ಕಳೆದ ಮೂರ್ನಾಲ್ಕು ತಿಂಗಳುಗಳಿಂದಲೂ ಉಕ್ರೇನ್ ಮತ್ತು ರಷ್ಯಾ ನಡುವೆ ಒಂದು ರೀತಿಯ ಯುದ್ಧದ ಭೀತಿಯಿದ್ದ ವಿಷಯ ಎಲ್ಲರಿಗೂ ತಿಳಿದಿರುವ ವಿಷಯವಷ್ಟೇ. ಕನ್ನಡದಲ್ಲಿರುವ ಪ್ರಸಿದ್ಧ ಗಾದೆ ಹುಟ್ತಾ ಹುಟ್ತಾ ಅಣ್ಣಾ ತಮ್ಮಂದಿರು ಬೆಳಿತಾ ಬೆಳಿತಾ ದಾಯಾದಿಗಳು ಎನ್ನುವಂತೆ 90ರ ದಶಕವರೆಗೂ ಈ ಎರಡೂ ರಾಷ್ಟ್ರಗಳು ಸೋವಿಯತ್ ರಷ್ಯಾದ ಭಾಗವಾಗಿದ್ದವು. ಆ ಸಮಯದಲ್ಲಿ ಮಿಖಾಯಿಲ್ ಗೊರ್ಬಚೋವ್ ನೇತೃತ್ವದಲ್ಲಿ ಬೀಸಿದ ಬದಲಾವಣೆಯ ಗಾಳಿಯಿಂದಾಗಿ ಪ್ರಪಂಚದ ಅತಿದೊಡ್ಡ ಕಮ್ಯೂನಿಷ್ಟ್ ರಾಷ್ಟ್ರ ಹತ್ತಾರು ರಾಷ್ಟ್ರಗಳಾಗಿ ಛಿದ್ರಗೊಂಡಿದ್ದು ಈಗ ಇತಿಹಾಸ.
ಮೊದಲಿನಿಂದಲೂ ಇಡೀ ವಿಶ್ವದ ಮೇಲೆ ಪ್ರಭುತ್ವವನ್ನು ಸಾಧಿಸುವ ಸಲುವಾಗಿ ದೊಡ್ಡಣ್ಣ ಪಾತ್ರವನ್ನು ವಹಿಸಿಕೊಳ್ಳುದುವಕ್ಕಾಗಿ ಅಮೇರಿಕಾ ಮತ್ತು ರಷ್ಯಾ ಪರಸ್ಪರ ಪರೋಕ್ಷವಾಗಿ ಕಿತ್ತಾಡುತ್ತಿದ್ದದ್ದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ರಷ್ಯಾವನ್ನು ಪರೋಕ್ಷವಾಗಿ ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವ ಸಲುವಾಗಿ ಅಮೇರಿಕಾ ಉಕ್ರೇನಿಗೆ ಎಲ್ಲಾ ರೀತಿಯ ಸಹಾಯ ಮಾಡುತ್ತಲೇ ಹೋದಾಗಾ, ಹೇಗೋ ವಿಶ್ವದ ದೊಡ್ಡಣ್ಣನ ಬೆಂಬಲವಿದ್ದಾಗ ತನಗೇಕೆ ಭಯ ಎಂದು ಐಶಾರಾಮೀ ಜೀವನ ನಡೆಸುತ್ತಲೇ ಅಮೇರಿಕಾದ ಕುಮ್ಮಕ್ಕಿನಿಂದ ರಷ್ಯಾದ ಮೇಲೆ ಕಾಲು ಕೆರೆದುಕೊಂಡು ಹೋಗಿ ಈಗ ಬೆಣೆಯನ್ನು ತೆಗೆಯಲು ಹೋಗಿ ಬಾಲವನ್ನು ಸಿಕ್ಕಿಸಿಕೊಂಡ ಪರದಾಡಿದ ಇಂಗು ತಿಂದ ಮಂಗನಂತಾಗಿದೆ.
ಉಕ್ರೇನಿನಲ್ಲಿ ಈ ರೀತಿಯ ಕ್ಷಿಪ್ರ ರಾಜಕೀಯ ಬೆಳವಣಿಯನ್ನು ಗಮನಿಸಿದ ಭಾರತ ಸರ್ಕಾರ ಮತ್ತು ಭಾರತೀಯ ಧೂತನಿವಾಸ ಉಕ್ರೇನಿನಲ್ಲಿ ಕೆಲಸ ಮಾಡುತ್ತಿರುವ ಮತ್ತು ವಿದ್ಯಾಭ್ಯಾಸ ಮಾಡುತ್ತಿರುವ ಭಾರತೀಯರಿಗೆ ಎಚ್ಚರಿಕೆಯನ್ನು ನೀಡಿದ್ದಲ್ಲದೇ ಕೂಡಲೇ ಭಾರತಕ್ಕೆ ಹಿಂದಿರುಗ ಬೇಕೆಂದು ಸೂಚಿಸಿತ್ತು
