ಅವಿತಿಟ್ಟ ಇತಿಹಾಸ  

WhatsApp Image 2021-12-03 at 12.49.10 PMಕಳೆದ ಭಾನುವಾರ ಬೆಂಗಳೂರಿನಲ್ಲಿ ಖ್ಯಾತ ಲೇಖಕರಾದ ಶ್ರೀ ಪ್ರವೀಣ್ ಮಾವಿನಕಾಡು ಮತ್ತು ಡಾ. ಸುಧಾಕರ್ ಹೊಸಳ್ಳಿ ಈ ಇಬ್ಬರು ಲೇಖಕರು ಬರೆದಿರುವ ಅವಿತಿಟ್ಟ ಅಂಬೇಡ್ಕರ್ ಎಂಬ ಕೃತಿ ಖ್ಯಾತ ರಂಗಕರ್ಮಿಗಳಾದ ಶ್ರೀ ಪ್ರಕಾಶ್ ಬೆಳವಾಡಿ ಶ್ರೀ ಆಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ರಾಜ್ಯ ಕಾರ್ಯದರ್ಶಿಗಳದ ಶ್ರೀ ರಘುನಂದನ್ ಭಟ್ ಮತ್ತು ರಾಜ್ಯ ವಕೀಲರ ಪರಿಷತ್ತಿನ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ಕುಮಾರ್ ಅವರ ಸಮ್ಮುಖದಲ್ಲಿ ಲೋಕಾರ್ಪಣೆ ಆಯಿತು.

WhatsApp Image 2021-12-03 at 12.48.06 PMಈ ಪುಸ್ತಕ ಬಿಡುಗಡೆಯ ಕುರಿತಂತೆ ನಾಡಿನ ಬಹುತೇಕ ದೃಶ್ಯ ಮತ್ತು ಮುದ್ರಣ ಮಾಧ್ಯಮಗಳು ಉತ್ತಮವಾಗಿ ವರದಿ ನೀಡಿದವಲ್ಲದೇ, ಅಂಬೇಡ್ಕರ್ ಅವರು ಬದುಕಿದ್ದಾಗ ಬಗೆ ಬಗೆಯಾಗಿ ಕಷ್ಟಗಳನ್ನು ಕೊಟ್ಟಿದ್ದಲ್ಲದೇ ಅಂಬೇಡ್ಕರ್ ಅವರನ್ನು ಎರಡು ಬಾರಿ ಸಾರ್ವಜನಿಕ ಚುನಾವಣೆಯಲ್ಲಿ ಸೋಲಿಸಿದ ಅಂದಿನ ನೆಹರು ಕಾಂಗ್ರೇಸ್ಸಿನ ಇಬ್ಬಂಧಿತನ ಹೊರಗೆ ಬರುತ್ತಿದ್ದಂತೆಯೇ ಸೆಖೆಯನ್ನು ತಾಳಲಾರದೇ ಬಿಲದಿಂದ ಹೊರ ಬರುವ ಹಾವುಗಳಂತೆ, ಈ ಕಠು ಸತ್ಯವನ್ನು ಅರಗಿಸಿ ಕೊಳ್ಳಲಾಗದ ಕೆಲವರು ಎಪ್ಪತ್ತು ವರ್ಷಗಳ ಹಿಂದೆ ನಡೆದ ಘಟನೆಗಳನ್ನು ಈಗ ಕೆದಕುವ ಔಚಿತ್ಯವನ್ನು ಪ್ರಶ್ನಿಸುತ್ತಿರುವುದು ನಿಜಕ್ಕೂ ಸೋಜಿಗವೆನಿಸಿತು.

