#NoBindi_NoBusiness

ಅರೇ ಇದೇನಿದು ಇಂತಹ ಶೀರ್ಷಿಕೆ? ಜನರನ್ನು ಹೀಗೆ ಧರ್ಮಾಧಾರಿತವಾಗಿ ಕೆರಳುಸಿತ್ತಿದ್ದೀರಿ ಎಂದು ಭಾವಿಸುತ್ತಿದ್ದೀರಾ? ಅರೇ ಇದೇನಿದು ಹೀಗೆ ಕೋಮುವಾದವನ್ನು ಹರಡುತ್ತಿದ್ದೇನೆ ಎಂದು ಭಾವಿಸಿದ್ದೀರಾ? ಖಂಡಿತವಾಗಿಯೂ ಅಂತಹ ಪ್ರಯತ್ನವಾಗಿರದೇ ನಮ್ಮ ಸುತ್ತಮುತ್ತಲಿನವರು ನಮ್ಮ ಹಿಂದುಗಳ ಹೃದಯ ವೈಶಾಲ್ಯತೆಯನ್ನು ಹೇಗೆ ದುರುಪಯೋಗ ಪಡಿಸಿಕೊಳ್ಳುತಿದ್ದಾರೆ ಎಂಬುದನ್ನು ಕೆಲವು ಉದಾಹರಣೆಯ ಮುಖಾಂತರ ವಿವರಿಸುತ್ತಿದ್ದೇನೆ ಅಷ್ಟೇ.

ದಸರ ಮತ್ತು ದೀಪಾವಳಿ ಹಿಂದೂಗಳ ಪವಿತ್ರ ಹಬ್ಬ. ಈ ಹಬ್ಬಗಳನ್ನು ಅತ್ಯಂತ ಸಡಗರ ಸಂಭ್ರಮಗಳಿಂದ ಹಿಂದೂಗಳು ಆಚರಿಸುತ್ತಾರೆ. ಈ ಹಬ್ಬದ ಆಚರಣೆ ಎಷ್ಟು ಚೆನ್ನಾಗಿ ಅಗುತ್ತದೆಯೋ? ಅದೇ ರೀತಿ ಇಡೀ ವರ್ಷ ಹಾಗೆಯೇ ಮುಂದುವರೆಯುತ್ತದೆ ಎಂಬ ನಂಬಿಕೆ ಬಹಳಷ್ಟು ಜನರಿಗೆ ಇರುವ ಕಾರಣ ಬಹುತೇಕ ಹಿಂದೂಗಳು ಈ ಹಬ್ಬಗಳನ್ನು ಬಹಳ ಅದ್ದೂರಿಯಾಗಿ ಅಚರಿಸಲು ಇಚ್ಚಿಸುತ್ತಾರೆ. ಹಾಗಾಗಿ ಹೊಸ ಉಡುಗೆ ತೊಡುಗೆಗಳು, ವಾಹನಗಳು, ಆಭರಣಗಳು, ಗೃಹೋಪಯೋಗಿ ಉಪಕರಣಗಳನ್ನು ಭರಪೂರವಾಗಿ ಕೊಂಡು ಕೊಳ್ಳುವುದರ ಜೊತೆಗೆ ಸವಿರುಚಿಯಾದ ಆಹಾರವನ್ನು ಸೇವಿಸಲು ಬಯಸುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಬಹುತೇಕ ವ್ಯಾಪಾರಿಗಳು ಅದರಲ್ಲೂ, ಬಟ್ಟೆ ಬರೆ, ಆಭರಣಗಳು, ಸಿಹಿ ಉತ್ಪನ್ನಗಳ ವ್ಯಾಪಾರಿಗಳು ಅದಕ್ಕಿಂತಲೂ ಮುಂದು ವರೆದು ವಾಹನಗಳ ಟೈರ್ ವ್ಯಾಪಾರಿಗಳೂ ಸಹಾ ದೃಶ್ಯ ಮಾಧ್ಯಮ, ಸಾಮಜಿಕ ಜಾಲತಾಣಗಳಲ್ಲಿ ಮುಂಬರುವ ದೀಪಾವಳಿಯ ಹಬ್ಬವನ್ನು ನೆಪವಾಗಿಟ್ಟು ಕೊಂಡು ತಮ್ಮ ಉತ್ಪನ್ನಗಳನ್ನೇ ಬಳಸುವಂತೆ ಜಾಹೀರಾತುಗಳನ್ನು ನೀಡುತ್ತಿವೆ.

