ಕಳೆದ ವಾರಾಂತ್ಯದಲ್ಲಿ #Nobindi_Nobusiness ಎಂಬ ಲೇಖನವೊಂದನ್ನು ಬರೆದು ಅದರಲ್ಲಿ ಮಾಧ್ಯಮ ಮತ್ತು ಜಾಹೀರಾತುಗಳ ಮೂಲಕ ಹೇಗೆ ನಮ್ಮ ಹಿಂದೂ ಹಬ್ಬಗಳನ್ನು ಅವಹೇಳನ ಮಾಡಲಗುತ್ತಿದೆ ಹಾಗೂ ತಿರುಚಲಾಗುತ್ತಿದೆ ಎಂಬುದನ್ನು ಜನರಿಗೆ ಅರಿವು ಮೂಡಿಸಲು ಪ್ರಯತ್ನಿಸಿದ್ದೆ.
ಈ ಲೇಖನವನ್ನು ಸಾಮಾಜಿಕ ಜಾಲತಾಣ ಮತ್ತು ವಾಟ್ಸಾಪ್ ಗುಂಪುಗಳಲ್ಲಿ ಹಲವರೊಡನೆ ಹಂಚಿಕೊಂಡಿದ್ದೆ. ಇಡೀ ಲೇಖನ ಯಾರದ್ದೇ ವಯಕ್ತಿಕ ಭಾವನೆಗಳಿಗೆ ಧಕ್ಕೆ ಬಾರದಂತೆ ಹಿಂದೂ ಧರ್ಮದ ಬಗ್ಗೆ corporate company ಗಳಿಗೆ ಇರುವ ತಾತ್ಸಾರ, ನಮ್ಮ ಆಚರಣೆಗಳ ಬಗ್ಗೆ ತೋರುವ ಅಸಡ್ಡೆ ಮತ್ತು ತಾರತಮ್ಯವನ್ನು ಎತ್ತಿ ತೋರಿಸಿದ್ದಕ್ಕೆ ಹಲವರು ಸಹಮತ ವ್ಯಕ್ತಪಡಿಸಿದರೆ, ಒಂದು ಗುಂಪಿನಲ್ಲಿ ಮಾತ್ರಾ ಒಬ್ಬ ಶಾಂತಿಧೂತ ಅಸಹಿಷ್ಣು ಮನುಷ್ಯ ಇದ್ದಕ್ಕಿದ್ದಂತೆಯೇ ಯಾವುದೇ ಆಭಿಪ್ರಾಯವನ್ನು ವ್ಯಕ್ತಪಡಿಸದೇ ಸ್ವಇಚ್ಚೆಯಿಂದ ಹೊರಗೆ ಹೋಗಿದ್ದನ್ನು ಗಮನಿಸಿದ ಕೂಡಲೇ ಆ ಗುಂಪಿನಲ್ಲಿದ್ದ ಕೆಲವು ಜಾತ್ಯಾತೀತರಿಗೆ ಒಂದು ರೀತಿ ಅಸಹನೆ/ಅಸಹಿಷ್ಣುತೆ ಜಾಗೃತವಾಗಿ, ದಯವಿಟ್ಟು ಈ ಗುಂಪಿನಲ್ಲಿ ಕೋಮುವಾದವನ್ನು ಹರಡದಿರಿ ಎಂಬ ಎಚ್ಚರಿಕೆಯನ್ನು ನನಗೆ ನೀಡಿದರು.
