ಬ್ರಾಹ್ಮಣರು ಭಾರತೀಯರಲ್ಲವೇ? ಬ್ರಾಹ್ಮಣರಿಗೆ ಭಾರತದಲ್ಲಿ ಜೀವಿಸುವ ಹಕ್ಕಿಲ್ಲವೇ?

ಇತ್ತೀಚಿನ ದಿನಗಳಲ್ಲಿ ಬಹುಮಟ್ಟಿಗೆ ಕೇಳುತ್ತಿರುವುದು ಎರಡು ವಿಷಯ ಒಂದು ಕೊರೋನ ಕುರಿತಾದ ವಿಷಯವಾದರೆ, ಇನ್ನೊಂದು ಬ್ರಾಹ್ಮಣ್ಯ ಮತ್ತು ಬ್ರಾಹ್ಮಣರ ವಿರುದ್ಧ ಅನಾವಶ್ಯಕವಾಗಿ ತಮ್ಮ ತಮ್ಮ ತೆವಲುಗಳನ್ನು ತೀರಿಸಿಕೊಳ್ಳುವಷ್ಟು ವಾಚಾಮಗೋಚರವಾಗಿ ಕಂಡ ಕಡೆಗೆಳಲ್ಲಿ ಬೈದಾಡುತ್ತಾ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವ ಮಂದಿಗಳೇ ಹೆಚ್ಚಾಗಿದ್ದಾರೆ. ಮೇಲೆ ತಿಳಿಸಿದ ಎರಡೂ ವಿಷಯಗಳೂ ಒಂದಕ್ಕೊಂದು ಪೂರಕವಾಗಿದೆ ಅಂದ್ರೇ ಆಶ್ಚರ್ಯವಾಗುತ್ತದೆ ಅಲ್ವೇ?

WhatsApp Image 2021-06-29 at 8.00.40 PM (1)

ನಿಜ ಹೇಳ್ಬೇಕು ಅಂದ್ರೇ, ಬಹಳ ಹಿಂದಿನಿಂದಲೂ ನಮ್ಮಲ್ಲಿ ತಮ್ಮ ಕರ್ಮಾನುಸಾರವಾಗಿ ವರ್ಣಾಶ್ರಮಗಳು ರೂಢಿಯಲ್ಲಿ ಇತ್ತೇ ಹೊರತು ಅವು ಜನ್ಮತಃ ಆಚರಣೆಯಲ್ಲಿರಲಿಲ್ಲ, ಯಾರು ಬ್ರಹ್ಮತ್ವವನ್ನು ಪಾಲಿಸಿ ಕರ್ಮಾನುಷ್ಠಾನಗಳನ್ನು ಪಾಲಿಸುತ್ತಾ ಶಾಸ್ತ್ರ ಸಂಪ್ರದಾಯಗಳ ಜೊತೆಗೆ ವೇದಾಧ್ಯಯನದ ಮೂಲಕ ಜ್ಞಾನಾರ್ಜನೆ ಮಾಡುವುದಲ್ಲದೇ ತಮ್ಮ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವವರು ಮಾತ್ರವೇ ಬ್ರಾಹ್ಮಣರಾಗುತ್ತಿದ್ದರು. ಒಕ್ಕಲುತನ ಮಾಡುವವರ ಮನೆ ಹುಡುಗ ಓದಿ ಬ್ರಹ್ಮತ್ವವನ್ನು ಪಡೆದು ಜ್ಞಾನಿಯಾಗಿ ಬ್ರಾಹ್ಮಣನಾಗಬಹುದಿತ್ತು. ಅದೇ ರೀತಿ ಬ್ರಾಹ್ಮಣರ ಮನೆಯ ಕ್ಷಾತ್ರತೇಜದ ಬಲಶಾಲಿ ಹುಡುಗ ಸೈನ್ಯವನ್ನು ಸೇರಿ ದೇಶವನ್ನು ಕಾಯುವ ಕ್ಷತ್ರಿಯನಾಗಬಹುದಿತ್ತು. ನಂತರದ ದಿನಗಳಲ್ಲಿ ಅದೇ ವರ್ಣಾಶ್ರಮ ಜನ್ಮತಃ ಜಾತಿಯತೆಗೆ ಬದಲಾಗಿದ್ದು ವಿಪರ್ಯಾಸವೇ ಸರಿ.

ರಾಮ ಕೃಷ್ಣ, ಹನುಮಂತ ಮುಂತಾದ ದೇವಾನು ದೇವತೆಗಳಾಗಲಿ ವಿಶ್ವಮಿತ್ರ, ವಾಲ್ಮೀಕಿ, ವ್ಯಾಸ ಮರ್ಹರ್ಷಿಗಳಾಗಲೀ ಯಾರೂ ಜನ್ಮತಃ ಬ್ರಾಹ್ಮಣರೇ ಅಲ್ಲಾ ಅವರೆಲ್ಲಾರೂ ಬೇರೆ ಬೇರೆಯ ಜಾತಿಯಲ್ಲಿ ಹುಟ್ಟಿದರೂ ತಮ್ಮ ಜ್ಞಾನ, ಆಚಾರ ಮತ್ತು ವಿಚಾರಗಳಿಂದಾಗಿ ದೇವಾನು ದೇವತೆಗಳು ಮತ್ತು ಮಹರ್ಷಿಗಳ ಪಟ್ಟಕ್ಕೆ ಏರಿದ್ದನ್ನು ಸಂಭ್ರಮಿಸಿದ ಬ್ರಾಹ್ಮಣರು ಅವರನ್ನು ದೇವರು ಮತ್ತು ಗುರುಗಳೆಂದು ಭಕ್ತಿಯಿಂದ ಅಂದಿಗೂ ಇಂದಿಗೂ ಪೂಜಿಸಿಕೊಂಡು ಬರುತ್ತಿದ್ದಾರೆ.

