ಕನ್ನಡ ವೀರ ಸೇನಾನಿ ಮ. ರಾಮಮೂರ್ತಿ

1956ರಲ್ಲಿ ಹತ್ತಾರು ಕಡೆ ಹರಿದು ಹಂಚಿ ಹೋಗಿದ್ದ ಪ್ರಾಂತ್ಯಗಳನ್ನು  ಭಾಷಾವಾರು ಅಧಾರದ ಮೇಲೆ  ರಾಜ್ಯಗಳನ್ನು ವಿಂಗಡಿಸಿ ಮೈಸೂರು ರಾಜ್ಯವಾದರೂ ಕನ್ನಡಿಗರಿಗೆ ಸಿಗಬೇಕಾದ ಗೌರವಗಳು ಸಿಗದೇ ಇನ್ನೂ  ಪರಕೀಯನಾಗಿಯೇ ಇದ್ದ.  ಅದೂ ರಾಜಧಾನಿಯಾದ ಬೆಂಗಳುರಿನಲ್ಲಿಯೇ ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳು ದೊರಕದಿದ್ದ ಸಂದರ್ಭದಲ್ಲಿ ಅನಕೃ ಅವರ ನೇತೃತ್ವದಲ್ಲಿ ಚಳುವಳಿ ಆರಂಭವಾದಾಗ ಅದರ ಮುಂದಾಳತ್ವವನ್ನು ವಹಿಸಿದ, ಕನ್ನಡ ಹೋರಾಟಕ್ಕೆ ಹೊಸ ಆಯಾಮ ನೀಡಿ, ಕನ್ನಡಿಗರ ಅಸ್ದಿತ್ವ ಮತ್ತು ಅಸ್ಮಿತಿಯನ್ನು ಎತ್ತಿ ಹಿಡಿಯಲು ಅವರನ್ನು ಒಗ್ಗೂಡಿಸಲು, ಹಳದಿ ಮತ್ತು ಕೆಂಪು ಬಣ್ಣದ ಬಾವುಟವನ್ನು… Read More ಕನ್ನಡ ವೀರ ಸೇನಾನಿ ಮ. ರಾಮಮೂರ್ತಿ

ಸಾಹಿತ್ಯರತ್ನ ಚಿ. ಉದಯಶಂಕರ್

ಡಾ. ರಾಜ್ ಅವರ ಸಹಭಾವಚಿತ್ರ “ಜೀವನ ಚೈತ್ರ”ದ ಅಭಿನಯದಲ್ಲಿ ತಮ್ಮ ಅಮೋಘ ಕಾರ್ಯಗಳಿಂದ ನಿರ್ಮಾಪಕರಾಗಿ, ಸಂಭಾಷಣಕಾರರಾಗಿ, ಸಂಗೀತ ನಿರ್ದೇಶಕರಾಗಿ ನಟನಾಗಿ ಕನ್ನಡ ಚಲನಚಿತ್ರ ರಂಗದಲ್ಲಿ ಅಜ್ಞಾತವಾಗಿ ಮಹತ್ವದ ಪಾತ್ರ ನಿರ್ವಹಿಸಿದ ಚಿ. ಉದಯಶಂಕರ್ ಅವರ ಕುರಿತು ತಿಳಿಯಲು ಈ ಮಹಾನ್ ಕನ್ನಡಿಗರ ಬಗ್ಗೆ ನಾವು ಓದಿರಬಹುದು. … Read More ಸಾಹಿತ್ಯರತ್ನ ಚಿ. ಉದಯಶಂಕರ್

