ಭಯೋತ್ಪಾದಕತೆಗೆ ಧರ್ಮವಿಲ್ಲವೇ?

ಏಪ್ರಿಲ್ 21 , 2019 ಭಾನುವಾರ, ವಿಶ್ವಾದ್ಯಂತ ಕ್ರಿಶ್ಚಿಯನ್ನರು ಈಸ್ಟರ್ ಹಬ್ಬವನ್ನು ಅಚರಿಸುತ್ತಿದ್ದರು. ಅದೇ ರೀತಿ ಶ್ರೀಲಂಕಾದ ಕೊಲೊಂಬೋ ನಗರದ ಒಂದು ಚರ್ಚಿನಲ್ಲಿ ಪ್ರಾರ್ಥನೆ ಮಾಡುತ್ತಿದ್ದವರ ಮೇಲೆ ಅಚಾನಕ್ಕಾಗಿ ನಡೆಸಿದ ಬಾಂಬ್ ಸ್ಪೋಟದಲ್ಲಿ ಅನೇಕರು ಮೃತಪಟ್ಟಿದ್ದಾರೆ. ಕೇವಲ ಚರ್ಚ್ ಅಲ್ಲದೇ ,ಕೊಲೊಂಬೋ ನಗರಾದ್ಯಂತ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಅನೇಕ ಅಮಾಯಕರು ಮೃತಪಟ್ಟಿರುವುದು ನಿಜಕ್ಕೂ ದುಖಃಕರ ಮತ್ತು ಖಂಡನೀಯ. ಸರಣಿ ಬಾಂಬ್ ಕುಕೃತ್ಯದ ಹಿಂದಿನ ಕೈವಾಡ ಹಿಂದೆ ಉಗ್ರ ಮುಸಲ್ಮಾನರ ಮತಾಂಧತೆಯ ಕರಿನೆರಳು ಇರುವುದು ಸ್ವಷ್ಟವಾಗಿ ಗೋಚರಿಸಲ್ಪಟ್ಟಿದೆ.… Read More ಭಯೋತ್ಪಾದಕತೆಗೆ ಧರ್ಮವಿಲ್ಲವೇ?

ನಮ್ಮೂರು ಬಾಳಗಂಚಿ ಗ್ರಾಮದ ಹಬ್ಬ

ಹಾಸನ ಜಿಲ್ಲೆಯ, ಚೆನ್ನರಾಯಪಟ್ಟಣ ತಾಲೂಕಿನ, ಹಿರೀಸಾವೆ ಹೋಬಳಿಯ ಬಳಿಯ ಪುಟ್ಟದಾದ ಹಳ್ಳಿಯೇ ಬಾಳಗಂಚಿ. ಸುಮಾರು ಮೂರ್ನಾಲ್ಕು ಸಾವಿರದವರೆಗೂ ಜನಸಂಖ್ಯೆ ಇರುವಂತಹ ಹಳ್ಳಿ. ಹಲವರು ಈಗಾಗಲೇ ಕೆಟ್ಟು ಪಟ್ಟಣಕ್ಕೆ ಸೇರು ಎನ್ನುವಂತೆ ನಗರ ಪ್ರದೇಶಗಳಿಗೆ ವಲಸೆ ಹೋಗಿಯಾಗಿದೆ. ಹೆಸರಿಗಷ್ಟೇ ಚಿಕ್ಕದಾದರೂ ಇತಿಹಾಸ ಇಣುಕಿ ನೋಡಿದರೆ ಗುರು ವಿದ್ಯಾರಣ್ಯರ ತವರೂರು ಎಂದು ಖ್ಯಾತಿ ಹೊಂದಿದೆ. ಇನ್ನು ಕೆಲವರು ಗುರು ವಿದ್ಯಾರಣ್ಯರು ವಾಸಿಸಿದ ಸ್ಥಳವೆಂದು ಇಲ್ಲವೇ ತಪಸ್ಸನ್ನು ಮಾಡಿದ ಪ್ರದೇಶವೆಂದೂ ಹೇಳುತ್ತಾರೆ. ಈ ಹಳ್ಳಿಯಲ್ಲಿ ಸುಮಾರು ಹತ್ತು ಹದಿನೈದಕ್ಕೂ ಹೆಚ್ಚಿನ ದೇವಸ್ಥಾನಗಳಿದ್ದು… Read More ನಮ್ಮೂರು ಬಾಳಗಂಚಿ ಗ್ರಾಮದ ಹಬ್ಬ

