ಉಕ್ರೇನಿನ ನೈಜ ಮುಖ

ಕಾಲು ಕೆರೆದುಕೊಂಡು ರಷ್ಯಾದ ವಿರುದ್ಧ ಯುದ್ದ ಮಾಡಲು ಹೋಗಿ ತಪರಾಕಿ ಹಾಕಿಸಿಕೊಳ್ಳುತ್ತಿರುವ ಉಕ್ರೇನಿನ ನೆರೆ ರಾಷ್ಟ್ರಗಳಿಂದ ಉಕ್ರೇನಿನಲ್ಲಿ ಸಿಲಿಕಿಕೊಂಡಿರುವ ಭಾರತೀಯರು ಅದರಲ್ಲೂ ವಿಶೇಷವಾಗಿ ವೈದ್ಯಕೀಯ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಭಾರತ ಸರ್ಕಾರ ಮಾನವೀಯತೆಯ ದೃಷ್ಟಿಯಿಂದ ಆಪರೇಷನ್ ಗಂಗಾ ಮೂಲಕ ಭಾರತಕ್ಕೆ ಕರೆತರುವ ಪ್ರಯಾಸದಲ್ಲಿದ್ದರೆ, ಕಮ್ಯೂನಿಷ್ಟ್ ಮನಸ್ಥಿತಿಯ ಬಹುತೇಕ ಮಾಧ್ಯಮಗಳು ಹುಡುಕಿ ಹುಡುಕೀ ಭಾರತ ಸರ್ಕಾರದ ಉಚಿತ ವಿಮಾನದಲ್ಲೇ ಬಂದು ಅದೇ ಭಾರತ ಸರ್ಕಾರ ವಿರುದ್ಧ ಮಾತನಾಡುವವರ ಸಂದರ್ಶನವನ್ನು ಪ್ರಸರಿಸಿ ಪರೋಕ್ಷವಾಗಿ ಆಪರೇಷನ್ ಗಂಗಾ ಎನ್ನುವುದು ವಿಫಲ ಪ್ರಯತ್ನ ಎಂಬುದನ್ನೇ ತೋರಿಸಲು ಪ್ರಯತ್ನಿಸಿತ್ತಿದ್ದಾಗ ಸುಮಾರು 30 ವರ್ಷಗಳ ಕಾಲ ಉಕ್ರೇನ್‌ನಲ್ಲಿ ತಮ್ಮ ಕಾರ್ಯದ ನಿಮಿತ್ತ ನೆಲೆಸಿರುವ ಶ್ರೀಮತಿ ರುಚಿ ಶುಕ್ಲಾ ಅವರು ಉಕ್ರೇನ್‌ನಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳ ಬಗ್ಗೆ ಬರೆದಿದ್ದ ಲೇಖನದ ಭಾವಾನುವಾದ ಹೀಗಿದೆ.

ಶ್ರೀಮತಿ ರುಚಿ ಶುಕ್ಲಾರವರು ಉಕ್ರೇನಿನ ದೊಡ್ಡ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು ತಮ್ಮ ಕಂಪನಿಯಲ್ಲಿ ಕೆಲಸಕ್ಕಾಗಿ ನೂರಾರು ಉಕ್ರೇನಿಯನ್ ಕಾರ್ಮಿಕರನ್ನು ನೇಮಿಸಿಕೊಂಡಿದ್ದಾರೆ. 90ರ ದಶಕದಲ್ಲಿ ರಷ್ಯಾದಿಂದ ವಿಭಜನೆಗೊಂಡ ನಂತರ ಉಕ್ರೇನಿಯನ್ನರು ರಾಷ್ಟ್ರವನ್ನು ಪಡೆದರೇ ವಿನಃ ಅವರ ರಾಷ್ಟ್ರೀಯತೆಯಲ್ಲಿ ಕೊಂಚವೂ ಬದಲಾಗಲಿಲ್ಲ.