ಪ್ರಾಪಂಚಿಕ ಸುಖದಿಂದ ಪಾರಮಾರ್ಥಿಕ ಸುಖಃವನ್ನು ಪಡೆಯಲು ತಾಮಸ ಗುಣಗಳಿಂದ ಸಾತ್ವಿಕ ಗುಣಗಳನ್ನು ಪಡೆಯುವ ಸಲುವಾಗಿ ಕೆಲವೊಂದು ಕಟ್ಟುನಿಟ್ಟಾದ ನಿಷ್ಥೆ, ನೀತಿ ನಿಯಮಗಳನ್ನು ಅನುಸರಿಸಬೇಕಾಗುತ್ತದೆ ಹಾಗಾಗಿಯೇ ಬ್ರಾಹ್ಮಣರು ಮಡಿ ಹುಡಿ ಆಚಾರ ವಿಚಾರವಂತರಾಗಿ ಸಸ್ಯಾಹಾರವನ್ನು ಸೇವಿಸುತ್ತಾ ಶುಚಿವಂತರಾಗಿ ಇರುತ್ತಾರೆ. ಈ ರೀತಿಯ ನಿಯಮಗಳನ್ನು ಆಚರಿಸದೇ ಇರುವರನ್ನು ಮುಟ್ಟಿಸಿಕೊಳ್ಳುವುದಾಗಲೇ ಮನೆಯೊಳಗೆ ಸೇರಿಸಿಕೊಳ್ಳುವುದಾಗಲೀ ಅವರೊಂದಿಗೆ ಊಟವನ್ನು ಸೇವಿಸುವ ಪರಿಪಾಠಗಳನ್ನು ಬೆಳಸಿಕೊಂಡಿರಲಿಲ್ಲ. ಈಗ ಕೊರೋನಾ ಸಮಯದಲ್ಲಿ ಎಲ್ಲರೂ ಕಂಡ ಕಂಡ ತಿನ್ನದೇ, ಉಗುಳದೇ, ಕೈ ಕಾಲು ಮುಖವನ್ನು ತೊಳೆದುಕೊಳ್ಳುವ ಮೂಲಕ ಶುಚಿತ್ವ ಕಾಪಾಡಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿರುವುದನ್ನೇ ಬ್ರಾಹ್ಮಣರು ಅಂದಿನಿಂದಲೂ ಆಚಾರ ವಿಚಾರದ ಹೆಸರಿನಲ್ಲಿ ಪಾಲಿಸಿಕೊಂಡು ಬರುತ್ತಿದ್ದದ್ದನ್ನು ಬ್ರಾಹ್ಮಣ್ಯತ್ವ ಎಂದು ಆಡಿಕೊಳ್ಳುವುದು ಎಷ್ಟು ಸರಿ?

WhatsApp Image 2021-06-29 at 7.31.09 PM

ಇಲ್ಲೊಬ್ಬ ಕನಕದಾಸರಿರುವ ಟಿ-ಶರ್ಟ್ ಹಾಕಿಕೊಂಡವ ಮತ್ತೊಬರಿಗೆ ಕುಡಿಯಲು ಮೇಲಿಂದ ನೀರು ಹಾಕುತ್ತಿರುವ ಪೋಟೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿ, ಇವನು ಬ್ರಾಹ್ಮಣನಲ್ಲ ಆದರೆ ಇವನಲ್ಲಿ ಬ್ರಾಹ್ಮಣ್ಯವಿದೆ ಎಂದು ಓತಪ್ರೋತವಾಗಿ ಕುಹಕವಾಡುವುದು ಎಷ್ಟು ಸರಿ? ಮತ್ತೊಬ್ಬ ಕನ್ನಡ ಚಿತ್ರನಟ ಸ್ವಘೋಷಿತ ಬುದ್ಧಿ ಜೀವಿ ಮತ್ತು ಹೆಸರಿನಲ್ಲೇ ಅಹಿಂಸೆಯನ್ನು ಸೇರಿಸಿಕೊಂಡು ಬ್ರಾಹ್ಮಣ್ಯತ್ವವನ್ನು ಧರ್ಮದ ಭಯೋತ್ಪಾದನೆ ಎಂದು ಬೊಬ್ಬಿರಿಯುತ್ತಾ,ಜನರಲ್ಲಿ ಪ್ರತೀಕಾರದ ಸೇಡಿನ ಹಿಂಸೆಯನ್ನು ಪ್ರಚೋದನೆ ಮಾಡುವವರಿಗೆ ಏನನ್ನಬೇಕು?

