ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

ಕಳೆದ ಎರಡು ಮೂರು ಮೂರು ವಾರಗಳಿಂದ ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ, ದೇಶದ ಹಣವನ್ನು ಕೊಳ್ಳೆಹೊಡೆದ ಆರೋಪದ ಮೇಲೆ ಬಂಧಿಸಲ್ಪಟ್ಟ ರಾಜಕಾರಣಿಗಳ ಬಗ್ಗೆ ಚರ್ಚಿಸುತ್ತಿದ್ದ ಭಾರತೀಯರು, ಇದ್ದಕ್ಕಿಂದಂತೆಯೇ ಎರಡು ಮೂರು ದಿನಗಳಿಂದ ಹೊಸ ಮೋಟಾರು ವಾಹನ ತಿದ್ದುಪಡಿ ಮಸೂದೆ 2019 ಸಂಚಾರ ನಿಯಮದ ಕಠಿಣ ದಂಡ ದೃಷ್ಟಿ ಹಾಯಿಸಿದ್ದಾರೆ. ಸರ್ಕಾರ ದಂಡಗಳನ್ನು ಬಹು ಪಟ್ಟು ಹೆಚ್ಚು ಮಾಡುತ್ತಿದ್ದಂತೆಯೇ ನಿಯಮವನ್ನು ಉಲ್ಲಂಘಿಸುವ ಮೊದಲು, ಉಲ್ಲಂಘಿಸುವವರು ಎರಡು ಬಾರಿ ಯೋಚಿಸುವಂತೆ ಮಾಡಿದೆಯಾದರೂ, ಹೊಸಾ ನಿಯಮ ಏಕೋ ಎತ್ತಿಗೆ ಜ್ವರ ಬಂದ್ರೇ… Read More ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

ಸಾರ್ಥಕ ಬದುಕು

ಒಂದು ಉದ್ದೇಶಿತ ಕೆಲಸಕ್ಕಾಗಿ ಬಂದು ಆ ಕೆಲಸವನ್ನು ಸಕಾಲಕ್ಕೆ ಸರಿಯಾಗಿ ಎಲ್ಲರೂ ಒಪ್ಪುವಂತೆ, ಇಲ್ಲವೇ ಹೊಗಳುವಂತೆ ಮಾಡಿ ಮುಗಿಸಿ ಹೋದಲ್ಲಿ ಅದುವೇ ಸಾರ್ಥಕತೆ ಎನಿಸುತ್ತದೆ. ಅಂತಹ ಒಂದು ಸಾರ್ಥಕ ಬದುಕನ್ನು ನಡೆಸಿದ ಒಂದು ಹಿರಿಯ ಜೀವದ ಬಗ್ಗೆ ನೆನಸಿಕೊಳ್ಳುವಂತಹ ಅನಿವಾರ್ಯ ಸಂದರ್ಭ ಬಂದೊದಗಿದ್ದು ನಿಜಕ್ಕೂ ದುಃಖ ಕರ. ಎಪ್ಪತ್ತರ ದಶಕದಲ್ಲಿ ಕರ್ನಾಟಕ ಮತ್ತು ಆಂಧ್ರ ಗಡಿ ಭಾಗದ ಯಗುಕೋಟೆಯ ಜಮೀನ್ದಾರ್ ರಾಮಚಂದ್ರರವರ ದ್ವಿತೀಯ ಪುತ್ರಿ ಲಕ್ಷ್ಮೀ (ಆದಿ ಲಕ್ಷ್ಮೀ) ಮತ್ತು ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ ಬಳಿಯ ತಿಪ್ಪೂರಿನ… Read More ಸಾರ್ಥಕ ಬದುಕು

