ಶ್ರೀ ರಾಘವೇಂದ್ರ ಸ್ವಾಮಿಗಳು

ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆರಾಧನೆಯ ಸಂಧರ್ಭದಲ್ಲಿ ಸ್ವಾಮಿಗಳ ಸಾಧನೆ ಮತ್ತವರ ಪವಾಡಗಳ ಪರಿಚಯ ಇದೋ ನಿಮಗಾಗಿ… Read More ಶ್ರೀ ರಾಘವೇಂದ್ರ ಸ್ವಾಮಿಗಳು

73ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ

ಈ ಬಾರಿಯ ಆಗಶ್ಟ್ 15, 2019 ಒಂದು ರೀತಿಯ ಅಪರೂಪದ ದಿನ. ನಾಡಿಗೆ 73ನೇ  ಸ್ವಾತಂತ್ರ್ಯ ದಿನಾಚರಣೆ, ಕೆಚ್ಚದೆಯ ಸೇನಾನಿ ಸಂಗೊಳ್ಳಿ ರಾಯಣ್ಣನ ಜನ್ಮದಿನದ ಸಡಗರವಾದರೇ  ಇನ್ನು ಮನೆಗಳಲ್ಲಿ ನಾರಿಯರಿಗೆ   ರಕ್ಷಾಬಂಧನದ  ಸಂಭ್ರಮ,  ಬಹುತೇಕ ನರರಿಗೆ ನೂಲುಹುಣ್ಣಿಯ ಆಚರಣೆ.  ಅಂಗಡಿಯಲ್ಲಿ ಒಂದೆಡೆ ನೂರಾರು ತ್ರಿವರ್ಣ ಧ್ವಜದ ಭರಾಟೆಯಾದರೆ ಮತ್ತೊಂದೆಡೆ ಸಾವಿರಾರು ರಾಖಿಗಳ  ಸರಮಾಲೆ ಮತ್ತೊಂದೆಡೆ ಸದ್ದಿಲ್ಲದೆ ಕೆಲವಾರು ಜನಿವಾರಗಳ ಮಾರಾಟ. ಒಟ್ಟಿನಲ್ಲಿ ಎಲ್ಲರಿಗೂ ಕೊಂಡಾಟವೇ ಕೊಂಡಾಟ. ಮೂರ್ನಾಲ್ಕು  ದಿನಗಳಿಂದ  ಆರೋಗ್ಯ ಸರಿಯಿಲ್ಲದೇ  ಗೃಹಬಂಧನದಲ್ಲಿಯೇ ಇದ್ದ ನನಗೆ ಇಂದು… Read More 73ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ

ಅನಿಷ್ಟಕೆಲ್ಲಾ ಶನೀಶ್ವರನೇ ಕಾರಣ.

ಕಳೆದ ಎರಡು ವಾರಗಳಿಂದ ನಮ್ಮ ರಾಜ್ಯದ ಬಹುತೇಕ ಪ್ರದೇಶಗಳು ಆಶ್ಲೇಷ ಮಳೆಗೆ ಬಲಿಯಾಗಿ ಮುಳುಗಿ ಹೋಗಿದೆ. ನೆನ್ನೆ ತನಕ ಪ್ರಕೃತಿಯನ್ನು ಎಗ್ಗಿಲ್ಲದೆ ನಾಶ ಮಾಡಿ ತಮ್ಮ ಸಾಮ್ರಾಜ್ಯವನ್ನು ವಿಸ್ಥಾರ ಮಾಡಿಕೊಂಡು ಸಾವಿರಾರು ಎಕರೆ ತೋಟ ಮಾಡಿ ಕೊಂಡು ಐಶಾರಾಮಿ ಬಂಗಲೆಯಲ್ಲಿ ವಾಸ ಮಾಡಿ ಕೊಂಡು ನೂರಾರು ಕೂಲಿ ಕಾರ್ಮಿಕರಿಗೆ ಮಾಲಿಕರಾಗಿದ್ದವರು ಇಂದು ಎಲ್ಲವನ್ನೂ ಕಳೆದು ಕೊಂಡು ಅದೇ ಕೂಲಿಗಳ ಜೊತೆಯಲ್ಲಿಯೇ ಗಂಜೀ ಕೇಂದ್ರದಲ್ಲಿ ನಿರಾಶ್ರಿತರಾಗಿರುವವರು ಬಹಳ ಮಂದಿ ಇದ್ದಾರೆ. ನಮ್ಮ ರಾಜ್ಯದಂತೆ ನೆರೆ ರಾಜ್ಯವಾದ ಕೇರಳದಲ್ಲೂ ವಿಪರೀತವಾದ… Read More ಅನಿಷ್ಟಕೆಲ್ಲಾ ಶನೀಶ್ವರನೇ ಕಾರಣ.

