ಸುಗ್ಗಿಯ ಸಮಯದಲ್ಲಿ ಶ್ರೀನಿವಾಸನ ಸ್ಮರಣೆ -2

ಹಿಂದಿನ ಲೇಖನದಲ್ಲಿ ನಮ್ಮ ಗಿಣಿಯ ಕೃಷ್ಣಮೂರ್ತಿ ಶ್ರೀನಿವಾಸ ಅಲಿಯಾಸ್, ಜಿ.ಕೆ. ಉರ್ಫ್ ಪಿಂಟು ಅಂದ್ರೇ ಯಾರು? ಅವನ ಪೂರ್ವಾಪರ ಏನು ಅಂತಾ ತಿಳಿದುಕೊಂಡಿದ್ವಿ. ಈ ಭಾಗದಲ್ಲಿ ನನಗೇಕೆ ಪಿಂಟೂನ ಬಗ್ಗೆ ಯಾಕೆ ಇಷ್ಟೊಂದು ಕಾಳಜಿ? ಅಂತಾಹದ್ದೇನು ಮಾಡಿದ್ದ ಎಂಬುದನ್ನು ತಿಳಿಯೋಣ. ಈಗಾಗಲೇ ತಿಳಿಸಿದ್ದಂತೆ ವಯಸ್ಸಿನಲ್ಲಿ ನನಗಿಂತ ಒಂದು ವರ್ಷ ಚಿಕ್ಕವನಾದರೂ ಅವನ ವ್ಯಕ್ತಿತ್ವ ಮತ್ತು ಆಕಾರದಿಂದಾಗಿ ನನಗೆ ಅಣ್ಣನ ಸ್ಥಾನದಲ್ಲಿದ್ದ. ನಾನು ಮೊದಲನೇ ವರ್ಷದ ಡಿಪ್ಲಮೋ ಓದುತ್ತಿರುವಾಗ ನನ್ನ ಸಹೋದರಿಯ ಮದುವೆಯ ಸಂಧರ್ಭದಲ್ಲಿ ನನ್ನ ಉಪನಯನವಾಗಿತ್ತು. ಆಗ… Read More ಸುಗ್ಗಿಯ ಸಮಯದಲ್ಲಿ ಶ್ರೀನಿವಾಸನ ಸ್ಮರಣೆ -2

ಭಾರತ / ಆಸ್ಟ್ರೇಲಿಯ ಟೈಟಾನ್ ಕಪ್ 1996

ಇಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡೂ ತಂಡಗಳು ಒಂದೊಂದು ಪಂದ್ಯವನ್ನು ಗೆದಿದ್ದು ಸರಣಿ ಗೆಲ್ಲಲು ಎರಡೂ ತಂಡಗಳಿಗೆ ಈ ಪಂದ್ಯ ಬಹಳ ಮುಖ್ಯವಾಗಿರುವ ಪರಿಣಾಮವಾಗಿ ಈ ಪಂದ್ಯ ಬಹಳ ಜಿದ್ದಾ ಜಿದ್ದಿನಿಂದ ರೋಚಕವಾಗಿರುವುದರಲ್ಲಿ ಸಂದೇಹವೇ ಇಲ್ಲ. ಈ ಸಮಯದಲ್ಲಿ, ಇದೇ ಕ್ರೀಡಾಂಗಣದಲ್ಲಿ , ಇದೇ ತಂಡಗಳ ನಡುವೆ 1996ರಲ್ಲಿ ರೋಚಕವಾಗಿ ನಡೆದ ಟೈಟಾನ್ ಕಪ್ ಪಂದ್ಯವಳಿ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಹೊನಲು ಬೆಳಕಿನ ಆ ಪಂದ್ಯವನ್ನು ಕ್ರೀಡಾಂಗಣದಲ್ಲಿ… Read More ಭಾರತ / ಆಸ್ಟ್ರೇಲಿಯ ಟೈಟಾನ್ ಕಪ್ 1996

