ಆ-ರಕ್ಷಕರೋ ಇಲ್ಲಾ ಭಕ್ಷಕರೋ?

ಕೆಲ ದಿನಗಳ ಹಿಂದೆ weekend with ramesh ಕಾರ್ಯಕ್ರಮದಲ್ಲಿ infosys ಸಂಸ್ಥಾಪಕರಾದ ಶ್ರೀ ನಾರಾಯಣ ಮೂರ್ತಿಗಳು ಹೇಳಿದ ಮಾತು ಮೊದಲು ಅರಗಿಸಿಕೊಳ್ಳಲು ಸ್ವಲ್ಪ ಕಸಿವಿಸಿ ಎನಿಸಿದರೂ ನಿಧಾನವಾಗಿ ಆಲೋಚಿಸಿದಾಗ ಅವರು ಹೇಳಿದ್ದು ಸರಿಯೇ ಎನಿಸಿತು. ಪಾಶ್ಚಾತ್ಯ ದೇಶಗಳಿಗೆ ಹೋಲಿಸಿದಲ್ಲಿ ನಮ್ಮ ದೇಶದ ಜನ ಶಿಸ್ತು ಸಂಯಮ ಕಾಪಾಡುವುದು ಸ್ವಲ್ಪ ಕಡಿಮೆ ಅವರು ಸದಾ ಕಾನೂನು ಮುರಿಯುವುದರಲ್ಲಿಯೇ ಹೆಚ್ಚಿನ ಸಂತೋಷ ಪಡುತ್ತಾರೆ ಎಂಬರ್ಥದಲ್ಲಿ ಹೇಳಿದ್ದರು. ಹಾಗಾಗಿ ಇಂತಹ ಜನರನ್ನು ಕಾನೂನಾತ್ಮವಾಗಿ ಪರಿಪಾಲಿಸಲು ಮತ್ತು ಅದನ್ನು ಹದ್ದು ಮೀರಿದಲ್ಲಿ ಸರಿದಾರಿಗೆ… Read More ಆ-ರಕ್ಷಕರೋ ಇಲ್ಲಾ ಭಕ್ಷಕರೋ?

ಸಹಕಾರ ನಗರದ ಸೈಕಲ್ ಡೇ ಮತ್ತು ದೇಸೀ ಆಟಗಳು

ಜೇಷ್ಠ ಮಾಸ ಇನ್ನೇನು ಮುಗಿಯುತ್ತಿದ್ದು, ಆಷಾಡ ಮಾಸ ಆರಂಭವಾಗುತ್ತಲಿದೆ.  ಆಷಾಡ ಮಾಸದ ಗಾಳಿಯ ರಭಸ ಈಗಾಗಲೇ ಹೆಚ್ಚಾಗಿಯೇ ಹೋಗಿದೆ. ಹೇಳೀ ಕೇಳಿ ಭಾನುವಾರ ಎಂದರೆ  ಬಹಳಷ್ಟು ಬೆಂಗಳೂರಿಗರಿಗೆ ಬೆಳಾಗಾಗುವುದೇ ಸೂರ್ಯ ನೆತ್ತಿಗೆ ಬಂದ ಮೇಲೆಯೇ ಎಂದರೆ ತಪ್ಪಾಗಲಾರದೇನೋ? ಆದರೆ ಅದಕ್ಕೆ ಅಪವಾದ ಎಂಬಂತೆ ಇಂದು  ಬೆಂಗಳೂರಿನ ಉತ್ತರದ ಭಾಗದ ಸಹಕಾರ ನಗರದಲ್ಲಿ ಬೆಳ್ಳಂಬೆಳ್ಳಗ್ಗೆಯೇ  ಹಬ್ಬದ ವಾತಾವರಣ ಮೂಡಿತ್ತು ಎಂದರೆ ತಪ್ಪಾಗಲಾದರದು. ಕಾರು, ಬಸ್,  ನಾನಾ ತರಹದ ದ್ವಿಚಕ್ರ ವಾಹನಗಳು ಮುಂತಾದ ಮೋಟಾರು ವಾಹನಗಳ ದಟ್ಟಣೆ  ಅವುಗಳು ಉಗುಳುವ… Read More ಸಹಕಾರ ನಗರದ ಸೈಕಲ್ ಡೇ ಮತ್ತು ದೇಸೀ ಆಟಗಳು