ವಿದ್ಯೆ ಮತ್ತು ಸಂಸ್ಕಾರ

ಕಳೆದ ವಾರ ನನ್ನ ಆತ್ಮೀಯ ಗೆಳೆಯರು ಅದರಲ್ಲೂ ವಿಶೇಷವಾಗಿ ಕನ್ನಡ ಪ್ರಾಧ್ಯಾಪಕರು ವಿದ್ಯೆ ಮತ್ತು ಸಂಸ್ಕಾರ ಎರಡೂ ಒಂದು ರೀತಿಯ ಜೋಡಿ ಪದಗಳು ಹೌದಾದರೂ ಇವರೆಡಲ್ಲಿರುವ ವೆತ್ಯಾಸ ಏನಿರಬಹುದು ಎಂದು ವ್ಯಾಟ್ಯಾಪ್ ಮುಖೇನ ಪ್ರಶ್ನಿಸಿದರು. ಅವರು ಕೇಳಿರುವ ಪ್ರಶ್ನೆ ನೋಡಲು ಸುಲಭವಾಗಿದ್ದರೂ ಉತ್ತರಿಸಲು ಸ್ವಲ್ಪ ಕಠಿಣ ಎಂದು ಸ್ವಲ್ಪ ಯೋಚಿಸಿದ ನಂತರ ಅರಿವಾಯಿತಾದರೂ, ಕೂಡಲೇ ಸಂಸ್ಕಾರ ಎನ್ನುವುದು ಜೀವನದ ತಳಹದಿ. ಬಹಳಷ್ಘು ಬಾರಿ ಅದು ನಮ್ಮ ತಂದೆ ತಾಯಿ, ಇಲ್ಲವೇ ಕುಟುಂಬ ಮತ್ತು ನೆರೆಹೊರೆಯವರ ಪ್ರಭಾವ, ಬೆಳೆದು… Read More ವಿದ್ಯೆ ಮತ್ತು ಸಂಸ್ಕಾರ

ಅಲ್ಲಾಡ್ತಾ ಇದೆ, ಅಲ್ಲಾಡ್ತಾ ಇದೆ.

ನಮ್ಮಂತಹ ಮಧ್ಯಮ ವರ್ಗದವರಿಗೆ ವಿಮಾನದಲ್ಲಿ ಪ್ರಯಾಣ ಮಾಡುವುದೆಂದರೆ ಅದೇನೋ ಖುಷಿ. ದೂರ ದೂರದ ಪ್ರದೇಶಗಳಿಗೆ ಕೆಲವೇ ಗಂಟೆಗಳಲ್ಲಿ ಹೋಗುಬಹುದು ಎಂಬ ಸಂಭ್ರಮ. ಅದರೆ ನಾವೂ ನೀವು ಎಣಿಸಿದಂತೆ ವಿಮಾನಯಾನ ಅಷ್ಟು ಸುಲಭದಲ್ಲವಾಗಿದ್ದು, ವಿಮಾನ ಯಾನದ ಸಮಯದಲ್ಲಿ ಹೃದಯವೇ ಬಾಯಿಗೆ ಬಂದಂತೆ ಆಗಿ ಅಂದು ನಾನು ಅನುಭವಿಸಿದ ರೋಚಕತೆಗಳು ಇದೋ ನಿಮಗಾಗಿ. ವರ್ಷಗಳ ಹಿಂದೆ ಕಛೇರಿಯ ಕೆಲಸದ ನಿಮಿತ್ತ ಜಪಾನ್ ದೇಶದ ಟೋಕೀಯೋ ನಮ್ಮ ಮತ್ತೊಂದು ಶಾಖೆಗೆ ಹೋಗುವ ಸಂದರ್ಭ ಒದಗಿ ಬಂದಿತ್ತು. ಅದು ನನ್ನ ಮೊತ್ತ ಮೊದಲ… Read More ಅಲ್ಲಾಡ್ತಾ ಇದೆ, ಅಲ್ಲಾಡ್ತಾ ಇದೆ.