ಸುಗ್ಗಿಯ ಸಮಯದಲ್ಲಿ ಶ್ರೀನಿವಾಸನ ಸ್ಮರಣೆ

ಮೊನ್ನೆ ತಾನೇ ಸುಗ್ಗಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದೇವೆ. ಭಗವಾನ್ ವಿಷ್ಣುವಿಗೆ ಸಹಸ್ರನಾಮವಿರುವಂತೆ ನಮ್ಮೀ ಲೇಖನದ ನಾಯಕ ಶ್ರೀನಿವಾಸನಿಗೂ ಹಲವಾರು ನಾಮಗಳು. ಮನೆಯಲ್ಲಿ ಪೋಷಕರು ನಾಮಕರಣ ಮಾಡಿದ್ದು ಗಿಣಿಯ ಕೃಷ್ಣಮೂರ್ತಿ ಶ್ರೀನಿವಾಸ. ಮನೆಯಲ್ಲಿ ಎಲ್ಲರೂ ಪ್ರೀತಿಯಿಂದ ಕರೆಯುತ್ತಿದ್ದದ್ದು ಮುರಳಿ ಎಂದು. ಇನ್ನು ಬಾಲ್ಯದಿಂದಲೂ ನೋಡಲು ಸ್ವಲ್ಪ ದಷ್ಟ ಪುಷ್ಟವಾಗಿದ್ದ ನಮ್ಮ ಶ್ರೀನಿವಾಸ, ವಿಷ್ಣುವರ್ಧನ್ ಮತ್ತು ಅಂಬರೀಷ್ ಅಭಿನಯದ ನಾಗರಹೊಳೆ ಸಿನಿಮಾದಲ್ಲಿ ಬರುವ ಪಿಂಟೋ (ದಪ್ಪನೆಯ ಹುಡುಗ)ನನ್ನು ಹೋಲುತ್ತಿದ್ದ ಕಾರಣ ನೆರೆಹೊರೆಯವರು ಪ್ರೀತಿಯಿಂದ ಪಿಂಟೂ ಎಂದು ಕರೆಯುತ್ತಿದ್ದರೆ, ಶಾಲಾ ಕಾಲೇಜುಗಳಲ್ಲಿ… Read More ಸುಗ್ಗಿಯ ಸಮಯದಲ್ಲಿ ಶ್ರೀನಿವಾಸನ ಸ್ಮರಣೆ

ಮಕರ ಸಂಕ್ರಾಂತಿ

ನೇಸರನು ತನ್ನ ಪಥವ ಬದಲಿಸಿ, ಮಾಗಿಯ ಚಳಿ ಮಾಯವಾಗಿ, ಜನ ಮಾನಸದಲ್ಲಿ ಹೊಸ ಚೈತನ್ಯ ಮೂಡಿಸುವ ಸುಗ್ಗಿಯ ಹಬ್ಬ ಸಂಕ್ರಾಂತಿಯ ವೈಶಿಷ್ಟ್ಯತೆಗಳೇನು? ಈ ಹಬ್ಬದಲ್ಲಿ ಹುಗ್ಗಿ, ಎಳ್ಳು ಬೆಲ್ಲವನ್ನು ನೈವೇದ್ಯಕ್ಕೆ ಏಕೆ ಇಡುತ್ತಾರೆ? ಈ ಹಬ್ಬವನ್ನು ಎಲ್ಲೆಲ್ಲಿ ಹೇಗೇಗೇ ಆಚರಿಸುತ್ತಾರೆ? ಎಂಬೆಲ್ಲಾ ಕುತೂಹಲಕ್ಕೆ ಇದೋ ಇಲ್ಲಿದೆ ಉತ್ತರ… Read More ಮಕರ ಸಂಕ್ರಾಂತಿ

ರಾಷ್ಟ್ರೀಯ ಯುವ‌ದಿನ

ಇಂದು ಜನವರಿ 12ನೇ ತಾರೀಖು ಇಡೀ ವಿಶ್ವದ ಯುವ ಜನತೆಗೆ ಒಂದು ವಿಶೇಷ ದಿನ. ಏಳಿ ಎದ್ದೇಳಿ ಗುರಿ ಮುಟ್ಟದವರೆಗೂ ನಿಲ್ಲದಿರಿ ಎಂದು ವಿಶ್ವದ ಯುವಜನತೆಯನ್ನು ಬಡಿದೆಬ್ಬಿಸಿದ ಮಹಾನ್ ಚೇತನ ಸ್ವಾಮಿ ವಿವೇಕಾನಂದರ ಜಯಂತಿ. ಸುಮಾರು160 ವರ್ಷಗಳ ಹಿಂದೆ ಕಲ್ಕತ್ತಾ ನಗರದಲ್ಲಿ ಜನವರಿ 12 1863ರ ಸಂಕ್ರಾಂತಿ ದಿನದಂದು ಶ್ರೀ ವಿಶ್ವನಾಥ ದತ್ತ ಮತ್ತು ಭುವನೇಶ್ವರಿದೇವಿ ದಂಪತಿಗಳ ಗರ್ಭದಲ್ಲಿ ಜನಿಸಿದ ನರೇಂದ್ರ ಮುಂದೆ ಸ್ವಾಮಿ ರಾಮಕೃಷ್ಣ ಪರಮಹಂಸರ ಪರಮ ಶಿಷ್ಯನಾಗಿ ಸನ್ಯಾಸತ್ವದ ದೀಕ್ಷೆ ಪಡೆದು ಸ್ವಾಮಿ ವಿವೇಕಾನಂದರಾದರು.… Read More ರಾಷ್ಟ್ರೀಯ ಯುವ‌ದಿನ

