ದಿನಾ ಸಾಯುವವರಿಗೆ ಅಳುವವರು ಯಾರು?

ಬೆಂಗಳೂರು ಪ್ರಪಂಚದಲ್ಲೇ ಅತ್ಯಂತ ವೇಗವಾಗಿ ನಗರ. ಜಗತ್ತಿನ ಎಲ್ಲ ಜನರೂ ವಾಸಿಸಲು ಬಯಸುವ ಮತ್ತು ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಕಛೇರಿಗಳನ್ನು ಹೊಂದಲು ಇಚ್ಚೆಪಡುವ ನಗರ. ಭಾರತದ ಸಿಲಿಕಾನ್ ಸಿಟಿ. ಸ್ಟಾರ್ಟ್ ಅಪ್ ಹಬ್. ಅತ್ಯಂತ ಹೆಚ್ಚಿನ ದ್ವಿಚಕ್ರವಾಹನಗಳು ಇರುವ ಊರು. ಹೀಗೆ ಒಂದೇ ಎರಡೇ ಬೆಂಗಳೂರನ್ನು ಹೊಗಳಲು ಹೊರಟರೇ ಪದಗಳೇ ಸಾಲದು. ಒಂದು ಕಾಲದಲ್ಲಿ ಅತ್ಯಂತ ಹೆಚ್ಚಿನ ಕೆರೆ ಕಟ್ಟೆಗಳಿಂದ ಕೂಡಿ ಇಡೀ ಊರಿಗೆ ಊರೇ ಹಸಿರುಮಯವಾಗಿದ್ದ ಕಾಲವೊಂದಿತ್ತು. ಯಾವುದೇ ರೋಗಿಗಳು ಬೆಂಗಳೂರಿಗೆ ಬಂದರೆಂದರೆ ಅವರ ಎಲ್ಲಾ… Read More ದಿನಾ ಸಾಯುವವರಿಗೆ ಅಳುವವರು ಯಾರು?

ಶಿಕ್ಷಣ

ಇವತ್ತು ಬೆಳೆಗ್ಗೆ ಜಿಟಿ ಜಿಟಿ ಮಳೆ ಬೀಳ್ತಾ ಇದ್ದದ್ದರಿಂದ ಮುಂಜಾನೆಯ ವೃತ್ತ ಪತ್ರಿಕೆ ಎಲ್ಲಾ ಒದ್ದೆ ಮುದ್ದೆಯಾಗಿತ್ತು. ನನಗೆ ಒಂದು ಪಕ್ಷ ತಿಂಡಿ ತಿನ್ನೋದನ್ನ ಬಿಟ್ರೂ ಬೇಜಾರಿಲ್ಲ. ಆದರೆ ಬೆಳಗಿನ ಪೇಪರ್ ಓದದೇ ಹೋದ್ರೆ ಏನೋ ಕಳೆದು ಕೊಂಡ ಅನುಭವ. ಆಷ್ಟೆಲ್ಲ ಟಿವಿಯಲ್ಲಿ ವಾರ್ತೆಗಳನ್ನು ನೋಡಿದ್ರೂ, ಇಂಟರ್ನೆಟ್ಟಲ್ಲಿ ಸುದ್ದಿಗಳನ್ನು ಓದಿದ್ರೂ, ಪೇಪರ್ ಓದೋ ಮಜಾನೇ ಬೇರೆ. ಹಾಗೆ ಒದ್ದೆ ಆದ ಪೇಪರನ್ನು ಇಸ್ತ್ರಿಪೆಟ್ಟಿಗೆಯಲ್ಲಿ ಇಸ್ತ್ರಿ ಮಾಡಿಕೊಂಡು ಓದಲು ಪುಟ ತಿರುವು ಹಾಕುತ್ತಿದ್ದಂತೆಯೇ ಗಕ್ಕನೆ ಕಾಲೇಜಿನ ಏಳನೇ ಮಹಡಿಯಿಂದ… Read More ಶಿಕ್ಷಣ