ಮೂಲತಃ ರಷ್ಯನ್ನರು ಕಷ್ಟ ಪಟ್ಟು ಡುಡಿಯುವ ಶ್ರಮಜೀವಿಗಳಾದರೆ, ಉಕ್ರೇನಿಯನ್ನರು ಹೆಚ್ಚು ಸಿನಿಕತನದ ಮನಸ್ಥಿತಿಯುಳ್ಳವರಾಗಿದ್ದು ಕಷ್ಟ ಪಡದೇ ಐಶಾರಾಮ್ಯವಾಗಿ ಇರಲು ಬಹಸುತ್ತಾರ. ಹಾಗಾಗಿ, ಒಬ್ಬ ಸಾಮಾನ್ಯ ಉಕ್ರೇನಿಯನ್ ಸಹ ಕೇವಲ 10 ಡಾಲರ್ಗಳಿಗಾಗಿ ಮತ್ತೊಬ್ಬ ಉಕ್ರೇನಿಯನ್ನನನ್ನು ಹೊಡೆದು ಕೊಲ್ಲಲೂ ಹೇಸುವುದಿಲ್ಲ ಎನ್ನುವುದು ವಿಪರ್ಯಾಸವಾಗಿದೆ.

ಉಕ್ರೇನ್ ಮತ್ತು ಟರ್ಕಿ ದೇಶದ ಬಹುತೇಕ ನಾಗರೀಕರ ಚರ್ಮದ ಬಣ್ಣ ಬಿಳಿಯದ್ದಾಗಿರುವುದರಿಂದ, ತಮ್ಮನ್ನು ತಾವು ಯುರೋಪಿಯನ್ ಯೂನಿಯನ್ನಿನವರು ಎಂಬ ಭ್ರಮಾಲೋಕದಲ್ಲಿ ಸದಾ ತೇಲುತ್ತಿರುವುದಲ್ಲದೇ ಅದೇ ಗುಂಗಿನಲ್ಲಿ ಸಾಲ ಮಾಡಿಯಾದರೂ ತುಪ್ಪಾ ತಿನ್ನು ಎನ್ನುವಂತೆ ಸಮಯಕ್ಕೊಂದು ಸುಳ್ಳನ್ನು ಹೇಳುತ್ತಾ ಮದಿರೆ ಮತ್ತು ಮಾನನಿಯರ ನಶೆಯಲ್ಲಿ ತೇಲಾಡುತ್ತಿರುತ್ತಾರೆ. ಉಕ್ರೇನಿನ ವಿಮಾನ ನಿಲ್ದಾಣದಲ್ಲಿ ವಿದೇಶಿಗರು ಇಳಿಯುತ್ತಿದ್ದಂತೆಯೇ, ಅಲ್ಲಿಂದಲೇ ಅವರ ಲೂಟಿ ಆರಂಭವಾಗುತ್ತದೆ. ಅಲ್ಲಿನ ಪ್ರತಿಯೊಬ್ಬರಿಗೂ ಅಮೇರಿಕನ್ ಡಾಲರ್ ಇಲ್ಲವೇ ಯೂರೋ ಕೊಡಿ ಎಂದು ದಂಬಾಲು ಬೀಳುತ್ತಾರೆ. ಅವರ ಗೋಳನ್ನು ತಡೆಯಲಾರದೇ ಕನಿಕರದಿಂದ ಅಕಸ್ಮಾತ್ ಉಕ್ರೇನ್ ಕರೆನ್ಸಿ ಕೊಡುತ್ತಿದ್ದಂತೆಯೇ ಮಾನ ಮಾರ್ಯಾದೆ ಇಲ್ಲದೇ ಮುಖದ ಮೇಲೆ ಹೊಡೆದಂತೆ ಅವರ ಭಾಷೆಯಲ್ಲಿ ನಿಂದಿಸಲಾರಂಭಿಸುತ್ತಾರೆ.

