ಸಿದ್ದು ನಿಮಗೆ ವಯಸ್ಸಾಯ್ತು.

ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲು ವಿಜಯನಗರ ಜಿಲ್ಲೆಗೆ ಹೋಗಿದ್ದ ಮಾಜೀ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೆಲಿಪ್ಯಾಡಿನಲ್ಲಿ ಕಾರನ್ನು ಹತ್ತುವಾಗ ದಿಢೀರ್ ಎಂದು ಕುಸಿದು ಬಿದ್ದು ಕೆಲ ಕಾಲ ಆಂತಕವನ್ನು ಮೂಡಿಸಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಎಲ್ಲಾ ಅಧಿಕಾರವನ್ನೂ ಸವಿದಿರುವ ಸಿದ್ದರಾಮಯ್ಯನವರ ದೇಹ ಈ ಘಟನೆಯ ಮುಖಾಂತರ ತನಗೆ ವಿಶ್ರಾಂತಿ ಅವಶ್ಯಕತೆ ಎಂದು ಸ್ಪಷ್ಟವಾಗಿ ತಿಳಿಸುತ್ತಿರುವುದನ್ನು ವರುಣಾ ಕ್ಷೇತ್ರದ ಜನರು ಅರ್ಥ ಮಾಡಿಕೊಳ್ತಾರೆ ಅಲ್ವೇ?
Read More ಸಿದ್ದು ನಿಮಗೆ ವಯಸ್ಸಾಯ್ತು.

ವಿನೋದ್ ಬಾಬು ತಮಿಳು ನಾಡಿನ ದ್ರೋಣ್ ಪ್ರತಾಪ್

https://enantheeri.com/2023/04/28/vinod_babu/

ಕರ್ನಾಟಕದಲ್ಲಿ ಕೆಲವರ್ಷಗಳ ಹಿಂದೆ ಅಂತರಾಷ್ಟ್ರೀಯ ಮಟ್ಟದ ದ್ರೋಣ್ ಸ್ಪರ್ಧೆಯಲ್ಲಿ ತನಗೆ ಬಹುಮಾನ ಬಂದಿದೆ ಎಂದು ಎಲ್ಲರನ್ನು ನಂಬಿಸಿದ್ದ ದ್ರೋಣ್ ಪ್ರತಾಪ್ ನಂತೆಯೇ, ಕೆಲ ದಿನಗಳ ಹಿಂದೆ ತಮಿಳುನಾಡಿದಲ್ಲೂ ಗಾಲಿಕುರ್ಚಿಯ ಮೇಲೇ ತನ್ನ ಜೀವನವನ್ನು ನಡೆಸುವ ವಿಕಲಚೇತನರಾದ ತಮಿಳುನಾಡಿನ ವಿನೋದ್ ಬಾಬು ಎಂಬಾತನೂ ಸಹಾ ಅಂತಹದ್ದೇ ಕಾಗೆ ಹಾರಿಸಿರುವ ರೋಚಕತೆಯನ್ನು ತಿಳಿಯೋಣ ಬನ್ನಿ.… Read More ವಿನೋದ್ ಬಾಬು ತಮಿಳು ನಾಡಿನ ದ್ರೋಣ್ ಪ್ರತಾಪ್

ಪೋಲೀಸ್ ತಿಮ್ಮಯ್ಯ ವೃತ್ತ

ಬೆಂಗಳೂರಿನ ವಿಧಾನ ಸೌಧದ ಹತ್ತಿರವೇ ಇರುವ ಜಿಪಿಓ ಬಳಿಯ ವೃತ್ತಕ್ಕೆ ಪೋಲೀಸ್ ಮೀಸೆ ತಿಮ್ಮಯ್ಯ ವೃತ್ತ ಎಂಬ ಹೆಸರು ಇಡಲು ಕಾರಣವೇನು? ಎಂಬುವ ರೋಚಕ ಅದರೇ ಅಷ್ಟೇ ಹೃದಯವಿದ್ರಾವಕವಾದ ಸಂಗತಿ ನಮ್ಮ ಬೆಂಗಳೂರು ಇತಿಹಾಸ ಮಾಲಿಕೆ ಯಲ್ಲಿ ಇದೋ ನಿಮಗಾಗಿ… Read More ಪೋಲೀಸ್ ತಿಮ್ಮಯ್ಯ ವೃತ್ತ