ಯಾರೋ ಯಾರೋ ಗೀಚಿ ಹೋದಾ, ಹಾಳು ಹಣೆಯ ಬರಹ

ಮೊನ್ನೆ ಯೋಗ ದಿನಾಚರಣೆಯ ಹಿಂದಿನ ದಿನ ಬೆಳಿಗ್ಗೆ ಸಂಪರ್ಕಕ್ಕೆಂದು ಹಲವಾರು ಜನರನ್ನು ಭೇಟಿ ಮಾಡಲು ಹೋಗುವ ಸಂಧರ್ಭದಲ್ಲಿ ನಮ್ಮ ಕಾರ್ಯಕರ್ತ ಗುರು ಆವರ ಮನೆಗೂ ಹೋಗಿದ್ದೆವು. ಅವರ ಮನೆಯ ಮುಂದೆ ನಮ್ಮ ಗಾಡಿಗಳನ್ನು ನಿಲ್ಲಿಸುವಾಗಲೇ ಗುರು ಎಲ್ಲಿಗೋ ಹೊರಡಲು ಅನುವಾಗಿದ್ದನ್ನು ನೋಡಿ, ಕ್ಷಿಪ್ರವಾಗಿ ನಾಳಿನ ಕಾರ್ಯಕ್ರಮದ ಸ್ವರೂಪ ತಿಳಿಸಿ, ನೀವೇಲ್ಲೋ ಹೊರಟಿದ್ದೀರಿ. ಹೋಗಿ ಬನ್ನಿ ನಿಮ್ಮ ಕಾರ್ಯ ಯಶಸ್ವಿಯಾಗಲಿ ಎಂದು ಹಾರೈಸಿದಾಗ. ಎಲ್ಲಿ ಜೀ ಶುಭ. ನಾನು ಹೋಗುತ್ತಿರುವುದೇ ಆಶುಭ ಕಾರ್ಯಕ್ರಮಕ್ಕೆ ಎಂದಾಗ ಒಮ್ಮೆಲೆ ಮನಸ್ಸು ಪಿಚ್ಚೆನಿಸಿತು.… Read More ಯಾರೋ ಯಾರೋ ಗೀಚಿ ಹೋದಾ, ಹಾಳು ಹಣೆಯ ಬರಹ

ಅಂತರಾಷ್ಟ್ರೀಯ ಯೋಗ ದಿನಾಚರಣೆ 2019

ಯೋಗ ಎಂಬುದು ನಮ್ಮ  ಭಾರತೀಯರ ಪರಂಪರೆಯ ಒಂದು ಬಹುಮುಖ್ಯ ಅಂಗವಾಗಿದೆ. ನಮ್ಮ  ಋಷಿಮುನಿಗಳ ಸಹಸ್ರಾರು ವರ್ಷಗಳ ಪರಿಶ್ರಮದ ಫಲವೇ ಯೋಗಾಸನ. ಇತರೇ ಎಲ್ಲಾ ವ್ಯಾಯಾಮಗಳು ಕೇವಲ ದೈಹಿಕ ಸಧೃಡತೆ ಕೊಟ್ಟರೆ  ಯೋಗಾಸನ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಸಡೃಡತೆ ಕೊಡುತ್ತದೆ ಎಂಬುದು ಈಗ ಜಗಜ್ಜಾಹೀರಾತಾಗಿರುವ ವಿಷಯ  ಅದಕ್ಕೆಂದೇ ಸಾವಿರಾರು ವರ್ಷಗಳ ಹಿಂದೆ ಸಡೃಡ ಆರೋಗ್ಯಕ್ಕಾಗಿ ದೇವರನ್ನು ನಮಿಸುವುದರೊಂದಿಗೆ ಯೋಗಾಸನ ಮಾಡಬೇಕು ಎಂದು ಭಾರತೀಯ ಋಷಿಮುನಿಗಳು ತೋರಿಸಿಕೊಟ್ಟರು.  ಅದಕ್ಕೆ ಪತಂಜಲಿ ಮಹರ್ಷಿಗಳು  ಒಂದು ರೂಪವನ್ನು ಕೊಟ್ಟು  ಯೋಗ  ಪಿತಾಮಹ… Read More ಅಂತರಾಷ್ಟ್ರೀಯ ಯೋಗ ದಿನಾಚರಣೆ 2019

