ಕಬ್ಬಿಣ ಕಾದಿರುವಾಗಲೇ ಬಗ್ಗಿಸಬೇಕು

ಭಾರತ ಮತ್ತು ಪಾಕೀಸ್ಥಾನದ ನಡುವಿನ ವೈರತ್ವ ನೆನ್ನೆಯ ಮೊನ್ನೆಯದಲ್ಲಾ. ಧರ್ಮಾಧಾರಿತವಾಗಿ ನಮ್ಮ ದೇಶವನ್ನು  ವಿಭಜಿಸಿದರೂ,  ಆಂದಿನ ನಮ್ಮ ಕೆಲ ನಾಯಕರುಗಳು ದೂರದೃಷ್ಟಿಯ ಕೊರತೆಯಿಂದಾಗಿ, ಭಾರತ ಹಿಂದೂಸ್ಥಾನವಾಗದೇ, ಜಾತ್ಯಾತೀತರಾಷ್ಟ್ರವಾಗಿ, ಕಾಶ್ಮೀರದ ಸಮಸ್ಯೆ ವಿಶ್ವಸಂಸ್ಥೆಯವರೆಗೂ ಹೋಗಿ ಇನ್ನೂ ಮಗ್ಗಲ ಮುಳ್ಳಾಗಿಯೇ ಉಳಿದಿರುವ ಸತ್ಯ  ಎಲ್ಲರಿಗೂ ತಿಳಿಸಿರುವುದೇ ಆಗಿದೆ. ಅದೇ ರೀತಿ  ಅಂದಿನಿಂದಲೂ ಪದೇ ಪದೇ ಭಾರತದ ಮೇಲೆ ಕಾಲು ಕೆರೆದುಕೊಂಡು ಬರುವ ಪಾಕೀಸ್ಥಾನ, ಪ್ರತೀ ಬಾರಿಯೂ ಭಾರದಿಂದ ತಪರಾಕಿ ಹಾಕಿಸಿಕೊಂಡಿರುವ ವಿಷಯವೂ ಎಲ್ಲರಿಗೂ ತಿಳಿದಿದೆ. 2025ರ ಏಪ್ರಿಲ್ 22ರಂದು ಕಾಶ್ಮೀರದ… Read More ಕಬ್ಬಿಣ ಕಾದಿರುವಾಗಲೇ ಬಗ್ಗಿಸಬೇಕು

ಯಾರದ್ದೋ ದುಡ್ಡು ಪಾಕಿಗಳ ಯುದ್ಧ

ಒಂದು ಕಡೆ ಭಯೋತ್ಪಾದನಾ ಚಟುವಟಿಕೆಗಳನ್ನು ಸಹಿಸುವುದಿಲ್ಲಾ ಎಂದು ಹೇಳಿಕೊಂಡು ಮತ್ತೊಂದೆಡೆ IMF ಮೂಲಕ 8500 ರೂಪಾಯಿಗಳಷ್ಟು ಸಾಲವನ್ನು ಕೊಡಿಸುವ ಮೂಲಕ, ಅಮೇರಿಕಾ ಮತ್ತು ಚೀನಾ ದೇಶಗಳು ತಮ್ಮ ಶಸ್ತ್ರಾಸ್ತ್ರ ಮಾರುತ್ತಾ, ಪರೋಕ್ಷವಾಗಿ ಭಾರತವನ್ನು ಬಗ್ಗು ಬಡಿಯಲು ಮುಂದಾಗಿದೆಯೇ? … Read More ಯಾರದ್ದೋ ದುಡ್ಡು ಪಾಕಿಗಳ ಯುದ್ಧ

ಟಿ20 ವಿಶ್ವಕಪ್ 2024ರ ಫೈನಲ್ಸ್  ಪಂದ್ಯದ ಪ್ರಮುಖ ಅಂಕಿ ಅಂಶಗಳು

ದೇವನೊಬ್ಬ ನಾಮ ಹಲವು ಎನ್ನುವಂತೆ, 2024ರ T20 ಫೈನಲ್ ಪಂದ್ಯ ಒಂದೇ ಆದರೂ, ತಂಡದ ಪರವಾಗಿ, ಆಟಗಾರರ ವಯಕ್ತಿಕವಾಗಿ ನೂರಾರು ದಾಖಲೆಗಳಾಗಿದ್ದು, ಅವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿರುವ ಖ್ಯಾತ ಕ್ರಿಕೆಟ್ ಅಂಕಿ ಅಂಶ ತಜ್ಞರಾದ ಶ್ರೀ ಗೋಪಾಲಕೃಷ್ಣ ಅವರು ವಿಶೇಷವಾಗಿ ನಮ್ಮ ಏನಂತೀರೀ? ಯೊಂದಿಗೆ ಹಂಚಿಕೊಂಡಿರುವ ಅದ್ಭುತವಾದ ಅಂಕಿ ಅಂಶಗಳು ಇದೋ ನಿಮಗಾಗಿ.… Read More ಟಿ20 ವಿಶ್ವಕಪ್ 2024ರ ಫೈನಲ್ಸ್  ಪಂದ್ಯದ ಪ್ರಮುಖ ಅಂಕಿ ಅಂಶಗಳು