ಸೋತು ಗೆದ್ದವರು ಸುಷ್ಮಾ ಸ್ವರಾಜ್

1999ರ ಲೋಕಸಭಾ ಚುನಾವಣೆ. ಕಾಂಗ್ರೇಸ್ ಮತ್ತು ಬಿಜೆಪಿ ಎರಡೂ ಪಕ್ಷಗಳೂ ತಮ್ಮ ಸ್ವಂತ ಬಲದಿಂದ ಆಡಳಿತದ ಚುಕ್ಕಾಣಿ ಹಿಡಿಯಲು ಜಿದ್ದಾ ಜಿದ್ದಿನಿಂದ ಹೋರಾಟಕ್ಕೆ ನಿಂತಿದ್ದವು. ದಕ್ಷಿಣ ಭಾರತದಲ್ಲಿ ಕಾಂಗ್ರೇಸ್ಸಿಗರ ಬಲ ಹೆಚ್ಚಿಸಲೆಂದೇ ಅಂದಿನ ಕಾಂಗ್ರೇಸ್ ಪಕ್ಷದ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿಯವರು ಉತ್ತರಪ್ರದೇಶದ ಅಮೆಥಿಯ ಜೊತೆಗೆ ಕರ್ನಾಟಕದ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದಾಗ, ಎಲ್ಲರಿಗೂ ಸೋನಿಯಾ ಗಾಂಧಿಯ ವಿರುದ್ಧ ಭಾರತೀಯ ಜನತಾಪಕ್ಷದ ಅಭ್ಯರ್ಥಿ ಯಾರಿರಬಹುದೆಂಬ ಕುತೂಹಲ. ಜನರ ನಿರೀಕ್ಷೆಗೂ ಸಿಲುಕದಂತ ತುಸು ಕಡಿಮೆ ಎತ್ತರದ, ಸದಾ ಬಣ್ಣ… Read More ಸೋತು ಗೆದ್ದವರು ಸುಷ್ಮಾ ಸ್ವರಾಜ್

ಜಾಫರ್ ಷರೀಫ್

ಜಾಫರ್ ಷರೀಫ್, 70-90ರ ದಶಕದಲ್ಲಿ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಅತ್ಯಂತ ಪ್ರಭಾವೀ ಹೆಸರು. ಮೂಲತಃ ಚಿತ್ರದುರ್ಗದ ಕಡೆಯವರಾದ ಷರೀಫರು, ನಿಜಲಿಂಗಪ್ಪನವರ ಸಹಾಯಕರಾಗಿ ಸಂಸ್ಥಾ ಕಾಂಗ್ರೇಸ್ ಮತ್ತು ಇಂದಿರಾ ಕಾಂಗ್ರೇಸ್ ಎಂದು ಇಬ್ಭಾಗವಾದಾಗ, ಇಂದಿರಾ ಕಿಚನ್ ಕ್ಯಾಬಿನೆಟ್ ಭಾಗವಾಗಿ ರಾಜಕಾರಣದ ಉತ್ತುಂಗದ ಸ್ಥಿತಿ ತಲುಪಿದ್ದವರು. ನರಸಿಂಹರಾಯರ ಆಳ್ವಿಕೆಯಲ್ಲಿ ಕೇಂದ್ರದ ರೈಲ್ವೇ ಸಚಿವರಾಗಿದ್ದ ಶ್ರೀಯುತರು ಒಂದು ಕಾಲಕ್ಕೆ ತಮ್ಮ ಪ್ರಭಾವೀ ವ್ಯಕ್ತಿತ್ವದಿಂದಾಗಿ ರಾಜ್ಯದಲ್ಲಿಯೇ ಮುಖ್ಯಮಂತ್ರಿ ‌ಸ್ಥಾನದ ಮೇಲೂ ಕಣ್ಣಿಟ್ಟಿದ್ದದ್ದು ಅದು ಅವರಿಗೆ ಮರೀಚಿಕೆಯಾಗಿಯೇ ಉಳಿದು ಹೋದದ್ದು ವಿಪರ್ಯಾಸವೇ ಸರಿ.… Read More ಜಾಫರ್ ಷರೀಫ್

