ಕಾಲೇಜಿಗೆ ಹೋಗುವುದು ಕಲಿಯುವುದಕ್ಕೋ? ಇಲ್ಲಾ…

ಅವಿಭಜಿತ ದಕ್ಷಿಣ ಕನ್ನಡ ಶಿಕ್ಷಣ ಕ್ಷೇತ್ರದಲ್ಲಿ ಸದಾಕಾಲವು ಮುಂದಿದ್ದು ಉಡುಪಿಯಲ್ಲಿ 2003-04 ನೇ ಸಾಲಿನಲ್ಲಿ 93 ರ ಬಾಲಕಿಯರೊಂದಿಗೆ  ಪ್ರಾರಂಭವಾದ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ  2020-21 ರಲ್ಲಿ 2300 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು ಸದ್ದಿಲ್ಲದೆ ಎಲೆಮರೆ ಕಾಯಿಯಂತೆ ಎಲ್ಲವೂ ನಡೆದುಕೊಂಡು ಹೋಗುತ್ತಿತ್ತು. ಆದರೆ ಇದ್ದಕ್ಕಿದ್ದಂತೆಯೇ ಕಳೆದ ಮೂರು ವಾರಗಳಿಂದಲೂ ಈ ಕಾಲೇಜು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಇದು ಶೈಕ್ಷಣಿಕ ಸಾಧನೆಗಾಗಿ ಈ ರೀತಿಯ ಪ್ರಚಾರ ಪಡೆದಿದ್ದರೆ ಸಂತೋಷವಾಗುತ್ತಿತ್ತು. ಆದರೆ ಈಗ ಪ್ರವರ್ಧಮಾನಕ್ಕೆ ಬಂದಿರುವುದು ಯಾವುದೋ ಷಡ್ಯಂತ್ರದಿಂದ ಎನ್ನುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

hijab2ಈ ವಿಷಯದ ಕುರಿತಂತೆ ಸುಧೀರ್ಘವಾದ  ಲೇಖನ ಬರೆಯುವುದು ಅನಾವಶ್ಯಕ ಮತ್ತು ಸಮಯ ವ್ಯರ್ಥ ಎಂದು ನಿರ್ಧರಿಸಿ,  ಕಾಲೇಜಿನಲ್ಲಿ ನೂರಾರು ಮುಸ್ಲಿಂ ಹುಡುಗಿಯರು ಕಲಿಯುತ್ತಿದ್ದರೂ  ಅವರಲ್ಲಿ‌ ಕೇವಲ 6 ಹುಡುಗಿಯರಿಗೆ ಮಾತ್ರಾ ಸಮಸ್ಯೆ ಎಂದರೆ ಇದರ ಹಿಂದೆ ಏನೋ ಷಡ್ಯಂತ್ರ ಇದೇ ಅಲ್ವೇ?

ಧರ್ಮ ಮನೆಯ ನಾಲ್ಕು ಗೋಡೆಗಳ ಮಧ್ಯೆ ಇರಬೇಕೇ ಹೊರತು ಸಾರ್ವಜನಿಕವಾಗಿ ಅಲ್ಲಾ.. ಎಂದು ಹೇಳಿಕೆಯೊಂದನ್ನು  ಮುಖಪುಟದಲ್ಲಿ ಹಾಕಿ ಸುಮ್ಮನಾಗಿದ್ದೆ.

