ಸ್ಪಿನ್ ಗಾರುಡಿಗ ಬಿ ಎಸ್ ಚಂದ್ರಶೇಖರ್

2001ರಲ್ಲಿ ಕ್ರಿಕೆಟ್ ಆಟವನ್ನೇ ಕೇಂದ್ರವಾಗಿಟ್ಟುಕೊಂಡು ಅಮೀರ್ ಖಾನ್ ನಾಯಕತ್ವದಲ್ಲಿ ತೆರೆಗೆ ಬಂದ ಲಗಾನ್ ಚಿತ್ರದಲ್ಲಿ ಆಂಗ್ಲರ ವಿರುದ್ಧ ತೆರಿಗೆ ಕಟ್ಟುವುದನ್ನು ತಪ್ಪಿಸಿಕೊಳ್ಳಲು ಕ್ರಿಕೆಟ್ ಪಂದ್ಯಾವಳಿಯನ್ನು ಆಡಲು ಒಪ್ಪಿ ದೇಸೀ ತಂಡವನ್ನು ಕಟ್ಟುತ್ತಿರುತ್ತಾರೆ. ಅದೊಂದು ದಿನ ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದ ಸಮಯದಲ್ಲಿ ಚೆಂಡು ದೂರ ಹೋಗಿ ಅಲ್ಲೇ ಕೆಲಸ ಮಾಡುತ್ತಿದ್ದ ಕಚ್ರಾ ಎಂಬವನ ಬಳಿ ಹೋಗುತ್ತದೆ. ಆಗ ನಾಯಕ ಭುವನ್ ಕಚ್ರಾಗೆ ಚೆಂಡನ್ನು ಎಸೆಯಲು ಹೇಳುತ್ತಾನೆ. ಪೋಲಿಯೋ ಪೀಡಿತ ಕಚ್ರಾ ಮೊದಲು ಚೆಂಡನ್ನು ಎಸೆಯಲು ಹಿಂಜರಿಯುತ್ತಾನಾದರೂ ನಂತರ ಅವನು… Read More ಸ್ಪಿನ್ ಗಾರುಡಿಗ ಬಿ ಎಸ್ ಚಂದ್ರಶೇಖರ್

ರಾಜರ್ಷಿ, ಜಿ. ವಿ. ಅಯ್ಯರ್

ಕನ್ನಡದ ಮೇರು ನಟ ಬಾಲಕೃಷ್ಣ ಅವರ ಜೊತೆ ಜೊತೆಯಲ್ಲಿಯೇ ಗುಬ್ಬಿ ನಾಟಕದ ಕಂಪನಿಯಲ್ಲಿದ್ದು ನಂತರ ರಾಧಾ ರಮಣ ಚಿತ್ರದ ಮೂಲಕವೇ ಒಟ್ಟೊಟ್ಟಿಗೆ ಚಿತ್ರರಂಗ ಪ್ರವೇಶಿಸಿ ಮುಂದೆ ದಿಗ್ಗಜರಾಗಿ ಬೆಳೆದ ಮಹಾನ್ ನಟ, ಚಿತ್ರಸಾಹಿತಿ, ಸಂಭಾಷಣೆಕಾರ, ಗೀತರಚನೆಕಾರ, ನಿರ್ಮಾಪಕ, ನಿರ್ದೇಶಕ ಎಲ್ಲದಕ್ಕಿಂತಲೂ ಹೆಚ್ಚಾಗಿ ಜನಾನುರಾಗಿ, ಕನ್ನಡ ಚಿತ್ರರಂಗದ ರಾಜರ್ಷಿ, ಕನ್ನಡ ಚಿತ್ರ ರಂಗದ ಭೀಷ್ಮ ಪಿತಾಮಹ ಎಂದರೂ ತಪ್ಪಾಗಲಾರದ ಶ್ರೀ ಗಣಪತಿ ವೆಂಕಟರಮಣ ಅಯ್ಯರ್ ಅರ್ಥಾತ್ ಜಿ.ವಿ.ಐಯ್ಯರ್ ಅವರ ಸಾಧನೆಗಳನ್ನು ಮೆಲುಕು ಹಾಕೋಣ. 1917ರ ಸೆಪ್ಟೆಂಬರ್ 3ರಂದು ನಂಜನಗೂಡಿನ… Read More ರಾಜರ್ಷಿ, ಜಿ. ವಿ. ಅಯ್ಯರ್