ಪ್ರಾಣ ಸ್ನೇಹಿತರ ಪರಿಸರ ಪ್ರೇಮ

ಬಾಲ್ಯದ ಗೆಳೆಯ/ಗೆಳತಿಯರ ಗೆಳೆತನ ಸಾಧಾರಣವಾಗಿ ಶಾಲೆಯ ವಿದ್ಯಾಭ್ಯಾಸ ಮುಗಿಯುವವರೆಗೂ ಇರುತ್ತದೆ. ಹೆಚ್ಚೆಂದರೆ ಒಂದಿಬ್ಬರ ಗೆಳೆತನ ಕಾಲೇಜಿನವರೆಗೆ ‌ಮುಂದುವರಿದರೆ ಭಾರಿ ಅನಿಸುತ್ತದೆ. ‌ಅದರಲ್ಲೂ ಹೆಚ್.ಎಂ.ಟಿ ಕಾರ್ಖಾನೆಯ ಕಾರ್ಮಿಕರ ಮಕ್ಕಳು ಎಂದರೆ ಮಧ್ಯಮ ‌ವರ್ಗದ ಜನ. ಎಲ್ಲರ ವಾಸ, ಕಾರ್ಖಾನೆಯ ಕಾಲೋನಿಯಲ್ಲಿ ಎಲ್ಲಾ ಭಾಷೆಯ, ಎಲ್ಲಾ ವರ್ಗದ , ಎಲ್ಲಾ ಧರ್ಮದ, ಜನ ಒಂದೇ ಕಡೆ ಒಟ್ಟಾಗಿ ಆಟ, ಪಾಠವಾಡುತ್ತಾ ಒಟ್ಟೊಟ್ಟಿಗೆ ‌ಬೆಳೆಯುವವರು. ಇದೆಲ್ಲಾ ‌ತಮ್ಮ ತಂದೆಯವರು ಕೆಲಸದಿಂದ ನಿವೃತ್ತಿ ಹೊಂದಿದಾಗಲೋ ಇಲ್ಲವೇ ಸ್ವಂತ ಮನೆ ಕಟ್ಟಿಸಿಕೊಂಡು ಹೋಗುವವರೆಗೆ ಇರುತ್ತದೆ.… Read More ಪ್ರಾಣ ಸ್ನೇಹಿತರ ಪರಿಸರ ಪ್ರೇಮ

ನಾನು ಅಪ್ಪನಾದ ಮಧುರ ಕ್ಷಣ

ಭಾರತದಂತಹ ಪುಣ್ಯಭೂಮಿಯಲ್ಲಿ ಹುಟ್ಟುವುದಕ್ಕೇ ಪುಣ್ಯ ಮಾಡಿರ ಬೇಕು. ಇನ್ನು ಕಾಲ ಕ್ರಮೇಣ ದೊಡ್ಡವರಾಗುತ್ತಿದ್ದಂತೆಯೇ, ಅವರೇ ಅಪ್ಪಾ, ಅಮ್ಮಾ ಇಲ್ಲವೇ ತಾತ ಮತ್ತು ಅಜ್ಜಿಯರಾಗಿ ಭಡ್ತಿ ಪಡೆಯುವ ಅನುಭವವಂತೂ ನಿಜಕ್ಕೂ ಅದ್ಭುತ ಮತ್ತು ಅವರ್ಣನೀಯವೇ ಸರಿ.