ಬ್ರಿಟೀಶರು ಭಾರತಕ್ಕೆ ಬಂದಾಗ, ಮುಸಲ್ಮಾನರು ಈ ದೇಶವನ್ನು ಅ ಪಾಟಿಯಾಗಿ ಕೊಳ್ಳೇ ಹೊಡೆದಿದ್ದರೂ ಸುಭಿಕ್ಷವಾಗಿತ್ತು. ಇಲ್ಲಿ ಎಲ್ಲರೂ ದುಡಿದು ತಿನ್ನುತ್ತಿದ್ದರೇ ಹೊರತು ಮತ್ತೊಬ್ಬರ ಹತ್ತಿರ ಬೇಡುವುದಾಗಲೀ ಅವರಿವರ ತಲೆಯನ್ನು ಹೊಡೆಯುವ ಕುಕೃತ್ಯಕ್ಕೆ ಇಳಿಯುತ್ತಿರಲಿಲ್ಲ. ಆದರೆ ಒಬ್ಬರೊನ್ನಬ್ಬರು ಕಂಡರೆ ಆಗದೇ ಅಸೂಯೆ ಪಡುವುದನ್ನೇ ಗಮನಿಸಿದ ಬ್ರಿಟೀಷರು ಅದನ್ನೇ ಉಪಯೋಗಿಸಿಕೊಂಡು ನಮ್ಮ ನಮ್ಮಲೇ ಒಳಜಗಳ ತಂದು ಇಬ್ಬರ ಜಗಳ ಮೂರನೆಯವನಿಗೆ ಲಾಭ ಎನ್ನುವಂತೆ ಒಂದೊಂದೇ ರಾಜ್ಯಗಳನ್ನು ಕೈವಶ ಮಾಡಿಕೊಳ್ಳುತ್ತಿದ್ದನ್ನು ಗಮನಿಸಿದ ಬುದ್ಧಿವಂತ ಬ್ರಾಹ್ಮಣರು ಜನರನ್ನು ಎಚ್ಚರಿಸಿತೊಡಗಿದರು. ಅದೇ ಕಾರಣಕ್ಕಾಗಿಯೇ ಗೋವಾವನ್ನು ಆಕ್ರಮಣ ಮಾಡಿಕೊಂಡಿದ್ದ ಪೋರ್ಚುಗೀಸರು ಗೋವಾದಲ್ಲಿ ಬಹುಸಂಖ್ಯಾತರಾಗಿದ್ದ ಬ್ರಾಹ್ಮಣರನ್ನು ಬಲವಂತವಾಗಿಯೋ ಮತಾಂತರ ಗೊಳಿಸಿದ್ದಲ್ಲದೇ, ಮತಾಂತರಕ್ಕೆ ಒಪ್ಪದವರನ್ನು ಮಾರಣ ಹೋಮ ಮಾಡುತ್ತಿರುವುದನ್ನು ಸಹಿಸಿದ ಲಕ್ಷಾಂತರ ಬ್ರಾಹ್ಮಣರು ರಾತ್ರೋ ರಾತ್ರಿ ಮನ ಮಠಗಳನ್ನೆಲ್ಲಾ ಬಿಟ್ಟು ತಮ್ಮಪ್ರಾಣ ಉಳಿಸಿಕೊಳ್ಳುವುದಕ್ಕಾಗಿದೇ ಕೇರಳ ಮತ್ತು ಕರ್ನಾಟಕದ ಕಡೆ ವಲಸೆ ಬಂದಿದ್ದು ಈಗ ಇತಿಹಾಸ.

ಬ್ರಾಹ್ಮಣರು ಎಚ್ಚೆತ್ತರೆ ತಮಗೆ ಉಳಿಗಾಲವಿಲ್ಲ ಎಂಬುದನ್ನು ಚೆನ್ನಾಗಿಯೇ ಅರಿತಿದ್ದ ಬ್ರಿಟೀಷರು ಮೊದಲು ಕೈ ಹಾಕಿದ್ದೇ ತಮ್ಮ ಹೊಸಾ ಶಿಕ್ಷಣದ ಪದ್ದತಿಯ ಮೂಲಕ ಗುರುಕುಲವನ್ನು ನಾಶಮಾಡುವುದಕ್ಕೆ. ಕೇವಲ ಗುರುಕುಲವನ್ನು ನಾಶ ಪಡಿಸಿದ್ದಲ್ಲದೇ ಬ್ರಾಹ್ಮಣರು ಶೂದ್ರರನ್ನು ಶೋಷಣೆ ಮಾಡಿದರು ಎಂಬ ಕಾಗಕ್ಕ ಗುಬ್ಬಕ್ಕ ಕತೆಯನ್ನು ಕಟ್ಟಿ ಜನರು ಬ್ರಾಹ್ಮಣರ ವಿರುದ್ಧ ತಿರುಗಿ ಬೀಳುವಂತೆ ಮಾಡುವ ಮೂಲಕ ನಮ್ಮ ನಮ್ಮಲೇ ಒಳಜಗಳ ತಂದು ತಮ್ಮ ಬೇಳೆ ಬೇಯಿಸಿಕೊಂಡಿದ್ದು ಈಗ ಇತಿಹಾಸ.

