ಲತಾ ಭಗವಾನ್ ಖರೆ, ಕಲಿಯುಗದ ಸತ್ಯವಾನ್ ಸಾವಿತ್ರಿ

ನಾವು ನಮ್ಮ ಪುರಾಣದಲ್ಲಿ ತನ್ನ ಗಂಡನ ಪ್ರಾಣವನ್ನು ಉಳಿಸಿಕೊಳ್ಳಲು ಯಮಧರ್ಮರಾಯನನ್ನೇ ಎದಿರು ಹಾಕಿಕೊಂಡ ಸತ್ಯವಾನ್ ಸಾವಿತ್ರಿಯ ಕಥೆಯನ್ನು ಕೇಳಿದ್ದೇವೆ. ಈಗಿನ ಕಾಲದಲ್ಲಿಯೂ ತನ್ನ ಗಂಡನ ಆರೋಗ್ಯದ ಸಲುವಾಗಿ ತನ್ನನ್ನೇ ತಾನು ಫಣಕ್ಕಿಟ್ಟುಕೊಂಡು ತನ್ನ ಗಂಡನ ಜೀವನವನ್ನು ಉಳಿಸಿಕೊಂಡ ಮತ್ತು ಇಂದಿನ ಯುವಜನತೆಗೆ ಮಾದರಿಯಾಗವಲ್ಲ ಶ್ರೀಮತಿ ಲತಾ ಭಗವಾನ್ ಖರೆಯ ಸಾಹಸಗಾಥೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಅದು 2013ರ ಸಮಯ. ಮಹಾರಾಷ್ಟ್ರದ ಬುಲ್ದಾನ ಜೆಲ್ಲೆಯ ಸಣ್ಣ ಗ್ರಾಮವೊಂದರಲ್ಲಿ 68 ವರ್ಷದ ಭಗವಾನ್ ಖರೆ ಮತ್ತು ಮತ್ತು 67 ವರ್ಷದ ಆತನ… Read More ಲತಾ ಭಗವಾನ್ ಖರೆ, ಕಲಿಯುಗದ ಸತ್ಯವಾನ್ ಸಾವಿತ್ರಿ

ಶೂನ್ಯದಿಂದ ಸಾಧನೆಯವರೆಗೆ

ನನ್ನ ಹಿಂದಿನ ಲೇಖನದಲ್ಲಿ ಖ್ಯಾತ ಚಿತ್ರನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆ ಕುರಿತಂತೆ ಲೇಖನದಲ್ಲಿ ವಯಕ್ತಿಕ ಸಮಸ್ಯೆಯಿಂದ ಹೊರಬರಲಾರದೇ, ಖಿನ್ನತೆಗೆ ಒಳಗಾಗಿ ಬದುಕನ್ನೇ ಅಕಾಲಿಕವಾಗಿ  ಅಂತ್ಯ ಮಾಡಿಕೊಂಡ ದುರಂತ ಕಥೆಯ ಕುರಿತಂತೆ ಅನೇಕ ಓದುಗರು ವಿವಿಧ ರೀತಿಯ ಟೀಕೆ ಟಿಪ್ಪಣಿಗಳನ್ನು ಬರೆದಿದ್ದರು. ಸಮಸ್ಯೆಗಳಿಂದ ಖಿನ್ನತೆಗೆ ಒಳಗಾಗುವುದು ಸಹಜ ಆದರೆ ಅದನ್ನು  ಸವಾಲಾಗಿ ಸ್ವೀಕರಿಸಿ ಅದರಿಂದ  ಹೇಗೆ ಹೊರಬಂದು ಸಾಧನೆಯ ಮಟ್ಟಲುಗಳನ್ನು ಏರಿ ಯಶಸ್ವಿಯಾಗಿರುವ ಕೆಲವು ಅಧ್ಬುತ ಪ್ರಸಂಗಗಳು ಇದೋ ನಿಮಗಾಗಿ. ಕ್ರಿಕೆಟ್ ವೀಕ್ಷಕವಿವರಣಾಗಾರ ಶ್ರೀ ಹರ್ಷ… Read More ಶೂನ್ಯದಿಂದ ಸಾಧನೆಯವರೆಗೆ