ಇನ್ನು ದೇಶದ ಬಹುತೇಕ online E-commerce Shopping Portal ಗಳು ವಾರಗಟ್ಟಲೇ ಸೇಲ್ ಗಳನ್ನು ಮಾಡಿ ಕೋಟ್ಯಾಂತರ ಹಣವನ್ನು ಈಗಾಗಲೇ ಬಾಚಿಕೊಂಡಿದೆ. ಒಂದು ಮೂಲದ ಪ್ರಕಾರ ದೇಶದ ದೈತ್ಯ ಕಂಪನಿಗಳು ಕೇವಲ ಒಂದು ವಾರದಲ್ಲೇ ಸರಿ ಸುಮಾರು 10-12.000 ಕೋಟಿಯಷ್ಟು ವ್ಯಾಪಾರ ಮಾಡುವ ಮೂಲಕ ಅರ್ಥಿಕವಾಗಿ ಭಾರತ ತೀವ್ರವಾಗಿ ಕುಸಿತ ಕಂಡಿದೆ ಎಂದು ಬೊಬ್ಬಿರಿಯುವ ಗಂಜೀ ಗಿರಾಕಿಗಳಿಗೆ ಭಾರತೀಯರ ನಿಜವಾದ ಆರ್ಥಿಕ ಶಕ್ತಿಯನ್ನು ಪ್ರಕಟ ಪಡಿಸಿವೆ ಎಂದರೂ ತಪ್ಪಾಗದು.

ಸಮುದ್ರದ ಕಡೆ ನದಿಯ ನೀರು ಹರಿಯುವುದು, ಗಾಳಿ ಬಂದ ಕಡೆ ವಸ್ತುಗಳು ಹಾರುವುದು ಸಹಜ ಪ್ರಕ್ರಿಯೆಯಾಗಿದೆ. ಅದೇ ರೀತಿಯಲ್ಲೇ ಹಿಂದೂಗಳ ಹಬ್ಬಗಳ ಹಬ್ಬ ಎಂದಲ್ಲಿ ಸಹಜವಾಗಿ ಹಿಂದೂ ಗ್ರಾಹಕರನ್ನು ಓಲೈಸಲು ಅವರಿಗೊಪ್ಪುವಂತಹ ಸಾಂಧರ್ಭಿಕ ಜಾಹೀರಾತುಗಳನ್ನು ಪ್ರಸಾರ ಮಾಡುವುದು ಸಹಜ ಪ್ರಕ್ರಿಯೆ. ಸ್ವಾತಂತ್ರ್ಯಾನಂತರ ಧರ್ಮಾಧಾರಿತವಾಗಿಯೇ ಈ ದೇಶ ವಿಭಜನೆಯಾದರೂ ಕೆಲ ಪಟ್ಟ ಭದ್ರ ರಾಜಕೀಯ ನಾಯಕರುಗಳ ಕುಮ್ಮಕ್ಕಿನಿಂದಾಗಿ ಹಿಂದೂಸ್ಥಾನವಾಗ ಬೇಕಿದ್ದ ಈ ದೇಶ ಭಾರತ ದೇಶವಾಗಿ ಹೋಗಿದ್ದು ಈಗ ಇತಿಹಾಸ. ಕೇವಲ ಭಾರತ ದೇಶವಾಗಿದ್ದಲ್ಲಿ ಯಾರದ್ದು ಆಕ್ಷೇಪವಿರುತ್ತಿರಲಿಲ್ಲ. ಆದರೆ ಬಲವಂತವಾಗಿ ಈ ದೇಶಕ್ಕೆ ಜಾತ್ಯಾತೀತ ಎಂಬ ಪದವನ್ನು ಪದೇ ಪದೇ ಹೇರಿಕೆ ಮಾಡುತ್ತಾ, ಹಂತ ಹಂತವಾಗಿ ಬಹುಸಂಖ್ಯಾತರ ಮೇಲೆ ದಬ್ಬಾಳಿಕೆ ನಡೆಯುತ್ತಲೇ ಇದೆ.