ವ್ಯಾಪಾರಕ್ಕೆಂದು ಭಾರತಕ್ಕೆ ಬಂದ ಬ್ರಿಟೀಷರು ನಮ್ಮಲ್ಲಿನ ಒಗ್ಗಟ್ಟಿನ ಕೊರತೆಯನ್ನೇ ಮುಂದಾಗಿಟ್ಟುಕೊಂಡು ನಮ್ಮನ್ನೇ ಒಡದು ಅಧಿಕಾರವನ್ನು ಪಡೆದು ಕೊಳ್ಳುತ್ತಿದ್ದದ್ದನ್ನು ಜನರಿಗೆ ತಿಳಿಯಪಡಿಸಲು ಮುಂದಾದ, ಅಂದಿಗೂ ಇಂದಿಗೂ ಮತ್ತು ಮುಂದೆಯೂ ಬುದ್ಧಿವಂತರು ಮತ್ತು ಶ್ರಮಜೀವಿಗಳಾಗಿರುವ ಈ ದೇಶದಲ್ಲಿ ಕೇವಲ 3% ರಷ್ಟು ಇರುವ ಬ್ರಾಹ್ಮಣರನ್ನು ಹತ್ತಿಕ್ಕುವ ಸಲುವಾಗಿ ತಲೆ ತಲಾಂತರದಿಂದಲೂ ಭಾರತದಲ್ಲಿದ್ದ ಜಾತೀ ಪದ್ದತಿ ಮತ್ತು ಅಸ್ಪೃಷ್ಯತೆಯನ್ನು ಮುಂದಾಗಿಟ್ಟು ಕೊಂಡು ಇವೆಲ್ಲದ್ದಕ್ಕೂ ಬ್ರಾಹ್ಮಣರೇ ಕಾರಣರು ಎಂಬ ಕಾಗಕ್ಕಾ ಗುಬ್ಬಕ್ಕಾ ಕಥೆಯ ಮೂಲಕ ದೇಶದಲ್ಲಿ ದಲಿತ ಮತ್ತು ಬಲಿತ ಎಂಬ ಹೊಸಾ ಸಮಸ್ಯೆಯನ್ನು ಹುಟ್ಟು ಹಾಕುವ ಮೂಲಕ ಸದ್ದಿಲ್ಲದೇ ಈ ದೇಶವನ್ನು ತಮ್ಮ ವಸಹಾತುವನ್ನಾಗಿ ಮಾಡಿಸಿಕೊಂಡರು.

ಸಾವಿರ ವರ್ಷಗಳಷ್ಟು ಸುದೀರ್ಘವಾಗಿ ಮೊಘಲರ ಸತತ ಧಾಳಿಯನ್ನು ಎದುರಿಸಿಯೂ ಗುರುಕುಲ ಪದ್ದತಿಯ ಮೂಲಕ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಅತ್ಯಂತ ಬಲಾಡ್ಯವಾಗಿದ್ದ ನಮ್ಮ ಭಾರತ ದೇಶವನ್ನು ಬ್ರಿಟೀಷರ ಮೆಕಾಲೆ ಎಂಬ ವ್ಯಕ್ತಿ ತನ್ನ ಶಿಕ್ಷಣದ ಪದ್ದತಿಯ ಮೂಲಕ ಸಂಪೂರ್ಣವಾಗಿ ಛಿದ್ರ ಛಿದ್ರ ಮಾಡಿದ್ದಲ್ಲದೇ ನೋಡ ನೋಡುತ್ತಿದ್ದಂತೆಯೇ ರೂಪದಲ್ಲಿ ಭಾರತೀಯರದರೂ ಮಾನಸಿಕವಾಗಿ ಬ್ರಿಟೀಷರಾಗಿದ್ದಂತಹ ಭಾರತೀಯರನ್ನು ಹುಟ್ಟು ಹಾಕುವುದರಲ್ಲಿ ಸಫಲರಾದರು. ಅಂತಹ ಕೆಲ ಕಲಬೆರೆಕೆ ಭಾರತೀಯರೇ ತಮ್ಮ ಅಧಿಕಾರದ ತೆವಲಿಗಾಗಿ ಎಲ್ಲರ ಮುಂದೆ ಬ್ರಿಟೀಷರ ವಿರುದ್ಧ ಹೊರಾಟ ಮಾಡುವಂತೆ ನಟಿಸುತ್ತಲೇ ಆಂತರಿಕವಾಗಿ ಬ್ರಿಟೀಷರೊಂದಿಗೇ ಬೆರೆತು ಹೋಗಿದ್ದರು ಎನ್ನುವುದು ವಿಪರ್ಯಾಸ.