ಭಾರತದಲ್ಲಿ ಪೆಟ್ರೋಲ್ ಬೆಲೆ 100ಕ್ಕೆ ಬಂದ ತಕ್ಷಣವೇ ಬೊಬ್ಬಿರಿಯುವ ಮಂದಿಯೇ ಹೆಚ್ಚಾಗಿರುವಾಗ ಇಲ್ಲಿನ ಪರಿಸ್ಥಿತಿ ಅದಕ್ಕಿಂತಲು ಭಿನ್ನವಾಗಿದ್ದು. ತೈಲದ ಬೆಲೆ ವಿಪರೀತವಾಗಿರುವ ಕಾರಣ, ಹೆಚ್ಚಿಗಾಗಿ ತೈಲವನ್ನು ಕುಡಿಯುವ ಅಲ್ಲಿ ದೊಡ್ಡ ದೊಡ್ಡ ಕಾರುಗಳನ್ನು ಕಾಣುವುದು ಅಪರೂಪವಾಗಿದ್ದು ಸಣ್ಣ ಸಣ್ಣ ಕಾರುಗಳು ಅದರಲ್ಲೂ ಯುರೋಪಿನಲ್ಲಿ ಉಪಯೋಗಿಸಿ ಬಿಟ್ಟ ಸೆಕೆಂಡ್ ಹ್ಯಾಂಡ್ ಕಾರುಗಳದ್ದೇ ಪಾರುಪತ್ಯವಾಗಿದೆ. ಹಾಗಾಗಿ ಇಲ್ಲಿ ಸಂತೃಪ್ತನಾಗಿ ನಗುತ್ತಿರುವ ವ್ಯಕ್ತಿಯನ್ನು ಕಾಣುವುದು ಬಲು ಅಪರೂಪವಾಗಿದ್ದು, ಸದಾ ಕಾಲವೂ ಖೂಳ ಮನಸ್ಥಿತಿಯ ಮೋಸ, ವಂಚನೆ ಮತ್ತು ಕಳ್ಳತನದ ಮನಸ್ಥಿತಿಯವರೇ ಹೆಚ್ಚಾಗಿರುವ ಕಾರಣ ಕಳ್ಳತನ ಇಲ್ಲಿ ಸರ್ವೇಸಾಮಾನ್ಯವಾಗಿದೆ. ಅಪ್ಪೀ ತಪ್ಪೀ ವಿದೇಶಿಗರು ಉಕ್ರೇನ್ ಹುಡುಗಿಯೊಂದಿಗೆ ಗೆಳೆತನ ಬೆಳಸಿಕೊಂಡು ಅವಳೊಂದಿಗೆ ಬಿಯರ್ ಕುಡಿಯಲು ಹೋರಟರೆಂದರೆ ಅವರು ಬರ್ಬಾದ್ ಆಗುವುದು ನಿಶ್ಚಿತವಾಗಿದೆ. ಹಾಗೆ ವಿದೇಶಿಗರೊಂದಿಗೆ ಹೋಗುವ ಹುಡುಗಿ ಅವಳೊಂದಿಗೆ ತನ್ನ ಸ್ನೇಹಿತರನ್ನೂ ಕರೆದುಕೊಂಡು ಬಂದು ವಿದೇಶಿಗರ ಮೈ ಮೇಲೆ ಬಟ್ಟೆಯೂ ಉಳಿಯದಂತೆ ದೋಚಿ ಅವರನ್ನು ಬೀದಿಗೆ ಬೀಳಿಸುವ ಅನೇಕ ಘಟನೆಗಳು ಇಲ್ಲಿ ಕಾಣಬಹುದಾಗಿದೆ. ಉಕ್ರೇನ್‌ನಲ್ಲಿ ನಿರುದ್ಯೋಗದ ಸಮಸ್ಯೆ ಅತಿಯಾಗಿದ್ದು ಕೇವಲ $500 ಉದ್ಯೋಗವನ್ನು ಪಡೆಯುವುದೇ ಒಂದು ಅದೃಷ್ಟವೆಂದು ಪರಿಗಣಿಸಲಾಗಿದೆ.