ನಿಜ ಹೇಳ ಬೇಕೆಂದರೆ ಆ ಲೇಖನದಲ್ಲಿ When you are in ROM, be like a Roman ಎನ್ನುವಂತೆ ಹಿಂದೂಸ್ಥಾನದಲ್ಲಿ ವ್ಯವಹಾರ ಮಾಡುವವರು ಹಿಂದೂಗಳ ಭಾವನೆಗೆ ಸ್ಪಂದಿಸದೇ ಧಕ್ಕೆ ತರುವುದನ್ನು ಹೇಗೆ ತಾನೇ ಸಹಿಸಿಕೊಂಡಿರಲು ಸಾಧ್ಯ? ನಮ್ಮ corporate companyಗಳಲ್ಲಿ ಆಯುಧಪೂಜೆ ಮಾಡಿದರೆ ಕೋಮುವಾದ, ಅದೇ corporate companyಗಳು ನಮಗೆ ಸಂಬಂಧವೇ ಇಲ್ಲದ Halloween Day ಮತ್ತು Christmasಗಳಿಗೆ ಇಡೀ office ಸಿಂಗಾರ ಮಾಡುವುದನ್ನು ಸಹಿಸಿಕೊಂಡಿರಲು ಸಾಧ್ಯವೇ? ಜಾತ್ಯಾತೀತತೆ ಎಂದರೆ ಹಿಂದೂಗಳ ಮೇಲಿನ ದಬ್ಬಾಳಿಕೆಯೇ? ಗುಂಪನ್ನು ಬಿಟ್ಟು ಹೋದ ವ್ಯಕ್ತಿ ಇದೇ ಗುಂಪಿನಲ್ಲಿ ಕೆಲವು ದಿನಗಳ ಹಿಂದೆ ಈದ್ ಮುಬಾರಕ್ ಹೇಳಿದಾಗ ನಾವುಗಳು ಸಹಿಸಿಕೊಂಡಿವೇ ಹೊರತೂ ನಾವೇನೂ ಗುಂಪನ್ನು ಬಿಡಲಿಲ್ಲ ಅಥವಾ ಪ್ರತಿಭಟಿಸಲೂ ಇಲ್ಲಾ ಅಲ್ಲವೇ? corporate companyಗಳ ಜಾಹೀರಾತು ಕುರಿತಂತೆ ಲೇಖನವನ್ನು ಬರೆದದ್ದನ್ನೇ ಸಹಿಸಿಕೊಳ್ಳಲಾಗದೇ ಸಹಿಷ್ಣುತೆ ಇಲ್ಲದೇ ಗುಂಪನ್ನು ಬಿಟ್ಟು ಹೋದವರ ಮನಸ್ಥಿತಿ ಎಂಥಹದ್ದು ಎಂಬುದನ್ನು ಅರಿತುಕೊಳ್ಳಿ. ಎಂದು ಪ್ರಶ್ನಿಸಿದ ಕೂಡಲೇ,
ಆ ನಕಲೀ ಜಾತ್ಯಾತೀತ ವ್ಯಕ್ತಿ ನನ್ನ ಪ್ರಶ್ನೆಗಳಿಗೆ ಉತ್ತರಿಸುವ ಬದಲು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಓತಪ್ರೋತವಾಗಿ ವಿತಂಡ ವಾದ ಮಂಡಿಸುತ್ತಾ, ಅಂತಿಮವಾಗಿ ರಾಜಕೀಯದ ವಿಷಯ ಎತ್ತಿ ವಿಷಯಾಂತರ ಮಾಡಿದ್ದಲ್ಲದೇ, ಮೊದಲು ಮಾನವನಾಗು ಎಂಬ ಸಂದೇಶವೊಂದನ್ನು ಹಾಕಿ ಹಿಂದೂ ಧರ್ಮದ ಬಗ್ಗೆ ತಮ್ಮ ಅಸಹನೆ ಮತ್ತು ಅಸಹಕಾರವನ್ನು ಪ್ರಕಟಿಸುತ್ತಾ ಸಾರ್ವಜನಿಕವಾಗಿ ತಮ್ಮ ಬೌದ್ದೀಕ ದಿವಾಳಿತನವನ್ನು ಹೊರಹಾಕಿದ್ದು ನಿಜಕ್ಕೂ ಬೇಸರ, ಅಕ್ರೋಶದ ಜೊತೆ ಆವರ ಬಗ್ಗೆ ಕನಿಕರವೂ ಉಂಟಾಯಿತು.