ಇನ್ನು ನಿಮ್ಮವನೇ ಉಮಾಸುತದಿಂದ ಸೃಷ್ಟಿಕರ್ತ ಉಮಾಸುತ ಎಂಬ ಅಡಿಬರಹ ಬರೆಯಲು ಕಾರಣವೇನು? ಎಂಬೆಲ್ಲಾ ಕುತೂಹಲಕ್ಕೆ ಇಲ್ಲಿದೇ ಉತ್ತರ.… Read More ನಾನು ಅಪ್ಪನಾದ ಮಧುರ ಕ್ಷಣ

ಮನಸ್ಸಿದ್ದಲ್ಲಿ ಮಾರ್ಗ

ಅಮೆರಿಕದಲ್ಲಿದ್ದರೂ ತನ್ನ ಭಾರತದಲ್ಲಿನ ಹುಟ್ಟೂರಿಗೆ ಸಹಾಯ ಮಾಡಿದ ಮಹಾರಾಷ್ಟ್ರ ಕರ್ನಾಟಕ ಗಡಿಯಲ್ಲಿನ ಯುವಕ ದತ್ತ ಪಾಟೀಲ. ಭಾರತದ ಬರ ಪ್ರದೇಶದಲ್ಲಿ ಅಂತರ್ಜಲ ಮಟ್ಟವನ್ನು 800 ಅಡಿಯಿಂದ 100 ಅಡಿಗೆ ತಂದ ಯುವಕನ ಸಾಹಸಗಾಥೆ. ಸರ್ಕಾರಗಳು ಇದನ್ನು ಅರಿತು ಕೆಲಸ ಮಾಡಬೇಕು. 2016ರಲ್ಲಿ ಮಹಾರಾಷ್ಟ್ರ ಅತಿಹೆಚ್ಚು ಬರವನ್ನು ಕಂಡಿತ್ತು. ಜನರು ಕುಡಿಯುವ ನೀರಿಗೂ ಪರದಾಡಿದ್ದರು. ಈತನ ಉಳಿದಿದ್ದ ಕ್ಯಾಲಿಫೋರ್ನಿಯ ಕೂಡ ಕಳೆದ ಐದು ವರ್ಷದಿಂದ ನೀರಿನ ಬರ ಕಂಡಿತ್ತು. ಭಾರತಕ್ಕೆ ಪ್ರವಾಸಕ್ಕೆಂದು ಬಂದ ದತ್ತ ಪಾಟೀಲ ಬರೀ ಕಂಡಿದ್ದು… Read More ಮನಸ್ಸಿದ್ದಲ್ಲಿ ಮಾರ್ಗ

