ಅರ್ಥಪೂರ್ಣ ಸ್ವಾತಂತ್ರ್ಯೋತ್ಸವದ ಆಚರಣೆ

ಆಗಸ್ಟ್ 15, 1947ರಂದು ಬ್ರಿಟಿಷರ ದಾಸ್ಯದಿಂದ ಹೊರಬಂದು ಭಾರತ ಸ್ವಾತಂತ್ರ್ಯ ಪಡೆದ ನಂತರ ಪ್ರತೀ ವರ್ಷವೂ ಸಡಗರ ಸಂಭ್ರಮಗಳಿಂದ ಸರ್ಕಾರದ ವತಿಯಿಂದ, ಸಂಘಸಂಸ್ಥೆಗಳು ಮತ್ತು ಶಾಲಾಕಾಲೇಜುಗಳಲ್ಲಿ ಸ್ವಾತಂತ್ರ್ಯೋತ್ಸವನ್ನು ಆಚರಿಸಿಕೊಂಡು ಬರುವುದು ವಾಡಿಕೆ. ಬೆಳ್ಳಂಬೆಳ್ಳಿಗೆ ಎಲ್ಲರೂ ಹತ್ತಿರದ ಮೈದಾಗಳಿಗೆ ಹೋಗಿ ನಮ್ಮ ತ್ರಿವರ್ಣಧ್ವಜವನ್ನು ಹಾರಿಸಿ, ಎತ್ತರದ ಧ್ವನಿಯಲ್ಲಿ ಜನಗಣಮನ ರಾಷ್ಟ್ರಗೀತೆಯನ್ನು ಹಾಡಿ ಬೋಲೋ…. ಭಾರತ್ ಮಾತಾ ಕೀ… ಜೈ ಎಂದು ನಾಭಿ ಹರಿಯುವಂತೆ ಘೋಷಣೆ ಕೂಗುವ ಸಂತೋಷವನ್ನು ಹೇಳುವುದಕ್ಕಿಂದ ಅನುಭವಿಸಿವರಿಗೇ ಗೊತ್ತು ಅದರ ಗಮ್ಮತ್ತು. ಧ್ವಜಾರೋಹಣದ ನಂತರ ವಂದಿಮಾಗದರಿಂದ ದೇಶಭಕ್ತಿಯನ್ನು ಬಡಿದೆಬ್ಬಿಸುವ ಭಾಷಣ ಇಡೀ ದಿನವೆಲ್ಲಾ ಮನಸ್ಸಿನಲ್ಲಿಯೇ ರಂಗಣಿಸುತ್ತಿದ್ದವು.

ದುರಾದೃಷ್ಟವಷಾತ್ ಪ್ರಪಂಚಾದ್ಯಂತ ಕೂರೋನಾ ಎಂಬ ಮಹಾಮಾರಿ ವಕ್ಕರಿಸಿ ಇಡೀ ಜಗತ್ತನ್ನೇ ಲಾಕ್ ಡೌನ್ ಮಾಡಿರುವ ಕಾರಣ, ಸಾಮಾಜಿಕ ಅಂತರವನ್ನು ಕಾಪಾಡುವುವ ನಿಟ್ಟಿನಲ್ಲಿ ಎಲ್ಲಾ ಉತ್ಸವಗಳೂ ಸಾಂಕೇತಿಕವಾಗಿ ಆಚರಣೆಯಾಗುತ್ತಿರುವ ಸಂದರ್ಭದಲ್ಲಿ ಹುಣಸೂರು ತಾಲ್ಲೂಕ್ಕಿನ ಚಿಲ್ಕುಂದ ಗ್ರಾಮದ ಬಾಲಕಿ ಪ್ರಜ್ಞಾ ಬೇಸಿಗೆ ರಜೆಗೆಂದು ಗಂಗಾವತಿಯಲ್ಲಿರುವ ಅಜ್ಜಿಯ ಮನೆಗೆ ಬಂದು ಊರಿಗೆ ಮರಳಲಾಗದೇ ಅಜ್ಜಿಯ ಮನೆಯಿಂದಲೇ Online ಮೂಲಕ ಅಭ್ಯಾಸ ನಡೆಸುತ್ತಿದ್ದಾಳೆ.

ಈ ಬಾರಿ ಸಂಭ್ರಮದಿಂದ 74ನೇ ಸ್ವಾತ್ರಂತ್ಯ್ರ ದಿನಾಚರಣೆಯನ್ನು ಆಚರಿಸಲು ಆಗದೇ ಹೋದ್ದಕ್ಕೆ ಸುಮ್ಮನೇ ಪರಿತಪಿಸಿಕೊಂಡು ಕೂರದೇ, ತನ್ನ ಅಮ್ಮ, ಅಜ್ಜಿ ಮತ್ತು ಅಜ್ಜನ ಜೊತೆ ಮನೆಯಲ್ಲಿಯೇ ಸಡಗರ ಸಂಭ್ರಮಗಳಿಂದ ಮತ್ತು ಅಷ್ಟೇ ಅರ್ಥಪೂರ್ಣವಾಗಿ ಸ್ವಾತ್ರಂತ್ಯ್ರ ದಿನಾಚರಣೆಯನ್ನು ಆಚರಣೆ ಮಾಡಿರುವುದು ನಿಜಕ್ಕೂ ಅಭಿನಂದನೀಯ ಮತ್ತು ಅನುಕರಣೀಯವೇ ಸರಿ.

ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಇಂತಹ ದೇಶಭಕ್ತ ಸಂಸ್ಕಾರವಂತ ಮಕ್ಕಳನ್ನು ಹೆಡೆದ ತಾಯಿ ತಂದೆಯರೂ ಮತ್ತು ಅವರಿಗೆ ವಿದ್ಯೆಯನ್ನು ಕಲಿಸಿಕೊಟ್ಟ ಶಿಕ್ಷಕರು ಮತ್ತು ಸಂಸ್ಕಾರವನ್ನು ಕಲಿಸಿಕೊಟ್ಟ ಅವರ ಸಮಸ್ತ ಕುಟುಂಬದವರು ನಿಜಕ್ಕೂ ಧನ್ಯರು. ಇಂತಹ ಮಕ್ಕಳ ಸಂಖ್ಯೆ ಅಗಣಿತವಾದಲ್ಲಿ ನಮ್ಮ ಭಾರತ ದೇಶ ಅತೀ ಶೀಘ್ರದಲ್ಲಿಯೇ ಮತ್ತೊಮ್ಮೆ ವಿಶ್ವಗುರುವಾಗುವುದರಲ್ಲಿ ಸಂದೇಶವೇ ಇಲ್ಲ

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s