ಪರಿಸ್ಥಿತಿಯ ಗಂಭೀರತೆಯನ್ನು ಅರಿಯದೆಯೋ, ಇಲ್ಲವೆ ಭಾರತ ಸರ್ಕಾರವೇ ತಮ್ಮನ್ನು ಕರೆದೊಯ್ಯಲೀ ಎಂಬ ಉದ್ಧಟನದ ಧೋರಣೆಯಿಂದಾಗಿ ಸರ್ಕಾರದ ಎಚ್ಚರಿಕೆಯನ್ನು ತಳ್ಳಿ ಹಾಕಿದ ಬಹುತೇಕರು ಯುದ್ಧ ಶುರುವಾದ ಕೂಡಲೇ ಅಂಬೋ ಎಂದು ಗೀಳಿಡಲು ಶುರು ಹಚ್ಚಿಕೊಂಡಿದ್ದಾರೆ. ಈ ರೀತಿಯ ಆಕ್ರಂದನ ಕೇವಲ ಭಾರತೀಯರದ್ದಾಗಿರದೇ, ಅಮೇರಿಕಾ, ಚೀನಾ, ಪಾಕೀಸ್ಥಾನ, ಯೂರೋಪಿನ ಬಹುತೇಕ ರಾಷ್ಟ್ರಗಳು ಉಕ್ರೇನಿನಲ್ಲಿದ ಅವರ ದೇಶದ ಪ್ರಜೆಗಳಿಗೆ ನಿಮ್ಮ ಜವಾಬ್ಧಾರಿಯನ್ನು ನೀವೇ ನೋಡಿ ಕೊಳ್ಳಬೇಕು ಎಂದು ಕೈ ಎತ್ತಿದರೆ, ಭಾರತ ಸರ್ಕಾರ ಮಾತ್ರಾ, ಆಪರೇಷನ್ ಗಂಗಾ ಎಂಬ ಕಾರ್ಯಾಚರಣೆ ಆರಂಭಿಸಿ, ಕೇಂದ್ರ ಸರ್ಕಾರದ ಕೆಲವು ಮಂತ್ರಿಗಳು ಮತ್ತು ಹಿರಿಯ ಅಧಿಕಾರಿಗಳನ್ನು ತುರ್ತಾಗಿ ಉಕ್ರೇನಿನ ಗಡಿ ದೇಶಗಳಾದ ರುಮೇನಿಯಾ ಮತ್ತು ಮಾಲ್ಡೋವದಲ್ಲಿ ಜ್ಯೋತಿರಾಧಿತ್ಯ ಸಿಂಧಿಯಾ, ಹಂಗೇರಿಯಲ್ಲಿ ಹರದೀಪ್ ಸಿಂಗ್, ಸ್ಲೋವಾಕಿಯ ದಲ್ಲಿ ಕಿರಣ್ ರಿಜುಜು ,ಪೋಲೆಂಡಿನಲ್ಲಿ ಪಿ ಕೆ ಸಿಂಗ್ ಅವರುಗಳು ಖುದ್ದಾಗಿ ಅಲ್ಲಿಯೇ ಇದ್ದು ನಾಗರೀಕ ವಿಮಾನಗಳಲ್ಲಿ ಹೆಚ್ಚಿನ ಜನರನ್ನು ಕರೆತರಲು ಸಾಧ್ಯವಿಲ್ಲ ಎಂಬುದನ್ನರಿತು, ಪ್ರಪಂಚದ ಅತಿ ದೊಡ್ಡ ಸರಕು ಸಾಗಾಣಿಕಾ ವಿಮಾನವಾದ ಸಿ-17 ಗ್ಲೋಬ್ ಮಾಸ್ಟ್ ನಲ್ಲಿ ಕರೆತರುವ ವ್ಯವಸ್ಥೆ ಮಾಡುತ್ತಿದ್ದಾರೆ ಇದರ ಅಂಗವಾಗಿ ಭಾಗವಾಗಿ ಇದುವರೆವಿಗೂ ಸುಮಾರು 20000ಕ್ಕೂ ಅಧಿಕ ಭಾರತೀಯರನ್ನು ಏರ್ ಲಿಫ್ಟ್ ಮಾಡಿಸಿದ್ದಲ್ಲದೇ, ಮತ್ತಷ್ಟು ವಿಮಾನಗಳನ್ನು ಕಳುಹಿಸಿ ಪ್ರತಿಯೊಬ್ಬ ಭಾರತೀಯರನ್ನೂ ಅಲ್ಲಿಂದ ಕರೆತರುವ ಜವಾಬ್ಧಾರಿಯನ್ನು ಹೊತ್ತಿಕೊಂಡಿರುವುದನ್ನು ನೋಡಿದ ಇಡೀ ಪ್ರಪಂಚವೇ ಅಭಿನಂದಿಸಲಾರಂಬಿತೋ, ವಿರೋಧ ಪಕ್ಷಗಳಿಗೆ ನವರಂಧ್ರಗಳಲ್ಲಿಯೂ ತಡೆಯಲಾರದ ಉರಿಯಲಾರಂಭಿಸಿ ದೇಶಾದ್ಯಂತ ಸರ್ಕಾರ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಿಲ್ಲ. ಇದು ಮೋದಿ ಸರ್ಕಾರ ವಿದೇಶಾಂಗ ನೀತಿಯ ದುಷ್ಪರಿಣಾಮ ಎಂದು ಬೊಬ್ಬಿರಿಯಲು ಆರಂಭಿಸಿದರೆ, ಅದೇ ಲೂಟಿಯನ್ಸ್ ಮೀಡಿಯಾ ಸಹಾ ಅದನ್ನೇ ಬಿತ್ತರಿಸಿ ಕೇಂದ್ರ ಸರ್ಕಾರವನ್ನೇ ಖಳನಾಯಕನಂತೆ ಬಿಂಬಿಸಲು ಹೋರಟಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.