WhatsApp Image 2022-01-23 at 10.16.56 PMಇಷ್ಟೇ ಆಗಿದ್ದರೆ ಇದು ಪಾಪ್ಯುಲರ್ ಫ್ರಂಟ್ ಇಂಡಿಯಾ ಮತ್ತು ಎಸ್.ಡಿ.ಪಿ.ಐ. ಮತಾಂಧರ ಮನಸ್ಥಿತಿ ಎಂದು ಸುಮ್ಮನಾಗಿರ ಬಹುದಿತ್ತೇನೋ? ಆದರೆ ಈ ಪ್ರಕರಣದ ಪರವಾಗಿ NSUI ಮಧ್ಯಪ್ರವೇಶಿಸಿದಾಗ ಇದರ ಹಿಂದೆ ರಾಜಕೀಯ ಷಡ್ಯಂತರದ ವಾಸನೆ ಮೂಗಿಗೆ ಬಡಿದರೆ, ಈಗ ಮಾಜೀ ಮುಖ್ಯಮಂತ್ರಿ ಸಿದ್ರಾಮಯ್ಯನೂ ಈ ಪ್ರಕರಣದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಫೀಲ್ಡಿಗೆ ಇಳಿದಾಗ, ಮಕ್ಕಳನ್ನು ಮುಂದಿಟ್ಟುಕೊಂಡು ಚೆಲ್ಲಾಟ ಆಡುತ್ತಿರುವವರ ನಿಜವಾದ ಬಣ್ಣ ಬಯಲಾಗಿದೆ. ತಮ್ಮ ಅಧಿಕಾರಾವಧಿಯಲ್ಲಿ ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಶಾದೀ ಭಾಗ್ಯ ಆ ಭಾಗ್ಯ ಎಂದು ಘೋಷಿಸಿ ಜನರಿಂದ ಸಿದ್ರಾಮುಲ್ಲಾಖಾನ್ ಎಂದೇ ಕರೆಸಿಕೊಳ್ಳುತ್ತಿದ್ದವರು ಈಗ  ಹಿಜಬ್  ಸಮರ್ಥನೆ ಮಾಡಿಕೊಳ್ಳುವ ಭರದಲ್ಲಿ, ಶಾಲೆಯಲ್ಲಿ ಹಿಜಬ್ ಧರಿಸುವುದು ಅಶಿಸ್ತು, ಶಾಲಾ ಧರ್ಮವನ್ನು ಆಚರಿಸುವ ಸ್ಥಳವಲ್ಲ ಎಂದಾದಲ್ಲಿ, ಶಾಲೆಯಲ್ಲಿ ದೇವರ ಹೆಸರಿನಲ್ಲಿ ಪ್ರಾರ್ಥನೆ ಮಾಡುವುದು, ಶಾರದಾಪೂಜೆ ಮಾಡುವುದು  (ಜಾತ್ಯಾತೀತತೆ ಹೆಸರಿನಲ್ಲಿ ನಿಲ್ಲಿಸಿ ಎಷ್ಟೋ ಕಾಲವಾಗಿದೆ)  ಹಿಂದೂ ಹೆಣ್ಣುಮಕ್ಕಳು/ಶಿಕ್ಷಕಿಯರು ಹಣೆಗೆ ಕುಂಕುಮ ಧರಿಸುವುದು, ಕುತ್ತಿಗೆಯಲ್ಲಿ ತಾಳಿ ಧರಿಸುವುದು, ಕಾಲಲ್ಲಿ ಕಾಲುಂಗುರ ಧರಿಸುವುದನ್ನು ಪ್ರಶ್ನಿಸುವ ಮೂಲಕ ಹಿಂದೂಗಳ  ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವ ಮೂಲಕ ಇಂತಹ ಮೂಲಭೂತವಾದಿ, ಕೋಮುವಾದಿ ಹಿಂದೂ ವಿರೋಧಿಯನ್ನು ಜನನಾಯಕ ಎಂದು ಇಷ್ಟು ವರ್ಷಗಳ ಕಾಲ ಆರಿಸಿ, ಮೆರೆಸಿ, ಮುಖ್ಯ ಮಂತ್ರಿಯನ್ನಾಗಿ ಮಾಡಿದೆವಲ್ಲಾ ಎಂದು ಜನರು ಪರಿತಪಿಸುತವಂತಾಗಿದೆ.

ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿರುವ 2300 ವಿಧ್ಯಾರ್ಥಿನಿಯರೂ ಒಂದೇ ರೀತಿಯ ಸಮವಸ್ತ್ರಗಳನ್ನು ಧರಿಸಿಕೊಂಡು ಯಾವುದೇ ಜಾತಿ ಧರ್ಮದ ಹಂಗಿಲ್ಲದೆ  ಸುಲಲಿತವಾಗಿ ವಿದ್ಯಾಭ್ಯಾಸವನ್ನು ಮಾಡಿಕೊಂಡು ಹೋಗುತ್ತಿದ್ದರು. ಆದರೆ ಇದ್ದಕ್ಕಿಂದ್ದಂತೆಯೇ 3 ವಾರಗಳ ಹಿಂದೆ ಎರಡನೇ ವರ್ಷದ  6 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ತರಗತಿಯೊಳಗೆ ಬಂದಾಗ ಸಹಜವಾಗಿ ಕಾಲೇಜು ಆಡಳಿತ ಮಂಡಳಿ ಇದು ಸಮವಸ್ತ್ರ ಸಂಹಿತೆಗೆ ವಿರುದ್ಧವಾಗಿರುವ ಕಾರನ ಹಿಜಬ್ ತೆಗೆದು ತರಗತಿಗೆ ಬನ್ನಿ ಎಂದು ಹೇಳಿರುವುದು ಸರಿಯಾದ ಕ್ರಮವಾಗಿತ್ತು. ಇದಕ್ಕೆ ಆ ವಿಧ್ಯಾರ್ಥಿನಿಯರು ಹಿಜಬ್ ಧರಿಸುವುದು  ನಮ್ಮ ಧಾರ್ಮಿಕ ಹಕ್ಕು ಆದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲಾ ಎಂದು ಪ್ರತಿಭಟಿಸಿದಾಗ, ಮೊದಲ 3 ಸೆಮಿಸ್ಟರ್‌ಗಳಲ್ಲಿ ನಿಮಗೆ ಯಾವುದೇ ರೀತಿಯ ಸಮಸ್ಯೆಗಳು  ಇಲ್ಲದೇ  ಎಲ್ಲರಂತೆ ಸಮವಸ್ತ್ರ ಧರಿಸಿ ಬರುತ್ತಿದ್ದವರು,  ಈಗ ಇದ್ದಕ್ಕಿದ್ದಂತೆ  140 ಮುಸ್ಲಿಂ ವಿದ್ಯಾರ್ಥಿನಿಯರಲ್ಲಿ ಕೇವಲ 6 ವಿಧ್ಯಾರ್ಥಿನಿಯರು ಮಾತ್ರ ಹಿಜಾಬ್ ಗಾಗಿ ಬೇಡಿಕೆ ಇಟ್ಟದ್ದು ವಿಚಿತ್ರವಾಗಿ ಕಾಣುಸುತ್ತಿದ್ದ ಕಾರಣ, ಈ ರೀತಿ ಒಬ್ಬರಿಗೆ ಅನುಮತಿ ಕೊಟ್ಟಲ್ಲಿ ಮುಂದೆ ವಿವಿಧ ರೀತಿಯ ಬೇಡಿಕೆಗಳು ಎದುರಾಗಬಹುದು ಎಂಬುದನ್ನು ಅರಿತ ಕಾಲೇಜಿನ ಮುಖ್ಯೋಪಾಧ್ಯಾಯರು ಆ ವಿದ್ಯಾರ್ಥಿನಿಯರಿಗೆ ತರಗತಿಗೆ ಪ್ರವೇಶಿಸಲು ಅನುಮತಿ ನೀಡಿರಲಿಲ್ಲ.

hijab1ಪರೀಕ್ಷೆಯ ಸಮಯದಲ್ಲಿ ಹಿಜಾಬ್‌ ನಮ್ಮ ಮೂಲಭೂತ ಹಕ್ಕು, ಅದನ್ನು ಪಡೆದೆ ತೀರುತ್ತೇವೆ, ನಮಗೆ ನ್ಯಾಯ ಬೇಕು ನಾವು ಹಿಜಾಬ್‌ ಧರಿಸಿರುವ ಕಾರಣಕ್ಕಾಗಿ ತರಗತಿಯಿಂದ ಹೊರಗೆ ಕುಳಿತುಕೊಂಡಿದ್ದೇವೆ ಎಂಬ ಭಿತ್ತಿಪತ್ರವನ್ನು ವಿದ್ಯಾರ್ಥಿನಿಯರು ಪ್ರದರ್ಶಿಸುವ ಮೂಲಕ ಅವರಿಗೇ ಅರಿವಿಲ್ಲದಂತೆ ಮತಾಂಧರು ಮತ್ತು ರಾಜಕೀಯ ನಾಯಕರ ಕುಮ್ಮಕ್ಕಿನಿಂದಾಗಿ ಅವರ ಭವಿಷ್ಯಕ್ಕೆ ಅವರೇ ಕಲ್ಲನ್ನು ಹಾಕಿಕೊಳ್ಳಲು ಮುಂದಾಗಿರುವುದು ಬೇಸರದ ಸಂಗತಿಯಾಗಿದೆ.

