2021 ಕೊರೊನಾ, 2025 ಜಲಗಂಡಾಂತರ?

ಪ್ರತೀ ಮಕರ ಸಂಕ್ರಾಂತಿಯಂದು ಸಾಕ್ಷಾತ್​ ಸೂರ್ಯದೇವನೇ ಗವಿಪುರಂ ಗುಟ್ಟಹಳ್ಳಿಯ ಶ್ರೀ ಗವಿಗಂಗಾಧರೇಶ್ವರ ಸ್ವಾಮಿ ದೇವಾಲಯದಲ್ಲಿ ಸ್ವಾಮಿಯ ಪಾದಕ್ಕೆ ಎರಗಿ ಆಶೀರ್ವಾದ ಮತ್ತು ಅನುಮತಿ ಕೋರಿ, ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಸಾಗುತ್ತಾನೆ ಎನ್ನುವ ನಂಬಿಕೆ ಇದ್ದು, ಈ ಬಾರಿ ಸೂರ್ಯನ ರಶ್ಮಿಯು ಸ್ವಾಮಿಯ ಮೇಲೆ ಬೀಳದಿರುವ ಕಾರಣ ಭಕ್ತಾದಿಗಳಲ್ಲಿ ಮೂಡಿರುವ ಆತಂಕದ ಕಥೆ-ವ್ಯಥೆ ಇದೋ ನಿಮಗಾಗಿ… Read More 2021 ಕೊರೊನಾ, 2025 ಜಲಗಂಡಾಂತರ?

ವೈಯ್ಯಾಳೀಕಾವಲ್

ಬೆಂಗಳೂರಿನ ಪ್ರತಿಷ್ಟಿತ ಬಡಾವಣೆಯಾಗಿರುವ ವಯ್ಯಾಳಿಕಾವಲ್ ವಿಶೇಷತೆಗಳೇನು? ಆ ಪ್ರದೇಶಕ್ಕೆ ಆ ಹೆಸರು ಬರಲು ಕಾರಣವೇನು? ಅಲ್ಲಿರುವ ಪ್ರಮುಖ ತಾಣಗಳ ಕುರಿತಾದ ಕುತೂಹಲಕಾರಿ ವಿವರಗಳನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ವೈಯ್ಯಾಳೀಕಾವಲ್

ಗೌತಮ ಕ್ಷೇತ್ರ ಗವಿ ಗಂಗಾಧರೇಶ್ವರ ದೇವಾಲಯ

ಬೆಂಗಳೂರು ಉದ್ಯಾನ ನಗರಿ ಎಂದು ಹೇಗೆ ಪ್ರಖ್ಯಾತವಾಗಿದೆಯೇ, ಅದೇ ರೀತಿ ಧಾರ್ಮಿಕವಾಗಿ ದೇವಲಯಗಳ ನಗರೀ ಎಂದರೂ ಅತಿಶಯೋಕ್ತಿಯೇನಲ್ಲ. ಬೆಂಗಳೂರಿನ ಪ್ರತೀ ಬಡಾವಣೆಗಳ್ಲಿಯೂ ಕನಿಷ್ಠಪಕ್ಷ ಎರಡು ದೇವಾಲಯಗಳನ್ನು ಕಾಣ ಬಹುದಾಗಿದೆ. ಬೆಂಗಳೂರು ಮಾಹಿತಿ ತಂತ್ರಜ್ಞಾನದಲ್ಲಿ ಜಗತ್ವಿಖ್ಯಾತವಾಗಿ ಎಷ್ಟೇ ಮುಂದುವರೆದಿದೆಯೋ, ಈ ದೇವಾಲಯಗಳಲ್ಲಿನ ಧಾರ್ಮಿಕ ಚಟುವಟಿಗೆಗಳ ಮೂಲಕ ಅಷ್ಟೇ ಲೋಕಕಲ್ಯಾಣ ಕಾರ್ಯಗಳಲ್ಲಿ ತೊಡಗಿಸಿಕೊಂಡಿವೆ. ಬೆಂಗಳೂರಿನ ಹೃದಯಭಾಗದಲ್ಲಿರುವ ಬಸವನಗುಡಿಯ ಪಕ್ಕದ ಕೆಂಪೇಗೌಡನಗರ ಅರ್ಥಾಥ್ ಗವಿಪುರಂ ಗುಟ್ಟಹಳ್ಳಿಯಲ್ಲಿರುವ ಶ್ರೀಗವಿಗಂಗಾಧರೇಶ್ವರ ಸ್ವಾಮಿ ದೇವಾಲಯ, ಭಾರತದಲ್ಲಿರುವ ಅತ್ಯಂತ ಪ್ರಾಚೀನ ಗುಹಾಂತರ ದೇವಾಲಯಗಳಲ್ಲೊಂದಾಗಿದೆ. ಸಾವಿರಾರು ವರ್ಷಗಳ ಐತಿಹ್ಯವಿರುವ… Read More ಗೌತಮ ಕ್ಷೇತ್ರ ಗವಿ ಗಂಗಾಧರೇಶ್ವರ ದೇವಾಲಯ