ಶೂನ್ಯ ನೆರಳು ದಿನ

ಸೂರ್ಯನ ಬೆಳಕು ಯಾವುದೇ ಸಜೀವ/ನಿರ್ಜೀವ ವಸ್ತುವಿನ ಮೇಲೆ ಬಿದ್ದರೆ ಅಲ್ಲಿ ನೆರಳು ಉಂಟಾಗುವುದು ಸಹಜ ಪ್ರಕ್ರಿಯೆ. ಆದರೆ ಪ್ರಕೃತಿಯಲ್ಲಿ ವರ್ಷಕ್ಕೆ ಎರಡು ಬಾರಿ, ವಿಶಿಷ್ಟ ಸಮಯದಲ್ಲಿ ಆ ರೀತಿ ನೆರಳು ಬೀಳದಿರುವ ವಿಸ್ಮಯಕಾರಿ ಘಟನೆ ಸಂಭವಿಸುತ್ತದೆ.

ಹಾಗಾದರೆ ಶೂನ್ಯ ನೆರಳು ದಿನ ಎಂದರೆ ಏನು? ಏಪ್ರಿಲ್ 25ರ ಮಧ್ಯಾಹ್ನ 12.17 ಕ್ಕೆ ಬೆಂಗಳುರಿನಲ್ಲಿ ಆಗುವ ಈ ವಿಸ್ಮಯಕಾರಿ ಘಟನೆ ಉಳಿದ ಪ್ರದೇಶಗಳಲ್ಲಿ ಎಂದು ಕಾಣಿಸಿಕೊಳ್ಳುತ್ತದೆ ಎಂಬೆಲ್ಲಾ ಕುತೂಹಲಕಾರಿ ಮಾಹಿತಿ ಇದೋ ನಿಮಗಾಗಿ… Read More ಶೂನ್ಯ ನೆರಳು ದಿನ

ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಂಜಾನ್ ಆಚರಣೆ

ಮೊನ್ನೆ ಮಂತ್ರಾಲಯದಲ್ಲಿ ಸುರಿದ ಧಾರಾಕಾರ ಮಳೆಯಲ್ಲಿ ಭಕ್ತಾದಿಗಳನ್ನು ದೇವಾಲಯದ ಪ್ರಾಕಾರದಲ್ಲಿ ಕಾಪಾಡಿ ಗಳಿಸಿಕೊಂಡಿದ್ದ ನಂಬಿಕೆಯನ್ನು ನೆನ್ನೆ ವಿಗ್ರಹ ಆರಾಧನೆಯನ್ನೇ ನಂಬದವರನ್ನು ಕರೆಸಿ ರಾಯರ ಸನ್ನಿಧಾನದಲ್ಲಿ ರಂಜಾನ್ ಹಬ್ಬವನ್ನು ಆಚರಿಸುವ ಮೂಲಕ ಹಿಂದೂಗಳ ನಂಬಿಕೆಗಳನ್ನು ಮಣ್ಣು ಪಾಲು ಮಾಡಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧವಾಗಿದೆ.

ಸೌಹಾರ್ದತೆ ಎಂದರೆ ನಮ್ಮ ನಂಬಿಕೆಗಳ ವಿರುದ್ಧವಾಗಿ ಮತ್ತೊಂದು ಧರ್ಮದ ಆಚರಣೆಗಳನ್ನು ನಮ್ಮ ಶ್ರದ್ದೇಯ ಧಾರ್ಮಿಕ ಸ್ಥಳಗಳಲ್ಲಿ ಮಾಡುವುದು ಎಂದು ಯಾವ ಧರ್ಮ ಗ್ರಂಥದಲ್ಲಿ ಬರೆದಿದೆ? … Read More ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಂಜಾನ್ ಆಚರಣೆ

ಪರ ಊರಿಗೆ ಹೋದಾಗಲೇ, ನಮ್ಮೂರ ಊಟದ ರುಚಿ ಗೊತ್ತಾಗೋದು.

