ಛತ್ ಪೂಜೆ

ಸಾಮಾನ್ಯವಾಗಿ ಉತ್ತರ ಭಾರತ, ಈಶಾನ್ಯಭಾರತ ಮತ್ತು ನೇಪಾಳದಲ್ಲಿ ಹೆಚ್ಚಾಗಿ ಆಚರಿಸಲ್ಪಡುತ್ತಿದ್ದ ಛತ್ ಪೂಜೆ ಇತ್ತೀಚೆಗೆ ದೇಶಾದ್ಯಂತ ಬಹಳ ಶ್ರದ್ಧಾ ಭಕ್ತಿಗಳಿಂದ ಆಚರಿಸಲ್ಪಡುತ್ತಿರುವಾಗ ಈ ಛತ್ ಪೂಜೆಯ ವೈಶಿಷ್ಟ್ಯಗಳು ಮತ್ತು ಅದರ ಹಿಂದಿರುವ ಪೌರಾಣಿಕ ಹಿನ್ನಲೆಯ ಸವಿವರಗಳು ಇದೋ ನಿಮಗಾಗಿ… Read More ಛತ್ ಪೂಜೆ

ಕರ್ನಾಟಕದಲ್ಲಿ ರಾಮಾಯಣದ ಕುರುಹುಗಳು

ಹಿಂದೂಗಳಿಗೆ ರಾಮಾಯಣ ಪವಿತ್ರವಾದ ಪುರಾಣವಾಗಿದ್ದು, ಪ್ರಭು ಶ್ರೀರಾಮನನ್ನು ಪ್ರಪಂಚಾದ್ಯಂತ ಕೋಟ್ಯಾಂತರ ಜನರು ಆರಾಧಿಸುತ್ತಾರೆ. ಆದರೆ ರಾಮಾಯಣ ಎಂಬುದು ಕಟ್ಟು ಕಥೆಯಾಗಿದ್ದು ಅಂತಹದ್ದು ನಮ್ಮ ದೇಶದಲ್ಲಿ ನಡೆದೇ ಇಲ್ಲಾ ಎಂದು ವಾದಿಸುವವರಿಗೆ ಪುರಾವೆ ನೀಡುವಂತೆ ಕರ್ನಾಟಕದಲ್ಲೇ ರಾಮಾಯಣದ ಅನೇಕ ಕುರುಹುಗಳಿದ್ದು ಅವುಗಳಲ್ಲಿ ಕೆಲವು ಪ್ರಮುಖ ಸ್ಥಳಗಳನ್ನು ತಿಳಿಯೋಣ ಬನ್ನಿ.… Read More ಕರ್ನಾಟಕದಲ್ಲಿ ರಾಮಾಯಣದ ಕುರುಹುಗಳು

ಪಾಂಬನ್ ಸೇತುವೆ

ಪ್ರಪಂಚದಲ್ಲೇ ಅತಿ ಅಪಾಯಕಾರಿಯಾದ ರೈಲ್ವೇ ಸೇತುವೆಗಳಲ್ಲಿ ಒಂದಾದ ತಮಿಳುನಾಡಿನ ಮಂಟಪಂ ಮತ್ತು ತೀರ್ಥಕ್ಷೇತ್ರ ರಾಮೇಶ್ವರದ ನಡುವಿನ ಸಂಪರ್ಕಕೊಂಡಿಯಾಗಿರುವ ಪಾಂಬನ್ ಸೇತುವೆಯ ಕುರಿತಾದ ಅಧ್ಭುತ ಮತ್ತು ಅಷ್ಟೇ ರೋಚಕವಾದ ಇತಿಹಾಸ ಇದೋ ನಿಮಗಾಗಿ… Read More ಪಾಂಬನ್ ಸೇತುವೆ

ಮೃಗವಧೆ

ನಮ್ಮ ದೇಶದಲ್ಲಿ ಪ್ರತಿಯೊಬ್ಬರ ಹೆಸರಿನೊಂದಿಗೆ ಇರುವ ಉಪನಾಮಗಳು ಇಲ್ಲವೇ ಅವರ ಊರಿನ ಹೆಸರು ಒಂದೊಂದು ಇತಿಹಾಸವನ್ನು ಹೇಳುತ್ತವೆ. ದುರಾದೃಷ್ಟವಷಾತ್ ನಾವು ಆ ಊರಿನ ಹೆಸರು ಮತ್ತು ಇತಿಹಾಸವನ್ನು ತಿಳಿದುಕೊಳ್ಳದೇ ಅವುಗಳನ್ನು ಬದಲಾಯಿಸಲು ಮುಂದಾಗಿರುವುದು ವಿಪರ್ಯಾಸವೆನಿಸುತ್ತದೆ. ಇತ್ತೀಚೆಗೆ ನನಗೆ ಪರಿಚಿತರಾದ ಗೆಳೆಯರೊಬ್ಬರ ಹೆಸರಿನೊಂದಿಗೆ ಮೃಗವಧೆ ಎಂದಿದ್ದದ್ದನ್ನು ಕೇಳಿದಾಗ ನನ್ನ ಕಿವಿಗಳು ಚುರುಕಾಗಿ ಅವರ ಊರಿನ ಬಗ್ಗೆ ಸ್ವಲ್ಪ ಅಧ್ಯಯನ ಮಾಡಿದಾಗಲೇ ನಮ್ಮ ದೇಶದಲ್ಲಿ ನಡೆದ ಮತ್ತು ಈಗ ಅವುಗಳನ್ನು ಕಥೆಗಳ ರೂಪದಲ್ಲಿ ಓದುತ್ತಿರುವ ರಾಮಾಯಣ ಮತ್ತು ಮಹಾಭಾರತದ ಬಗ್ಗೆ… Read More ಮೃಗವಧೆ