ಹಳ್ಳಿಗಳು ಮತ್ತು ನಗರ ಪ್ರದೇಶಗಳಲ್ಲಿ ಸ್ವಚ್ಛ ಭಾರತದ ಅನುಷ್ಠಾನ

ಇತ್ತೀಚಿಗೆ ವ್ಯಾಟ್ಸಪ್ಬಲ್ಲಿನ ನೋಡಿದ ಒಂದು ಗೋಡೇ ಬರಹ ನನ್ನನ್ನು ಬಹಳಷ್ಟು ಕಾಡಿತು. ಅದರ ಸಾರಾಂಶ ಈ ರೀತಿಯಾಗಿದೆ. ಮಗ ತಾಯಿಗೆ ಕೂಗಿ ಹೇಳುತ್ತಾನೆ. ಅಮ್ಮಾ ಕಸದವರು ಬಂದಿದ್ದಾರೆ. ಅದಕ್ಕೆ ಮನೆಯೊಳಗಿನಿಂದ ತಾಯಿ ಶಾಂತಚಿತ್ತದಿಂದ ಮಗನಿಗೆ ತಿಳಿ ಹೇಳುತ್ತಾಳೆ. ಮಗೂ ಕಸದವರು ಅವರಲ್ಲ , ನಾವುಗಳು. ಅವರು  ನಾವು ಮಾಡಿದ ಕಸವನ್ನು ಸ್ವಚ್ಛ ಗೊಳಿಸಲು ಬಂದಿದ್ದಾರೆ. ಇನ್ನೊಬ್ಬರ ಕೆಲಸವನ್ನು ಹೀಯಾಳಿಸದೆ ನಮ್ಮ ಮನಸ್ಥಿತಿಯನ್ನು ನಮ್ಮ ದೃಷ್ಟಿಕೋನವನ್ನು ಬದಲಿಸಿ ನೋಡು ಎಲ್ಲವೂ ಸ್ಚಚ್ಚವಾಗಿ ಕಾಣುತ್ತದೆ ಎಂದು ‌ಸುಂದರವಾಗಿ ಸ್ವಚ್ಚತೆಯ ಬಗ್ಗೆ… Read More ಹಳ್ಳಿಗಳು ಮತ್ತು ನಗರ ಪ್ರದೇಶಗಳಲ್ಲಿ ಸ್ವಚ್ಛ ಭಾರತದ ಅನುಷ್ಠಾನ

ಮಳೆ ನೀರು ಕೂಯ್ಲು ಮತ್ತು ನೀರಿನ ಸದ್ಬಳಕೆ

ನೀರು ಮನುಷ್ಯನ ಅತ್ಯಗತ್ಯ ಜೀವನಾಂಶಕ ಪದಾರ್ಥವಾಗಿದೆ. ಒಂದು ಪಕ್ಷ ಆಹಾರವಿಲ್ಲದೇ ಕೆಲವು ದಿನಗಳು ಜೀವಿಸಬಲ್ಲ. ಆದರೆ ನೀರಿಲ್ಲದೆ ಒಂದು ದಿನವೂ ಇರಲಾರ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಹೊಟ್ಟೆ ಮೇಲೆ ತಣ್ಣಿರು ಬಟ್ಟೆ ಹಾಕಿಕೊಂಡಾರೂ ಜೀವನ ಮಾಡ್ತೀವಿ ಎನ್ನುವ ಮಾತುಗಳನ್ನು ಸಾಮಾನ್ಯವಾಗಿ ನಾವೆಲ್ಲರೂ ಕೇಳಿರುತ್ತೇವೆ. ಹಿಂದೆಲ್ಲಾ ನಿತ್ಯಹರಿದ್ವರ್ಣ ಕಾಡುಗಳಿದ್ದವು. ಎಲ್ಲಾ ಕಡೆಯಲ್ಲೂ ಹಸಿರು ಮಯವಾಗಿರುತ್ತಿದ್ದು. ಹಾಗಾಗಿ ಕಾಲ ಕಾಲಕ್ಕೆ ಯಥೇಚ್ಚವಾಗಿ ಮಳೆಗಳು ಆಗುತ್ತಿದ್ದವು. ಕೆರೆ ಕಟ್ಟೆಗಳು, ಕಲ್ಯಾಣಿ, ಭಾವಿ ಮತ್ತು ಮತ್ತು ನದಿಗಳು ತುಂಬಿ ಹರಿಯುತ್ತಿದ್ದವು. ಇದರಿಂದ ಯಾರಿಗೂ ನೀರಿನ… Read More ಮಳೆ ನೀರು ಕೂಯ್ಲು ಮತ್ತು ನೀರಿನ ಸದ್ಬಳಕೆ