ಇವೆಲ್ಲದರ ಅರಿವಿಲ್ಲದ ಭಾರತೀಯರು ಸಾಮಾಜಿಕ ಅಂತರ್ಜಾಲದಲ್ಲಿ ಕಣ್ಣು ಕೋರೈಸುವಂತೆ ಕಾಣುವ ವೈದ್ಯಕೀಯ ಕಾಲೇಜುಗಳನ್ನು ನೋಡಿ ತಮ್ಮ ಮಕ್ಕಳಿಗೆ ಭಾರತದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಅರ್ಹತೆ ಪಡೆದಿಲ್ಲವಾದ ಕಾರಣ, ಏಜೆಂಟರುಗಳ ಮೂಲಕ 30-40 ಲಕ್ಷಕ್ಕೆ ವ್ಯವಹಾರವನ್ನು ಕುದುರಿಸಿ ತಮ್ಮ ಮಕ್ಕಳನ್ನು ಉಕ್ರೇನಿನ ವೈದ್ಯಕೀಯ ಕಾಲೇಜಿಗಳಿಗೆ ಸೇರಿಸಿ ತಮ್ಮ ಮಕ್ಕಳು ವಿದೇಶದಲ್ಲಿ ಓದುತ್ತಿದ್ದಾರೆ ಎಂದು ಹೆಮ್ಮೆ ಪಡುತ್ತಾರೆಯೇ ಹೊರತು ಅಲ್ಲಿ ತಮ್ಮ ಮಕ್ಕಳು ಹೇಗೆ ಓದುತ್ತಿದ್ದಾರೆ ಅಲ್ಲಿಯ ಶಿಕ್ಷಣದ ಗುಣಮಟ್ಟ ಹೇಗಿದೆ ಎಂಬುದರ ಪರಿಚಯ ಮಾಡಿಕೊಳ್ಳಲು ಮುಂದಾಗದೇ ಹೋಗುವುದು ನಿಜಕ್ಕೂ ಅಚ್ಚರಿ ಎನಿಸುತ್ತದೆ. ಭಾರತದಿಂದ ಇಲ್ಲಿಗೆ ವೈದ್ಯಕೀಯ ಶಿಕ್ಷಣ ಪಡೆಯಲು ಬರುವ ಹೆಚ್ಚಿನ ಮಕ್ಕಳು ಹರಿಯಾಣ, ಪಂಜಾಬ್‌, ಆಂಧ್ರ ಪ್ರದೇಶದ ಭೂಮಾಲೀಕರ ಮಕ್ಕಳೋ ಇಲ್ಲವೇ ಲಂಚದಿಂದ ಕೊಬ್ಬಿರುವ ಸರ್ಕಾರಿ ಅಧಿಕಾರಿಗಳ ಮಕ್ಕಳೇ ಹೆಚ್ಚಾಗಿದ್ದು ಕೇವಲ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ನಿಜವಾದ ಶಿಕ್ಷಣಕ್ಕಾಗಿ ಬಂದಿರುತ್ತಾರೆ ಎನ್ನುವುದು ಕಠು ಸತ್ಯವಾಗಿದೆ. ಹೀಗೆ ಅಪ್ಪನ ದುಡ್ಡಿನಲ್ಲಿ ಬರುವ ಮಕ್ಕಳು ಇಲ್ಲಿ ಓದುವುದಕ್ಕಿಂತಲು ಮೋಜು ಮಸ್ತಿಯಲ್ಲೇ ಕಳೆದು ಹೋಗಿ ಅಂತಿಮವಾಗಿ ಅಲ್ಲಿನ ಪ್ರಾಧ್ಯಾಪಕರ ಕೈ ಬಿಸಿ ಮಾಡಿ ತಮಗೆ ಬೇಕಾದಷ್ಟು ಅಂಕಗಳನ್ನು ಪಡೆದುಕೊಂಡು ಹೆಮ್ಮೆಯಿಂದ ತಾವೂ ಸಹಾ ವೈದ್ಯರಾದೆವೆಂದು ಭಾರತಕ್ಕೆ ಬರುತ್ತಾರೆ. ಇನ್ನು ಅಂಕಕ್ಕಾಗಿ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದರೂ ಅದನ್ನು ತೋರಿಸಿಕೊಳ್ಳದೇ ಭಾರತಕ್ಕೆ ಹಿಂದಿರುಗುವುದು ನಿಜಕ್ಕೂ ದುಃಖಕರವಾದ ಸಂಗತಿಯಾಗಿದೆ. ಹೀಗೆ ಅಲ್ಲಿಂದ ಭಾರತಕ್ಕೆ ಬಂದವರು ಇಲ್ಲಿ ವೈದ್ಯಕೀಯ ವೃತ್ತಿಯನ್ನು ಮಾಡುವ ಸಲುವಾಗಿ ನಡೆಸಲಾಗುವ ಪರೀಕ್ಷೆಯಲ್ಲಿ ಏಕೆ ಉತ್ತೀರ್ಣರಾಗುವುದಿಲ್ಲ ಎಂಬುದು ಈಗ ನಿಮಗೆ ಅರ್ಥವಾಗಿರಬೇಕು.

