ತೂಕ ಮತ್ತು ಅಳತೆ

ಅದೊಂದು ಕೋಳಿ ಅಂಗಡಿ ಇನ್ನೇನು ಅಂಗಡಿಯನ್ನು ಮುಚ್ಚಬೇಕು ಎನ್ನುವ ಸಮಯದಲ್ಲಿ ಅಂಗಡಿಗೆ ಬಂದ ಮಹಿಳೆಯೊಬ್ಬಳು ಇನ್ನೂ ಕೋಳಿ ಸಿಗುತ್ತದೆಯೇ? ಎಂದು ವಿಚಾರಿಸುತ್ತಾಳೆ. ಕಟುಕ ತನ್ನ ಆಳವಾದ ಫ್ರೀಜರ್ ಅನ್ನು ತೆರೆದುನೋಡಿ ಅಲ್ಲಿ ಉಳಿದಿದ್ದ ಏಕೈಕ ಕೋಳಿಯನ್ನು ಹೊರತೆಗೆದು ತಕ್ಕಡಿಯಮೇಲಿಟ್ಟು 1.5 ಕೆ.ಜಿ. 🐓 ಇದೆ ಕೊಡ್ಲಾ ಎಂದು ಕೇಳುತ್ತಾನೆ. ತಕ್ಷಣವೇ ಮಹಿಳೆಯು ಕೋಳಿಯ ಗಾತ್ರ ಮತ್ತು ಪ್ರಮಾಣವನ್ನು ನೋಡಿ, ಇದಕ್ಕಿಂತ ಸ್ವಲ್ಪ ದೊಡ್ಡದಿದ್ದರೆ ಕೋಡ್ತೀರಾ ಎಂದು ವಿನಮ್ರವಾಗಿ ಕೇಳುತ್ತಾಳೆ. ಕೂಡಲೇ ಕಟುಕನು ಆ ಕೋಳಿಯನ್ನು ಮತ್ತೆ ತನ್ನ… Read More ತೂಕ ಮತ್ತು ಅಳತೆ

ನೆಮ್ಮದಿ

ಶಂಕರಪ್ಪ ನಗರದ ಮಾರುಕಟ್ಟೆಯ ಬಳಿ ಸಣ್ಣದಾದ ಕಾಫಿ ಅಂಗಡಿಯನ್ನು ನಡೆಸಿಕೊಂಡು ಹೋಗುತ್ತಿರುತ್ತಾರೆ. ಪ್ರತೀ ದಿನ ನೂರಾರು ಜನರು ಅವರ ಅಂಗಡಿಗೆ ಬಂದು ಕಾಫೀ, ಟೀ ಕುಡಿದು ತಮ್ಮ ಮನಸ್ಸಿನ ದುಗುಡವನ್ನು ಕಳೆದುಕೊಂಡು ಉಲ್ಲಾಸಿತರಾಗಿ ಹೋಗುತ್ತಿರುತ್ತಾರೆ. ಅದೋಂದು ಸಂಜೆ‌ ಶಂಕರಪ್ಪನವರಿಗೆ ವಿಪರೀತ ತಲೆ ನೋವು ಕಾಡತೊಡಗಿ, ತಲೆ ಸಿಡಿದು ಹೋಗುವಷ್ಟು ನೋವು ಬಾಧಿಸ ತೊಡಗುತ್ತದೆ. ಅದಾಗಲೇ ಮಬ್ಬುಗತ್ತಲು ಸಮೀಪಿಸುತ್ತಿದ್ದ ಕಾರಣ, ಅಂಗಡಿಯಲ್ಲಿಯೂ ಗ್ರಾಹಕರು ಕಡಿಮೆ ಇದ್ದದನ್ಬು ಕಂಡು, ತಮ್ಮ ಹುಡುಗನಿಗೆ ಅಂಗಡಿಯ ಉಸ್ತುವಾರಿ ವಹಿಸಿ ಹತ್ತಿರದ ಮೆಡಿಕಲ್ ಸ್ಟೋರಿಗೆ… Read More ನೆಮ್ಮದಿ