ಭಾರತದಿಂದ ಬೇರ್ಪಟ್ಟು ಪ್ರತ್ಯೇಕ ಮುಸ್ಲಿಂ ರಾಷ್ಟ್ರಗಳಾದಾಗ ಪಾಕೀಸ್ಥಾನ ಮತ್ತು ಬಾಂಗ್ಲಾದೇಶದಲ್ಲಿ ಎರಡಂಕಿಯಷ್ಟಿದ್ದ ಹಿಂದೂಗಳ ಸಂಖ್ಯೆ ಇಂದು 2-3% ಆಗಿದೆ. ಮೊನ್ನೆ ಮೊನ್ನೆ ದುರ್ಗಾಪೂಜೆಯ ಸಮಯದಲ್ಲಿ ಬಾಂಗ್ಲಾ ದೇಶದಲ್ಲಿ ಹಿಂದೂಗಲ ಮೇಲೆ ನಡೆದ ಹಿಂಸಾಚಾರಕ್ಕೆ ಅಲ್ಲಿನ ದೇಶದ ಪ್ರಧಾನಿ ನಮ್ಮ ದೇಶ ಮುಸ್ಲಿಂ ದೇಶವಾಗಿದ್ದು ಇಲ್ಲಿ ವಾಸಿಸುವ ಇತರೇ ಧರ್ಮದವರು ದೇಶದ ಧರ್ಮಕ್ಕೆ ಅನುಗುಣವಾಗಿ ಇರಬೇಕು ಎಂದು ಪರೋಕ್ಷವಾಗಿ ಹಿಂದೂಗಳ ಮೇಲಿನ ಧಾಳಿಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

ಆದರೆ ಆದೇ ಭಾರತದಲ್ಲಿ ಒಂದಂಕಿಯಷ್ಟಿದ್ದು ಅಲ್ಪ ಸಂಖ್ಯಾತರಾಗಿದ್ದವರು, ನಂತರ ದೇಶದ ಯಾವುದೇ ಕುಟುಂಬ ಯೋಜನೆಗಳಿಗೂ ಬೆಲೆ ನೀಡದೆ ಎಗ್ಗಿಲ್ಲದೇ ತಮ್ಮ ಜನಸಂಖ್ಯೆಯನ್ನು ಒಂದು ಕಡೆ ಬೆಳೆಸಿಕೊಳ್ಳುತ್ತಿದ್ದಲ್ಲಿ ಮತ್ತೊಂದು ಕಡೆ ಬಲವಂತವಾಗಿಯೋ ಇಲ್ಲವೇ ಆಮಿಷದಿಂದಲೋ ಲವ್ ಜಿಹಾದ್ ಮುಖಾಂತರವೋ ಹಿಂದೂಗಳನ್ನು ಮತಾಂತರ ಮಾಡುತ್ತಾ ಈಗ ಎರಡಂಕಿಯ ಸಂಖ್ಯೆಯಾಗಿದ್ದು ಇದೇ ಪ್ರಕಾರದ ವೇಗದಲ್ಲೇ ಮುಂದು ವರೆದಲ್ಲಿ 2045-50 ರಷ್ಟರಲ್ಲಿ ಈ ದೇಶದಲ್ಲಿ ಬಹುಸಂಖ್ಯಾತರಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿರುವುದು ನಿಜಕ್ಕೂ ಕಳವಳಕಾರಿಯಾಗಿದೆ.

ಅದೇಕೋ ಏನೋ ಮಾಧ್ಯಮಗಳು, ಕೆಲ ಸ್ವಘೋಷಿತ ಬುದ್ಧಿಜೀವಿಗಳು, ತುಕ್ಡೇ ತುಕ್ಡೇ ಗ್ಯಾಂಗಿನವರ ಜೊತೆ ಇಡೀ ಜಾಹೀರಾತು ತಯಾರಿಕಾ ಕಂಪನಿಗಳ ಮನಸ್ಥಿತಿಯೂ ಹಿಂದೂ ವಿರೋಧಿ ಭಾವನೆಗಳಿಂದ ಕೂಡಿದ್ದು ಪ್ರತಿ ಬಾರೀ ಹಿಂದೂ ಹಬ್ಬಗಳು ಬಂದಾಗ ಹಿಂದೂಗಳ ಹಬ್ಬಗಳು ಪರಿಸರವನ್ನು ಹಾಳು ಮಾಡುತ್ತವೆ ಎಂದು ಬ್ಬೊಬ್ಬಿರಿದು ಪ್ರಪಂಚದ ಮುಂದೆ ನಮ್ಮ ಧಾರ್ಮಿಕ ನಂಬಿಕೆಗಳನ್ನು ಅಪಹಾಸ್ಯ ಮಾಡುತ್ತವೆ

