ಪ್ರಬೋಧಿನಿ ಏಕಾದಶಿ

ಒಂದು ವರ್ಷದಲ್ಲಿ 24 ಏಕಾದಶಿಗಳಿದ್ದು, ಪ್ರತೀ ಏಕಾದಶಿಯೂ ವಿಷ್ಣುವಿನ ಒಂದೊಂದು ಅವತಾರವೆಂದೇ ಭಾವಿಸಲಾಗಿದ್ದು, ಅಂತಹ ಏಕಾದಶಿಗಳಲ್ಲಿ ಇಂದಿನ ಪ್ರಬೋಧಿನಿ ಏಕಾದಶಿಯೂ ಅತ್ಯಂತ ಮಹತ್ವದ್ದಾಗಿದೆ. ಪ್ರಬೋಧಿನಿ ಏಕಾದಶಿಯ ಮಹತ್ವ, ಅದರ ಪೌರಾಣಿಕ ಹಿನ್ನಲೆ ಮತ್ತು ದೇಶಾದ್ಯಂತ ಅದರ ಆಚರಣೆಯ ಕುರಿತಾದ ಸಮಗ್ರ ಮಾಹಿತಿ ಇದೋ ನಿಮಗಾಗಿ… Read More ಪ್ರಬೋಧಿನಿ ಏಕಾದಶಿ

ದೀಪಾವಳಿಯ ಹುಡುಗಾಟಿಕೆಗಳು

ದೀಪಾವಳಿ ಹಬ್ಬಕ್ಕೆ ಇನ್ನೇನು ಒಂದೆರಡು ದಿನಗಳು ಇರುವಾಗ ಬಾಲ್ಯದಲ್ಲಿ ದೀಪಾವಳಿ ಹಬ್ಬದಲ್ಲಿ ನಾವುಗಳು ಮಾಡುತ್ತಿದ್ದ ಹುಡುಗಾಟಿಕೆಗಳು ಮತ್ತು ಚೇಷ್ಟೆಗಳು ನೆನಪಾಗಿ ಅವುಗಳಲ್ಲಿ ಒಂದೆರಡು ರಸಕ್ಷಣಗಳು ಇದೋ ನಿಮಗಾಗಿ… Read More ದೀಪಾವಳಿಯ ಹುಡುಗಾಟಿಕೆಗಳು

ಗುಡ್ ಫ್ರೈಡೆ

ದೇವನೊಬ್ಬ ನಾಮ ಹಲವು ಎನ್ನುವಂತೆ, ನಮ್ಮ ಹಬ್ಬಗಳ ಆಚರಣೆಯ ಹಿಂದಿನ ಮಹತ್ವಗಳು ಮತ್ತು ಕಾರಣಗಳು ಒಂದೇ ಆದರೂ ಅದರ ಆಚರಣೆಗಳು ಮಾತ್ರಾ ವಿಭಿನ್ನ. ಬಗೆ ಬಗೆಯಾದರೂ ದೇಹದ ಬಣ್ಣ ಎಲ್ಲರ ನಗೆಯೂ ಒಂದೇ ಅಣ್ಣ ಎನ್ನುವಂತೆ ನಾವೆಲ್ಲರೂ ನಗು ನಗುತ ಭಾವೈಕತ್ಯೆಯಿಂದ ಬಾಳಬೇಕು. ಬದುಕು ಜೀವನೋತ್ಸಾಹದ ಹೂರಣವಾಗಬೇಕೇ ಹೊರತು ನಿರಾಶೆಯ ಕಾರ್ಮೋಡವಾಗಬಾರದು ಅಲ್ವೇ?… Read More ಗುಡ್ ಫ್ರೈಡೆ

