ಭುವನಗಿರಿ ಶ್ರೀ ಭುವನೇಶ್ವರಿ ದೇವಾಲಯ

ಎಲ್ಲರಿಗೂ ತಿಳಿದಿರುವಂತೆ ತಾಯಿ ಭುವನೇಶ್ವರಿ ದೇವಿಯನ್ನು  ಕರ್ನಾಟಕದ ರಾಜ್ಯ ದೇವತೆ ಅರ್ಥಾತ್ ಕನ್ನಡ ದೇವತೆ ಎಂದು ಪೂಜಿಸಲಾಗುತ್ತದೆ. ಇಂತಹ ಭುವನೇಶ್ವರಿ ದೇವಿಯು ಪಾರ್ವತಿ ದೇವಿಯ ಹತ್ತು ಮಹಾ ವಿದ್ಯಾ ದೇವತೆಗಳಲ್ಲಿ ಒಬ್ಬಳಾಗಿದ್ದು, ನಾಲ್ಕನೆಯವಳಾಗಿ ತಾಯಿ ದುರ್ಗೆಯ ಒಂದು ಅಂಶವಾಗಿದ್ದಾಳೆ. ಭುವನೇಶ್ವರಿ ಎಂಬುದು ಸಂಸ್ಕತ ಪದವಾಗಿದ್ದು ಭುವನ ಎಂದರೆ ವಿಶ್ವ ಎಂಬರ್ಥವಾಗಿದ್ದು ಭುವನೇಶ್ವರಿ ಎಂದರೆ ವಿಶ್ವಕ್ಕೇ ಒಡತಿ ಅರ್ಥಾತ್  ವಿಶ್ವಕ್ಕೇ ತಾಯಿ ಎಂಬ ಅರ್ಧವಿದೆ. ಇಂತಹ ಭುವನೇಶ್ವರಿಯ  ಸುಮಾರು ಸಾವಿರ ವರ್ಷಗಳಷ್ಟು ಇತಿಹಾಸವಿರುವ ದೇವಾಲಯವು  ಉತ್ತರ ಕನ್ನಡ ಜಿಲ್ಲೆಯ… Read More ಭುವನಗಿರಿ ಶ್ರೀ ಭುವನೇಶ್ವರಿ ದೇವಾಲಯ

ಕೃಷ್ಣರಾಜ ಮಾರುಕಟ್ಟೆ (ಕೆ.ಆರ್. ಮಾರುಕಟ್ಟೆ)

ಸುಮಾರು 100 ವರ್ಷಗಳ ಇತಿಹಾಸವಿರುವ, ಏಷ್ಯಾದ ಅತಿ ದೊಡ್ಡ ಸಗಟು ಹೂವಿನ ಮಾರುಕಟ್ಟೆಗಳಲ್ಲಿ ಒಂದಾದ ಮೊದಲಿಗೆ ಕಲ್ಯಾಣಿ, ಯುದ್ದ ಭೂಮಿ, ಸಂತೆ ಕಟ್ಟೆ, ಅಂತಿಮವಾಗಿ ಮಾರುಕಟ್ಟೆಯಾಗಿದ್ದಲ್ಲದೇ ಇನ್ನೂ ಹತ್ತು ಹಲವಾರು ಹೊಸತನದ ರೋಚಕ ಇತಿಹಾಸವನ್ನು ಹೊಂದಿರುವ ಕೃಷ್ಣರಾಜ ಮಾರುಕಟ್ಟೆಯ ಬಗ್ಗೆ ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಕೃಷ್ಣರಾಜ ಮಾರುಕಟ್ಟೆ (ಕೆ.ಆರ್. ಮಾರುಕಟ್ಟೆ)