ನಿಖರತೆ ಮತ್ತು ವಿಶ್ವಾಸ

ಅದೊಮ್ಮೆ ರಾಜ ತನ್ನ ಅರಮನೆಯಲ್ಲಿ ಏಕಾಂತದಲ್ಲಿರುವಾದ ರಾಜ್ಯದ ಸೇನಾಧಿಪತಿ ಸರಸರನೆ ಧಾವಿಸಿ ಬಂದು ರಾಜನಿಗೆ ವಂದಿಸಿ ತುಸು ಸಿಟ್ಟಿನಿಂದ ಏರು ಧನಿಯಲ್ಲಿ ಮಹಾರಾಜರೇ ನೀವು ಮಾಡಿದ್ದು ಸರಿಯೇ? ನಾನು ಈ ರಾಜ್ಯದ ಸೇನಾಧಿಪತಿ. ಹಗಲು ರಾತ್ರಿ ಎನ್ನದೇ ರಾಜ್ಯದ ಹಿತಕ್ಕಾಗಿ ಮತ್ತು ನಿಮ್ಮ ಶ್ರೇಯಕ್ಕಾಗಿಯೇ ನನ್ನ ಸಮಯವನ್ನು ಮೀಸಲಿಟ್ಟಿದ್ದೇನೆ. ಆದರೆ ಏನನ್ನೂ ಮಾಡದ, ಸದಾ ನಿಮ್ಮ ಹಿಂದೆಯೇ ಸುತ್ತುತಾ ಇರುವ ಆ ಮಹಾಮಂತ್ರಿಯನ್ನು ಎಲ್ಲಾ ಕಡೆಯಲ್ಲಿಯೂ ಮೆರೆಸುತ್ತೀರಿ ಮತ್ತು ಕಂಡ ಕಂಡ ಕಡೆ ಹೊಗಳುತ್ತೀರಿ. ನಮ್ಮ ಕೆಲಸದ… Read More ನಿಖರತೆ ಮತ್ತು ವಿಶ್ವಾಸ

ಅನಿಲ್ ಕುಂಬ್ಲೆ – 10/10

1998-99 ರಲ್ಲಿ ಭಾರತಕ್ಕೆ ಸಾಂಪ್ರದಾಯಿಕ ಎದುರಾಳಿ ಪಾಕೀಸ್ಥಾನದ ಕ್ರಿಕೆಟ್ ತಂಡ ಟೆಸ್ಟ್ ಪಂದ್ಯಾವಳಿಯನ್ನು ಆಡಲು ಬಂದಿತ್ತು ಚೆನ್ನೈನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಚೆನ್ನೈನಲ್ಲಿ ಸಚಿನ್ ‌ತೆಂಡೂಲ್ಕರ್ ಅವರ ಕೆಚ್ಚೆದೆಯ ಹೋರಾಟದ ಹೊರತಾಗಿಯೂ 12 ರನ್‌ಗಳಿಂದ ಪಂದ್ಯವನ್ನು ಸೋತು ಸರಣಿಯಲ್ಲಿ 1-0 ಯ ಹಿನ್ನಡೆಯಲ್ಲಿದ ಕಾರಣ ದೆಹಲಿಯ ಎರಡನೆಯ ಟೆಸ್ಟ್ ಪಂದ್ಯವನ್ನು ಗೆದ್ದು ಸರಣಿಯನ್ನು ಸಮ ಸಮ ಮಾಡಿಕೊಳ್ಳಲೇ ಬೇಕು ಎಂಬ ಧೃಢ ನಿರ್ಧಾರದಿಂದ ಕಣಕ್ಕೆ ಇಳಿದಿತ್ತು.. ಹಾಗಾಗಿ ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಈ… Read More ಅನಿಲ್ ಕುಂಬ್ಲೆ – 10/10

ಭಾರತ / ಆಸ್ಟ್ರೇಲಿಯ ಟೈಟಾನ್ ಕಪ್ 1996

ಇಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡೂ ತಂಡಗಳು ಒಂದೊಂದು ಪಂದ್ಯವನ್ನು ಗೆದಿದ್ದು ಸರಣಿ ಗೆಲ್ಲಲು ಎರಡೂ ತಂಡಗಳಿಗೆ ಈ ಪಂದ್ಯ ಬಹಳ ಮುಖ್ಯವಾಗಿರುವ ಪರಿಣಾಮವಾಗಿ ಈ ಪಂದ್ಯ ಬಹಳ ಜಿದ್ದಾ ಜಿದ್ದಿನಿಂದ ರೋಚಕವಾಗಿರುವುದರಲ್ಲಿ ಸಂದೇಹವೇ ಇಲ್ಲ. ಈ ಸಮಯದಲ್ಲಿ, ಇದೇ ಕ್ರೀಡಾಂಗಣದಲ್ಲಿ , ಇದೇ ತಂಡಗಳ ನಡುವೆ 1996ರಲ್ಲಿ ರೋಚಕವಾಗಿ ನಡೆದ ಟೈಟಾನ್ ಕಪ್ ಪಂದ್ಯವಳಿ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಹೊನಲು ಬೆಳಕಿನ ಆ ಪಂದ್ಯವನ್ನು ಕ್ರೀಡಾಂಗಣದಲ್ಲಿ… Read More ಭಾರತ / ಆಸ್ಟ್ರೇಲಿಯ ಟೈಟಾನ್ ಕಪ್ 1996