varthaಇದೇ ಪ್ರಕರಣಕ್ಕೆ ತುಪ್ಪ ಸುರಿಯುವಂತೆ, ಹುಡುಗಿಯರು ಕ್ಲಾಸಿನ ಅವಧಿಯಲ್ಲಿ ಕೊಠಡಿಯ ಹೊರಗೆ ನಿಂತಿರುವ ದೃಶ್ಯವು ಒಂದು ಕಾಲದಲ್ಲಿ ಅದೇ ಉಡುಪಿಯಲ್ಲಿ ಕೃಷ್ಣದರ್ಶನಕ್ಕೆ ಮಠ ಪ್ರವೇಶ ನಿರಾಕರಿಸಲ್ಪಟ್ಟು ಮಠದ ಹೊರಗೆ ನಿಂತಿದ್ದ ಕನಕ ದಾಸರ ಕಥೆಯನ್ನು ನೆನಪಿಸುತ್ತಿದೆ. ಕ್ರಿ.ಶ. 16ನೇ ಶತಮಾನದಲ್ಲಿ ಮಠದ ಹೊರಗೆ ನಿಲ್ಲಲು ನಿರ್ಬಂಧಿತರಾಗಿದ್ದ ಕನಕದಾಸರು ಪಾಪ ಈಗಲೂ ಅಲ್ಲಿ ಹೊರಗೆಯೇ ನಿಂತಿದ್ದಾರೆ. ಸ್ಕಾರ್ಫ್‌ಧಾರಿ ಹುಡುಗಿಯರನ್ನು ಕ್ಲಾಸಿನೊಳಗೆ ಪ್ರವೇಶಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿರುವವರು, ತರಗತಿಯ ಹಿಂಭಾಗದಲ್ಲಿ ಆ ಹುಡುಗಿಯರಿಗಾಗಿ ಒಂದು ಕಿಟಕಿ ತೆರೆದು ಕೊಡುವ ಪ್ರಸ್ತಾವ ಮಂಡಿಸುವರೇ? ಎಂಬ ಕುತೂಹಲ ಕೆರಳಿದೆ. ಎಂದು ಕರಾವಳಿ ಪ್ರದೇಶದಲ್ಲಿ ಕೋಮು ಸಾಮರಸ್ಯವನ್ನು ಹಾಳು ಮಾಡಲೆಂದೇ ವಾರ್ತಾಭಾರತಿ ಎಂಬ ಪತ್ರಿಕೆಯನ್ನು ನಡೆಸುತ್ತಿರುವ ಬಶೀರ ಎಂಬ ಮತಾಂಧ ಪತ್ರಕರ್ತ ತನ್ನ ಪತ್ರಿಕೆಯಲ್ಲಿ ಬರೆಯುವ ಮೂಲಕ ಈ ಪ್ರಕರಣವನ್ನು ಸೂಕ್ತವಾಗಿ ಪರಿಹರಿಸುವುದಕ್ಕಿಂತಲೂ ಹಿಂದೂ ಮುಸ್ಲಿಂ ನಡುವೆ ಮತ್ತಷ್ಟೂ ಕಂದಕವನ್ನು ಸೃಷ್ಟಿಸುತ್ತಾ ಸಣ್ಣದಾದ ಗಾಯವನ್ನು ಕೆರೆದು ಕೆರೆದು ವ್ರಣ ಮಾಡುತ್ತಿದ್ದಾರೆ ಎಂದರೆ ಅತಿಶಯವಲ್ಲ.