neh1ಇಂತಹ ಅಧಿಕಾರದಾಹಿತ್ವದ ಅಗ್ರೇಸರರಾಗಿ ಭಾರತದ ಪ್ರಥಮ ಪ್ರಧಾನಮಂತ್ರಿಗಳಾಗಿದ್ದ ಪಂಡಿತ್ ಜವಹರ್ ಲಾಲ್ ಅವರಾಗಿದ್ದರು ಎನ್ನುವುದೇ ಈ ದೇಶದ ಕಳಂಕ. ಈ ವ್ಯಕ್ತಿ ತನ್ನ ಸ್ವಾರ್ಥಕ್ಕಾಗಿ ಅಖಂಡ ಭಾರತವನ್ನು ತುಂಡರಿಸಿದ್ದಲ್ಲದೇ ತನ್ನ ಧೂರಣೆಗೆ ಅಡ್ಡ ಬರುತ್ತಿದ್ದವರ ವಿರುದ್ಧ ಮಹಾತ್ಮಾ ಗಾಂಧಿ ಅವರನ್ನು ಗುರಾಣಿಯಾಗಿಸಿಕೊಂಡು ಸದ್ದಿಲ್ಲದೇ ಮಟ್ಟ ಹಾಕಿದ ಇತಿಹಾಸವನ್ನೇಕೆ ಅವಿತಿಡಬೇಕು?
nehe
ನಿಜ ಹೇಳಬೇಕೆಂದರೆ ಈ ದೇಶದ ಬಹುತೇಕ ನಾಯಕರ ಬೆನ್ನಿಗೆ ಚೂರಿ ಹಾಕಿಯೇ ನೆಹರೂ ಮತ್ತವರ ಕುಟುಂಬ ಸುಮಾರು 60 ವರ್ಷಗಳ ಕಾಲ ಈ ದೇಶವನ್ನು ತಮ್ಮ ಜಹಗೀರು ಎನ್ನುವಂತೆ ಅಧಿಕಾರದ ಚುಕ್ಕಾಣಿ ಹಿಡಿದಿತ್ತಲ್ಲದೇ, ಇಂದಿಗೂ ಸಹಾ ಅದೇ ಧೋರಣೆಯಲ್ಲಿ ಈ ದೇಶದಲ್ಲಿ ಕೊಮುದಳ್ಳುರಿ ಎಬ್ಬಿಸುತ್ತಿರುವ ಇತಿಹಾಸವನ್ನೇಕೆ ಅವಿತಿಡಬೇಕು?

neh2ನೆಹರು ಮತ್ತು ಮೊಹಮ್ಮದ್ ಅಲಿ ಜಿನ್ನಾ ಅವರ ವಯಕ್ತಿಯ ತೆವಲುಗಳಿಗಾಗಿ ಈ ದೇಶ ಇಬ್ಬಾಗವಾಗುವುದು ನಿಶ್ಚಿತವಾಗಿ ಈ ದೇಶದ ಮೊದಲ ಪ್ರಧಾನಿಗಳು ಯಾರಾಗಬೇಕು ಎಂದು ನಿರ್ಧರಿಸುವ ಸಲುವಾಗಿ ಮಹಾತ್ಮಾ ಗಾಂಧಿಯವರ ನೇತೃತ್ವದ ನಡೆದ ಸಭೆಯಲ್ಲಿ, ಸರ್ದಾರ್ ವಲ್ಲಭಾಯಿ ಪಟೇಲರನ್ನೇ ಬಹುಮತದಿಂದ ಆಯ್ಕೆ ಮಾಡಿದರೂ, ಮತ್ತದೇ ಗಾಂಧಿಯವರ ಮೇಲೆ ಒತ್ತಡ ಹಾಕಿ ಈ ದೇಶಕ್ಕೆ ಪ್ರಪ್ರಥಮ ಪ್ರಧಾನಿಯಾದ ನೆಹರು ಇತಿಹಾಸವನ್ನೇಕೆ ಅವಿತಿಡಬೇಕು?