ಉಚಿತ ಆಮಿಷಗಳು ಮತ್ತು ದೇಶದ ಆರ್ಥಿಕತೆ

ಚುನಾವಣೆಯಲ್ಲಿ ನಾವುಗಳು ಮಾಡುವುದು ಮತದಾನ. ದಾನ ಮಾಡುವ ಕೈಗಳು ಅರ್ಥಾತ್ ಕೊಡುವ ಕೈಗಳು ಎಂದಿಗೂ ಮೇಲೆ ಇರುತ್ತವೆಯೇ ಹೊರತು, ಬೇಡುವ ರೀತಿಯಲ್ಲಿ ಇರುವುವುದಿಲ್ಲ. ಹಾಗಾಗಿ ಚುನಾವಣಾ ಸಮಯದಲ್ಲಿ ರಾಜಕೀಯ ಪಕ್ಷಗಳು ನೀಡುವ ಹಣ, ಹೆಂಡ ಮತ್ತು ಗೃಹೋಪಯೋಗಿ ವಸ್ತುಗಳ ಉಚಿತ ಆಮೀಷಗಳಿಗೆ ಬಲಿಯಾಗಿ ದೇಶದ ಆರ್ಥಿಕತೆಯನ್ನು ಅಧೋಗತಿಗೆ ತಳ್ಳದೇ, ಸ್ವಾಭಿಮಾನಿಗಳಾಗಿ, ಸ್ವಾವಲಂಭಿಗಳಾಗಿ, ನಮ್ಮ ರಾಜ್ಯದ ಒಳಿತಿಗಾಗಿ ಮೇ 10ರಂದು ನಿರ್ಭೆಡೆಯಿಂದ ತಪ್ಪದೇ ಮತದಾನ ಮಾಡೋಣ ಅಲ್ವೇ?… Read More ಉಚಿತ ಆಮಿಷಗಳು ಮತ್ತು ದೇಶದ ಆರ್ಥಿಕತೆ

ಪ್ರಜ್ಞಾವಂತ ಮತದಾರರಲ್ಲಿ ಒಂದು ಸಣ್ಣ ಮನವಿ

ಏಪ್ರಿಲ್ 18 ಮತ್ತು 23 ರಂದು ಕರ್ನಾಟಕಾದ್ಯಂತ ಲೋಕಸಭಾ ಚುನಾವಣೆ ನಡೆಯಲಿದ್ದು, ಈ ಚುನಾವಣೆಯಲ್ಲಿ ಮಾಡುವುದು ಸಾಂವಿಧಾನಿಕವಾಗಿ ಕಡ್ಡಾಯವಾಗಿರುವ ಕಾರಣ, ಎಲ್ಲರೂ ಯಾವುದೇ ಕುಂಟು ನೆಪಗಳಿಲ್ಲದೆ, ಮತ ಚಲಾವಣೆ ಮಾಡಬೇಕಾಗಿ ಸವಿನಯ ಪ್ರಾರ್ಥನೆ. ಚುನಾವಣಾ ದಿನ ಬೆಳಿಗ್ಗೆ ರಜೆ ಎಂದು ತಡವಾಗಿ ಎದ್ದು ಕಾಪಿ ಗೀಪಿ ಕುಡ್ಕಂಡು… ಓ ಸೋ ಹಾಟ್ ಅಂತಾನೋ ಇಲ್ಲಾ ಅಪರೂಪಕ್ಕೆ ಬೀಳ್ತಾ ಇರೋ ಸೋನೆ ಮಳೆ ನೆಪ ಒಡ್ಡಿ …ಯಾರ್ ಹೋಗ್ತಾರೆ ವೋಟ್ ಹಾಕಕ್ಕೆ? ಯಾರ್ ಬಂದ್ರೂ ನಮಗೇನು? ಅಂತ ಕಾಲ್… Read More ಪ್ರಜ್ಞಾವಂತ ಮತದಾರರಲ್ಲಿ ಒಂದು ಸಣ್ಣ ಮನವಿ