ನಮ್ಮ ಸಂವಿಧಾನದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಯಾರು ಯಾವುದೇ ಧರ್ಮವನ್ನು ಆಚರಿಸುವ ಹಕ್ಕಿದ್ದರೂ ಅದು  ತಮ್ಮ ಮನೆ ಅಥವಾ ಧಾರ್ಮಿಕ ಕೇಂದ್ರಗಳ ನಾಲ್ಕು ಗೋಡೆಗಳ ಮಧ್ಯೆ ಇದ್ದು ಸಾರ್ವಜನಿಕವಾಗಿ ಇರುವ ನೀತಿ ಸಂಹಿತೆಯನ್ನು ಪಾಲಿಸಬೇಕೆಂಬುದು ಇದೇ ಎನ್ನುವುದನ್ನು ಜಾಣ ಮೌನವನ್ನಾಗಿಸುತ್ತಾರೆ.

namazಈ ಪ್ರಕರಣ  ಇನ್ನೂ ಹಸಿಯಾಗಿರುವಾಗಲೇ, ಕೋಲಾರ ಜಿಲ್ಲೆಯ ಮುಳುಬಾಗಿಲಿನ ಸರ್ಕಾರೀ ಶಾಲೆಯಲ್ಲಿ ಕಳೆದ ಶುಕ್ರವಾರ ಶಾಲೆಯ ಕೊಠಡಿಯೊಂದರಲ್ಲೇ ಸಾಮೂಹಿಕವಾಗಿ ನಮಾಜ್ ಮಾಡುವ ಮೂಲಕ ಉರಿಯುತ್ತಿರುವ ಬೆಂಕಿಗೆ ತುಪ್ಪವನ್ನು ಸುರಿದಿದ್ದಾರೆ.  ಕ್ರಿಶ್ಚಿಯನ್ ಶಾಲೆಯಲ್ಲಿ ಅಭ್ಯಾಸ ಮಾಡುವ ಹಿಂದೂ ವಿಧ್ಯಾರ್ಥಿನಿಯರು ಬಳೆ ಧರಿಕೊಂಡು, ಬರುವುದು ತಲೆಗೆ ಹೂವು ಮುಡಿಯುವುದು ನಮ್ಮ ಅಮ್ಮನ ಕಾಲದಿಂದ  ಇಂದಿಗೂ ನಿಷಿದ್ಧವಾಗಿದೆಯಾದರೂ  ಇದರ ಬಗ್ಗೆ ಯಾವುದೇ ಆಕ್ಷೇಪವಿಲ್ಲದೇ ಹಿಂದೂಗಳು ಸಹಿತ ಯಾವುದೇ ವಿಧ್ಯಾರ್ಥಿನಿಯರೂ ವಿದ್ಯಾಭ್ಯಾಸ ಮಾಡುತ್ತಿರುವುದು ಇಲ್ಲಿ ಗಮನಾರ್ಹವಾಗಿದೆ. ಶಿಕ್ಷಣದ ವಿಚಾರಕ್ಕೆ ಬಂದಾಗ ಹಿಂದೂವಾಗಿರಲಿ, ಮುಸ್ಲಿಂ ಆಗಿರಲಿ ಕ್ರೈಸ್ತರಾಗಿರಲಿ ಶಾಲೆಯ ಶಿಸ್ತು ಮತ್ತು ನಿಯಮಗಳನ್ನು ಪಾಲನೆ ಮಾಡುವ ಮೂಲಕ ಶಿಕ್ಷಣಕ್ಕೆ ಒತ್ತು ನೀಡಬೇಕೇ ಹೊರತು ಈ ರೀತಿಯ ಕ್ಷುಲ್ಲಕ ವಿಷಯದ ಗಮನ ಹರಿಸಿಕೊಂಡು ದಾರಿ ತಪ್ಪಬಾರದು.