ಬೆಂಗಳೂರು ಕರಗ

ಬೆಂಗಳೂರಿನ ಹೃದಯ ಭಾಗವಾದ ತಿಗಳರ ಪೇಟೆಯ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಬಹಳ ಸಡಗರ ಸಂಭ್ರಮಗಳಿಂದ ಬಹಳ ಅದ್ದೂರಿಯಾಗಿ ಪ್ರತೀ ವರ್ಷದ ಚೈತ್ರ ಮಾಸದ ಹುಣ್ಣಿಮೆಯಂದು ಅಚರಿಸಲ್ಪಡುವ ಬೆಂಗಳೂರು ಹಸಿ ಕರಗದ ಆಚರಣೆ, ವೈಶಿಷ್ಟ್ಯಗಳು ಮತ್ತು ಅದರ ಹಿಂದಿರುವ ಪೌರಾಣಿಕ ಹಿನ್ನಲೆಯನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ… Read More ಬೆಂಗಳೂರು ಕರಗ

ವಸಂತ ಪಂಚಮಿ

ದೇಶಾದ್ಯಂತ ಮಾಘ ಮಾಸದ ಪಂಚಮಿಯಂದು ಆಚರಿಸಲ್ಪಡುವ ವಸಂತ ಪಂಚಮಿ ಹಬ್ಬದ ಹಿಂದಿರುವ ಪೌರಾಣಿಕ ಹಿನ್ನಲೆ ಮತ್ತು ವೈಶಿಷ್ಟ್ಯತೆಗಳೇನೂ? ಆ ಹಬ್ಬದ ಪ್ರಾಮುಖ್ಯತೆಗಳೇನು? ಆ ಹಬ್ಬವನ್ನು ಎಲ್ಲೆಲ್ಲಿ ಹೇಗೆ ಮತ್ತು ಯಾವ ರೀತಿಯಲ್ಲಿ ಆಚರಿಸುತ್ತಾರೆ? ಎಂಬೆಲ್ಲದರ ಸವಿವರಗಳು ಇದೋ ನಿಮಗಾಗಿ… Read More ವಸಂತ ಪಂಚಮಿ

ದತ್ತಾತ್ರೇಯ ಜಯಂತಿ (ದತ್ತ ಜಯಂತಿ)

ಸೃಷ್ಟಿ, ಸ್ಥಿತಿ ಮತ್ತು ಲಯಕರ್ತರಾದ ತ್ರಿಮೂರ್ತಿಗಳ ಸಂಯೋಜಿತ ರೂಪ ಎಂದೇ ನಂಬಲಾಗಿರುವ, ಮಾರ್ಗಶಿರ ಮಾಸದ ಪೌರ್ಣಿಮೆಯಂದು ಜನಿಸಿರುವ ಗುರು ದತ್ತಾತ್ರೇಯರ ಜಯಂತಿಯನ್ನು ದತ್ತ ಜಯಂತಿಯೆಂದು ಬಹಳ ಶ್ರದ್ಧಾ ಭಕ್ತಿಯಿಂದ ‌ಆಚರಿಸಲಾಗುತ್ತದೆ. ಶ್ರೀ ದತ್ತಾತ್ರೇಯರ ಜನ್ಮ ರಹಸ್ಯ, ದತ್ತ ಜಯಂತಿಯ ಆಚರಣಾ ಪಧ್ಧತಿ, ಮಹತ್ವ ಮತ್ತು ಫಲಶೃತಿಗಳ ಸಂಪೂರ್ಣ ವಿವರಗಳು ಇದೋ ನಿಮಗಾಗಿ… Read More ದತ್ತಾತ್ರೇಯ ಜಯಂತಿ (ದತ್ತ ಜಯಂತಿ)

