ದೇವರಿಗೆ ಅರ್ಪಿಸಿದ  ನೈವೇದ್ಯ ದೇವರಿಗೆ ತಲುಪುತ್ತದೆಯೇ?

ಸುಮಾರು ಅರವತ್ತು ಎಪ್ಪತ್ತು ವರ್ಷಗಳ ಹಿಂದೆ ಒಬ್ಬ ಆಸ್ತಿಕ ಮಹಾಶಯರು ಬೆಂಗಳೂರಿನಿಂದ ತಿರುಪತಿ ವೇಂಕಟರಮಣನನ್ನು   ದರ್ಶನ ಮಾಡಲು ನಿರ್ಧರಿಸಿದರು. ಆವತ್ತಿನ ಕಾಲದಲ್ಲಿ ಇಂದಿನಂತೆ ಮೋಟಾರು ವಾಹನಗಳು ಇನ್ನೂ ಹೆಚ್ಚಿನ ಪ್ರಚಲಿತವಿಲ್ಲದಿದ್ದ ಕಾರಣ, ಎತ್ತಿನ ಗಾಡಿಯಲ್ಲಿಯೇ ಹೋಗಲು ನಿರ್ಧರಿಸಿ ಸಕಲ ಸಿದ್ಢತೆಗಳೊಂದಿಗೆ ಒಳ್ಳೆಯ ಮಹೂರ್ತ ನೋಡಿ ಕುಟುಂಬ ಸಮೇತರಾಗಿ ಗಾಡಿಯಲ್ಲಿ ಹೊರಟೇ ಬಿಟ್ಟರು. ಬಹಳ ಅನುಷ್ಟಾಂತರಾದ ಶ್ರೀಯುತರು ಮಾರ್ಗದ ಬದಿಯಲ್ಲಿಯೇ ಇರುತ್ತಿದ್ದ ಅರವಟ್ಟಿಗೆಗಳಲ್ಲಿ ತಂಗಿ, ಅಲ್ಲಿಯೇ ಅಡುಗೆ ಮಾಡಿಕೊಂಡು ತಮ್ಮ ಪ್ರಯಾಣ ಮುಂದುವರಿಸಿದ್ದರು. ಸುಮಾರು ಹದಿನೈದು ಇಪ್ಪತ್ತು ದಿನಗಳ… Read More ದೇವರಿಗೆ ಅರ್ಪಿಸಿದ  ನೈವೇದ್ಯ ದೇವರಿಗೆ ತಲುಪುತ್ತದೆಯೇ?

ಏಷ್ಯನ್ ಕ್ರೀಡಾಕೂಟ

ನೂರಾ ಇಪ್ಪತ್ತೈದು ಕೋಟಿ ಜನಸಂಖ್ಯೆಯ, ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ, ಜನಸಂಖ್ಯೆಯಲ್ಲಿ ಜಗತ್ತಿನಲ್ಲಿಯೇ ಎರಡನೇ ಸ್ಥಾನದಲ್ಲಿರುವ, ಪ್ರಪಂಚಾದ್ಯಂತ ಅತೀ ಹೆಚ್ಚು ಯುವಜನ ಶಕ್ತಿಯನ್ನು  ಹೊಂದಿರುವ ಸುಮಾರು ಒಂದು ಸಾವಿರ ಕ್ರೀಡಾಳುಗಳು ಭಾಗವಹಿಸಿರುವ  ಏಷ್ಯನ್ ಕ್ರೀಡಾ ಪದಕಗಳ ಪಟ್ಟಿಯಲ್ಲಿ ಸದ್ಯದ ಪರಿಸ್ಥಿತಿ ನೋಡಿ ನಿಜಕ್ಕೂ ಖೇದವೆನಿಸಿತು.  ಇತರೇ ಕ್ರೀಡೆಗಳನ್ನು ಬಿಡಿ. ನಮ್ಮದೇ ದೇಶದ  ಕ್ರೀಡೆಗಳಾದ ಹಾಕಿ ಮತ್ತು ಕಬ್ಬಡ್ದಿಯಲ್ಲೂ ಕೂಡಾ ಪದಕಗಳನ್ನು ಗೆಲ್ಲಲು ವಿಫಲರಾಗುತ್ತಿರುವುದು ನಿಜಕ್ಕೂ ಆಶ್ಚರ್ಯಕರ ಮತ್ತು ದುಖಃಕರವೇ ಸರಿ. ಹಾಕಿಯಲ್ಲಂತೂ ದೇಶಿ ಆಟಗಾರ ಎದೆಗಾರಿಕೆ… Read More ಏಷ್ಯನ್ ಕ್ರೀಡಾಕೂಟ