ಜೀವವಿದ್ದಲ್ಲಿ ಮಾತ್ರವೇ ಜೀವನ

ಕಳೆದ ಒಂದು ವಾರದಲ್ಲಿ, ಇತ್ತೀಚೆಗಷ್ಟೇ ರಾಜ್ಯಸಭೆಗೆ ಆಯ್ಕೆಯಾಗಿದ್ದ ರಾಜ್ಯಸಭಾಸದಸ್ಯರು, ನಾಲ್ಕು ಬಾರಿ ಸಾಂಸದರಾಗಿ ಕೇಂದ್ರದಲ್ಲಿ ಮಂತ್ರಿಗಳಾಗಿದ್ದವರು ಮತ್ತು ಹಿರಿಯ ಶಾಸಕರಲ್ಲದೇ. ಹೆಸರಾಂತ ಗಾಯಕರರಾದ ಶ್ರೀ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರನ್ನು ಕಳೆದುಕೊಂಡಿದ್ದೇವೆ ಮತ್ತು ಅಸ್ಸಾಂನ ಮಾಜಿ ಮುಖ್ಯಮಂತ್ರಿಗಳ ಆರೋಗ್ಯ ಚಿಂತಾಜನಕವಾಗಿದೆ. ಇವರೆಲ್ಲರೀ ಪರಿಸ್ಥಿತಿಯ ಹಿಂದೆ ಮಹಾಮಾರಿ ಕೂರೋನಾ ಕೈವಾಡವಿರುವುದು ಸ್ಪಷ್ಟವಾಗಿದೆ. ಸಚಿವರು, ಶಾಸಕರು, ಸಮಾಜದ ಗಣ್ಯವ್ಯಕ್ತಿಗಳಿಗೇ ಚಿಕಿತ್ಸೆ ಫಲಕಾರಿಯಾಗುತ್ತಿಲ್ಲವೆಂದರೆ, ಇನ್ನು ಸಾಮಾನ್ಯ ಜನಗಳ ಪಾಡೇನು? ಸರ್ಕಾರ ಮತ್ತು ಆರೋಗ್ಯ ಇಲಾಖೆ ಎಷ್ಟೇ ಜಾಗೃತಿ ವಹಿಸಿದ್ದರೂ, ಸಮಾಜದಲ್ಲಿ ದಿನೇ… Read More ಜೀವವಿದ್ದಲ್ಲಿ ಮಾತ್ರವೇ ಜೀವನ

ಸೂಳೆ ಕೆರೆ (ಶಾಂತಿ ಸಾಗರ)

ಸೂಳೆಕೆರೆ ಎಂಬ ಹೆಸರನ್ನು ಕೇಳಲು ಮುಜುಗರ ಎನಿಸಿದರೂ, ಅ ಕೆರೆಯನ್ನು ಕಟ್ಟಿಸುವ ಹಿಂದಿರುವ ಪತಿತ ಪಾವನೆಯ ಪಾವಿತ್ರತೆ ನಿಜಕ್ಕೂ ಅದ್ಭುತವಾಗಿದ್ದು ಅದರ ಸಂಪೂರ್ಣ ವಿವರಗಳು ಇದೋ ನಿಮಗಾಗಿ… Read More ಸೂಳೆ ಕೆರೆ (ಶಾಂತಿ ಸಾಗರ)

ದೇವರು ಎಷ್ಟು ದೊಡ್ಡವರು?

ಅದೊಂದು ಸಂಪ್ರದಾಯಸ್ಥ ಕುಟುಂಬ. ಅದೊಂದು ದಿನ ಅ ಮನೆಯ ಸಣ್ಣ ವಯಸ್ಸಿನ ಹುಡುಗನೊಬ್ಬ ತನ್ನ ತಂದೆಯನ್ನುದ್ದೇಶಿಸಿ, ಅಪ್ಪಾ, ನಾವು ನಂಬುವ ದೇವರು ದೊಡ್ಡವರಾಗಿರುತ್ತಾರೆ? ಅವರ ಗಾತ್ರವೇನು? ಎಂದು ಮುಗ್ಧತೆಯಿಂದ ಕೇಳುತ್ತಾನೆ. ಮಗನ ಪ್ರಶ್ನೆಯಿಂದ ಕೊಂಚ ಆಶ್ವರ್ಯ ಚಕಿತನಾದ ತಂದೆ ಒಂದು ಕ್ಶಣ ಮೌನವಾಗಿ ಯೋಚಿಸಿ ಇದಕ್ಕೆ ಹೇಗೆ ಉತ್ತರಿಸುವುದು ಎಂದು ನೋಡುತ್ತಿರುವಾಗಲೇ ಆಗಸದಲ್ಲಿ ವಿಮಾನವೊಂದು ಹೋಗುತ್ತಿರುತ್ತದೆ. ಕೂಡಲೇ ಮಗೂ, ಆ ವಿಮಾನದ ಗಾತ್ರ ಎಷ್ಟು ಎಂದು ಹೇಳಬಲ್ಲೆಯಾ ಎಂದು ಪ್ರಶ್ನಿಸುತ್ತಾನೆ. ಆಗಸದತ್ತ ದಿಟ್ಟಿಸಿ ವಿಮಾನವನ್ನು ನೋಡಿದ ಹುಡುಗ,… Read More ದೇವರು ಎಷ್ಟು ದೊಡ್ಡವರು?