ತಮ್ಮ ಪಾಂಡಿತ್ಯದಿಂದ ರಾಜನನ್ನು ಮೆಚ್ಚಿಸಿ ಉಂಬಳಿಯಾಗಿ ಪಡೆದಿದ್ದ ಜಮೀನುಗಳನ್ನು ಆಳು ಕಾಳುಗಳೊಂದಿಗೆ ನೋಡಿಕೊಳ್ಳುತ್ತಾ ರಾಮಾ ಕೃಷ್ಣಗೋವಿಂದಾ ಎಂದು ಭಗವಂತನ ಧ್ಯಾನ ಮಾಡುತ್ತಾ ಇದ್ದದ್ದರಲ್ಲಿಯೇ ಸುಖಃವನ್ನು ಕಾಣುತ್ತಿದ್ದ ಬಹುತೇಕ ಬ್ರಾಹ್ಮಣರು ಎಪ್ಪತ್ತರ ದಶಕದಲ್ಲಿ ಬಂದ ಉಳುವವನೇ ರೈತ ಎಂಬ ನಿಯಮದಡಿಯಲ್ಲಿ ರಾತ್ರೋ ರಾತ್ರಿ ಇದ್ದ ಬದ್ದ ಜಮೀನುಗಳನ್ನೆಲ್ಲಾ ಕಳೆದು ಕೊಂಡು ಬೀದಿ ಪಾಲಿನ ಭಿಕ್ಷುಕರಾದರೂ, ಪಾಲಿಗೆ ಬಂದದ್ದು ಪಂಚಾಮೃತ ಎಂದು ಸ್ವೀಕರಿಸಿದರೇ ವಿನಾಃ ಉಗ್ರಗಾಮಿಗಳಾಗುವುದು ಬಿಡಿ, ಉಗ್ರವಾಗಿ ಪ್ರತಿಭಟನೆಯನ್ನೂ ಮಾಡದೇ ಪಟ್ಟಣಗಳಲ್ಲಿ ತಮಗೆ ತಿಳಿದಿದ್ದ ದೇವರ ಪೂಜೆ, ಆಡುಗೆ ಕೆಲಸ ಮಾಡಿಕೊಂಡು ಜೀವಿಸತೊಡಗಿದರು. ಎಂಭತ್ತು ಮತ್ತು ತೊಂಭತ್ತರ ದಶಕದಲ್ಲಿ ಕಾಶ್ಮೀರದಲ್ಲಿ ಬಹುಸಂಖ್ಯಾತರಾಗಿದ್ದ ಕಾಶ್ಮೀರೀ ಪಂಡಿತರನ್ನು ಹಿಂಸಿಸಿ ನರಮೇಧ ನಡೆಸಿ ಅವರನ್ನು ಕಾಶ್ಮೀರದ ಕಣಿವೆಯಿಂದ ರಾತ್ರೋ ರಾತ್ರಿ ಬಲವಂತವಾಗಿ ಹೊರಗೆ ಓಡಿಸಿದಲಾಗಲೂ ಯಾವುದೇ ರೀತಿಯ ಉಗ್ರವಾದ ಪ್ರತಿಭಟನೆ ನಡೆಸದೇ ತಮ್ಮ ಸಂಸಾರದೊಂದಿಗೆ ದೇಶಾದ್ಯಂತ ಹರಿದು ಹಂಚಿಹೋಗಿದ್ದು ಈಗ ಇತಿಹಾಸ.

ಬ್ರಾಹ್ಮಣರ ಮೇಲೆ ಇಷ್ಟೆಲ್ಲಾ ಪೂರ್ವಯೋಜಿತವಾಗಿ ಧಾಳಿಗಳು ನಡೆಯುತ್ತಿದ್ದರೂ, ತಮ್ಮ ಬುದ್ಧಿ ಶಕ್ತಿ ಮತ್ತು ಕಠಿಣ ಪರಿಶ್ರಮದ ಮೂಲಕ ವಿದ್ಯೆಯನ್ನು ಕಲಿತು ಸ್ವಸಾಮರ್ಥ್ಯದಿಂದ ವಿವಿಧ ಹುದ್ದೆಗಳಲ್ಲಿ ಮೇಲಕ್ಕೆ ಬಂದರು. ಇದಕ್ಕೆ ಒಂದು ಉತ್ತಮ ಉದಾಹರಣೆಯೆಂದರೆ, ಕೇವಲ ನಮ್ಮ ದೇಶವೇಕೇ? ಇಡೀ ವಿಶ್ವವೇ ಕಂಡ ಅತ್ಯುತ್ತಮ ಇಂಜೀನಿಯರ್ ಆದ ಸರ್ ಎಂ ವಿಶ್ವೇಶ್ವರಯ್ಯನವರ ಈ ದೃಷ್ಟಾಂತ

ಅದೊಮ್ಮೆ ಪೂರ್ವನಿರ್ಧಾರದಂತೆ, ಗಾಂಧೀಯವರನ್ನು ಭೇಟಿಯಾಗಲು ಸರ್ ಎಂ,ವಿ. ಯವರು ಗಾಂಧಿಯವರ ಮನೆಗೆ ಹೊದಾಗ, ಗಾಂಧಿಯವರು ವಿಶ್ವೇಶ್ವರಯ್ಯನವರಿಗೆ ಕುಳಿತುಕೊಳ್ಳಲು ಆಸನವನ್ನು ಕೊಟ್ಟು ತಾವು ಮಾತ್ರ ಕಾಲು ಮಡಿಚಿಕೊಂಡು ನೆಲದ ಮೇಲೆ ಕುಳಿತುಕೊಂಡದ್ದು ವಿಶ್ವೇಶ್ವರಯ್ಯನವರಿಗೆ ಕಸಿವಿಸಿ ಎನಿಸಿ, ನೀವೇಕೆ ಇಲ್ಲೇ ಇರುವ ಕುರ್ಚಿಯ ಮೇಲೆ ಕುಳಿತು ಕೊಳ್ಳಬಾರದು ಎಂದು ಪ್ರಶ್ನಿಸಿದರು.

