ಕನ್ನಡ ಚಿತ್ರರಂಗದ ಅಮ್ಮ ಪಂಡರೀ ಬಾಯಿ

ಸಿನಿಮಾಗಳಲ್ಲಿ ತಾಯಿ ಎಂದ ಕೂಡಲೇ ಥಟ್ ಅಂತಾ ಕಣ್ಣ ಮುಂದೆ ಬರುವ, ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಸರಿ ಸುಮಾರು 1,500ಕ್ಕೂ ಅಧಿಕ ಸಿನಿಮಾಗಳಲ್ಲಿ ನಾಯಕಿ ಮತ್ತು ವಿವಿಧ ಪೋಷಕ ಪಾತ್ರಗಳಲ್ಲಿ ಮನೋಜ್ಞವಾಗಿ ನಟಿಸಿದ್ದ ಪಂಡರಾಪುರದ ಪಾಂಡುರಂಗನ ಪರಮಭಕ್ತೆ, ಕನ್ನಡ ಚಿತ್ರರಂಗದ ಅಮ್ಮ ಪಂಡರೀಬಾಯಿ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಕನ್ನಡ ಚಿತ್ರರಂಗದ ಅಮ್ಮ ಪಂಡರೀ ಬಾಯಿ

ಮನೆಯಲ್ಲಿರುವ ಹಿರಿಯರು

ಅದೊಂದು ಗಂಡ, ಹೆಂಡತಿ, ಅಜ್ಜಿ ಮತ್ತು ಮೊಮ್ಮಗಳು ಇದ್ದ ಸುಂದರವಾದ ಸಂಸಾರ. ಅದೊಮ್ಮೆ ಮನೆಯವರೆಲ್ಲರೂ ವಾರಂತ್ಯದಲ್ಲಿ ಮಾಲ್ ಗೆ ಹೋಗಲು ನಿರ್ಧರಿಸಿ, ಅಮ್ಮಾ ನಾವೆಲ್ಲರೂ ಮಾಲ್ ಗೆ ಹೋಗುತ್ತಿದ್ದೇವೆ ಎಂದಾಗ, ಆ ವಯಸ್ಸಾದ ತಾಯಿ. ಸರಿ ಮಗನೇ ನೀವೆಲ್ಲರೂ ಹೋಗಿ ಬನ್ನಿ. ನನಗೆ ಕಾಲು ನೋವು ಇರುವ ಕಾರಣ ಅಲ್ಲೆಲ್ಲಾ ಅಲೆದಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಅಜ್ಜಿಯ ಮಾತನ್ನು ಕೇಳಿ ನೊಂದು ಕೊಂಡ ಮೊಮ್ಮಗಳು, ಇಲ್ಲಾ ಅಜ್ಜೀ ನೀವು ಖಂಡಿತವಾಗಿಯೂ ಬರಲೇ ಬೇಕು. ನೀವು ಬಾರದೇ ಹೋದಲ್ಲಿ… Read More ಮನೆಯಲ್ಲಿರುವ ಹಿರಿಯರು

ಕಡೇಗಾಲದಲ್ಲಿ ಹೊರುವುದಕ್ಕಾದರೂ ನಾಲ್ಕು ಜನರನ್ನಾದರೂ ಸಂಪಾದಿಸಿ

ಅರೇ ಇದೇನಿದು ಇಂತಹ ವಿಲಕ್ಷಣ ಮತ್ತು ಹೃದಯವಿದ್ರಾವಕ ಶೀರ್ಷಿಕೆ ಅಂದುಕೊಳ್ತಾ ಇದ್ದೀರಾ? ಖಂಡಿತವಾಗಿಯೂ ಇದು ವಿಲಕ್ಷಣವಾಗಿರದೇ ಇಂದಿನ ಜೀವನದ ಕಠು ಸತ್ಯವಾಗಿದೆ. ಇದೇ ವಾರದಲ್ಲಿ ನಡೆದ ಎರಡು ಕರುಣಾಜನಕ ಕತೆ ಮತ್ತು ವ್ಯಥೆ ಇದೋ ನಿಮಗಾಗಿ. ಶ್ರೀಯುತ ಆಚಾರ್ ಮೂಲತಃ ಬಳ್ಳಾರಿಯ ಹೊಸಪೇಟೆಯವರು. ಸಾಕಷ್ಟು ಸ್ಥಿತಿವಂತರಾಗಿದ್ದು ಕಾರು ಬಾರು ನಡೆಸಿದ್ದವರು. ಗಂಡು ಮಕ್ಕಳಿಬ್ಬರು ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ತಮ್ಮ ಬದಕನ್ನರಿಸಿ ರಾಜಧಾನಿ ಬೆಂಗಳೂರಿಗೆ ಬಂದಾಗ ನಮಗೆ ಪರಿಚಯವಾದವರು. ಮಕ್ಕಳು ತಮ್ಮ ಕಛೇರಿಯ ಮೂಲಕ ವಿದೇಶಕ್ಕೆ ಹೋಗಿ ನಂತರದ… Read More ಕಡೇಗಾಲದಲ್ಲಿ ಹೊರುವುದಕ್ಕಾದರೂ ನಾಲ್ಕು ಜನರನ್ನಾದರೂ ಸಂಪಾದಿಸಿ