ನಂಬಿಕೆ

ಇಂದಿನ ನಮ್ಮ ಬಹುತೇಕ ಯುವ ಜನಾಂಗವನ್ನು ಕರೆದು, ಈ ಕಾರ್ಯವನ್ನು ನಿಮ್ಮಿಂದ ಸಾಧಿಸಲು ಸಾಧ್ಯವೇ ? ಎಂದು ಒಂದು ಸಾಮಾನ್ಯ ಕೆಲಸವನ್ನು ತೋರಿಸಿದರೂ, ಅವರಿಂದ ಮೊದಲು ಬರುವ ಉತ್ತರವೇ ಇಲ್ಲಾ. ಇದು ಸಾಧ್ಯವಿಲ್ಲ. ಅದು ಏಕೆ ಸಾಧ್ಯವಿಲ್ಲಾ ಎಂದು ನಾವು ಕೇಳುವುದಕ್ಕೆ ಮುಂಚೆಯೇ, ಅದಕ್ಕೆ ನಾನಾ ರೀತಿಯ ಕಾರಣಗಳನ್ನು ನೀಡಲು ಆರಂಭಿಸುತ್ತಾರೆ. ಅರೇ ಅದೇಕೆ ಸಾಧ್ಯವಿಲ್ಲಾ? ನೀವು ಹೀಗೆ ಮಾಡಿದರೆ ಖಂಡಿತವಾಗಿಯೂ ನಿಮ್ಮ ಕೆಲಸ ಕಾರ್ಯಸಾಧುವಾಗುತ್ತದೆ ಎಂದು ತಿಳಿಸಿದಾಗ ಹಾಂ!! ಹೌದು. ನಿಜ. ನೀವು ಹೇಳಿದ ಹಾಗೆ… Read More ನಂಬಿಕೆ

ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

ಕಳೆದ ಎರಡು ಮೂರು ಮೂರು ವಾರಗಳಿಂದ ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ, ದೇಶದ ಹಣವನ್ನು ಕೊಳ್ಳೆಹೊಡೆದ ಆರೋಪದ ಮೇಲೆ ಬಂಧಿಸಲ್ಪಟ್ಟ ರಾಜಕಾರಣಿಗಳ ಬಗ್ಗೆ ಚರ್ಚಿಸುತ್ತಿದ್ದ ಭಾರತೀಯರು, ಇದ್ದಕ್ಕಿಂದಂತೆಯೇ ಎರಡು ಮೂರು ದಿನಗಳಿಂದ ಹೊಸ ಮೋಟಾರು ವಾಹನ ತಿದ್ದುಪಡಿ ಮಸೂದೆ 2019 ಸಂಚಾರ ನಿಯಮದ ಕಠಿಣ ದಂಡ ದೃಷ್ಟಿ ಹಾಯಿಸಿದ್ದಾರೆ. ಸರ್ಕಾರ ದಂಡಗಳನ್ನು ಬಹು ಪಟ್ಟು ಹೆಚ್ಚು ಮಾಡುತ್ತಿದ್ದಂತೆಯೇ ನಿಯಮವನ್ನು ಉಲ್ಲಂಘಿಸುವ ಮೊದಲು, ಉಲ್ಲಂಘಿಸುವವರು ಎರಡು ಬಾರಿ ಯೋಚಿಸುವಂತೆ ಮಾಡಿದೆಯಾದರೂ, ಹೊಸಾ ನಿಯಮ ಏಕೋ ಎತ್ತಿಗೆ ಜ್ವರ ಬಂದ್ರೇ… Read More ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

ಸಾರ್ಥಕ ಬದುಕು

ಒಂದು ಉದ್ದೇಶಿತ ಕೆಲಸಕ್ಕಾಗಿ ಬಂದು ಆ ಕೆಲಸವನ್ನು ಸಕಾಲಕ್ಕೆ ಸರಿಯಾಗಿ ಎಲ್ಲರೂ ಒಪ್ಪುವಂತೆ, ಇಲ್ಲವೇ ಹೊಗಳುವಂತೆ ಮಾಡಿ ಮುಗಿಸಿ ಹೋದಲ್ಲಿ ಅದುವೇ ಸಾರ್ಥಕತೆ ಎನಿಸುತ್ತದೆ. ಅಂತಹ ಒಂದು ಸಾರ್ಥಕ ಬದುಕನ್ನು ನಡೆಸಿದ ಒಂದು ಹಿರಿಯ ಜೀವದ ಬಗ್ಗೆ ನೆನಸಿಕೊಳ್ಳುವಂತಹ ಅನಿವಾರ್ಯ ಸಂದರ್ಭ ಬಂದೊದಗಿದ್ದು ನಿಜಕ್ಕೂ ದುಃಖ ಕರ. ಎಪ್ಪತ್ತರ ದಶಕದಲ್ಲಿ ಕರ್ನಾಟಕ ಮತ್ತು ಆಂಧ್ರ ಗಡಿ ಭಾಗದ ಯಗುಕೋಟೆಯ ಜಮೀನ್ದಾರ್ ರಾಮಚಂದ್ರರವರ ದ್ವಿತೀಯ ಪುತ್ರಿ ಲಕ್ಷ್ಮೀ (ಆದಿ ಲಕ್ಷ್ಮೀ) ಮತ್ತು ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ ಬಳಿಯ ತಿಪ್ಪೂರಿನ… Read More ಸಾರ್ಥಕ ಬದುಕು