ಬೋಲ್ ಮಾಡ್ಲಿಲ್ಲಾ , ಬ್ಯಾಟ್ ಮಾಡ್ಲಿಲ್ಲಾ . ಆದ್ರೂ ಪಂದ್ಯ ಪುರುಷೋತ್ತಮ

ಕ್ರಿಕೆಟ್ ಆಡುವ ಮತ್ತು ನೋಡುವರೆಲ್ಲರಿಗೂ ಪಂದ್ಯ ಪುರುಷೋತ್ತಮ ಪ್ರಶಸ್ತಿ ಹೇಗೆ ಕೊಡ್ತಾರೆ ಅಂತಾ ಗೊತ್ತೇ ಇರುತ್ತದೆ. ಯಾವುದೇ ಪಂದ್ಯದಲ್ಲಿ ಯಾರು ಒಳ್ಳೆಯ ಬ್ಯಾಟಿಂಗ್ ಅಥವಾ ಬೋಲಿಂಗ್ ಪ್ರದರ್ಶನ ಮಾಡ್ತಾರೋ, ಇಲ್ಲವೇ ಆಲ್ರೌಂಡ್ ಪ್ರದರ್ಶನ ನೀಡಿ ಪಂದ್ಯವನ್ನು ಗೆಲ್ಲಲು ಸಹಾಯ ಮಾಡಿರ್ತಾರೋ ಅವರನ್ನು ಪಂದ್ಯದ ಕಡೆಯಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಅಂತ ಘೋಷಿಸುವುದು ಸಹಜ ಪ್ರಕ್ರಿಯೆ. ಇಂದಿಗೆ ಸರಿಯಾಗಿ 33 ವರ್ಷಗಳ ಹಿಂದೆ ಅಂದ್ರೆ, ನವೆಂಬರ್ 28, 1986ರಲ್ಲಿ ಶಾರ್ಜಾದಲ್ಲಿ ನಡೆದ ವೆಸ್ಟ್ಇಂಡೀಸ್ ಮತ್ತು ಪಾಕೀಸ್ಥಾನದ ವಿರುದ್ದದ… Read More ಬೋಲ್ ಮಾಡ್ಲಿಲ್ಲಾ , ಬ್ಯಾಟ್ ಮಾಡ್ಲಿಲ್ಲಾ . ಆದ್ರೂ ಪಂದ್ಯ ಪುರುಷೋತ್ತಮ

ಸ್ಪಿನ್ ಮಾಂತ್ರಿಕ ಇ ಎ ಎಸ್ ಪ್ರಸನ್ನ

ಎಪ್ಪತ್ರ ದಕದದಲ್ಲಿ ಭಾರತದ ಕ್ರಿಕೆಟ್ ತಂಡಕ್ಕೆ ಕರ್ನಾಟಕದ ಕೊಡುಗೆ ಅತ್ಯಮೂಲ್ಯ ಎಂದರೆ ತಪ್ಪಾಗಲಾದರು ಅದರಲ್ಲಿಯೂ ಗುಂಡಪ್ಪಾ ವಿಶ್ವನಾಧ್, ಭಗವತ್ ಚಂದ್ರಶೇಖರ್,ಸೈಯ್ಯದ್ ಕಿರ್ಮಾನಿ, ಬ್ರಿಜೇಶ್ ಪಟೇಲ್, ಸುಧಾಕರರಾವ್ ಅಂತಹ ಘಟಾನುಘಟಿಗಳು ಏಕ ಕಾಲದಲ್ಲಿ ಭಾರತ ತಂಡ ಪ್ರವೇಶಿಸಬೇಕಾದರೇ ಅದಕ್ಕೆ ರೂವಾರಿ ಎಂದರೆ ಅಂದಿನ ಕರ್ನಾಟಕ ಕ್ರಿಕೆಟ್ ತಂಡದ ನಾಯಕರಾಗಿದ್ದ ಎರಾಪಳ್ಳಿ ಅನಂತರಾವ್ ಶ್ರೀನಿವಾಸ ಪ್ರಸನ್ನ ಅರ್ಥಾಥ್ ಇ ಎ ಎಸ್ ಪ್ರಸನ್ನ ಎಂದರೆ ತಪ್ಪಾಗಲಾರದೇನೋ? ಅನೇಕ ವರ್ಷಗಳ ಕಾಲ ರಣಜೀ ಪಂದ್ಯಾವಳಿಗಳಲ್ಲಿ ಭಾಗವಹಿಸುತ್ತಿದ್ದರೂ ಪ್ರಶಸ್ತಿಯ ಬರವನ್ನು ಎದುರಿಸುತ್ತಿದ್ದ ಕರ್ನಾಟಕ… Read More ಸ್ಪಿನ್ ಮಾಂತ್ರಿಕ ಇ ಎ ಎಸ್ ಪ್ರಸನ್ನ