ghandhi

ಆಗ ಗಾಂಧೀಜಿಯವರು ನಗು ನಗುತ್ತಲೇ, ನೀವು ಬಿಡಿಪ್ಪಾ ಸೂಟು ಬೂಟು ಹಾಕಿಕೊಂಡು ತಲೆಯ ಮೇಲೆ ಪೇಟ ಸುತ್ತಿಕೊಂಡು ಕೈಯಲ್ಲಿ ಚಿನ್ನದ ಹ್ಯಾಂಡಲ್ ಇರುವ ಕೋಲನ್ನು ಹಿಡಿದು ಕೊಂಡು ಜೇಬಿನಲ್ಲಿ ಚಿನ್ನದ ಗಡಿಯಾರವನ್ನು ಇಟ್ಟುಕೊಂಡು ಭರ್ಜರಿಯಿಂದ ಠಾಕೂ ಠೀಕಾಗಿ ಇರುತ್ತೀರಿ. ಹಾಗಾಗಿ ನಿಮ್ಮ ಸೂಟಿನ ಸುಕ್ಕು ಹಾಳಾಗಬಾರದೆಂದು ಕುರ್ಚಿಯ ಮೇಲೆ ಕೂರಿಸಿದ್ದೇನೆ. ಇನ್ನು ನಾನಾದರೋ ಸಾಧಾರಣ ಪಂಚೆ ಉಟ್ಟು ಶಲ್ಯವನ್ನು ಹೊದ್ದುಕೊಳ್ಳುವ ಆಸಾಮಿ ಹಾಗಾಗಿ ನೆಲದ ಮೇಲೇ ಕುಳಿತುಕೊಂಡರೂ ನಡೆಯುತ್ತದೆ ಎಂದರಂತೆ.

vish

ಕೂಡಲೇ ಅದಕ್ಕೆ ಪ್ರತಿಕ್ರಿಯಿಸಿದ ಸರ್ ಎಂ.ವಿಯವರು ಅಯ್ಯೋ ರಾಮಾ.. ನೀವು ತಪ್ಪು ತಿಳಿದುಕೊಂಡಿದ್ದೀರಿ, ನಾನು ನಿಮ್ಮಂತೆ ಚಿನ್ನದ ಚಮಚವನ್ನು ಬಾಯಿಯಲ್ಲಿ ಇಟ್ಟುಕೊಂಡು ಆಗರ್ಭ ಶ್ರೀಮಂತರ ಮನೆಯಲ್ಲಿ ಜನಿಸಿದವನಲ್ಲಾ. ನಾನು ದೇವಾಲಯದಲ್ಲಿ ಅರ್ಚಕ ವೃತ್ತಿ ಮಾಡುತ್ತಿದ್ದಂತಹ ಅತ್ಯಂತ ಕಡು ಬಡತನದ ಕುಟುಂಬದಲ್ಲಿ ಹುಟ್ಟಿ ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡವ. ಅಮ್ಮನೇ ಅವರಿವರ ಮನೆಯಲ್ಲಿ ಮುಸುರೇ ತಿಕ್ಕಿ ಬಡತನದ ಬೇಗೆಯಲ್ಲೇ ಬೆಳೆದವ. ಎರಡು ಹೊತ್ತಿನ ಊಟಕ್ಕೂ ಪರದಾಡುತ್ತಾ ಅವರಿವರ ಮನೆಯಲ್ಲಿ ವಾರಾನ್ನ ಮಾಡಿ ಓದನ್ನು ಮುಂದುವರೆಸುತ್ತಿದ್ದಾಗ, ನಮ್ಮ ಸುತ್ತ ಮುತ್ತಲೂ, ಇಂಗ್ಲಿಷರು ಚಿನ್ನದ ಸರಳುಳಿಂದ ಎಳೆಯುವ ಕುದುರೆ ಗಾಡಿಯಲ್ಲಿ ಠಾಕೂ ಠೀಕು ಧಿರಿಸನ್ನು ಧರಿಸಿ ಸವಾರಿ ಮಾಡುವುದನ್ನು ನೋಡಿದಾಗಲೆಲ್ಲಾ ನಾನು ದೊಡ್ಡವನಾದ ಮೇಲೆ ಅವರಿಗಿಂತಲೂ ಉತ್ತಮವಾಗಿ ಕಾರ್ಯ ನಿರ್ವಹಿಸಬೇಕೆಂದು ಧೃಢ ಸಂಕಲ್ಪ ತೊಟ್ಟೆ, ಆದ್ದರಿಂದ ನಾನು ಬಹಳ ಕಷ್ಟ ಪಟ್ಟು ಶ್ರಮವಹಿಸಿ ಅಧ್ಯಯನ ಮಾಡಿ ಈ ಸ್ಥಾನವನ್ನು ಗಳಿಸಿದ ನಂತರವಷ್ಟೇ ಸ್ವಯಾರ್ಜಿತವಾಗಿ ಈ ರೀತಿಯ ಪೋಷಾಕುಗಳನ್ನು ಧರಿಸುವುದನ್ನು ರೂಢಿಸಿಕೊಂಡೆ ಅಧಿಕಾರವನ್ನು ಗಳಿಸಿ ಜನಾನುರಾಗಿಯಾಗಿ ಕೈಲಾದ ಮಟ್ಟಿಗಿನ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದೇನೆ.

ನಮ್ಮ ದೇಶವಾಸಿಗಳಲ್ಲರೂ ನಿಮ್ಮಂತೆಯೇ ಯೋಚಿಸಿ, ಕೈಯಲ್ಲಿ ಆಗದು ಎಂದು ತಲೆಯ ಮೇಲೆ ಕೈ ಹೊತ್ತುಕೊಂಡು ನಿಮ್ಮಂತೆ ನೆಲದ ಮೇಲೆ ಕುಳಿತು ಕೊಳ್ಳುವ ಮನೋಭಾವನೆಯನ್ನೇ ಬೆಳಸಿ ಕೊಂಡಲ್ಲಿ , ಈ ಬ್ರಿಟೀಷರು ನಮ್ಮ ತಲೆಯ ಮೇಲೆ ಕುಳಿತುಕೊಂಡು ನಮ್ಮನ್ನು ತುಳಿಯುತ್ತಾರೆ ಎಂದಿದ್ದರಂತೆ. ಇದು ನಿಜವಾದ ಬ್ರಾಹ್ಮಣರ ತಾಕತ್ತು.