rpದೇಶದ ಮೊದಲ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಜವಾಹರಲಾಲ್ ನೆಹರು ಅವರು ಭಾರತದ ಮೊದಲ ರಾಷ್ಟ್ರಪತಿಯನ್ನಾಗಿ ಶ್ರೀ ರಾಜೇಂದ್ರ ಪ್ರಸಾದ್ ಅವರನ್ನು ನೇಮಕ ಮಾಡಲು ಬಹುತೇಕ ಕಾಂಗ್ರೇಸ್ಸಿಗರು ನಿರ್ಧರಿದರೂ, ಪ್ರಸಾದ್ ಅವರು ವಲ್ಲಭಭಾಯಿ ಪಟೇಲರ ಆತ್ಮೀಯರು ಎನ್ನುವ ಒಂದೇ ಕಾರಣದಿಂದಾಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ವಿರೋಧಿಸಿ, ಆ ಸ್ಥಾನಕ್ಕೆ ಬ್ರಿಟೀಷರ ಆದರ್ಶಕ್ಕೆ ಸರಿ ಹೊಂದುತ್ತಾರೆ ಎನ್ನುವ ಕಾರಣದಿಂದಲೇ ಭಾರತದ ಕೊನೆಯ ವೈಸ್‌ರಾಯ್‌ ಆಗಿದ್ದ ಸಿ ರಾಜಗೋಪಾಲಾಚಾರಿಯವರಿಗೆ ಆದ್ಯತೆ ನೀಡಿದ್ದ ಇತಿಹಾಸವನ್ನೇಕೆ ಅವಿತಿಡಬೇಕು?

somanathಪದೇ ಪದೇ ಮುಸಲ್ಮಾನರ ಧಾಳಿಗೆ ಒಳಗಾಗಿದ್ದ ಗುಜರಾತಿನ ಸೋಮನಾಥ ದೇವಾಲಯದ ಪುನರ್ನಿರ್ಮಾಣ ಮಾಡಲು ದೇಶದ ಪ್ರಥಮ ಗೃಹಮಂತ್ರಿಗಳಾಗಿದ್ದ ಸರ್ದಾರ್ ಪಟೇಲ್ ಅವರು ಕೈಗೆತ್ತಿಕೊಂಡಾಗ ಮತ್ತದೇ ನೆಹರು ವಿರೋಧ ವ್ಯಕ್ತಪಡಿಸಿದ್ದಲ್ಲದೇ, ಆ ದೇವಾಲಯದ ನಿರ್ಮಾಣಕ್ಕಾಗಿ ಸರ್ಕಾರದಿಂದ ಯಾವುದೇ ರೀತಿಯ ಹಣಕಾಸಿನ ನೆರವನ್ನು ನೀಡುವುದಿಲ್ಲ ಎಂದು ಸಾರ್ವಜನಿಕವಾಗಿ ಘೋಷಿಸಿದ್ದರು. ಸರ್ಕಾರ ಕೊಡದಿದ್ದರೇನಂತೆ ಎಂದು ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಿ ಬೃಹದಾದ ಸೋಮನಾಥ ದೇವಾಲಯವನ್ನು ನಿರ್ಮಿಸಿ ಅದರ ಉದ್ಭಾಟನೆಯ ಮುಂಚೆಯೇ ಪಟೇಲರು ಅಸುನೀಗಿದಾಗ, ಆ ದೇವಾಲಯದ ಉಧ್ಭಾಟನೆಗೆ ದೇಶದ ರಾಷ್ಟ್ರಪತಿಗಳಾಗಿ ಶ್ರೀ ಬಾಬು ರಾಜೇಂದ್ರ ಪ್ರಸಾದರು ಹೋಗಬಾರದೆಂದು ತಾಕೀತು ಮಾಡಿದ್ದ ನೆಹರು ಅವರ ಹಿಂದೂ ವಿರೋಧಿತನವನ್ನೇಕೆ ಅವಿತಿಡಬೇಕು?