ಹಬ್ಬದ ಸಡಗರ ಸಂಭ್ರಮ

ಎಲ್ಲಾ ಹಬ್ಬಗಳ ಆಚರಣೆಯ ಸಂದರ್ಭದಲ್ಲಿಯೂ ಇಂದು ವಿಶ್ವಾದ್ಯಂತ, ದೇಶಾದ್ಯಂತ, ನಾಡಿನಾದ್ಯಂತ ….. ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ ಎಂದು ದೃಶ್ಯ ಮತ್ತು ಮುದ್ರಣ ಮಾದ್ಯಮದಲ್ಲಿ ಕೇಳುವುದು ಮತ್ತು ಓದುವುದು ನಮಗೆಲ್ಲಾ ತಿಳಿದ ವಿಷಯವೇ ಸರಿ. ಹಾಗಾದರೆ ಆ ಸಡಗರ ಮತ್ತು ಸಂಭ್ರಮ ಎಂದರೆ ಏನು? ಅದು ಹೇಗೆ ಇರುತ್ತದೆ ಎಂಬುದನ್ನು ಆಲೋಚಿಸುತ್ತಿರುವಾಗಲೇ ಮೂಡಿದ ಲೇಖವವೇ ಇದು. ಹಬ್ಬಗಳ ವಿಷಯಕ್ಕೆ ಬಂದಾಗ, ಸಡಗರ ಮತ್ತು ಸಂಭ್ರಮ ಎರಡೂ ಜೋಡಿ ಪದಗಳು. ಸಡಗರ ಹಬ್ಬದ ಹಿಂದಿನ ಪ್ರಕ್ರಿಯೆಗಳಾದರೆ, ಸಂಭ್ರಮ ಹಬ್ಬ… Read More ಹಬ್ಬದ ಸಡಗರ ಸಂಭ್ರಮ

ಹೂವಿನ ಹಾರ

ಹಬ್ಬ ಹರಿ ದಿನಗಳಲ್ಲಿ ದೇವರ ಅಲಂಕಾರ ಮಾಡಲು ಯಾವುದೇ ರೀತಿಯ ಎಷ್ಟೇ ಆಭರಣಗಳಿಂದ ದೇವರನ್ನು ಅಲಂಕರಿಸಿದರೂ ವಿಧ ವಿಧದ ಹೂವುಗಳು ಮತ್ತು ಹೂವಿನ ಹಾರಗಳ ಅಲಂಕಾರದ ಮುಂದೆ ಉಳಿದೆಲ್ಲವೂ ನಗಣ್ಯವೇ ಸರಿ. ಅದೇ ರೀತಿ ಮುನಿಸಿಕೊಂಡಿರುವ ನಾರಿಯರನ್ನು ಸರಳವಾಗಿ ಮತ್ತು ಸುಲಭವಾಗಿ ಒಲಿಸಿಕೊಳ್ಳಲು ಒಂದು ಮೊಳ ಮಲ್ಲೇ ಅಥವಾ ಮಲ್ಲಿಗೆ ಹೂ ಸಾಕು ಎನ್ನುವುದು ಕೆಲವು ಅನುಭವಸ್ತರ ಅಂಬೋಣ. ಸುಮಾರು ವರ್ಷಗಳ ಹಿಂದೆ ಕೃಷ್ಣರಾಜಾ ಮಾರುಕಟ್ಟೆಯಲ್ಲಿ ಹಬ್ಬದ ಹಿಂದಿನ ದಿನ ಹೂವಿನ ಹಾರ ಕೊಂಡು ಕೊಳ್ಳಲು ಹೋದಾಗ… Read More ಹೂವಿನ ಹಾರ

