Time Bank, ಸಮಯದ ಬ್ಯಾಂಕು

ಮೊನ್ನೆ ಪರಿಚಯಸ್ತರೊಬ್ಬರ ಮನೆಗೆ ಹೋಗಿದ್ದೆ. ಹೀಗೇ ಅವರ ಬಳಿ ಮಾತಾನಾಡುತ್ತಿದ್ದಾಗ ಮಾತಿನ ಮಧ್ಯದಲ್ಲಿ ಸ್ವಿಡ್ವರ್ಲ್ಯಾಂಡಿನಲ್ಲಿ ಇರುವ ನಿಮ್ಮ ಮಗ ಹೇಗಿದ್ದಾರೆ ಎಂದು ಕೇಳಿದೆ. ಓ ಆವನಾ… ಹೂಂ ಈಗ ಚೆನ್ನಾಗಿದ್ದಾನೆ ಅಂದರು. ಓ ಅವನಾ.. ಎಂಬ ದೀರ್ಘ ಎಳೆದದ್ದು ನನಗೆ ಏನೂ ಸಮಸ್ಯೆ ಇರಬೇಕು ಎಂದು ತಿಳಿದು, ಯಾಕೆ ಏನಾಯ್ತು? ಎಲ್ಲಾ ಸರಿಯಾಗಿದೆ ತಾನೇ ಎಂದು ಮರು ಪ್ರಶ್ನಿಸಿದೆ. ಹೇ.. ಹೇ.. ಹಾಗೇನಿಲ್ಲಾ ಎಲ್ಲಾವೂ ಚೆನ್ನಾಗಿದೆ. ಒಂದೆರಡು ತಿಂಗಳ ಹಿಂದೆ ನಮ್ಮ ಮಗ ಅಲ್ಲಿ ತನ್ನ ಆಫೀಸಿಗೆ… Read More Time Bank, ಸಮಯದ ಬ್ಯಾಂಕು

ಮನೆ ಮನೆಯಲ್ಲೂ , ಮನ ಮನದಲ್ಲೂ , ಮೋದಿ ಮತ್ತೊಮ್ಮೆ

ಕಳೆದ ವಾರಾಂತ್ಯದಲ್ಲಿ ಲೋಕಸಭಾ ಚುನಾವಣೆಯ ಪ್ರಚಾರಕ್ಕೆಂದು ನಮ್ಮ ಸ್ನೇಹಿತರೊಂದಿಗೆ ಮನೆ ಮನೆಗೂ ಭೇಟಿ ನೀಡಿ ಪ್ರತಿಯೊಬ್ಬರಿಗೂ ಮತದಾನದ ಮಹತ್ವವನ್ನು ತಿಳಿಸಿ ಕಡ್ಡಾಯವಾಗಿ ಮತದಾನ ಮಾಡಲು ವಿನಂತಿಸಿಕೊಂಡೆವು. ಸಾಧಾರಣವಾಗಿ ಹೀಗೆ ಮತ ಪ್ರಚಾರಮಾಡಲು ಬರುವವರನ್ನು ಎಲ್ಲರೂ ಕೇಳುವ ಪ್ರಶ್ನೆ, ನೀವು ಯಾವ ಪಕ್ಷದವರು? ಯಾರ ಸಮರ್ಥಕರು? ಆದರೆ ನಾವು ಯಾವುದೇ ಪಕ್ಷದ ಪರವಾಗಿರದೆ ಜನಜಾಗೃತಿ ಹೆಸರಿನಲ್ಲಿ ಪ್ರತಿಯೊಬ್ಬರಿಗೂ ಮತದಾನ ದಿನವನ್ನು ನೆನಪಿಸಿ, ಮತ ಪಟ್ಟಿಯಲ್ಲಿ ಅವರ ಹೆಸರು ಇದೆಯೇ ಎಂದು ಪರೀಕ್ಷಿಸಲು ತಿಳಿಸಿ,ಕಳೆದ ಬಾರೀ ಮತ ಚಲಾವಣೆ ಮಾಡಿದ್ದರೇ… Read More ಮನೆ ಮನೆಯಲ್ಲೂ , ಮನ ಮನದಲ್ಲೂ , ಮೋದಿ ಮತ್ತೊಮ್ಮೆ