EatOut

ಧಾರವಾಡದ ಸಾಧನ ಕೇರಿಯಲ್ಲಿ ನಿಂತು ಕಲ್ಲೆಸೆದರೆ ಅದು ಒಂದಲ್ಲಾ ಒಂದು ಸಾಹಿತಿಗಳ ಮನೆಯ ಮೇಲೆ ಬೀಳುವಂತೆ  ಬೆಂಗಳೂರಿನ ವಿದ್ಯಾರಣ್ಯಪುರದ ಯಾವುದೇ ಭಾಗದಲ್ಲಿ ನಿಂತು ಕಲ್ಲೆಸೆದರೆ ಅದು ಬೀಳುವುದು ಒಂದೋ ಯಾವುದಾದರೂ ಐಟಿ ಬಿಟಿ ಕಂಪನಿಯಲ್ಲಿ ಕೆಲಸಮಾಡುತ್ತಿರುವ ಉದ್ಯೋಗಿಯ ಮನೆಗೋ ಇಲ್ಲವೇ ಯಾವುದಾದರೂ ಉಪಹಾರ ಗೃಹಗಳಿಗೋ  ಎಂದರೆ ಅತಿಶಯೋಕ್ತಿಯೇನಲ್ಲ. ಮಧ್ಯಮ ವರ್ಗದವರು ಇಲ್ಲವೇ ತುಸು ಹೆಚ್ಚಿನ ಮಧ್ಯಮವವರ್ಗದವರೇ ಹೆಚ್ಚಾಗಿಯೇ ನೆಲಸಿರುವ ವಿದ್ಯಾರಣ್ಯಪುರ, ಪ್ರಖ್ಯಾತವಾಗಿರುವುದು  ಇಲ್ಲಿರುವ ಜಗತ್ಪ್ರಸಿದ್ಧ ದೇವಾಲಯಗಳಿಗೆ ಮತ್ತು  ಕೈಗೆಟುಕುವ ಬೆಲೆಯಲ್ಲಿ ರುಚಿ ರುಚಿಯಾಗಿ ಸಿಗುವ ಬಗೆ ಬಗೆ… Read More EatOut

ಗುರುದತ್

ನಮ್ಮ ಕರ್ನಾಟಕದ ಪಡುಕೋಣೆ ಎಂಬ ಊರಿನ ಹೆಸರು ಕ್ರೀಡಾಜಗತ್ತಿನಲ್ಲಿ ಮತ್ತು ಚಲನಚಿತ್ರರಂಗದಲ್ಲಿ ಸಾಕಷ್ಟು ಚಿರಪರಿತವಾಗಿದೆ. ತಂದೆ ಪ್ರಕಾಶ್ ಪಡುಕೋಣೆ 1980ರಲ್ಲಿ ಆಲ್ ಇಂಗ್ಲೇಂಡ್ ಬ್ಯಾಂಡ್ಮಿಂಟನ್ ಛಾಂಪಿಯನ್ ಆಗುವ ಮೂಲಕ ಚಿರಪರಿಚಿತರಾದರೆ ಅವರ ಮಗಳು ದೀಪಿಕ ಪಡುಕೋಣೆ ಕಳೆದ ಎಂಟು ಹತ್ತು ವರ್ಷಗಳಿಂದ ಜನಪ್ರಿಯ ನಾಯಕಿಯಾಗಿ ಮಿಂಚುತ್ತಿದ್ದಾಳೆ. ಅದರೆ 1940ರಲ್ಲೇ ಪಡುಕೋಣೆ ಹೆಸರನ್ನು ದೇಶಾದ್ಯಂತ ಪಸರಿಸಿದ ಹೆಸರಾಂತ ಚಿತ್ರಕಾರ, ನಟ, ನೃತ್ಯ ಸಂಯೋಜಕ,ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದ ಅಪ್ಪಟ ಕನ್ನಡಿಗ ಗುರುದತ್ ಶಿವಶಂಕರ್ ಪಡುಕೋಣೆ. ಎಲ್ಲರ ಪ್ರೀತಿಯ ಗುರುದತ್ ಅವರ… Read More ಗುರುದತ್

ಕೆಚ್ಚೆದೆಯ ಹಾಕಿ ಪಟು ಎಂ. ಪಿ. ಗಣೇಶ್

ಯಾವುದೇ ಒಂದು ಕ್ರೀಡೆಯಲ್ಲಿ ಅಂತರಾಷ್ಟ್ರೀಯ ಮಟ್ಟವನ್ನು ತಲುಪುದು ಎಷ್ಟು ಕಷ್ಟ ಎಂದು ಕ್ರೀಡಾಪಟು ಆಗಿದ್ದವರಿಗೆ ತಿಳಿಯುತ್ತದೆ ಇಲ್ಲವೇ ಕ್ರೀಡಾಸಕ್ತರಿಗೆ ತಿಳಿದಿರುತ್ತದೆ. ಇಲ್ಲೊಬ್ಬರು ಎರಡೆರಡು ಕ್ರೀಡೆಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿ, ಮತ್ತೊಂದು ಕ್ರೀಡೆಯ ಆಡಳಿತಾಧಿಕಾರಿಯಾಗಿ ನಮ್ಮ ರಾಜ್ಯಕ್ಕೆ ಹೆಮ್ಮೆ ತಂದ ವೀರ ಸೇನಾನಿ, ಕೆಚ್ಚೆದೆಯ ಆಟಗಾರ, ಛಲವಂತ ನಾಯಕ, ಅತ್ಯುತ್ತಮ ತರಭೇತಿದಾರ ಮತ್ತು ಸಮರ್ಥ ಕ್ರೀಡಾ ಆಡಳಿತಗಾರರಾಗಿದ್ದ ಹಾಕಿ ಆಟಗಾರ ಶ್ರೀ ಎಂ ಪಿ ಗಣೇಶ್ ಆವರ ಬಗ್ಗೆ ತಿಳಿದುಕೊಳ್ಳೋಣ. ಕೊಡಗು ಜಿಲ್ಲೆಯ ಮಡಿಕೇರಿಯ ಸುಂಟಿಕೊಪ್ಪದ ಬಳಿಯ ಅಂದಗೋವೆ… Read More ಕೆಚ್ಚೆದೆಯ ಹಾಕಿ ಪಟು ಎಂ. ಪಿ. ಗಣೇಶ್