ವಿದ್ಯಾರಣ್ಯಪುರದ ಕಾಳಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನ

ಇತ್ತೀಚೆಗೆ ಹೊರ ಊರಿಗೆ ಪ್ರಯಾಣ ಮಾಡುತ್ತಿದ್ದಾಗ ರೈಲಿನಲ್ಲಿ ಸಹಪ್ರಯಾಣಿಕರೊಬ್ಬರು ಪರಿಚಯವಾಗಿ ಉಭಯ ಕುಶಲೋಪರಿ ವಿಚಾರಿಸುತ್ತಿದ್ದಾಗ ಅವರು  ಬಹಳ ದೈವೀಕ ಭಕ್ತರೆಂದು ಅವರ ವೇಷ ಭೂಷಣ ಮತ್ತು ಅವರ ಸಂಭಾಷಣೆಯಿಂದಲೇ ವ್ಯಕ್ತವಾಯಿತು. ನನ್ನ ಬಗ್ಗೆ ವಿವರಿಸುತ್ತಿದ್ದಾಗ, ನಾನು ಬೆಂಗಳೂರಿನ ವಿದ್ಯಾರಣ್ಯಪುರದವನೆಂದು ಪರಿಚಯಿಸಿ ಕೊಳ್ಳುತ್ತಿದ್ದಾಗಲೇ, ಓಹೋ ನೀವು ವಿದ್ಯಾರಣ್ಯಪುರದವರಾ? ಬಹಳ ಅದೃಷ್ಟವಂತರಿದ್ದೀರಿ. ಅಲ್ಲಿಯ ಜಾಗ ತುಂಬಾನೇ ಪ್ರಶಾಂತವಾಗಿದೆ. ಎಲ್ಲದಕ್ಕಿಂತ ಮಿಗಿಲಾಗಿ ತಾಯಿ ದುರ್ಗಾ ಪರಮೇಶ್ವರಿ ಅಲ್ಲಿ ಶಾಶ್ವತವಾಗಿ ನೆಲೆ ಮಾಡಿರುವ ಕಾರಣ ಇಡೀ ಬಡಾವಣೆ ಸಾಂಸ್ಕೃತಿವಾಗಿ ಹಾಗೂ ಆರ್ಥಿಕವಾಗಿ ಅಭಿವೃಧ್ಧಿ… Read More ವಿದ್ಯಾರಣ್ಯಪುರದ ಕಾಳಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನ

ತೈಲ ಬೆಲೆ

ದೇಶದ ಪ್ರಸಕ್ತ ವಿದ್ಯಮಾನದಲ್ಲಿ ಬಹು ಚರ್ಚಿತವಾಗುತ್ತಿರುವುದು ಎರಡು ವಿಷಯಗಳು. ಒಂದು ರಫೈಲ್ ಯುದ್ಧ ವಿಮಾನಗಳ ಖರೀದಿಯ ಹಗರಣ ಮತ್ತೊಂದು ತೈಲ ಬೆಲೆ ಏರಿಕೆ.  ರಫೈಲ್ ಪ್ರಕರಣವು ಕೇವಲ ಆರೋಪಕ್ಕಷ್ಟೇ ಸೀಮೀತವಾಗಿ ಯಾವುದೇ ಸಾಕ್ಷಾಧಾರಗಳನ್ನು ಒದಗಿಸದೆ , ಪ್ರತೀಬಾರಿ ಒಂದೊಂದು ಅಂಕಿ ಅಂಶಗಳನ್ನು ಒದಗಿಸುತ್ತಾ ಹಗರಣವನ್ನು ಕೇವಲ ಜನ ಮಾನಸದಲ್ಲಿ ಮಾತ್ರ  ಸಾಬೀತು ಮಾಡಲು ಪರಿತಪಿಸುತ್ತಿರುವ ಕಾರಣ ಹೆಚ್ಚಿನ ಗಮನ ಹರಿಸುವುದು ಕೇವಲ ಸಮಯ ವ್ಯರ್ಥವಷ್ಟೇ. ಆದರೆ ಮತ್ತೊಂದು ಸಮಸ್ಯೆಯಾದ ತೈಲ ಬೆಲೆ ಏರಿಕೆ ನಿಜಕ್ಕೂ ಕಳವಳಕಾರಿ ಮತ್ತು… Read More ತೈಲ ಬೆಲೆ