ಕನ್ನಡಾಭಿಮಾನಿ ಬಾಲಕೃಷ್ಣ

ಅಭಿನಯ ಎಲ್ಲರೂ ಮಾಡುವುದಕ್ಕಾಗುವುದಿಲ್ಲ. ಪ್ರತಿಯೊಂದು ಪಾತ್ರದಲ್ಲೂ ಅಭಿನಯಿಸಬೇಕಾದರೆ, ಆ ನಟನಿಗೆ ಆ ಪಾತ್ರದ ಸಂಫೂರ್ಣ ಪರಿಚಯವಿರಬೇಕು. ಆತ ತನ್ನ ಸಹನಟನ ಸರಿ ಸಮಾನಾಗಿ ಸೇರಿಗೆ ಸವ್ವಾ ಸೇರು ಎನ್ನುವಂತೆ ಕೇವಲ ಸಂಭಾಷಣೆಯಲ್ಲದೇ ಆಂಗೀಕವಾಗಿಯೂ ಅಭಿನಯಿಸ ಬೇಕಾಗುತ್ತದೆ. ಹಾಗೆ ಆಭಿನಯಿಸಲು ಪಾತ್ರದಲ್ಲಿ ತನ್ಮಯತೆ ಮತ್ತು ನಿರ್ದೇಶಕರು ಹೇಳಿಕೊಟ್ಟದ್ದನ್ನು ಅರ್ಥೈಸಿಕೊಂಡು ಅವರು ಹೇಳಿದ ರೀತಿಯಲ್ಲಿಯೇ ನಟಿಸಿ ತೋರಿಸ ಬೇಕಾಗುತ್ತದೆ. ಈ ರೀತಿಯಾಗಿ ಮಾಡಲು ಕಣ್ಣು ಕಿವಿ ಮತ್ತು ನಾಲಿಗೆ ಚುರುಕಾಗಿರ ಬೇಕು. ಆದರೆ ಕನ್ನಡ ಚಲನ ಚಿತ್ರ ಕಂಡ ಒಬ್ಬ… Read More ಕನ್ನಡಾಭಿಮಾನಿ ಬಾಲಕೃಷ್ಣ

ಶ್ರೀ ಗಳಗನಾಥರು

ಅದು ಹದಿನೆಂಟನೇಯ ಶತಮಾನದ ಅಂತ್ಯದ ಕಾಲ. ಎಲ್ಲೆಡೆಯಲ್ಲಿಯೂ ಸ್ವಾತಂತ್ರ್ಯೋತ್ಸವದ ಕಿಚ್ಚು ಹರಡಿತ್ತು. ಆಗ ಉತ್ತರ ಕರ್ನಾಟಕದಲ್ಲಿ ಲೋಕಮಾನ್ಯ ತಿಲಕರ ಕೇಸರಿ ಪತ್ರಿಕೆ ಮತ್ತು  ಹರಿ ನಾರಾಯಣ ಆಪ್ಟೆಯವರ ಕರಮಣೂಕ ಪತ್ರಿಕೆಗಳದ್ದೇ ಭರಾಟೆ. ಕನ್ನಡಿಗರಿಗೆ ಕನ್ನಡ ಪತ್ರಿಕೆಗಳು ಸಿಗದ ಕಾರಣ ಕನ್ನಡಿಗರು ಸಹಾ ಮರಾಠಿ ಪತ್ರಿಕೆಗಳ ಮೂಲಕವೇ ಸುದ್ಧಿಗಳನ್ನು ತಿಳಿಯಬೇಕಾಗಿತ್ತು. ಆಗಷ್ಟೇ ಶಿಕ್ಷಕರ ತರಭೇತಿ ಕಾಲೇಜಿನಲ್ಲಿ ಓದುತ್ತಿದ್ದ ಒಬ್ಬ ತರುಣನಿಗೆ ಅರೇ ಈ ಎಲ್ಲಾ ಸಾಹಿತ್ಯಗಳೂ ಕನ್ನಡದಲ್ಲಿಯೇ ಓದುವಂತಿದ್ದರೆ ಎಷ್ಟು ಚೆನ್ನಾ ಎಂದು ಯೋಚಿಸಿ ಆ ಎಲ್ಲಾ ಸಾಹಿತ್ಯಗಳನ್ನೂ… Read More ಶ್ರೀ ಗಳಗನಾಥರು