ಸಾಧಾರಣವಾಗಿ ನಮಗೆ ಅವಶ್ಕಕತೆ ಇರುವುದೆಲ್ಲವೂ ಸುಲಭವಾಗಿ ಸಿಗುತ್ತಲೇ ಹೋದರೆ ಅದರ ಬೆಲೆ ಗೊತ್ತಾಗುವುದಿಲ್ಲ. ಇಲ್ಲಿ ಇದ್ದಾಗ ಅದರ ಬಗ್ಗೆಯೇ ಗೊಣಗುತ್ತಲೇ ಇರುವವರು ಹೊರಗೆ ಹೋಗಿ ಬಂದ ನಂತರ ಇಲ್ಲಿನ ಮೌಲ್ಯದ ಅರ್ಥ ಮಾಡಿಕೊಳ್ಳುತ್ತೇವೆ. ಅದಕ್ಕೇ ಏನೋ, ಎರಡನೇ ಸೊಸೆ ಬಂದ ನಂತರವೇ ಮೊದಲ ಸೊಸೆಯ ಮಹತ್ವ ಗೊತ್ತಾಗುತ್ತದೆ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ನಮ್ಮಾಕಿ ಮನೆಯಲ್ಲಿ ಮಕ್ಕಳಿಗೆ ರುಚಿ ರುಚಿಯಾದ ಅಡುಗೆ ಮಾಡಿ ಹಾಕಿದರೂ, ಛೇ.. ದಿನಾಗಲೂ ಅದೇ ಹುಳಿ, ಸಾರು ಪಲ್ಯಾನಾ… ಎಂದು ಗೊಣಗುತ್ತಾ ಅಗ್ಗಾಗ್ಗೆ… Read More ಪರ ಊರಿಗೆ ಹೋದಾಗಲೇ, ನಮ್ಮೂರ ಊಟದ ರುಚಿ ಗೊತ್ತಾಗೋದು.

ಪಕ್ಷ ಮತ್ತು ಸಿದ್ದಾಂತ ಅನ್ನೋದು ಅಧಿಕಾರದ ಮುಂದೆ ಪುಸ್ತಕದ ಬದನೇಕಾಯಿ

ಬಿಜೆಪಿ ಬಿಟ್ಟು ಹೊರಗೆ ಹೋಗುತ್ತಿರುವವರಲ್ಲಿ ಸವದಿ ಮತ್ತು ಶೆಟ್ಟರ್ ಮೊದಲೇನಲ್ಲಾ. ಈ ಮುಂಚೆ ಅನೇಕ ನಾಯಕರು ವಿವಿಧ ಕಾರಣಗಳಿಂದಾಗಿ ಬಿಜೆಪಿಯನ್ನು ಬಿಟ್ಟು ಹೊರಗೆ ಹೋಗಿ ತಮ್ಮದೇ ಪಕ್ಷವನ್ನು ಕಟ್ಟಿದರೇ ಹೊರತು ತಾವು ನಂಬಿದ್ದ ಸಿದ್ಧಾಂತದ ವಿರುದ್ಧವಾಗಿ ವಿರೋಧ ಪಕ್ಷಗಳು ಅದರಲ್ಲೂ ಕಾಂಗ್ರೇಸ್ ಪಕ್ಷವನ್ನು ಸೇರಿಕೊಂಡಿರಲಿಲ್ಲ.