ನೋಡುವ ದೃಷ್ಟಿಕೋನ

ಈ ಚಿತ್ರವನ್ನು ನೋಡಿದಾಕ್ಷಣವೇ, ಅರೇ ಇದೇನಿದು ಅಶ್ಲೀಲ ಚಿತ್ರವನ್ನು ಹಾಕಿದ್ದಾರಲ್ಲಾ ಎಂದು ಯೋಚಿಸಬಹುದು. ಇಲ್ವೇ, ಇದೇನಿದು? ಸೆರೆಮನೆಯಲ್ಲಿರುವ ಈ ಇಳೀ ವಯಸ್ಸಿನವ ಸಣ್ಣ ವಯಸ್ಸಿನ ಹುಡುಗಿಯೊಂದಿಗೆ ಕಾಮಕೇಳಿಯಲ್ಲಿ ತೊಡಗಿದ್ದಾರಲ್ಲಾ? ಎಂಬ ಅನುಮಾನವೂ ಮೂಡಿ ಬರಬಹುದು ಆದರೆ ಈ ಪ್ರಸಂಗದ ಹಿಂದಿನ ಐತಿಹಾಸಿಕ ಕರಾಳ ಕಥನವನ್ನು ತಿಳಿದರೇ ಎಲ್ಲರಿಗೂ ಬೇಸರವಾಗುವುದಲ್ಲದೇ ಮಮ್ಮಲ ಮರುಗದೇ ಇರುವುದಿಲ್ಲ. ಫ್ರಾನ್ಸ್‌ನಲ್ಲಿ ಲೂಯಿಸ್‌ XIV ಆಳ್ವಿಕೆಯ ಕಾಲದಲ್ಲಿ ವಯಸ್ಸಾದ ವೃದ್ಧರೊಬ್ಬರು ಹಸಿವಿನಿಂದಾಗಿ ರೊಟ್ಟಿಯನ್ನೂ ಕೊಳ್ಳಲೂ ಹಣವಿಲ್ಲದಿದ್ದ ಕಾರಣ ಅಂಗಡಿಯೊಂದರಲ್ಲಿ ರೊಟ್ಟಿಯೊಂದನ್ನು ಕದ್ದಿದ್ದಕ್ಕಾಗಿ ಆ ಬಡ… Read More ನೋಡುವ ದೃಷ್ಟಿಕೋನ

ಲೀನಾ ಮೆಡೀನಾ ಜಗತ್ತಿನ ಅತ್ಯಂತ ಕಿರೀ ವಯಸ್ಸಿನ ತಾಯಿ

ಪೆರು ದೇಶದ ಲೀನಾ ಐದು ವರ್ಷ ಪುಟ್ಟ ಹುಡುಗಿ. ಆಕೆ ಪದೇ ಪದೇ ಹೊಟ್ಟೇ ನೋವು ಎಂದು ಸಂಕಟ ಪಡುತ್ತಿದ್ದದ್ದಲ್ಲದೇ ಆಕೆಯ ಹೊಟ್ಟೆಯೂ ಕೂಡಾ ದಿನೇ ದಿನೇ ಬೆಳೆಯಲು ಆರಂಭಿಸಿದಾಗ, ಆಕೆಯ ತಾಯಿಯು ಅಕೆಯನ್ನು ಪಿಸ್ಕೋದ ಆಸ್ಪತ್ರೆಗೆ ಕರೆದುಕೊಂಡು ತೋರಿಸಿದಾಗ ಆರಂಭದಲ್ಲಿ ಅವಳ ಹೊಟ್ಟೆಯಲ್ಲಿ ದೊಡ್ಡದಾದ ಗೆಡ್ಡೆಯೊಂದು ಬೆಳೆಯುತ್ತಿರಬಹುದು ಎಂದೇ ಆರಂಭದಲ್ಲಿ ನಂಬಿದ್ದರಾದರೂ ನಂತರ ಕೂಲಂಕಷವಾಗಿ ಪರೀಕ್ಷಿಸಿದ ಡಾ. ಗೆರಾರ್ಡೊ ಲೊಜಾಡಾ ಎಂಬ ವೈದ್ಯೆ ಆಶ್ವರ್ಯಚಕಿತರಾಗಿ ಹೋದರು. ಕೇವಲ ಐದು ವರ್ಷದ ಆ ಹಾಲುಗಲ್ಲದ ಹಸುಳೆ ಗರ್ಭಿಣಿಯಾಗಿದ್ದಳು.… Read More ಲೀನಾ ಮೆಡೀನಾ ಜಗತ್ತಿನ ಅತ್ಯಂತ ಕಿರೀ ವಯಸ್ಸಿನ ತಾಯಿ