ಪರಿಶ್ರಮ

ಮೊನ್ನೆ RCB ಮತ್ತು MI ನಡುವೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯ ರೋಚಕವಾಗಿತ್ತು. ಚೆನ್ನೈ ತಂಡ ಹಿಂದೆ ಮೊದಲನೇ ಪಂದ್ಯದಲ್ಲಿ ಕೇವಲ 70 ರನ್ ಗಳಿಸಿ ಅಲೌಟ್ ಆಗಿ ಸುಲಭವಾಗಿ ಪಂದ್ಯ ಸೋತಿದ್ದ ಕೋಹ್ಲಿ ಪಡೆ ಈ ಬಾರಿ ಟಾಸ್ ಗೆದ್ದು ಮುಂಬೈ ತಂಡಕ್ಕೆ ಮೊದಲು ಬ್ಯಾಟ್ ಮಾಡಲು ಹೇಳಿ 187 ರನ್ ಗಳಿಗೆ ಅವರನ್ನು ನಿರ್ಬಂಧಿಸಿ, ಬ್ಯಾಟ್ ಮಾಡಲು ಬಂದ RCB 20 ಓವರ್ಗಳಲ್ಲಿ ಕೇವಲ 181 ರನ್ ಗಳಿಸಲು ಸಾಧ್ಯವಾಗಿ 6 ರನ್… Read More ಪರಿಶ್ರಮ

ತಾನು ಕಳ್ಳ ಪರರ ನಂಬ

ನೆನ್ನೆ ಮುಂಜಾನೆ ರಾಜ್ಯಾದ್ಯಂತ ಕೆಲ ಭ್ರಷ್ಟ ಸರಕಾರಿ ಇಂಜಿನೀಯರುಗಳು ಮತ್ತು  ಗುತ್ತಿಗೆದಾರರ ಮನೆಗಳ ಮೇಲೆ  ಐಟಿ ದಾಳಿ ನಡೆದಿರುವುದು ಈಗ ಜಗಜ್ಜಾಹೀರಾತಾಗಿದೆ. ದಾಳಿಯಾಗಿರುವುದು ಹಾಸನ, ಮಂಡ್ಯ, ಕನಕಪುರ,  ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಾದರೂ ಅದರ ಪರಿಣಾಮ ಮತ್ತು ಪ್ರತಿಭಟನೆ ಬೆಂಗಳೂರಿನಲ್ಲಿ ಆಗುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದವಾಗಿದೆ. ಅದರಲ್ಲೂ ಮುಖ್ಯಮಂತ್ರಿಯ ಮತ್ತು ಉಪ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಇಡೀ ಸರ್ಕಾರವೇ ಈ ದಾಳಿಯ ವಿರುದ್ಧ ಐಟಿ ಸಂಸ್ಥೆಯ ಎದುರು ಪ್ರತಿಭಟನೆ ನಡೆಸಿದ್ದಲ್ಲದೆ, ಅನಾವಶ್ಯಕವಾಗಿ ಪ್ರಧಾನಿಗಳನ್ನೂ, ಬಿಜೆಪಿಯರವನ್ನು ಇದು ರಾಜಕೀಯ ಪ್ರೇರಿತ ಧಾಳಿ… Read More ತಾನು ಕಳ್ಳ ಪರರ ನಂಬ