ಎಂಬ್ಬತ್ತರ ದಶಕದಲ್ಲಿ ಚೆನ್ನರಾಯಪಟ್ಟಣದಂತಹ ಸಾಧಾರಣ ಪಟ್ಟಣದಲ್ಲಿ ಕನ್ನಡ ಪ್ರಾಥಮಿಕ ಶಾಲೆಯ ಅಧ್ಯಾಪಕರೊಬ್ಬರ ಮಗನಾಗಿ ಜನಿಸಿ ಉನ್ನತ ದರ್ಜೆಯಲ್ಲಿ ಬಿಎಸ್ಸಿ ಪದವಿ ಪಡೆದು ನಂತರ ಸಂಸ್ಕೃತದಲ್ಲಿ ಎಂಎ ಪಡೆದು ಬೇಲೂರಿನ ಸರ್ಕಾರೀ ಪದವಿ ಪೂರ್ವ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸವನ್ನು ಮಾಡುತ್ತಿದ್ದ ಬ್ರಾಹ್ಮಣರ ಯುವಕನಿಗೆ ಅದೇಕೋ ಏನೋ ತಾನೂ ಸಹಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ಉನ್ನತ ಮಟ್ಟದ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯಾಗ ಬೇಕೆಂಬ ಆಸೆ ಚಿಗುರಿದ ಕೂಡಲೇ ಅದಕ್ಕೆ ತಕ್ಕಂತೆ ತಯಾರಿ ಮಾಡಿಕೊಂಡು ಕೆ.ಎ.ಎಸ್ ಪರೀಕ್ಷೆ ಪಡೆದು ರಾಜಕ್ಕೇ 5ನೇ ರ್ಯಾಂಕ್ ಪಡೆದು ಡಿಸಿ ಆಗುವ ಸಂದರ್ಶನದಲ್ಲಿ ಭಾಗವಹಿಸಿದಾಗ, ಮುಂದುವರಿದ ಜನಾಂಗದವರು ಮೊದಲ 4 ರ್ಯಾಂಕಿನೊಳಗೆ ಬಂದಲ್ಲಿ ಮಾತ್ರವೇ ಡಿಸಿಯಾಗಬಹುದು ಎಂಬುದನ್ನು ತಿಳಿದು ಬೇಸರ ಗೊಂಡು, ಅವರು ಕೊಟ್ಟ ಹುದ್ದೆಯನ್ನು ನಿರಾಕರಿಸಿ ಮತ್ತೆ ಉಪನ್ಯಾಸಕ ವೃತ್ತಿಯನ್ನೇ ಮುಂದುವರೆಸಿಕೊಂಡು ಮುಂದಿನ ಬಾರಿಯ ಪರೀಕ್ಷೆಯಲ್ಲಿ ರಾಜ್ಯಕ್ಕೇ ಕೆ.ಎ.ಎಸ್ ಪರೀಕ್ಷೆಯಲ್ಲಿ 2ನೇ ರ್ಯಾಂಕ್ ಗಳಿಸಿ ಡಿಸಿ ಸಂದರ್ಶನಕ್ಕೆ ಹಾಜರಾದಾಗ, ಹಿಂದಿನ ಬಾರಿಯ ಸಂದರ್ಶನದಲ್ಲಿದ್ದವರೇ, ಆ ಬ್ರಾಹ್ಮಣ ಯುವಕನ ಛಲ ಮತ್ತು ಸಾಧನೆಗಳನ್ನು ಮೆಚ್ಚಿ ಅಭಿನಂದಿಸಿದರೂ, ಮತ್ತೆ ಯಾರದ್ದೋ ಒತ್ತಡಕ್ಕೆ ಮಣಿದು ನೀರಿಲ್ಲದ ಬಿಸಿಲು ನಾಡಾದ ಗುಲ್ಬರ್ಗಾಕ್ಕೆ ಡಿಸಿಯಾಗಿ ನೇಮಕ ಮಾಡಿದ್ದರು. ನಂತರದ ದಿನಗಳಲ್ಲಿ ಆವರ ಪ್ರಾಮಾಣಿಕತೆಯನ್ನು ಮೆಚ್ಚಿದ ಕಂದಾಯ ಇಲಾಖೆಯಲ್ಲಿದ್ದ ದಲಿತ ಮಂತ್ರಿಗಳೊಬ್ಬರು ಅವರನ್ನು ಅಲ್ಲಿಂದ ಮುಕ್ತ ಗೊಳಿಸಿ ತಮ್ಮ ಆಪ್ತ ಕಾರ್ಯದರ್ಶಿಯಾಗಿ ಬಹಳ ವರ್ಷಗಳ ಕಾಲ ಇಟ್ಟುಕೊಂಡಿದ್ದರು. ನಂತರ ಅನೇಕ ಜಿಲ್ಲೆಗಳಲ್ಲಿ ಚಿಲ್ಲಾಧಿಕಾರಿಯಾಗಿ ಕರ್ತವ್ಯ ನಿಭಾಯಿಸಿ ಕಡೆಗೆ ಹಾವೇರಿ ಜಿಲ್ಲೆಯಲ್ಲಿದ್ದಾಗ ಅತ್ಯಂತ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಎಂದೆ ಹೆಸರಿನಿಂದ ನಿವೃತ್ತಿ ಹೊಂದಿದ್ದರು. ಇದುವೇ ನಿಜವಾದ ಬ್ರಾಹ್ಮಣರ ತಾಕತ್ತು.