ಗೋಗಳ್ಳರು

ನಾವೆಲ್ಲರೂ ಚಿಕ್ಕಂದಿನಿಂದಲೂ, ಪಂಚತ್ರಂತ್ರ ಮತ್ತು ಅಕ್ಬರ್ ಬೀರ್ಬಲ್ ಕಥೆಗಳನ್ನು ಕೇಳಿಕೊಂಡು ಬೆಳೆದವರೇ ಆಗಿದ್ದು, ಅಲ್ಲಿ ಕಳ್ಳರು ಬಹಳ ಚಾಣಕ್ಯತನದಿಂದ ಎಲ್ಲರನ್ನೂ ಬೇಸ್ತುಗೊಳಿಸಿ ತಮ್ಮ ಕೈಚಳಕವನ್ನು ತೋರಿಸುವುದನ್ನು ಕೇಳಿದ್ದೇವೆ, ಓದಿದ್ದೇವೆ. ಪ್ರಸ್ತುತವೂ ಅದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಅದಕ್ಕೆ ಉದಾಹರಣೆಯಾಗಿ ಒಂದು ಪ್ರಸಂಗವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲೇಬೇಕು. ಸಾಮಾನ್ಯವಾಗಿ ರಾತ್ರಿಯ ಹೊತ್ತು ದನಗಳನ್ನು ಕದಿಯಲು ಬರುವ ಕಳ್ಳರು ಮಾಡುವ ಮೊದಲ ಕೆಲವೆಂದರೆ, ಹಸುಗಳ ಕುತ್ತಿಗೆಗೆ ಕಟ್ಟಲಾಗಿರುವ ಗಂಟೆಗಳನ್ನು ಶಬ್ಧ ಬಾರದಂತೆ ತೆಗೆದುಬಿಡುತ್ತಾರೆ ನಂತರ ಹಸುಗಳ ಬಾಯಿಗೆ ಶಬ್ಧ ಮಾಡದಂತೆ ಸಣ್ಣ ಬುಟ್ಟಿಯನ್ನು… Read More ಗೋಗಳ್ಳರು

KL 7BT 369

ಅರೇ ಇದೇನಿದು KL 7BT 369 ಎಂಬ ವಿಚಿತ್ರ ಶೀರ್ಷಿಕೆ? ಇದು ಯಾವ ನಂಬರ್? ಮತ್ತು ಈ ನಂಬರಿನ ಹಿಂದಿರುವ ರೋಚಕ ಕಥೆಯೇನು ಎಂದು ತಿಳಿಯುವ ಕಾತುರ ನಿಮಗಿದ್ದಲ್ಲಿ, ನಮಗೂ ಸಹಾ ಈ ನಂಬರಿನ ಕೂತೂಹಲಕಾರಿ ವಿಷಯಗಳನ್ನು ನಿಮ್ಮೊಂದಿಗೆ ಬಿಚ್ಚಿಡುವ ಮನಸ್ಸಾಗುತ್ತಿದೆ ಮೂಲತಃ ಕೇರಳಿಗರಾದರೂ, ದಕ್ಷಿಣ ಭಾರತದ ಸಿನಿಮಾರಂಗದ ಪ್ರಸ್ತುತ ಖ್ಯಾತನಾಮರಾದ ಹಲವರಲ್ಲಿ ಮೊಹಮ್ಮದ್ ಕುಟ್ಟಿ ಇಸ್ಮಾಯಿಲ್ ಪಾನಿ ಪರಂಬಿಲ್  ಅರ್ಥಾತ್ ಎಲ್ಲರ ಪ್ರೀತಿಯ ಮಮ್ಮುಟ್ಟಿ ಅವರ ಪರಿಚಯ ಯಾರಿಗೆ ತಾನೇ ಇಲ್ಲ? ಇತ್ತೀಚೆಗಷ್ಟೇ ತಮ್ಮ  69 ನೇಯ ಹುಟ್ಟುಹಬ್ಬವನ್ನು… Read More KL 7BT 369

ಹರಳೋ ಮರಳೋ?