ಸ್ಪಿನ್ ಗಾರುಡಿಗ ಬಿ ಎಸ್ ಚಂದ್ರಶೇಖರ್

2001ರಲ್ಲಿ ಕ್ರಿಕೆಟ್ ಆಟವನ್ನೇ ಕೇಂದ್ರವಾಗಿಟ್ಟುಕೊಂಡು ಅಮೀರ್ ಖಾನ್ ನಾಯಕತ್ವದಲ್ಲಿ ತೆರೆಗೆ ಬಂದ ಲಗಾನ್ ಚಿತ್ರದಲ್ಲಿ ಆಂಗ್ಲರ ವಿರುದ್ಧ ತೆರಿಗೆ ಕಟ್ಟುವುದನ್ನು ತಪ್ಪಿಸಿಕೊಳ್ಳಲು ಕ್ರಿಕೆಟ್ ಪಂದ್ಯಾವಳಿಯನ್ನು ಆಡಲು ಒಪ್ಪಿ ದೇಸೀ ತಂಡವನ್ನು ಕಟ್ಟುತ್ತಿರುತ್ತಾರೆ. ಅದೊಂದು ದಿನ ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದ ಸಮಯದಲ್ಲಿ ಚೆಂಡು ದೂರ ಹೋಗಿ ಅಲ್ಲೇ ಕೆಲಸ ಮಾಡುತ್ತಿದ್ದ ಕಚ್ರಾ ಎಂಬವನ ಬಳಿ ಹೋಗುತ್ತದೆ. ಆಗ ನಾಯಕ ಭುವನ್ ಕಚ್ರಾಗೆ ಚೆಂಡನ್ನು ಎಸೆಯಲು ಹೇಳುತ್ತಾನೆ. ಪೋಲಿಯೋ ಪೀಡಿತ ಕಚ್ರಾ ಮೊದಲು ಚೆಂಡನ್ನು ಎಸೆಯಲು ಹಿಂಜರಿಯುತ್ತಾನಾದರೂ ನಂತರ ಅವನು… Read More ಸ್ಪಿನ್ ಗಾರುಡಿಗ ಬಿ ಎಸ್ ಚಂದ್ರಶೇಖರ್

ಚೊಚ್ಚಲ ಟಿ20 ವಿಶ್ವಕಪ್

ಹನ್ನೆರಡು ವರ್ಷಗಳ  ಹಿಂದೆ ಭಾರತ ಕ್ರಿಕೆಟ್ ತಂಡ   ಘಟಾನುಘಟಿ ಆಟಗಾರರೆಲ್ಲಾ ನಿವೃತ್ತಿಯ ಅಂಚಿನಲ್ಲಿದ್ದಾಗ  ಹೊಡೀ ಬಡೀ ಆಟಕ್ಕೆ ಹೇಳಿ ಮಾಡಿಸಿದಂತಹ ಮಹೇಂದ್ರ ಸಿಂಗ್ ದೋನಿ  ನೇತೃತ್ವದಲ್ಲಿ ಯುವ ಆಟಗಾರರ ತಂಡದ ರಚನೆಯಾಗಿತ್ತು. ಆಷ್ಟರಲ್ಲಿ ದಕ್ಷಿಣ ಆಫ್ರಿಕಾದಲ್ಲಿ  ಚೊಚ್ಚಲ ಟಿ20 ವಿಶ್ವಕಪ್ ಪಂದ್ಯಾವಳಿಯ ಘೋಷಣೆಯಾಗಿತ್ತು. 2007ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರಾಹುಲ್ ದ್ರಾವಿಡ್ ನೇತೃತ್ವದ ಟೀಂ ಇಂಡಿಯಾ ಲೀಗ್ ಹಂತದಲ್ಲೇ  ಹೊರ ಬಂದಿದ್ದರಿಂದ ಮತ್ತು ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಕೇವಲ ಒಂದು ಟಿ20 ಪಂದ್ಯವನ್ನಾಡಿದ್ದ ಸೆಹ್ವಾಗ್, ಯುವರಾಜ್… Read More ಚೊಚ್ಚಲ ಟಿ20 ವಿಶ್ವಕಪ್