ಪ್ರಪಂಚದ ಅತ್ಯಂತ ದೊಡ್ಡ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳ ಮುಖ್ಯಹುದ್ದೆಯಲ್ಲಿ ಇರುವ ಬಹುತೇಕರು ಬ್ರಾಹ್ಮಣರೇ ಆಗಿರುವುದು ಅನೇಕರಿಗೆ ಕಣ್ಣು ಉರಿ ತರಿಸಿದೆ. ಅದರೆ ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಅವರ್ಯಾರೂ ಸರ್ಕಾರದ ಯಾವುದೇ ಮೀಸಲಾತಿಯ ಸೌಲಭ್ಯವನ್ನು ಪಡೆಯದೇ, ಯಾರ ಮುಂದೆಯೂ ದೈನೇಸಿಯಾಗಿ ಬೇಡದೇ, ಯಾವುದೇ ಧರ್ಮ,ಜಾತಿ, ವರ್ಣವನ್ನೂ ಹಳಿಯದೇ ತಮ್ಮ ಸ್ವಸಾಮಥ್ಯದ ಮೇಲೆ ಅಂತಹ ಉನ್ನತ ಮಟ್ಟದ ಹುದ್ದೆಗೆ ಏರಿದ್ದಾರೆ.

WhatsApp Image 2021-06-29 at 8.00.40 PM

ದೇಶದಲ್ಲಿ ಕೇವಲ 2-3% ಜನ್ಮತಃ ಬ್ರಾಹ್ಮಣರು ಇದ್ದಾರೆ. ಅದರಲ್ಲಿ ನಿಜವಾಗಿಯೂ ಬ್ರಹ್ಮತ್ವದ ಆಚಾರ ವಿಚಾರಗಳನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಿರುವವರು ಕೆಲವೇ ಕೆಲವು ಜನರು ಇದ್ದಾರೆ. ಕಳೆದ 300-400 ವರ್ಷಗಳಲ್ಲಿ ಪ್ರಪಂಚಾದ್ಯಂತ ಬ್ರಾಹ್ಮಣರಿಂದ ಯಾವುದೇ ದಬ್ಬಾಳಿಕೆಯಾಗಲೀ ಭಯೋತ್ಪಾನೆಯಾಗಲೀ ನಡೆದಿಲ್ಲದಿರುವಾಗ ವಿನಾಕಾರಣ ಬ್ರಾಹ್ಮಣರ ವಿರುದ್ಧ ಈ ಪರಿಯಾಗಿ ಹರಿಹಾಯುವುದು ಎಷ್ಟು ಸರಿ?

ಈ ದೇಶದಲ್ಲಿ ದಲಿತರು ಸವರ್ಣೀಯ ವಿರುದ್ಧ ಅಟ್ರಾಸಿಟಿ(ಜಾತಿನಿಂದನೆ) ಕೇಸ್ ಹಾಕಲು ಅವಕಾಶವಿದ್ದಂತೆ, ಪ್ರತಿನಿತ್ಯವೂ ಜಾತಿ ನಿಂದನೆಗೆ ಒಳಗಾಗಿ ಮಾನಸಿಕವಾಗಿ ಶೋಷಣೆಗೆ ಒಳಗಾಗುತ್ತಿರುವ ಬ್ರಾಹ್ಮಣರು ಜಾತಿ ನಿಂದನೆ ಕೇಸ್ ಹಾಕಲು ಆಗದಿರುವಂತಹ ವ್ಯವಸ್ಥೆಯಿಂದ ದೇಶದಲ್ಲಿ ಸಾಮಾಜಿಕ ಸಮಾನತೆಯನ್ನು ಹೇಗೆ ತಾನೇ ತರಲು ಸಾಧ್ಯ?

ವಿದ್ಯೆ ಬುದ್ಧಿ ಅಧಿಕಾರ ಯಾವುದೇ ಧರ್ಮ ಅಥವಾ ಜಾತಿಯ ಸ್ವತ್ತಲ್ಲ. ಸತತ ಸಾಧನೆ ಮತ್ತು ಕಠಿಣ ಪರಿಶ್ರಮದಿಂದ ಯಾರು ಬೇಕಾದರೂ ಏನನ್ನಾದರೂ ಸಾಧಿಸಬಹುದಾಗಿದೆ. ಎನ್ನುವುದಕ್ಕೆ ಲಾಲ್ ಬಹದ್ದೂರ್ ಶಾಸ್ತ್ರೀ, ಫುಲೆ, ನಾರಾಯಣ ಗುರುಗಳು, ರೆವರೆಂಡ್ ಕಿಟ್ಟಲ್, ಅಂಬೇಡ್ಕರ್, ಅಬ್ದುಲ್ ಕಲಾಂ ಅಂತಹವರೇ ಸಾಕ್ಷಿ. ಇಂತಹ ಮಹನೀಯರನ್ನೆಲ್ಲಾ ನಾವು ಪ್ರಾರ್ಥಸ್ಮರಣೀಯರೆಂದೇ ಆದರಿಸುತ್ತೇವೆ. ಶೃಂಗೇರೀ ಜಗದ್ಗುರುಗಳು ಮತ್ತು ಉಡುಪಿಯ ಪೇಜಾವರ ಶ್ರೀಗಳನ್ನು ಅದರಿಸುವಷ್ಟೇ ಗುರುಭಕ್ತಿಯಿಂದ ಸಿದ್ದಗಂಗಾ ಶ್ರೀಗಳು ಮತ್ತು ಬಾಲಗಂಗಾಧರ ನಾಥ ಸ್ವಾಮೀಗಳನ್ನು ಪೂಜಿಸುವಾಗ ವಿನಾಕಾರಣ ಜಾತಿ ಜಾತಿಗಳ ಮಧ್ಯೆ ತಾರತಮ್ಯವೇಕೆ?