bin3ಇದಕ್ಕೆ ಆಧಾರವಾಗಿ CEAT tyresನ ಇತ್ತೀಚಿನ ದೀಪಾವಳಿ ಕುರಿತಾದ ಜಾಹೀರಾತಿನಲ್ಲಿ ಅಮೀರ್ ಖಾನ್ ರಸ್ತೆಗಳು ಇರುವುದು ವಾಹನಗಳು ಸಂಚರಿಸುವುದಕ್ಕಾಗಿಯೇ ಹೊರತು ಪಟಾಕಿ ಹತ್ತಿಸುವುದಕ್ಕಲ್ಲ ಎಂದು ಜನರ ಬಗ್ಗೆ ಬಾರೀ ಕಾಳಜಿ ಇರುವ ಹಾಗೆ ಮಾತನಾಡಿದ್ದಾನೆ. ಅದರೇ ಅದೇ ಅಮೀರ್ ಖಾನ್ ತನ್ನದೇ ಧರ್ಮದವರು ಪ್ರತಿ ಶುಕ್ರವಾರ ಮತ್ತು ಅವರ ವಿಶೇಷ ಹಬ್ಬಗಳಂದು ರಸ್ತೆಯ ಮೇಲೇಯೇ ನಮಾಜ್ ಮಾಡುವಾಗ ರಸ್ತೆಗಳು ಇರುವುದು ವಾಹನಗಳು ಸಂಚರಿಸುವುದಕ್ಕಾಗಿಯೇ ಹೊರತು ಈ ರೀತಿಯಾಗೆ ಪ್ರಾರ್ಥನೆ ಮಾಡುವುದಕ್ಕಲ್ಲ ಎಂದು ಹೇಳಿದ್ದಾನೆಯೇ? ಇದ ಅಮೀರ್ ಖಾನ್ ಕುಲಬಾಂಧವರು CAA ವಿರುದ್ದದ ಪ್ರತಿಭಟನೆಯ ಸಂಧರ್ಭದಲ್ಲಿ ಶಹೀನ್ ಭಾಗ್ ರಸ್ತೆಯನ್ನು ತಿಂಗಳಾನುಗಟ್ಟಲೆ ಬಂದ್ ಮಾಡಿದ್ದಾಗ ಮತ್ತು ಕಳೆದ ಒಂದೂವರೆ ವರ್ಷದಿಂದಲೂ ರೈತರ ಹೆಸರಿನಲ್ಲಿ ದಲ್ಲಾಳಿಗಳು ದೆಹಲಿಯ ಹೊರವಲಯದಲ್ಲಿ ಹೆದ್ದಾರಿಯನ್ನು ಬಂದ್ ಮಾಡಿಕೊಂಡಿರುವುದನ್ನು ಕಂಡೂ ಕಾಣದೇ ಸುಮ್ಮನಿರುವುದೇಕೇ?

ಇನ್ನು ಹಿಂದಿ ಚಲನಚಿತ್ರ ನಟಿ ಪ್ರಿಯಾಂಕ ಚೋಪ್ರಾ ಮತ್ತು ಭಾರತ ಕ್ರಿಕೆಟ್ ತಂಡದ ಆಟಗಾರರದ ಯುವರಾಜ್ ಸಿಂಗ್ ಮತ್ತು ವಿರಾಟ್ ಕೊಹ್ಲಿ ವರ್ಷದಲ್ಲಿ ಮೂರು ದಿನಗಳ ಕಾಲ ಪಟಾಕಿ ಹೊಡೆದರೆ, ಪರಿಸರ ಹಾನಿಯಾಗುತ್ತದೆ ಎಂದು ಬೊಬ್ಬಿರಿಯುತ್ತಾರೆ. ಅದೇ ಪ್ರಿಯಾಂಕ ಚೋಪ್ರಾ ಮತ್ತು ಯುವರಾಜ್ ಸಿಂಗ್ ಮದುವೆಯ ಸಮಯದಲ್ಲಿ ಲಕ್ಷಾಂತರ ಪಟಾಕಿಗಳನ್ನು ಸುಟ್ಟಾಗ ಪರಿಸರ ಹಾನಿಯಾಗಲಿಲ್ಲವೇ? ಐಪಿಎಲ್ ಪ್ರತೀ ಪಂದ್ಯದ ನಂತರವು ಲಕ್ಷಾಂತರ ರೂಗಳ ಬಾಣ ಬಿರುಸುಗಳನ್ನು ಸುಡುವುದು ವಿರಾಟ್ ಕೊಹ್ಲಿಯ ಗಮನಕ್ಕೆ ಬರುವುದಿಲ್ಲವೇ? ಯಾರಾದರೂ ಹಣ ಕೊಡುತ್ತಾರೆ ಎಂದಲ್ಲಿ ತಮ್ಮತನವನ್ನೇ ಮಾರಿಕೊಂಡು ಏನು ಮಾಡುವುದಕ್ಕೂ ಮುಂದಾಗುವರೇ ಈ ಜನ?