ಇಂದು ಬಿಜಿಪಿಯ ಬಂಡಾಯದಲ್ಲಿ ತಮ್ಮ ರಾಜಕೀಯ ಬೇಳೆ ಬೆಳಸಿಕೊಳ್ಳಲು ನಿಮ್ಮಂತಹವರು ನಮ್ಮ ಪಕ್ಷಕ್ಕೆ ಸೇರಿಕೊಂಡಿದ್ದು ಆನೆಯ ಬಲ ಬಂದಂತೆ ಎಂದು ಹೇಳುವ ಕಾಂಗ್ರೇಸ್, ನಾಳೆ ಅಧಿಕಾರಕ್ಕೆ ಬಾರದೇ ಹೋದಾಗ ಇವರನ್ನು ಕಾಲ ಕಸದಂತೆ ಕಂಡಾಗ, ಭ್ರಮನಿರಸರಾಗುವುದು ನಿಶ್ಚಿತ.… Read More ಪಕ್ಷ ಮತ್ತು ಸಿದ್ದಾಂತ ಅನ್ನೋದು ಅಧಿಕಾರದ ಮುಂದೆ ಪುಸ್ತಕದ ಬದನೇಕಾಯಿ

ಕಾಶಿಯ ವಾಲಿರುವ ರತ್ನೇಶ್ವರ ದೇವಾಲಯ

ಇಟಲಿಯ ಟಸ್ಕನಿ ಪ್ರದೇಶದ ಒಂದು ನಗರವಾದ ಪಿಸಾ ಇಂದು ಜಗತ್ಪ್ರಸಿದ್ದವಾಗಿದೆ. ಆ ನಗರ ಹಾಗೆ ಪ್ರಸಿದ್ಧವಾಗಲು ಅಲ್ಲಿರುವ ಓರೆಯಾಗಿರುವ ಗೋಪುರವೊಂದು ಕಾರಣವಾಗಿದ್ದು ಅದು ಪ್ರಪಂಚದ ಏಳು ಅದ್ಭುತಗಳಲ್ಲಿ  ಒಂದಾಗಿದೆ.  ಆಗಸ್ಟ್‌ 9, 1173 ರಲ್ಲಿ ಆ ಪ್ರದೇಶದಲ್ಲಿ  ಎತ್ತರವಾದ ಒಂದು ಗೋಪುರವನ್ನು ನಿರ್ಮಿಸಿ  ಅದರ ಮೇಲೊಂದು ದೊಡ್ಡ ಘಂಟೆಯನ್ನು ಇಡಬೇಕೆಂದು ನಿರ್ಧರಿಸಲಾಗಿತ್ತು. ಅದರೆ 1778ರಲ್ಲಿ ಮೂರು ಅಂತಸ್ತಿನ ಕೆಲಸ ಮುಗಿಯುತ್ತಿದ್ದಾಗ, ಇದ್ದಕ್ಕಿದ್ದಂತೆಯೇ ಈ ಕಟ್ಟಡ ಒಂದು ಕಡೆಗೆ ಸ್ವಲ್ಪ ವಾಲಿದ್ದನ್ನು ಕಂಡ ಅಲ್ಲಿನ ಜನ ಈ ಕಟ್ಟಡ… Read More ಕಾಶಿಯ ವಾಲಿರುವ ರತ್ನೇಶ್ವರ ದೇವಾಲಯ

ಕೌದಿ (ದಟ್ಟ)

ನಮ್ಮ ಸುತ್ತಮುತ್ತಲಿನ ಸರ್ವೇಸಾಧಾರಣ ವಸ್ತುವೂ ಸಹಾ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಹೇಗೆ ನಮ್ಮ ಜೀವನದ ಶೈಲಿಯನ್ನು ಹೇಗೆ ಬದಲಿಸಿ ಬಿಡುತ್ತದೆ ಎನ್ನುವುದಕ್ಕೆ ಈ ಕೌದಿಯೇ ಸಾಕ್ಷಿ. ಈ ಕೌದಿ ಅಥವಾ ದಟ್ಟ ಎಂದರೆ ಏನು? ಅದು ಯಾರ ಬದುಕಿನಲ್ಲಿ ಹೇಗೆ? ಯಾವ ರೀತಿಯ ಬದಲಾವಣೇಯನ್ನು ತಂದಿತು ಎನ್ನುವ ಕುತೂಹಲಕ್ಕೆ ಇದೋ ಇಲ್ಲಿದೆ ಉತ್ತರ.… Read More ಕೌದಿ (ದಟ್ಟ)