರಿ. ಅಲ್ಲಿಯ ಜಾಗ ತುಂಬಾನೇ ಪ್ರಶಾಂತವಾಗಿದೆ. ಎಲ್ಲದಕ್ಕಿಂತ ಮಿಗಿಲಾಗಿ ತಾಯಿ ದುರ್ಗಾ ಪರಮೇಶ್ವರಿ ಅಲ್ಲಿ ಶಾಶ್ವತವಾಗಿ ನೆಲೆ ಮಾಡಿರುವ ಕಾರಣ ಇಡೀ ಬಡಾವಣೆ ಸಾಂಸ್ಕೃತಿವಾಗಿ ಹಾಗೂ ಆರ್ಥಿಕವಾಗಿ ಅಭಿವೃಧ್ಧಿ… Read More ವಿದ್ಯಾರಣ್ಯಪುರದ ಕಾಳಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನ

ತೈಲ ಬೆಲೆ

ದೇಶದ ಪ್ರಸಕ್ತ ವಿದ್ಯಮಾನದಲ್ಲಿ ಬಹು ಚರ್ಚಿತವಾಗುತ್ತಿರುವುದು ಎರಡು ವಿಷಯಗಳು. ಒಂದು ರಫೈಲ್ ಯುದ್ಧ ವಿಮಾನಗಳ ಖರೀದಿಯ ಹಗರಣ ಮತ್ತೊಂದು ತೈಲ ಬೆಲೆ ಏರಿಕೆ.  ರಫೈಲ್ ಪ್ರಕರಣವು ಕೇವಲ ಆರೋಪಕ್ಕಷ್ಟೇ ಸೀಮೀತವಾಗಿ ಯಾವುದೇ ಸಾಕ್ಷಾಧಾರಗಳನ್ನು ಒದಗಿಸದೆ , ಪ್ರತೀಬಾರಿ ಒಂದೊಂದು ಅಂಕಿ ಅಂಶಗಳನ್ನು ಒದಗಿಸುತ್ತಾ ಹಗರಣವನ್ನು ಕೇವಲ ಜನ ಮಾನಸದಲ್ಲಿ ಮಾತ್ರ  ಸಾಬೀತು ಮಾಡಲು ಪರಿತಪಿಸುತ್ತಿರುವ ಕಾರಣ ಹೆಚ್ಚಿನ ಗಮನ ಹರಿಸುವುದು ಕೇವಲ ಸಮಯ ವ್ಯರ್ಥವಷ್ಟೇ. ಆದರೆ ಮತ್ತೊಂದು ಸಮಸ್ಯೆಯಾದ ತೈಲ ಬೆಲೆ ಏರಿಕೆ ನಿಜಕ್ಕೂ ಕಳವಳಕಾರಿ ಮತ್ತು… Read More ತೈಲ ಬೆಲೆ

ಈ ಬಂಧ ಅನುಬಂಧ

ಕಳೆದ ಒಂದು ವಾರದಿಂದ ಕಛೇರಿಯಲ್ಲಿ ಬಹಳ ಕೆಲಸವಿದ್ದ ಕಾರಣ ರಾತ್ರಿ ಪಾಳಿ ಮುಗಿಸಿ ಇಂದು ಬೆಳಿಗ್ಗೆ ಮನೆಗೆ ಬಂದಾಗ ನಗು ಮುಖದಿಂದಲೇ ಸ್ವಾಗತಿಸಿದ ನನ್ನ ಮಡದಿ, ಜನ್ಮದಿನದ ಶುಭಾಶಯಗಳು ಎಂದು ಆತ್ಮೀಯವಾಗಿ ಹೇಳಿದಾಗ ಮನಸ್ಸಂತೋಷವಾಯಿತು. ಆಶ್ವಯುಜ ‌ಶುಧ್ಧ ಪಂಚಮಿ,  ದಸರಾ ಹಬ್ಬದ ಐದನೆಯ ದಿನ, ಜನ್ಮ ತಿಥಿ‌ಯ ಪ್ರಕಾರ ನನ್ನ ಹುಟ್ಟಿದ ದಿನ. ‌ಛೇ, ಕಳೆದ ವರ್ಷ ಇದೇ ಸಮಯದಲ್ಲಿ ನನಗೆ ಹುಟ್ಟು ಹಬ್ಬದ ‌ಶುಭಾಶಯಗಳನ್ನು ಹೇಳಿ ಐದುನೂರರ ಎರಡು ನೋಟುಗಳನ್ನು ನನ್ನ ಜೋಬಿನಲ್ಲಿ ಇರಿಸಿ ಹೃದಯಪೂರ್ವಕವಾಗಿ… Read More ಈ ಬಂಧ ಅನುಬಂಧ