ನಿಜ ಹೇಳಬೇಕೆಂದರೆ, ಅಧಿಕಾರಕ್ಕೇರಿದ ಆರಂಭದಲ್ಲಿ ಪ್ರಧಾನಿಗಳು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ವಿದೇಶಗಳನ್ನು ಸುತ್ತುತ್ತಿದ್ದಾಗ ಅವಹೇಳನ ಮಾಡಿದ್ದವರಿಗೆ ಇಂದು ಅವರು ಹಾಗೇಕೆ ಸುತ್ತುತ್ತಿದ್ದರು ಎಂಬ ಪರಿಚಯವಾಗಬೇಕಿತ್ತು. ರಷ್ಯಾ ಮತ್ತು ಉಕ್ರೇನ್ ಪರ ಮತ್ತು ವಿರೋಧದ ಗುಂಪುಗಾರಿಕೆ ಆರಂಭವಾದಾಗ, ರಷ್ಯಾ ಭಾರತದ ಪರ ಸದಾಕಾವಿದ್ದು, ಉಕ್ರೇನ್ ಸದಾಕಾಲ ಭಾರತದ ವಿರುದ್ಧವೇ ಇದ್ದರೂ ಸಹಾ ಭಾರತ ಈ ಸಂದರ್ಭದಲ್ಲಿ ಎರಡೂ ದೇಶಗಳೊಡನೆ ಸಮಾನ ಅಂತರ ಕಾಯ್ದುಕೊಂಡಿದ್ದಲ್ಲದೇ, ತಮ್ಮ ದೇಶದ ಪ್ರಜೆಗಳಿಗೆ ಯಾವುದೇ ರೀತಿಯ ತೊಂದರೆ ಮಾಡಬಾರದು ಎಂದು ಎರಡೂ ದೇಶಗಳಿಗೆ ಸೂಚನೆ ನೀಡಿತು. ಭಾರತದ ಆ ಮನವಿಯನ್ನು ಪುರಸ್ಕರಿಸಿದ ಎರಡೂ ದೇಶಗಳು ಭಾರತದ ಧ್ವಜ ಹಾಕಿದ್ದ ವಾಹನಗಳು ಮತ್ತು ಭಾರತದ ಪಾಸ್ ಪೋರ್ಟ್ ಹೊಂದಿದ್ದವರಿಗೆ ಯಾವುದೇ ತೊಂದರೆ ನೀಡದೇ ಅವರು ಸುರಕ್ಷಿತವಾಗಿ ಗಡಿ ದಾಟಿ ಅಕ್ಕ ಪಕ್ಕ ದೇಶಕ್ಕೆ ತಲುಪಿದಲ್ಲಿ ಅಲ್ಲಿಂದ ಕರೆದೊಯ್ಯಲು ಭಾರತ ಸರ್ಕಾರದ ವಿಮಾನಗಳು ಸಿದ್ಧವಿದ್ದವು.
ದುರಾದೃಷ್ಟವಷಾತ್, ಕಮ್ಯೂನಿಷ್ಟ್ ಮಾಧ್ಯಮಗಳು, ವಿರೋಧ ಪಕ್ಷಗಳು ಮತ್ತು ತುಕ್ಡೇ ತುಕ್ಡೇ ಗ್ಯಾಂಗ್ ಒಂದಾಗಿ ಏರ್ ಸ್ಟ್ರೈಕ್ ಸಮಯದಲ್ಲಿ ದಾಖಲೆ ಕೇಳಿದಂತೆ ಸರ್ಕಾರದ ಏರ್ ಲಿಫ್ಟ್ ಸರಿ ಇಲ್ಲಾ ಎಂದು ತೋರಿಸುವುದಕ್ಕಾಗಿ ಕಾಂಗ್ರೇಸ್ ನಾಯಕ ರಾಜೀವ್ ಶುಕ್ಲಾ ಒಡೆತನದ ನ್ಯೂಸ್ 24, ಉಕ್ರೇನಿನಲ್ಲಿ ನೂರಾರು ಹೆಣಗಳ ರಾಶಿಯ ಮೇಲೆ ಬಟ್ಟೆ ಮುಚ್ಚಿರುವವರ ಮಧ್ಯದಲ್ಲಿ ನಿಂತಿರುವ ಒಬ್ಬ ಹುಡುಗ ತನ್ನನ್ನು ಪಾರು ಮಾಡಿ ಎಂದು ಮೊರೆ ಇಡುತ್ತಿರುವ ಅಳಲನ್ನು ತೋಡಿಕೊಳ್ಳುತ್ತಿರುವ ದೃಶ್ಯವನ್ನು ಪ್ರಸಾರ ಮಾಡುತ್ತಿರುವ ಸಮಯದಲ್ಲೇ, ಶವದಂತೆ ಮಲಗಿದ್ದ ವ್ಯಕ್ತಿಯೊಬ್ಬನ್ನು ಇದ್ದಕ್ಕಿದ್ದಂತೆಯೇ ತನ್ನ ಮೇಲೆ ಹೊದ್ದಿಸಿದ್ದ ಬಟ್ಟೆಯನ್ನು ತೆಗೆದಾಗಲೇ ಅದೊಂದು ಸ್ಟುಡಿಯೋ ಸೆಟಪ್ ಎಂದು ಜಗಜ್ಜಾಹೀರಾಯಿತು.
ಇದೇ ರೀತಿಯಲ್ಲೇ ವೈಶಾಲಿ ಯಾದವ್ ಎಂಬುವ ಹುಡುಗಿ ತಾನು ಉತ್ತರ ಪ್ರದೇಶದ ಹರದೋಯಿ ಜಿಲ್ಲೆಯವಳೆಂದೂ, ಮೋದಿ ಹಾಗು ಯೋಗಿ ಸರ್ಕಾರದ ನನಗೆ ಭಾರತಕ್ಕೆ ಬರಲು ಯಾವುದೇ ರೀತಿಯ ಸಹಕಾರ ನೀಡುತ್ತಿಲ್ಲ ಎಂಬ ವಿಡಿಯೋ ತುಣುಕುಗಳನ್ನು ಕಳುಹಿಸಿದಾಗ ಅದರ ಸತ್ಯಾಸತ್ಯತೆಯನ್ನು ತಿಳಿಯಲು ಪೋಲೀಸರು ಅವಳ ಊರಿಗೆ ಹೋದಾಗ ತಿಳಿದ ಬಂದ ಆಘಾತಕಾರಿ ವಿಷಯವೇನೆಂದರೆ ಆಕೆ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಮುಖಂಡರ ಮಗಳಾಗಿದ್ದು ಉತ್ತರ ಪ್ರದೇಶದ ಚುನಾವಣಾ ಸಮಯದಲ್ಲಿ ಮೋದಿ ಹಾಗು ಯೋಗಿ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುವ ಸಲುವಾಗಿ ಈ ರೀತಿಯ ನಕಲಿ ಸುದ್ದಿಯನ್ನು ಹರಡಿಸುತ್ತಿದ್ದನ್ನು ಖಚಿತಪಡಿಸಿಕೊಂಡು ಈಗ ಪೋಲಿಸರ ಆತಿಧ್ಯ ಪಡೆಯುತ್ತಿದ್ದಾಳೆ.