speakersದೀಪಾವಳಿ ಸಮಯದಲ್ಲಿ 3 ದಿನ ಪಟಾಕಿ ಹೊಡೆಯುವುದರಿಂದ ಪರಿಸರಮಾಲಿನ್ಯ ಮತ್ತು ಶಬ್ಧಮಾಲಿನ್ಯವಾಗುತ್ತದೆ ಎನ್ನುವವರಿಗೆ ಪ್ರತಿದಿನವೂ ಹೊತ್ತಲ್ಲದ ಹೊತ್ತಿನಲ್ಲಿ 5 ಬಾರಿ ಕರ್ಕಶವಾಗಿ ಧ್ವನಿವರ್ಧಕಗಳಲ್ಲಿ ಬರುವ ಶಬ್ಧದಿಂದ ಮಾಲಿನ್ಯವಾಗುವುದಿಲ್ಲವೇ? ಎಲ್ಲೆಂದರಲ್ಲಿ ಎತ್ತರೆತ್ತರದ ಮೊಬೈಲ್ ಟವರ್ಗಳನ್ನು ಅಳವಡಿಸಿ ಅದರ ತರಂಗಾಂತರಗಳಿಂದಾಗಿ ನಮ್ಮ ನಿಮ್ಮೆಲ್ಲರ ಚಿಂವ್ ಚಿಂವ್ ಗುಬ್ಬಿ ಅವಸಾನಕ್ಕೆ ಹೋಗಿರುವುದು ಕಾಣುವುದಿಲ್ಲವೇ?

bi5ಇದಕ್ಕಿಂತಲೂ ಇನ್ನೂ ಒಂದು ಹೆಜ್ಜೆ ಮುಂದುವರೆದ ವಿರಾಟ್ ಕೊಹ್ಲಿ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ದೀಪಾವಳಿಯ ಕುರಿತು ವೀಡಿಯೊವನ್ನು ಹಂಚಿಕೊಂಡು ಅದರಲ್ಲಿ ಈ ವರ್ಷ ಪ್ರಪಂಚದಾದ್ಯಂತದ ಅದರಲ್ಲೂ ವಿಶೇಷವಾಗಿ ಭಾರತೀಯರಿಗೆ ಕಷ್ಟಕರವಾಗಿದೆ ಎಂದು ಕನಿಕರ ತೋರಿಸುತ್ತಲೇ, ನಾವೆಲ್ಲರೂ ದೀಪಾವಳಿಗಾಗಿ ಎದುರು ನೋಡುತ್ತಿದ್ದೇವೆ. ದೀಪಾವಳಿ ಹತ್ತಿರ ಬರುತ್ತಿದ್ದಂತೆ, ನಾನು ದೀಪಾವಳಿಯನ್ನು ಕುಟುಂಬ ಮತ್ತು ಸ್ನೇಹಿತರೊಂದಿಗೆ ಹೇಗೆ ಅರ್ಥಪೂರ್ಣ ಆಚರಿಸಬೇಕು ಮತ್ತು ಆನಂದಿಸಬೇಕು ಎಂಬುದರ ಕುರಿತು ಸಲಹೆಗಳನ್ನು ಹಂಚಿಕೊಳ್ಳುತ್ತೇನೆ ಎಂದು ಬರೆದಿದ್ದಾನೆ. ದೀಪಾವಳಿಗಿಂಗಲೂ ಮುಂಚೆ ಅನ್ಯಧರ್ಮೀಯರ ಅನೇಕ ಹಬ್ಬಗಳು ಎಗ್ಗಿಲ್ಲದೇ ಆಚರಿಸಲ್ಪಟ್ಟವು. ರಸ್ತೆಯಲ್ಲಿ ಸಾವಿರಾರು ಲೀಟರ್ ಗಟ್ಟಲೆ ಪ್ರಾಣಿಗಳ ರಕ್ತದ ಕೋಡಿಯನ್ನು ಹರಿಸಲಾಗಿತ್ತು. ಅಂತಹ ಸಮಯದಲ್ಲೇಕೆ ವಿರಾಟ್ ಕೋಹ್ಲಿ ಸಲಹೆಯನ್ನು ನೀಡಲಿಲ್ಲ?