ಕೊಡವರ ಕೈಲ್ ಪೋಳ್ದ್ ಹಬ್ಬ

ಕರ್ನಾಟಕದ ಕೆಚ್ಚೆದೆಯ ವೀರ ಕೊಡವರಿಗೆ ಕೈಲ್ ಪೋಳ್ದ್ ಹಬ್ಬದ ಶುಭಾಶಯಗಳನ್ನು ತಿಳಿಸುವುದರೊಂದಿಗೆ, ಕೊಡಗು, ಕೊಡವರ ಇತಿಹಾಸ, ಭಾರತೀಯ ಸೇನೆ ಮತ್ತು ಕ್ರೀಡಾರಂಗಕ್ಕೆ ಕೊಡವರ ಕಾಣಿಕೆಗಳ ಜೊತೆಯಲ್ಲಿ, ಅತ್ಯಂತ ವೈಶಿಷ್ಟ್ಯವಾಗಿ ಅಚರಿಸಲ್ಪಡುವ ಅವರ ಹಬ್ಬಗಳು ಅದರಲ್ಲೂ ವಿಶೇಶವಾಗಿ ಕೈಲ್ ಪೋಳ್ದ್ ಹಬ್ಬದ ಕುರಿತಾದ ಸಂಪೂರ್ಣ ಮಾಹಿತಿ ಇದೋ ನಿಮಗಾಗಿ… Read More ಕೊಡವರ ಕೈಲ್ ಪೋಳ್ದ್ ಹಬ್ಬ

ಬಲರಾಮ ಜಯಂತಿ

ದ್ವಾಪರ ಯುಗದ ಮಹಾಭಾರತದಲ್ಲಿ ಪಾಂಡವರು ಮತ್ತು ಕೌರವರು ಕಥೆಯಾದರೂ ಇಡೀ ಮಹಾಭಾರತದಲ್ಲಿ ಶ್ರೀಕೃಷ್ಣನು ಅತ್ಯಂತ್ಯ ಪ್ರಮುಖ ಪಾತ್ರವನ್ನು ವಹಿಸಿರುತ್ತಾನೆ. ಒಂದು ರೀತಿ ಅತನೇ ಸೂತ್ರಧಾರಿಯಾಗಿ ಉಳಿದವರೆಲ್ಲರೂ ಆತ ಆಡಿಸಿಸಂತೆ ಆಡುವ ಪಾತ್ರಧಾರಿಗಳಂತೆ ಕಾಣುತ್ತಾರೆ ಎಂದರೂ ತಪ್ಪಾಗದು. ಮಹಾವಿಷ್ಣುವಿನ ದಶಾವತಾರದಲ್ಲಿ ಕೃಷ್ಣನದ್ದು 8ನೇ ಅವತಾರವಾದರೆ, ಅವರನ ಅಣ್ಣನಾಗಿ ಸದಾಕಾಲವೂ ಬೆಂಗಾವಲಾಗಿ ಬಲರಾಮನು ಇದ್ದೇ ಇರುತ್ತಾನೆ. ದೇವಕಿಯ ಅಣ್ಣ ಮತ್ತು ದುಷ್ಟ ರಾಜನಾದ ಕಂಸನಿಗೆ ಆತನ ತಂಗಿ ದೇವಕಿಯ ಎಂಟನೇ ಸಂತಾನನಿಂದಲೇ ಅಂತ್ಯವಾಗುವನೆಂಬ ಅಶರೀರವಾಣಿಯ ಮಾತನ್ನು ಕೇಳಿದ ನಂತರ ಆತ… Read More ಬಲರಾಮ ಜಯಂತಿ

ವಟ ಸಾವಿತ್ರಿ ವ್ರತ

ಪತಿವ್ರತೆ ಸಾವಿತ್ರಿಯು ಯಮಧರ್ಮರಾಯನಿಂದ ತನ್ನ ಪತಿ ಸತ್ಯವಾನನ ಆಯುಷ್ಯವನ್ನು ವೃದ್ಧಿ ಮಾಡಿದ ದಿನವಾದ ಜೇಷ್ಠ ಮಾಸದ ಹುಣ್ಣಿಮೆಯಂದು ವಟಸಾವಿತ್ರಿ ವ್ರತ ಎಂದು ಆಚರಿಸುವ ಸಂಪ್ರದಾಯವಿದ್ದು, ಆ ವ್ರತಾಚರಣೆ ಮತ್ತು ಅದರ ಫಲಾಫಲಗಳ ಸಂಪೂರ್ಣ ವಿವರಗಳು ಇದೋ ನಿಮಗಾಗಿ… Read More ವಟ ಸಾವಿತ್ರಿ ವ್ರತ