ಬ್ರಾಹ್ಮಣರೂ ಈ ದೇಶದವರೇ ಆಗಿರುವಾಗ ಅವರಿಗೂ ಈ ದೇಶದಲ್ಲಿ ಇರುವ ಹಕ್ಕಿರುವಾಗ, ಭಾರತೀಯನೇ ಅಲ್ಲದ ವ್ಯಕ್ತಿಯೊಬ್ಬ ಬ್ರಾಹ್ಮಣ್ಯತ್ವವನ್ನು ನಾಶ ಮಾಡುವುದೇ ನನ್ನ ಗುರಿ ಎಂದು ಅಬ್ಬರಿಸುವಾಗ, ಹಚ್ಚಾ ಎಂದು ಓಡಿಸುವ ಬದಲು ಆತನನ್ನು ಸಮರ್ಥನೆ ಮಾಡುತ್ತಿರುವುದು ನಮ್ಮ ಜನರ ಬೌದ್ಧಿಕ ದೀವಾಳಿತನಕ್ಕೆ ಸಾಕ್ಷಿಯಾಗಿದೆ ಎಂದರೆ ತಪ್ಪಾಗದು.

ಇತ್ತೀಚೆಗಷ್ಟೇ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದ ಸರ್ಕಾರ, ರಾಜ್ಯಪಾಲರ ಭಾಷಣದ ಅಂತ್ಯದಲ್ಲಿ ಹೇಳುತ್ತಿದ್ದ ಜೈ ಹಿಂದ್ ಎಂಬ ಘೋಷಣೆಗೆ ಕತ್ತರಿ ಹಾಕಿ ದೇಶದ ಒಕ್ಕೂಟದ ವ್ಯವಸ್ಥೆಗೇ ಉದ್ಧಟತನ ತೋರಿರುವುದು ಅಕ್ಷಮ್ಯವೇ ಸರಿ.

ಇದೇ ರೀತಿಯ ಮನೋಭಾವ ಎಲ್ಲೆಡೆಯೂ ಮುಂದುವರೆದಲ್ಲಿ ಮುಂದೊಂದು ದಿನ ಕಮ್ಯೂನಿಷ್ಟ್ ಸಿದ್ಧಾಂತದ ವ್ಯಕ್ತಿಗಳು, ಹಿಂದೂ ವಿರೋಧಿ ಶಕ್ತಿಗಳು ಮತ್ತು ಕೆಲ ಮತಾಂಧದ ಶಕ್ತಿಗಳು ಒಂದಾಗಿ, ಅಹಿಂದ ಎನ್ನುವ ವಿಷಬೀಜವನ್ನು ಬಿತ್ತಿ, ಬ್ರಿಟಿಷರಂತೆಯೇ ಜಾತಿ, ಧರ್ಮ ಭಾಷೆಗಳನ್ನೇ ಎತ್ತಿ ಕಟ್ಟಿ ಇಡೀ ದೇಶವನ್ನೇ ಮತ್ತೊಮ್ಮೆ ತುಂಡರಿಸುವ ಕಾಲ ಬರಲೂ ಬಹುದು.

ಮಿಂಚಿ ಹೋದ ಮೇಲೆ ಚಿಂತಿಸುವ ಫಲವಿಲ್ಲ ಎನ್ನುವಂತೇ ಭಾರತದಲ್ಲಿ ಇರುವವರೆಲ್ಲರೂ ಭಾರತೀಯರು. ಅದರಲ್ಲಿ ಬ್ರಾಹ್ಮಣರೂ ಸೇರಿ ಇಲ್ಲಿರುವ ಪ್ರತಿಯೊಬ್ಬರಿಗೂ ಒಂದು ದೇಶ ಒಂದು ಕಾನೂನು ಎಂಬ ಅಡಿಯಲ್ಲಿ ಎಲ್ಲರಿಗೂ ಸರಿಸಮಾನವಾಗಿ ನೆಮ್ಮದಿಯಿಂದ ಜೀವಿಸುವ ಹಕ್ಕಿದೆ ಅಲ್ಲವೇ?

ಏನಂತೀರೀ?
ನಿಮ್ಮವನೇ ಉಮಾಸುತ

2 thoughts on “ಬ್ರಾಹ್ಮಣರು ಭಾರತೀಯರಲ್ಲವೇ? ಬ್ರಾಹ್ಮಣರಿಗೆ ಭಾರತದಲ್ಲಿ ಜೀವಿಸುವ ಹಕ್ಕಿಲ್ಲವೇ?

  1. Yes.We are proud of being Brahmins .
    As you rightly pointed out,we have come up in life with our hard work and independent thinking.But that in no way has harmed others and we have always harmonious ly lived with others and promoted others as well.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s