ಇನ್ನು ಅಪರೇಷನ್ ಗಂಗಾ ಎಂಬ ಹೆಸರಿಟ್ಟಿದ್ದಕ್ಕೂ ಕರ್ನಾಟಕದ ಹುಂಬ, ತುಷ್ಟೀಕರಣದ ಭಾಗ್ಯಗಳ ಸರದಾರ, ಮಾಜೀ ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ಷೇಪಣೆ ವ್ಯಕ್ತಪಡಿಸಿದರೆ, ಇನ್ನು ಬಂಡೆ ವ್ಯಾಪಾರದಲ್ಲಿ ರಾಜ್ಯದ ಗ್ರೈನೈಟ್ ಲೂಟಿ ಮಾಡಿ ಈಗ ಮೇಕೆದಾಟು ಹೆಸರಿನಲ್ಲಿ ಮೋಜು ಮಸ್ತಿಯ ಪಾದಯಾತ್ರೆ ಮಾಡುತ್ತಿರುವ ಬಂಡೆ ಬ್ರದರ್ಸ್ ಮತ್ತವರ ಪಟಾಲಾಂ ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯ ಬಗ್ಗೆ ಕುಹಕವಾಡಿರುವುದು ನಿಜಕ್ಕೂ ಹಾಸ್ಯಸ್ಪದ ಎನಿಸುತ್ತಿದೆ.
ಇವೆಲ್ಲದರ ಮಧ್ಯೆ ಉಕ್ರೇನಿನಲ್ಲಿ ಮೆಡಿಕಲ್ ಓದುತ್ತಿದ್ದ ಕರ್ನಾಟಕದ ಪ್ರತಿಭಾವಂತ ವಿದ್ಯಾರ್ಥಿ ನವೀನ್ ರಷ್ಯಾದ ಬಾಂಬ್ ಧಾಳಿಯಲ್ಲಿ ಮೃತಪಟ್ಟಿರುವುದು ನಿಜಕ್ಕೂ ದುಃಖಕರವಾಗಿದೆ. ನವೀನ್ ಪಿಯೂಸಿಯಲ್ಲಿ 97% ಅಂಕಗಳನ್ನು ಗಳಿಸಿದ್ದರೂ 35% ಗಳಿಸಿದ ವಿದ್ಯಾರ್ಥಿಗಳಿಗೆ ಜಾತಿಯ ಆಧಾರದಲ್ಲಿ ಸೀಟ್ ಮೀಸಲಾತಿ ಮಾಡಿದ ಕಾರಣ ದೂರದ ಉಕ್ರೇನಿಗೆ ಸಾಲ ಸೋಲ ಮಾಡಿ ಕಳುಹಿಸಿ ಈಗ ಮಗನನ್ನು ಕಳೆದುಕೊಳ್ಳಬೇಕಾಯಿತು ಅವರ ತಂದೆಯವರೇ ಖಾಸಗೀ ಛಾನೆಲ್ಲಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರೂ, ನಮ್ಮ ಖನ್ನಢ ಓರಾ(ಲಾ)ಟಗಾರ ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿ ಓದಿ ಹೊಟ್ಟೆಯ ಪಾಡಿಗೆ ಕನ್ನಡ ಹೆಸರಿನಲ್ಲಿ ತಿರುಪೆ ಎತ್ತುತ್ತಿರುವ ಟ್ಯೂಬ್ ಲೈಟ್ ಸ್ವಘೋಷಿತ ಹೋರಾಟಗಾರರಿಬ್ಬರೂ ನಂದೆಲ್ಲಿ ಇಡಲೀ ನಂದ ಗೋಪಾಲ ಎಂದು ನವೀನ್ ಸಾಯುವುದಕ್ಕೆ ನೀಟ್ ಪರೀಕ್ಷೇಯೇ ಕಾರಣ. ಕರ್ನಾಟಕದಲ್ಲಿರುವ ಮೆಡಿಕಲ್ ಕಾಲೇಜುಗಳ ಸಂಖ್ಯೆ 60. ಉತ್ತರ ಪ್ರದೇಶದಲ್ಲಿರುವ ಮೆಡಿಕಲ್ ಕಾಲೇಜುಗಳ ಸಂಖ್ಯೆ 55. ಕರ್ನಾಟಕದ ಜನಸಂಖ್ಯೆ 6.4 ಕೋಟಿಯಾದರೆ, ಉತ್ತರಪ್ರದೇಶದ ಜನಸಂಖ್ಯೆ 20.4 ಕೋಟಿ. ನೀಟ್ ಇಲ್ಲದೇ ಹೋಗಿದ್ದಲ್ಲಿ ಕರ್ನಾಟಕದಲ್ಲಿರುವ ಮೆಡಿಕಲ್ ಕಾಲೇಜುಗಳ ಸೀಟ್ ಕನ್ನಡಿಗರಿಗೆ ಸಾಕಾಗುತ್ತಿತ್ತು. ನೀಟ್ ಬಂದಮೇಲೆ ಸೀಟುಗಳು ಹಿಂದಿ ರಾಜ್ಯಗಳ ಪಾಲಾಗುತ್ತಿವೆ. ಕನ್ನಡಿಗರ ಜಾಗ, ಕನ್ನಡಿಗರ ದುಡ್ಡು, ಕರ್ನಾಟಕದ ಮೂಲಭೂತ ಸೌಕರ್ಯಗಳು, ಫಲಾನುಭವಿಗಳು ಮಾತ್ರ ಕನ್ನಡಿಗರಲ್ಲ #BanNEET ಎಂಬ ವ್ಯರ್ಥ ಪ್ರಲಾಪ ಇಟ್ಟಿದ್ದಾರೆ.