ನೆಹರು ಅಧಿಕಾರವನ್ನು ವಹಿಸಿಕೊಂಡ ಕೂಡಲೇ ಹಿಂದೂ ಕೋಡ್ ಬಿಲ್ ಜಾರಿಗೆ ತರಲು ನಿರ್ಧರಿಸಿದಕ್ಕೆ ಸಹಿಹಾಕಲು ವಿರೋಧಿಸಿದ ರಾಜೇಂದ್ರ ಪ್ರಸಾದರು ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ಮೂಲಕ ದೇಶವಾಸಿಗಳೆಲ್ಲರಿಗೂ ಅವರ ಧಾರ್ಮಿಕ ನಿಲುವಿನ ಹೊರತಾಗಿಯೂ ಒಂದೇ ರೀತಿಯ ಕಾನೂನು ಇರಬೇಕಂದು ಬಯಸಿದರು. ಇದೇ ನಿಲುವಿಗೆ ಅಂದಿನ ಅನೇಕ ಕಾಂಗ್ರೇಸ್ಸಿಗರು ಬೆಂಬಲಿಸಿದ ಕಾರಣ ಆರಂಭದಲ್ಲಿ ತಣ್ಣಗಾಗಿದ್ದ ನೆಹರು, ರಾಜೇಂದ್ರ ಪ್ರಸಾದ್ ಅವರ ಅಧಿಕಾರದ ಅವಧಿ ಮುಗಿದ ನಂತರ ಎರಡನೇ ಬಾರಿಗೆ ಅವರನ್ನು ಮುಂದುವರೆಸಲು ನಿರಾಕರಿಸಿ ಸರ್ವಪಲ್ಲಿ ರಾಧಾಕೃಷ್ಣನ್ ಅವರನ್ನು ರಾಷ್ಟ್ರಪತಿಗಳನ್ನಾಗಿ ಮಾಡಿ 1955-56ರಲ್ಲಿ ನಾಲ್ಕು ಹಿಂದೂ ಕೋಡ್ ಬಿಲ್‌ಗಳನ್ನು ಅಂಗೀಕರಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಹಿಂದೂ ವಿವಾಹ ಕಾಯಿದೆ, ಹಿಂದೂ ಉತ್ತರಾಧಿಕಾರ ಕಾಯಿದೆ, ಹಿಂದೂ ಅಲ್ಪಸಂಖ್ಯಾತ ಮತ್ತು ಪಾಲಕತ್ವ ಕಾಯಿದೆ, ಹಿಂದೂ ದತ್ತು ಮತ್ತು ನಿರ್ವಹಣೆ ಕಾಯಿದೆಗಳನ್ನು ಜಾರಿಗೆ ತರುವ ಮೂಲಕ, ವಿಶ್ವ ನಾಯಕನಾಗುವ ತೆವಲಿನಲ್ಲಿ ಬೆರಳಲ್ಲಿ ಬಗೆ ಹರಿಸಬಹುದಾಗಿದ್ದ ಕಾಶ್ಮೀರದ ಸಮಸೆಯನ್ನು ವಿಶ್ವ ಸಂಸ್ಥೆಯ ವರೆಗೆ ಕೊಂಡ್ಯೊಯ್ದು ಇಂದಿಗೂ ಆ ಸಮಸ್ಯೆ ಜೀವಂತವಾಗಿರುವಂತೆ ಮಾಡಿದಂತೆ, ಈ ಕಾನೂನುಗಳನ್ನು ಜಾರಿಗೆಗೊಳಿಸುವ ಮೂಲಕ ಇಂದಿಗೂ ದೇಶದಲ್ಲಿ ಅಸಮಾನತೆಯನ್ನು ಮುಂದುವರೆಯುವಂತೆ ಮಾಡಿದ ಇತಿಹಾಸವನ್ನೇಕೆ ಅವಿತಿಡಬೇಕು?