taniಇನ್ನು ತನಿಷ್ಕ್ ಆಭರಣ ಕಂಪನಿ ಪರೋಕ್ಷವಾಗಿ ಲವ್ ಜಿಹಾದ್ ಪ್ರೋತ್ಸಾಹಿಸುವಂತೆ ಹಿಂದೂ ಧರ್ಮದ ಹೆಣ್ಣು ಮಗಳು ಮುಸ್ಲಿಂ ಹುಡುಗನೊಂದಿಗೆ ಮದುವೆಯಾಗಿ ತನಿಷ್ಕ್ ಆಭರಣಗಳನ್ನು ಧರಿಸಿ ಸೀಮಂತ ಮಾಡಿಕೊಂಡು ಸಂತೋಷವಾಗಿರುವಂತೆ ತೋರಿಸಲಗುತ್ತದೆ. ಮಸಲ್ಮಾನರನ್ನು ಮದುವೆಯಾದ ನಂತರವೂ ಆ ಹೆಣ್ಣು ಮಗಳು ಹಿಂದೂ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗಲು ಅವರ ಧರ್ಮ ಅನುವು ಮಾಡಿ ಕೊಡುತ್ತದೆಯೇ? ವಾಸ್ತವಿಕವಾಗಿ ಈ ರೀತಿಯಾಗಿ ಎಲ್ಲಿಯಾದರೂ ನಡೆಯುತ್ತದೆಯೇ?

jಇನ್ನು ಫ್ಯಾಬ್ಇಂಡಿಯಾ ಅವರು ಹಿಂದೂ ಹಬ್ಬವಾದ ದೀಪಾವಳಿಯ ಹೆಸರನ್ನೇ ಜಶ್ನ್-ಇ-ರಿವಾಜ್ ಎಂದು ಬದಲಾಯಿಸಲು ಮುಂದಾಗಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧ ಮತ್ತು ಖಂಡನಾರ್ಹವೇ ಸರಿ. ಹೀಗೆ ಒಂದೊಂದೇ ಹಬ್ಬದ ಹೆಸರನ್ನು ಬದಲಿಸುತ್ತಾ ಹೋದಲ್ಲಿ ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ನಮ್ಮ ಹಬ್ಬಗಳೇ ಮಾಯವಾಗುವುದರಲ್ಲಿ ಅಚ್ಚರಿಯೇನೂ ಇಲ್ಲ. ಇವರ ಉತ್ಪನ್ನಗಳ ಮಾರಾಟಕ್ಕಾಗಿ ಅನಗತ್ಯವಾಗಿ ಜಾತ್ಯತೀತತೆ ಎಂಬ ಹೆಸರಿನಲ್ಲಿ ಮುಸ್ಲಿಂ ಸಿದ್ಧಾಂತಗಳನ್ನು ಹಿಂದೂಗಳ ಮೇಲೆ ಹೇರುತ್ತಿರುವುದಲ್ಲದೇ, ಬಲವಂತವಾಗಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿರುವುದು ಎಷ್ಟು ಸರಿ? ಈ ರೀತಿಯಾದ ಅಧಿಕಾರವನ್ನು ಅಂತಹವರಿಗೆ ಕೊಟ್ಟವರು ಯಾರು?