ಯನಮದುರು ಶ್ರೀ ಶಕ್ತೇಶ್ವರ

ಹಿಂದಿನ ಕಾಲದಲ್ಲಿ ಹುಲುಮಾನವರು ಭಗವಂತನನ್ನು ಒಲಿಸಿಕೊಳ್ಳಲು ನಾನಾ ರೀತಿಯಲ್ಲಿ ಪೂಜೆ ಮಾಡುತ್ತಿದ್ದರು. ತಮ್ಮ ಭಕ್ತಿಗೆ ಆ ಭಗವಂತನು ಒಲಿಯದಿದ್ದಲ್ಲಿ ಅನ್ನ ನೀರು ಬಿಟ್ಟು ತಪಸ್ಸನ್ನು ಮಾಡುತ್ತಿದ್ದರು ಹಾಗೊಮ್ಮೆಯೂ ಒಲಿಯದಿದ್ದಲ್ಲಿ, ನಾನಾ ಭಂಗಿಗಳಲ್ಲಿ ನಿಂತು ಕಠೋರ ತಪಸ್ಸಿನ ಮೂಲಕ ಆ ಭಗವಂತನನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ತನ್ನ ತಾಯಿಯ ಬಯಕೆಯಂತೆ ಶಿವನನ್ನು ಒಲಿಸಿಕೊಂಡು ಶಿವನ ಆತ್ಮ ಲಿಂಗವನ್ನು ತರಲು ರಾವಣನಂತೂ ತನ್ನ ಕರುಳು ಬಳ್ಳಿಯನ್ನೇ ಬಗೆದು ಹೊರತೆಗೆದು ರುದ್ರವೀಣೆಯನ್ನಾಗಿಸಿ ಪರಶಿವನನ್ನು ಒಲಿಸಿಕೊಂಡಿದ್ದನಂತೆ. ಆದರಿಲ್ಲಿ ಭಗವಂತನೇ ತಲೆಕೆಳಗಾಗಿ ನಿಂತು ಭಕ್ತರ ಭವರೋಗವನ್ನು… Read More ಯನಮದುರು ಶ್ರೀ ಶಕ್ತೇಶ್ವರ

ಭಾರತೀಯ ಜ್ಯೋತಿಷ್ಯದ ಪ್ರಕಾರ ಬಿಜೆಪಿ ಪಕ್ಷದ ಭವಿಷ್ಯವೇನು?

ಇಂಡಿಯನ್ ಕೌನ್ಸಿಲ್ ಆಫ್ ಜ್ಯೋತಿಷ್ಯ ವಿಜ್ಞಾನದಲ್ಲಿ (1997) ಎಮ್ಎ ಮಾಡಿರುವಂತಹ ವೈದಿಕ ಜ್ಯೋತಿಷ್ಯವನ್ನು ಅಭ್ಯಾಸ ಮಾಡುತ್ತಿರುವ, ಶ್ರೀಯುತರಾದ ರಾಜೀವ್ ಸೇಥಿ ಅವರು ಹೇಳುವ ಪ್ರಕಾರ ಇಂಟರ್ನೆಟ್ನಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ ಬಿಜೆಪಿ ಪಕ್ಷವು 6/4/1980 ರಂದು ದೆಹಲಿಯಲ್ಲಿ ಬೆಳಿಗ್ಗೆ 11.45 ಕ್ಕೆ ರಚನೆಯಾಯಿತು ಎಂದು ತಿಳಿಯಬರುತ್ತದೆ. ಇದನ್ನೇ ಮೂಲವಾಗಿಟ್ಟುಕೊಂಡು ಲೆಕ್ಕ ಹಾಕಿದಲ್ಲಿ, ಬಿಜೆಪಿ 23/02/2019 ರಿಂದ 16/08/2020 ರವರೆಗೆ ಚಂದ್ರ ಮಹಾದಾಶ-ರಾಹು ಭುಕ್ತಿ ನಡೆಸುತ್ತಿದೆ. ಚಂದ್ರ ಮತ್ತು ರಾಹು ಪರಸ್ಪರ ಶತೃಗಳು ಮತ್ತು ಅವರ ದಶಾ-ಅಂತರ್ದಶಾ ಸರಿಯಾಗಿಲ್ಲದ… Read More ಭಾರತೀಯ ಜ್ಯೋತಿಷ್ಯದ ಪ್ರಕಾರ ಬಿಜೆಪಿ ಪಕ್ಷದ ಭವಿಷ್ಯವೇನು?