ನಿಜ ಹೇಳ ಬೇಕೆಂದರೆ ಉಕ್ರೇನಿನ ಆ ವೈದ್ಯಕೀಯ ಕಾಲೇಜುಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅಷ್ಟೇನೂ ಹೆಸರಿಲ್ಲದಿದ್ದರೂ ಭಾರತದ ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗದ ಇಲ್ಲವೇ ಮೀಸಲಾತಿಯಿಂದಾ ಪ್ರತಿಭೆ ಇದ್ದರೂ ಇಲ್ಲಿ ಅವಕಾಶ ಪಡೆಯದೇ ಹಣ ಕೊಟ್ಟು ಓದಲು ದುಬಾರಿಯಾದ ಕಾರಣ 10-15 ಲಕ್ಷಗಳನ್ನು ಉಳಿಸುವ ಸಲುವಾಗಿ ಇಲ್ಲಿಗೆ ಓದಲು ಬರುವ ವಿದೇಶಿಗರಿಗೆ ಅವರ ಕಾಲೇಜಿನಲ್ಲಿಯೂ ದ್ವಿತೀಯ ದರ್ಜೆಯವರಂತೆಯೇ ಪರಿಗಣಿಸಲಾಗುತ್ತದೆಯಲ್ಲದೇ, ಉಕ್ರೀನಿನವರೊಂದಿಗೆ ಅವರಿಗೆ ಶಿಕ್ಷಣ ಕೊಡದೇ ವಿದೇಶಿಗರಿಗಾಗಿಯೇ ಪ್ರತ್ಯೇಕ ವಿಭಾಗವಿದ್ದು ಅದನ್ನು ಸ್ಥಳೀಯ ವಿದ್ಯಾರ್ಥಿಗಳು ಕಸದ ವಿಭಾಗ ಎಂದೇ ಮೂದಲಿಸಲಾಗುತ್ತದೆ.