ಎಂ.ವಿ. ಸುಬ್ಬಯ್ಯ ನಾಯ್ಡು

ಸ್ವಾತಂತ್ಯ್ರ ಪೂರ್ವದಲ್ಲಿ ಹರಿದು ಹಂಚಿಹೋಗಿದ್ದ ಕರ್ನಾಟಕವನ್ನು ಒಗ್ಗೂಡಿಸಲು ಹಲವಾರು ಜನ ನಾನಾ ರೀತಿಯಲ್ಲಿ ಪ್ರಯತ್ನಿಸುತ್ತಿದ್ದರೆ ಇಲ್ಲೊಬ್ಬ ಮಹಾಶಯರು ರಂಗಭೂಮಿಯ ಮುಖಾಂತರ ಏಕೀಕರಣಕ್ಕೆ ಪ್ರಯತ್ನಿಸಿದ, ಕರ್ನಾಟಕದ ಹಲವಾರು ಪ್ರಪ್ರಥಮಗಳ ನಾಯಕ, ನಟ, ನಿರ್ದೇಶಕ, ನಿರ್ಮಾಪಕ, ಪೈಲ್ವಾನ್, ರಂಗಭೂಮಿ ಮತ್ತು ಚಲನಚಿತ್ರರಂಗ ಎರಡರಲ್ಲೂ ಸೈ ಎನಿಸಿಕೊಂಡವರು, ಹೀಗೆ ಹೇಳುತ್ತಾ ಹೋದರೆ ಹೇಳುತ್ತಲೇ ಹೋಗ ಬೇಕಾಗುವಂತಹ ವ್ಯಕ್ತಿತ್ವ ಹೊಂದಿದ್ದ ಅಭಿಜಾತ ಕಲಾವಿದರರಾಗಿದ್ದ ಶ್ರೀ ಎಂ.ವಿ. ಸುಬ್ಬಯ್ಯ ನಾಯ್ಡು ಅವರ ಕುರಿತಾಗಿ ತಿಳಿದುಕೊಳ್ಳೋಣ. 1896 ರಲ್ಲಿ ಮೈಸೂರು ಜಿಲ್ಲೆಯ ಮಾದಲಾಪುರದಲ್ಲಿ ಸುಬ್ಬಯ್ಯನವರ ಜನನವಾಗುತ್ತದೆ.… Read More ಎಂ.ವಿ. ಸುಬ್ಬಯ್ಯ ನಾಯ್ಡು