ಗರೀಬೀ ಹಟಾವೋ

ಮೊನ್ನೆ ಬೆಳಿಗ್ಗೆ ಇದ್ದಕ್ಕಿದ್ದಂತೆಯೇ ಸ್ವಘೋಷಿತ ಯುವರಾಜ,  ರಾಹುಲ್ ಗಾಂಧಿ ಅಕ್ಕ ಪಕ್ಕದಲ್ಲಿ ಕರಟಕ ಧಮನಕಳಂತೆ ಸುರ್ಜಿವಾಲ ಮತ್ತು ವೇಣುಗೋಪಾಲ್ ಅವರುಗಳನ್ನು ಕೂರಿಸಿಕೊಂಡು,  ತಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದಲ್ಲಿ,  ದೇಶದ 20% ಬಡವರಿಗೆ ಪ್ರತಿ ತಿಂಗಳು 6000 ರೂಪಾಯಿಗಳಂತೆ  ವರ್ಷಕ್ಕೆ 72000 ರೂಪಾಯಿಗಳನ್ನು ಕನಿಷ್ಠ ಆದಾಯದ ರೂಪದಲ್ಲಿ ಉಚಿತವಾಗಿ ಸರ್ಕಾರದ ವತಿಯಿಂದ ಕೊಡುತ್ತೇವೆ ಎಂದು ಪತ್ರಿಕಾ ಗೋಷ್ಟಿಯಲ್ಲಿ  ಪ್ರಕಟಿಸಿದಾಗ, ದೇಶದ ಆರ್ಥಿಕ ಪರಿಸ್ಥಿತಿಯನ್ನು ಅರಿತಿರುವ  ನೆರೆದಿದ್ದ ಪತ್ರಕರ್ತರೆಲ್ಲರೂ ಒಮ್ಮೆಲೆ ರಾಹುಲ್  ತಲೆ ಸರಿ ಇದೆಯೇ, ಯಾವುದಾದರೂ ನಶೆಯಲ್ಲಿದ್ದಾರೆಯೇ? ಆಥವಾ… Read More ಗರೀಬೀ ಹಟಾವೋ

ಐಪಿಎಲ್ ಅಬ್ಬರ

ಈಗ ಎಲ್ಲರ ಬಾಯಿಯಲ್ಲೂ ಒಂದೇ ಮಾತು, ಟಿಕೆಟ್ ಸಿಕ್ತಾ?

ರಾಜಕಾರಣಿಗೆ ಚುನಾವಣೆಯಲ್ಲಿ ಸ್ಪರ್ಥಿಸಲು ಟಿಕೆಟ್ ಚಿಂತೆಯಾದರೆ, ಕ್ರಿಕೆಟ್ ಪ್ರೇಮಿಗಳಿಗೆ, IPL ಟಿಕೆಟ್ ಚಿಂತೆ.

ಈ ರೀತಿ IPL ಟಿಕೆಟ್ಗಾಗಿ‌ ಪರದಾಡಿ, ಸಿಕ್ಕ ಟಿಕೆಟ್ ಕೂಡಾ ಕೈ ತಪ್ಪಿ ಹೋಗಿ, ಮತ್ತೆ ಫೀನಿಕ್ಸ್ ನಂತೆ ಸಿಕ್ಕಿ, ಮತ್ತೆ ಗೋಜಲಿಗೆ ಸಿಕ್ಕಿಕೊಂಡ ನಮ್ಮ ರೋಚಕತೆ ಇದೋ ನಿಮಗಾಗಿ… Read More ಐಪಿಎಲ್ ಅಬ್ಬರ

ತ್ಯಾಗ ಮತ್ತು ಬಲಿದಾನದ ದಿನ.

ಮಹಾತ್ಮಾ ಗಾಂಧಿಯವರ ಸಂಕುಚಿತ ಮನೋಭಾವನೆ ಮತ್ತು ದೂರದೃಷ್ಟಿಯ ಕೊರತೆಯಿಂದಾಗಿ, ಭಗತ್ ಸಿಂಗ್, ರಾಜ ಗುರು ಮತ್ತು ಸುಖದೇವ್ ಅಂತಹ ಸ್ವಾಭಿಮಾನಿ ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರರು, ನಗುನಗುತ್ತಲೇ ನೇಣಿಗೆ ಬಲಿಯಾಗಿ, ಭಾರತೀಯ ಇತಿಹಾಸದಲ್ಲಿ ಕಪ್ಪು‌‌ ಚುಕ್ಕೆಯಾಗಿಯೇ ಉಳಿದು ಹೋದ ದಿನದ ಕಥೆ-ವ್ಯಥೆ ಇದೋ ನಿಮಗಾಗಿ… Read More ತ್ಯಾಗ ಮತ್ತು ಬಲಿದಾನದ ದಿನ.