ಬಹುತೇಕ ಅಮೇರಿಕಾದ ಕೃಪಾಶೀರ್ವಾದದಿಂದಲೇ ನಡೆಯುತ್ತಿರುವ ಕಾರಣ ಆ ದೇಶದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿರುವುದ ಕಾರಣ, ಪ್ರತಿಯೊಬ್ಬ ಉಕ್ರೇನಿಯನ್ ಪ್ರಜೆಯ ಮೇಲೂ ಸಾವಿರಾರು ರೂಪಾಯಿಯ ಸಾಲವಿದ್ದು ಇಡೀ ದೇಶ ಸಾಲಗಾರ ದೇಶವಾಗಿದೆ. ಇನ್ನು ಅಲ್ಲಿನ ಪ್ರಧಾನಿಯ ಬಗ್ಗೆ ಹೇಳುವುದಕ್ಕಿಂತಲೂ ಹೇಳದೇ ಇರುವುದೇ ಲೇಸು. ರಂಗದ ಮೇಲೆ ಚೆನ್ನಾಗಿ ನಟಿಸುತ್ತಾನೆಂದೂ ಹಾಸ್ಯ ಕಲಾವಿದ ಎಂದು ಅಲ್ಲಿನ ಜನರು ಅವರನ್ನು ದೇಶದ ಪ್ರಧಾನಿಯನ್ನಾಗಿ ಮಾಡಿದರೆ ಆತ ನಿಶ್ಪ್ರಯೋಜನಕನಾಗಿ ಕೋಡಂಗಿ ಕಾಣಿಸುಕೊಳ್ಳುತ್ತಿದ್ದಾನೆ. ತನ್ನ ಲಿಮೋಸಿನ್‌ ನಲ್ಲಿ ಕುಳಿತು ಜನರತ್ತ ಕೈ ಬೀಸುವುದೇ ಘನಕಾರ್ಯ ಎಂದು ನಂಬಿದ್ದಾನೆ. ಅಮೇರಿಕಾ ಮತ್ತು ನ್ಯಾಟೋ ಸದಾಕಾಲವೂ ತನ್ನ ರಕ್ಷಣೆಗಾಗಿ ನಿಲ್ಲುತ್ತಾರೆ ಎಂದು ನಂಬಿ ಕಾಲು ಕೆರೆದುಕೊಂಡು ರಷ್ಯಾದ ಮೇಲೆ ಯುದ್ಧಕ್ಕೆ ಹೋಗಿ ರಷ್ಯಾದ ಸೈನಿಕರ ಧಾಳಿಯನ್ನು ತಡೆಯಲಾರದೇ ಸೋತು ಸುಣ್ಣವಾಗಿ ತನ್ನ ಪ್ರಜೆಗಳ ಕೈಯ್ಯಲ್ಲಿ ಶಸ್ತ್ರಾಸ್ತ್ರಗಳನ್ನು ಕೊಟ್ಟು ದೇಶದ ರಕ್ಷಣೆ ಮಾಡಿ ಎಂದು ಗೋಗರೆಯುತ್ತಿರುವುದು ಕೊಟ್ಟೋನು ಕೊಂಡಂಗಿ ಈಸ್ಕೊಂಡೋನು ಈರಭಧ್ರ ಎಂಬ ಗಾದೆಯನ್ನು ನೆನಪಿಸುತ್ತಿದೆ.

ರೀಲ್ ಮೇಲೆ ಹೀರೋಗಳಾಗಿ ಮೆರೆದವರನ್ನು ತಪ್ಪಾಗಿ ಆಡಳಿತಗಾರರನ್ನಾಗಿ ಆಯ್ಕೆ ಮಾಡಿದ ಪರಿಣಾಮವನ್ನು ರಿಯಲ್ಲಾಗಿ ಅನುಭವಿಸ ಬೇಕಾಗುತ್ತಿದೆ. ಸ್ವಾತಂತ್ರ್ಯ ಎಂದರೆ ಸ್ವೇಚ್ಚಾಛಾರವಲ್ಲ ಮತ್ತು ಅವ್ಯವಸ್ಥೆಯ ಅಗರವಂತೂ ಅಲ್ಲವೇ ಅಲ್ಲ. ಸ್ವಾತಂತ್ರ್ಯ ಎಂದರೆ ಸ್ಥಿರ ಮತ್ತು ಸರಿಯಾದ ಆಯ್ಕೆಗಳು ಎಂಬುದು ಅಲ್ಲಿನ ಜನರಿಗೆ ಈಗ ಅರ್ಥವಾಗುತ್ತಿದೆ. ಇಂತಹ ಪರಿಸ್ಥಿತಿ ಕೇವಲ ಉಕ್ರೇನಿಗೆ ಮಾತ್ರವೇ ಸೀಮಿತವಾಗಿರದೇ, ಪೂರ್ವ ಯುರೋಪಿನ ಬಹುತೇಕ ಎಲ್ಲಾ ದೇಶಗಳ ಸ್ಥಿತಿ ಇದೇ ರೀತಿಯಾಗಿದೆ. ಜನರು ಸ್ವಾತಂತ್ರ್ಯವನ್ನು ಅಪಹಾಸ್ಯ ಮಾಡಿದಾಗ, ಅವರ ಭವಿಷ್ಯವು ಅಫ್ಘಾನಿಸ್ತಾನ, ವೆನೆಜುವೆಲಾ ಮತ್ತು ಉಕ್ರೇನ್‌ನಂತೆಯೇ ಆಗುತ್ತದೆ.