ಸಹಿಷ್ಣುತೆ ಎಂದರೆ ನಮ್ಮ ಸಂಸ್ಕಾರ ಮತ್ತು ಸಂಸ್ಕೃತಿಗಳನ್ನು ಬೇರೆಯವರು ಹತ್ತಿಕ್ಕುತ್ತಿದ್ದಾಗ ಅದನ್ನು ನೋಡಿಕೊಂಡು ಸುಮ್ಮನಿರ ಬೇಕು ಎಂದೇನಲ್ಲ. ನಮಗೆ ನಮ್ಮತನದ ಬಗ್ಗೆ ಅಭಿಮಾನವಿರ ಬೇಕು ಹಾಗೆಯೇ ಮತ್ತೊಂದು ಧರ್ಮದ ಬಗ್ಗೆ ಗೌರವವನ್ನೂ ತೋರುವಂತಿರಬೇಕು. ಎಲ್ಲರ ಭಾವನೆಗಳಿಗೆ ಸ್ಪಂದಿಸುವವರೇ ನಿಜವಾದ ಮಾನವೀಯತೆ. ಅದನ್ನೇ ಭಾರತದ ಹಿಂದೂಗಳು ಈವರೆವಿಗೂ ಪಾಲಿಸಿಕೊಂಡು ಬರುತ್ತಿದ್ದಾರೆ.
ಇಷ್ಟೆಲ್ಲಾ ಸಮಜಾಯಿಷಿ ಕೊಟ್ಟನಂತರವೂ ಹಾಗೆ ಬಿಟ್ಟು ಹೋದವರನ್ನು ಗುಂಪಿಗೆ ಸೇರಿಸಿ ಎಂದು ಸುಮ್ಮನಾಗಿದ್ದ ಗಾಯದ ಮೇಲೇ ತಾನೇ ಬರೆ ಹಾಕಿಕೊಂಡಿದ್ದಲ್ಲದೇ ಅನಾವಶ್ಯಕವಾಗಿ ಓತಪ್ರೋತವಾಗಿ ಸಂದೇಶಗಳನ್ನು ಕಳುಹಿಸುತ್ತಾ ಇಡೀ ಗುಂಪಿನ ಶಾಂತಿಯನ್ನು ಹಾಳುಗೆಡವಿದ್ದನ್ನೇ ಪ್ರಶ್ನಿಸಿದ ಮತ್ತೊಬ್ಬ ಹಿರಿಯರ ಮೇಲೂ ಹರಿಹಾಯ್ದು ಸಿಟ್ಟಿನಿಂದ ಮೂಗು ಕತ್ತರಿಸಿಕೊಳ್ಳುವಂತೆ ನನ್ನಂತಹ ವ್ಯಕ್ತಿ ಈ ಗುಂಪಿನಲ್ಲಿ ಇರಲು ಅಸಾಧ್ಯ ಎಂದು ಆತ್ಮರತಿಯನ್ನು ತೋರಿಸಿಕೊಂಡು ಗುಂಪನ್ನು ತ್ಯಜಿಸಿದಾಗ ನನಗೆ ಅನ್ನಿಸಿದ್ದು, ಹಿಂದೂಗಳಿಗೆ ಅನ್ಯಧರ್ಮೀಯರಿಗಿಂತ ಇಂತಹ ಎಡಬಿಡಂಗಿ ಜಾತ್ಯಾತೀತ ಹಿಂದೂಗಳೇ ನಿಜವಾದ ಆಂತರಿಕ ಶತ್ರುಗಳು.