ದೂರದೃಷ್ಟಿಯ ಕೊರತೆಯಿಂದ ತನ್ನ ಅಲಿಪ್ತ ನೀತಿಯ ಭ್ರಮಾಲೋಕದಲ್ಲಿ ತೇಲಾಡುತ್ತಲೇ ನೆಹರು ಹಿಂದೀ ಚೀನೀ ಭಾಯ್ ಎಂದು ಕನವರಿಸುತ್ತಿರುವಾಗಲೇ, ಸದ್ದಿಲ್ಲದೇ ಚೀನಾ ಭಾರತದ ಮೇಲೆ ಧಾಳಿ ನಡೆಸಿ ಲಢಾಕ್ ಪ್ರದೇಶದ ಲಕ್ಷಾಂತರ ಮೀಟರುಗಳ ಭೂಭಾಗವನ್ನು ಆಕ್ರಮಿಸಿಕೊಂಡಾಗ ಅದರ ವಿರುದ್ಧ ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿದಾಗ ಒಂದು ಹುಲ್ಲುಕಡ್ಡಿಯೂ ಆ ಜಾಗದಲ್ಲಿ ಬೆಳೆಯುವುದಿಲ್ಲ ಆ ಜಾಗ ಎಲ್ಲಿದೆ ಎಂದೇ ನಮಗೆ ತಿಳಿದಿರಲಿಲ್ಲ ಎಂದು ಪ್ರಧಾನಿಯಾಗಿ ವ್ಯಂಗ್ಯವಾಡಿದ್ದ ಸತ್ಯವನ್ನೇಕೆ ಅವಿತಿಡಬೇಕು?

veerghatನೆಹರು ಅವರು ನಿಧನರಾದ ನಂತರ ಆವರ ಮಗಳು ಇಂದಿರಾಗಾಂಧಿಯನ್ನು ಅಧಿಕಾರಕ್ಕೆ ತರಲು ಮುಂದಾದ ನೆಹರು ಅವರ ವಂಧಿಮಾಗಧರ ಆಸೆಗೆ ತಣ್ಣೀರೆರಚಿ ಮಹಾನ್ ದೇಶಭಕ್ತ, ಸರಳ ಸಜ್ಜನ, ಅಜಾತಶತ್ರುಗಳಾಗಿದ್ದ, ಜನಾನುರಾಗಿಗಳಾಗಿದ್ದ ಶ್ರೀ ಲಾಲ ಬಹದ್ದೂರ್ ಶಾಸ್ತ್ರಿಗಳು ಈ ದೇಶದ ಪ್ರಧಾನಿಗಳಾಗಿ ಅಮೇರಿಕಾವನ್ನೂ ಎದುರು ಹಾಕಿಕೊಂಡು ಭಾರತದ ಮೇಲೆ ಕಾಲು ಕೆರೆದುಕೊಂಡು ಯುದ್ಧಕ್ಕೆ ಬಂದಿದ್ದ ಪಾಕೀಸ್ಥಾನಕ್ಕೆ ಮಣ್ಣುಮುಕ್ಕಿಸಿ ತಾಷ್ಕೆಂಟ್ ಒಪ್ಪಂದಕ್ಕೆ ಸಹಿ ಹಾಕಿದ ಕೆಲವೇ ಗಂಟೆಗಳಲ್ಲಿ ವಿವಾದಾತ್ಮಕವಾಗಿ ರಷ್ಯಾದಲ್ಲೇ ನಿಧನರಾದ ಶಾಸ್ತ್ರಿಗಳ ಸಮಾದಿಗೆ ದೆಹಲಿಯಲ್ಲಿ ಜಾಗವನ್ನು ನೀಡಲು ನಿರಾಕರಿಸಿ ನಂತರ ಜನರ ಒತ್ತಾಯಕ್ಕೆ ಮಣಿದ ಅಂದಿನ ಕಾಂಗ್ರೇಸ್ ಇಬ್ಬಂಧಿತನವನ್ನೇಕೆ ಅವಿತಿಡಬೇಕು?