ಅದೃಷ್ಠವಷಾತ್ ಸದ್ಯದಲ್ಲಿ ನಮ್ಮ ದೇಶದಲ್ಲಿ ದಕ್ಷ ಆಡಳಿತಗಾರನಿದ್ದ ಪರಿಣಾಮ ದೇಶ ಆರ್ಥಿಕವಾಗಿ ಸಧೃಢವಾಗಿರುವುದಲ್ಲದೇ, ದಕ್ಶವಾಗಿದ್ದು ಅಮೇರಿಕಾ, ಚೀನಾ, ಯುರೋಪಿನ ಹತ್ತು ಹಲವಾರು ದೇಶಗಳು ಉಕ್ರೇನಿನಲ್ಲಿದ್ದ ತಮ್ಮವರನ್ನು ತಮ್ಮ ದೇಶಕ್ಕೆ ಕರೆದುಕೊಂಡು ಹೋಗಲು ಪರದಾಡುತ್ತಿದ್ದಾಗ ನಮ್ಮ ಹೆಮ್ಮೆ ಭಾರತ ದೇಶದ ಮಂತ್ರಿಗಳು ಉಕ್ರೇನಿನ ಗಡಿಯಲ್ಲಿನಿಂತು ಅಪರೇಷನ್ ಗಂಗಾ ಹೆಸರಿನಲ್ಲಿ ಉಕ್ರೇನಿನಲ್ಲಿ ಸಿಲಿಕಿಕೊಂಡ ಭಾರತೀಯರನ್ನು ಸುರಕ್ಷಿತವಾಗಿ ಅದೂ ಉಚಿತವಾಗಿ ಕರೆತರುತ್ತಿರುವುದು ಶ್ಲಾಘನೀಯವಾದ ಅಂಶವಾಗಿದೆ.

ಉಪಕಾರ ಮಾಡಿದವರಿಗೆ ಕೃತಜ್ಞತೆಯನ್ನು ಹೇಳದೇ ಹೋದರೂ ಪರವಾಗಿಲ್ಲ. ಆದರೆ ದಾನಕ್ಕೆ ದಟ್ಟಿ ಕೊಟ್ಟರೆ ಹಿತ್ತಲಲ್ಲಿ ಹೋಗಿ ಮೊಳ ಹಾಕಿ ನೋಡಿದರು ಎನುವಂತೆ ಅದರೆ ಉಪಕಾರ ಮಾಡಿದವರನ್ನೇ ಸಾರ್ವಜನಿಕವಾಗಿ ದೂಷಿಸುವನು ಕೃತಘ್ನರೇ ಸರಿ. ಇಂತಹ ದೇಶದ್ರೋಹಿಗಳಿಗೆ ನಮ್ಮ ತೆರಿಗೆ ಹಣವನ್ನು ಖರ್ಚು ಮಾಡಬೇಕಾಯಿತಲ್ಲಾ ಎನ್ನುವುದೇ ಬಹುತೇಕ ಭಾರತೀಯರ ಅಳಲಾಗಿದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

2 thoughts on “ಉಕ್ರೇನಿನ ನೈಜ ಮುಖ

Leave a comment