ಈ ಬಂಧ ಅನುಬಂಧ

ಕಳೆದ ಒಂದು ವಾರದಿಂದ ಕಛೇರಿಯಲ್ಲಿ ಬಹಳ ಕೆಲಸವಿದ್ದ ಕಾರಣ ರಾತ್ರಿ ಪಾಳಿ ಮುಗಿಸಿ ಇಂದು ಬೆಳಿಗ್ಗೆ ಮನೆಗೆ ಬಂದಾಗ ನಗು ಮುಖದಿಂದಲೇ ಸ್ವಾಗತಿಸಿದ ನನ್ನ ಮಡದಿ, ಜನ್ಮದಿನದ ಶುಭಾಶಯಗಳು ಎಂದು ಆತ್ಮೀಯವಾಗಿ ಹೇಳಿದಾಗ ಮನಸ್ಸಂತೋಷವಾಯಿತು. ಆಶ್ವಯುಜ ‌ಶುಧ್ಧ ಪಂಚಮಿ,  ದಸರಾ ಹಬ್ಬದ ಐದನೆಯ ದಿನ, ಜನ್ಮ ತಿಥಿ‌ಯ ಪ್ರಕಾರ ನನ್ನ ಹುಟ್ಟಿದ ದಿನ. ‌ಛೇ, ಕಳೆದ ವರ್ಷ ಇದೇ ಸಮಯದಲ್ಲಿ ನನಗೆ ಹುಟ್ಟು ಹಬ್ಬದ ‌ಶುಭಾಶಯಗಳನ್ನು ಹೇಳಿ ಐದುನೂರರ ಎರಡು ನೋಟುಗಳನ್ನು ನನ್ನ ಜೋಬಿನಲ್ಲಿ ಇರಿಸಿ ಹೃದಯಪೂರ್ವಕವಾಗಿ… Read More ಈ ಬಂಧ ಅನುಬಂಧ

ವೈಟ್ ಟಾಪಿಂಗ್ ಕರಾಳ ಅನುಭವ

ಆಡು ಮುಟ್ಟದ ಸೊಪ್ಪಿಲ್ಲಾ  ವೈಟ್ ಟಾಪಿಂಗ್ ಹೆಸರನ್ನು ಕೇಳದ ಬೆಂಗಳೂರಿಗನಿಲ್ಲ ಎಂದರೆ ಅತಿಶಯೋಕ್ತಿಯೇನಲ್ಲ. ಒಂದು ವರ್ಷದ ಹಿಂದೆ ವಿಧಾನ ಸಭೆಯ ಚುನಾವಣೆಗೆ ಮುಂಚೆ, ಬೆಂಗಳೂರಿನ ಸ್ಟೀಲ್ ಬ್ರಿಡ್ಜ್ ಪ್ರಸ್ತಾವನೆ ಮುರಿದುಬಿದ್ದ ನಂತರ ಇದ್ದಕ್ಕಿಂದ್ದಂತೆಯೇ ಬೆಂಗಳೂರಿನ ಜನರು  ಅದರಲ್ಲೂ ವಾಹನ ಸವಾರರನ್ನು ಬೆಚ್ಚಿ ಬೀಳಿಸುವ ಪದವೇ ವೈಟ್ ಟಾಪಿಂಗ್. ಅಷ್ಟೋ ಇಷ್ಟು ಚೆನ್ನಾಗಿಯೇ ಇದ್ದ ರಸ್ತೆಗಳಲ್ಲಿ ಏಕಾ ಏಕಿ ಭಾರಿ ಯಂತ್ರಗಳನ್ನು ತಂದಿರಿಸಿ ರಸ್ತೆಯನ್ನು ಅರ್ಧ ಭಾಗಗಳಾಗಿ ವಿಂಗಡಿಸಿ, ಇದ್ದ ಡಾಂಬರನ್ನೂ ಅಗೆದು ಹಾಕಿ ಮುದುಕಿಗೆ ಅಲಂಕಾರ ಮಾಡುವ… Read More ವೈಟ್ ಟಾಪಿಂಗ್ ಕರಾಳ ಅನುಭವ

ವಾರನ್ನ ಮತ್ತು ಧರ್ಮ ಕಾರ್ಯಗಳು

ಇತ್ತೀಚೆಗೆ  ವಾರನ್ನ ಕುರಿತಾದ ನನ್ನ  ಲೇಖನವೊಂದಕ್ಕೆ ಭಾರೀ ಪ್ರೋತ್ಸಾಹಕರ ಆಭಿಮಾನಗಳ ಸುರಿಮಳೆಯಾಗಿದ್ದು  ನಿಜಕ್ಕೂ ನನಗೆ ಸಂತೋಷ ಮತ್ತು ಆಶ್ವರ್ಯವನ್ನು ಉಂಟು ಮಾಡಿತು.  ಸಂತೋಷವೇಕೆಂದರೆ ಪ್ರತಿಕ್ರಿಯೆ ನೀಡಿದ್ದ ಬಹುಪಾಲು ಜನರು ಪ್ರತ್ಯಕ್ಷವಾಗಿಯೋ ಇಲ್ಲವೇ ಅವರ ಕುಟಂಬದವರೋ ವಾರನ್ನದಿಂದ ಉಪಕೃತರಾದವರೇ ಆಗಿದ್ದರು. ಇನ್ನೂ ಹಲವರು ತಮ್ಮ ಮನೆಯಲ್ಲಿಯೋ ಅಥವಾ ತಮ್ಮ ಸಂಬಂಧಿಕರುಗಳ ಮನೆಯಲ್ಲಿ ಮೂವತ್ತು ನಲವತ್ತು ವರ್ಷಗಳ ಹಿಂದೆ ಈ ಪದ್ದತಿ ರೂಡಿಯಲ್ಲಿದ್ದದನ್ನು ನೆನಪಿಸಿಕೊಂಡರೆ,  ಇನ್ನೂ ಅನೇಕರು ತಮ್ಮ ತಂದೆತಾಯರಿಂದ ವಾರನ್ನದ ಬಗ್ಗೆ ಕೇಳಿ ತಿಳಿದವರೇ ಆಗಿದ್ದರು. ಎಲ್ಲದ್ದಕ್ಕಿಂತ ಹೆಚ್ಚಾಗಿ… Read More ವಾರನ್ನ ಮತ್ತು ಧರ್ಮ ಕಾರ್ಯಗಳು