ದೇಶದ ಒಕ್ಕೂಟ ವ್ಯವಸ್ಥೆಯ ಅರಿವಿಲ್ಲದೇ ಪ್ರಾದೇಶಿಕವಾಗಿ ಸಂಕುಚಿತ ಮನೋಭಾವನೆಯ ಇಂತಹವವರು ರಾಜಕೀಯ ತೆವಲುಗಳಿಗೆ ಓಟ್ ಬ್ಯಾಂಕಿಗಾಗಿ ಸ್ವಾತಂತ್ರ್ಯ ಬಂದು 70+ ವರ್ಷಗಳಾದರೂ ಜಾತಿಯ ಆಧಾರದ ಮೇಲೆ ದೇಶಾದ್ಯಂತ 50% ಸೀಟುಗಳನ್ನು ಮೀಸಲು ಮುಂದುವರೆಸಿಕೊಂಡು ಹೋಗಿರುವ ರಾಜಕಾರಣಿಗಳ ವಿರುದ್ಧವೇಕೆ ಪ್ರತಿಭಟನೆ ನಡೆಸುವುದಿಲ್ಲ ಎನ್ನುವುದು ಚಿದಂಬರ ರಹಸ್ಯವಾಗಿದೆ. ಸ್ವಘೋಷಿತ ಹೋರಾಟಗಾರರು ಹೊಟ್ಟೆ ಪಾಡಿಗಾಗಿ ಚಿಕ್ಕವಯಸಿನಲ್ಲೇ ದೂರದ ಮುಂಬೈಗೆ ಹೋಟೆಲ್/ಬಾರ್ ನಲ್ಲಿ ಕೆಲಸಕ್ಕೆ ಹೋಗಿ ಅಲ್ಲಿಯ ಜನರ ಕೆಲಸ ಕಿತ್ತುಕೊಂಡು ಅವರ ಹೊಟ್ಟೆಯ ಮೇಲೆ ಹೊಡೆದದ್ದನ್ನು ಇಷ್ಟು ಬೇಗ ಮರೆತರೇ? ಕನ್ನಡದ ಹೆಸರಿನಲ್ಲಿ ಇವರುಗಳು ಆಚರಿಸುವ ಕಾಟಾಚಾರದ ಉತ್ಸವಗಳಿಗೆ ಪ್ರತೀವರ್ಷವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ತೆಗೆದುಕೊಳ್ಳುವ ಕೋಟ್ಯಾಂತರ ರೂಪಾಯಿ ಜನರ ತೆರಿಗೆಯ ಹಣವನ್ನು ಯಾವ ರೀತಿಯಲ್ಲಿ ಸಮರ್ಥಿಸಿಕೊಳ್ಳುತ್ತಾರೆ.
ಇನ್ನು ಭಾರತದಲ್ಲಿನ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಲಾರದ ವಿದ್ಯಾರ್ಥಿಗಳಷ್ಟೇ ಯಾವುದೇ ಪ್ರವೇಶ ಪರೀಕ್ಷೆ ಇಲ್ಲದ ಉಕ್ರೇನ್ ದೇಶಕ್ಕೆ ಹೋಗುತ್ತಾರೆ. ಅಲ್ಲಿ ಡಿಗ್ರಿ ಪಡೆದವರು ವಾಪಸು ಬಂದು ಇಲ್ಲಿ ಪ್ರಾಕ್ಟೀಸ್ ಮಾಡಲು ಇರುವ ಅರ್ಹತಾ ಪರೀಕ್ಷೆಯಲ್ಲಿ ಪಾಸಾಗುವುದು ಬಹಳ ಕಡಿಮೆ. ಇನ್ನು ಅಪ್ಪಿ ತಪ್ಪಿ ಪಾಸಾದರೂ, ಅವರು ಕೊಡುವ ಚಿಕಿತ್ಸೆ ಯಾವ ಮಟ್ಟದಲ್ಲಿ ಇರಬಹುದು? ಎಂಬ ಆಣಿ ಮುತ್ತನ್ನು ಕರ್ನಾಟಕದವರೇ ಆದ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ನೀಡಿರುವ ಹೇಳಿಕೆಯೂ ಅಷ್ಟೇ ಅಕ್ಷಮ್ಯ ಅಪರಾಧವೇ ಅಗಿದೆ. ಹೌದು ನಿಜ ಭಾರತದಲ್ಲಿ ವೈದ್ಯಕೀಯ ಶಿಕ್ಷಣದ ಕಾಲೇಜುಗಳ ಸಂಖ್ಯೆ ಕಡಿಮೆ ಇದೆ ಮತ್ತು ವೈದ್ಯಕೀಯ ಶಿಕ್ಷಣದ ಶಿಕ್ಷಣದ ವೆಚ್ಚವೂ ದುಬಾರಿಯಾಗಿದೆ. ಇದರ ಜೊತೆಗೆ ಮೀಸಲಾತಿಯ ಪಿಡುಗೂ ಸಹಾ ಇರುವ ಕಾರಣ, ಮುಂದುವರೆದ ಜಾತಿಯಲ್ಲಿ ಹುಟ್ಟಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣ ಸಿಗುತ್ತಿಲ್ಲ. ಈ ತಾರತಮ್ಯವನ್ನು ಸರಿ ಪಡಿಸುತ್ತೇವೆ ಎಂದು ಹೇಳಿದ್ದರೆ ಅವರನ್ನು ಮೆಚ್ಚಿಕೊಳ್ಳಬಹುದಿತ್ತು.