ಅಂತಿಮ ಪಯಣಕ್ಕೂ ದೊರೆಯುವುದಿಲ್ಲಾ ಪುಗಸಟ್ಟೆ ಪರ್ಮಿಟ್

ಕಳೆದ ಎರಡು ದಿನಗಳಿಂದಲೂ ರಾಜ್ಯದಲ್ಲಿ ಒಂದು ರೀತಿಯ ಸೂತಕದ ಛಾಯೆ. ಕರ್ನಾಟಕದ ಕಾಫಿಯ ಕಂಪನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಏರಿಸಿದ್ದ , ಹತ್ತು ರೂಪಾಯಿಗೆ ಬಿಸಿ ಬಿಸಿ ಕಾಫಿ ಕುಡಿಯಲು ಹಿಂದು ಮುಂದು ನೋಡುತ್ತಿದ್ದ ಭಾರತೀಯರಿಗೆ ಅದೇ ಕಾಫಿಯನ್ನು ತಣ್ಣಗೆ ಮಾಡಿ ನೂರಾರು ರೂಪಾಯಿಗಳಿಗೆ ಕುಡಿಸುವ ಚಟವನ್ನು ಹತ್ತಿಸಿದ್ದ , ತನ್ಮೂಲಕವೇ ಸಾವಿರಾರು ಜನರಿಗೆ ಉದ್ಯೋಗ ಒದಗಿಸಿದ್ದ ಉದ್ಯಮಿಯ ನಾಪತ್ತೆಯ ವಿಷಯ ಎಲ್ಲರ ಮನಸ್ಸಿನಲ್ಲಿ ದುಗುಡ ತುಂಬಿತ್ತು. ಇಡೀ ಜಿಲ್ಲಾಡಳಿತವೇ ಸಜ್ಜಾಗಿ ನಾನಾ ರೀತಿಯಲ್ಲಿ ಅವರನ್ನು ಹುಡುಕುವ ಪ್ರಯತ್ನ… Read More ಅಂತಿಮ ಪಯಣಕ್ಕೂ ದೊರೆಯುವುದಿಲ್ಲಾ ಪುಗಸಟ್ಟೆ ಪರ್ಮಿಟ್

ಮಳೇ ನೀರಿನ ಕೊಯ್ಲು ಮತ್ತು ಅಂತರ್ಜಲ ಸದ್ಬಳಕೆ

ವಿದ್ಯಾರಣ್ಯಪುರ ಮಂಥನದ ಹತ್ತನೇ ಕಾರ್ಯಕ್ರಮ ನಿಗಧಿಯಾಗಿದ್ದಂತೆ, ಮಳೇ ನೀರಿನ ಕೊಯ್ಲು ಮತ್ತು ಅಂತರ್ಜಲ ಸದ್ಬಳಕೆ ಕುರಿತಾದ ವಿಷಯದ ಬಗ್ಗೆ ಕಾರ್ಯಕ್ರಮದ ಇಂದಿನ ವಕ್ತಾರರಾದ ಶ್ರೀಯುತ ವಿಶ್ವನಾಥ್ ಶ್ರಿಕಂಠಯ್ಯ (ಜಲ ಸಂರಕ್ಷರು ಮತ್ತು ಮಳೆ ನೀರು ಕೊಯ್ಲು ತಜ್ಞರು) ಅವರ ಅಮೃತ ಹಸ್ತದಿಂದ ಭಾರತಮಾತೆಗೆ ಪುಷ್ಪಾರ್ಚನೆ ಸಲ್ಲಿಸುವುದರೊಂದಿಗೆ ಮತ್ತು ಶ್ರೀಮತಿ ಪ್ರೀತಿ ಜಯಂತ್ ಅವರ ಸುಶ್ರಾವ್ಯ ಕಂಠದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ನಮ್ಮ ದೇಶದ ಸಂಸ್ಕೃತಿ ಮತ್ತು ಇತಿಹಾಸ ಸುಮಾರು ಐದು ಸಾವಿರ ವರ್ಷಗಳ ಹಿಂದಿನ ಸಿಂಧೂ ನದಿ… Read More ಮಳೇ ನೀರಿನ ಕೊಯ್ಲು ಮತ್ತು ಅಂತರ್ಜಲ ಸದ್ಬಳಕೆ