ಈಗಾಗಲೇ ಖಾಸಗಿ ಕಂಪನಿಗಳ ಕಚೇರಿಯಲ್ಲಿ ನಮಾಜ್ ಗೆ ಎಂದು ಒಂದು ಕೊಠಡಿಯನ್ನು ಮೀಸಲಿಡುವ ಅಲಿಖಿತ ನಿಯಮವಿದ್ದು ರಂಜಾನ್ ಸಮಯದಲ್ಲಿೆ ಎಲ್ಲರೂ ಮುಖ ತೊಳೆದು ಕೊಳ್ಳುವ ಸಿಂಕ್ ನಲ್ಲಿ ತಮ್ಮ ಕಾಲನ್ನು ಇಟ್ಟು ತೊಳೆಯುವ ಅಸಹ್ಯಕರವನ್ನು ಹಿಂದೂಗಳು ಸಹಿಸಿಕೊಂಡು ಹೋಗುತ್ತಿರುವುದು ಸುಳ್ಳೇನಲ್ಲ. ಇಂದು ಹಿಜಾಬ್ ಹೆಸರಲ್ಲಿ ಶಾಲೆಯ ನಿಯಮಕ್ಕೆ ಸೆಡ್ಡು ಹೊಡೆದವರು, ಮುಂದೆ ಸರ್ಕಾರಿ ಕಚೇರಿ, ಕಾಲೇಜು, ಆಸ್ಪತ್ರೆ ಹೀಗೆ ಎಲ್ಲೆಂದರಲ್ಲಿ ತಮ್ಮ ಧರ್ಮದ ಆಚರಣೆಗೆ ಅವಕಾಶ ಬೇಕೆನ್ನುವುದಲ್ಲದೇ,  ಆಕಸ್ಮಾತ್ ಮುಸ್ಲಿಂ ಮಹಿಳೆ ಪೋಲೀಸ್ ಇಲಾಖೆಯಲ್ಲಿಯೂ ಸಮವಸ್ತ್ರದ ಬದಲು ಹಿಜಬ್/ಬುರ್ಕಾ ಧರಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸಲೂ ಬಹುದು.

1947ರಲ್ಲಿ ಈ ದೇಶ ಧರ್ಮಾಧಾರಿತವಾಗಿ ಇಬ್ಭಾಗವಾದರೂ ಈ ದೇಶದ ಮಹಾತ್ಮ ಎನಿಸಿಕೊಂಡವರ ದೂರದೃಷ್ಟಿಯ ಕೊರತೆಯಿಂದಾಗಿ ರಾಷ್ಟ್ರ ಗೀತೆಯಾಗಿ ವಂದೇಮಾತರಂ ಬದಲಾಗಿ ಜನಗಣಮನ, ಕೇಸರಿ ಧ್ವಜದ ಬದಲಾಗಿ ಮೂರು ಧರ್ಮದವರನ್ನು ಸಂತೃಷ್ಟಿ ಗೊಳಿಸುವ ಸಲುವಾಗಿ ತ್ರಿವರ್ಣ ಧ್ವಜ ತಂದಿದ್ದಲ್ಲದೇ, ಅಲ್ಪಸಂಖ್ಯಾತರಿಗೆ ಬಹುಸಂಖ್ಯಾತರಿಗಿಂಗಲೂ ಅಧಿಕ ಹಕ್ಕನ್ನು ನೀಡಿದ್ದರ ಫಲವನ್ನು ಇಂದು ಅನುಭವಿಸುವಂತಾಗಿದೆ. . ಇತ್ತೀಚೆಗೆ ಓದಿದಂತೆ,  ಬಹುಸಂಖ್ಯಾತರ ಮೇಲೆ ಅಲ್ಪ ಸಂಖ್ಯಾತರು ಸವಾರಿ ಮಾಡುವಂತಹ ಏಕೈಕ ದೇಶವಿದ್ದರೆ ಅದು ಭಾರತ ದೇಶ ಎಂಬುದಕ್ಕೆ ಈ ಪ್ರಕರಣ ಜ್ಚಲಂತ ಉದಾಹರಣೆಯಾಗಿದೆ.