ನಾಡಪ್ರಭು ಶ್ರೀ ಕೆಂಪೇಗೌಡರು

ಪ್ರಗತಿ ಪ್ರತಿಮೆ ಎಂಬ ಹೆಸರಿನಲ್ಲಿ 108 ಅಡಿ ಎತ್ತರದ 218 ಟನ್‌ ತೂಕವಿರುವ ವಿಶ್ವವಿಖ್ಯಾತ ಬೆಂಗಳೂರಿನ ನಿರ್ಮಾತರಾದ ನಾಡಪ್ರಭು ಶ್ರೀ ಕೆಂಪೇಗೌಡರ ಪ್ರತಿಮೆ ಬೆಂಗಳೂರಿನಲ್ಲಿ ಅನಾವರಣಗೊಳ್ಳುತ್ತಿರುವ ಈ ಶುಭಸಂಧರ್ಭದಲ್ಲಿ, ಕೆಂಪೇಗೌಡರ ವ್ಯಕ್ತಿ, ವ್ಯಕ್ತಿತ್ವ, ಸಾಧನೆಯ ಜೊತೆಗೆ ಅಂತಹ ಪ್ರಾಥಃಸ್ಮರಣೀಯ ಯಶೋಗಾಧೆಯನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಮೆಲುಕು ಹಾಕೋಣ ಬನ್ನಿ.… Read More ನಾಡಪ್ರಭು ಶ್ರೀ ಕೆಂಪೇಗೌಡರು

ಬದಾಮಿ ಬನಶಂಕರಿಯ ಬನದ ಹುಣ್ಣಿಮೆ

ಬಾಗಲಕೋಟೆ ಜಿಲ್ಲೆಯಲ್ಲಿ ಪಾರ್ವತೀ ದೇವಿಯ ಅಪರಾವತಾರವಾಗಿ ಸಿಂಹವಾಹಿನಿಯಾಗಿ, ಬಾಳವ್ವ, ಬನದವ್ವ, ಸುಂಕವ್ವ, ಶಾಕಾಂಬರಿ, ಶಿರಿವಂತಿ, ಚೌಡಮ್ಮ, ವನದುರ್ಗೆ ಎಂಬ ಹತ್ತಾರು ಹೆಸರುಗಳಿಂದ ಕರೆಯಿಸಿಕೊಳ್ಳುವ ಬದಾಮಿಯ ಬನಶಂಕರಿಯಲ್ಲಿ ನಡೆಯುವ ಬನದ ಹುಣ್ಣಿಮೆ ಜಾತ್ರೋತ್ಸವ, ಬನಶಂಕರಿ ಸ್ಥಳ ಮಹಾತ್ಮೆ ಮತ್ತು ದೇವಿಯ ಐತಿಹ್ಯದ ಕುರಿತಾದ ಸವಿವರಗಳು ಇದೋ ನಿಮಗಾಗಿ… Read More ಬದಾಮಿ ಬನಶಂಕರಿಯ ಬನದ ಹುಣ್ಣಿಮೆ

ಕೈಂಕರ್ಯ

ಸೇವೆ ಎಂದರೆ ಕೇವಲ ಹಣದಿಂದ ಮಾತ್ರವೇ ಮಾಡಬೇಕು ಎಂದೇನಿಲ್ಲ ಮತ್ತು ಮಾಡಿದ ಸೇವೆಯನ್ನು ಜಗಜ್ಜಾಹೀರಾತು ಮಾಡುವ ಅವಶ್ಯಕತೆಯೂ ಇಲ್ಲ. ಇಲ್ಲಿ ಯಾರು? ಏನೇನು? ಎಷ್ಟೆಷ್ಟು? ಹೇಗೆ ಸೇವೆ ಮಾಡಿದರು ಅನ್ನೋದರ ಕುರಿತು ಚರ್ಚಿಸಿದರೆ, ಅವರು ಮಾಡಿದ ಸೇವೆಗೆ ಅಪಮಾನ ಮಾಡಿತಂತೆ. ಅವರವರು ಮಾಡಿದ ಸೇವೆ ಅವರಿಗೇ ಮತ್ತು ಭಗವಂತನಿಗೆ ಗೊತ್ತಾದರೆ ಸಾಕು. ಬಲಗೈಯಲ್ಲಿ ಕೊಟ್ಟದ್ದು ಎಡಗೈಗೂ ತಿಳಿಯದ ಹಾಗೆ ಮಾಡಿದರೇನೇ ಕೈಂಕರ್ಯ/ಸೇವೆ ಅನ್ನೋದು.… Read More ಕೈಂಕರ್ಯ