ಅರೇ ಇದೇನಿದೂ ಅರವತ್ತಕ್ಕೆ ಅರಳೋ ಮರಳೋ ಎನ್ನುವುದನ್ನು ಕೇಳೀದ್ದೇವೆ. ಆದನ್ನು ತಪ್ಪಾಗಿ ಹರಳೋ ಮರಳೋ ಎನ್ನುವ ಶೀರ್ಷಿಕೆ ಕೊಟ್ಟಿದ್ದೀನಿ ಅಂತ ಯೋಚನೆ ಮಾಡ್ತಾ ಇದ್ದೀರಾ? ನಾನು ಆ ರೀತಿಯ ಶೀರ್ಷಿಕೆ ಕೊಡಲು ಇರುವ ಕಾರಣ ಏನು ಅಂತ ತಿಳಿದ್ರೇ, ಖಂಡಿತವಾಗಿಯೂ ಬೆಚ್ಚಿ ಬೀಳ್ತೀರಿ. ಕಳೆದ ಎರಡು ಮೂರು ದಿನಗಳಿಂದ ವಾಟ್ಸಾಪ್ ವಿವಿದ ಗುಂಪಪುಗಳಲ್ಲಿ ಗಾಜಿನ ಸೋಡಾ ಬಾಟಲಿನಿಂದ ಪಚ್ಚೆ ಹರಳನ್ನು ಮಾಡುವ ವಿಡೀಯೋ ಹರಿದಾಡುತ್ತಿದೆ. ಯಾವುದೋ ಹಸಿರು ಬಣ್ಣದ ಬಾಟಲ್ಲನ್ನು ಸುತ್ತಿಗೆಯಿಂದ ಹೊಡೆದು, ಒಡೆದು ಅದರ ತಳ… Read More ಹರಳೋ ಮರಳೋ?

ದೇವರ ಸ್ವಂತ ನಾಡು, ಕೇರಳ

ಕೇರಳ ರಾಜ್ಯವು ದಕ್ಷಿಣ ಭಾರತದ ಅತ್ಯಂತ ಸಣ್ಣ ರಾಜ್ಯವಾಗಿದ್ದರೂ ಪ್ರಾಕೃತಿಕವಾಗಿ, ಸಾಂಸ್ಕೃತಿಕವಾಗಿ ಶ್ರೀಮಂತವಾಗಿದ್ದು, ಶೇ 100ರಷ್ಟು ಸಾಕ್ಷರತ ರಾಜ್ಯವಾಗಿದ್ದು ಪ್ರವಾಸ ಮತ್ತು ಪ್ರವಾಸೋದ್ಯಮಕ್ಕೂ ಹೆಸರುವಾಸಿಯಾಗಿದೆ. ಪಶ್ಚಿಮದಲ್ಲಿ ಅರೇಬಿಯನ್ ಸಮುದ್ರದ ಪ್ರಾಚೀನ ನೀರು ಮತ್ತು ಪೂರ್ವದಲ್ಲಿ ಸೊಂಪಾದ ಪಶ್ಚಿಮ ಘಾಟ್ ಪರ್ವತಗಳು, ಅದರ ತೀವ್ರವಾದ ನದಿಗಳು ಮತ್ತು ಕೆರೆಗಳ ಜಾಲ, ದಟ್ಟ ಕಾಡುಗಳು, ವಿಲಕ್ಷಣ ವನ್ಯಜೀವಿಗಳು, ಪಚ್ಚೆ ಹಿನ್ನೀರಿನ ಶಾಂತವಾದ ವಿಸ್ತಾರಗಳು ಮತ್ತು ಪ್ರಶಾಂತ ಕಡಲತೀರಗಳ ಉದ್ದದ ತೀರವು ಪ್ರವಾಸಿಗರಿಗೆ ಸ್ವರ್ಗವನ್ನೇ ಧರೆಗಿಳಿಸಿದಂತಿದೆ. ಶ್ರೀಮಂತ ಸಾಂಸ್ಕೃತಿಕ ಪರಂಪರೆ, ನೃತ್ಯ… Read More ದೇವರ ಸ್ವಂತ ನಾಡು, ಕೇರಳ