ಇಷ್ಟೆಲ್ಲಾ ಹೇಳಿದ್ದು ಲೇಖನದ ಮೊದಲಾರ್ಧವಾದರೆ ದ್ವಿತೀಯಾರ್ಧವಂತೂ ಇನ್ನೂ ಅಚ್ಚರಿಯ ಜೊತೆಗೆ ಆತಂಕವನ್ನುಂಟು ಮಾಡುತ್ತದೆ. ಉಕ್ರೇನ್ ಮತ್ತು ರಷ್ಯಾದ ನಡುವಿನ ಪರಿಸ್ಥಿತಿ ಬಿಗಡಾಯಿಸುತ್ತಿದೆ ಎಂಬ ವಿಷಯ ಖಚಿತವಾಗುತ್ತಿದ್ದಂತೆಯೇ, ಭಾರತಿಯ ಧೂತವಾಸ ಉಕ್ರೇನಿನಲ್ಲಿರುವ ವಿದ್ಯಾರ್ಥಿಗಳು ಮತ್ತು ಇತರೇ ಎಲ್ಲಾ ಭಾರತೀಯರಿಗೂ ಭಾರತಕ್ಕೆ ಕ್ಷೇಮವಾಗಿ ಹಿಂದಿರುಗುವ ಸಲುವಾಗಿ ಏರ್ ಇಂಡಿಯಾ ವಿಮಾನಗಳ ವ್ಯವಸ್ಥೆ ಮಾಡಿರುವ ವಿಷಯ ತಿಳಿಸಿ ಈ ಕೂಡಲೇ ಹೊರಡಬೇಕೆಂದು ಪ್ರತೀೆ ಎರಡು ದಿನಗಳಿಗೊಮ್ಮೆ ಎಚ್ಚರಿಸಿದ್ದರೂ, ಅಲ್ಲಿನ ಕಾಲೇಜುಗಳು online ತರಗತಿಗಳನ್ನು ತೆಗೆದುಕೊಳ್ಳುವುದಿಲ್ಲ. ಕೇವಲ offline ತರಗತಿಗಳನ್ನು ಮಾತ್ರವೇ ತೆಗೆದುಕೊಳ್ಳುತ್ತೇವೆ ಎಂದಿರುವ ಕಾರಣ ನಮಗೆ ವಿದ್ಯೆಯೇ ಮುಖ್ಯ ಎಂದು ಕೆಲವು ವಿದ್ಯಾರ್ಥಿಗಳು ಧೂತವಾಸದ ಎಚ್ಚರಿಕೆಯನ್ನು ತೆಗೆದುಹಾಕಿದರೆ ಇನ್ನೂ ಕೆಲವರು ಯುದ್ದ ನಡೆದರೆ ಉಕ್ರೇನಿನ ರಾಜಧಾನಿ ಕೀವ್ಸ್ ನಗರಕ್ಕೆ ಸೀಮಿತವಾಗಿರುತ್ತದೆ. ನಾವಿರುವ ಪ್ರದೇಶ ಸುರಕ್ಷಿತವಾಗಿರುವ ಕಾರಣ ನಾವು ಭಾರತಕ್ಕೆ ಹಿಂದಿರುಗುವ ಪ್ರಮೇಯವೇ ಇಲ್ಲ ಎಂಬ ಧೋರಣೆ ತೋರಿದ್ದು ಸತ್ಯ.
ಇದ್ದಕ್ಕಿದ್ದಂತೆಯೇ ಯುದ್ದದ ತೀವ್ರತೆ ಹೆಚ್ಚಾಗಿ ಉಕ್ರೇನಿನ ಬಹುತೇಕ ನಗರಗಳ ಅಕ್ಕ ಪಕ್ಕದಲ್ಲೇ ರಷ್ಯಾದ ಬಾಂಬುಗಳು ಬೀಳತೊಡಗಿದವೋ ಆಗ ಎಚ್ಚೆತ್ತ ಈ ಎಲ್ಲಾ ವಿದ್ಯಾರ್ಥಿಗಳು ಎದ್ದೂ ಬಿದ್ದೂ ನಮ್ಮನ್ನು ಕಾಪಾಡೀ ಕಾಪಾಡೀ ಎಂದು ದಂಬಾಲು ಬೀಳುವ ಹೊತ್ತಿಗೆ ಯುದ್ಧ ನಡೆಯುತ್ತಿದ್ದ ಉಕ್ರೇನಿನೊಳಗೆ ಯಾವುದೇ ವಿಮಾನಗಳ ಹಾರಾಟ ಮಾಡಲು ಅವಕಾಶ ಸಿಗದ ಕಾರಣ ಉಕ್ರೇನಿನ ಅಕ್ಕ ಪಕ್ಕದ ದೇಶಗಳೊಂದಿಗೆ ಮಾತನಾಡಿದ ಭಾರತ ಸರ್ಕಾರ ಭಾರತೀಯರಿಗೆ ಯಾವುದೇ ಸಮಸ್ಯೆಯಾಗದಂತೆ ಗಡಿ ದಾಟಲು ಅವಕಾಶ ನೀಡಬೇಕೆಂದು ಕೋರಿ, ಅಲ್ಲಿನ ಗಡಿ ಪ್ರದೇಶದವರೆಗೂ ನಮ್ಮ ವಿಮಾನಗಳನ್ನು ತೆಗೆದುಕೊಂಡು ಹೋಗಿ ಗಡಿ ದಾಟಿ ಬರುವ 2-3 ಸಾವಿರ ಭಾರತೀಯರನ್ನು ಪ್ರತೀ ದಿನವೂ ಭಾರತಕ್ಕೆ ಕರೆತರುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಈ ರೀತಿಯಾಗಿ ತನ್ನ ಪ್ರಜೆಗಳ ಬಗ್ಗೆ ಮಾನವೀಯ ಕಾಳಜಿ ತೋರಿಸುತ್ತಿರುವ ಏಕೈಕ ರಾಷ್ಟ್ರ ಭಾರತ ಎಂದು ಇಡೀ ವಿಶ್ವವೇ ಕೊಂಡಾಡುತ್ತಿದೆ.