ದಿ ಕೇರಳ ಸ್ಟೋರಿ ಕುರಿತಂತೆ ಮನದಾಳದ ಮಾತು

https://enantheeri.com/2023/05/05/kerala_story/

ಕೇರಳ ಸ್ಟೋರಿ, ಚಿತ್ರದಲ್ಲಿ ತೋರಿಸಿರುವ ಶಾಲಿನಿ ಉನ್ನಿಕೃಷ್ಣನ್ ಮತ್ತು ದೀಪಾಂಜಲಿಯರ ಕಥೆಯಷ್ಟೇ ಆಗಿರದೇ, ಕೇರಳ, ಕರ್ನಾಟಕ ಮತ್ತು ತಮಿಳುನಾಡಿನ ಕರಾವಳಿ ಪ್ರಾಂತ್ಯದ ಸಾವಿರಾರು ಅಮಾಯಕ ಯುವಕ ಯುವತಿಯರ ಕರಾಳ ಕಥನವಾಗಿದ್ದು, ಪ್ರತಿಯೊಬ್ಬ ಭಾರತೀಯರೂ ನೋಡಿ ಎಚ್ಚೆತ್ತು ಕೊಳ್ಳಲೇ ಬೇಕಾದ ಚಿತ್ರವಾಗಿದೆ. ಈ ಚಿತ್ರದ ಕುರಿತಂತೆ ಒಬ್ಬ ಚಿತ್ರಪ್ರೇಕ್ಷಕನಾಗಿ ಮತ್ತು ಹೆಣ್ಣುಮಗಳೊಂದರ ತಂದೆಯಾಗಿ ಮನದಾಳದ ಮಾತು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.

ಧರ್ಮ ಉಳಿದರೆ ದೇಶ ಉಳಿದೀತು. ದೇಶ ಉಳಿದರೆ ನಾವು ಉಳಿದೇವು. ಧರ್ಮೋ ರಕ್ಷತಿ ರಕ್ಷಿತಃ… Read More ದಿ ಕೇರಳ ಸ್ಟೋರಿ ಕುರಿತಂತೆ ಮನದಾಳದ ಮಾತು

ಭಾರತದಲ್ಲಿ PFI, SDPI ನಿಷೇಧ ಸನ್ನಿಹಿತವೇ?

ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ವಿವಿಧ ಭಯೋತ್ಪಾದನಾ ಚಟುವಟಿಕೆ ಮತ್ತು ಕೋಮುದಳ್ಳುರಿ ಮತ್ತು ವಿದೇಶಗಳಿಂದ ಅಕ್ರಮ ಹಣ ವರ್ಗಾವಣೆ ಕುರಿತಾಗಿ ಇಂದು ಬೆಳ್ಳಂಬೆಳಿಗ್ಗೆ 13 ರಾಜ್ಯಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಏಕ ಕಾಲದಲ್ಲಿ ಧಾಳಿ ನಡೆಸಿ, 100ಕ್ಕೂ ಅಧಿಕ PFI, SDPI ಸಂಘಟನೆಗಳಿಗೆ ಸೇರಿದ ಕಾರ್ಯಕರ್ತರನ್ನು ಬಂಧಿಸಿರುವ ಹಿನ್ನಲೆಯಲ್ಲಿ, ಈ ಎರಡು ಸಂಘಟನೆಗಳು ಭಾರತದಲ್ಲಿ ಬೆಳೆದು ಬಂದ ಪರಿ ಮತ್ತು ಅವುಗಳ ಧ್ಯೇಯ ಮತ್ತು ಅವುಗಳು ಮಾಡುತ್ತಿರುವ ಕೆಲಸಗಳ ಕುರಿತಾದ ವಸ್ತುನಿಷ್ಠ ವರದಿ ಇದೋ ನಿಮಗಾಗಿ… Read More ಭಾರತದಲ್ಲಿ PFI, SDPI ನಿಷೇಧ ಸನ್ನಿಹಿತವೇ?