ನಿತ್ಯೋತ್ಸವ ಕವಿ ಕೆ. ಎಸ್. ನಿಸಾರ್ ಅಹಮದ್

ಸಾಮಾನ್ಯವಾಗಿ ಯಾವುದೇ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವಾಗಲೀ, ಅಥವಾ ಸುಗಮ ಸಂಗೀತ ಅಥವಾ ರಸಸಂಜೆ/ಆರ್ಕೆಸ್ಟ್ರಾಗಳಲ್ಲಿ ಆಯಾಯಾ ಗಾಯಕ/ಗಾಯಕಿಕರು ತಮ್ಮ ಇಷ್ಟ ಪಟ್ಟ ಲೇಖಕರ ಹಾಡುಗಳನ್ನು ಹಾಡುವುದು ಸಹಜ. ಆದರೆ ಬಹುತೇಕ ಸುಗಮ ಸಂಗೀತಗಾರರು ಒಬ್ಬ ಗಾಯಕರ ಹಾಡನ್ನು ತಮ್ಮ ಪ್ರತೀ ಕಾರ್ಯಕ್ರಮಗಳಲ್ಲಿ ಹಾಡುತ್ತಾರೆಂದರೆ ಆ ಕವಿಯ ಕವನಗಳು ಹೇಗಿರುತ್ತದೆ ಎಂಬುದಕ್ಕೆ ಅತ್ಯುತ್ತಮ ಉದಾಹರಣೆ. ಅದು ಜೋಗದ ಸಿರಿಯಾಗಿರಬಹುದು, ಕುರಿಗಳು ಸಾರ್ ಕುರಿಗಳು ಅಥವಾ ಬೆಣ್ಣೆ ಕದ್ದಾ ನಮ್ಮ ಕೃಷ್ಣಾ ಇರಬಹುದು. ಹೇ ಇಷ್ಟೆಲ್ಲಾ ಪೀಠಿಕೆ ಹಾಕಿದ ಮೇಲೆ ಇವತ್ತಿನ… Read More ನಿತ್ಯೋತ್ಸವ ಕವಿ ಕೆ. ಎಸ್. ನಿಸಾರ್ ಅಹಮದ್

ನಾ. ಡಿಸೋಜ

ನಾ. ಡಿಸೋಜಾ. ಆವರ ಮಾತೃಭಾಷೆ ಕೊಂಕಣಿ ಆದರೂ ಅಪ್ಪಟ ಕನ್ನಡಿಗ, ಆಚರಿಸುವುದು ಕ್ರೈಸ್ತ ಧರ್ಮವಾದರೂ ಅಪ್ಪಟ ಭಾರತೀಯ. ಕೇವಲ ಕವಿಯಲ್ಲದೇ, ಅಪ್ಪಟ ಪರಿಸರವಾದಿಯಾದ ನಾ. ಡಿಸೋಜಾವರು ಭಾನುವಾರ 2025ರ ಜನವರಿ 5ರ ರಾತ್ರಿ ನಿಧನರಾಗಿರುವುದು ಬಹಳ ದುಃಖಕರವಾದ ವಿಷಯವಾಗಿದ್ದು ಅವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳ ಕುರಿತಾಗಿ ತಿಳಿಯೋಣ ಬನ್ನಿ.… Read More ನಾ. ಡಿಸೋಜ

ಗಾನ ಗಾರುಡಿಗ ಮೈಸೂರು ಅನಂತಸ್ವಾಮಿ

ಕನ್ನಡ ಸುಗಮ ಸಂಗೀತದ ಪ್ರವರ್ತಕರಾಗಿ ಕನ್ನಡದ ಬಹುತೇಕ ಕವಿಗಳ ಭಾವಗೀತೆಗಳಿಗೆ ಧ್ವನಿಯಾಗಿದ್ದ ಶ್ರೀ ಪಿ ಕಾಳಿಂಗರಾಯರ ಕುರಿತು ಹಿಂದಿನ ಮಾಲಿಕೆಯಲ್ಲಿ ಪರಿಚಯ ಮಾಡಿಕೊಂಡ ಮೇಲೆ ನಾವಿಂದು ಅವರ ಉತ್ತರಾಧಿಕಾರಿಗಳ ಪರಿಚಯ ಮಾಡಿಕೊಳ್ಳಲೇ ಬೇಕಲ್ಲವೆ? ತಮ್ಮ ಅದ್ಭುತ ಗಾಯನ ಮತ್ತು ರಾಗ ಸಂಯೋಜನೆಗಳಿಂದ ಸುಗಮ ಸಂಗೀತ ಕ್ಷೇತ್ರದ ಅನುಭಿಷಕ್ತ `ದೊರೆಯಾಗಿ ಮೆರೆದವರು, ಮ್ಯಾಂಡೊಲಿನ್, ತಬಲ, ಕೊಳಲು, ಹಾರ್ಮೋನಿಯಂ ಮುಂತಾದ ವಾದ್ಯಗಳನ್ನು ಸುಲಲಿತವಾಗಿ ನುಡಿಸಬಲ್ಲವರೂ ಮತ್ತು ಕವನಗಳನ್ನು ರಚಿಸಬಲ್ಲ ಸಾಮರ್ಥ್ಯ ಹೊಂದಿದ್ದಂತಹ ಶ್ರೀ ಮೈಸೂರು ಅನಂತಸ್ವಾಮಿಗಳ ಬಗ್ಗೆ ನಾವಿಂದು ಅರಿತುಕೊಳ್ಳೋಣ.… Read More ಗಾನ ಗಾರುಡಿಗ ಮೈಸೂರು ಅನಂತಸ್ವಾಮಿ