ಇನ್ನು ಕನ್ಯಾದಾನದ ಬಗ್ಗೆ ಬರೋಣ. ನಮ್ಮ ಶಾಸ್ತ್ರದಲ್ಲಿ ದಾನ ದಾನಗಳಲ್ಲಿ ಅತೀ ಶೇಷ್ಠವಾದ ದಾನವೆಂದರೆ ಅದು ಕನ್ಯಾದಾನ. ಆದರೆ ಇಂದು ಅದರ ಹಿನ್ನಲೆ ಮತ್ತು ಮಹತ್ವವನ್ನು ಅರಿಯದ ಮಾನ್ಯವರ್ ಎಂಬ ಉಡುಪು ತಯಾರಕ ಸಂಸ್ಥೆ ಮತ್ತು ಅವರು ಪ್ರಸಾರ ಮಾಡುತ್ತಿರುವ ಜಾಹೀರಾತಿನ ನಿರ್ದೇಶಕ ಮತ್ತು ಈ ಜಾಹೀರಾತಿನಲ್ಲಿ ನಟಿಸಿರುವ ನಟಿ ಕನ್ಯಾದಾನ ಎಂದು ದಾನ ಮಾಡಲು ನಾನೇ ವಸ್ತುವೇ? ಚಿಕ್ಕಂದಿನಿಂದಲೂ ನನ್ನನ್ನು ಗುಬ್ಬಿ ಗುಬ್ಬೀ ಎಂದು ಪ್ರೀತಿಯಿಂದ ಕರೆದು ಮುದ್ದು ಮಾಡಿದ್ದೀರಿ. ಆಕಾಶದಲ್ಲಿ ಸ್ವಚ್ಚಂಧವಾಗಿ ಹಾರಾಡಬೇಕಾದಂತಹ ಈ ಗುಬ್ಬಿಯನ್ನು ದಾನ ಮಾಡುವಂತಹ ವಸ್ತು ಎಂದು ಏಕೆ ಕರೆಯುತ್ತೀರೀ? ಹಾಗಾಗಿ ನಾನು ಇದನ್ನು ಕನ್ಯಾದಾನ ಎಂದು ಪರಿಗಣಿಸದೇ ಕನ್ಯಾಮಾನ ಎಂದು ಕರೆಯಲು ಇಚ್ಚಿಸುತ್ತೇನೆ ಎಂದು ಅಸಂಬದ್ಧವಾಗಿ ಹೇಳುತ್ತಾ, ನಮ್ಮ ಸಂಸ್ಕಾರ ಮತ್ತು ಸಂಪ್ರದಾಯವನ್ನೇ ತಿರುಚಿದಾಗಲೂ ಅದನ್ನು ಸಹಿಸಿಕೊಳ್ಳಲು ಸಾಧ್ಯವೇ?
ಕನ್ಯಾದಾನ ಎಂಬ ಪದವು ಎರಡು ಪದಗಳ ಕೊಂಡಿಯಾಗಿದೆ. ಕನ್ಯಾ, ಅಂದರೆ ಹುಡುಗಿ, ದಾನ ಎಂದರೆ ಧಾರೆ ಎರೆಯುವುದು. ಸನಾತನ ಸಂಪ್ರದಾಯಗಳ ಪ್ರಕಾರ, ವರನು ವಿಷ್ಣುವಿನ ಅವತಾರವಾದರೆ, ವಧು ಮಹಾಲಕ್ಷ್ಮಿಯ ಅವತಾರವಾಗಿರುತ್ತಾಳೆ. ಅಷ್ಟು ವರ್ಷಗಳ ಕಾಲ ಹೊತ್ತು ಹೆತ್ತು ಸಾಕಿ ಸಲಹಿದ ಮಗಳನ್ನು ತಾವು ಅಳೆದು ತೂಗಿ ಹುಡುಗನ ಮನೆತನ, ಕುಲಾ ಗೋತ್ರ ಎಲ್ಲವನ್ನು ವಿಚಾರಿಸಿ ನಂತರ ಶಾಸ್ತ್ರೋಕ್ತವಾಗಿ ಲಗ್ನವನ್ನು ನೋಡಿ ಬಂಧು ಮಿತ್ರರ ಸಮ್ಮುಖದಲ್ಲಿ ಮಧುಮಗನ ಕೈಯಲ್ಲಿ ತನ್ನ ಮಗಳನ್ನು ಇತ್ತು ಗಂಗಾ ಜಲದ ಸಾಕ್ಷಿಯಾಗಿ ತನ್ನ ಮಗಳನ್ನು ಧಾರೆ ಎರೆದು ಕೊಡುವ ಮೂಲಕ ಆಕೆಯ ಸಕಲ ಜವಬ್ದಾರಿಯನ್ನು ಅಳಿಯನಿಗೆ ವಹಿಸಿಕೊಡುತ್ತಾರೆ. ಇಷ್ಟು ವರ್ಷ ಗಿಣಿಸಾಕಿದಂತೆ ಸಾಕಿ ಸಲಹಿ ದೊಡ್ಡವಳನ್ನಾಗಿ ಮಾಡಿದ್ದೇವೆ. ನಮ್ಮ ಮನೆಯ ಮಹಾಲಕ್ಷ್ಮಿಯು ಇನ್ನು ಮುಂದೆ ನಿಮ್ಮ ಎಲ್ಲಾ ಕಷ್ಟ ಸುಖದ ಕಾಲದಲ್ಲಿಯೂ ಜೊತೆಗಿದ್ದು ನಿಮ್ಮ ಮನೆಯ ಘನತೆ ಗೌರವನ್ನು ಕಾಪಾಡುವ ಜೊತೆಗೆ ನಿಮ್ಮ ವಂಶೋದ್ಧಾರದ ಜವಾಬ್ಧಾರಿಯನ್ನೂ ಹೊರಯವ ಮೂಲಕ ನಿಮ್ಮ ಮನೆಯ ನಂದಾದೀಪವಾಗಲಿ. ಹಾಗಾಗಿ ನೀವು ಆಕೆಯನ್ನು ಜೋಪಾನವಾಗಿ ನೋಡಿಕೊಳ್ಳಿ ಎಂಬುದೇ ಈ ಕನ್ಯಾದಾನದ ಹಿಂದಿರುವ ಮಹತ್ವವಾಗಿದೆ. ಹೀಗೆ ಧಾರೆ ಎರೆದು ಕೊಡುವ ಮೂಲಕ, ವರ ಮತ್ತು ವಧುವಿನ ಬಾಂಧವ್ಯವನ್ನು ಇದು ಗಟ್ಟಿಗೊಳಿಸುವುದರ ಜೊತೆಗೆ, ಎರಡೂ ಮನೆಯ ಸಂಬಂಧವನ್ನು ಬೆಳಸುತ್ತದೆ.
ಅದೇ ರೀತಿ ತಮ್ಮ ಮಗಳನ್ನು ಗಂಡನ ಮನೆಗೆ ಕಳುಹಿಸಿಕೊಡುವಾಗ, ಮಗಳೇ ಇಷ್ಟು ದಿನ ನಮ್ಮ ಮನೆಯಲ್ಲಿ ಏನೇ ಮಾಡಿದರೂ ತಂದೆ ತಾಯಿಗಳಾಗಿ ಸಹಿಸಿಕೊಂಡು ಹೋಗುತ್ತಿದ್ದಲ್ಲದೇ, ನಿನ್ನೆಲ್ಲಾ ತಪ್ಪನ್ನು ಕ್ಷಮಿಸಿ ಪ್ರೀತಿ ಮಾಡುತ್ತಿದ್ದೆವು. ಇನ್ನು ಮುಂದೆ ನೀನು ನಿಮ್ಮ ಅತ್ತೆ ಮತ್ತು ಮಾವನಲ್ಲೇ ತಂದೆ ತಾಯಿಯರನ್ನು ಕಾಣುತ್ತಾ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕಲ್ಲದೇ ಗಂಡನ ಸುಖಃ ದುಃಖಗಳಲ್ಲಿ ಅರ್ಧಾಂಗಿಯಾಗಿ ಕೊಟ್ಟ ಮನೆಗೂ ಹೋದ ಮನೆಗೂ ಗೌರವನ್ನು ತರಬೇಕೆಂದು ತಿಳಿ ಹೇಳಿ ಕಳುಹಿಸಿಕೊಡುತ್ತಾರೆ.