ಹೀಗೆ ಪಟ್ಟಿ ಮಾಡುತ್ತಾ ಹೋದರೆ ಅದೆಷ್ಟೋ ಅವಿತಿಟ್ಟ ಇತಿಹಾಸಗಳು ಹೊರಗೆ ಬರುವ ಮೂಲಕ ಅದೆಷ್ಟೋ ಎಲೆಮರೆ ಕಾಯಿಯಂತಹ ಪ್ರಾಥಃ ಸ್ಮರಣೀಯ ವೀರ ಯೋಧರ ತ್ಯಾಗ ಮತ್ತು ಬಲಿದಾನಗಳಿಂದ ಪಡೆದ ಸ್ವಾತಂತ್ರ್ಯಕ್ಕೆ ಗೆದ್ದಲು ಹುಳಗಳು ಕಟ್ಟಿದ ಹುತ್ತದಲ್ಲಿ ಬಂದು ಸೇರಿಕೊಂಡು ಅದೇ ಗೆದ್ದಲು ಹುಳುಗಳನ್ನು ತಿಂದು ಹಾಕುವ ಹಾವಿನಂತೆ ಈ ದೇಶಕ್ಕೆ ವಕ್ಕರಿಸಿಕೊಂಡ ನೆಹರು ಮತ್ತವರ ಕುಟುಂಬದವರ ನಿಜವಾದ ಬಣ್ಣ ಬಯಲಾಗುತ್ತದೆ.

ದೇಶದ ನಿಜವಾದ ಇತಿಹಾಸವನ್ನು ಅರಿಯದಿದ್ದಲ್ಲಿ ದೇಶವನ್ನು ಸುಭಧ್ರವಾಗಿ ಕಟ್ಟಲಾಗದು ಮತ್ತು ಮುನ್ನಡೆಸಲಾಗದು ಎಂಬ ಸತ್ಯದಂತೆ ಪ್ರವೀಣ್ ಮಾವಿನ ಕಾಡು ಮತ್ತು ಡಾ. ಸುಧಾಕರ್ ಹೊಸಳ್ಳಿಯಂತಹ ನಿರ್ಭಿಡೆಯ ತರುಣರು ಧೈರ್ಯದಿಂದ ಮತ್ತಷ್ಟು ಮಗದಷ್ಟು ಅವಿತಿಟ್ಟ ಸಂಗತಿಗಳನ್ನು ಬಯಲಿಗೆಳೆದು ಅಂದಿನ ತಪ್ಪುಗಳನ್ನು ಸರಿಪಡಿಸಿಕೊಂಡು ದೇಶವನ್ನು ಸಧೃಢವಾಗಿ ಪಡಿಸಬಹುದಲ್ಲದೇ, ಭಾರತವನ್ನು ಮತ್ತೊಮ್ಮೆ ವಿಶ್ವಗುರುವಾಗಿ ಮೆರೆಸಬಹುದಲ್ಲವೇ?

ಏನಂತೀರಿ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s