ಮೋಕ್ಷರಂಗ, ರಂಗಸ್ಥಳ

ಧನುರ್ಮಾಸದ ಸಮಯದಲ್ಲಿ ಒಂದೇ ದಿನ ಶ್ರೀರಂಗ ಪಟ್ಟಣದ ಆದಿರಂಗ, ಶಿಂಷಾದ ಮಧ್ಯರಂಗ ಮತ್ತು ತಮಿಳುನಾಡಿನ ಶ್ರೀರಂಗನ ಅಂತ್ಯರಂಗ ಈ ಮೂರು ರಂಗನಾಥನ ದರ್ಶನ ಮಾಡಿದಲ್ಲಿ ಬಹಳ ಪುಣ್ಯ ಲಭಿಸುತ್ತದೆ ಎನ್ನುವ ನಂಬಿಕೆ ಇದೆ. ಅದರೆ ಈ ಮೂರು ರಂಗನಾಥನ ದರ್ಶನದ ಮಾಡಿದ ನಂತರ ಮೋಕ್ಷ ಪಡೆಯುವುದಕ್ಕಾಗಿ ನಾಲ್ಕನೇ ರಂಗನಾಥನ ದರ್ಶನ ಮಾಡಬೇಕು ಎನ್ನುವ ವಿಷಯ ಬಹುತೇಕರಿಗೆ ತಿಳಿದೇ ಇಲ್ಲ.  ಬನ್ನಿ ನಾವಿಂದು ಚಿಕ್ಕಬಳ್ಳಾಪುರದ ಸಮೀಪವೇ ಇರುವ ರಂಗಸ್ಥಳದ ಮೋಕ್ಷರಂಗನಾಥನ ದರ್ಶನವನ್ನು ಕುಳಿತಲ್ಲಿಂದಲೇ  ಮಾಡಿಕೊಳ್ಳುವ ಮೂಲಕ ರಂಗನಾಥ ಸ್ವಾಮಿಯ… Read More ಮೋಕ್ಷರಂಗ, ರಂಗಸ್ಥಳ

ಉಲ್ಟೇ ಹನುಮಾನ್ ಮಂದಿರ್

ಭಕ್ತಿ ಅಂದ ತಕ್ಷಣ ನಮ್ಮ ಮನಸ್ಸಿಗೆ ಥಟ್ ಅಂತಾ ನೆನಪಿಗೆ ಬರುವುದೇ ರಾಮನ ಭಕ್ತಾಗ್ರೇಸರ ಅಂಜನೀ ಪುತ್ರ ಪವನಸುತ ಹನುಮಾನ್ ಎಂದರೆ ಅತಿಶಯೋಕ್ತಿಯೇನಲ್ಲ. ಸೀತಾಮಾತೆಯ ಅನ್ವೇಷಣೆಯ ಸಂದರ್ಭದಲ್ಲಿ ಸಮುದ್ರೋಲಂಘನವನ್ನು ಮಾಡಿ ಲಂಕೆಗೆ ಹೋಗಿ ಸೀತಾಮಾತೆಯನ್ನು ಹುಡುಕಿಕೊಂಡ ಬಂದ ಭಜರಂಗಬಲಿ ಇವನು. ಮಹಾನ್ ಪರಾಕ್ರಮಿಯಾದ ಕಾರಣಕ್ಕಾಗಿಯೇ, ಪ್ರಪಂಚಾದ್ಯಂತ ಹನುಮಂತನ ಬೃಹತ್ತಾದ ಪ್ರತಿಮೆಗಳನ್ನು ಎಲ್ಲೆಡೆಯಲ್ಲಿಯೂ ಕಾಣಬಹುದಾಗಿದೆ. ಶಕ್ತಿ, ಭಕ್ತಿ ಮತ್ತು ಬುದ್ಧಿವಂತಿಕೆಯ ಪ್ರತೀಕವೆಂದೇ ಪರಿಗಣಿಸಲ್ಪಟ್ಟ ಆಂಜನೇಯನ ನಿಂತಿರುವ ಇಲ್ಲವೇ ಸಂಜೀವಿನ ಪರ್ವತವನ್ನು ಹೊತ್ತಿರುವ ವಿಗ್ರಹವನ್ನು ಬಹುತೇಕ ಎಲ್ಲಾ ದೇವಾಲಯಗಳಲ್ಲಿಯೂ ಮತ್ತು… Read More ಉಲ್ಟೇ ಹನುಮಾನ್ ಮಂದಿರ್