ಆಪರೇಷನ್‌ ಶಕ್ತಿ & ರಾಷ್ಟ್ರೀಯ ತಂತ್ರಜ್ಞಾನ ದಿನ

ಇಡೀ ವಿಶ್ವವನ್ನೇ ನಿಬ್ಬೆರಗಾಗಿಸಿದ 1998 ಮೇ 11 ರಂದು ರಾಜಾಸ್ಥಾನದ  ಪೋಖ್ರಾನ್ ಎಂಬ ಪ್ರದೇಶದಲ್ಲಿ ನಡೆಸಿದ ಅಣ್ವಸ್ತ್ರ ಪರೀಕ್ಷೆಯ ದಿನವನ್ನೇ ರಾಷ್ಟ್ರೀಯ ತಂತ್ರಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದ್ದು, ದೇಶದ ಸರ್ವತೋಮುಖ ಪ್ರಗತಿಯ ನಿಟ್ಟಿನಲ್ಲಿ ಭಾರತದ ಹಿರಿಮೆ, ಗರಿಮೆಗಳನ್ನು ಎತ್ತಿಹಿಡಿಯುತ್ತಿರುವ ಕಾರ್ಯದಲ್ಲಿ ತೊಡಗಿಕೊಂಡಿರುವ ಭಾರತದ ವಿಜ್ಞಾನಿಗಳು ಮತ್ತು ತಂತ್ರಜ್ಞರಿಗೆ ಅಭಾರಿಗಳಾಗಿ ಈ ದಿನವನ್ನು ಅವರಿಗಾಗಿ ಮೀಸಲಾಗಿಟ್ಟಿದೆ. 1998 ಮೇ 11 ಭಾರತದ ಪಾಲಿಗೆ ಅತ್ಯಂತ ಮಹತ್ವದ ದಿನವಾಗಿದ್ದು. ಅಂದು ರಾಜಸ್ಥಾನದ ಪೊಖ್ರಾನ್‌ನಲ್ಲಿ ಭಾರತೀಯ ಸೇನೆಯ ಪರೀಕ್ಷಾ ಶ್ರೇಣಿಯಲ್ಲಿ ಭಾರತವು ಆಪರೇಷನ್‌… Read More ಆಪರೇಷನ್‌ ಶಕ್ತಿ & ರಾಷ್ಟ್ರೀಯ ತಂತ್ರಜ್ಞಾನ ದಿನ

ಕ್ರೀಡೆ ಸಂಬಂಧಗಳನ್ನು ಬೆಸೆಯುತ್ತದೆ

1947ರಲ್ಲಿ ಬ್ರಿಟೀಷರು ಈ ದೇಶದಿಂದ ಹೊರ ಹೋಗುವಾಗ ಕೆಲವು ಪಟ್ಟಭಧ್ರ ಸ್ವಾರ್ಥ ಹಿತಾಸಕ್ತಿಯಾಗಿ ನಮ್ಮ ಅಖಂಡ ಭಾರತವನ್ನು ಧರ್ಮಾಧಾರಿತವಾಗಿ ಎರಡು ಭಾಗಗಳಾಗಿ (ನಂತರ ಅದು ಮೂರು ಭಾಗಗಳಾಗಿದೆ) ತುಂಡರಿಸಿ ಭಾರತ ಮತ್ತು ಪಾಕೀಸ್ಥಾನ ಎಂಬ ಎರಡು ಸ್ವತಂತ್ರ ದೇಶಗಳ ಕಾರಣಕ್ಕೆ ಕಾರಣವಾಗಿರುವುದು ಆದಾದ ನಂತರ ಹತ್ತು ಹಲವು ಬಾರಿ ಕಾಲು ಕೆರೆದುಕೊಂಡು ಭಾರತದ ಮೇಲೆ ಬಂದ ಪಾಪಿಗಳಿಗೆ ಭಾರತದ ಕೆಚ್ಚೆದೆಯ ಸೈನಿಕರು ತಕ್ಕ ಉತ್ತರವನ್ನೇ ನೀಡಿರುವುದು ಈಗ ಇತಿಹಾಸ. ಇಷ್ಟೆಲ್ಲಾ ಹೊಡೆತಗಳಿಂದ ಬುದ್ಧಿ ಕಲಿಯದ ಪಾಪೀಸ್ಥಾನ ಪದೇ… Read More ಕ್ರೀಡೆ ಸಂಬಂಧಗಳನ್ನು ಬೆಸೆಯುತ್ತದೆ