ಒಗ್ಗಟ್ಟಿನಲ್ಲಿ ಬಲವಿದೆ

ಅದೊಂದು ಕಾಲೇಜು ಹಾಸ್ಟೆಲ್ ಕ್ಯಾಂಟೀನ್, ಅಲ್ಲಿ ಪ್ರತಿದಿನ ಉಪಾಹಾರಕ್ಕಾಗಿ ಉಪ್ಪಿಟ್ಟನ್ನು ವಿದ್ಯಾರ್ಥಿಗಳಿಗೆ ಕೊಡುತ್ತಿದ್ದರು. ಹೆಚ್ಚಿನ ವಿದ್ಯಾರ್ಥಿಗಳಿಗೆ ಉಪ್ಪಿಟ್ಟನ್ನು ತಿನ್ನಲು ಮನಸ್ಸಿರಲಿಲ್ಲ. ಅದಕ್ಕಾಗಿ ಉಪ್ಪಿಟ್ಟಿನ ಬದಲಾಗಿ ಬೇರೆಂದು ಉಪಹಾರವನ್ನು ತಯಾರಿಸಲು ತಮ್ಮ ವಾರ್ಡನ್ ಅವರಿಗೆ ದೂರು ಕೊಟ್ಟರು. ಸುಮಾರು100 ವಿದ್ಯಾರ್ಥಿಗಳಲ್ಲಿ 20 ಮಂದಿಗೆ ಉಪ್ಪಿಟ್ಟು ರುಚಿಸದೇ ಇದ್ದರೂ ದೂರು ಕೊಟ್ಟವರ ಪರವಾಗಿ ಬೆಂಬಲ ನೀಡಲು ಹೆದರಿಕೊಂಡು ತಟಸ್ಥರಾಗಿ ಇದ್ದರು. ವಿದ್ಯಾರ್ಥಿಗಳ ಮನವಿಯನ್ನು ಪುರಸ್ಕರಿಸಿದ ವಾರ್ಡನ್ ಉಪಾಹಾರಕ್ಕಾಗಿ ವಿವಿಧ ಉಪ್ಪಿಟ್ಟಿನ ಸಹಿತ ತಿಂಡಿಗಳ ಪಟ್ಟಿಯನ್ನು ನೀಡಿ ವಿದ್ಯಾರ್ಥಿಗಳಿಗೇ ಮಾಡಿಕೊಳ್ಳಲು ತಿಳಿಸಿ… Read More ಒಗ್ಗಟ್ಟಿನಲ್ಲಿ ಬಲವಿದೆ

ಭಾರತೀಯ ಮತದಾರನ ಹೃದಯಾಂತರಾಳದ ಮಾತು

ನನ್ನ ಹೆಸರು ಮನೀಷ್ ಕುಮಾರ್.  ಜನ್ಮತಃ ನಾನೊಬ್ಬ ಹಿಂದು ಮತ್ತು 2014 ರಲ್ಲಿ ನಾನು ಕಾಂಗ್ರೆಸ್ ಪಕ್ಷಕ್ಕೇ ನನ್ನ ಮತವನ್ನು ನೀಡಿದ್ದೇನೆ . ಗುಜರಾತ್ ಮಾದರಿಯ ಬಗ್ಗೆ ನಾನು ಕೇಳಿದ್ದೆ, ಮೋದಿ ಪ್ರಧಾನಿಯಾದರೆ,ದೇಶಾದ್ಯಂತ ಗೋಧ್ರಾ ಮಾದರಿಯ ಕೋಮು ದಳ್ಳುರಿಯ ಪ್ರಕರಣಗಳು ಹೆಚ್ಚಾಗಬಹುದು ಎಂದು ಎಣಿಸಿದಿದ್ದೆ. ಆದರೆ ಜನರು ಬಹುತದಿಂದ ಮೋದಿಯವರನ್ನು ಅಯ್ಕೆಮಾಡಿ ಪ್ರಧಾನಿಯನ್ನಾಗಿ ಮಾಡಿದಾಗ, ಅಯ್ಯೋ  ನನ್ನ  ಒಂದು  ಮತ ವ್ಯರ್ಥವಾಯಿತಲ್ಲಾ ಎಂದು ವಿಷಾಧಿಸಿದ್ದೆ. ನನ್ನ ಸ್ನೇಹಿತರೊಂದಿಗೆ  ವಾದಮಾಡುತ್ತಾ  ಮೋದಿ ಜನರಲ್ಲಿ ಹಗೆತನವನ್ನು ಹೆಚ್ಚಿಸುವ ಮತ್ತು ರಾಮ… Read More ಭಾರತೀಯ ಮತದಾರನ ಹೃದಯಾಂತರಾಳದ ಮಾತು