ಈ ಎಲ್ಲಾ ಕಂಪನಿಗಳಿಗೂ ದೇಶದ ಬಹುಸಂಖ್ಯಾತ ಹಿಂದೂಗಳೇ ಪ್ರಮುಖ ಗ್ರಾಹಕರು ಅವರ ಹಣದಿಂದಲೇ ಇವರ ವ್ಯಾಪಾರ ನಡೆಯುತ್ತದಾದರೂ, ಈ ಕಂಪನಿಗಳು ಹಿಂದೂ ಆಚರಣೆಗಳು, ನಂಬಿಕೆಗಳು ಅಥವಾ ಹಿಂದೂಗಳ ಜೀವನ ಶೈಲಿಯನ್ನೇಕೆ ಗೌರವಿಸುವುದಿಲ್ಲ? ಎನ್ನುವುದೇ ನಮ್ಮೆಲ್ಲರ ವಾದವಾಗಿದೆ. ಅದು #ಫ್ಯಾಬಿಂಡಿಯಾ, #ಟಾಟಾಕ್ಲಿಕ್, #ಸೀಟ್ಟೈರ್ಸ್, #ಮನ್ಯಾವರ್ #ಸಿಯಟ್ ಟೈರ್ಸ್ ಯಾರೇ ಅಗಿರಲಿ ಅವರ ಉತ್ಮನ್ನಗಳನ್ನು ಖರೀಧಿಸದೇ ಇರುವ ಮೂಲಕ ಮತ್ತು ಅವರೆಲ್ಲರ ವಿರುದ್ಧ ಸಕಲ ಹಿಂದೂಗಳೂ ಒಗ್ಗಟ್ಟಾಗಿ ಗಟ್ಟಿ ಧ್ವನಿಯಲ್ಲಿ ಖಂಡಿತವಾಗಿಯೂ ಪ್ರತಿಭಟನೆ ಮಾಡಲೇ ಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊಗಿಯಾಗಿದೆ.

ಒಂದು ಬ್ರಾಂಡ್ ಸಂಕ್ರಾಂತಿ, ಯುಗಾದಿ, ಗೌರೀ ಗಣೇಶ, ದಸರಾ, ದೀಪಾವಳಿ ಹಬ್ಬಗಳಿಗೆ ತಮ್ಮ ಉತ್ಪನ್ನಗಳ ಜಾಹೀರಾತುಗಳನ್ನು ಮಾಡಿದಾಗ, ಮತ್ತು ಅ ಉತ್ಪನ್ನಗಳನ್ನು ಹಿಂದೂಗಳು ಖರೀದಿಸಬೇಕೆಂದು ಬಯಸಿದಾಗ, ಆದರ ಪ್ರಚಾರವನ್ನು ಸಂಪೂರ್ಣವಾಗಿ, ಪ್ರಜ್ಞಾಪೂರ್ವಕವಾಗಿ ಹಿಂದೂಗಳ ಭಾವನೆಗೆ ತಕ್ಕಂತೆಯೇ ಇರಬೇಕೇ ಹೊರತು ಅನಗತ್ಯವಾಗಿ ಜಾತ್ಯಾತೀತೆ ಪರಿಸರ ಹಾನಿ ಮಣ್ಣು ಮಸಿ ಎಂದು ಉದ್ದೇಶಪೂರ್ವಕವಾಗಿ ಮೂಗು ತೂರಿಸುವುದು ಸರಿಯಾದ ಕ್ರಮವಲ್ಲ.

ಇದರ ವಿರುದ್ಧವಾಗಿ ಬಲಪಂಥೀಯ ದೃಷ್ಟಿಕೋನಗಳಿಗೆ ಹೆಸರುವಾಸಿಯಾಗಿರುವ ಲೇಖಕಿ ಶೆಫಾಲಿ ವೈದ್ಯ, ತನ್ನ, ಟ್ವಿಟ್ಟರ್ನಲ್ಲಿ, ನಾನು ಯಾವುದೇ ದೀಪವಿಲ್ಲದ ಬಿಂದಿ ಇಲ್ಲದ ಹೆಣ್ಣುಮಕ್ಕಳನ್ನು ಜಾಹೀರಾತನ್ನು ತೋರಿಸುವ ಯಾವುದೇ ಬ್ರ್ಯಾಂಡ್ನಿಂದ #ದೀಪಾವಳಿಗಾಗಿ ಏನನ್ನೂ ಖರೀದಿಸುವುದಿಲ್ಲ ಎಂಬ ಶಪಥವನ್ನು ಮಾಡಿದ್ದು ಅದಕ್ಕಾಗಿ #NOBindi_NoBusiness ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ.