ಭಾರತ್ ಬಂದ್

ಸಾವಿರಾರು ವರ್ಷಗಳಿಂದ ಪ್ರಪಂಚಾದ್ಯಂತ ಪ್ರಜೆಗಳು ತಮ್ಮ ಪ್ರದೇಶದ ಹವಾಮಾನ ತಕ್ಕಂತೆ ಮತ್ತು ಅವರ ಅಹಾರ ಪದ್ದತಿಗೆ ಅನುಗುಣವಾಗಿ ತಮಗೆ ಅಗತ್ಯವಿದ್ದಷ್ಟು ಆಹಾರ ಪದಾರ್ಥಗಳನ್ನು ಕೃಷಿಯಾಧಾರಿತವಾಗಿ ಬೆಳೆಯುತ್ತಾ ತಮ್ಮಲ್ಲಿ ಹೆಚ್ಚಾಗಿದ್ದ ಆಹಾರಗಳನ್ನು ಇತರೊಂದಿಗೆ ಪರಸ್ಪರ ಕೊಡು ಕೊಳ್ಳುವಿಕೆಯ ಮೂಲಕ ಹಂಚಿಕೊಳ್ಳುತ್ತಾ ನೆಮ್ಮದಿಯ ಜೀವನ ಮಾಡುತ್ತಿದ್ದರು. ಯಾವಾಗ ಜನರ ಆಸೆಗಳು ಹೆಚ್ಚಾಯಿತೂ ಅಂದಿನಿಂದ ಪ್ರಭಲವಾಗಿದ್ದವರು ದುರ್ಬಲ ಮೇಲೆ ಸವಾರಿ ಮಾಡುತ್ತಾ ಊಳಿಗಮಾನ್ಯ ಪದ್ದತಿ ಮತ್ತು ಜಮೀನ್ದಾರಿ ಪದ್ದತಿಗಳು ಆರಂಭವಾದವು. ನೈಸರ್ಗಿಕ ಕೃಷಿ ಪದ್ದತಿಯ ಬೇಸಾಯದಿಂದ ಹೆಚ್ಚಿನ ಇಳುವರಿ ದೊರಕದ ನೆಪವೊಡ್ಡಿ… Read More ಭಾರತ್ ಬಂದ್

ಆಮೀರನ ಅಹಂಗೆ ವೆಂಕಟೇಶನ ಪ್ರಸಾದ

ಮಾರ್ಚ್-9 ಅಂದರೆ ಕ್ರಿಕೆಟ್ ಪ್ರಿಯರಿಗೆಲ್ಲಾ ಥಟ್ ಅಂತಾ ನೆನಪಗೋದೇ ಭಾರತ ಮತ್ತು ಪಾಕಿಸ್ಥಾನದ ನಡುವಿನ ಈ ಹೈವೋಲ್ಟೇಜ್ ಪಂದ್ಯ. 1996ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಕ್ವಾಟರ್ ಫೈನಲ್ ಪಂದ್ಯವನ್ನು ಮೈದಾನದಲ್ಲೇ ಕುಳಿತು ನೋಡಿದ ರಸಾನುಭವವನ್ನು ಒಮ್ಮೆ ಮೆಲುಕನ್ನು ಹಾಕೋಣ ಬನ್ನಿ. ಮಾರ್ಚ್ 9, 1996 ಸದಾ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕೀಸ್ಥಾನಗಳ ನಡುವೆ ಕ್ರಿಕೆಟ್ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಎರಡನೇ ಕ್ವಾರ್ಟರ್ ಫೈನಲ್ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು. ಎಲ್ಲದ್ದಕ್ಕಿಂತ ವಿಶೇಷವಾಗಿ… Read More ಆಮೀರನ ಅಹಂಗೆ ವೆಂಕಟೇಶನ ಪ್ರಸಾದ