ಹಬ್ಬದ ಸಡಗರ ಸಂಭ್ರಮ

ಎಲ್ಲಾ ಹಬ್ಬಗಳ ಆಚರಣೆಯ ಸಂದರ್ಭದಲ್ಲಿಯೂ ಇಂದು ವಿಶ್ವಾದ್ಯಂತ, ದೇಶಾದ್ಯಂತ, ನಾಡಿನಾದ್ಯಂತ ….. ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ ಎಂದು ದೃಶ್ಯ ಮತ್ತು ಮುದ್ರಣ ಮಾದ್ಯಮದಲ್ಲಿ ಕೇಳುವುದು ಮತ್ತು ಓದುವುದು ನಮಗೆಲ್ಲಾ ತಿಳಿದ ವಿಷಯವೇ ಸರಿ. ಹಾಗಾದರೆ ಆ ಸಡಗರ ಮತ್ತು ಸಂಭ್ರಮ ಎಂದರೆ ಏನು? ಅದು ಹೇಗೆ ಇರುತ್ತದೆ ಎಂಬುದನ್ನು ಆಲೋಚಿಸುತ್ತಿರುವಾಗಲೇ ಮೂಡಿದ ಲೇಖವವೇ ಇದು. ಹಬ್ಬಗಳ ವಿಷಯಕ್ಕೆ ಬಂದಾಗ, ಸಡಗರ ಮತ್ತು ಸಂಭ್ರಮ ಎರಡೂ ಜೋಡಿ ಪದಗಳು. ಸಡಗರ ಹಬ್ಬದ ಹಿಂದಿನ ಪ್ರಕ್ರಿಯೆಗಳಾದರೆ, ಸಂಭ್ರಮ ಹಬ್ಬ… Read More ಹಬ್ಬದ ಸಡಗರ ಸಂಭ್ರಮ

ಆರೋಗ್ಯವೇ ಭಾಗ್ಯ! FIT INDIA ಅಭಿಯಾನ

ಇಂದಿನ ಕಾಲದಲ್ಲಿ ಲಕ್ಷಾಂತರ ಇಲ್ಲವೇ ಕೋಟ್ಯಾಂತರ ಹಣವನ್ನು ಸಂಪಾದಿಸುವುದು ಬಹಳ ಸುಲಭ ಸಾಧ್ಯವಾಗಿದೆ ಆದರೆ ಆ ರೀತಿಯಾಗಿ ಹಣವನ್ನು ಸಂಪಾದಿಸುವ ಭರದಲ್ಲಿ ನಮ್ಮ ಆರೋಗ್ಯದ ಬಗ್ಗೆ ಕಾಳಜೀ ವಹಿಸದೇ ಸಣ್ಣ ವಯಸ್ಸಿನಲ್ಲಿಯೇ ನಾನಾ ರೀತಿಯ ಖಾಯಿಲೆಗಳಿಗೆ ಮತ್ತು ಖಿನ್ನತೆಗಳಿಗೆ ಒಳಗಾಗಿ ತಾವೂ ನರಳುವುದಲ್ಲಿದೇ, ಕುಟುಂಬ, ತಮ್ಮನ್ನು ಅವಲಂಭಿಸಿರುವವರನ್ನು ಮತ್ತು ಇಡೀ ಸಮಾಜವನ್ನೇ ತೊಂದರೆ ಗೀಡುಮಾಡುತ್ತಿರುವುದು ನಿಜಕ್ಕೂ ಕಳವಳಕಾರಿಯಾಗಿದೆ. ಇತ್ತೀಚೆಗೆ ನಮ್ಮ ದೇಶದ ಇಬ್ಬರು ಮಹಾನ್ ನಾಯಕರುಗಳಾದ ಶ್ರೀಮತಿ ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿಯವರ ಸಾವಿನ ಹಿಂದಿನ… Read More ಆರೋಗ್ಯವೇ ಭಾಗ್ಯ! FIT INDIA ಅಭಿಯಾನ