ಆರೋಗ್ಯವೇ ಭಾಗ್ಯ! FIT INDIA ಅಭಿಯಾನ

ಇಂದಿನ ಕಾಲದಲ್ಲಿ ಲಕ್ಷಾಂತರ ಇಲ್ಲವೇ ಕೋಟ್ಯಾಂತರ ಹಣವನ್ನು ಸಂಪಾದಿಸುವುದು ಬಹಳ ಸುಲಭ ಸಾಧ್ಯವಾಗಿದೆ ಆದರೆ ಆ ರೀತಿಯಾಗಿ ಹಣವನ್ನು ಸಂಪಾದಿಸುವ ಭರದಲ್ಲಿ ನಮ್ಮ ಆರೋಗ್ಯದ ಬಗ್ಗೆ ಕಾಳಜೀ ವಹಿಸದೇ ಸಣ್ಣ ವಯಸ್ಸಿನಲ್ಲಿಯೇ ನಾನಾ ರೀತಿಯ ಖಾಯಿಲೆಗಳಿಗೆ ಮತ್ತು ಖಿನ್ನತೆಗಳಿಗೆ ಒಳಗಾಗಿ ತಾವೂ ನರಳುವುದಲ್ಲಿದೇ, ಕುಟುಂಬ, ತಮ್ಮನ್ನು ಅವಲಂಭಿಸಿರುವವರನ್ನು ಮತ್ತು ಇಡೀ ಸಮಾಜವನ್ನೇ ತೊಂದರೆ ಗೀಡುಮಾಡುತ್ತಿರುವುದು ನಿಜಕ್ಕೂ ಕಳವಳಕಾರಿಯಾಗಿದೆ. ಇತ್ತೀಚೆಗೆ ನಮ್ಮ ದೇಶದ ಇಬ್ಬರು ಮಹಾನ್ ನಾಯಕರುಗಳಾದ ಶ್ರೀಮತಿ ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿಯವರ ಸಾವಿನ ಹಿಂದಿನ… Read More ಆರೋಗ್ಯವೇ ಭಾಗ್ಯ! FIT INDIA ಅಭಿಯಾನ

ಸ್ತ್ರೀ ! ಕ್ಷಮಯಾಧರಿತ್ರಿ!!

ಹೆತ್ತವರಿಗೆ ಮಗಳು, ಒಡಹುಟ್ಟಿದವರಿಗೆ ಸಹೋದರಿ, ಸಹಪಾಠಿಗಳಿಗೆ ಗೆಳತಿ, ಮದುವೆಯಾದಾಗ ಒಬ್ಬರ ಮಡದಿ ಮತ್ತೊಬ್ಬರ ಸೊಸೆ‌, ಹೆತ್ತ ಮಕ್ಕಳಿಗೆ ತಾಯಿ, ತನ್ನ ಮಕ್ಕಳಿಗೆ ಮದುವೆಯಾದಾಗ, ಅಳಿಯಂದಿರಿಗೆ ಮತ್ತು ಸೊಸೆಯರಿಗೆ ಅತ್ತೆ, ಮೊಮ್ಮಕ್ಕಳಿಗೆ ಪ್ರೀತಿಯ ಅಜ್ಜಿ, ಹೀಗೆ ಬಹುರೂಪಿಯಾದ ಹೆಣ್ಣನ್ನು ಗೌರವಿಸುವುದು ಕೇವಲ ಮಾರ್ಚ್ 8, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಗೆ ಮಾತ್ರಾ ಸೀಮಿತವಾಗಿರದೇ, ಪ್ರತೀ ದಿನ, ಪ್ರತೀ ಕ್ಷಣವೂ ಆಕೆಗೆ ಚಿರಋಣಿಗಳಾಗಿರಬೇಕು ಅಲ್ವೇ?… Read More ಸ್ತ್ರೀ ! ಕ್ಷಮಯಾಧರಿತ್ರಿ!!

ಕೃಷ್ಣಪ್ಪ ಗೌತಮ್

ಯಾವುದೇ ಕ್ಷೇತ್ರದಲ್ಲಿ, ಯಾರಾದರೂ ಮಹತ್ತರ ಸಾಧನೆ ಮಾಡಿದಲ್ಲಿ ಅದನ್ನು ಆ ಕೂಡಲೇ ನಾಲ್ಕಾರು ಜನ ಗಮನಿಸಿ ಅವರ ಬಗ್ಗೆ ಸ್ಪೂರ್ತಿದಾಯಕವಾಗಿ ಪ್ರೋತ್ಸಾಹಕರ ಮಾತುಗಳನ್ನು ಆಡಿದಲ್ಲಿ, ಆ ಸಾಧನೆ ಮಾಡಿದವರಿಗೆ ಉತ್ತೇಜನ ದೊರೆತು ಮತ್ತಷ್ಟೂ ಉತ್ತಮವಾದ ಸಾಧನೆ ಮಾಡುವ ಹುಮಸ್ಸು ಮೂಡುತ್ತದೆ. ದುರದೃಷ್ಟವಶಾತ್, ಭಾರತ ಮತ್ತು ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯಾವಳಿಗಳೇ ಅತ್ಯಂತ ಮಹತ್ವ ಪಡೆದದ್ದಕ್ಕೋ ಇಲ್ಲವೇ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನಿರ್ಲಕ್ಷದ ಪರಿಣಾಮವಾಗಿಯೋ ಇತ್ತೀಚೆಗೆ ಕರ್ನಾಟಕ ರಾಜ್ಯ ಕ್ರಿಕೆಟ್… Read More ಕೃಷ್ಣಪ್ಪ ಗೌತಮ್