ವಯಕ್ತಿಕವಾಗಿ ನನಗೆ ಆಕೆಯ ಪರಿಚಯವಿಲ್ಲದಿದ್ದರೂ ಈ ಸಂಧರ್ಭದಲ್ಲಿ ಆಕೆ ಎತ್ತಿರುವ ಪ್ರಶ್ನೆ ಬಹಳ ಸಮಯೋಚಿತವಾಗಿರುವ ಕಾರಣ ಈ ದೇಶದ ಬಹುಸಂಖ್ಯಾತ ಹಿಂದೂಗಳಲ್ಲಿ ಒಬ್ಬನಾಗಿ ಈ ಲೇಖನದ ಮೂಲಕ ಆಕೆಯ ವಿಚಾರಗಳನ್ನು ಸಮರ್ಥನೆ ಮಾಡುತ್ತಿದ್ದೇನೆ ನಿಮಗೆ ಈ ವಿಚಾರ ಧಾರೆ ಇಷ್ಟವಾದಲ್ಲಿ ದಯವಿಟ್ಟು ಈ ವಿಚಾರವನ್ನು ಮತ್ತಷ್ಟು ಜನರಿಗೆ ತಲುಪಿಸುವ ಮುಖಾಂತರ ಎಲ್ಲರಿಗೂ ಅರಿವನ್ನು ಮೂಡಿಸುವಂತೆ ಮಾಡಬೇಕೆಂದು ಕೋರುತ್ತೇನೆ.

ಇದು ಯಾರದ್ದೇ ವಿರುದ್ಧ ಹೊಡೆದಾಟ ಬದಿದಾಟ ದ್ವೇಷ ಅಸೂಯೇ ಇಲ್ಲವೇ ರಕ್ತಪಾತವಾಗಲೀ ನಡೆಯದೇ ಕೇವಲ ಖಡ್ಗಕ್ಕಿಂತ ಲೇಖನಿಯೇ ಹರಿತ ಎಂಬ ಮಾತನ್ನು ಹಿಂದೂಗಳ ಭಾವನೆಗಳ ವಿರುದ್ಧ ವ್ಯವಸ್ಥಿತವಾಗಿ ಷಡ್ಯಂತರ ನಡೆಸುತ್ತಿರುವವರಿಗೆ ಎಚ್ಚರಿಕೆಯ ಸಂದೇಶವನ್ನು ಕಳುಹಿಸುವ ಮೂಲಕ ಅವರನ್ನು ಸರಿ ದಾರಿಗೆ ತರುವ ಪ್ರಯತ್ನಕ್ಕೆ ನಮ್ಮ ನಿಮ್ಮೆಲ್ಲರ ಬೆಂಬಲವಿರಲಿ

ಏನಂತೀರೀ?
ನಿಮ್ಮವನೇ ಉಮಾಸುತ

#jashneRiwaaz
#FabIndiaAdvertise
#fabindia
#Diwali
#Deepawali
#news

2 thoughts on “#NoBindi_NoBusiness

  1. ವ್ಯಾಪಾರ-ವಹಿವಾಟುಗಳು ನಡೆಯುವುದೇ ಗ್ರಾಹಕರಿಂದ, ಗ್ರಾಹಕರು ಕೇವಲ ಬೆಲೆಯ ಬಗ್ಗೆ ಚಿಂತಿಸದೆ ನಮ್ಮ ನೆಲ-ಸಂಸ್ಕೃತಿಗಳ ಬಗ್ಗೆಯೂ ಎಚ್ಚೆತ್ತುಕೊಂಡು ಸೂಕ್ತ ಆಯ್ಕೆಗಿಳಿದರೆ ನಮ್ಮ ಸಂಸ್ಕೃತಿಯ ಬಗ್ಗೆ ಕಾಳಜಿಯಿರದ ಮಾರಾಟಗಾರರನ್ನು ಮೂಲೆಗುಂಪಾಗಿಸುವುದು ದೊಡ್ಡ ವಿಷಯವೇನಲ್ಲ..
    ಪ್ರಜ್ಞಾವಂತರು ಮನಸು ಮಾಡಬೇಕಷ್ಟೇ.
    ಆದರೆ ಹಬ್ಬಗಳ ಸಾಲು ರಜೆ ಬಂದರೆ ಸಾಕು ಬಟ್ಟೆ ಪ್ಯಾಕ್ ಮಾಡಿಕೊಂಡು trip/tour ಮಾಡುತ್ತಾ ಹಬ್ಬಗಳ ಆಚರಣೆಯನ್ನೇ ಬದಿಗಿಟ್ಟಿರುವ ಯುವ ಜನತೆಯ ನಡೆ ಭವಿಷ್ಯದ ಬಗ್ಗೆ ಪ್ರಶ್ನೆ ಹುಟ್ಟುಹಾಕದೇ ಇರದು..

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s