ಕೃಷ್ಣಪ್ಪ ಗೌತಮ್

ಯಾವುದೇ ಕ್ಷೇತ್ರದಲ್ಲಿ, ಯಾರಾದರೂ ಮಹತ್ತರ ಸಾಧನೆ ಮಾಡಿದಲ್ಲಿ ಅದನ್ನು ಆ ಕೂಡಲೇ ನಾಲ್ಕಾರು ಜನ ಗಮನಿಸಿ ಅವರ ಬಗ್ಗೆ ಸ್ಪೂರ್ತಿದಾಯಕವಾಗಿ ಪ್ರೋತ್ಸಾಹಕರ ಮಾತುಗಳನ್ನು ಆಡಿದಲ್ಲಿ, ಆ ಸಾಧನೆ ಮಾಡಿದವರಿಗೆ ಉತ್ತೇಜನ ದೊರೆತು ಮತ್ತಷ್ಟೂ ಉತ್ತಮವಾದ ಸಾಧನೆ ಮಾಡುವ ಹುಮಸ್ಸು ಮೂಡುತ್ತದೆ. ದುರದೃಷ್ಟವಶಾತ್, ಭಾರತ ಮತ್ತು ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯಾವಳಿಗಳೇ ಅತ್ಯಂತ ಮಹತ್ವ ಪಡೆದದ್ದಕ್ಕೋ ಇಲ್ಲವೇ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನಿರ್ಲಕ್ಷದ ಪರಿಣಾಮವಾಗಿಯೋ ಇತ್ತೀಚೆಗೆ ಕರ್ನಾಟಕ ರಾಜ್ಯ ಕ್ರಿಕೆಟ್… Read More ಕೃಷ್ಣಪ್ಪ ಗೌತಮ್

ಭಾಷಾ ಹೇರಿಕೆಯೋ, ಇಲ್ಲಾ ವಿಷಯಾಂತರವೋ

ಇದ್ದಕ್ಕಿದ್ದಂತೆಯೇ ಎರಡ್ಮೂರು ದಿನಗಳಿಂದ ನಮ್ಮ ಖನ್ನಢ ಉಟ್ಟು ಓರಾಟಗಾರರು ಎದ್ದೂ ಬಿದ್ದು ಓಡಾಡ್ತಾ ಅವ್ರೇ ಮತ್ತು ಸ್ಯಾನೇ ಮಾತಾಡ್ತಾ ಅವ್ರೆ!! . ಅರೇ ಯಾಕಪ್ಪಾ!! ಇಷ್ಟು ಬೇಗ ನವೆಂಬರ್ ತಿಂಗಳು ಬಂದು ಬಿಡ್ತಾ?. ಮೊನ್ನೇ ಇನ್ನೂ ಆಗಷ್ಟ್ 15, ದೇಶದ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿರೋ ಖುಷೀನೇ ಇನ್ನೂ ತಣ್ಣಗಾಗಿಲ್ಲ. ಆಷ್ಟರೊಳಗೆ ಕರ್ನಾಟಕ ರಾಜ್ಯೋತ್ಸವ ಬಂದು ಬಿಡ್ತಾ ಅಂತಾ ಯೋಚಿಸಿ ಅಲ್ಲೇ ಬಿಳಿ ಪ್ಯಾಂಟ್ ಬಿಳೀ ಶರ್ಟ್ ಹಾಕಿಕೊಂಡು, ಕೊರಳಲ್ಲಿ ನಾಯಿ ಚೈನ್ ತರಹ ಚಿನ್ನದ ಚೈನ್… Read More ಭಾಷಾ ಹೇರಿಕೆಯೋ, ಇಲ್ಲಾ ವಿಷಯಾಂತರವೋ