ಕ್ಷಮಯಾಧರಿತ್ರೀ

ಇಡೀ ದೇಶವೇ ಲಾಕೌಟ್ ಆಗಿ ಎಲ್ಲವೂ ಬಂದ್ ಆದಾಗ ನಮ್ಮ ಕ್ಷೇಮಕ್ಕಾಗಿ ಮಮ್ಮಲ ಮರುಗುವುದೇ. ನಮ್ಮ ದೇಶ ಮತ್ತು ನಮ್ಮ ಮನೆ. ಎರಡು ಜೀವಗಳು ಮಾತ್ರಾ ನಮ್ಮೆಲ್ಲಾ ತಪ್ಪುಗಳನ್ನೂ ಮನ್ನಿಸಿ ಒಪ್ಪಿಕೊಳ್ಳಲು ಸಿದ್ಧವಾಗಿರುತ್ತವೆ ಒಂದು ಹೆತ್ತ ತಾಯಿ ಮತ್ತೊಂದು ಕಟ್ಟಿಕೊಂಡ ಮಡದಿ. ಯಾವ ಬಂದ್ ಲೆಕ್ಕಿಸದೇ, ವರ್ಷದ ಮುನ್ನೂರೈವತ್ತೈದು ದಿನಗಳೂ, ದಿನದ ಇಪ್ಪತ್ನಾಲ್ಕು ಗಂಟೆಗಳೂ ನಮಗೆ ಆಶ್ರಯ ನೀಡಿರುವ ದೇಶ, ನಮಗೆ ಜನ್ಮ ನೀಡಿದ ತಾಯಿ ಮತ್ತು ಸಲಹುತ್ತಿರುವ ಮಡದಿ, ಈ ಕ್ಷಮಯಾಧರಿತ್ರೀಗಳಿಗೆ ಮತ್ತು ಅನ್ನಪೂರ್ಣೆಯರಿಗೆ ನಮ್ಮ… Read More ಕ್ಷಮಯಾಧರಿತ್ರೀ

ಕರ್ಮ

ನಮ್ಮ ಸನಾತನ ಧರ್ಮದಲ್ಲಿ ಕರ್ಮದ ಬಗ್ಗೆ ತುಂಬಾ ನಂಬಿಕೆ ಇಟ್ಟುಕೊಂಡಿದ್ದೇವೆ. ಪೂರ್ವ ಜನ್ಮದಲ್ಲಿ ಮಾಡಿದ ಕರ್ಮಗಳ ಫಲ ಫಲವನ್ನು ಈ ಜನ್ಮದಲ್ಲಿ ನಾವು ಅನುಭವಿಸುತ್ತೇವೆ ಎಂಬ ನಂಬಿಕೆ ಇದೆ. ಆದರೆ ಈ ಕಲಿಗಾಲದಲ್ಲಿ ಅದು ಸ್ವಲ್ಪ ಬದಲಾಗಿ, ನಾವು ಮಾಡಿದ ಕರ್ಮವನ್ನು ಇಂದೇ ಡ್ರಾ, ಇಂದೇ ಬಹುಮಾನ ಎನ್ನುವ ಹಾಗೆ ಇಲ್ಲೇ ಅನುಭವಿಸುವ ಹೃದಯವಿದ್ರಾವಕ ಕಥೆಯೊಂದನ್ನು ಹೇಳಲು ಹೊರಟಿದ್ದೇನೆ. ಧಾರವಾಡದ ಪ್ರಾಣೇಶ್ ಕುಲಕರ್ಣಿಯವರು ಇದ್ದಕ್ಕಿದ್ದಂತೆಯೇ ನಡು ರಾತ್ರಿಯಲ್ಲಿ ತಮ್ಮ ಪ್ರಾಣ ಸ್ನೇಹಿತ ಗುರುರಾಜ ದೇಶಪಾಂಡೆಯವರಿಗೆ ಕರೆಮಾಡಿದರು. ಇಬ್ಬರೂ… Read More ಕರ್ಮ