ಆದರೆ, ಇಲ್ಲಿ ಹುಟ್ಟಿ ಬೆಳೆದು ಇಲ್ಲಿಯೇ ಪ್ರೌಢಶಿಕ್ಷಣ ಮುಗಿಸಿ ಅವರವರ ತೆವಲುಗಳಿಗೆ (ಆಕ್ರೋಶದಿಂದ ಈ ಪದ ಬಳಸುತ್ತಿರುವುದಕ್ಕಾಗಿ ಕ್ಷಮೆ ಇರಲಿ) ಭಾರತದ ಪಾಸ್ ಪೋರ್ಟ್ ತೆಗೆದುಕೊಂಡು ಉಕ್ರೇನಿಗೆ ಓದಲು ಹೋದರೇ ವಿನಃ ಅದರ ಹೊರತಾಗಿ ಇವರಿಗೂ ಭಾರತ ಸರ್ಕಾರಕ್ಕೂ ಯಾವುದೇ ಸಂಬಂಧವೇ ಇಲ್ಲಾ. ಅಮೇರಿಕಾ, ಚೀನಾ, ನೆರೆಯ ಪಾಪೀಸ್ಥಾನ, ಯುರೋಪಿಯನ್ ದೇಶಗಳ ರಾಜತಾಂತ್ರಿಕದವರೇ ಕೈ ಚೆಲ್ಲಿ ಕುಳಿತಿರುವಾಗ ನಮ್ಮ ದೇಶ 4 ಕೇಂದ್ರ ಸಚಿವರನ್ನು ಗಡಿ ದೇಶಗಳಿಗೆ ಕಳುಹಿಸಿ ಅಲ್ಲಿಂದ ಏರ್ ಲಿಫ್ಟ್ ಮಾಡಿಸುತ್ತಿರುವಾಗ ಅದೇ ಸೌಲಭ್ಯವನ್ನು ಪಡೆದುಕೊಂಡು ಭಾರತಕ್ಕೆ ಹಿಂದಿರುಗಿ ನಮ್ಮನ್ನು ಸುರಕ್ಷಿತವಾಗಿ ಕರೆತರಲು ಭಾರತ ಸರ್ಕಾರ ಯಾವುದೇ ಪ್ರಯತ್ನ ಮಾಡಲಿಲ್ಲ. ಭಾರತಕ್ಕೆ ಉಕ್ರೇನ್ ಒಳಗೆ ಕಾಲು ಇಡಲು ಗಟ್ಸ್ ಇಲ್ಲಾ. ನಾವೇ ಕಷ್ಟಪಟ್ಟು ಶ್ರಮವಹಿಸಿ ಗಡಿಯನ್ನು ದಾಟಿದ ನಂತರ ವಿಮಾನದ ವ್ಯವಸ್ಥೆ ಮಾಡಿದ್ದಾರೆ. ಎಂದು ನಿರ್ಲಜ್ಜವಾಗಿ ಕೃತಘ್ನರಾಗಿ ಮಾತನಾಡುತ್ತಿರುವುದನ್ನು ಕೇಳಿ ನಿಜಕ್ಕೂ ರಕ್ತ ಕುದಿಯುವಂತಾಯಿತು.
ವಾರಾತ್ಯಂತದಲ್ಲಿ ಸಾಲು ಸಾಲು ರಜೆ ಬಂದರೂ ನಮ್ಮ ಬೆಂಗಳೂರಿನಿಂದ ಪರಸ್ಥಳಗಳಿಗೆ ಹೋಗುವುದಕ್ಕೆ ಸರ್ಕಾರೀ ಮತ್ತು ಖಾಸಗೀ ಬಸ್ಸುಗಳನ್ನು ಹಾಕಲು ಹರಸಾಹಸ ಪಡುವಂತಹ ಸಮಯ ಇದ್ದಾಗ, ಯುದ್ಧ ನಡೆಯುತ್ತಿರುವ ದೇಶದಿಂದ ಇವರುಗಳನ್ನು ಸಕಲ ರಾಜ ಮಯಾದೆಯಿಂದ ಬಿರ್ಯಾನಿ ತಿನ್ನಿಸಿಕೊಂಡು ಕರೆದುಕೊಂಡು ಬರಬೇಕು ಎಂದು ಬಯಸುವ ಇಂತಹ ಪ್ರಭೂತಿಗಳ ಬೌದ್ಧಿಕ ದೀವಾಳಿತನಕ್ಕೆ ಏನನ್ನ ಬೇಕು? ಭಾರತದಲ್ಲಿ ಶಿಕ್ಷಣದ ವ್ಯವಸ್ಥೆ ಸರಿ ಇಲ್ಲಾ ಎಂದು ಮೂದಲಿಸಿ ವಿದೇಶದಲ್ಲಿ ವಿದ್ಯಾಭ್ಯಾಸಕ್ಕೆ ಹೋದ ಇಂತಹವರು ಅಟ್ಟ ಹತ್ತಿದ ನಂತರ ಏಣಿಯ ಹಂಗೇಕೇ? ಎಂದು ಹತ್ತಿದ ಏಣಿಯನ್ನೇ ಒದೆಯುವ ಇಂತಹ ಕೃತಘ್ನರಿಂದ ಇದಕ್ಕಿಂತಲೂ ಹೆಚ್ಚಿನದ್ದೇನು ನಿರೀಕ್ಷಿಸಲು ಸಾಧ್ಯವಿಲ್ಲ. ಇಂತಹ ದೇಶದ್ರೋಹಿಗಳನ್ನು ಕರೆತರಲು ನಮ್ಮ ನಿಮ್ಮೆಲ್ಲರ ತೆರಿಗೆ ಹಣವನ್ನೇಕೆ ಖರ್ಚು ಮಾಡಬೇಕಿತ್ತು? ಅವರನ್ನು ಕರೆತರಲು ಆದ ಸಂಪುರ್ಣ ವೆಚ್ಚವನ್ನು ಅವರಿಂದಲೇ ಕಕ್ಕಿಸಲೇಕು ಎಂಬ ಆಕ್ರೋಶವೂ ಮೂಡುತ್ತದೆ.
