ಪದೇ ಪದೇ ತಪ್ಪು ಮಾಡುವ ವಿದೇಶಿಗರು ಗಡಿ ಪಾರು ಆಗಲೇ ಬೇಕು.

ಒಮ್ಮೆ ತಪ್ಪು ಮಾಡಿದಲ್ಲಿ ಅದು ಕ್ಷಮಾರ್ಹವಾಗುತ್ತದೆ. ಅದೇ ತಪ್ಪನ್ನು ಎರಡನೇ ಬಾರಿ ಮಾಡಿದಲ್ಲಿ ಮೂರ್ಖತನ ಎನಿಸಿಕೊಳ್ಳುವ ಕಾರಣ ಸುಮ್ಮನೇ ಬಿಟ್ಟು ಬಿಡಬಹುದು. ಅದರೆ, ಹಿಂದಿನ ತಪ್ಪುಗಳಿಂದ ಸ್ವಲ್ಪವೂ ಬುದ್ದಿಯನ್ನು ಕಲಿಯದೇ, ಪದೇ ಪದೇ ಮಾಡಿದ ತಪ್ಪನ್ನೇ ಮಾಡುತ್ತಲೇ ಹೋದಲ್ಲಿ ಅದು ಪ್ರಮಾದ ಎನಿಸಿಕೊಳ್ಳುವ ಕಾರಣ ಅದಕ್ಕೆ ಕಠಿಣಾತಿ ಕಠಿಣ ಶಿಕ್ಷೆಗೆ ಒಳಪಡಿಸಲೇ ಬೇಕಾಗುತ್ತದೆ. ಹೀಗೆ ಪದೇ ಪದೇ ತಪ್ಪನ್ನು ಮಾಡುತ್ತಿರುವ ಚೇತನ್ ಅಹಿಂಸಾ ಎಂಬ ವಿದೇಶಿಗನನ್ನು ಗಡಿಪಾರು ಹೊರತು ಮತ್ತಾವ ಶಿಕ್ಷೆಯೂ ಕಡಿಮೆ ಎನಿಸಿಕೊಳ್ಳುತ್ತದೆ… Read More ಪದೇ ಪದೇ ತಪ್ಪು ಮಾಡುವ ವಿದೇಶಿಗರು ಗಡಿ ಪಾರು ಆಗಲೇ ಬೇಕು.

ನಕ್ಸಲರು

1960ರ ಉತ್ತರಾರ್ಧದಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷ ದೇಶಾದ್ಯಂತ ಕಮ್ಯೂನಿಸ್ಟ್ ಕ್ರಾಂತಿಯನ್ನು ತೀವ್ರವಾಗಿ ಹರಡ ಬೇಕೆಂಬ ಸಂಕಲ್ಪ ಮಾಡಿ ಅದನ್ನು ಕಾರ್ಯರೂಪಕ್ಕೆ ತರಲು ವಿವಿಧ ರೀತಿಯ ಯೋಜನೆ ಮಾಡುತ್ತಿರುವಾಗಲೇ ಅವರವರಲ್ಲಿಯೇ ಭಿನ್ನಾಭಿಪ್ರಾಯ ಮೂಡಿದ ಕಾರಣ ಕಮ್ಯೂನಿಷ್ಟ್ ಪಕ್ಷದವು ಎರಡು ಬಣಗಳಾಗಿ ಒಡೆದುಹೋಯಿತು. ಮೊದನೆಯ ಬಣ ಪ್ರಜಾಪ್ರಭುತ್ವ ರೀತಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ತನ್ನ ಶಕ್ತಿಯ ಮೂಲಕ ಅಧಿಕಾರಕ್ಕೆ ಬರಲು ಯೋಚಿಸಿದರೆ ಮತ್ತೊಂದು ಬಣಕ್ಕೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯನ್ನು ಹೊಂದಿರದೇ ಗೆರಿಲ್ಲಾ ಮಾದರಿಯಲ್ಲಿ ದೊಡ್ಡ ದೊಡ್ಡ ನಗರಗಳಲ್ಲಿ ದಂಗೆಯನ್ನು ಎಬ್ಬಿಸುವ ಮೂಲಕ ಶಕ್ತಿಯನ್ನು… Read More ನಕ್ಸಲರು