ಶ್ರೀರಾಮ ನವಮಿಯ ಪಾನಕದ ಪಜೀತಿ

ಶ್ರೀರಾಮ ನವಮಿಯಲ್ಲಿ ಪ್ರಭು ಶ್ರೀ ರಾಮನ ಪೂಜೆಯಷ್ಟೇ ಮಹತ್ವ, ಅಂದಿನ ಪ್ರಸಾದ ರೂಪದ ರಸಾಯನ, ಪಾನಕ, ಕೋಸಂಬರಿ, ನೀರು ಮಜ್ಜಿಗೂ ಇದ್ದೂ, ಬೆಳ್ಳಗಿರುವುದು ಹಾಲಲ್ಲ. ಬಣ್ಣದ ನೀರೆಲ್ಲಾ ಪಾನಕವಲ್ಲ, ಎನ್ನುವಂತೆ ಶ್ರೀ ರಾಮನವಮಿ ಪಾನಕದ ಕುರಿತಾದ ಕೆಲವು ರೋಚಕತೆಗಳ ರಸಾನುಭವ ಇದೋ ನಿಮಗಾಗಿ… Read More ಶ್ರೀರಾಮ ನವಮಿಯ ಪಾನಕದ ಪಜೀತಿ

ಶ್ರೀ ರಾಮ ನವಮಿ

ಪ್ರಭು ಶ್ರೀರಾಮ ಚಂದ್ರನ ಜನ್ಮದ ವೃತ್ತಾಂತ ಮತ್ತು ಶ್ರೀ ರಾಮ ನವಮಿಯನ್ನು ಎಲ್ಲೆಲ್ಲಿ ಹೇಗೇಗೇ ಆಚರಿಸಲಾಗುತ್ತದೆ? ಶ್ರೀ ರಾಮನ 108 ಹೆ‍ಸರುಗಳು ಯಾವುದು ಎಂಬೆಲ್ಲಾ ಕುತೂಹಲಕಾರಿ ಮಾಹಿತಿಗಳು ಇದೋ ನಿಮಗಾಗಿ… Read More ಶ್ರೀ ರಾಮ ನವಮಿ

Time Bank, ಸಮಯದ ಬ್ಯಾಂಕು

ಮೊನ್ನೆ ಪರಿಚಯಸ್ತರೊಬ್ಬರ ಮನೆಗೆ ಹೋಗಿದ್ದೆ. ಹೀಗೇ ಅವರ ಬಳಿ ಮಾತಾನಾಡುತ್ತಿದ್ದಾಗ ಮಾತಿನ ಮಧ್ಯದಲ್ಲಿ ಸ್ವಿಡ್ವರ್ಲ್ಯಾಂಡಿನಲ್ಲಿ ಇರುವ ನಿಮ್ಮ ಮಗ ಹೇಗಿದ್ದಾರೆ ಎಂದು ಕೇಳಿದೆ. ಓ ಆವನಾ… ಹೂಂ ಈಗ ಚೆನ್ನಾಗಿದ್ದಾನೆ ಅಂದರು. ಓ ಅವನಾ.. ಎಂಬ ದೀರ್ಘ ಎಳೆದದ್ದು ನನಗೆ ಏನೂ ಸಮಸ್ಯೆ ಇರಬೇಕು ಎಂದು ತಿಳಿದು, ಯಾಕೆ ಏನಾಯ್ತು? ಎಲ್ಲಾ ಸರಿಯಾಗಿದೆ ತಾನೇ ಎಂದು ಮರು ಪ್ರಶ್ನಿಸಿದೆ. ಹೇ.. ಹೇ.. ಹಾಗೇನಿಲ್ಲಾ ಎಲ್ಲಾವೂ ಚೆನ್ನಾಗಿದೆ. ಒಂದೆರಡು ತಿಂಗಳ ಹಿಂದೆ ನಮ್ಮ ಮಗ ಅಲ್ಲಿ ತನ್ನ ಆಫೀಸಿಗೆ… Read More Time Bank, ಸಮಯದ ಬ್ಯಾಂಕು