ನೀರು, ಕಣ್ಣೀರು

ಕೆಲ ವರ್ಷಗಳ ಹಿಂದೆ ಹೊರಗೆಲ್ಲೋ ಹೋಗಿದ್ದಾಗ ಬಾಯರಡಿಕೆಯಾದಾಗ, ಸೀದಾ ಯಾವುದಾದರೂ ಹೋಟೆಲ್ಗಳಿಗೆ ಹೋಗಿ ಯಾರನ್ನೂ ಕೇಳದೇ ನೀರನ್ನು ಕುಡಿದು ಬರಬಹುದಾಗಿತ್ತು. ಅದೇ ರೀತಿ ಯಾವುದೇ ಅಪರಿಚಿತರ ಮನೆಯ ಕದವನ್ನು ತಟ್ಟಿ ಕುಡಿಯಲು ನೀರನ್ನು ಕೇಳಿದರೆ, ನಿಸ್ಸಂಕೋಚವಾಗಿ ನೀರನ್ನು ಕೊಡುತ್ತಿದ್ದರು. ಇನ್ನೂ ಕೆಲವರ ಮನೆಯವರು ನೀರಿನ ಜೊತೆ ಬೆಲ್ಲವನ್ನೂ ಕೊಡುವ ಸಂಪ್ರದಾಯವನ್ನು ಇಟ್ಟುಕೊಂಡಿದ್ದರು. ಅದೂ ಇಲ್ಲದೇ ಹೋದಲ್ಲಿ, ಅನೇಕ ಸಂಘಸಂಸ್ಥೆಗಳು ನಗರದ ಅನೇಕ ಕಡೆಗಳಲ್ಲಿ ಕುಡಿಯುವ ನೀರಿನ ಅರವಟ್ಟಿಕೆಗಳನ್ನು ಸ್ಥಾಪಿಸಿ ಎಲ್ಲರ ನೀರಡಿಕೆಯನ್ನು ನೀಗಿಸುತ್ತಿದ್ದರು. ಆದರೆ ಇಂದು ಅವೆಲ್ಲವೂ… Read More ನೀರು, ಕಣ್ಣೀರು

ಅಪಘಾತಕ್ಕೆ ಯಾವ ಧರ್ಮವೂ ಇರುವುದಿಲ್ಲ

ಮೊನ್ನೆ  ಶುಕ್ರವಾರ ಯಾವುದೋ ಕೆಲಸದ ನಿಮಿತ್ತ ರಜೆ ಹಾಕಿದ್ದೆ.  ಸುಮಾರು ಒಂದು ಗಂಟೆ ಸಮಯ ನಮ್ಮ ಏರಿಯಾದಲ್ಲಿಯೇ ಇದ್ದ ಸ್ನೇಹಿತರ ಮನೆಗೆ  ದ್ವಿಚಕ್ರ ವಾಹನವೇರಿ ಹೊರಟೆ. ಇಲ್ಲೇ ನಮ್ಮದೇ ಬಡಾವಣೆ ಅಲ್ವಾ ಅನ್ನೂ ನಿರ್ಲಕ್ಷದಿಂದ ಗಾಡಿಯೊಳಗಿದ್ದ ಹೆಲ್ಮೆಟ್ ಕೂಡಾ ಹಾಗದೆ ದಿಮ್ಮಾಲೆ ರಂಗಾ ಎಂದು ಹೋಗುತ್ತಿದ್ದಾಗ, ಇದ್ದಕ್ಕಿಂದಂತೆಯೇ ಹಳೆಯ ತೆಲುಗು ಸಿನಿಮಾದಲ್ಲಿ ರಾಕ್ಷಸರು ಪ್ರತ್ಯಕ್ಷವಾಗೋ ಹಾಗೆ ಅದೆಲ್ಲಿಂದಲೂ ಪೋಲೀಸ್ ಪೇದೆಯೊಬ್ಬರು  ನನ್ನ ಮುಂದೆ ಧಗ್ಗನೆ ಪ್ರತ್ಯಕ್ಷರಾಗಿ ಸೀಟಿ ಊದುತ್ತಾ ಎರಡೂ ಕೈಗಳನ್ನೂ ತೋರಿಸುತ್ತಾ ಗಾಡಿ ನಿಲ್ಲಿಸಲು ಹೇಳಿದರು.… Read More ಅಪಘಾತಕ್ಕೆ ಯಾವ ಧರ್ಮವೂ ಇರುವುದಿಲ್ಲ