ಸರ್ಕಾರೀ ಶಾಲೆಯಲ್ಲಿ ಎಲ್ಲಾ ಧರ್ಮದ ಮಕ್ಕಳೂ ಓದುತ್ತಾರೆ ಹಾಗಾಗಿ ಸಮಾನತೆ ಮುಖ್ಯವೆಂದು, ಶಾಲೆಗಳಲ್ಲಿ ತಲತಲಾಂತರಗಳಿಂದ  ರೂಢಿಯಲ್ಲಿದ್ದ ಸರಸ್ವತಿ ಪೂಜೆಯನ್ನು ನಿಲ್ಲಿಸಲಾಯಿತು. ಶಾಲಾ ಪಠ್ಯದಲ್ಲಿದ್ದ ಅದೆಷ್ಟೋ ಭಾರತದ ಇತಿಹಾಸಗಳನ್ನು ಅವು ಹಿಂದೂ ಧರ್ಮದ ಭಾಗ ಎನ್ನುವ ಕಾರಣಕ್ಕಾಗಿ ತೆಗೆದು  ಹಾಕಲಾಯಿತು. ಹಿಂದೂ ಗುರುಕುಲ, ಸಂಸ್ಕೃತ ವಿಶ್ವವಿದ್ಯಾನಿಲಯಗಳ ಬಗ್ಗೆ ಆಕ್ಷೇಪ  ವ್ಯಕ್ತಪಡಿಸಲಾಯಿತು. ಅದರೆ ಅದೇ ಸರ್ಕಾರೀ ಖರ್ಚಿನಲ್ಲೇ ಮುಸಲ್ಮಾನರ ಧಾರ್ಮಿಕ ಶಿಕ್ಷಣಕ್ಕಾಗಿಯೇ ಮದರಸ ನಿರ್ಮಿಸಲು  ಅವಕಾಶ ಕಲ್ಪಿಸಿಕೊಡಲಾಗಿರುವ  ಕಾರಣ, ಈ ವಿದ್ಯಾರ್ಥಿನಿಯರಿಗೆ ಶಾಲೆಯಲ್ಲಿ ಶಿಕ್ಷಣಕ್ಕಿಂತ ಹಿಜಬ್ ಪ್ರಮುಖವಾದಲ್ಲಿ ಅದೇ ಮದರಸಾ ಶಾಲೆಗಳಲ್ಲಿ ಕಲಿಯುವುದು ಸೂಕ್ತವೆನಿಸುತ್ತದೆ.

ಇಂದಿನ ಮಕ್ಕಳೇ ನಾಳಿನ ದೇಶದ ಸತ್ಪ್ರಜೆಗಳು ಎಂಬುದನ್ನು ಮರೆತು  ಕೆಲವು ಪಟ್ಟ ಭಧ್ರ ಹಿತಾಸಕ್ತಿ ಜನರ  ರಾಜಕೀಯ ತೆವಲುಗಳಿಗೆ ಈ ಅಮಾಯಕ ಮಕ್ಕಳಿಗೆ ಧರ್ಮದ ಅಫೀಮನ್ನು ತಿನ್ನಿಸಿ ಈ ರೀತಿಯಾಗಿ ದೇಶ ವಿರೋಧಿಗಳನ್ನಾಗಿ ಮಾಡುತ್ತಿರುವವರನ್ನು ಧಿಕ್ಕರಿಸಲೇ ಬೇಕಾಗಿದೆ. ರಾಷ್ಟ್ರದ ಐಕ್ಯತೆಗೆ ಧಕ್ಕೆ ತರುತ್ತಿರುವ ಇಂತಹ ಷಡ್ಯಂತ್ರವನ್ನು ಚಿಗುರಿನಲ್ಲಿಯೇ ಚಿವುಟಿ ಹಾಕುವ ಮೂಲಕ ದೇಶ ಮತ್ತು ಧರ್ಮವನ್ನು ಎಲ್ಲೆಲ್ಲಿಎಷ್ಟರ ಮಟ್ಟಿಗೆ ಸರಿದೂಗಿಸಿಕೊಂಡು ಹೋಗಬೇಕೆನ್ನುವುದನ್ನು ಇಂದಿನ ಮಕ್ಕಳಿಗೆ ತಿಳಿಸಿಕೊಡಬೇಕಾಗಿರುವುದು ಪ್ರತಿಯೊಬ್ಬ ಭಾರತೀಯರ ಆದ್ಯ ಕರ್ತವ್ಯವಾಗಿದೆ.

ಏನಂತೀರಿ?

ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s