ಸಾರ್ಥಕ ಬದುಕು

ಒಂದು ಉದ್ದೇಶಿತ ಕೆಲಸಕ್ಕಾಗಿ ಬಂದು ಆ ಕೆಲಸವನ್ನು ಸಕಾಲಕ್ಕೆ ಸರಿಯಾಗಿ ಎಲ್ಲರೂ ಒಪ್ಪುವಂತೆ, ಇಲ್ಲವೇ ಹೊಗಳುವಂತೆ ಮಾಡಿ ಮುಗಿಸಿ ಹೋದಲ್ಲಿ ಅದುವೇ ಸಾರ್ಥಕತೆ ಎನಿಸುತ್ತದೆ. ಅಂತಹ ಒಂದು ಸಾರ್ಥಕ ಬದುಕನ್ನು ನಡೆಸಿದ ಒಂದು ಹಿರಿಯ ಜೀವದ ಬಗ್ಗೆ ನೆನಸಿಕೊಳ್ಳುವಂತಹ ಅನಿವಾರ್ಯ ಸಂದರ್ಭ ಬಂದೊದಗಿದ್ದು ನಿಜಕ್ಕೂ ದುಃಖ ಕರ. ಎಪ್ಪತ್ತರ ದಶಕದಲ್ಲಿ ಕರ್ನಾಟಕ ಮತ್ತು ಆಂಧ್ರ ಗಡಿ ಭಾಗದ ಯಗುಕೋಟೆಯ ಜಮೀನ್ದಾರ್ ರಾಮಚಂದ್ರರವರ ದ್ವಿತೀಯ ಪುತ್ರಿ ಲಕ್ಷ್ಮೀ (ಆದಿ ಲಕ್ಷ್ಮೀ) ಮತ್ತು ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ ಬಳಿಯ ತಿಪ್ಪೂರಿನ… Read More ಸಾರ್ಥಕ ಬದುಕು

ಸ್ತ್ರೀ ! ಕ್ಷಮಯಾಧರಿತ್ರಿ!!

ಹುಡುಗಿಯರು ಕಲಿಯುತ್ತಿರುವ ಪ್ರೌಢಶಾಲೆಯ ಅಧ್ಯಾಪಿಕೆಯಾಗಿದ್ದಳು ಆಕೆ… ಪಾಠ ಹೇಳಿ ಕೊಡಲು ಸಮರ್ಥರಾದ ಅಧ್ಯಾಪಿಕೆಯರಲ್ಲಿ ಒಬ್ಬಳಾಗಿದ್ದಳು ಮತ್ತು ಚೆಲುವೆಯಾಗಿದ್ದಳು ಆಕೆ… ಆಕೆಯ ಮದುವೆ ಆಗಿರಲಿಲ್ಲ…. ಒಂದು ದಿನ ತರಗತಿಯ ಹೆಣ್ಣು ಮಕ್ಕಳು ಆ ಟೀಚರ್ ಹತ್ತಿರ ಕೇಳಿದರು – “ ಮಿಸ್.. ನೀವು ಮದುವೆಯಾಗದೇ ಇರೋದು ಯಾಕೆ…?” ಟೀಚರ್ ಹೇಳಿದರು – ” ನಾನೊಂದು ಕಥೆ ಹೇಳುತ್ತೇನೆ. ಎಲ್ಲರೂ ಶ್ರಧ್ಧೆಯಿಂದ ಕೇಳಬೇಕು…” ಟೀಚರ್ ಕಥೆ ಶುರು ಮಾಡಿದರು – ಒಂದು ಮನೆಯಲ್ಲಿ ನಾಲ್ಕು ಹೆಣ್ಣು ಮಕ್ಕಳಿದ್ದರು… ಐದನೆಯ ಬಾರಿಯೂ… Read More ಸ್ತ್ರೀ ! ಕ್ಷಮಯಾಧರಿತ್ರಿ!!