ಮಗಳನ್ನು ಮದುವೆ ಮಾಡಿ ಕಳುಹಿಸಿಕೊಟ್ಟರೆ ಜವಾಬ್ಧಾರಿ ಕಳೆದು ಹೋಗುತ್ತದೆ ಎನ್ನುವುದು ಲೋಕಾರೂಢಿಯ ಮಾತಾದರೂ, ನಿಜ ಹೇಳಬೇಕೆಂದರೆ, ಮಗಳನ್ನು ಮದುವೆ ಮಾಡಿಕೊಟ್ಟನಂತರ ಜವಾಬ್ಧಾರಿ ಹೆಚ್ಚುತ್ತದೆ. ಅಲ್ಲಿಯವರೆಗೂ ಕೇವಲ ಮಗಳ ಆರೈಕೆ ಮಾಡುತ್ತಿದ್ದವರು ಇನ್ನು ಮುಂದೆ ಅಳಿಯನ ಜವಾಬ್ಧಾರಿ ಬರುತ್ತದಲ್ಲದೇ ಮುಂದೆ ಮಗಳಿಗೆ ಮಕ್ಕಳಾದಾಗ ಮೊಮ್ಮಕ್ಕಳನ್ನು ಸಾಕಿ ಸಲಹುವುದೂ ಅಜ್ಜಾ ಅಜ್ಜಿಯರ ಜವಾಬ್ಧಾರಿಯಾಗಿರುತ್ತದೆ. ಇಂತಹ ಪವಿತ್ರ ಸಂಬಂಧ ಮಹತ್ವವನ್ನು ಅರಿಯದೇ, ತಮಗೆ ತೋಚಿದಂತೆ ಸಂಪ್ರದಾಯವನ್ನು ತಿರುಚಲು ಜಾಹೀರಾತು ಕಂಪನಿಗಳಿಗೆ ಅಧಿಕಾರವನ್ನು ಕೊಟ್ಟವರು ಯಾರು?
ಇಂತಹ ಸುಂದರವಾದ ಕಲ್ಪನೆಯ ಅರಿವಿಲ್ಲದ ಕೆಲವರು ವಿಕೃತ ಮನಸ್ಸಿನವರು ಕವಿ ಜಿ ಎಸ್ ಶಿವರುದ್ರಪ್ಪನವರು ಬರೆದಿರುವ ಈ ಸುಂದರ ಕವಿತೆಯಂತೆ,
ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ
ಎಲ್ಲಿದೆ ನಂದನ ಎಲ್ಲಿದೆ ಬಂಧನ ಎಲ್ಲಾ ಇವೆ ಈ ನಮ್ಮೊಳಗೆ
ಒಳಗಿನ ತಿಳಿಯನು ಕಲಕದೆ ಇದ್ದರೆ ಅಮೃತದ ಸವಿಯಿದೆ ನಾಲಗೆಗೆ
ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕು ದಿನದ ಈ ಬದುಕಿನಲಿ
ನಮ್ಮ ಕೈಯ್ಯಲ್ಲಿ ಬೆಣ್ಣೆ ಹಿಡಿದುಕೊಂಡು ತುಪ್ಪಕ್ಕೆ ಅಲೆಂದಂತೆ, ಚಿನ್ನ ಹುಡುಕುವ ಭರದಲ್ಲಿ, ಕೈಯ್ಯಲ್ಲಿದ್ದ ವಜ್ರವನ್ನೇ ಕಳೆದುಕೊಂಡಂತೆ ನಮ್ಮ ಧರ್ಮದಲ್ಲೇ ಎಲ್ಲವೂ ಇದ್ದರೂ ಅದರ ಮಹತ್ವವನ್ನು ಅರಿಯದೇ ನಮ್ಮ ಧರ್ಮದ ಆಚರಣೆಳನ್ನು ಅವಹೇಳನ ಮಾಡುತ್ತಾ ಅನ್ಯಧರ್ಮದ ಅಂಧಾನುಕರಣೆ ಮಾಡುವುದೋ ನಿಜಕ್ಕೂ ಅಕ್ಷಮ್ಯ ಅಪರಾಧವೇ ಸರಿ.