ಡಿಸೆಂಬರ್ 31 ಆ ಕರಾಳ ರಾತ್ರಿ

ಡಿಸೆಂಬರ್ 31 ಮತ್ತು ಜನವರಿ 1 ಅಂತ ನೆನಪಿಸಿಕೊಂಡರೆ ಬಹುತೇಕರಿಗೆ ರೋಮಾಂಚನವಾಗುತ್ತದೆ. ಅನೇಕರು ಒಂದು ವಾರಕ್ಕಿಂತಲೂ ಮುಂಚೆಯೇ, ಆ ದಿನಗಳು ಮತ್ತು ಆ ದಿನವನ್ನು ಹೇಗೆ ಸಂಭ್ರಮಿಸಬೇಕು ಅಂತ ನಾನಾ ರೀತಿಯ ತಯಾರಿಗಳನ್ನು ಮಾಡಿಕೊಳ್ತಾ ಇದ್ರೇ ನಮಗೆ ಮಾತ್ರ ಆ ಕರಾಳ ನೆನಪನ್ನು ಹೇಗೆ ಮರೆಯುವುದಪ್ಪಾ ಅಂತಾ ಇರ್ತೀವಿ. ಅದೇನಪ್ಪಾ ಅಂತಹ ಕರಾಳ ನೆನಪು ಅಂತೀರಾ? ತಡೀರೀ ನಾನೂ ಹೇಳ್ತಾ ಹೋಗೀನಿ. ನೀವು ಕೇಳ್ತಾ ಹೋಗಿ. ಕೆಲ ವರ್ಷಗಳ ಹಿಂದೆ ಡಿಸೆಂಬರ್ 31 ಗುರುವಾರ, ಜನವರಿ 1… Read More ಡಿಸೆಂಬರ್ 31 ಆ ಕರಾಳ ರಾತ್ರಿ

ಧರ್ಮ ಸಹಿಷ್ಣುತೆ ಮತ್ತು ಜಾತ್ಯಾತೀತತೆ

ಮೊನ್ನೆ ಪೇಜಾವರ ಶ್ರೀಗಳು ವಿಧಿವಶರಾದಾಗ ಅವರ ಬಗ್ಗೆಯೇ ನಮ್ಮ ಸ್ನೇಹಿತರೆಲ್ಲಾ ಸೇರಿ ಅವರ ಸಾನಿಧ್ಯದ ನೆನಪನ್ನು ಮೆಲುಕು ಹಾಕುತ್ತಿದ್ದಾಗ ಶ್ರೀ ನಮ್ಮ ಜಾಲಹಳ್ಳಿಯ ವಿನಾಯಕ ಸೇವಾ ಮಂಡಳಿಯ ಗಣೇಶೋತ್ಸವಕ್ಕೆ ಬಂದದ್ದು ಅಲ್ಲಿ ನಮಗೆ ಮಾರ್ಗದರ್ಶನ ಮಾಡಿದ್ದರ ಕುರಿತು ಮಾತನಾಡುತ್ತಿದ್ದಾಗ, ಅದೇ ಸಮಯದಲ್ಲಿ ಆದಿಚುಂಚನಗಿರಿಯ ಮಠಾಧೀಶರಾಗಿದ್ದ ಶ್ರೀ ಶ್ರೀ ಶ್ರೀ ಬಾಲಗಂಗಾಧರ ಸ್ವಾಮಿಗಳ ಕುರಿತಂತೆಯೂ ವಿಷಯ ಪ್ರಸ್ತಾಪವಾಗಿ ಅವರು ಜಾಲಹಳ್ಳಿಗೆ ಬಂದಿದ್ದಾಗ ನಡೆದ ಒಂದು ವಿಶಿಷ್ಟ ಅನುಭವವನ್ನು ನಮ್ಮೊಂದಿಗೆ ಹಂಚಿಕೊಂಡದ್ದು ಸದ್ಯದ ಪರಿಸ್ಥಿತಿಗೆ ಪ್ರಸ್ತುತವಾಗಿರುವ ಕಾರಣ ನಿಮ್ಮೊಂದಿಗೆ ಹಂಚಿಕೊಳ್ಳಲು… Read More ಧರ್ಮ ಸಹಿಷ್ಣುತೆ ಮತ್ತು ಜಾತ್ಯಾತೀತತೆ