ಉಕ್ರೇನಿಂದ ಮುಂಬೈಗೆ ಬಂದಿಳಿದ ವಿದ್ಯಾರ್ಥಿನಿಯೊಬ್ಬಳ ಅಳಲು ಇದಕ್ಕಿಂತಲೂ ವಿಚಿತ್ರವಾಗಿದ್ದು, ಆಕೆಯನ್ನು ಸ್ವಾಗತಿಸಲು ಮುಂಬೈ ವಿಮಾನ ನಿಲ್ದಾಣದಲ್ಲಿ ಯಾರು ಇರಲಿಲ್ಲವಂತೆ ಮತ್ತು ವಿಮಾನ ನಿಲ್ದಾಣದಿಂದ ಆಕೆಯ ಮನೆಗೆ ತಲುಪಿಸಲು ಸರ್ಕಾರದಿಂದ ವಾಹನ ವ್ಯವಸ್ಥೆ ಮಾಡಿರದ ಕಾರಣ ಆಕೆ 300-400 ರೂಪಾಯಿ ಖರ್ಛು ಮಾಡಿಕೊಂಡು ತನ್ನ ಮನೆಗೆ ತಲುಪಿರುವ ಕರುಣಾಜನಕ ಕಥೆಯನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದನ್ನು ನೋಡಿದಾಗ ಬದುಕಿದೆಯಾ ಬಡಜೀವ ಎಂದು ಸುರಕ್ಷಿತವಾಗಿ ದೂರದ ಉಕ್ರೇನ್ ನಿಂದ ಅದೂ ಉಚಿತವಾಗಿ ಮುಂಬೈ ತಲುಪಿಸಿದ್ದೇ ಹೆಚ್ಚಾಗಿರುವಾಗ ಅದಕ್ಕಿಂತಲೂ ಹೆಚ್ಚಿನ ಸವಲತ್ತುಗಳನ್ನು ಅದು ಹೇಗೆ ನಿರೀಕ್ಷಿಸುತ್ತಾರೆ? ಎಂಬುದೇ ಅರ್ಥವಾಗುತ್ತಿಲ್ಲ.
ಇನ್ನು ಮೋದಿ ಮತ್ತು ಬಿಜೆಪಿ ಪಕ್ಷದ ವಿರುದ್ಧ ತಮ್ಮ ಸೈದ್ಧಾಂತಿಕ ವಿರೋದಾಭಾಸದಿಂದಾಗಿ ಕಮ್ಯೂನಿಷ್ಟ್ ಮನಸ್ಥಿಯ ಮಾಧ್ಯಮದವರು ಹುಡುಕೀ ಹುಡುಕೀ ಒಲ್ಲದ ಗಂಡನಿಗೆ ಮೊಸರಿನಲ್ಲೂ ಕಲ್ಲು ಎನ್ನುವಂತೆ ಇಂತಹ ಪ್ರಭೂತಿಗಳ ವೀಡಿಯೋಗಳನ್ನೇ ತೋರಿಸುತ್ತಾ ದೇಶದ ಮಾನ ಹರಾಜು ಹಾಕುತ್ತಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧವೇ ಸರಿ.
ವಿನಾಕಾರಣ ಒಬ್ಬ ವಿದ್ಯಾರ್ಥಿಯ (ಅದರಲ್ಲೂ ಕನ್ನಡಿಗ) ಸಾವನ್ನಪ್ಪಿದ್ದಕ್ಕೆ ದುಃಖವಿದ್ದರೂ, ಇದಕ್ಕೆ ಸಂಬಂಧವೇ ಪಡದ ಭಾರತದ ಸರ್ಕಾರವನ್ನೂ ಮೋದಿಯವರನ್ನು ತೆಗಳುವ ವಿರೋಧ ಪಕ್ಷಗಳು ಮತ್ತು ಮಾಧ್ಯಮದವರು, ಸಾವಿರಾರು ವಿದ್ಯಾರ್ಥಿಗಳನ್ನು ರಕ್ಷಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಲೂ ಮುಜುಗರ ಪಡುತ್ತಿರುವುದು ಹೇಸಿಗೆ ತರಿಸುತ್ತಿದೆ. ಭಾರತ ತ್ರಿವರ್ಣಧ್ವಜ ಹಿಡಿದುಕೊಂಡು ನಮ್ಮ ಪ್ರಾಣ ಉಳಿಯಿತು ಎಂದು ಪಾಕಿಸ್ತಾನದ ವಿದ್ಯಾರ್ಥಿಗಳೂ ಹೆಮ್ಮೆಯಿಂದ ಭಾರತಕ್ಕೆ ಧನ್ಯತಾಭಾವವನ್ನು ಅರ್ಪಿಸುತ್ತಿರುವಾಗ ಈ ಗುಲಾಮರಿಗೇಕೆ ಭಾರತದ ಮಹತ್ವ ಅರಿವಾಗುತ್ತಿಲ್ಲ? ಎಂಬ ಕೋಪವೂ ಬರುತ್ತದೆ.
ಕರ್ನಾಟಕದ ಮಟ್ಟಿಗೆ ಹೇಳಬೇಕೆಂದರೆ, ವೈದ್ಯಕೀಯ ಶಿಕ್ಷಣದ ಬಹುತೇಕ ಕಾಲೇಜುಗಳು ಇರುವುದೇ ಇಡೀ ಡಿಕೆಶಿ, ಪರಮೇಶ್ವರ್, ಜಾಲಪ್ಪ, ಕೋರೆ ಮತ್ತು ಮಠ ಮಾನ್ಯಗಳ ಹಿಡಿತದಲ್ಲಿಯೇ. ಇವೆರಲ್ಲರಿಗೂ ಉಕ್ರೇನಿನಿಂದ ಬಂದ ಮಕ್ಕಳ ಬಗ್ಗೆ ಕಾಳಜಿ ಇದ್ದಲ್ಲಿ ತಮ್ಮ ಕಾಲೇಜುಗಳಲ್ಲಿ ಉಚಿತ ಬೇಡ ಕನಿಷ್ಟ ಶುಲ್ಕದಲ್ಲಿ ವಿದ್ಯೆಯನ್ನು ಮುಂದುವರೆಸಲು ಅನುವು ಮಾಡಿಕೊಡಲು ಸಾಧ್ಯವೇ?
ಸ್ವದೇಶದಲ್ಲೇ ಆಗಲೀ ವಿದೇಶದಲ್ಲೇ ಆಗಲಿ ಕಲಿತ ವಿದ್ಯೆಯಿಂದ ದೇಶ ಪ್ರೇಮ, ಸೌಜನ್ಯ, ವಿನಯ, ವಿವೇಕ ಮತ್ತು ವಿವೇಚನೆ ಬಾರದೇ ಹೋದಲ್ಲಿ ಅವರು ಕಲಿತ ವಿದ್ಯೆ ಕಳ್ಳಿಯ ಹಾಲಿಗೆ ಸಮಾನ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