ನಮ್ಮ ಸಂಸ್ಕಾರ ಸಂಪ್ರದಾಯಗಳಿಗೆ ವ್ಯತಿರಿಕ್ತವಾಗಿ ಮತ್ತೊಬ್ಬರು ಅವಹೇಳನ ಮಾಡುತ್ತಿರುವ ಸಂಧರ್ಭದಲ್ಲಿ ಸುಮ್ಮನೇ ಹೊಡೀ ಬಡೀ ಕಡೀ ಎಂದು ಹೊಡೆದಾಟಕ್ಕೆ ಇಳಿಯದೇ, ಅವರು ಮಾಡುತ್ತಿರುವ ತಪ್ಪನ್ನು ಅವರ ಅವಗಾಹನೆಗೆ ತರುವುದಲ್ಲದೇ ಅವರು ಮಾಡಿದ ತಪ್ಪನ್ನು ತಿದ್ದಿಕೊಳ್ಳಲು ಹೇಳಬೇಕು. ತಪ್ಪನ್ನು ಒಪ್ಪಿಕೊಳ್ಳಲು ಸಿದ್ದರಿಲ್ಲದಿದ್ದಲ್ಲಿ ಆವರ ಅಹಂ ಬಗ್ಗು ಬಡಿಯಲು ಗಾಂಧಿಯವರೇ ಹೇಳಿಕೊಟ್ಟ ಅಸಹಕಾರ ಚಳುವಳಿಯೇ ಬ್ರಹ್ಮಾಸ್ತ್ರವನ್ನಾಗಿ ಬಳಸಿಕೊಂಡು, ಆ ಕಂಪನಿಗಳ ಉತ್ಪನ್ನಗಳನ್ನೂ, ಹಣಕ್ಕಾಗಿ ತಮ್ಮನ್ನು ತಾವು ಮಾರಿಕೊಂಡ ನಟ/ನಟಿಯರನ್ನೂ ಮತ್ತು ವಿಕೃತ ಮನೋಭಾವದ ನಿರ್ದೇಶಕರನ್ನು ಬಹಿಷ್ಕರಿಸುವುದೇ ಉತ್ತಮ ಮಾರ್ಗವಾಗಿದೆ.
1000 ವರ್ಷಗಳ ಮೊಘಲರ ಆಳ್ವಿಕೆ, 300ವರ್ಷಗಳ ಬ್ರಿಟಿಷರ ಆಳ್ವಿಕೆಯಲ್ಲಿ ದಾಸ್ಯಕ್ಕೆ ಒಳಗಾಗಿ ನಮ್ಮ ದೇಶದ ಸಂಸ್ಕಾರ ಮತ್ತು ಸಂಸ್ಕೃತಿಗಳಿಗೆ ಸಾಕಷ್ಟು ಹಾನಿಯಾಗಿರುವುದನ್ನು ಗಮನಿಸಿಯೂ ಇನ್ನು ಮುಂದೇಯೂ ಪಾಠ ಕಲಿಯದೇ, ಸಹಿಷ್ಣುತೆ ಎಂಬ ಹೆಸರಿನಲ್ಲಿ ನಮ್ಮ ಮೇಲೆಯೇ ದಬ್ಬಾಳಿಕೆಯ ನಡೆಯುತ್ತಿದ್ದರೂ ಸಹಿಸಿಕೊಂಡು ಹೋಗಬೇಕು ಎಂದು ವಾದಿಸುವುದು ಮೂರ್ಖತನದ ಪರಮಾವಧಿ ಆದೀತು..
ಧರ್ಮೋ ರಕ್ಷತಿ ರಕ್ಷಿತಃ!!
ಏನಂತೀರೀ?
ನಿಮ್ಮವನೇ ಉಮಾಸುತ
Like mindeds can only understands your’s thoughts
On Mon, 25 Oct, 2021, 11:00 pm ಏನಂತೀರೀ? Enantheeri?, wrote:
> ಶ್ರೀಕಂಠ ಬಾಳಗಂಚಿ posted: “ಕಳೆದ ವಾರಾಂತ್ಯದಲ್ಲಿ #Nobindi_Nobusiness ಎಂಬ
> ಲೇಖನವೊಂದನ್ನು ಬರೆದು ಅದರಲ್ಲಿ ಮಾಧ್ಯಮ ಮತ್ತು ಜಾಹೀರಾತುಗಳ ಮೂಲಕ ಹೇಗೆ ನಮ್ಮ ಹಿಂದೂ
> ಹಬ್ಬಗಳನ್ನು ಅವಹೇಳನ ಮಾಡಲಗುತ್ತಿದೆ ಹಾಗೂ ತಿರುಚಲಾಗುತ್ತಿದೆ ಎಂಬುದನ್ನು ಜನರಿಗೆ ಅರಿವು
> ಮೂಡಿಸಲು ಪ್ರಯತ್ನಿಸಿದ್ದೆ. ಈ ಲೇಖನವನ್ನು ಸಾಮಾಜಿಕ ಜಾಲತಾಣ ಮತ್ತು ವಾಟ್ಸಾಪ್”
>
LikeLiked by 1 person
Very true
LikeLike