ನಟ ಭಯಂಕರ ವಜ್ರಮುನಿ

ಅಂದಿನ ಕಾಲದ ಹೆಸರಾಂತ ರಾಜಕಾರಣಿಗಳ ವಂಶದ ಕುಡಿಯಾದರೂ ಆಯ್ಕೆ ಮಾಡಿಕೊಂಡಿದ್ದು ರಂಗಭೂಮಿ. ಗದೆ ಹಿಡಿದು ವೇದಿಕೆಯ ಮೇಲೆ ಬಂದು ತನ್ನ ಕಂಚಿನ ಕಂಠದಿಂದ ಸುಸ್ಪಷ್ಟವಾದ ಭಾಷೆಯಲ್ಲಿ ಸಂಭಾಷಣೆಯನ್ನು ಅಬ್ಬರಿಸುತ್ತಿದ್ದರೆ, ಎದುರಿಗಿರುವವರು ಪತರುಗುಟ್ಟು ಹೋಗುವಂತೆ ಮಾಡುತ್ತಿದ್ದ, ಕನ್ನಡ ಚಿತ್ರರಂಗದ ಶ್ರೇಷ್ಠ ಖಳನಟ ಶ್ರೀ ವಜ್ರಮುನಿ ಅವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ನಟ ಭಯಂಕರ ವಜ್ರಮುನಿ

ಪುರೋಹಿತರ ಪರದಾಟ

ಬಹಳ ದಿನಗಳ ತರುವಾಯು ಮಕ್ಕಳು ಮನೆಯಲ್ಲಿ ಅಮ್ಮಾ ಮಾಡುವ ರುಚಿ ರುಚಿಯ ಅಡುಗೆಯ ಹೊರತಾಗಿಯೂ ಹೊರಗಡೆ ಊಟ ಮಾಡುವ ಆಸೆ ವ್ಯಕ್ತ ಪಡಿಸಿದ ಕಾರಣ ಕಳೆದ ವಾರಾಂತ್ಯದಲ್ಲಿ ಮಡದಿ, ಮಗಳು ಮತ್ತು ಮಗನೊಂದಿಗೆ ರಾತ್ರಿ ಊಟಕ್ಕೆಂದು ಸ್ವಲ್ಪ ದೂರದ ಹೊಸಾ ಹೋಟೆಲ್ ಒಂದಕ್ಕೆ ಹೋದೆವು. ಭಾನುವಾರವಾದ್ದರಿಂದ ಹೋಟೇಲ್ ಬಹುತೇಕ ಭರ್ತಿಯಾಗಿತ್ತು ಸ್ವಲ್ಪ ಮಬ್ಬಾಗಿಯೂ ಇತ್ತು. ಹಾಗಾಗಿ ಖಾಲಿ ಇರುವ ಜಾಗವನ್ನು ಹುಡುಕುತ್ತಿದ್ದಾಗ, ಒಬ್ಬರನ್ನು ನೋಡಿದ ತಕ್ಷಣ, ಎಲ್ಲೋ ನೋಡಿದ ನೆನಪು ಆದರೆ ಸರಿಯಾಗಿ ಸ್ಮೃತಿಗೆ ಬರುತ್ತಿರಲಿಲ್ಲ. ಅವರೂ… Read More ಪುರೋಹಿತರ ಪರದಾಟ