ಅಳಿಲು ಸೇವೆ

ಅದು ಎಂಭತ್ತನೇ ದಶಕದ ಆರಂಭದ ದಿನಗಳು. ನಾನಾಗ ಇನ್ನೂ ಮಿಡ್ಲ್ ಸ್ಕೂಲಿನಲ್ಲಿ ಓದುತ್ತಿದ್ದೆ. ಅದೊಂದು ರಾತ್ರಿ ನನ್ನ ತಂಗಿಗೆ ಜ್ವರ ಬಂದಿದ್ದ ಕಾರಣ ಆಕೆಯನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಆಕೆಯನ್ನು ಸೈಕಲ್ಲಿನ ಮುಂದುಗಡೆಯ ಬಾರ್ ಮೇಲಿನ ಚಿಕ್ಕ ಸೀಟಿನಲ್ಲಿ ಕೂರಿಸಿಕೊಂಡು ಮನೆಗೆ ಹಿಂತಿರುಗುವಾಗ ಇಳಿಜಾರಿನಲ್ಲಿ ಆಕೆ ಅಚಾನಕ್ಕಾಗಿ ಸೈಕಲ್ ಮುಂದಿನ ಚಕ್ರಕ್ಕೆ ತನ್ನ ಕಾಲು ಕೊಟ್ಟ ಪರಿಣಾಮ ಆಕೆಯ ಕಾಲಿನ ಹಿಮ್ಮಡಿ ಕಿತ್ತು ಬಂದು ಎಂಟು ಹತ್ತು ಹೊಲಿಗೆ ಹಾಕಿದ್ದಲ್ಲದೇ ಸಣ್ಣ ಪುಟ್ಟ ಗಾಯಗಳಾಗಿದ್ದವು. ಸೈಕಲ್ಲಿನಿಂದ ಕೆಳಗೆ… Read More ಅಳಿಲು ಸೇವೆ

ನಂಬಿಕೆ

ಇಂದಿನ ನಮ್ಮ ಬಹುತೇಕ ಯುವ ಜನಾಂಗವನ್ನು ಕರೆದು, ಈ ಕಾರ್ಯವನ್ನು ನಿಮ್ಮಿಂದ ಸಾಧಿಸಲು ಸಾಧ್ಯವೇ ? ಎಂದು ಒಂದು ಸಾಮಾನ್ಯ ಕೆಲಸವನ್ನು ತೋರಿಸಿದರೂ, ಅವರಿಂದ ಮೊದಲು ಬರುವ ಉತ್ತರವೇ ಇಲ್ಲಾ. ಇದು ಸಾಧ್ಯವಿಲ್ಲ. ಅದು ಏಕೆ ಸಾಧ್ಯವಿಲ್ಲಾ ಎಂದು ನಾವು ಕೇಳುವುದಕ್ಕೆ ಮುಂಚೆಯೇ, ಅದಕ್ಕೆ ನಾನಾ ರೀತಿಯ ಕಾರಣಗಳನ್ನು ನೀಡಲು ಆರಂಭಿಸುತ್ತಾರೆ. ಅರೇ ಅದೇಕೆ ಸಾಧ್ಯವಿಲ್ಲಾ? ನೀವು ಹೀಗೆ ಮಾಡಿದರೆ ಖಂಡಿತವಾಗಿಯೂ ನಿಮ್ಮ ಕೆಲಸ ಕಾರ್ಯಸಾಧುವಾಗುತ್ತದೆ ಎಂದು ತಿಳಿಸಿದಾಗ ಹಾಂ!! ಹೌದು. ನಿಜ. ನೀವು ಹೇಳಿದ ಹಾಗೆ… Read More ನಂಬಿಕೆ

ಕಾಮನ ಹುಣ್ಣಿಮೆ / ಹೋಳಿ ಹಬ್ಬ

ಶಿಶಿರ ಋತುವಿನ ಫಾಲ್ಗುಣ ಮಾಸದ ಪೌರ್ಣಿಮೆ ದಿನದಂದು ದೇಶಾದ್ಯಂತ ಅತ್ಯಂತ ಸಡಗರ ಸಂಭ್ರಮಗಳಿಂದ ಆಚರಿಸಲ್ಪಡುವ ಕಾಮನ ಹುಣ್ಣಿಮೆ, ವಸಂತ ಹುಣ್ಣಿಮೆ ಅರ್ಥಾತ್ ಹೋಳಿ/ಹೋಲಿ ಹಬ್ಬದ ಪೌರಾಣಿಕ ಹಿನ್ನಲೆ ಮತ್ತು ಅದರ ಆಚರಣೆ ಸವಿವರಗಳು ಇದೋ ನಿಮಗಾಗಿ… Read More ಕಾಮನ ಹುಣ್ಣಿಮೆ / ಹೋಳಿ ಹಬ್ಬ