ಸಾಧಾರಣವಾಗಿ “ಇನ್ನಿಲ್ಲ” ಅನ್ನುವ ಪದವನ್ನು ಸಮಾಜದ ಯಾರಾದರೂ ಗಣ್ಯವ್ಯಕ್ತಿಗಳು ಸತ್ತಾಗ ಹೇಳುವುದು ವಾಡಿಕೆ. ಆದತೆ ನಮ್ಮ ಸಂಸ್ಕೃತಿಯಲ್ಲಿ ಮರಗಳನ್ನೂ ಮನುಷ್ಯರ ರೀತಿಯಿಂದಲೇ ಪ್ರೀತಿಸುವುದರಿಂದ ಈಗ ನಾನು ಹೇಳಲು ಹೊರಟಿರುವುದು ನಮ್ಮ ವಿದ್ಯಾರಣ್ಯಪುರದ ವಕ್ಷಸ್ಥಳದಲ್ಲಿದ್ದ ಈಚಲು ವೃಕ್ಷದ ಅವಸಾನದ ಗೋಳಿನ ಕಥೆ.
ವಿದ್ಯಾರಣ್ಯಪುರದ ಮುಖ್ಯರಸ್ತೆಯಲ್ಲಿ ಹಳೆಯ ಪಳಿಯುಳಿಕೆಯಂತಿದ್ದ, ತನ್ನ ಇರುವಿಕೆಯಂದಲೇ ಈಚಲುಮರ ಬಸ್ ಸ್ಟಾಪ್ ಎಂದೇ ಹೆಸರಾಗಿದ್ದ ಪುರಾತನ ಈಚಲು ಮರಕ್ಕೆ ಇಂದು ಬೆಳಿಗ್ಗೆ ಹಾಲಿನ ವಾಹನದ ಚಾಲಕನ ಅಜಾಗರೂಕತೆಯಂದಲೋ ಅಥವ ನಿಯಂತ್ರಣ ತಪ್ಪಿಯೋ ಗುದ್ದಿದ ಪರಿಣಾಮವಾಗಿ ಈಚಲು ಮರ ಧರೆಗುರುಳಿ ಅವಸಾನವಾಗಿದೆ. ಸಮಾಜದಲ್ಲಿ ಈಚಲು ಮರಕ್ಕೆ ಹೆಚ್ಚಿನ ಪ್ರಾಧಾನ್ಯತೆ ಇಲ್ಲದೆ ನಿಕೃಷ್ಟವಾಗಿ ನೋಡುವಂತಹ ಪರಿಸ್ಥಿತಿಯಿದ್ದರೂ, ನಮ್ಮ ವಿದ್ಯಾರಣ್ಯಪುರ ನಿವಾಸಿಗಳಿಗೆ ಈ ಈಚಲುಮರ ಅಚ್ಚು ಮೆಚ್ಚಾಗಿತ್ತು ಎಂದು ಹೇಳಿದರೆ ಅತಿಶಯೋಕ್ತಿ ಏನಲ್ಲ.
ಈಗಾಗಲೇ ಕೆಲವರು ಈಚಲುಮರ ಇಲ್ಲವಾದ್ದರಿಂದ ಆ ಬಸ್ ನಿಲ್ಡಾಣವನ್ನು ಕರ್ನಾಟಕ ಬ್ಯಾಂಕ್ ನಿಲ್ದಾಣ ಆಥವಾ A2B stop ಎಂದು ಕರೆಯಬೇಕೆಂದು ಸೂಚಿಸುತ್ತಿರುವರಾದರೂ, ಬೆಂಗಳೂರಿನ ಶಿವಾನಂದ, ನಿರ್ಮಲಸ್ಟೋರ್ಸ್, ಸುಜಾತ, ಸ್ವಸ್ತಿಕ್ ಅಂಗಡಿ ಮತ್ತು ಚಿತ್ರಮಂದಿರಗಳು ಈಗಿಲ್ಲವಾದರೂ ಅದನ್ನು ಅದೇ ಹೆಸರಿನಿಂದ ಕರೆಯಲ್ಪಡುವಂತೆ ನಮ್ಮ ವಿದ್ಯಾರಣ್ಯಪುರದಲ್ಲಿ ಆ ಹಳೆಯ ಈಚಲುಮರ ಈಗ ಇಲ್ಲದಿದ್ದರೇನಂತೆ ಆ ಬಸ್ ನಿಲ್ದಾಣ ಎಂದೆಂದಿಗೂ ಈಚಲುಮರ ಸ್ಟಾಪ್ ಎಂದೇ ಇರುತ್ತದೆ. ಬೇಕಿದ್ದರೆ, ನಾವಲ್ಲಿ ಮತ್ತೋಂದು ಈಚಲುಮರವನ್ನು ಮರವನ್ನು ನೆಟ್ಟು ಪೋಷಿಸಿ ಈಚಲುಮರ ಸ್ಟಾಪ್ ಹೆಸರನ್ನು ಅಜರಾಮರಗೊಳಿಸೋಣ.
ಏನಂತೀರೀ?