ಶ್ರೀ ಆಲೂರು ವೆಂಕಟರಾಯರು

ವಕೀಲರಾಗಿ, ಸಾಹಿತಿಗಳಾಗಿ, ಪತ್ರಿಕಾ ಸಂಪಾದಕರಾಗಿ, ಪ್ರಕಾಶಕರಾಗಿ, ಅನೇಕ ಸಂಘ ಸಂಸ್ಥೆಗಳ ಸಂಸ್ಕಾಪಕರಾಗಿ, ಸಂಘಟಿಕರಾಗಿ, ಸಂಶೋಧಕರಾಗಿ, ಸ್ವಾತಂತ್ಯ್ರ ಹೋರಾಟಗಾರರಾಗಿ ಒಟ್ಟಿನಲ್ಲಿ *ಆಡು ಮುಟ್ಟದ ಸೊಪ್ಪಿಲ್ಲ ಆಲೂರು ವೆಂಟರಾಯರು* ಮಾಡದ ಕೆಲಸವಿಲ್ಲ ಎಂಬಂತೆ ಕರ್ನಾಟಕದ ಏಕೀಕರಣಕ್ಕೆ ಅಹಿರ್ನಿಶಿಯಾಗಿ ದುಡಿದ ಕನ್ನಡದ ಕುಲಪುರೋಹಿತರ ಜಯಂತಿಯಂದು ಅವರನ್ನು ನೆನಪಿಸಿಕೊಳ್ಳುವುದು ಪ್ರತಿಯೊಬ್ಬ ಕನ್ನಡಿಗರ ಆದ್ಯ ಕರ್ತವ್ಯವೇ ಸರಿ… Read More ಶ್ರೀ ಆಲೂರು ವೆಂಕಟರಾಯರು

ನಟ ಭಯಂಕರ ವಜ್ರಮುನಿ

ಅಂದಿನ ಕಾಲದ ಹೆಸರಾಂತ ರಾಜಕಾರಣಿಗಳ ವಂಶದ ಕುಡಿಯಾದರೂ ಆಯ್ಕೆ ಮಾಡಿಕೊಂಡಿದ್ದು ರಂಗಭೂಮಿ. ಗದೆ ಹಿಡಿದು ವೇದಿಕೆಯ ಮೇಲೆ ಬಂದು ತನ್ನ ಕಂಚಿನ ಕಂಠದಿಂದ ಸುಸ್ಪಷ್ಟವಾದ ಭಾಷೆಯಲ್ಲಿ ಸಂಭಾಷಣೆಯನ್ನು ಅಬ್ಬರಿಸುತ್ತಿದ್ದರೆ, ಎದುರಿಗಿರುವವರು ಪತರುಗುಟ್ಟು ಹೋಗುವಂತೆ ಮಾಡುತ್ತಿದ್ದ, ಕನ್ನಡ ಚಿತ್ರರಂಗದ ಶ್ರೇಷ್ಠ ಖಳನಟ ಶ್ರೀ ವಜ್ರಮುನಿ ಅವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ನಟ ಭಯಂಕರ ವಜ್ರಮುನಿ